Connect with us

    BIG BOSS

    ದೊಡ್ಮನೆ ಶೋಗೂ ಮೊದಲೇ ಸ್ವರ್ಗ, ನರಕದ ಲುಕ್ ರಿವೀಲ್-ಸ್ಪರ್ಧಿಗಳು ಶಾಕ್

    Published

    on

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ 11ರ ಶೋ ಶುರುವಾಗಿದೆ. ಈಗಾಗಲೇ ದೊಡ್ಮನೆಗೆ 17 ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಶೋ ಪ್ರಸಾರಕ್ಕೂ ಮೊದಲೇ ದೊಡ್ಮನೆಯ ಸ್ಬರ್ಗ ಮತ್ತು ನರಕ ಝಲಕ್ ಅನ್ನು ವಾಹಿನಿ ರಿವೀಲ್ ಮಾಡಿದೆ.

    ಕಳೆದ 10 ಸೀಸನ್‌ಗಳಿಂದ ಬಿಗ್ ಬಾಸ್ ಮನೆ ಒಂದರಕ್ಕಿಂತ ಒಂದು ಅದ್ಧೂರಿಯಾಗಿ ತೋರಿಸಲಾಗಿತ್ತು. ಈ ಬಾರಿಯು ಮತ್ತಷ್ಟು ವಿಜೃಂಭಣೆಯಿಂದ ಬಿಗ್ ಬಾಸ್ ಮನೆಯನ್ನು ರೆಡಿ ಮಾಡಲಾಗಿದೆ. ಹೊಸ ಸಮಾಚಾರ ಏನೆಂದರೆ, ಈ ಬಾರಿ ಸ್ವರ್ಗ ಮತ್ತು ನರಕ ಎಂದು 2 ಕಾನ್ಸೆಸ್ಟ್‌ಗಳು ಇರುತ್ತವೆ. ಈ ಬಾರಿ ಕೂಡ ಹೊಸ ಥೀಮ್‌ನೊಂದಿಗೆ ದೊಡ್ಮನೆಯನ್ನು ವಾಹಿನಿ ಸ್ವರ್ಗ ಮತ್ತು ನರಕದಂತೆಯೇ ಸಿದ್ಧಪಡಿಸಿದ್ದಾರೆ. ಸ್ವರ್ಗದ ಮನೆ ಐಷಾರಾಮಿಯಾಗಿದ್ರೆ, ಇತ್ತ ನರಕದ ಮನೆ ಭಯಾನಕವಾಗಿದೆ.

    ಇದೆಲ್ಲದರ ನಡುವೆ ಸುದೀಪ್ ಸನ್‌ಗ್ಲಾಸ್ ಧರಿಸಿ `ಬಿಗ್ ಬಾಸ್’ ವೇದಿಕೆ ಸ್ಟೈಲೀಶ್ ಎಂಟ್ರಿ ಕೊಟ್ಟಿದ್ದಾರೆ. ಮೋಕ್ಷಿತಾ ಪೈ, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಅನುಷಾ ರೈ, ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ಧನರಾಜ್ ಆಚಾರ್, ಐಶ್ವರ್ಯಾ ಸಿಂದೋಗಿ, ಯಮುನಾ ಶ್ರೀನಿಧಿ, ತ್ರಿವಿಕ್ರಮ್, ಶೀಶಿರ್, ಗೋಲ್ಡ್ ಸುರೇಶ್, ಗೌತಮಿ, ಮಾನಸಾ, ರಂಜಿತ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಾಗಿದೆ.

    BIG BOSS

    ಭ್ರಷ್ಟರ ವಿರುದ್ಧ ಗುಡುಗಿದ‌ ಸ್ಪರ್ಧಿ ಲಾಯರ್‌ ಜಗದೀಶ್‌ಗೆ ಕಿಚ್ಚ ವಾರ್ನಿಂಗ್..!

    Published

    on

    ಮಂಗಳೂರು: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಗದ್ದಲ ಮಾಡಿದ್ದ ಲಾಯರ್ ಜಗದೀಶ್ ಬಿಗ್ ಬಾಸ್ ಸೀಸನ್ 11 ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಯಾವ ರೀತಿ ತಮ್ಮ ಮಾತಿನಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಕಮಾಲ್ ಮಾಡಿದ್ರೋ, ಅದೇ ರೀತಿ ಬಿಗ್ ಬಾಸ್ ವೇದಿಕೆಯಲ್ಲೂ ಜಗದೀಶ್ ತಮ್ಮ ಮಾತಿನ ಮಿಂಚು ಹರಿಸಿದ್ದಾರೆ. ಒಂದಲ್ಲ ಒಂದು ದಿನ ನಾನು ಸಿಎಂ ಆಗ್ತಿನಿ ಎಂದು ಹೇಳಿಕೊಂಡಿದ್ದಾರೆ.

    ನಾನು ಬಿಗ್ ಬಾಸ್‌ ಶೋಗೆ ಬರಲು ಸುದೀಪ್ ಅವರೇ ಕಾರಣ. ನನ್ನ ಪತ್ನಿ ಸುದೀಪ್ ಅವರ ಅಭಿಮಾನಿ ಎಂದು ಮಾತು ಆರಂಭಿಸಿದ ಜಗದೀಶ್ ಭ್ರಷ್ಟಾಚಾರದ ವಿರುದ್ಧ ಗುಡುಗಿದ್ದಾರೆ. ಜನಗಳ ಮುಖದಲ್ಲಿ ನಗು ಇಲ್ಲ ಎಂಬುದು ನನ್ನ ಭಾವನೆ. ಭ್ರಷ್ಟಾಚಾರ ಅನ್ನೋದು ಸಮಾಜದಲ್ಲಿ ತುಂಬಿ ತುಳುಕುತ್ತಿದೆ. ಭ್ರಷ್ಟಾಚಾರದ ವಿಷದಲ್ಲಿ ನಮ್ಮ ಸಮಾಜ ಮುಳುಗಿ ಹೋಗಿದೆ ಎಂದಿದ್ದಾರೆ.

    ನಾಮಕಾವಸ್ತೆಗೆ ಎಂಎಲ್‌ಎಗಳಿದ್ದಾರೆ, ಎಂಪಿಗಳಿದ್ದಾರೆ. ಆದರೆ ಜನರ ಕಷ್ಟಗಳನ್ನು ಕೇಳುವವರು ಯಾರು ಇಲ್ಲ. ಹೀಗಾಗಿ ನಮ್ಮ ಮಕ್ಕಳಿಗೋಸ್ಕರ ನಾವು ರಾಜಕಾರಣಿಗಳಾಗೋಣ, ಎಂಪಿ ಆಗೋಣ, ಎಂಎಲ್‌ಎ ಆಗೋಣ. ಪೊಲೀಸ್ ನವರು ಸಿಎಂ ಮಾತು ಕೇಳ್ತಾರೋ ಇಲ್ವೋ ನನ್ನ ಮಾತು ಕೇಳ್ತಾರೆ ಅಂತ ಜಗದೀಶ್ ಹೇಳಿದ್ದಾರೆ.

    ಇನ್ನು ಭ್ರಷ್ಟರಿಗೆ ವಾರ್ನಿಂಗ್ ಕೊಟ್ಟಿರುವ ಲಾಯರ್ ಜಗದೀಶ್, ಸದ್ಯ ಒಳಗೆ ಹೋಗ್ತಿದೀನಿ, ಆದ್ರೆ ನಾನು ಹೊರಗೆ ಬಂದ್ಮೇಲೆ ರುಬ್ಬೋದು ಗ್ಯಾರಂಟಿ. ನಾನು ಯಾರಿಗೂ ಬಗ್ಗೋದೇ ಇಲ್ಲ ಅಂದ್ರು. ಈ ವೇಳೆ ಕಿಚ್ಚ, ಅದೆಲ್ಲಾ ಇಲ್ಲಿ ನಡೆಯೋದಿಲ್ಲ ಎಂದು ವಾರ್ನ್‌ ಮಾಡಿದ್ದಾರೆ. ಕೊನೆಗೆ ಬಿಗ್ ಬಾಸ್ ಮನೆಯ ರೂಲ್ಸ್‌ ಫಾಲೋ ಮಾಡುತ್ತೇನೆ ಎಂದು ಜಗದೀಶ್ ಹೇಳಿ ನರಕದತ್ತ ಹೆಜ್ಜೆ ಹಾಕಿದ್ದಾರೆ.

    Continue Reading

    BIG BOSS

    BBK11 ವೇದಿಕೆಗೆ ಬರುತ್ತಿದ್ದಂತೆ ರೀಲ್ಸ್ ಸ್ಟಾರ್ ಮೇಲೆ ಕೋಪಗೊಂಡ ಕಿಚ್ಚ: ಇಂತವರನ್ನ ಏಕೆ ಕರೆಸಿದ್ರಿ ಎಂದು ಗರಂ?

    Published

    on

    ಮಂಗಳೂರು: ರೀಲ್ಸ್ ಸ್ಟಾರ್ ಹಾಗೂ ಕಾಮಿಡಿ ಕಲಾವಿದ ಧನರಾಜ್ ಆಚಾರ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಧನರಾಜ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಕಿಚ್ಚ ಸುದೀಪ್ ಗರಂ ಆಗಿದ್ದಾರೆ.

    ಕಿಚ್ಚ ಕೊಂಚ ಮುನಿಸಿಕೊಳ್ಳಲು ಕಾರಣವೂ ಇದೆ. ಹಿಂದೆ ಬಿಗ್ ಬಾಸ್’ ಬಗ್ಗೆ, ಧನರಾಜ್ ಅವರು ಒಂದು ವಿಡಿಯೋ ಮಾಡಿದ್ದರು. ಜಗಳ ನಡೆಯೋದು ಟಿಆರ್‌ಪಿಗಾಗಿ ಎಂದು ಅವರು ಹೇಳಿದ್ದರು. ಈ ವಿಡಿಯೋನ ಬಿಗ್‌ಬಾಸ್ ವೇದಿಕೆಯ ಮೇಲೆ ಪ್ಲೇ ಮಾಡಲಾಯಿತು. ಆ ಬಳಿಕ ಸುದೀಪ್ ಗಂಭೀರವಾಗಿ ಕ್ಲಾಸ್ ತೆಗೆದುಕೊಂಡರು.

    ‘ನಾವು ಹೆಂಗ್ ಕಾಣಿಸ್ತೀವಿ? ನಾನು ತಮಾಷೆ ಮಾಡೋ ಹಾಗೆ ಕಾಡ್ತಾ ಇದೀನಾ? ಜಗಳ ಮಾಡೋದು ಟಿಆರ್‌ಪಿಗಾ? ನಾನು ನೋಡದನ್ನು ಬದಲಾಯಿಸಿಕೊಳ್ಳೋಕೆ ಆಗಲ್ಲ. ಬಿಗ್‌ಬಾಸ್ ಮೇಲೆ ಗೌರವ ಇಲ್ಲದ ವ್ಯಕ್ತಿನ ಏಕೆ ಕಳುಹಿಸುತ್ತಿದ್ದೀರಿ” ಎಂದು ಸುದೀಪ್ ಪ್ರಶ್ನೆ ಮಾಡಿದರು. ನಾನು ಮಾಡಿರೋದು ತಮಾಷೆಗೆ ಇದನ್ನು ಗಂಭೀರವಾಗಿ ಸ್ವೀಕರಿಸಬೇಡಿ’ ಎಂದು ಧನರಾಜ್ ಕೇಳಿಕೊಂಡರು.

    ಆ ಬಳಿಕ ಸುದೀಪ್ ನಮಗೂ ರೀಲ್ಸ್ ಮಾಡೋಕೆ ಬರುತ್ತೇರಿ ಎಂದು ಜೋರಾಗಿ ನಕ್ಕರು. ಆಗ ಧನರಾಜ್ ನಿಟ್ಟುಸಿರು ಬಿಟ್ಟರು. ಒಂದು ಕಡೆಯಿಂದ ಧನರಾಜ್ ಪತ್ನಿ ಅವರ ಪ್ರಶ್ನೆ ಹಾಗೂ ಸುದೀಪ್‌ ಅವರ ವರ್ತನೆಯನ್ನು ಕಂಡು ಜೋರಾಗಿ ಅಳಲು ಆರಂಭಿಸಿದರು. ನಂತರ ಇದು ತಮಾಷೆಗಾಗಿ ಎಂದು ಅವರಿಗೆ ತಿಳಿಯಿತು.

    ಧನರಾಜ್‌ಗೆ ಮಗು ಜನಿಸಿ ಇನ್ನೂ ಒಂದು ತಿಂಗಳೂ ಆಗಿಲ್ಲ. ಮಗು ಜನಿಸಿದ ಕೂಡಲೇ ಅವರು ಆಸ್ಪತ್ರೆಯಲ್ಲಿ ಇರುವಾಗಲೇ ಬಿಗ್‌ಬಾಸ್ ನಿಂದ ಆಫರ್ ಬಂದಿತ್ತು. ಮೊದಲಿಗೆ ಹೋಗುವುದೋ ಬೇಡವೋ ಎಂದುಕೊಂಡರು. ನಂತರ ಮಗಳ ಹುಟ್ಟಿದ ನಂತರ ಹೊಸ ಅವಕಾಶ ಸಿಕ್ಕಿದೆ. ಅವಳಿಗೋಸ್ಕರ ನಾನು ಬಿಗ್‌ಬಾಸ್‌ ಗೆ ಹೋಗುತ್ತೇನೆ ಎಂದರು. ಹೀಗಾಗಿ, ಇದಕ್ಕೆ ಒಪ್ಪಿಕೊಂಡರು. ನಂತರ ಒಂದು ತಿಂಗಳ ಮಗುವಿನ ಮುಖ ನೋಡಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟರು.

    Continue Reading

    BANTWAL

    ದೊಡ್ಮನೆಗೆ ಎಂಟ್ರಿ ಕೊಟ್ಟ ಕರಾವಳಿಯ ಖ್ಯಾತ ಯೂಟ್ಯೂಬರ್ ಧನರಾಜ್ ಆಚಾರ್ಯ

    Published

    on

    ಬಂಟ್ವಾಳ : ಖ್ಯಾತ ಯುಟ್ಯೂಬರ್ ಧನರಾಜ್ ಆಚಾರ್ಯ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.
    ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ‌ ಮಾಮೇಶ್ವರ ನಿವಾಸಿಯಾಗಿರುವ ಧನರಾಜ್ ಆಚಾರ್ಯ ತಮ್ಮ ಕಾಮಿಡಿ ಮ್ಯಾನರಿಸಂನಿಂದಲೇ ಫೇಮಸ್. ಹಾಸ್ಯಮಯ ವೀಡಿಯೋಗಳನ್ನು ಮಾಡಿ ಜನಮನಕ್ಕೆ ಹತ್ತಿರವಾಗಿದ್ದಾರೆ. ಜರ್ನಲಿಸಂ ಪದವೀಧರನಾಗಿರುವ ಧನರಾಜ್, ಆರಂಭದಲ್ಲಿ ಸಂಸಾರ ಜೋಡುಮಾರ್ಗ ತಂಡದ ಕಲಾವಿದನಾಗಿದ್ದು ಬಳಿಕ ಮೈಸೂರಿನ ರಂಗಾಯಣದಲ್ಲಿ ರಂಗಭೂಮಿ ಪದವಿಯನ್ನೂ ಪಡೆದಿದ್ದಾರೆ.

    ಟಿಕ್ ಟಾಕ್ ನಲ್ಲಿ ಕಾಮಿಡಿ ವೀಡಿಯೋ ಮಾಡಿ ಪ್ರಸಿದ್ದಿ ಪಡೆದಿದ್ದ ಧನರಾಜ್ ಬಳಿಕ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಕಾಮಿಡಿ ವಿಡಿಯೋಗಳನ್ನು ಮಾಡಿ ಖ್ಯಾತಿ ಗಳಿಸಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬಿತ್ತರವಾಗುವ ಗಿಚ್ಛಿಗಿಲಿಗಿಲಿ ಸೀಸನ್ 2 ರ ಸ್ಪರ್ಧಿಯಾಗಿಯೂ ಗಮನ ಸೆಳೆದಿದ್ದರು.


    ವಿವಾಹದ ಬಳಿಕವೂ ಪತ್ನಿ‌ ಪ್ರಜ್ಞಾ ಆಚಾರ್ಯ ಜೊತೆಗೂಡಿ ವೀಡಿಯೋಗಳನ್ನು ಮಾಡುತ್ತಿರುವ ಧನರಾಜ್ ಆಚಾರ್ಯ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

    Continue Reading

    LATEST NEWS

    Trending