BIG BOSS
ಬಿಗ್ಬಾಸ್ ತೊರೆಯಲು ಸುದೀಪ್ ನಿರ್ಧಾರ; ಇದೇ ಕೊನೆಯ ಸೀಸನ್
ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮದ ನಡುವೆಯೂ ಸುದೀಪ್ ಅವರು ಶಾಕಿಂಗ್ ಸುದ್ದಿ ನೀಡಿದ್ದಾರೆ. ‘ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು. ಸಿಕ್ಕಿರುವ ಟಿಆರ್ಪಿ ನೋಡಿದರೆ ನನ್ನ ಬಗ್ಗೆ ಮತ್ತು ಈ ಶೋ ಬಗ್ಗೆ ನೀವು ತೋರಿಸಿರುವ ಪ್ರೀತಿ ಏನೆಂಬುದು ತಿಳಿಯುತ್ತದೆ. ಈ 10 ಪ್ಲಸ್ 1ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಚೆನ್ನಾಗಿತ್ತು. ಈಗ ನಾನು ಬೇರೆ ಕಡೆಗೆ ಗಮನಹರಿಸುವ ಸಮಯ ಬಂದಿದೆ’ ಎಂದು ಸುದೀಪ್ ಅವರು ಹೇಳಿದ್ದಾರೆ.
‘ನಿರೂಪಕನಾಗಿ ಇದು ನನ್ನ ಕೊನೆಯ ಬಿಗ್ ಬಾಸ್ ಇಷ್ಟು ವರ್ಷ ಬಿಗ್ ಬಾಸ್ ಕಾರ್ಯಕ್ರಮವನ್ನು ನೋಡಿ ನೀವು ಮತ್ತು ಕಲರ್ಸ್ನವರು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಎಂದು ನಂಬಿದ್ದೇನೆ. ಈ ನಿರ್ಧಾರ ಅತ್ಯುತ್ತಮ ಆಗುವಂತೆ ಮಾಡೋಣ. ನಿಮ್ಮೆಲ್ಲರನ್ನೂ ನಿಮ್ಮನ್ನು ಮನರಂಜಿಸುತ್ತೇನೆ’ ಎಂದು ಸುದೀಪ್ ಅವರು ಶಾಕಿಂಗ್ ವಿಷಯ ತಿಳಿಸಿದ್ದಾರೆ.
ಈ ಮೂಲಕ ಬಿಗ್ ಬಾಸ್ ಸೀಸನ್ 12ರ ನಿರೂಪಣೆಯ ಹೊಣೆ ಯಾರದ್ದು ಎಂಬ ಪ್ರಶ್ನೆ ಅಧಿಕೃತವಾಗಿ ಸೃಷ್ಟಿಯಾದಂತಾಗಿದೆ. ಕಿಚ್ಚ ಸುದೀಪ್ ನಿರೂಪಣೆ ಮಾಡದಿದ್ದರೆ ಮತ್ಯಾರು? ಯಾವ ನಟ ಬಿಗ್ ಬಾಸ್ ಸೀಸನ್ 12ರ ನಿರೂಪಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ಅಭಿಮಾನಿಗಳ ವಲಯದಲ್ಲಿ ಹಲವು ಹೆಸರುಗಳು ಕೇಳಿ ಬಂದಿದ್ದವು.
ನಟ ನಿರ್ದೇಶಕ ರಿಷಬ್ ಶೆಟ್ಟಿ, ಉಪೇಂದ್ರ, ರಮೇಶ್ ಅರವಿಂದ್ ಹೆಸರುಗಳು ಬಿಗ್ ಬಾಸ್ ಸೀಸನ್ 11ರಲ್ಲಿ ಕಿಚ್ಚ ಸುದೀಪ್ ಬದಲಿಗೆ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವದಂತಿ ಹರಿದಾಡಿತ್ತು. ಆದರೆ ವದಂತಿಗೆ ಕೊನೆಹಾಡಿದ್ದ ಕಿಚ್ಚ ಸುದೀಪ್ ಸ್ವತಃ ಸೀಸನ್ 11ರ ನಿರೂಪಕರಾಗಿದ್ದರು. ಆದರೆ ಇದೀಗ ಅವರು ಇದೇ ತಮ್ಮ ಕೊನೆಯ ಬಿಗ್ ಬಾಸ್ ಸೀಸನ್ ಎಂದು ಘೋಷಿಸಿದ ಕಾರಣ ಬಿಗ್ ಬಾಸ್ 12ರ ನಿರೂಪಕರಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.
ಈ ಕುರಿತು ಬಿಗ್ ಬಾಸ್ ಸೀಸನ್ 11ರ ಪ್ರೆಸ್ ಮೀಟ್ ವೇಳೆ ಮಾತನಾಡಿದ್ದ ಕಿಚ್ಚ ಸುದೀಪ್ ನಾನು ನಿರೂಪಣೆ ಮಾಡಲ್ಲ ಎಂದಾದರೆ ನಿರೂಪಕರನ್ನು ಹುಡುಕುವುದು ವಾಹಿನಿಯವರ ಜವಾಬ್ದಾರಿ ಮತ್ತು ಸ್ವಾತಂತ್ರ” ಎಂಬ ಅರ್ಥದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.
BIG BOSS
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಬಿಕ್ಕಿಬಿಕ್ಕಿ ಅತ್ತ ಧನರಾಜ್
ಗಿಚ್ಚಿ ಗಿಲಿಗಿಲಿ ಸೀಸನ್ 2ರ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಧನರಾಜ್ ಆಚಾರ್ ಸದ್ಯ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೊದಲ ವಾರದಲ್ಲಿ ಕಾಮಿಡಿ ಮಾಡಿಕೊಂಡು ಖುಷ್ ಖುಷ್ ಆಗಿದ್ದ ಧನರಾಜ್ ತುಂಬಾ ವೀಕ್ ಆಗುತ್ತಿದ್ದಾರೆ ಮೂಲೆ ಸೇರುತ್ತಿದ್ದಾರೆ ಎಂದು ಇನ್ನಿತರ ಸ್ಪರ್ಧಿಗಳು ಟಾರ್ಗೆಟ್ ಮಾಡುತ್ತಿದ್ದರು. ಇದೇ ಕಾರಣ ಕೊಟ್ಟು ಎರಡು ವಾರವೂ ಧನರಾಜ್ರನ್ನು ನಾಮಿನೇಟ್ ಮಾಡಿದ್ದಾರೆ. ಯಾವ ರೀತಿ ಇರಬೇಕು, ಯಾವ ರೀತಿ ಮುಂದುವರೆಯಬೇಕು ಅನ್ನೋ ಗೊಂದಲದಲ್ಲಿ ಇರುವ ಧನರಾಜ್ಗೆ ಬಿಗ್ ಬಾಸ್ ಮೋಟಿವೇಷನ್ ನೀಡುತ್ತಾರೆ.
ಫೋನ್ ಕರೆ ಬರುತ್ತಿದ್ದಂತೆ ಹಲೋ ಹೇಳಿ ಬಿಗ್ ಬಾಸ್ ಎಂದು ಧನರಾಜ್ ಮಾತನಾಡುತ್ತಾರೆ. ನಿಮಗೆ ಏನೋ ಕೇಳಿಸಬೇಕು ಎಂದು ಇದ್ದಕ್ಕಿದ್ದಂತೆ ಮಗು ಅಳುತ್ತಿರುವ ವಿಡಿಯೋವನ್ನು ಬಿಗ್ ಬಾಸ್ ಹಾಕುತ್ತಾರೆ. ಮಗು ಅಳುತ್ತಿರುವ ಧ್ವನಿ ಕೇಳಿಸುತ್ತಿದ್ದಂತೆ ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಧನರಾಜ್ ‘ಸಾರಿ ಪುಟ್ಟ ಸರಿಯಾಗಿ ಆಟವಾಡಲು ಆಗುತ್ತಿಲ್ಲ’ ಎಂದು ಹೇಳುತ್ತಾರೆ. ಕರೆ ಇಟ್ಟ ನಂತರ ಕ್ಯಾಮೆರಾ ನೋಡುತ್ತಾ ‘ನನ್ನ ಮಗಳು ನೆನಪಾದಾಗಲೆಲ್ಲಾ ಇನ್ನೂ ಚೆನ್ನಾಗಿ ಆಟವಾಡಬೇಕು ಅನಿಸುತ್ತದೆ. ಇದನ್ನು ಮೋಟಿವೇಷನ್ ಆಗಿ ಸ್ವೀಕರಿಸುತ್ತೀನಿ. ಇಲ್ಲಿ ನನ್ನ ಕಡೆ ಬೆರಳು ತೋರಿಸಿ ಪ್ರಶ್ನೆ ಮಾಡುವವರಿಗೆ ಉತ್ತರ ಕೊಡುತ್ತೀನಿ’ ಎಂದು ಧನರಾಜ್ ಹೇಳುತ್ತಾರೆ.
BIG BOSS
ಲಾಯರ್ ಜಗದೀಶ್ ಹೊರಗೆ, ಪತ್ನಿ ಒಳಗೆ: ಕಲರ್ಸ್ ಶೋನಲ್ಲಿ ಜಗದೀಶ್ ಪತ್ನಿ
ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭ ಆದಾಗಿನಿಂದಲೂ ವಕೀಲ ಜಗದೀಶ್ ಮನೆಯಲ್ಲಿ ಅಬ್ಬರ ಎಬ್ಬಿಸಿದ್ದಾರೆ. ಬೇಕೆಂದೇ ನಿಯಮಗಳನ್ನು ಮುರಿಯುವುದು, ಕೆಟ್ಟ ಭಾಷೆ ಬಳಸುವುದು, ಮಿತಿ ಮೀರಿ ಫ್ಲರ್ಟ್ ಮಾಡುವುದು, ಸಿಕ್ಕ-ಸಿಕ್ಕವರ ಮೇಲೆ, ಸಿಕ್ಕ-ಸಿಕ್ಕವರ ಬಳಿ ಛಾಡಿ ಹೇಳುವುದು, ಎಲ್ಲರ ಮೇಲೂ ಜಗಳ ಆಡುವುದು, ಬಿಗ್ಬಾಸ್ ಧಮ್ಕಿ ಹಾಕುವುದು ಇದೇ ಮಾಡುತ್ತಾ ಬಂದಿದ್ದಾರೆ. ಜಗದೀಶ್ ಅವರ ಈ ವರ್ತನೆಯಿಂದ ಬೇಸತ್ತು ಇಡೀ ಮನೆ ಮಂದಿ ಅವರ ವಿರುದ್ಧ ಒಂದಾಗಿದ್ದರು. ಜಗದೀಶ್ ಹಾಗೂ ಮನೆಯ ಸದಸ್ಯರೊಬ್ಬರ ನಡುವೆ ಜಟಾಪಟಿ ನಡೆದಿರುವ ಕಾರಣ ಇದೀಗ ಜಗದೀಶ್ ಅನ್ನು ಕಲರ್ಸ್ ವಾಹಿನಿಯ ಬಿಗ್ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ. ಆದರೆ ಅವರ ಪತ್ನಿ ಅದೇ ಕಲರ್ಸ್ ವಾಹಿನಿಯ ಶೋ ಒಂದರಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.
ಸವಿರುಚಿ ಕಾರ್ಯಕ್ರಮ ಕಲರ್ಸ್ ವಾಹಿನಿಯ ಜನಪ್ರಿಯ ಅಡುಗೆ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಲಾಯರ್ ಜಗದೀಶ್ ಅವರ ಪತ್ನಿ ಅತಿಥಿಯಾಗಿ ಆಗಮಿಸಿದ್ದಾರೆ. ಜಗದೀಶ್ ಪತ್ನಿ ಸೌಮ್ಯಾ ಜಗದೀಶ್ ಅವರು ಸವಿರುಚಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ರುಚಿ-ರುಚಿಯಾದ ಅಡುಗೆ ಮಾಡಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಅನ್ನು ಕಲರ್ಸ್ ವಾಹಿನಿ ಹಂಚಿಕೊಂಡಿದೆ. ವಿಶೇಷವೆಂದರೆ ಈ ಶೋ ಪ್ರಸಾರವಾಗುವ ವೇಳೆಗಾಗಲೆ ಜಗದೀಶ್, ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದಾಗಿದೆ.
ಶೋನಲ್ಲಿ ಸೌಮ್ಯಾ ಅವರು, ಸೋಯಾ ಚಂಕ್ಸ್ ಮಸಾಲಾ ಕರಿ ಅಡುಗೆ ಮಾಡಿ ತೋರಿಸಿದರು. ಕಾರ್ಯಕ್ರಮದಲ್ಲಿ ಜಗದೀಶ್ ಬಗ್ಗೆಯೂ ಮಾತನಾಡಿದ ಸೌಮ್ಯಾ ಅವರು, ಬಿಗ್ಬಾಸ್ ನಲ್ಲಿ ಹೇಗೆ ಅವರು ಇದ್ದಾರೆಯೋ ಹಾಗೆಯೇ ಮನೆಯಲ್ಲಿಯೂ ಜಗದೀಶ್ ಇರುತ್ತಾರೆ ಎಂದು ಹೇಳಿದ್ದರು. ‘ಜಗದೀಶ್ ಅವರ ವ್ಯಕ್ತಿತ್ವ, ವರ್ತನೆಯನ್ನು ಯಾರೂ ಊಹಿಸಲು ಸಾಧ್ಯ ಆಗುವುದಿಲ್ಲ. ಒಮ್ಮೆ ಇದ್ದಕ್ಕಿದ್ದಂತೆ ಜಗಳ ಆಡಿ ಬಿಡುತ್ತಾರೆ ಆ ನಂತರ ಅವರೇ ಬಂದು ಕ್ಷಮೆ ಕೇಳುತ್ತಾರೆ. ಅವರಿಗೆ, ಅವರು ಮಾಡಿದ ತಪ್ಪು ಬೇಗನೆ ಅರ್ಥ ಆಗುತ್ತದೆ’ ಎಂದು ಪತ್ನಿ ಸೌಮ್ಯಾ ಅಡುಗೆ ಶೋನಲ್ಲಿ ಹೇಳಿದ್ದಾರೆ.
ಈಗ ಜಗದೀಶ್ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಎಲಿಮಿನೇಟ್ ಅನ್ನುವುದಕ್ಕಿಂತಲೂ ಹೊರಗಟ್ಟಲ್ಪಟ್ಟಿದ್ದಾರೆ. ಮನೆಯ ಒಳಗಿದ್ದಾಗ ಬಿಗ್ಬಾಸ್ ಅನ್ನು ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಎಂದೆಲ್ಲ ಸವಾಲು ಹಾಕಿದ್ದರು. ಈಗ ಜಗದೀಶ್ ಹೊರಗೆ ಬಂದ ಮೇಲೆ ಏನು ಮಾಡುತ್ತಾರೆ ಕಾದು ನೋಡಬೇಕಿದೆ.
BIG BOSS
ಬಿಗ್ ಬಾಸ್ನಲ್ಲಿ ಹೊಡೆದಾಡಿಕೊಂಡ ಸ್ಪರ್ಧಿಗಳು! ಜಗದೀಶ್ ಮತ್ತು ರಂಜಿತ್ ಔಟ್
ಬಿಗ್ ಬಾಸ್ ಸೀಸನ್ 11 ಕಾರ್ಯಕ್ರಮದಿಂದ ಲಾಯರ್ ಜಗದೀಶ್ ಮತ್ತು ರಂಜಿತ್ ಹೊರಬಂದಿದ್ದಾರೆ. ಕಿಚ್ಚ ನಿರೂಪಣೆಯ ರಿಯಾಲಿಟಿ ಶೋದಲ್ಲಿ ಹೊಡೆದಾಡಿಕೊಂಡ ಹಿನ್ನೆಲೆ ಇಬ್ಬರನ್ನು ಬಿಗ್ಬಾಸ್ ಮನೆಯಿಂದ ಹೊರ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.
ಬಿಗ್ ಬಾಸ್ ಕನ್ನಡ ಪ್ರಾರಂಭವಾಗಿ 3 ವಾರ ಕಳೆದಿದೆ. ಆದರೆ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪ್ರಾರಂಭದಿಂದಲೂ ಮಾತಿನ ಚಕಮಕಿ ನಡೆಯುತ್ತಾ ಬಂದಿದೆ. ಅದರಲ್ಲೂ ಲಾಯರ್ ಜಗದೀಶ್ ಮತ್ತು ಮನೆಯ ಇತರೆ ಸ್ಪರ್ಧಿಗಳ ನಡುವೆ ಕೊಂಚ ವೈಮನಸ್ಸು ಬೆಳೆದಿತ್ತು. ಆದರೀಗ ಮಾತಿನ ಚಕಮಕಿ ಕೈ-ಕೈ ಮಿಲಾಯಿಸುವಷ್ಟರಮಟ್ಟಿಗೆ ಹೋಗಿದೆ.
ಬಿಗ್ ಬಾಸ್ ಮನೆಯಲ್ಲಿ ಏನಾಯ್ತ?
ನಿನ್ನೆ ಎಪಿಸೋಡ್ನಲ್ಲೂ ಕೂಡ ಸ್ಪರ್ಧಿಗಳ ನಡುವೆ ದೊಡ್ಡ ಜಗಳವಾಗಿತ್ತು. ಜಗದೀಶ್ ಮತ್ತು ಉಗ್ರಂ ಮಂಜು ನಡುವೆ ಜಗಳ ಏರ್ಪಟ್ಟಿತ್ತು. ಆ ಬಳಿಕ ರಂಜಿತ್ ಮತ್ತು ಜಗದೀಶ್ ನಡುವೆ ನೇರಾನೇರ ಮಾತುಕತೆ ನಡೆದು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
- FILM4 days ago
ಮಾಲ್ಡೀವ್ಸ್ ದ್ವೀಪದಲ್ಲಿ ಹನಿಮೂನ್..! ಜಾಲಿ ಮೂಡ್ನಲ್ಲಿ ತರುಣ್ ಸುಧೀರ್ ದಂಪತಿ
- FILM5 days ago
ಮಗುವಿನ ಮುಖ ರಿವೀಲ್ ಮಾಡಿದ ಕವಿತಾ-ಚಂದನ್ ದಂಪತಿ
- DAKSHINA KANNADA5 days ago
ಮುಂದಿನ ಐದು ದಿನ ಉತ್ತರ ಒಳನಾಡು, ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ
- BIG BOSS3 days ago
ಯಾರೂ ಊಹಿಸದ ವ್ಯಕ್ತಿಗೆ ಈ ವಾರ ಕಿಚ್ಚನ ಚಪ್ಪಾಳೆ, ಬಿಗ್ಬಾಸ್ ಮನೆಯಲ್ಲಿ ಇದೇ ಮೊದಲು
Pingback: 'ಯುಐ' ಸಿನಿಮಾ ರಿಲೀಸ್ ಡೇಟ್ ಅನೌನ್ಸ್; ಮತ್ತೆ ತಲೆಗೆ ಹುಳ ಬಿಟ್ಟ ಉಪ್ಪಿ - NAMMAKUDLA NEWS - ನಮ್ಮಕುಡ್ಲ ನ್ಯೂಸ್