Connect with us

    SERIAL

    ಶೂಟಿಂಗ್ ಗೆ ಚಕ್ಕರ್ ಹಾಕಿ ಎಲ್ಲಿಗೆ ಹೋಗಿದ್ದಾರೆ ಗೊತ್ತಾ ‘ಪುಟ್ಟಕ್ಕನ ಮಗಳು’ ಸ್ನೇಹಾ!?

    Published

    on

    ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಸಂಜನಾ ಬುರ್ಲಿ ಯಾರಿಗೆ ತಾನೆ ಗೊತ್ತಿಲ್ಲ. ಅವರು ‘ಸ್ನೇಹಾ’ ಹೆಸರಿಂದಲೇ ಖ್ಯಾತಿ ಗಳಿಸಿದ್ದಾರೆ. ಈ ಧಾರಾವಾಹಿಯಲ್ಲಿ ಗಟ್ಟಿಗಿತ್ತಿ ಹೆಣ್ಣುಮಗಳಾಗಿ ಅವರು ಹೆಣ್ಮಕ್ಕಳ ಮನಸ್ಸು ಗೆದ್ದಿದ್ದರೆ, ತನ್ನ ಸಹಜ ಸೌಂದರ್ಯದಿಂದ ಪಡ್ಡೆಗಳ ಮನ ಗೆದ್ದಿದ್ದರು.


    ಪುಟ್ಟಕ್ಕನ ಮಕ್ಕಳು ಮೂಲಕ ನಟಿ ಸಂಜನಾ ಬುರ್ಲಿ ಎಲ್ಲರಿಗೂ ಪರಿಚಯ ಆದವರು. ಸೋಷಿಯಲ್ ಮೀಡಿಯಾದಲ್ಲಿ ಕೂಡ ಅವರು ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ‘ಪುಟ್ಟಕ್ಕನ ಮಗಳು’ ಧಾರಾವಾಹಿಯ ಮೂಲಕ ಮನೆಮಗಳಂತಾಗಿರುವ ಅವರು ಅವರ ಪಾತ್ರದಿಂದ, ನಟನೆಯಿಂದ ವೀಕ್ಷಕರ ಮನಸ್ಸನ್ನು ಈಗಾಗಲೇ ಗೆದ್ದು ಬಿಟ್ಟಿದ್ದಾರೆ.

    ಸ್ನೇಹಾಳ, ಗಟ್ಟಿತನ, ದಿಟ್ಟತನ ಮಾತ್ರವಲ್ಲದೇ ಟ್ರೆಡಿಷನಲ್ ಲುಕ್ ಕೂಡಾ ವೀಕ್ಷರಿಗೆ ಇಷ್ಟ. ಅಭಿಮಾನಿಗಳ ಮನ ಗೆದ್ದಿರುವ ಸಂಜನಾ ಬುರ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಸ್ನೇಹಾ ಪಾತ್ರದಿಂದಾಗಿ ಸಂಜನಾ ಅವರ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿದೆ.

    ಇನ್ನು ಸಫಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇರೋ ಸಂಜನಾ ಬುರ್ಲಿ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅವರು ಹಾಕುವ ಒಂದೊಂದು ಫೋಟೋಗೂ ಸಿಕ್ಕಾಪಟ್ಟೆ ಲೈಕ್ಸ್ , ಕಮೆಂಟ್‌ಗಳು ಹರಿದು ಬರುತ್ತಿರುತ್ತವೆ. ಸಂಜನಾಗೆ 314 ಸಾವಿರ ಫಾಲೋವರ್ಸ್ ಇದ್ದಾರೆ. ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಧಾರಾವಾಹಿಯಲ್ಲಿ ಬ್ರೇಕ್ ಸಿಗುವುದೇ ಹೆಚ್ಚು. ಬ್ರೇಕ್ ಸಿಕ್ಕಿದರು ಫ್ಯಾಮಿಲಿ, ಫ್ರೆಂಡ್ಸ್ ಅಂತ ಕಳೆದೇ ಹೋಗುತ್ತೆ. ಆದರೆ, ಸಂಜನಾ ಬುರ್ಲಿ ಶೂಟಿಂಗ್‌ನಲ್ಲಿ ಗ್ಯಾಪ್ ಸಿಕ್ಕಿದ್ದೆ ತಡ ಟ್ರಿಪ್ ಹೊರಟು ಬಿಟ್ಟಿದ್ದಾರೆ. ಸಂಜನಾ ಅವರು ಹಲವು ಕಡೆಗಳಲ್ಲಿ ಟ್ರಿಪ್ ಹೋಗಿದ್ದಾರೆ.

    ಕೂರ್ಗ್, ರಾಜಸ್ಥಾನ, ಜಮ್ಮು-ಕಾಶ್ಮೀರ ಹೀಗೆ ಅಲ್ಲಲ್ಲಿ ಟ್ರಿಪ್ ಹೋಗುತ್ತಿರುತ್ತಾರೆ. ಇನ್ನು ಸಂಜನಾಗೆ ಟ್ರಕ್ಕಿಂಗ್ ಮಾಡುವುದು ಎಂದರೆ ಬಹಳ ಇಷ್ಟ.
    ‘ಪುಟ್ಟಕ್ಕನ ಮಕ್ಕಳು’ ಸೆಟ್‌ನಲ್ಲಿ ನಡೆಯುವ ವಿಚಾರ, ತಮ್ಮ ಪರ್ಸನಲ್ ಫೋಟೋಶೂಟ್ ಸೇರಿದಂತೆ ಹಲವು ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅಲ್ಲದೇ, ಕಂಠಿ ಹಾಗೂ ಸ್ನೇಹಾ ಫ್ಯಾನ್ಸ್ ಪೇಜ್ ಕೂಡ ಹುಟ್ಟಿಕೊಂಡಿವೆ. ಸಂಜನಾ ಬುರ್ಲಿ ಅವರು ತಮ್ಮ ಅಭಿಮಾನಿಗಳ ಕೆಲ ಕಮೆಂಟ್‌ಗಳಿಗೆ ಪ್ರತಿಕ್ರಿಯೆ ಕೂಡ ನೀಡುತ್ತಾರೆ. ಇದೀಗ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ಆಗಿ ಅಭಿನಯ ಮಾಡುತ್ತಿರುವ ಸಂಜನಾ ಬುರ್ಲಿ ಜಾಲಿ ಮೂಡ್‌ನಲ್ಲಿ ಇದ್ದಾರೆ.

    ಬಾಬಾ ಬುಡನ್‌ಗಿರಿಯಲ್ಲಿ ಸಂಜನಾ ತುಂಬಾ ಕಡೆಗಳಿಗೆ ಟ್ರೆಕ್ಕಿಂಗ್ ಹೋಗಿದ್ದಾರೆ ಸಂಜನಾ. ಬಾಬಾ ಬುಡನ್‌ಗಿರಿಗೆ ಹೋಗಿರುವ ಸಂಜನಾ ವೀಡಿಯೋ ಶೇರ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    FILM

    ಟಿಆರ್ ಪಿನಲ್ಲಿ ಟಾಪ್ 10 ರೊಳಗಿನ ಸ್ಥಾನ ಗಿಟ್ಟಿಸಿಕೊಂಡ ಹೊಸ ಧಾರಾವಾಹಿ; ನಂಬರ್ 1 ಸ್ಥಾನ ಯಾವುದಕ್ಕೆ?

    Published

    on

    ಮಂಗಳೂರು : ಧಾರಾವಾಹಿಗಳನ್ನು ಇಷ್ಟ ಪಡುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಧಾರಾವಾಹಿ ಪ್ರಿಯವಾದುದು. ನಿತ್ಯ ನೂರಾರು ಧಾರಾವಾಹಿಗಳು ಪ್ರಸಾರವಾಗುತ್ತವೆ. ಈ ಬಾರಿ ಟಿ ಆರ್ ಪಿ ಯಲ್ಲಿ ‘ಪುಟ್ಟಕ್ಕನ ಮಕ್ಕಳು’ ನಂಬರ್ 1 ಸ್ಥಾನದಲ್ಲಿದೆ. ಉಮಾಶ್ರೀ ಮುಖ್ಯಭೂಮಿಕೆಯಲ್ಲಿರುವ ಪುಟ್ಟಕ್ಕನ ಮಕ್ಕಳು ನಿತ್ಯ ಹೊಸ ಹೊಸ ತಿರುವಿನೊಂದಿಗೆ ಗಮನ ಸೆಳೆಯುತ್ತಿರುತ್ತದೆ.


    ಇನ್ನು ಎರಡನೇ ಸ್ಥಾನದಲ್ಲಿ, ‘ಲಕ್ಷ್ಮೀ ನಿವಾಸ’ ಇದೆ. ತುಂಬು ಸಂಸಾರದ ಕಥೆ ಹೊಂದಿರುವ ಲಕ್ಷ್ಮೀ ನಿವಾಸವನ್ನು ಆರಂಭದಿಂದಲೇ ಜನ ಮೆಚ್ಚಿಕೊಂಡಿದ್ದಾರೆ.


    ಮೂರನೇ ಸ್ಥಾನದಲ್ಲಿ ಹೊಸ ಧಾರಾವಾಹಿ ‘ಶ್ರಾವಣಿ ಸುಬ್ರಮಣ್ಯ’ವಿದೆ. ಇದು ಈ ಧಾರಾವಾಹಿಗೆ ಭರ್ಜರಿ ಟಿಆಆರ್​ಪಿ ಸಿಕ್ಕಿದೆ.

    ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ.


    ಇನ್ನು ಐದನೇ ಸ್ಥಾನದಲ್ಲಿ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಇದೆ. ಆರನೇ ಸ್ಥಾನದಲ್ಲಿ ‘ಅಮೃತಧಾರೆ ಧಾರಾವಾಹಿ’ ಇದೆ.

    Continue Reading

    FILM

    ಸರಳವಾಗಿ ಮದುವೆಯಾದ ನಟಿ, ‘ಬಿಗ್ ಬಾಸ್ ಕನ್ನಡ 10’ ಸ್ಪರ್ಧಿ ಸಿರಿ

    Published

    on

    ಬೆಂಗಳೂರು/ ಮಂಗಳೂರು : ಖ್ಯಾತ ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ಸಿರಿ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಜೂನ್ 13 ರಂದು ಉದ್ಯಮಿ ಮತ್ತು ನಟ ಪ್ರಭಾಕರ್ ಬೋರೇಗೌಡ ಜೊತೆಗೆ ಸರಳವಾಗಿ ವಿವಾಹವಾಗಿದ್ದಾರೆ.
    ಸಿರಿ ಪತಿ ಪ್ರಭಾಕರ್ ಮಂಡ್ಯ ಮೂಲದವರಾಗಿದ್ದು, ಬೆಂಗಳೂರಿನಲ್ಲಿದ್ದಾರೆ. ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಮದುವೆ ನಡೆದಿದೆ. ಆಪ್ತರು ಮತ್ತು ಗುರುಹಿರಿಯರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನಡೆದಿದೆ.


    ಫೋಟೋ, ವೀಡಿಯೋ ವೈರಲ್ :

    ಎರಡು ದಿನಗಳ ಹಿಂದೆ ಸಿರಿ ಅವರ ಅರಿಶಿಣ ಶಾಸ್ತ್ರದ ವಿಡಿಯೋಗಳು ವೈರಲ್ ಆಗಿದ್ದವು. ಅದು ಸೀರಿಯಲ್ ಅಥವಾ ಸಿನಿಮಾಗಾಗಿ ಇರಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಇದು ನಿಜವಾದ ಮದುವೆಯಾಗಿದ್ದು, ಮದುವೆಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.


    ಸಿರಿ ಹಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ಸೌಂದರ್ಯ, ಸಹಜ ನಟನೆಯಿಂದ ಗಮನ ಸೆಳೆದಿದ್ದಾರೆ. ಬಿಗ್ ಬಾಸ್ ಸೀಸನ್ 10 ನಲ್ಲೂ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ಅವರಿಗೆ ಮದುವೆಯ ಬಗ್ಗೆ ಯಾವಗಲೂ ಪ್ರಶ್ನಿಸಲಾಗುತ್ತಿತ್ತು. ”ಇಷ್ಟುದಿನಗಳ ಕಾಲ ಯೋಗ್ಯ ಹುಡುಗ ಸಿಕ್ಕಿಲ್ಲ, ಮದುವೆ ಅವಶ್ಯಕತೆ ಇದೆಯಾ ಎಂಬ ಪ್ರಶ್ನೆ ಎದುರಾಗಿತ್ತು. ಹೀಗಾಗಿ ಮದುವೆ ಆಗಿಲ್ಲ” ಎಂದೇ ಅವರು ಹೇಳುತ್ತಿದ್ದರು.

    ಇದನ್ನೂ ಓದಿ : ತಂದೆಯ ಬಂಧನದ ಬಗ್ಗೆ ವಿನೀಶ್ ಭಾವುಕ ಪೋಸ್ಟ್; ನಿಂದಿಸಿದವರಿಗೆ ಧನ್ಯವಾದ ಎಂದ ದರ್ಶನ್ ಪುತ್ರ

    ಅಭಿಮಾನಿಗಳಿಂದ ಶುಭಾಶಯ

    ಸಿರಿ ದೇವಸ್ಥಾನದಲ್ಲಿ ಸರಳವಾಗಿ ಮದುವೆ ಮಾಡಿಕೊಂಡು ಶಾಕ್ ಕೊಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಿಡಿಯೋ ವೈರಲ್ ಆಗ್ತಿದೆ. ಜೊತೆಗೆ ಸಿರಿ ಅವರ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

    Continue Reading

    FILM

    ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಿಂದ ಹೊರನಡೆದ ನಟಿ ನೇತ್ರಾ ಜಾಧವ್; ತೆಲಂಗಾಣದಲ್ಲಿ ಯಕ್ಷಗಾನ ಮೂಲಕ ಗಮನ ಸೆಳೆದ ನಟಿ!

    Published

    on

    ಬೆಂಗಳೂರು : ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಶ್ರೀರಸ್ತು ಶುಭಮಸ್ತು’ ಆರಂಭದಿಂದಲೂ ಜನಪ್ರಿಯವಾಗಿದೆ. ಹಿರಿಯ ನಟಿ ಸುಧಾರಾಣಿ ಈ ಧಾರಾವಾಹಿಯ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಜಿತ್ ಹಂದೆ, ಚಂದನ ರಾಘವೇಂದ್ರ, ಲಾವಣ್ಯ ಮೊದಲಾದವರು ಧಾರಾವಾಹಿಯಲ್ಲಿ ಪಾತ್ರವಾಗಿದ್ದಾರೆ. ಧಾರಾವಾಹಿ ಅಂದ್ಮೇಲೆ ವಿಲನ್ ಇರಲೇಬೇಕಲಾ…ನಾಯಕಿ ಹೇಗೆ ಧಾರಾವಾಹಿಗಳಲ್ಲಿ ಮಿಂಚುತ್ತಾರೋ ಖಳನಾಯಕಿಯೂ ಅಷ್ಟೇ ಖ್ಯಾತರಾಗುತ್ತಾರೆ. ಹಾಗೆಯೇ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ‘ಶಾರ್ವರಿ’ ಪಾತ್ರ ಮಿಂಚುತ್ತಿದೆ.


    ‘ಶಾರ್ವರಿ’ ಪಾತ್ರದಲ್ಲಿ ನಟಿಸಿದ್ದ ನೇತ್ರಾ ಜಾಧವ್ ಗಮನ ಸೆಳೆದಿದ್ದರು. ಆದರೆ, ಅವರು ಧಾರಾವಾಹಿಯಿಂದ ಹೊರಬಂದಿದ್ದಾರೆ. ಇದರಿಂದ ಅವರ ಅಭಿಮಾನಿಗಳಿಗೆ ಬೇಸರವಾಗಿದೆ. ತನ್ನ ಅಭಿನಯದಿಂದ ಗಮನ ಸೆಳೆಯುತ್ತಿದ್ದ ಸಹಜ ಸುಂದರಿ ನೇತ್ರಾ ಧಾರಾವಾಹಿಯಿಂದ ಹೊರನಡೆದಿದ್ದು, ಆ ಜಾಗಕ್ಕೆ ಸಪ್ನ ದೀಕ್ಷಿತ್ ಆಗಮಿಸಿದ್ದಾರೆ.

    ಗಮನ ಸೆಳೆದ ಯಕ್ಷಗಾನ ನೃತ್ಯ:


    ಶ್ರೀರಸ್ತು ಶುಭಮಸ್ತು ಧಾರಾವಾಹಿಯಿಂದ ಹೊರಬಂದ ನೇತ್ರಾ ತೆಲಂಗಾಣದ ಶೋವೊಂದರಲ್ಲಿ ಮಿಂಚಿದ್ದಾರೆ. ಅವರು ಯಕ್ಷಗಾನ ನೃತ್ಯ ಮಾಡಿ ಹುಬ್ಬೇರಿಸುವಂತೆ ಮಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ನೃತ್ಯದ ವೀಡಿಯೋ ಹಂಚಿಕೊಂಡಿದ್ದಾರೆ. ತೆಲಂಗಾಣದಲ್ಲಿ ಕರ್ನಾಟಕದ ನೃತ್ಯ ಶೈಲಿಯನ್ನು ಪ್ರದರ್ಶನ ಮಾಡಲು ಬಹಳ ಸಂತೋಷವಾಯಿತು ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ : ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ಕೊಟ್ಟ ರಾಧಿಕಾ ಪಂಡಿತ್

    ಕನ್ನಡ ಮಾತ್ರವಲ್ಲದೇ, ತೆಲುಗು ಧಾರಾವಾಹಿಗಳಲ್ಲೂ ನೇತ್ರಾ ನಟಿಸಿದ್ದಾರೆ. ತೆಲುಗು ಧಾರಾವಾಹಿ ‘ರಾವೋಯಿ ಚಂದಮಾಮ’ದಲ್ಲಿ ಇಂದ್ರಸೇನಾ ಪಾತ್ರದಲ್ಲಿ ನೇತ್ರಾ ಗಮನ ಸೆಳೆದಿದ್ದಾರೆ.

    ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಮೊದಲು ನೇತ್ರಾ ‘ರಥಸಪ್ತಮಿ’ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಸುಧಾರಾಣಿಯವರ ತಂಗಿಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ನಂತರ ಜೀ ಕನ್ನಡದ ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿಯಲ್ಲಿ ಸುಧಾರಾಣಿ ವಿರುದ್ಧ ಖಳನಾಯಕಿ ಪಾತ್ರದಲ್ಲಿ ಅವರು ಜನಮನ ಗೆದ್ದಿದ್ದರು.

    ಇದೀಗ ಧಾರಾವಾಹಿ ತೊರೆದಿದ್ದು, ಅವರು ಮುಂದೆ ಧಾರಾವಾಹಿಯಲ್ಲಿ ನಟಿಸುತ್ತಾರಾ? ಅವರ ಮುಂದಿನ ಯೋಜನೆ ಏನು? ಅನ್ನೋದನ್ನು ಕಾದು ನೋಡಬೇಕಿದೆ.

    Continue Reading

    LATEST NEWS

    Trending