ಸಿಂಗಾಪುರ ಮೂಲದ DBS ಬ್ಯಾಂಕ್ʼನೊಂದಿಗೆ ʼಲಕ್ಷ್ಮಿ ವಿಲಾಸ್ ಬ್ಯಾಂಕ್ʼ ವಿಲೀನ..!
ನವದೆಹಲಿ: ಲಕ್ಷ್ಮಿ ವಿಲಾಸ್ ಬ್ಯಾಂಕ್ (ಎಲ್ ವಿಬಿ) ಅನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾದೊಂದಿಗೆ ವಿಲೀನ ಮಾಡಲು ಕೇಂದ್ರ ಸಚಿವ ಸಂಪುಟ ವು ಅನುಮೋದನೆ ನೀಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ನವೆಂಬರ್ 17ರಂದು 94 ವರ್ಷದ ಸಾಲದಾತರನ್ನ ಸಿಂಗಪುರದ ಡಿಬಿಎಸ್ ಬ್ಯಾಂಕ್ʼನೊಂದಿದೆ ವಿಲೀನ ಮಾಡಲು ಪ್ರಸ್ತಾಪಿಸಲಾಗಿತ್ತು.
ನವೆಂಬರ್ 17ರಂದು ಕೇಂದ್ರ ಬ್ಯಾಂಕ್ ಲಕ್ಷ್ಮಿ ವಿಲಾಸ್ ಬ್ಯಾಂಕನ್ನ ಒಂದು ತಿಂಗಳ ಮೊರಟೋರಿಯಂನ ಅಡಿಯಲ್ಲಿ ಇರಿಸಿದ್ದು, ಅದರ ಬೋರ್ಡ್ ಸೂಪರ್ ಸೆಡ್ ಮಾಡಿ ಮತ್ತು ಪ್ರತಿ ಠೇವಣಿದಾರನ ಮೇಲೆ ₹25,000ರಂತೆ ವಿತ್ ಡ್ರಾ ಮೀತಿ ನೀಡಿತ್ತು.
ಈ ವಿಲೀನದಿಂದ ಠೇವಣಿದಾರರಿಂದ ಠೇವಣಿ ಹಿಂತೆಗೆತಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧಗಳು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ವಿಶ್ಲೇಷಕರು ಮತ್ತು ಜಾಗತಿಕ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಆರ್ ಬಿಐನ ಈ ಕ್ರಮವನ್ನು ಶ್ಲಾಘಿಸಿದ್ದು, ಎರಡೂ ಪಕ್ಷಗಳಿಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.
‘ಎಲ್ ವಿಬಿಗೆ ಸಂಭಾವ್ಯ ದಾವೆದಾರರನ್ನ ಪರಿಗಣಿಸುವಾಗ, ಆರ್ ಬಿಐ ಡಿಬಿಐಎಲ್ʼನ ಆರೋಗ್ಯಕರ ಬ್ಯಾಲೆನ್ಸ್ ಶೀಟ್ ಮತ್ತು ಬಂಡವಾಳೀಕರಣವನ್ನ ಗಣನೆಗೆ ತೆಗೆದುಕೊಂಡಿತು ಎಂದು ನಾವು ನಂಬಿದ್ದೇವೆ’ ಎಂದು ಎಸ್ ಅಂಡ್ ಪಿ ಹೇಳಿದೆ.
ನಿಯಂತ್ರಕರು 2019ರ ಸೆಪ್ಟೆಂಬರ್ ನಲ್ಲಿ ಎಲ್ ವಿಬಿಯನ್ನ ಪ್ರಾಂಪ್ಟ್ ತಿದ್ದುಪಡಿ ಕ್ರಿಯೆಯ ಅಡಿಯಲ್ಲಿ ಇರಿಸಿದ್ದರು. ಸಾಲದಾತರು ಸೆಪ್ಟೆಂಬರ್ 2020ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಕೆಟ್ಟ ಸಾಲಗಳು ಮತ್ತು ನಿಬಂಧನೆಗಳ ಹೆಚ್ಚಳದಿಂದಾಗಿ ಅದರ ನಿವ್ವಳ ನಷ್ಟವನ್ನ ₹397 ಕೋಟಿ ಎಂದು ಈ ಹಿಂದೆ ವರದಿ ಮಾಡಿದ್ದರು.
ಸೆಪ್ಟೆಂಬರ್ 25ರಂದು ಬ್ಯಾಂಕಿನ ಷೇರುದಾರರು ಮಂಡಳಿಯ ಏಳು ಸದಸ್ಯರನ್ನ ಅಂದಿನ ಎಂಡಿ ಮತ್ತು ಸಿಇಒ ಎಸ್ ಸುಂದರ್ ಸೇರಿದಂತೆ ಏಳು ಮಂದಿ ಸದಸ್ಯರನ್ನ ಮತಕ್ಕೆ ಹಾಕಿದ್ದರು.
ಸೆಪ್ಟೆಂಬರ್ 27ರಂದು ಆರ್ ಬಿಐ ಮೂವರು ಸ್ವತಂತ್ರ ನಿರ್ದೇಶಕರಾದ ಮೀತಾ ಮಖಾನ್, ಶಕ್ತಿ ಸಿನ್ಹಾ ಮತ್ತು ಸತೀಶ್ ಕುಮಾರ್ ಕಾಲ್ರಾ ಅವರನ್ನ ಒಳಗೊಂಡ ಸಿಒಡಿಯನ್ನು ನೇಮಿಸಿತ್ತು.
ಹೊಸ ಚಿಲ್ಲರೆ ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ಗ್ರಾಹಕರನ್ನು ಸೇರಿಸುವ ಮೂಲಕ ಈ ವಿಲೀನವು ಭಾರತದಲ್ಲಿ DBS ನ ವ್ಯಾಪಾರ ಸ್ಥಾನವನ್ನು ಬಲಪಡಿಸಲಿದೆ ಎಂದು ಮೂಡೀಸ್ ಹೇಳಿದೆ.