ಕೃಷ್ಣಾ ಶೆಟ್ಟಿ ಮಾಲಿಕತ್ವದ ಗೋಲಿಸೋಡಾಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಕೃಷ್ಣಾ ಶೆಟ್ಟಿ ಮಾಲಿಕತ್ವದ ಗೋಲಿಸೋಡಾಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಮಂಗಳೂರು: ಬಿಸಿಲಿನ ಧಗೆಗೆ ಚಿಲ್ಡ್ ಆಗಿರೋ ಗೋಲಿಸೋಡ ಕುಡಿಯೋದೆ ಒಂದು ಮಜಾ. ಒಂದ್ಕಾಲದಲ್ಲಿ ಪಾನೀಯಗಳ ರಾಜನಾಗಿದ್ದ ಗೋಲಿಸೋಡ, ಬರಬರುತ್ತಾ ಕಲರ್ ಫುಲ್ ಪಾನೀಯಗಳ ಅಬ್ಬರದ ನಡುವೆ ಸೈಡ್ಲೈನ್ ಆಗಿತ್ತು. ಆದ್ರೆ ಇದೀಗ ಗೋಲಿಸೋಡವು ಭಿನ್ನ-ವಿಭಿನ್ನವಾಗಿ ಅಪ್ಡೇಟ್ ಆಗಿದೆ ಅನ್ನೋದು ಹಳೇ ವಿಷ್ಯ. ಆದ್ರೆ ಇದೆಲ್ಲದ್ರ ಮಧ್ಯೆ ಒಂದಾನೊಂದು ಕಾಲದಿಂದಲ್ಲೂ ಕುಡ್ಲದ ಜನರಿಗೆ ನ್ಯಾಚುರಲ್ ಫ್ಲೇವರ್ ಬೆರೆಸಿ ಗೋಲಿಸೋಡ ನೀಡ್ತಾ, ಗ್ರಾಹಕರ ಹಾಟ್ ಫೇವರೇಟ್ ಎನಿಸಿಕೊಂಡಿರೋ ಇವರ ಬಗ್ಗೆ ಕೇಳಿದ್ದೀರಾ.? ಹೌದು ಓಲ್ಡ್ ಈಸ್ ಗೋಲ್ಡ್ ಅನ್ನೋ ಗೋಲಿಸೋಡ ಮಾರೋ ಹಿರಿ ಜೀವದ ಕಥೆ.
ಗೋಲಿಸೋಡ.. ಇಂದಿಗೂ ಅದೆಷ್ಟ್ಟೋ ಜನರ ಫೇವರೆಟ್ ಪಾನೀಯ. ಶ್ರೀಮಂತರು ಬಡವರು ಅನ್ನೋ ಹಂಗಿಲ್ಲದೆ ಆರೋಗ್ಯ ದೃಷ್ಟಿಯಲ್ಲಿ ಎಲ್ಲರೂ ಈ ಪಾನೀಯಾಕ್ಕೆ ಫಿದಾ ಅಂದ್ರೂ ತಪ್ಪಾಗಲ್ಲ. ಒಂದ್ಕಾಲದಲ್ಲಿ ಬಹು ಬೇಡಿಕೆಯಾಗಿದ್ದ ಗೋಲಿಸೋಡ..ಇಂದು ಅಪರೂಪಕ್ಕೆ ಸಿಗೋ ಪಾನೀಯವಾದ್ರೂ ಡಿಮ್ಯಾಂಡ್ ಮಾತ್ರ ಕಮ್ಮಿಯಾಗಿಲ್ಲ ಅನ್ನೋದು ನಿಜ.
ಹೌದು ಇದು ಎಷ್ಟರ ಮಟ್ಟಿಗೆ ಸತ್ಯ ಅನ್ನೋದಕ್ಕೆ ಈ ಗೋಲಿಸೋಡ ಶಾಪ್ ಮುಂದೆ ನಿಂತಿರೋ ವಾಹನಗಳನ್ನ ಹಾಗೇ ಬರೋ ಗ್ರಾಹಕರನ್ನ ನೋಡಿ… ಇದು ಮಂಗಳೂರಿನ ಮಣ್ಣಗುಡ್ಡೆ ಬಳಿ ಇರೋ 85 ವರ್ಷ ಪ್ರಾಯದ ಹಿರಿ ಜೀವ ಎಂ.ಕ್ರಷ್ಣ ಶೆಟ್ಟಿಯವರ ಗೋಲಿಸೋಡ ಅಂಗಡಿ. ಅಂದ್ಹಾಗೆ ಈ ಎಂ.ಕ್ರಷ್ಣ ಶೆಟ್ಟಿ ಮಾಲಿಕತ್ವದ ಗೋಲಿಸೋಡ ಅಂಗಡಿಗೆ ಭರ್ತಿ 50 ವರುಷಕ್ಕೂ ಹೆಚ್ಚಿನ ಇತಿಹಾಸವಿದೆ. 1957 ರಲ್ಲಿ ಎಂ.ಕ್ರಷ್ಣ ಶೆಟ್ಟಿಯವರ ಅಣ್ಣ ಈಶ್ವರ್ ಶೆಟ್ಟಿ ಗೋಲಿಸೋಡ ತಯಾರಿಸಿ ಅಂಗಡಿ ಅಂಗಡಿಗಳಿಗೆ ಕೊಡುವ ಕಾಯಕ ನಡೆಸುತ್ತಿದ್ದರು. ಅವರ ಜೊತೆ ಸಹೋದರ ಎಂ.ಕ್ರಷ್ಣ ಶೆಟ್ಟಿ ಸಹಾಯಕರಾಗಿದ್ರು… ಅಣ್ಣನ ನಿಧನಾನಂತರ ಅಂದರೆ 1988 ರಿಂದ ಸ್ವತಃ ತಾನೇ ಈ ಸೋಡ ತಯಾರಿಕೆ ಮಾಡಲು ನಿಶ್ಚಯಿಸಿ ಇಂದಿಗೂ ಅದೇ ವ್ರತ್ತಿಯನ್ನು ಮುಂದುವರಿಸುತ್ತ ಬಂದಿದ್ದಾರೆ.
ಇನ್ನು ಇವರು ತಯಾರಿಸೋ ಗೋಲಿಸೋಡದ ಸ್ಪೆಷಾಲಿಟಿ ಏನಪ್ಪ ಅಂದ್ರೆ ತರೇಹವಾರಿ ನ್ಯಾಚುರಲ್ ಫ್ಲೇವರ್ ನ ತಂಪಾದ ಪಾನಿಯ ಇಲ್ಲಿ ಸಿಗುತ್ತದೆ.. ಪುನರ್ ಪುಳಿ, ಲೆಮೆನ್, ಆರೆಂಜ್ ಹೀಗೆ ಇನ್ನಿತರ ಫ್ಲೇವರ್ ಗಳ ರುಚಿ ಸವಿಯಬಹುದು.. ಅಷ್ಟೇಅಲ್ಲ ಹಿಂದಿನ ಕಾಲದಲ್ಲಿ ಇಂಗ್ಲೆಂಡ್, ಜರ್ಮನಿಯ ಬಾಟಲಿಯಲ್ಲಿ ಸೋಡ ತಯಾರಿಸಿ ಮಾರಾಟಮಾಡುತ್ತಿದ್ದು, ಈಗಲೂ ಅದರಲ್ಲೇ ಸೋಡ ತಯಾರಿಸ್ತಾರೆ. ಜೊತೆಗೆ ಇವರು ಬಳಸುವ ಮೆಷಿನ್ ಕೂಡ ಜರ್ಮನಿಯದ್ದಾಗಿದೆ. ಇತ್ತಿಚಿನ ದಿನದಲ್ಲಿ ಇಂತಹ ಬಾಟಲಿಗಳು ಮನೆಯ ಶೋಕೆಸ್ ನಲ್ಲಿ ರಾರಾಜಿಸೋ ಕಾರಣ ದುಬಾರಿ ಬೆಲೆ ಕೊಟ್ಟು ಆಸಕ್ತಿ ಉಳ್ಳವರು ಇವರಿಂದ ಖರೀದಿಸ್ತಾರಂತೆ.
ಪಾನೀಯಗಳ ರಾಜ ಗೋಲಿಸೋಡಗೆ ಈಗಲೂ ತುಂಬಾನೇ ಬೇಡಿಕೆ ಇದ್ದು, ಊರ ಪರವೂರ ಜನರು ಬಾಯಾರಿಕೆ ತೀರಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಒಟ್ನಲ್ಲಿ ಇಂದಿನ ಕಲರ್ ಕಲರ್.. ಕೂಲ್ ಡ್ರಿಂಕ್ನ ಸ್ಪರ್ದೆಯ ಕಾಲ ಘಟ್ಟದಲ್ಲಿ 85 ರ ಹರೆಯದ ಎಂ.ಕೃಷ್ಣ ಶೆಟ್ಟಿ ತಾವೇ ಸ್ವತಃ ತಯಾರಿಸಿ ಮಾರಾಟ ಮಾಡ್ತಾ ಇರೋದು ನಿಜವಾಗಲೂ ಮೆಚ್ಚವಂತದ್ದೆ..
ವಿಡಿಯೋ
BELTHANGADY
ಠಾಣೆಗೆ ನುಗ್ಗಿ ಉದ್ಧಟತನದ ವರ್ತನೆ..! ಹರೀಶ್ ಪೂಂಜಾ ಮೇಲೆ ಕೇಸ್..!
ಮಂಗಳೂರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ಜೊತೆಯಲ್ಲಿ ಉದ್ಧಟತನದಿಂದ ವರ್ತಿಸಿದ್ದ ಶಾಸಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಬೆಳ್ತಂಗಡಿಯ ಮೇಲಂತಬೆಟ್ಟು ಎಂಬಲ್ಲಿ ಅಕ್ರಮ ಗಣಿಗಾರಿಕೆಗೆ ಪೊಲೀಸರ ಸಹಕಾರ ಪಡೆದು ತಹಶೀಲ್ದಾರ್ ದಾಳಿ ನಡೆಸಿದ್ದರು. ಈ ವೇಳೆ ಅದು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹಾಗೂ ಬಿಜೆಪಿ ಮುಖಂಡ ಪ್ರಮೋದ್ ಗೌಡ ಎಂಬವರಿಗೆ ಸೇರಿದ್ದಾಗಿ ತಿಳಿದು ಬಂದಿತ್ತು. ಈ ಹಿನ್ನಲೆಯಲ್ಲಿ ಶಶಿರಾಜ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದು ತಂದಿದ್ದರು. ಈ ವಿಚಾರ ತಿಳಿದು ಠಾಣೆಗೆ ಆಗಮಿಸಿದ್ದ ಶಾಸಕ ಹರೀಶ್ ಪೂಂಜಾ ಠಾಣೆಯಲ್ಲಿ ಪೊಲೀಸರ ಜೊತೆಯಲ್ಲಿ ಅನುಚಿತವಾಗಿ ವರ್ತಿಸಿ ಬೆದರಿಕೆ ಕೂಡಾ ಹಾಕಿದ್ದರು.
ಶಾಸಕ ಹರೀಶ್ ಪೂಂಜಾ ನಡವಳಿಕೆಯ ಬಗ್ಗೆ ವ್ಯಾಪಕ ಟೀಕೆ ಕೂಡಾ ವ್ಯಕ್ತವಾಗಿದ್ದು, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಲಾಗಿತ್ತು. ಇದೀಗ ಹಿರಿಯ ಅಧಿಕಾರಿಗಳ ಸೂಚನೆಯಂತೆ ಶಾಸಕ ಹರೀಶ್ ಪೂಂಜಾ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. IPC 353 ,504 ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.
DAKSHINA KANNADA
ವೈರಲ್ ಆಯ್ತು ಮೆಟರ್ನಿಟಿ ಶೂಟ್..! ಮೆಚ್ಚುಗೆ ಪಡೆದ ಫೋಟೋಗ್ರಾಫರ್..!
ಮಂಗಳೂರು : ಕೇರಳದ ಫೇಮಸ್ ಫೋಟೋಗ್ರಾಫರ್ ಅಥಿರಾ ಜಾಯ್ ಅವರು ಮಾಡಿರೋ ಫೋಟೋ ಶೂಟ್ ಒಂದು ಈಗ ಸಾಕಷ್ಟು ವೈರಲ್ ಆಗಿದ್ದು, ಜನರ ಮೆಚ್ಚುಗೆ ಪಡೆದುಕೊಂಡಿದೆ. ಈಗಾಗಲೇ ಹಲವಾರು ಮೆಟರ್ನಿಟಿ ಶೂಟ್ ಮಾಡಿರೋ ಅಥಿರಾ ಜಾಯ್ ಅವರ ಈ ಫೋಟೋಗ್ರಾಫಿಗೆ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ಈ ಫೋಟೋಗ್ರಾಫಿಯ ಹಿಂದೆ ಇರುವ ಕಥೆಯ ಬಗ್ಗೆಯೂ ಅಥಿರಾ ಹೇಳಿಕೊಂಡಿದ್ದಾರೆ.
ಶರಣ್ಯ ಈಕೆ ವಯನಾಡಿನ ಬುಡಕಟ್ಟು ಸಮುದಾಯವಾದ ‘ಪನಿಯಾ’ ಸಮುದಾಯದ ಬಡ ಹೆಣ್ಣು ಮಗಳು. ಬುಡಕಟ್ಟು ಸಮುದಾಯದ ಆ ಹೆಣ್ಣು ಮಗಳ ಆಸೆಯನ್ನು ಅರಿಯವ ಸಲುವಾಗಿ ಅಥಿರಾ ಜಾಯ್ ಆಕೆಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಆಕೆಗೆ ಏನು ಬೇಕು ಎಂದು ಕೇಳಿದಾಗ ಆಕೆಯ ಬೇಡಿಕೆ ಕೇಳಿ ಕಣ್ಣೀರು ಬಂತು ಅಂತ ಫೋಟೋಗ್ರಾಫರ್ ಅಥಿರಾ ಜಾಯ್ ಹೇಳಿದ್ದಾರೆ.
ಬುಡಕಟ್ಟು ಸಮುದಾಯದ ಶರಣ್ಯ ಪತಿ ಅನೀಶ್ ಕೂಲಿ ಕಾರ್ಮಿಕನಾಗಿದ್ದು, ದಂಪತಿಗೆ ಈಗಾಗಲೇ ಒಂದು ವರ್ಷದ ಮಗುವಿದೆ. ಎರಡನೇ ಪ್ರಸವದ ವೇಳೆಯಲ್ಲಿ ಅಥಿರಾ ಜಾಯ್ ಆಕೆಯ ಫೋಟೋ ಶೂಟ್ ಮಾಡಲು ಹೋಗಿದ್ದಾರೆ. ಈ ವೇಳೆ ಆಕೆಯಲ್ಲಿ ನಿನಗೇನು ಬೇಕು ಎಂದು ಕೇಳಿದಾಗ ಶರಣ್ಯ ಅನ್ನ ತಿನ್ನಬೇಕು, ಚಿಕನ್ ಸಾಂಬಾರ್ ಜೊತೆಗೆ ಚಿಕನ್ ಇರಬೇಕು ಎಂದು ಕೇಳಿದ್ದಾಳೆ. ಶ್ರೀಮಂತರ ಮನೆಯ ಮಕ್ಕಳು ಫಾಸ್ಟ್ ಫುಡ್, ಕೆಎಫ್ಸಿ ಹಾಗೂ ಪೌಷ್ಠಿಕ ಆಹಾರ ಬೇಕು ಅನ್ನುವಾಗ ಶರಣ್ಯ ಹಸಿವು ನೀಗಿಸಲು ಅನ್ನ ಬೇಕು ಅಂದಿರುವುದು ಕಣ್ಣೀರು ತರಿಸಿದೆ ಎಂದು ಹೇಳಿದ್ದಾರೆ.
ತಾನು ಮಾಡಿರುವ ಫೋಟೋ ಶೂಟ್ ಶರಣ್ಯ ಬದುಕಿನ ಅತೀ ಸುಂದರ ಕ್ಷಣವಾಗಿದ್ದು, ಅದನ್ನು ನನ್ನ ಕ್ಯಾಮೆರಾಗಳು ಸೆರೆ ಹಿಡಿದಿದೆ. ಈ ಫೋಟೋ ಶೂಟ್ಗಾಗಿ ಸಂಬಂಧಪಟ್ಟ ಅಧಿಕಾರಿಗಳ ಒಪ್ಪಿಗೆಯನ್ನು ಪಡೆದು ಸುಂದರ ಕ್ಷಣವನ್ನು ಸೆರೆ ಹಿಡಿಯಲಾಗಿದೆ ಎಂದು ಅಥಿರಾ ಜಾನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಸಾಕಷ್ಟು ವೈರಲ್ ಆಗಿದ್ದು, ಅಥಿರಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
DAKSHINA KANNADA
ಶಬರಿಮಲೆ ಯಾತ್ರಾರ್ಥಿ ಹೃದಯಾಘಾ*ತದಿಂದ ಸಾ*ವು
ಸುರತ್ಕಲ್: ಕಾಣಿಪಳ್ಳ ಗಣೇಶಪುರ ಬಳಿಯ ನಿವಾಸಿ ಸಂದೀಪ್ ಕಾಟಿಪಳ್ಳ(35) ಶಬರಿಮಲೆ ಯಾತ್ರೆ ಕೈಗೊಂಡಿದ್ದ ಸಂದರ್ಭ ಕೇರಳದಲ್ಲಿ ಹೃದಯಾಘಾತದಿಂದ ಮೃ*ತಪಟ್ಟಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರನ್ನು ಅ*ಗಲಿದ್ದಾರೆ. ಶಬರಿಮಲೆಗೆ ಮಗನ ಹೆಸರಿನಲ್ಲಿ ಹೇಳಿಕೊಂಡಿದ್ದ ಹರಕೆ ಒಪ್ಪಿಸಲು ಶುಕ್ರವಾರ ತೆರಳಿದ್ದರು. ಶನಿವಾರ ಅಯ್ಯಪ್ಪ ಸನ್ನಿಧಿಯಲ್ಲಿ ಹದಿನೆಂಟು ಮೆಟ್ಟಿಲು ಹತ್ತುವ ಹೊತ್ತಿನಲ್ಲಿ ಹೃದಯಾಘಾತಕ್ಕೆ ಒಳಗಾದರು.
ಸಂದೀಪ್ ಅವರು ನಿತ್ಯಾನಂದ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಸೇವಾ ಟ್ರಸ್ಟ್, ಕೇಸರಿ ಫ್ರೆಂಡ್ಸ್ ಸಹಿತ ಸಾಮಾಜಿಕ ಜಾಲತಾಣದಲ್ಲಿ ಕ್ರೀಯಾಶೀಲರಾಗಿದ್ದರು. ಎಂಆರ್ಪಿಎಲ್ ನಲ್ಲಿ ಗುತ್ತಿಗೆ ಸೇವೆಯಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು.
- DAKSHINA KANNADA6 days ago
ಮುಲ್ಕಿ: ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಕಣ್ಮರೆಯಾದ ಯುವಕ.! ಪತ್ತೆಗೆ ಶೋಧ
- FILM5 days ago
ರಾಷ್ಟ್ರಪ್ರಶಸ್ತಿ ವಿಜೇತ, ಖ್ಯಾತ ಸಂಗೀತ ನಿರ್ದೇಶಕನ ದಾಂಪತ್ಯ ಜೀವನದಲ್ಲಿ ಬಿರುಕು!
- FILM6 days ago
ಬಿಗ್ಬಾಸ್ ಸಂಗೀತಾ ಶೃಂಗೇರಿಗೆ ಬಿಗ್ ಸರ್ಪ್ರೈಸ್ ಕೊಟ್ಟ ಕುಟುಂಬಸ್ಥರು; ಫೋಟೋ ವೈರಲ್!
- LATEST NEWS6 days ago
ಈ ನಾಲ್ಕು ತಿಂಗಳ ಮಗುವಿನ ಸಾಧನೆ ಕೇಳಿದ್ರೆ ಶಾಕ್ ಆಗ್ತೀರಾ..!