ಎರಡು ಗ್ರಾಮ ಸ್ವರಾಜ್ ಸಮಾವೇಶ ನಡೆಸಲು ಬಿಜೆಪಿ ಸಿದ್ಧತೆ; ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ:
ಮಂಗಳೂರು: ಗ್ರಾಮ್ ಪಂಚಾಯತ್ ಚುನಾವಣನೆಗೆ ಇನ್ನೇನು ಕೆಲವೇ ದಿನಗಳಲ್ಲಿ ದಿನಾಂಕ ನಿಗದಿಯಾಗಲಿದೆ. ಆ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಬಿಜೆಪಿ ಗೆಲ್ಲಬೇಕೆಂದು ಎರಡು ಗ್ರಾಮ ಸ್ವರಾಜ್ ಸಮಾವೇಶ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಪತ್ರಿಕಾಗೋಷ್ಥಿಯಲ್ಲಿ ತಿಳಿಸಿದ್ದಾರೆ.ಜಿಲ್ಲಾ ಕಚೇರಿಯಲ್ಲಿ ಮಾತನಾಡಿದ ಅವರು ಯಾವುದೇ ದಿನದಲ್ಲಾದರೂ ಗ್ರಾ.ಪಂ.ಚುಣಾವಣೆಯ ದಿನಾಂಕ ನಿಗಧಿಯಾಗಬಹುದು. ಹಾಗಾಗಿ ಗ್ರಾಮ ಪಂಚಾಯತ್ ಚುಣಾವಣೆಯಲ್ಲಿ ಈ ಬಾರಿ ಬಿಜೆಪಿ ಗೆಲ್ಲಲೇಬೇಕು ಎಂಬ ಹಿನ್ನಲೆಯಲ್ಲಿ ಎರಡು ಗ್ರಾಮ ಸ್ವರಾಜ್ ಸಮಾವೇಶ ನಡೆಯಲಿದೆ.
ಮೂಡಬಿದಿರೆ, ಮಂಗಳೂರು ಉತ್ತರ, ಬಂಟ್ವಾಳ ,ಬೆಳ್ತಂಗಡಿ, ಪುತ್ತೂರು,ಸುಳ್ಯದವರನ್ನು ಸೇರಿಸಿ ಈ ಒಂದು ಕಾರ್ಯಕ್ರಮ ನಡೆಯಲಿದೆ. ಇನ್ನು ಈ ಕಾರ್ಯಕ್ರಮಕ್ಕೆ ಅಶ್ವತ್ ನಾರಾಯಣ , ಶೊಭಾ ಕರದ್ಲಾಂಜೆ, ಕೋಟ ಶೀನಿವಾಸ ಪೂಜಾರಿ, ಮಹೇಶ್ ತೆಂಗಿನಕಾಯಿ ಮತ್ತಿತರ ರಾಜ್ಯ ಪ್ರಮುಖರು ಭಾಗವಹಿಸಲಿದ್ದಾರೆ.
ಬಿಜೆಪಿ ಪ್ರತಿಯೊಂದು ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಲು ಸಂಘಟನಾತ್ಮಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕಾರ್ಯಕ್ರಮ ದಲ್ಲಿ ಪಕ್ಷದ ಚಿಹ್ನೆ ಇರೋದಿಲ್ಲ. ಆದರೆ ಬಿಜೆಪಿಯ ಇಡೀ ರಾಜ್ಯದ ತಂಡ ಅವರೊಂದಿಗೆ ಇರುತ್ತದೆ. 225 ಗ್ರಾ.ಪಂಗಳಲ್ಲಿ ಚುನಾವಣೆ ನಡೆಯಲಿದೆ.
ಹಾಗೂ 218 ಕುಟುಂಬ ಮಿಲನ ಕಾರ್ಯಕ್ರಮ ನಡೆದಿದೆ. ಇನ್ನು 1186 ಬೂತ್ ಗಳಲ್ಲಿ ಚುನಾವಣೆ ನಡೆಯಲಿದೆ. ಪಂಚರತ್ನಗಳು ರಚನೆಯಾಗಲಿದೆ. 25 ಸಾವಿರಕ್ಕೂ ಮಿಕ್ಕಿ ಪೇಜ್ ಪ್ರಮುಖ್ ಇರಲಿದ್ದಾರೆ ಹಾಗೂ ಇದು ಮುಂದಿನ ಚುನಾವಣೆಗೆ ಪೂರಕವಾಗಲಿದೆ ಎಂದರು.