BANTWAL
ಬಂಟ್ವಾಳ: ಕುಟುಂಬಸ್ಥರಿಂದ ಮಹಿಳೆಗೆ ಮರದ ಸೋಂಟೆಯಿಂದ ಹಲ್ಲೆ, ಆಸ್ಪತ್ರೆಗೆ ದಾಖಲು
ಬಂಟ್ವಾಳ: ಮಹಿಳೆಯೊಬ್ಬರಿಗೆ ಕುಟುಂಬಸ್ಥರೇ ಸೇರಿ ಹಲ್ಲೆ ನಡೆಸಿದ ಘಟನೆ ಬಂಟ್ವಾಳದ ಕಳ್ಳಿಗೆ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ
ರಂಜನಿ ಎಂಬುವವರು ಲಾರೆನ್ಸ್ ಡಿಸೋಜಾರವರೊಂದಿಗೆ ಜತೆಯಾಗಿ ಕಳೆದ 4 ವರ್ಷಗಳಿಂದ ಹೋಟೇಲ್ ನಡೆಸಿಕೊಂಡು ಬಂದಿದ್ದರು.
ರಂಜನಿ ಅವರು ಲಾರೆನ್ಸ್ ಅವರಿಗೆ 8 ಲಕ್ಷದ 50 ಸಾವಿರ ಹಣ ನೀಡಲು ಬಾಕಿ ಇತ್ತು.
ಈ ಹಿನ್ನೆಲೆಯಲ್ಲಿ ನ.2ರಂದು ಸಂಜೆ 6.45ರ ವೇಳೆಗೆ ಲಾರೆನ್ಸ್ ಡಿಸೋಜಾ ಹಣ ಕೇಳಲು ರಜನಿ ಮನೆ ಬಳಿ ಬಂದಿದ್ದರು.
ರಂಜಿನಿ ಹಾಗೂ ಲಾರೆನ್ಸ್ ಹಣದ ವಿಷಯ ಮಾತನಾಡುತ್ತಿದ್ದ ವೇಳೆ ರಂಜಿನಿ ಅವರ ಅಕ್ಕನ ಮಕ್ಕಳಾದ ಜ್ಯೋತಿ ಪಲ್ಲವಿ,
ಸುಜಲ್ ಮತ್ತು ತಂಗಿಯ ಮಗನಾದ ಮನನ್ ಮನೆಯ ಒಳಗೆ ಬಂದು ಲಾರೆನ್ಸ್ ಡಿಸೋಜಾರವರನ್ನು ಉದ್ದೇಶಿಸಿ “ಯಿ ದಾಯೆಂಬೆ ಬತ್ತಿನಿ ಇಡೆಗ್” ಎಂದು ತುಳುವಿನಲ್ಲಿ ಕೇಳುತ್ತಾ ಲಾರೆನ್ಸ್ ಅವರ ಶರ್ಟ್ ಕಾಲರ್ ಹಿಡಿದಿದ್ದಾರೆ.
ಈ ವೇಳೆ ರಂಜನಿ ತಡೆಯಲು ಹೋದಾಗ ದೂಡಿ ಹಾಕಿ ಲಾರೆನ್ಸ್ ರವರಿಗೆ ಹೊಡೆದಿದ್ದಾರೆ. ಆಗ ಲಾರೆನ್ಸ್ ಮನೆಯಿಂದ ಹೊರಗೆ ಹೋಗಿದ್ದಾರೆ.
ಈ ವೇಳೆ ರಂಜಿನಿ ನಾನು ಲಾರೆನ್ಸ್ನವರನ್ನು ಹಣದ ವಿಷಯ ಮಾತನಾಡುವುದಕ್ಕೆ ನನ್ನ ಮನೆಗೆ ಕರೆದಿದ್ದೇನೆ, ಅದನ್ನು ಕೇಳುವುದಕ್ಕೆ ನೀನು ಯಾರು ಎಂದು ಪ್ರಶ್ನಿಸಿದ್ದಾರೆ.
ತಕ್ಷಣ ಇದೇ ಜ್ಯೋತಿ ಪಲ್ಲವಿ, ಸುಜಲ್ ಮತ್ತು ಮನನ್ ರಂಜನಿಗೆ ಹೊಡೆದಿದ್ದಾರೆ.
ನಂತರ ಜ್ಯೋತಿ ಪಲ್ಲವಿ ಅವರು ರಂಜಿನಿ ಅವರ ಮಗಳು ಅನಿಶಾ ಮತ್ತು ಅಕ್ಕನಾದ ಸರಸ್ವತಿಗೆ ಕರೆ ಮಾಡಿ ಸ್ಥಳಕ್ಕೆ ಬರಹೇಳಿದ್ದಾರೆ. ಈ ವೇಳೆ ಮಗಳು ಅನಿಶಾ, ಸರಸ್ವತಿ, ಪುಷ್ಪಾ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ತಾಯಿ ರಂಜನಿಯನ್ನು ಮಗಳು ಅನಿಶಾ ಅವ್ಯಾಚ್ಯ ಶಬ್ದಗಳಿಂದ ಬೈದು ಮನೆಯಿಂದ ಹೊರಗೆ ಹಾಕಿರುತ್ತಾಳೆ.
ನಂತರ ಆಕೆಯನ್ನು ಹಿಡಿದು ಮರದ ಸೋಂಟೆಯಿಂದ ಥಳಿಸಿದ್ದಾರೆ. ಜೊತೆಗೆ ಮನನ್ ಚೂರಿಯಿಂದ ಇರಿಯಲು ಮುಂದಾದಾಗ ರಂಜಿನಿ ತಪ್ಪಿಸಿಕೊಂಡು ಮನೆಯ ಒಳಗೆ ಓಡಿಹೋಗಿದ್ದಾರೆ.
ಅಲ್ಲಿಗೆ ಮತ್ತೆ ಓಡಿದ ಮನನ್ ಮತ್ತೆ ಹೊಡೆದಿದ್ದಾರೆ. ಈ ವೇಳೆ ಹೊರಗಡೆ ಇದ್ದ ಗಂಡ ‘ಹೊಡೆಯಿರಿ ಅವಳಿಗೆ ಸಾಯಿಸಿ ಅವಳನ್ನು’ ಎಂದು ಹುರುದುಂಬಿಸುತ್ತಿದ್ದರು.
ಬಳಿಕ ನೆರೆ ಮನೆಯವರು ಗಲಾಟೆ ನಿಲ್ಲಿಸಿ ರಂಜನಿಯನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BANTWAL
ಪೊಲೀಸರ ರ್ಯಾಪಿಡ್ ಆಕ್ಷನ್ ಫೋರ್ಸ್ ಲಾರಿ ಪಲ್ಟಿ ; ಇಬ್ಬರಿಗೆ ಗಾಯ
ಪುಂಜಾಲಕಟ್ಟೆ; ಬಂಟ್ವಾಳ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿ ಮೂರ್ಜೆ ಸಮೀಪದ ಕುದ್ರೋಟಿಕಟ್ಟೆಯಲ್ಲಿ ಪೊಲೀಸರ ರ್ಯಾಪಿಡ್ ಆಕ್ಷನ್ ಫೋರ್ಸ್ ಲಾರಿ ಮುಗುಚಿ ಕೆಳಗೆ ಬಿದ್ದಿದೆ.
ಚಾಲಕನ ನಿಯಂತ್ರಣ ತಪ್ಪಿದ ಕಾರಣದಿಂದಾಗಿ ಆರ್ಎಎಫ್ ನ ಲಗೇಜು ತುಂಬಿದ ಲಾರಿ ಭದ್ರಾವತಿಯಿಂದ ಬಿ.ಸಿ.ರೋಡ್ ಗೆ ಬರುತ್ತಿರುವಾಗ ಪಲ್ಟಿಯಾಗಿದೆ. ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಹಾಗೂ ಮತ್ತೋರ್ವ ಸಿಬ್ಬಂದಿ ಸಾಂತಪ್ಪ ನಾಯಕ್ರನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
BANTWAL
ಬಂಟ್ವಾಳ: ಈದ್ ಮಿಲಾದ್ ಮೆರವಣಿಗೆಯಲ್ಲಿ ಸಿಹಿ ಹಂಚಿ ಸೌಹಾರ್ದತೆ ಮೆರೆದ ಹಿಂದೂ ಬಾಂಧವರು.!
ಬಂಟ್ವಾಳ: ಸಂಘಪರಿವಾರದ ವಿವಾದದ ನಡುವೆಯೂ ಹಿಂದೂ ಬಾಂಧವರು ಈದ್ ಮಿಲಾದ್ ಮೆರವಣಿಗೆಯಲ್ಲಿ ಸಾಗಿ ಬಂದು ಮುಸ್ಲಿಮರಿಗೆ ಸಿಹಿ ಹಂಚಿ ಸೌಹಾರ್ದತೆ ಮೆರೆದ ಘಟನೆ ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ನಡೆದಿದೆ.
ಸೋಮವಾರ ಕರ್ನಾಟಕದಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಅದ್ದೂರಿಯಾಗಿ ಆಚರಿಸಿದರು. ಪ್ರಚೋದನಕಾರಿ ಹೇಳಿಕೆಯಿಂದ ಸಂಘಪರಿವಾರದ ಕಾರ್ಯಕರ್ತರು ಬಿಸಿ ರೋಡಿನಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ಮಾಡಿದರು. ಕೆಲಕಾಲ ಬಿಗುವಿನ ವಾತಾವರಣ ಕಂಡುಬಂತು.
ಇದೆಲ್ಲದರ ನಡುವೆ ಮಾಣಿಯಲ್ಲಿ ಹಿಂದೂ ಬಾಂಧವರು ಮೆರವಣಿಗೆಯಲ್ಲಿ ಸಾಗಿ ಬಂದ ಮಸ್ಲಿಮರಿಗೆ ಸಿಹಿತಿಂಡಿ ವಿತರಿಸಿ ಸೌಹಾರ್ದತೆಗೆ ಪಾತ್ರರಾದರು.
ಅಲ್ಲದೆ ಅಂತ್ಯದಿನದವರೆಗೂ ನಮ್ಮ ಊರಲ್ಲಿ ಶಾಂತಿ ಸೌಹಾರ್ದತೆ ನೆಲೆ ನಿಲ್ಲಲಿ ಎಂದು ಹಾರೈಸಿದರು.
BANTWAL
ಬಿ.ಸಿ.ರೋಡ್ನಲ್ಲಿ ಜಮಾಯಿಸಿದ ಸಂಘಪರಿವಾರದ ಕಾರ್ಯಕರ್ತರು: ಸದ್ಯ ಪರಿಸ್ಥಿತಿ ಶಾಂತ
ಬಂಟ್ವಾಳ: ಸಂಘಪರಿವಾರದ ಮುಖಂಡ ಶರಣ್ ಪಂಪ್ ವೆಲ್ ಮತ್ತು ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ರ ಪ್ರಚೋದನಕಾರಿ ಹೇಳಿಕೆಗಳ ಹಿನ್ನೆಲೆಯಲ್ಲಿ ಸೋಮವಾರ ಬಿಸಿರೋಡ್ನಲ್ಲಿ ಭಾರೀ ಸಂಖ್ಯೆಯಲ್ಲಿ ಸಂಘಪರಿವಾರದ ಕಾರ್ಯಕರ್ತರು ಜಮಾಯಿಸಿ ಘೋಷಣೆಗಳನ್ನು ಕೂಗಿದ್ದಾರೆ.
ಪೊಲೀಸರು ಬಿ.ಸಿ.ರೋಡ್ನಲ್ಲಿ ಬಿಗಿ ಬಂದೋಬಸ್ತ್ ಮಾಡಿದ್ದಾರೆ. ನಿಗದಿಕ್ಕಿಂತ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಎಸ್ಪಿ ಯತೀಶ್ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಬಂದೋಬಸ್ತ್ ಮಾಡಲಾಗಿದೆ.
ಬಿ.ಸಿ.ರೋಡ್ ರಕ್ತೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸಂಘ ಪರಿವಾರದ ನೂರಾರು ಕಾರ್ಯಕರ್ತರು ಜಮಾಯಿಸಿದ್ದಾರೆ. ಗುಂಪು ಜಮಾಯಿಸಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಕಲ್ಪಿಸಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ.