Connect with us

    DAKSHINA KANNADA

    ಸುಳ್ಯ – ರಿಕ್ಷಾ ಬೈಕ್ ಡಿಕ್ಕಿ: ಬಾಲಕಿಗೆ ಗಾಯ

    Published

    on

    ಸುಳ್ಯ: ರಿಕ್ಷಾ ಮತ್ತು ಬೈಕ್‌ ಪರಸ್ಪರ ಡಿಕ್ಕಿ ಹೊಡೆದು ಶಾಲಾ ವಿದ್ಯಾರ್ಥಿನಿಯ ಕಾಲಿಗೆ ಗಾಯವಾಗಿದ ಘಟನೆ  ಸುಳ್ಯ ನಗರದ ಜ್ಯೋತಿ ವೃತ್ತದ ಬಳಿ ನಡೆದಿದೆ.

    ಘಟನೆಯ ಹಿನ್ನಲೆ ಸಿಟ್ಟಿಗೆದ್ದ ಬಾಲಕಿಯ ತಂದೆ ಆಟೋ ಚಾಲಕನಿಗೆ ಥಳಿಸಿದ ಘಟನೆ ಮಂಗಳವಾರ ( ಅ.22) ಸಂಜೆ ನಡೆದಿದೆ.

    ಪೆರಾಜೆಯ ಬೈಕ್‌ ಸವಾರ ಸುಳ್ಯದ ಖಾಸಗಿ ಶಾಲೆಯಿಂದ ತಮ್ಮ ಮಗಳನ್ನು ಕರೆ ತರುವ ವೇಳೆ ಜ್ಯೋತಿ ವೃತ್ತದ ಜಂಕ್ಷನ್‌ ಪಕ್ಕದಿಂದ ಬಂದ ಆಟೋ ರಿಕ್ಷಾ ಬೈಕಿಗೆ ತಾಗಿದ್ದು, ರಿಕ್ಷಾ ತಾಗಿ ವಿದ್ಯಾರ್ಥಿನಿಯ ಪಾದಕ್ಕೆ ಗಾಯವಾಗಿದೆ.

    ಈ ವೇಳೆ ವಿದ್ಯಾರ್ಥಿನಿಯ ತಂದೆ ಮತ್ತು ಆಟೋ ಚಾಲಕನ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿ ಕೈಕೈಮಿಲಾಯಿಸಿಕೊಂಡರು. ಹೊಡೆದಾಟದಲ್ಲಿ ಆಟೋ ಚಾಲಕನಿಗೆ ಮುಖಕ್ಕೆ ಗಾಯವಾಗಿ ಅವರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬೈಕ್‌ ಚಾಲಕನ ವಿರುದ್ಧ ಸುಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದ್ದು, ಗಾಯಾಳು ವಿದ್ಯಾರ್ಥಿನಿಯನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ‘ನನ್ನ ಜತೆ ಬಾ ಇಲ್ಲಾಂದ್ರೆ 24 ತುಂಡು ಮಾಡುವೆ : ಯುವತಿಗೆ ಬೆದರಿಕೆ; ಆರೋಪಿ ವಶಕ್ಕೆ

    Published

    on

    ಸುರತ್ಕಲ್: ‘ನನ್ನ ಜತೆ ಸಹಕರಿಸು ಇಲ್ಲಾಂದ್ರೆ 24 ತುಂಡು ಮಾಡುವೆ’ ಎಂದು ಸುರತ್ಕಲ್ ಇಡ್ಯಾ ಅನ್ಯ ಸಮುದಾಯದ ನಿವಾಸಿ ಸಮೀಪದಲ್ಲೇ ವಾಸಿಸುವ ಯುವತಿಯೊಬ್ಬಳಿಗೆ ವಾಟ್ಸಪ್ ಮೆಸೇಜ್ ಮಾಡಿ ಸಂಚಲನ ಸೃಷ್ಟಿಸಿದ್ದಾನೆ.

    ಇತ್ತೀಚಿನ ದಿನಗಳಲ್ಲಿ ಅನೇಕ ಕೋಮು ಗಲಭೆಗಳು ನಡೆಯುತ್ತಿದ್ದು ಇಧೀಗ ಅಂತಹದ್ದೇ ಮತ್ತೊಂದು ಘಟನೆ ಕೋಮು ಸಂಘರ್ಷಕ್ಕೆ ಕಿಡಿ ಕಾರಿದೆ.

    ಸುರತ್ಕಲ್ ಇಡ್ಯಾ ನಿವಾಸಿ, ಸದಾಶಿವನಗರದ ಶಾರಿಕ್‌ ನೂರ್ಜಹಾನ್‌ ಮೆಸೆಜ್‌ ಮಾಡಿದ ಆರೋಪಿ ಎಂದು ತಿಳಿದು ಬಂದಿದೆ.

    ಕಿರುಕುಳ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

    ಯುವತಿಯ ಸಹೋದರನಿಗೆ ವಾಟ್ಸಪ್ ಮೆಸೇಜ್ ಮಾಡಿ ಈ ಧಮಕಿ ಹಾಕಿದ್ದಾನೆ. ಯುವತಿಯ ಕುಟುಂಬ ಆತಂಕಗೊಂಡು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯುವಕನನ್ನು ವಶಕ್ಕೆ ಪಡೆದು ತನಖೆ ನಡೆಸುತ್ತಿದ್ದಾರೆ.

    Continue Reading

    DAKSHINA KANNADA

    ಮಂಗಳೂರು: ಅ*ಪಘಾತದ ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಲೇಡಿ ಪೊಲೀಸ್

    Published

    on

    ಮಂಗಳೂರು: ಪಿಕಪ್ ಹಾಗೂ ಕಂಟೈನರ್ ಲಾರಿ ನಡುವೆ ನಡೆದ ಅ*ಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಗಾ*ಯಾಳನ್ನು ತಮ್ಮದೇ ಸ್ಕೂಟಿಯಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಕದ್ರಿ ಪೊಲೀಸ್ ಠಾಣೆ ಮಹಿಳಾ ಸಿಬ್ಬಂದಿ ಮನ್ ಶಿದಬಾನು ಮಾನವೀಯತೆ ಮೆರೆದಿದ್ದಾರೆ.

    ಇಂದು (ಅ.23) ಮುಂಜಾನೆ ಕೆಪಿಟಿ ಬಳಿ ಪಿಕಪ್ ಮತ್ತು ಕಂಟೈನರ್ ಲಾರಿ ಮಧ್ಯೆ ಅ*ಪಘಾತ ಉಂಟಾಗಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡು ರ*ಕ್ತದ ಮ*ಡುವಿನಲ್ಲಿ ಬಿದ್ದಿದ್ದ ಕ್ಲೀನರ್ ನನ್ನು ಅದೇ ದಾರಿಯಲ್ಲಿ ಬಂದ ಕದ್ರಿ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಮನ್ ಶಿದಬಾನು ಕೂಡಲೇ ತಮ್ಮ ಸ್ಕೂಟಿಯಲ್ಲಿ ಎಜೆ ಆ*ಸ್ಪತ್ರೆಗೆ ದಾಖಲಿಸಿದ್ದಾರೆ.

    ಅ*ಪಘಾತ ಸಂದರ್ಭದಲ್ಲಿ ಸಹಾಯಕ್ಕೆ ಬರದೆ ಮುಂದೆ ಹೋಗುವ ಜನರಲ್ಲಿ ಮಹಿಳೆಯಾಗಿ ತಮ್ಮ ಸ್ಕೂಟಿಯಲ್ಲಿ ಗಾಯಾಳುವನ್ನು ಕೂರಿಸಿಕೊಂಡು ಹೋಗಿ ಆಸ್ಪತ್ರೆಗೆ ಮನ್ ಶಿದಬಾನು ಅವರು ದಾಖಲಿಸಿದ್ದಾರೆ. ಮನ್ ಶಿದಬಾನು ಕರ್ತವ್ಯ ಜೊತೆ ಸಮಯ ಪ್ರಜ್ಞೆ ಮೆರೆದಿರುವುದು ಸ್ಪಷ್ಟನೆಯಾಗಿದೆ.

    Continue Reading

    DAKSHINA KANNADA

    ಸುರತ್ಕಲ್: ಸಮುದ್ರದಲ್ಲಿ ಆಡಲು ಹೋಗಿ ಸಮುದ್ರಪಾಲಾದ ಯವಕ

    Published

    on

    ಸುರತ್ಕಲ್: ನೀರಿನಲ್ಲಿ ಆಡುತ್ತಿದ್ದ ಯುವಕನೋರ್ವ ಸಮುದ್ರ ಪಾಲಾಗಿರುವ ಘಟನೆ ಮಂಗಳವಾರ ಸಂಜೆ ಸುರತ್ಕಲ್ ಮುಕ್ಕ ರೆಡ್‌ ರಾಕ್ ಕಡಲ ಕಿನಾರೆಯಲ್ಲಿ ನಡೆದಿದೆ.

    ಬಂಟ್ವಾಳ ತಾಲೂಕಿನ ಬಿಸಿ ರೋಡ್ ನಿವಾಸಿ ಪ್ರಜ್ವಲ್ (21) ನೀರು ಪಾಲಾದ ಯುವಕ ಎಂದು ಗುರುತಿಸಲಾಗಿದೆ.

    ಪ್ರಜ್ವಲ್ ಸುಮಾರು 8 ಮಂದಿ ಸ್ನೇಹಿತರ ಜೊತೆ ಇಂದು ಸಂಜೆ ಮುಕ್ಕ ರೆಡ್ ರಾಕ್ ಬಳಿಯ ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದಾಗ ಸಮುದ್ರದ ಅಲೆಗೆ ಸಿಲುಕಿ ಪ್ರಜ್ವಲ್ ಸಮುದ್ರ ಪಾಲಾಗಿದ್ದು, ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

    ಘಟನೆಗೆ ಸಂಬಂಧಿಸಿ ಯುವಕನ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    LATEST NEWS

    Trending