Connect with us

    FILM

    ಸಾವಿರಾರು ಕೋಟಿ ಸಂಭಾವನೆ ಮಾಡಿದ ಸಿನಿಮಾ ನಿರ್ದೇಶಕನ ಕಾರಿದು ! ಯಾರು ಗೊತ್ತಾ ??

    Published

    on

    ಮಂಗಳೂರು: ಯಾವುದಾದರು ಸಿನಿಮಾ ಯಶಸ್ಸು ಕಂಡಿದ್ದಲ್ಲಿ, ನಿರ್ದೇಶಕರ ಲೆವೆಲ್ ಬೇರೆಯೇ ಆಗಿರುತ್ತಿತ್ತು. ಸಿನಿಮಾ ಗೆದ್ದ ಬಳಿಕ ಮನೆಗೊಂದು ಐಷಾರಾಮಿ ಕಾರು ಬಂದರೂ ಅಚ್ಚರಿ ಏನಿಲ್ಲ. ಆದರೆ, ಇಲ್ಲೊಬ್ಬ ನಿರ್ದೇಶಕರು, ಸಿನಿಮಾ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದರೂ ಅವರು ಮಾತ್ರ ಸಿಂಪಲ್ ಆಗಿದ್ದಾರೆ. ಹಾಗಾದರೆ ಯಾರು ಅವರು ಗೊತ್ತಾ ??


    ‘ಕಲ್ಕಿ 2898 ಎಡಿ’ ಅಂತಹ ಹಿಟ್ ಸಿನಿಮಾ ನೀಡಿದ ನಾಗ್ ಅಶ್ವಿನ್ ಆ ಮಹಾನುಭಾವ. ಸಾವಿರ ಕೋಟಿ ರೂಪಾಯಿ ಸಂಭಾವನೆ ಮಾಡಿದರೂ ಯಶಸ್ಸು ಅವರ ತೆಲೆಗೆ ಏರಿಲಿಲ್ಲ. ಅವರು ಸಣ್ಣ ಕಾರಿನಲ್ಲಿಯೇ ಓಡಾಡುತ್ತಿದ್ದಾರೆ.

    ನಾಗ್ ಅಶ್ವಿನ್ ಅವರು ಮಹಿಂದ್ರಾ ಎಲೆಕ್ಟ್ರಿಕ್ ಕಾರು e2oplus ಕಾರ್​ನ ಚಲಾಯಿಸಿಕೊಂಡು ಹೋಗಿದ್ದಾರೆ. ಅವರದ್ದೇ ಮನೆಯ ಸೋಲಾರ್ ಪ್ಯಾನಲ್ ಮೂಲಕ ಉತ್ಪಾದನೆಯಾದ ವಿದ್ಯುತ್​ನಿಂದ ಕಾರನ್ನು ಚಾರ್ಜ್ ಮಾಡಲಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ಅವರನ್ನು ನೋಡಿ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.


    ‘ಕಲ್ಕಿ 2898 ಎಡಿ’ ಬಳಿಕ ‘ಸೀಕ್ವೆಲ್’ ​ಗೆ ನಾಗ್ ಅಶ್ವಿನ್ ಸಿದ್ಧರಾಗುತ್ತಿದೆ. ಈ ಚಿತ್ರದಲ್ಲಿ ಪ್ರಮುಖ ಕಲಾವಿದರು ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ನಟಿಸಿದ್ದರು. ಕಮಲ್ ಹಾಸನ್ ಈ ಚಿತ್ರದ ವಿಲನ್ ಆಗಲಿದ್ದಾರೆ. ಈ ವರ್ಷದ ಕೊನೆಯಲ್ಲಿ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ದೀಪಿಕಾಗೆ ಮಗು ಜನಿಸಿರುವುದರಿಂದ ಮುಂದಿನ ವರ್ಷ ಅವರು ಸೆಟ್ ಸೇರಲಿದ್ದಾರೆ

    Click to comment

    Leave a Reply

    Your email address will not be published. Required fields are marked *

    BIG BOSS

    ‘ಮೆಟ್ಟು ತಗೊಂಡು ಹೊಡಿತೀನಿ’: ಮತ್ತೆ ನಾಲಿಗೆ ಹರಿಬಿಟ್ಟ ಚೈತ್ರಾ ಕುಂದಾಪುರ

    Published

    on

    ಜಾಸ್ತಿ ಮಾತನಾಡುತ್ತಾರೆ ಎಂಬ ಕಾರಣದಿಂದಲೇ ಚೈತ್ರಾ ಕುಂದಾಪುರ ಅವರು ಹೈಲೈಟ್ ಆಗುತ್ತಾರೆ. ಆದರೆ ಆ ಮಾತೇ ಅವರಿಗೆ ಮುಳುವಾಗುತ್ತಿದೆ. ಕಳೆದ ವಾರ ಅವರು ‘ಒಬ್ಬ ಅಪ್ಪನಿಗೆ ಹುಟ್ಟಿದ್ದರೆ..’ ಎಂದು ಜಗದೀಶ್​ಗೆ ಹೇಳಿದ್ದರು. ಆ ಮಾತನ್ನು ಕಿಚ್ಚ ಸುದೀಪ್ ಅವರು ಕಟುವಾಗಿ ಖಂಡಿಸಿದ್ದರು. ಹಾಗಂತ ಚೈತ್ರಾ ಅವರು ತಮ್ಮ ಮಾತಿನ ವರಸೆಯನ್ನು ಬದಲಿಸಿಕೊಂಡಿದ್ದಾರಾ? ಖಂಡಿತಾ ಇಲ್ಲ. ಸೋಮವಾರದ (ಅಕ್ಟೋಬರ್​ 21) ಸಂಚಿಕೆಯಲ್ಲಿ ಅವರು ಮತ್ತೆ ನಾಲಿಗೆ ಹರಿಬಿಟ್ಟಿದ್ದಾರೆ. ಚಪ್ಪಲಿಯಲ್ಲಿ ಹೊಡೆಯುವ ಬಗ್ಗೆ ಅವರು ಮಾತನಾಡಿದ್ದಾರೆ.

    ಕಳೆದ ವಾರ ಜಗದೀಶ್ ಅವರಿಗೆ ಉಗ್ರಂ ಮಂಜು ಅವರು ಚಪ್ಪಲಿ ತೋರಿಸಿದ್ದರು. ಅದು ಸರಿಯಲ್ಲ ಎಂದು ಸುದೀಪ್ ಅವರು ಹೇಳಿದ್ದರು. ಇಂಥ ಹಲವು ಕಾರಣಗಳಿಂದಾಗಿ ಮನೆಯ ಸದಸ್ಯರಿಗೆ ಕಿಚ್ಚ ಕ್ಲಾಸ್ ತೆಗೆದುಕೊಂಡಿದ್ದರು. ಅಷ್ಟಾದರೂ ಕೂಡ ಚೈತ್ರಾ ಅವರು ಮಾತಿನ ವರಸೆ ಬದಲಾಯಿಸಿಕೊಂಡಿಲ್ಲ. ಸಂದರ್ಭ ಬಂದರೆ ತಾವು ಮೆಟ್ಟಿನಲ್ಲಿ ಹೊಡೆಯುವುದಾಗಿ ಚೈತ್ರಾ ಹೇಳಿದ್ದಾರೆ.

    ಈ ಮೊದಲು ಹಂಸಾ ಅವರ ಬಗ್ಗೆ ಗೋಲ್ಡ್ ಸುರೇಶ್ ಏನೇನೋ ಕಮೆಂಟ್ ಮಾಡಿದ್ದರು. ಹಂಸಾ ಅವರದ್ದು ಲವ್​ ಸ್ಟೋರಿ ನಡೆಯುತ್ತಿತ್ತು ಎಂದು ಅವರು ಹೇಳಿದ್ದರು. ಅದರಿಂದ ಹಂಸಾಗೆ ಬೇಸರ ಆಯಿತು. ಹಾಗಾಗಿ ಅವರು ಈ ವಿಚಾರವನ್ನು ಚೈತ್ರಾ ಕುಂದಾಪುರ ಜೊತೆ ಚರ್ಚೆ ಮಾಡುತ್ತಿದ್ದರು. ಆಗ ಚೈತ್ರಾ ಅವರ ಮಾತುಗಳು ಮೆಟ್ಟಿನ ತನಕ ಹೋಯಿತು.

    ‘ನನ್ನ ಕ್ಯಾರೆಕ್ಟರ್ ಬಗ್ಗೆ ಯಾರಾದರೂ ಮಾತಾಡಿದರೆ ಮೆಟ್ಟು ತಗೊಂಡು ಹೊಡಿತೀನಿ. ಅದರಿಂದ ನಾನು ಹೊರಗೆ ಹೋದ್ರೂ ಚಿಂತೆ ಇಲ್ಲ. ನಾನು ಮದುವೆ ಫಿಕ್ಸ್ ಮಾಡಿಕೊಂಡು ಬಂದಿದ್ದೇನೆ. ನನಗೆ ಯಾರ ಹತ್ತಿರವೂ ಸಂಬಂಧ ಕಟ್ಟಬೇಡಿ’ ಎಂದು ಚೈತ್ರಾ ಕುಂದಾಪುರ ಅವರ ಹೇಳಿದ್ದಾರೆ. ಇಂಥ ಮಾತುಗಳನ್ನು ಆಡಿದ್ದಕ್ಕೆ ಸುದೀಪ್ ಅವರು ವೀಕೆಂಡ್ ಸಂಚಿಕೆಯಲ್ಲಿ ಯಾವ ರೀತಿ ಪಂಚಾಯ್ತಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕು.

    Continue Reading

    FILM

    ‘ಮನಸಾರೆ ನಿನ್ನ’ ಎನ್ನುತ್ತಾ ರೊಮ್ಯಾಂಟಿಕ್ ಮೂಡ್‌ಗೆ ಜಾರಿದ ನಿವೇದಿತಾ ಗೌಡ

    Published

    on

    ‘ಬಿಗ್ ಬಾಸ್’ ಖ್ಯಾತಿಯ ನಿವೇದಿತಾ ಗೌಡ ಅವರು ಚಂದನ್ ಶೆಟ್ಟಿ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತೆಲುಗಿನತ್ತ ಮುಖ ಮಾಡಿರುವ ನಿವೇದಿತಾ ಸಿನಿಮಾ ಬದಲು ಆಲ್ಬಂ ಸಾಂಗ್ ಮೂಲಕ ಸದ್ದು ಮಾಡುತ್ತಿದ್ದಾರೆ.

    ತೆಲುಗಿನ ‘ವಾಲು ಕಳ್ಳತಾ’ ಎಂಬ ಆಲ್ಬಂ ಸಾಂಗ್‌ನಲ್ಲಿ ಗೌರಿ ನಾಯ್ಡು ಜೊತೆ ನಿವೇದಿತಾ ನಟಿಸಿದ್ದು, ಇದು ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ‘ಮನಸಾರೆ ನಿನ್ನ’ ಎಂದು ಕನ್ನಡದಲ್ಲೂ ಸಾಂಗ್ ಮಾಡಲಾಗಿದೆ. ಆದರೆ ಸಾಂಗ್ ರಿಲೀಸ್ ಆಗೋದು ಯಾವಾಗ? ಎಂದು ಕಾದುನೋಡಬೇಕಿದೆ.

    ತೆಲುಗಿನಲ್ಲಿ ನಟ, ಬರಹಗಾರ, ಸಂಕಲನಕಾರ, ಛಾಯಾಗ್ರಾಹಕನಾಗಿ ಗುರುತಿಸಿಕೊಂಡಿರುವ ಗೌರಿ ನಾಯ್ಡು ಜೊತೆ ಹಾಡಿನಲ್ಲಿ ನಿವೇದಿತಾ ರೊಮ್ಯಾನ್ಸ್ ಮಾಡಿದ್ದಾರೆ. ಸದ್ಯ ರಿಲೀಸ್ ಮಾಡಿರುವ ಪೋಸ್ಟರ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಬರುತ್ತಿವೆ.

    ಇನ್ನೂ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ‘ಮುದ್ದು ರಾಕ್ಷಸಿ’ (Muddu Rakshasi) ಸಿನಿಮಾದಲ್ಲಿ ನಿವೇದಿತಾ ನಾಯಕಿಯಾಗಿ ನಟಿಸಿದ್ದಾರೆ. ಸೃಜನ್ ಲೋಕೇಶ್ ನಟನೆಯ ‘ಜಿಎಸ್‌ಟಿ’ ಸಿನಿಮಾದಲ್ಲಿ ನಿವೇದಿತಾ ನಟಿಸಿದ್ದಾರೆ.

    Continue Reading

    FILM

    ‘ಪುಷ್ಪ-2’ ಐಟಂ ಸಾಂಗ್‌ನಲ್ಲಿ ಸೊಂಟ ಬಳುಕಿಸಲಿದ್ದಾರೆ ಬಾಲಿವುಡ್ ನಟಿ !! ಯಾರು ಗೊತ್ತಾ ?

    Published

    on

    ಮಂಗಳೂರು/ಹೈದರಾಬಾದ್:‌ ‘ಅನಿಮಲ್’ ನಟಿ ತೃಪ್ತಿ ದಿಮ್ರಿ ‘ಪುಷ್ಪ-2’ ನಲ್ಲಿ ಸ್ಪೆಷೆಲ್‌ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಮಾತು ಕೇಳಿ ಬರುತಿದ್ದು. ಇದೀಗ ಬಾಲಿವುಡ್‌ನ ಖ್ಯಾತ ನಟಿ ಶ್ರದ್ಧಾ ಕಪೂರ್‌ ‘ಪುಷ್ಪ-2’ ನಲ್ಲಿ ಸೊಂಟ ಬಳುಕಿಸಲಿದ್ದಾರೆ ಎಂದು ವರದಿಯಾಗಿದೆ.

     

     

    ಖ್ಯಾತ ನಟ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ʼಪುಷ್ಪ-2ʼರಿಲೀಸ್‌ಗೆ ದಿನಗಣನೆ ಪ್ರಾರಂಭವಾಗಿದೆ. ವರ್ಷದ ಕೊನೆಯಲ್ಲಿ ಸಿನಿಮಂದಿಗೆ ಭರ್ಜರಿ ಮನರಂಜನೆ ನೀಡುವ ನಿಟ್ಟಿನಲ್ಲಿ ‘ಪುಷ್ಪ-2’ ತೆರೆಕಾಣಲಿದೆ.

     

     

    2022ರಲ್ಲಿ ತೆರೆಕಂಡ ‘ಪುಷ್ಪ’ ಮೊದಲ ಭಾಗ ಪ್ಯಾನ್‌ ಇಂಡಿಯಾದಲ್ಲಿ ಮೋಡಿ ಮಾಡಿತ್ತು. ನಟನೆ, ಹಾಡು, ಡ್ಯಾನ್ಸ್‌, ಮಾಸ್ ಹೀಗೆ‌ ಎಲ್ಲ ವಿಭಾಗದಲ್ಲೂ ಸಿನಿಮಾ ಸಖತ್‌ ಸದ್ದು ಮಾಡಿ, ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿತ್ತು.

     

     

    ‘ಸ್ತ್ರೀ-2’ ಮೂಲಕ ತೆಲುಗು ಭಾಷಾ ವಲಯದಲ್ಲಿ ಮಿಂಚಿರುವ ಶ್ರದ್ಧಾ ಕಪೂರ್‌ ‘ಪುಷ್ಪ-2’ ಸಿಮಾದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಬೇಕಿದೆ. ಸುಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಜತೆ ರಶ್ಮಿಕಾ ಮಂದಣ್ಣ, ಫಾಹದ್‌ ಫಾಸಿಲ್‌, ಡಾಲಿ ಧನಂಜಯ್‌, ಜಗದೀಶ್‌ ಪ್ರತಾಪ್‌ ಭಂಡಾರಿ, ಸುನಿಲ್‌ ಮುಂತಾದವರು ನಟಿಸಿದ್ದಾರೆ. ಬರುವ ಡಿಸೆಂಬರ್‌ 6 ರಂದು ಸಿನಿಮಾ ಅದ್ಧೂರಿಯಾಗಿ ತೆರೆಗೆ ಬರಲಿದೆ.

    Continue Reading

    LATEST NEWS

    Trending