ಎಲ್ಲಿದೆ ಮಾನವೀಯತೆ..? ಕೆಲವೊಂದು ವಿಕೃತ ಮನಸ್ಸುಗಳಲ್ಲಿ ನಶಿಸಿ ಹೋಗುತ್ತಿದೆಯಾ..??
ಎಲ್ಲಿದೆ ಮಾನವೀಯತೆ..? ಕೆಲವೊಂದು ವಿಕೃತ ಮನಸ್ಸುಗಳಲ್ಲಿ ನಶಿಸಿ ಹೋಗುತ್ತಿದೆಯಾ..??
ಮಂಗಳೂರು: ಕರಾವಳಿಯ ಹೆಮ್ಮೆಯ ಚಾನೆಲ್ ನಮ್ಮ ಕುಡ್ಲ 24×7 ವಾಹಿನಿಯಲ್ಲಿ ಪ್ರಸಾರವಾದ ‘ಪ್ರೈಮ್ ಡಿಬೆಟ್’ನಲ್ಲಿ ‘ದುಬೈ ಟ್ರ್ಯಾಜಿಡಿ’ ಎಂಬ ವಿಚಾರದ ಬಗ್ಗೆ ಸಿರಾಜುದ್ದಿನ್ ಪರ್ಲಡ್ಕ ಎಂಬ ವೀಕ್ಷಕರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಆ ಕಾರ್ಯಕ್ರಮಕ್ಕೆ ಬಂದಂತಹ ಕರೆಗಳಲ್ಲಿ ಹಲವರು ಮಾನವೀಯತೆ ದೃಷ್ಟಿಯಿಂದ ಮಾತನಾಡಲಿಲ್ಲ ಎಂದವರು ಬೇಸರ ವ್ಯಕ್ತಪಡಿಸಿದ್ದಾರೆ.
ಹೌದು ದುಬೈನಿಂದ ಮಂಗಳೂರಿಗೆ ಆಗಮಿಸಿದ 179 ಪ್ರಯಾಣಿಕರಲ್ಲಿ 16 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿದೆ.
ಈ ಹಿನ್ನಲೆಯಲ್ಲಿ ಜನತೆ ಕೂಡ ವಿದೇಶದಲ್ಲಿದ್ದವರು ಇಲ್ಲಿ ಬಂದಿದ್ದು ತಪ್ಪು ಎಂಬುದಾಗಿ ಬಿಂಬಿಸಿದ್ದಾರೆ.
ಈ ನಿಟ್ಟಿನಲ್ಲಿ ಸಿರಾಜುದ್ದಿನ್ ಅವರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಸಿರಾಜುದ್ದಿನ್ ಪರ್ಲಡ್ಕ ಬರೆದ ಪತ್ರ ಇಲ್ಲಿದೆ ನೋಡಿ….
“’ನಮ್ಮ ಕುಡ್ಲ 24X7′ ಚಾನೆಲಿನಲ್ಲಿ ಮೇ 15 ರಂದು ನಡೆದ ಪ್ರೈಮ್ ಡಿಬೇಟಿನಲ್ಲಿ ಕೆಲವೊಂದು ಕಾಲರ್ ಗಳ ಅಮಾನವೀಯ ಮನಸ್ಥಿತಿಯನ್ನು ನೋಡಿ ತುಂಬಾ ಬೇಸರವಾಯಿತು.
ಅನಿವಾಸಿ ಪ್ರವಾಸಿಗರು ಕೆಲಸವಿಲ್ಲದೇ ರೂಮು ಬಾಡಿಗೆ ಕೊಡಲು ಹಾಗೂ ಎರಡೊತ್ತಿನ ಊಟಕ್ಕೂ ಪರದಾಡುತ್ತಿರುವಾಗ ಈ ರೀತಿಯ ವಿಷಕಾರಿ ಚಿಂತನೆ ನಿಜಕ್ಕೂ ಖೇದಕರ.
ವಿದೇಶದಿಂದ ಊರಿಗೆ ಇವಾಗ ಬರಬೇಡಿ ಎನ್ನುವವರೇ ಕೇಳಿ, ‘ಇಲ್ಲಿ (ವಿದೇಶದಲ್ಲಿ) ವಿಸಿಟ್ ವೀಸಾದಲ್ಲಿ ಎರಡು ಮೂರು ತಿಂಗಳಿಗಾಗಿ ತಮ್ಮ ಮಕ್ಕಳನ್ನು ನೋಡಲು ಬಂದು ಸಿಲುಕಿರುವ ಅದೆಷ್ಟೋ,
ಹಿರಿಯ ತಂದೆ-ತಾಯಂದಿರು, ಎರಡು ಮೂರು ತಿಂಗಳಿಗೆ ಆಗುವಷ್ಟು ದೈನಂದಿನ ಔಷಧಿಗಳನ್ನು ತಂದಿರುವ ವಯಸ್ಸಾದ ಹಿರಿಯ ಜನರು, ಗರ್ಭಿಣಿ ಮಹಿಳೆಯರು,
ಕೆಲಸವೂ ಇಲ್ಲದೇ ಹಣವೂ ಇಲ್ಲದೇ ಕಂಗಾಲಾಗಿರುವ ಕಾರ್ಮಿಕರು, ಸೇಲ್ಸ್ ಮೆನ್ ಗಳು, ಮುಂತಾದ ನೌಕರಿಯಲ್ಲಿರುವವರು ಮಾತ್ರ ತಾಯ್ನಾಡಿಗೆ ಮರಳುತ್ತಿದ್ದಾರೇ ವಿನಃ, ರಜಾ ದಿನಗಳನ್ನು ಕಳೆಯಲು ಬರುವ ವಿಲಾಸಿಗಳಲ್ಲ.
ಈ ಮೇಲೆ ತಿಳಿಸಿದವರೆಲ್ಲರೂ ಇಲ್ಲಿ ಸಂಕಷ್ಟದಲ್ಲಿರುವಾಗ ತಮ್ಮ ತಾಯ್ನಾಡು ಹಾಗೂ ತಮ್ಮ ಮನೆಯವರನ್ನು ಸೇರಬೇಕಾದ ಅನಿವಾರ್ಯತೆ ಇದೆ”.
“ಅಲ್ಲದೇ ವಿಸಿಟ್ ವೀಸಾದಲ್ಲಿರುವವರು ಈ ಪರಿಸ್ಥಿತಿಯಲ್ಲಿ ಯಾವುದೇ ವೈದ್ಯಕೀಯ ಚಿಕಿತ್ಸೆ ಪಡೆಯುವ ಸ್ಥಿತಿಯಲ್ಲಿಲ್ಲ.
ಯಾಕೆಂದರೆ ವಿಸಿಟ್ ವೀಸಾದವರಿಗೆ ಇಲ್ಲಿನ ಇನ್ಶೂರೆನ್ಸ್ ಸೌಲಭ್ಯ ಲಭ್ಯವಿಲ್ಲ. ಹಾಗಾಗಿ ಸಂಪೂರ್ಣ ವೆಚ್ಚವನ್ನು ಭರಿಸಬೇಕಾಗುತ್ತದೆ.
ವೈದ್ಯರ ಶುಲ್ಕವೇ 300 ದಿರ್ಹಮ್ಸ್ (ಸರಿಸುಮಾರು 6000 ರೂಪಾಯಿ) ಮತ್ತು ಔಷಧಿಗೆ ಬೇರೆಯೇ ಪಾವತಿ ಮಾಡಬೇಕಾಗುತ್ತದೆ.
ಏನಿದ್ದರೂ ಕಡಿಮೆಯೆಂದರೆ ಒಮ್ಮೆಗೆ ಸರಿ ಸುಮಾರು 10000 ರೂಪಾಯಿ ಬೇಕಾಗುತ್ತದೆ. ಇದೆಲ್ಲವನ್ನೂ ಹೇಗೆ ನಿಭಾಯಿಸಬಹುದೆಂದು ನೀವೇ ಆಲೋಚಿಸಿ”.
“ವಿದೇಶಗಳಿಂದ ಬಂದಿಳಿದವರೆಲ್ಲರನ್ನೂ ಕೊರೊನಾ ಮಹಾಮಾರಿಯಂತೆ ಕಾಣುವ ಜನರೇ, ಇಲ್ಲಿ ಕೇಳಿ, ಅವರು ಯಾವುದೇ ತಪ್ಪು ಮಾಡಿಲ್ಲ.
ಎಲ್ಲವೂ ಸೃಷ್ಟಿಕರ್ತನ ಲೀಲೆ. ಮಾನವ ನೆಪ ಮಾತ್ರ. ಅವರ್ಯಾರೂ ತಮ್ಮಿಷ್ಟದಂತೆ ತಿರುಗಾಡಲಿಲ್ಲ. ಜಿಲ್ಲಾಡಳಿತ ನಿರ್ದೇಶಿಸಿದಂತೆ ಕ್ವಾರಂಟೈನ್ ಮಾಡುತ್ತಿದ್ದಾರೆ.
ಪರೀಕ್ಷೆಗೆ ಒಳಪಡಿಸಿ ವೈರಸ್ ಪತ್ತೆಯಾದರೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಾರೆ. ಹಾಗಂತ ಅವರು ಅದನ್ನು ಊರಿಡೀ ಪಸರಿಸುತ್ತಾರೆಯೇ.?.
‘ಇಲ್ಲಿ (ವಿದೇಶದಲ್ಲಿ) ಅದೆಷ್ಟೋ ಸಲ ನಾನು ಕೂಡಾ ಊರಿನ ಕೆಲವರು ಪಾಸಿಟಿವ್ ಬಂದವರಿಗೆ ಆವಶ್ಯಕ ವಸ್ತುಗಳನ್ನು ವಿನಂತಿ ಮಾಡಿದಾಗ ಅವರ ರೂಮಿನ ಬಳಿ, ಆಸ್ಪತ್ರೆಯ ಬಳಿ ತೆರಳಿ ನೀಡಿದ್ದೇನೆ.
ನಾವು ಪಾಲಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರಾಯಿತು. ನಮ್ಮಲ್ಲಿ ಮಾನವೀಯತೆ ಎಂಬುವುದು ಇರಲಿ.
ವಿನಾಕಾರಣ ಭಯದ ವಾತಾವರಣ ಸೃಷ್ಟಿಸದೇ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿಕೊಂಡು ಈ ಮಹಾಮಾರಿಯ ನಿರ್ಮೂಲನೆಯಲ್ಲಿ ಕೈ ಜೋಡಿಸೋಣ.
ಎಲ್ಲರೂ ನಮ್ಮವರೇ. ಪರಸ್ಪರ ಅನ್ಯೋನ್ಯತೆ ಹಾಗೂ ಸೌಹಾರ್ದತೆಯಿಂದ ಸಹೋದರತ್ವದಿಂದ ಬಾಳೋಣ”.
LATEST NEWS
ಅಣ್ಣನ ಪ್ರೀತಿಗೆ ತಮ್ಮ ಬ*ಲಿ; ತಾಯಿಯ ಮುಂದೆಯೇ ಮಗನ ಕೊ*ಲೆ
ಮಂಗಳೂರು/ಕಲಬುರಗಿ: ಯುವ ಸಮಾಜದ ಪ್ರೀತಿಗೆ ಮನೆಯಲ್ಲಿ ವಿರೋಧ ಬರುವುದು ಸಹಜ. ಅದರಲ್ಲೂ ಹುಡುಗಿಯ ವಿಚಾರದಲ್ಲಿ ಇದು ಹೆಚ್ಚಾಗಿಯೇ ಕಾಣಬಹುದು. ವಿಪರ್ಯಾಸವೆಂದರೆ ಅಣ್ಣನ ಪ್ರೇಮದ ವಿಚಾರದಲ್ಲಿ ತಮ್ಮ ಬಲಿ*ಯಾದ ಘಟನೆ ನಡೆದಿದೆ.
ಕಲಬುರಗಿ ನಗರದ ಹೊರವಲಯದಲ್ಲಿರುವ ನಾಗನಹಳ್ಳಿ ಗ್ರಾಮದಲ್ಲಿ ಸುಮಿತ್ ಮಲ್ಲಾಬಾದ್ ಎಂಬ 19 ವರ್ಷದ ಯುವಕನನ್ನು ಭೀಕ*ರವಾಗಿ ಕೊ*ಲೆ ಮಾಡಲಾಗಿದೆ. ತಂದೆ-ತಾಯಿಯೊಂದಿಗೆ ಮುಂಬೈನಲ್ಲಿ ವಾಸವಾಗಿದ್ದ ಸುಮಿತ್, ಮುಂಬೈನಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ. ಕಳೆದ ವಾರವಷ್ಟೇ ತಾಯಿಯೊಂದಿಗೆ ಕಲಬುರಗಿಗೆ ಆಗಮಿಸಿದ್ದ. ಊರಲ್ಲಿ ಸುಮಿತ್ ಸಹೋದರ ಸಚಿನ್ ಮನೆಯಲ್ಲಿ ವಾಸವಾಗಿದ್ದ. ಸಚಿನ್ ನಾಗನಹಳ್ಳಿ ಗ್ರಾಮದ ತನ್ನದೆ ಏರಿಯಾದ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಈ ವಿಚಾರ ಯುವತಿಯ ಮನೆಯವರಿಗೆ ಗೊತ್ತಾಗಿ ಸಾಕಷ್ಟು ಭಾರಿ ನ್ಯಾಯ ಪಂಚಾಯಿತಿ ಮಾಡಿದ್ದರಂತೆ. ಆದರೆ ಅದು ಬಗೆಹರೆದಿರಲಿಲ್ಲ. ನಿನ್ನೆ ಸಂಜೆ (ಸೆ.21) ಸಚಿನ್ ಮನೆಗೆ ಯುವತಿಯ ಸಹೋದರ ಮತ್ತು ಆತನ ಕೆಲ ಸ್ನೇಹಿತರು ಬಂದಿದ್ದಾಗ ಸಚಿನ್ ಮನೆಯಲ್ಲಿರದ ಕಾರಣ ಆತನ ತಾಯಿ ಮತ್ತು ಸಹೋದರನ ಜೊತೆ ಗಲಾಟೆ ತೆಗೆದಿದ್ದಾರೆ. ಬಳಿಕ ಗಲಾಟೆ ವಿಕೋಪಕ್ಕೆ ತೆರಳಿ ಸುಮಿತ್ನನ್ನ ಚಾ*ಕುವಿನಿಂದ ಚು*ಚ್ಚಿ ಎಸ್ಕೇಪ್ ಆಗಿದ್ದಾರೆ.
ಇತ್ತ ಸುಮಿತ್ಗೆ ಚಾ*ಕು ಚುಚ್ಚಿ*ದ್ದನ್ನು ಕಂಡ ತಾಯಿ, ಮಗನನ್ನ ಉಳಿಸಿಕೊಳ್ಳಲು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹನ್ನೆರೆಡು ಗಂಟೆಗಳ ಕಾಲ ನಡೆದ ಚಿಕಿತ್ಸೆ ಫಲಕಾರಿಯಾಗಿದೆ ಇಂದು ಬೆಳಗ್ಗೆ (ಸೆ.22) ಸಾವನ್ನ*ಪ್ಪಿದ್ದಾನೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಅದೇನೆ ಆಗಲಿ ಯುವತಿಯ ವಿಚಾರದಲ್ಲಿ ಏನು ಮಾಡದ ಅಮಾಯಕ ಯುವಕ ಬಲಿಯಾಗಿರೋದು ನಿಜಕ್ಕೂ ದುರಂತವೆ ಸರಿ.
LATEST NEWS
ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ತುಪ್ಪ ಸಾಗಿಸುವ ಟ್ಯಾಂಕರ್ಗಳಿಗೆ ಜಿಪಿಎಸ್ ಅಳವಡಿಕೆ
ಆಂಧ್ರಪ್ರದೇಶ/ಮಂಗಳೂರು: ತಿರುಪತಿ ತಿರುಮಲದಲ್ಲಿ ಲಡ್ಡು ವಿವಾದ ಉಂಟಾದ ಬಳಿಕ ಸರಕಾರ ನಂದಿನಿ ತುಪ್ಪಕ್ಕೆ ಬೇಡಿಕೆ ಇಟ್ಟಿದೆ. ಒಂದು ತಿಂಗಳ ಹಿಂದೆ ಟಿಟಿಡಿ ಕೆಎಂಎಫ್ಗೆ ಟೆಂಡರ್ ನೀಡಿದ ನಂತರ ನಂದಿನಿ ತುಪ್ಪ ಪೂರೈಕೆಯನ್ನು ಪುನಃ ಆರಂಭಿಸಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ ಕೆ ಜಗದೀಶ್ ಹೇಳಿದ್ದಾರೆ.
ತಿರುಪತಿ ಲಡ್ಡು ವಿವಾದದ ಬಳಿಕ ಕೆಎಮ್ಎಫ್ ಹೈ ಅಲರ್ಟ್:
“ನಾವು ಒಂದು ತಿಂಗಳ ಹಿಂದೆ ತುಪ್ಪವನ್ನು(ಟಿಟಿಡಿಗೆ) ಸರಬರಾಜು ಮಾಡುತ್ತಿದ್ದೇವೆ. ನಾವು ವಾಹನಗಳಿಗೆ ಜಿಪಿಎಸ್ ಸಿಸ್ಟಮ್ ಮತ್ತು ಜಿಯೋ ಲೊಕೇಶನ್ ಸಾಧನಗಳನ್ನು ಅಳವಡಿಸಿದ್ದೇವೆ. ಇದರಿಂದ ವಾಹನ ಎಲ್ಲಿ ನಿಲ್ಲುತ್ತವೆ ಎಂಬುದನ್ನು ನಾವು ಕಂಡುಹಿಡಿಯಬಹುದು. ಇದು ಎಲ್ಲಿಯೂ ಕಲಬೆರಕೆ ಮಾಡದಂತೆ ನೋಡಿಕೊಳ್ಳಲು ಸಹಾಯಕವಾಗುತ್ತದೆ” ಎಂದು ಜಗದೀಶ್ ತಿಳಿಸಿದ್ದಾರೆ.
ಕೆಎಂಎಫ್, ಟಿಟಿಡಿಗೆ 350 ಟನ್ ತುಪ್ಪ ಪೂರೈಸುವ ಗುತ್ತಿಗೆ ಪಡೆದುಕೊಂಡಿದೆ. ಅಗತ್ಯ ಬಿದ್ದಾಗ ತುಪ್ಪ ಪೂರೈಕೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ವಿಶ್ವವಿಖ್ಯಾತ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂದು ಸ್ವತಃ ಆಂಧ್ರ ಪ್ರದೇಶ ಮುಖ್ಯಮಂತ್ರಿ ಆರೋಪ ಮಾಡಿದ್ದರು. ಅಲ್ಲದೆ ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ.
LATEST NEWS
ಪಂಚೆ ಉಟ್ಟು ದೇಸೀ ಸ್ಟೈಲ್ ಅಡುಗೆ ಮಾಡಿದ ಬ್ರಿಟಿಷ್ ಬಾಣಸಿಗ..! ಫಿದಾ ಆದ ನೆಟ್ಟಿಗರು
ಹೆಲ್ಸ್ ಕಿಚನ್ ಹಾಗೂ ಮಾಸ್ಟರ್ ಚೆಫ್ ನಂತಹ ಜನಪ್ರಿಯ ಕಾರ್ಯಕ್ರಮಗಳ ನಿರೂಪಕ ಗಾರ್ಡನ್ ರಾಮ್ಸೆ ಇದೀಗ ತನ್ನ ವೇಷಭೂಷಣದ ಮೂಲಕ ಗಮನ ಸೆಳೆದಿದ್ದಾರೆ. ಬ್ರಿಟಿಷ್ ಸೆಲೆಬ್ರಿಟಿ ಬಾಣಸಿಗ ಗಾರ್ಡನ್ ಜೇಮ್ಸ್ ರಾಮ್ಸೆ ಅವರು ತಮ್ಮ ಡಿಫರೆಂಟ್ ಶೈಲಿಯ ಕುಕಿಂಗ್ ಗಳಿಗೆ ಹೆಸರುವಾಸಿಯಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಅವತಾರದಲ್ಲಿ ಅಡುಗೆ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಸ್ಟೈಲ್ಆಗಿ ಪಂಚೆ ತೊಟ್ಟು ದಕ್ಷಿಣ ಕನ್ನಡ ಭಾರತೀಯ ಶೈಲಿಯ ಅಡುಗೆಗಳನ್ನು ಮಾಡಿದ್ದು ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ಸೇನೆಯ ರೈಲನ್ನು ಸ್ಫೋಟಿಸಲು ಯತ್ನ
ಈ ಕುರಿತ ವಿಡಿಯೋವನ್ನು historyinmemes(ಹಿಸ್ಟೋರಿ ಇನ್ ಮೀಮ್ಸ್) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಸ್ಥಳೀಯ ಭಾರತೀಯ ಉಡುಗೆ ತೊಟ್ಟು ಅಡುಗೆ ಮಾಡಿದ ಗಾರ್ಡನ್ ರಾಮ್ಸೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಸೆ.20ರದು ಹಂಚಿಕೊಂಡಿದ್ದ ವೀಡಿಯೋ 12 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.