Connect with us

    FILM

    ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು; ಅಭಿಮಾನಿಗಳಲ್ಲಿ ಆತಂಕ

    Published

    on

    ಮಂಗಳೂರು/ಚೆನ್ನೈ : ತೀವ್ರ ಹೊಟ್ಟೆನೋವಿನಿಂದಾಗಿ ಸೂಪರ್ ಸ್ಟಾರ್‌ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಪ್ಟಂಬರ್ 30 ರ ಮಧ್ಯರಾತ್ರಿ ರಜನಿಕಾಂತ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ರಜನಿಕಾಂತ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ.ಸಾಯಿ ಸತೀಶ್, ರಜನಿಕಾಂತ್ ಅವರಿಗೆ ಕಾರ್ಡಿಯಾಕ್ ಕ್ಯಾಥ್ ಲ್ಯಾಬ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

    ಇದನ್ನೂ ಓದಿ : ಧನರಾಜ್ ಸಲಹೆಗೆ ಶಾಕ್ ಆದ ಬಿಗ್‌ಬಾಸ್

    ರಜನಿಕಾಂತ್ ಅಭಿನಯದ ವೆಟ್ಟೈಯನ್‌ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಅವರಿಗೆ ಅನಾರೋಗ್ಯ ಕಾಡಿದೆ. 73 ವರ್ಷ ವಯಸ್ಸಾಗಿರುವ ರಜನಿಕಾಂತ್ ಈಗಲೂ ಬಹು ಬೇಡಿಕೆಯ ನಟನಾಗಿದ್ದು,, ಕೊಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಆರೋಗ್ಯ ಸುಧಾರಿಸಿದ್ದು, ಮಂಗಳವಾರ ಸಂಜೆ ಅಥವಾ ಬುಧವಾರ ಮುಂಜಾನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.

    BIG BOSS

    ಸ್ವರ್ಗವಾಸಿಗಳಿಗೆ ನರಕ ತೋರಿಸಿ ಆರಂಭದಲ್ಲೇ ನಾಮಿನೇಟ್ ಆದ ಚೈತ್ರಾ

    Published

    on

    ಸ್ವರ್ಗ ಹಾಗೂ ನರಕ ಪರಿಕಲ್ಪನೆಯಲ್ಲಿ ಈ ಬಾರಿಯ ಬಿಗ್ ಬಾಸ್ ಮನೆ ಆರಂಭದಲ್ಲೇ ರಣಾಂಗಣವಾಗುತ್ತಿದೆ. ನರಕದಲ್ಲಿರುವ ಸ್ಪರ್ಧಿ ಚೈತ್ರಾ ಈಗಾಗಲೇ ಸ್ವರ್ಗವಾಸಿಗಳಿಗೆ ನರಕ ತೋರಿಸಿದ್ದಾರೆ.

    ಆರಂಭದಲ್ಲೇ ಬಿಗ್ ಬಾಸ್ ಮನೆಯ ಕಲರ್‌ಫುಲ್ ವಾತಾವರಣ ಬಿಸಿ ಏರಿಸಿದ ಚೈತ್ರಾ ಇದೀಗ ನಾಮಿನೇಟ್ ಆಗಿದ್ದಾರೆ. ಈ ಮೂಲಕ ಬಿಗ್ ಬಾಸ್ 11ರ ಮೊದಲ ವಾರದಲ್ಲಿ ನಾಮಿನೇಟ್ ಆದ ಮೊದಲ ಮತ್ತು ಏಕೈಕ ಸ್ಪರ್ಧಿಯಾಗಿದ್ದಾರೆ.

    ಚೈತ್ರಾ ಕುಂದಾಪುರ ಎಲಿಮಿನೇಶನ್‌ಗೆ ಸ್ವರ್ಗವಾಸಿಗಳು ಒಕ್ಕೊರಲಿನಿಂದ ಮತ ಹಾಕಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಇವರ ಆಟಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರ. ಪರ ವಿರೋಧಗಳಿದ್ದರೂ ಆಟದ ವಿಚಾರದಲ್ಲಿ ಚೈತ್ರಾ ಜನರಿಂದ ಹೆಚ್ಚಿನ ಮತ ಪಡೆಯುವ ಸಾಧ್ಯತೆಗಳಿವೆ.

    ಚೈತ್ರಾ ಗೂಗ್ಲಿಗೆ ಆರಾಮವಾಗಿದ್ದ ಸ್ವರ್ಗವಾಸಿಗಳು ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೈತ್ರಾ ಮಾತು, ಗೇಮ್ ಪ್ಲಾನ್‌ಗೆ ಸ್ವರ್ಗವಾಸಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಸ್ವರ್ಗವಾಸಿಗಳಿಗಿಂತ ನರಕವಾಸಿಗಳೇ ಹೆಚ್ಚಿನ ಖುಷಿ, ಸಂಭ್ರಮದಲ್ಲಿರುವಂತೆ ಕಂಡುಬಂತು.

    Continue Reading

    BIG BOSS

    ಧನರಾಜ್ ಸಲಹೆಗೆ ಶಾಕ್ ಆದ ಬಿಗ್‌ಬಾಸ್

    Published

    on

    ಬಿಗ್‌ಬಾಸ್‌ ಕನ್ನಡ ಸೀಸನ್ 11 ಅದ್ಧೂರಿಯಾಗಿ ಆರಂಭಗೊಂಡಿದೆ. ವಿವಿಧ ಸ್ಪರ್ಧಿಗಳಲ್ಲಿ ಕೆಲವರು ಸ್ವರ್ಗಲೋಕ ವಾಸಿಗಳಾದರೆ, ಉಳಿದವರು ನರಕದಲ್ಲಿ ಇದ್ದಾರೆ. ತಮ್ಮ ಕಾಮಿಡಿ ವಿಡಿಯೋಗಳಿಂದ ಕರ್ನಾಟಕದ ಮನೆ ಮಾತಾಗಿರುವ ಧನರಾಜ್ ಆಚಾರ್ ಮೂರನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇವರನ್ನು ಕೂಡ ಸ್ವರ್ಗಕ್ಕೆ ಕಳುಹಿಸಲಾಗಿದೆ. ಹೀಗೆ ಹಲವರು ಸ್ಪರ್ಧಿಗಳು ಸ್ವರ್ಗ ಮತ್ತು ನರಕಗಳಲ್ಲಿ ನೆಲೆ ಕಂಡುಕೊಂಡು ಆಟವನ್ನು ರಂಗೇರಿಸಿದ್ದಾರೆ.

    ಆದರೆ ಇಲ್ಲೊಬ್ಬ ಮಹಾನುಭಾವ ಬಿಗ್‌ಬಾಸ್‌ಗೆ ಮೈಕ್ ಸರಿ ಮಾಡ್ಕೊಳ್ಳಿ ಅನ್ನೋ ಸೂಚನೆ ನೀಡೋ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಆತ ಮತ್ಯಾರೂ ಅಲ್ಲ. ಧನರಾಜ್. ಈತನನ್ನು ಬಿಗ್‌ಬಾಸ್ ಸೀಕ್ರೆಟ್ ರೂಮ್‌ನೊಳಗೆ ಕರೆದು ಏನೋ ಸೂಚನೆ ಕೊಟ್ಟಿದ್ದಾರೆ. ಅದಕ್ಕೆ ಕೊಂಚ ಸಂಕೋಚದಿಂದಲೇ ಇವರು, ‘ನಂಗೆ ಸರಿಯಾಗಿ ಕೇಳಿಸ್ತಿಲ್ಲ ಬಿಗ್‌ಬಾಸ್’ ಅಂದುಬಿಟ್ಟಿದ್ದಾರೆ. ‘ಬಿಗ್‌ಬಾಸ್‌ಗೇ ಮೈಕ್ ಸರಿಯಾಗಿ ಹಾಕ್ಕೊಳ್ಳಿ ಅಂದ ಮೊದಲ ಕಂಟೆಸ್ಟೆಂಟ್ ನೀವು’ ಅನ್ನೋ ಮಾತನ್ನು ಬಿಗ್‌ಬಾಸ್ ಧನರಾಜ್‌ಗೆ ಹೇಳಿಬಿಟ್ಟಿದ್ದಾರೆ. ಇದು ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡಿದೆ.

    ಅಷ್ಟಕ್ಕೇ ಸುಮ್ಮನಾಗದ ಬಿಗ್‌ಬಾಸ್, ತನ್ನ ವಾಯ್ಸೇ ಕೇಳಿಸ್ತಿಲ್ಲ ಅಂತ ದೊಡ್ಡ ಮನುಷ್ಯನಿಗೆ ಜಿಂಕೆಯಂತೆ ಬಿಹೇವ್ ಮಾಡೋ ಟಾಸ್ಕ್ ನೀಡಿದೆ. ಅದಕ್ಕೆ ಸರಿಯಾಗಿ ಧನರಾಜ್‌ಗೆ ಶುರುವಿನಲ್ಲೇ ಸುದೀಪ್, ‘ನೀವು ಜಿಂಕೆ ಥರ ಇರ್ತೀರಿ’ ಅನ್ನೋ ಮಾತು ಹೇಳಿದ್ರು. ಅದನ್ನು ಬಿಗ್‌ಬಾಸ್ ನೆನಪು ಮಾಡಿ ಇನ್ಮೇಲೆ ಜಿಂಕೆ ಥರನೇ ಇರ್ಬೇಕು ಅಂದುಬಿಟ್ಟಿದ್ದಾರೆ. ಧನರಾಜ್ ಮೊದಲ ದಿನವೇ ಡಲ್ ಆಗಿದ್ದು ಇದಕ್ಕೆ ಕಾರಣ. ಸೋ ಇನ್ಮೇಲಿಂದ ಧನರಾಜ್ ಬಿಗ್‌ಬಾಸ್ ಮನೆಯ ಗಂಡು ಜಿಂಕೆ. ಜಿಂಕೆಯಂತೆ ನೆಗೆಯುತ್ತಾ ಹೋದ ಇವರು ಅದೇ ಆಟಿಟ್ಯೂಡ್ ಮುಂದುವರಿಸಿದ್ದಾರೆ. ಕರಾವಳಿ ಮೂಲದ ಈ ಯೂಟ್ಯೂಬರ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲೋವರ್ಸ್ ಇದ್ದಾರೆ.

    Continue Reading

    FILM

    ಬಂದೂಕು ಮಿಸ್‌ ಫೈರ್‌ – ಬಾಲಿವುಡ್‌ ನಟ ಗೋವಿಂದ ಆಸ್ಪತ್ರೆಗೆ ದಾಖಲು..!

    Published

    on

    ತನ್ನದೇ ಗನ್‌ನಿಂದ ಕಾಲಿಗೆ ಶೂಟ್ ಮಾಡಿಕೊಂಡ ನಟ ಗೋವಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮುಂಜಾನೆ 5 ಘಂಟೆಗೆ ಈ ಘಟನೆ ನಡೆದಿದ್ದು, ನಟ ಗೋವಿಂದ ಅವರ ಗನ್‌ನಿಂದ ಆಕಸ್ಮಿಕವಾಗಿ ಗುಂಡು ಸಿಡಿದಿರುವುದಾಗಿ ತಿಳಿದು ಬಂದಿದೆ. ಸದ್ಯ ಮುಂಬೈ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗೋವಿಂದ್ ಅವರ ಕಾಲಿನಿಂದ ಶಸ್ತ್ರ ಚಿಕಿತ್ಸೆ ಮೂಲಕ ಗುಂಡು ಹೊರತೆಗೆಯಲಾಗಿದೆ.

    ನಟ ಗೋವಿಂದ ಅವರು ಸ್ವಯಂ ಭದ್ರತೆಗಾಗಿ ಲೈಸೆನ್ಸ್‌ ಹೊಂದಿರುವ ಗನ್ ಹೊಂದಿದ್ದಾರೆ. ಇಂದು ಮುಂಜಾನೆ ಅವರು ಕೊಲ್ಕತ್ತಾಗೆ ತೆರಳಲು ಸಿದ್ಧತೆ ನಡೆಸಿಕೊಂಡಿದ್ದ ವೇಳೆ ಆಕಸ್ಮಿಕವಾಗಿ ಗುಂಡು ಸಿಡಿದಿದೆ. ಮುಂಜಾನೆ 5 ಗಂಟೆಗೆ ಗುಂಡಿನ ಸದ್ದು ಕೇಳಿಸಿದ್ದು, ತಕ್ಷಣ ಗಾಯಗೊಂಡ ಗೋವಿಂದ ಅವರನ್ನು ಅಂಧೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೋವಿಂದ ಅವರ ಗನ್‌ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    80 ರ ದಶಕದಲ್ಲಿ ಸುಪರ್ ಸ್ಟಾರ್ ಆಗಿ ಬಾಲಿವುಡ್ ಆಳಿದ್ದ ಗೋವಿಂದ ಬಳಿಕ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಸದ್ಯ ಶಿವಸೇನೆಯಲ್ಲಿರುವ ಗೋವಿಂದ ಸಿನೆಮಾ ರಂಗದಿಂದ ದೂರವಿದ್ದು ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ರೂ ಆಗಾಗೇ ಕೆಲ ಸಿನೆಮಾಗಳಲ್ಲಿ ನಟಿಸುವ ಮೂಲಕ ಚಿತ್ರರಂಗದ ನಂಟು ಉಳಿಸಿಕೊಂಡಿದ್ದಾರೆ.

    Continue Reading

    LATEST NEWS

    Trending