Connect with us

    BIG BOSS

    ಜಗದೀಶ್ ಶರ್ಟ್ ಮೇಲೆ ಹಂಸಾ ಲಿಪ್​ಸ್ಟಿಕ್ ಗುರುತು; ಯಾವಾಗ ಆಯ್ತು ಈ ಕಲೆ ಗೊತ್ತಾ?

    Published

    on

    ಲಾಯರ್​ ಜಗದೀಶ್ ಅವರಿಗೆ ಬಿಗ್ ಬಾಸ್​ ಆಟ ಹೇಳಿ ಮಾಡಿಸಿದಂತಿದೆ. ಆರಂಭದಿಂದಲೂ ಅವರು ಸಖತ್​ ಸದ್ದು ಮಾಡುತ್ತಿದ್ದಾರೆ. ಬಿಗ್​ ಬಾಸ್​ ಮನೆಯಲ್ಲಿ ಅವರು ಎಲ್ಲರ ಜೊತೆಗೂ ಕಿರಿಕ್ ಮಾಡಿಕೊಂಡಿದ್ದಾರೆ. ಆದರೆ ಹೆಚ್ಚು ಜಗಳ ಮಾಡಿದ್ದು ನಟಿ ಹಂಸಾ ಜೊತೆ. ಹಾಗಂತ ಆ ಜಗಳ ಹಾಗೆಯೇ ಮುಂದುವರಿದಿಲ್ಲ. ಹಂಸಾ ಜೊತೆ ಜಗದೀಶ್ ಎಷ್ಟು ಜಗಳ ಮಾಡಿದ್ದಾರೋ ಅಷ್ಟೇ ಸ್ನೇಹ ಕೂಡ ಬೆಳೆಸಿದ್ದಾರೆ. ಸೋಮವಾರದ (ಅಕ್ಟೋಬರ್​ 14) ಸಂಚಿಕೆಯಲ್ಲಿ ಜಗದೀಶ್ ಅವರು ಲಿಪ್​ಸ್ಟಿಕ್​ ಕಲೆ ಬಗ್ಗೆ ವಿಷಯ ಪ್ರಸ್ತಾಪ ಮಾಡಿದ್ದಾರೆ.

    ಲಿವಿಂಗ್ ಏರಿಯಾದಲ್ಲಿ ಎಲ್ಲರೂ ಮಾತನಾಡುತ್ತಾ ಕುಳಿತಿದ್ದಾಗ ಜಗದೀಶ್ ಅವರು ಎಂಟ್ರಿ ನೀಡಿದರು. ಅವರು ಬಿಳಿ ಬಣ್ಣದ ಶರ್ಟ್​ ಹಾಕಿಕೊಂಡು ಬಂದರು. ತಮ್ಮ ಶರ್ಟ್​ ಮೇಲೆ ಲಿಪ್​ಸ್ಟಿಕ್ ಗುರುತು ಇದೆ ಎಂದು ಅವರು ಹೇಳಿದರು. ‘ನನ್ನ ಶರ್ಟ್​ ಮೇಲೆ ನಿಮ್ಮ ಲಿಪ್​ ಸ್ಟಿಕ್​ ಕಲೆ ಇದೆ’ ಎಂದು ನೇರವಾಗಿ ಹಂಸಾ ಬಳಿಯೇ ಜಗದೀಶ್ ಹೇಳಿದರು. ಅದನ್ನು ಹಂಸಾ ಕೂಡ ಅಲ್ಲ ಎನ್ನಲಿಲ್ಲ.

    ‘ನಿನ್ನೆ ಹಗ್ ಮಾಡಿದಾಗ ಈ ಕಲೆ ಆಗಿದ್ದು’ ಎಂದು ಹಂಸಾ ಅವರು ಹೇಳಿದರು. ಅಲ್ಲದೇ, ‘ಬೇಕಿದ್ದರೆ ವಾಶ್ ಮಾಡಿ ಕೊಡುವೆ’ ಎಂದು ಕೂಡ ಅವರು ಹೇಳಿದರು. ಜಗದೀಶ್​ ಹಾಗೂ ಹಂಸಾ ಅವರ ನಡುವಿನ ಸ್ನೇಹ-ಜಗಳ ಎಲ್ಲರಿಗೂ ಗೊಂದಲ ಮೂಡಿಸುವ ರೀತಿಯಲ್ಲಿ ಇದೆ. ಹಂಸಾ ಅವರು ಕ್ಯಾಪ್ಟನ್ ಆದಾಗ ಜಗದೀಶ್​ ಸಿಕ್ಕಾಪಟ್ಟೆ ಕಾಟ ಕೊಟ್ಟಿದ್ದರು. ಏಕವಚನದಲ್ಲಿ ಬೈಯ್ದುಕೊಳ್ಳುವ ಮಟ್ಟಕ್ಕೆ ಕಿತ್ತಾಡಿದ್ದರು. ಆದರೆ ಆ ಘಟನೆಗಳ ಬಳಿಕ ಅವರಿಬ್ಬರ ನಡುವಿನ ಸ್ನೇಹ ಇನ್ನಷ್ಟು ಹೆಚ್ಚಾಯಿತು.

    ಹಾಗಾದ್ರೆ ಈ ಲಿಪ್​ಸ್ಟಿಕ್ ಹತ್ತಿದ್ದು ಯಾವಾಗ? ಭಾನುವಾರದ ಸಂಚಿಕೆಯಲ್ಲಿ ‘ಅನಿಸುತಿದೆ ಯಾಕೋ ಇಂದು..’ ಹಾಡಿಗೆ ಹಂಸಾ ಮತ್ತು ಜಗದೀಶ್ ಅವರು ಡ್ಯಾನ್ಸ್​ ಮಾಡಿ ಎಲ್ಲರನ್ನೂ ರಂಜಿಸಿದ್ದರು. ಅವರಿಬ್ಬರ ಉತ್ಸಾಹಕ್ಕೆ ಸುದೀಪ್ ಕೂಡ ಭೇಷ್ ಎಂದಿದ್ದರು. ವೀಕೆಂಡ್ ಸಂಚಿಕೆ ಆದ್ದರಿಂದ ಹಂಸಾ ಅವರು ಚೆನ್ನಾಗಿ ಮೇಕಪ್ ಮಾಡಿಕೊಂಡಿದ್ದರು. ಖುಷಿಯಿಂದ ಡ್ಯಾನ್ಸ್ ಮಾಡುವಾಗ ಅವರ ಲಿಪ್​ಸ್ಟಿಕ್​ ಬಣ್ಣ ಜಗದೀಶ್ ಶರ್ಟ್​ಗೆ ಅಂಟಿತ್ತು ಅಷ್ಟೇ.

    ಇಂಥ ಹಲವು ಘಟನೆಗಳಿಂದಾಗಿ ಜಗದೀಶ್ ಅವರಿಗೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಗುತ್ತಿದೆ. ಅನೇಕ ಬಾರಿ ಅವರು ಬಿಗ್ ಬಾಸ್ ಮನೆಯ ನಿಯಮ ಮುರಿದಿದ್ದರು. ಬಿಗ್ ಬಾಸ್​ ಕಾರ್ಯಕ್ರಮದ ಬಗ್ಗೆಯೂ ಅವರು ಹಗುರಾಗಿ ಮಾತನಾಡಿದ್ದರು. ಹಾಗಿದ್ದರೂ ಕೂಡ ಅವರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಇದರಿಂದಾಗಿ ಅವರಿಗೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಂತೆ ಆಗಿದೆ.

    BIG BOSS

    ಸುದೀಪ್ ಬಿಗ್ ಬಾಸ್ ತೊರೆಯಲು ಇದೆ ಹಲವು ಕಾರಣ; ರೂಪೇಶ್ ರಾಜಣ್ಣ

    Published

    on

    ಕನ್ನಡ ಪರ ಹೋರಾಟಗಾರ, ಮಾಜಿ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಅವರು ‘ಬಿಗ್ ಬಾಸ್’ ಆಯೋಜಕರ ವಿರುದ್ಧ ಹರಿಹಾಯ್ದಿದ್ದರು. ಸುದೀಪ್ ಅವರಿಗೆ ಅವಮಾನ ಆಗಿದೆ ಎಂದು ಅವರು ಹೇಳಿದ್ದರು. ಆದರೆ, ಅದಕ್ಕೆ ನಿಜವಾದ ಕಾರಣಗಳು ಏನು ಎಂಬುದು ರಿವೀಲ್ ಆಗಿರಲಿಲ್ಲ. ಈಗ ಈ ವಿಚಾರವನ್ನು ರೂಪೇಶ್ ರಾಜಣ್ಣ ಅವರು ವಿವರಿಸಿದ್ದಾರೆ. ಸುದೀಪ್ ಬಿಗ್ ಬಾಸ್ ತೊರೆಯಲು ಕಾರಣ ಏನು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.

    ಈ ಮೊದಲು ‘ಬಿಗ್ ಬಾಸ್​’ನಲ್ಲಿ ಯಾರಾದರೂ ಇಂಗ್ಲಿಷ್ ಮಾತನಾಡಿದರೆ ಅದನ್ನು ಬಿಗ್ ಬಾಸ್ ಸಹಿಸುತ್ತಿರಲಿಲ್ಲ. ಆಗ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಹಾಕುತ್ತಿದ್ದರು. ಆದರೆ, ಈಗ ಈ ಪದ್ಧತಿ ಅಳಿದು ಹೋಗಿದೆ. ಇದಕ್ಕೆ ಬಿಗ್ ಬಾಸ್ ಆಯೋಜಕರೇ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನು ಸುದೀಪ್ ಖಂಡಿಸಿದ್ದಾರೆ. ‘ಹೆಚ್ಚು ಇಂಗ್ಲಿಷ್ ಬಳಕೆ ಮಾಡಿದಾಗ ಅದನ್ನು ಪ್ರಶ್ನೆ ಮಾಡಿ’ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಒಪ್ಪಿಲ್ಲ.

    ಈ ಮೊದಲು ಸ್ವರ್ಗ ಹಾಗೂ ನರಕದ ಕಾನ್ಸೆಪ್ಟ್ ಇತ್ತು. ಸ್ವರ್ಗದ ಮಂದಿ ಹಾಯಾಗಿ ಕುಳಿತಿದ್ದರೆ ನರಕದವರು ನಿಂತೇ ಇದ್ದರು. ಹೀಗಾಗಿ, ಅವರಿಗೆ ಕೂರೂಕೆ ಅವಕಾಶ ಕೊಡಿ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಸೊಪ್ಪು ಹಾಕಿಲ್ಲ ಎನ್ನಲಾಗಿದೆ. ಇದು ಸುದೀಪ್ ಕೋಪಕ್ಕೆ ಕಾರಣ ಆಗಿದೆ. ಅಲ್ಲದೆ, ನರಕವಾಸಿಗಳಿಗೆ ಟಾಯ್ಲೆಟ್ ಬಳಕೆಗೆ ಯಾವುದೇ ಷರತ್ತುಗಳನ್ನು ಹಾಕದಂತೆಯೂ ಕೋರಿದ್ದರು.

    ‘ಎ23 ರಮ್ಮಿ’ ಆ್ಯಪ್​ ಕೂಡ ‘ಬಿಗ್ ಬಾಸ್​’ನ ಸ್ಪಾನ್ಸರ್​ಗಳಲ್ಲಿ ಒಂದಾಗಿದೆ. ಈ ಹೆಸರನ್ನು ತೆಗೆದುಕೊಳ್ಳೋಕೆ ಇರಿಸುಮುರುಸಾಗುತ್ತಿದೆ ಎಂದು ಸುದೀಪ್ ಹೇಳಿದ್ದರು. ಇದನ್ನು ಸ್ವಲ್ಪ ಅವಾಯ್ಡ್ ಮಾಡಿ ಎಂದು ಸುದೀಪ್ ಕೋರಿದ್ದರು. ಆದರೆ, ಆಯೋಜಕರು ಒಪ್ಪಿಲ್ಲ. ಈಗ ಸುದೀಪ್ ಅವರು ಬಿಗ್ ಬಾಸ್ ತೊರೆಯಲು ನಿರ್ಧರಿಸಿರುವುದರಿಂದ ಬದಲಾವಣೆಗಳನ್ನು ಮಾಡಲು ಆಯೋಜಕರು ಒಪ್ಪಿದ್ದಾರೆ ಎನ್ನಲಾಗಿದೆ.

    Continue Reading

    BIG BOSS

    ಬಿಗ್​ ಬಾಸ್​ ಮನೆಯಲ್ಲಿ ಆಟಗಾರನೋ? ಅತಿಥಿಯೋ? ಕನ್​ಫ್ಯೂಶನ್​ನಲ್ಲಿ ಧನ್​ರಾಜ್​ ಕಣ್ಣೀರು

    Published

    on

    ಬಿಗ್​ ಬಾಸ್​​ ಸೀಸನ್​ 11 ಬಾರಿ ಕುತೂಹಲದಿಂದ ಸಾಗುತ್ತಿದೆ. ಇದರ ನಡುವೆ ಬಿಗ್​ ಬಾಸ್​ ಮಾಡಿದ ಕರೆ ಸ್ಪರ್ಧಿಗಳಿಗೆ ಶಾಕ್​ ನೀಡಿದರೆ, ಅತ್ತ ನಾನು ಈ ಮನೆಯಿಂದ ಹೊರಟು ಹೋಗುತ್ತೇನೆ ಎಂಬ ಮಾತು ಎಲ್ಲರನ್ನು ತಲೆ ಕೆಡಿಸುವಂತೆ ಮಾಡಿದೆ. ಇದರ ನಡುವೆ ಕ್ಯಾಪ್ಟನ್​ ಶಿಶಿರ್​ಗೆ ಬಿಗ್​ ಬಾಸ್​ ನಾಮಿನೇಟ್​ ಮಾಡುವ ಆಯ್ಕೆಯೊಂದನ್ನು ನೀಡಿದ್ದು, ಈ ವೇಳೆ ಧನ್​ರಾಜ್​ ಆಚಾರ್​ ಅವರನ್ನು ನಾಮಿನೇಟ್​ ಮಾಡಿದ್ದಾರೆ.

    ಧನ್​ರಾಜ್​ ಆಚಾರ್​ ಅವರನ್ನು ನಾಮಿನೇಟ್​ ಮಾಡಿದ ಬಳಿಕ ಅವರು ಬಿಗ್​ ಬಾಸ್​ ಮನೆಯಲ್ಲಿ ಇನ್ನೂ ಕನ್ಫ್ಯೂಶನ್​ನಲ್ಲಿ ಇದ್ದಾರೆ. ಆಟಗಾರನೋ? ಅಥವಾ ಅತಿಥಿಯೋ? ಎಂಬ ಗೊಂದಲದಲ್ಲಿ ಇದ್ದಾರೆ ಎಂದು ಶಿಶಿರ್​ ಕಾರಣ ತಿಳಿಸಿದ್ದಾರೆ. ಬಳಿಕ ಮನೆ ಮಂದಿಯ ಮುಂದೆ ಈ ವಿಚಾರವನ್ನು ತಿಳಿಸುತ್ತಾ, ಧನ್​ರಾಜ್​ ಮುಂದೆಯೇ ನೀವು ಎಲ್ಲೋ ಕಳೆದು ಹೋಗಿದ್ದೀರಾ ಎಂಬುದು ನನ್ನ ಅನಿಸಿಕೆ ಎಂದು ಶಿಶಿರ್​ ಹೇಳಿದ್ದಾರೆ.

    ಶಿಶಿರ್​ ಮಾಡಿರುವ ನಾಮಿನೇಟ್​ ಪ್ರಕ್ರಿಯೆಯಿಂದ ಟೆನ್ಶನ್​ಗೆ ಒಳಗಾದ ಧನ್​ರಾಜ್​ ಒಬ್ಬರೇ ಕುಳಿತು ಕಣ್ಣೀರು ಹಾಕಿದ್ದಾರೆ. ನಾನೇ ಅನ್​ಫಿಟ್​ ಅನಿಸೋಕೆ ಶುರುವಾಗಿ ಹೋಗಿದೆ ಎಂದು ಹೇಳಿದ್ದಾರೆ. ಈ ವೇಳೆ ಹಂಸಾ ಮತ್ತು ಐಶ್ವರ್ಯಾರವರು ಧನ್​ರಾಜ್​ ಕಣ್ಣೀರು ಹಾಕೋದನ್ನು ನೋಡಿ ಸಮಾಧಾನ ಪಡಿಸಿದ್ದಾರೆ.

    Continue Reading

    BIG BOSS

    ‘ಬಿಗ್ ಬಾಸ್​’ ಸೀಸನ್ -11​ಗೆ ಸುದೀಪ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

    Published

    on

    ‘ಕಿಚ್ಚ’ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮಧ್ಯದಲ್ಲೇ ಶಾಕಿಂಗ್ ಅಪ್​ಡೇಟ್ ಕೊಟ್ಟಿದ್ದಾರೆ. ಅವರು ಈ ಸೀಸನ್ ಬಳಿಕ ಅವರು ಶೋ ತೊರೆಯೋ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಕೂಡ ನೀಡಿದ್ದಾರೆ. ಇದು ಫ್ಯಾನ್ಸ್​ಗೆ ಬೇಸರ ಮೂಡಿಸಿದೆ.

    ಸುದೀಪ್ ಬಿಗ್ ಬಾಸ್​ನ ಅತಿಯಾಗಿ ಪ್ರೀತಿಸುತ್ತಾರೆ. ಸ್ಪರ್ಧಿಗಳನ್ನು ಅವರು ತಮ್ಮ ಮನೆಯವರಂತೆ ಕಾಣುತ್ತಾರೆ. ಈ ಕಾರಣಕ್ಕೆ ಪ್ರತಿ ಸೀಸನ್​ನಲ್ಲಿ ಅವರು ಸ್ಪರ್ಧಿಗಳಿಗೆ ತಾವೇ ಅಡುಗೆ ಮಾಡಿ ಮನೆಯಿಂದ ಊಟ ಕಳುಹಿಸುತ್ತಾರೆ. ಇದು ಅವರಿಗೆ ಬಿಗ್ ಬಾಸ್​ ಮೇಲಿರೋ ಪ್ರೀತಿಯನ್ನು ತೋರಿಸುತ್ತದೆ.

    ಈ ಮೊದಲು ಐದು ಸೀಸನ್​ಗಳಿಗೆ ಸುದೀಪ್ ಒಪ್ಪಂದ ಮಾಡಿಕೊಂಡಿದ್ದರು. ಐದು ಸೀಸನ್​ಗಳಿಂದ ಅವರು ಪಡೆದುಕೊಂಡಿದ್ದು 20 ಕೋಟಿ ರೂಪಾಯಿ ಎನ್ನಲಾಗಿದೆ. ಅಂದರೆ, ಪ್ರತಿ ಸೀಸನ್​ಗೆ ಅವರು ನಾಲ್ಕು ಕೋಟಿ ರೂಪಾಯಿ ಪಡೆದಂತೆ ಆಗುತ್ತದೆ.

    ‘ಬಿಗ್ ಬಾಸ್ ಕನ್ನಡ ಸೀಸನ್ 11’ಗಾಗಿ ಸುದೀಪ್ ಅವರು 8 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಸುದೀಪ್ ಕಡೆಯಿಂದಾಗಲೀ, ಕಲರ್ಸ್ ವಾಹಿನಿಯ ಕಡೆಯಿಂದಾಗಲೀ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

    ಸುದೀಪ್ ಅವರ ಖಡಕ್ ನಿರೂಪಣೆ ಇಷ್ಟ ಆಗುತ್ತದೆ. ಅವರಿಂದಲೇ ಶೋನ ಟಿಆರ್​ಪಿ ಕೂಡ ಹೆಚ್ಚಿದೆ. ಈಗ ಅವರು ಇಲ್ಲ ಎಂದರೆ, ಶೋನ ವರ್ಚಸ್ಸು ಕಡಿಮೆ ಆಗೋ ಭಯ ಶುರುವಾಗಿದೆ.

    Continue Reading

    LATEST NEWS

    Trending