DAKSHINA KANNADA
ಉಪ್ಪಿನಂಗಡಿ: ಜನ್ಮ ದಿನ ಆಚರಣೆಗೆ ಕಡವೆ ಹತ್ಯೆ! ಅರಣ್ಯಾಧಿಕಾರಿಗಳ ದಾಳಿ
ಉಪ್ಪಿನಂಗಡಿ: ಮಗನ ಬರ್ತಡೇಗಾಗಿ ರಕ್ಷಿಣಾರಣ್ಯದಿಂದ ಕಡವೆಯನ್ನು ಗುಂಡಿಕ್ಕಿ ಕೊಂದು ಅದರ ಮಾಂಸವನ್ನು ಫ್ರಿಡ್ಜ್ ನಲ್ಲಿ ದಾಸ್ತಾನು ಇರಿಸಲಾಗಿದ್ದ ಪ್ರಕರಣವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಹತ್ಯೆಗೆ ಬಳಸಲಾದ ಕೋವಿ ಮತ್ತು ಕಡವೆ ಮಾಂಸವನ್ನು ಸ್ವಾಧೀನಪಡಿಸಿಕೊಂಡಿದೆ.
ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ ಸುರೇಶ್ ಮತ್ತವರ ಸಹವರ್ತಿಗಳು ರಕ್ಷಿತಾರಣ್ಯದಲ್ಲಿದ್ದ ಕಡವೆಯೊಂದಕ್ಕೆ ಗುಂಡಿಕ್ಕಿ ಹತ್ಯೆಗೈದಿದ್ದರು. ಅದನ್ನು ಮಗನ ಹುಟ್ಟು ಹಬ್ಬದ ಔತಣ ಕೂಟಕ್ಕೆಂದು ಮಾಂಸ ಮಾಡಿ ಮನೆಯ ಪ್ರೀಝರ್ನಲ್ಲಿ ಇರಿಸಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ವಲಯ ಅರಣ್ಯಾಧಿ ಕಾರಿಗಳ ನಿರ್ದೇಶನದ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಯತೀಂದ್ರ ಇಲಾಖಾ ಸಿಬಂದಿ ಸುನಿಲ್, ಶಿವಾನಂದ ಅವರ ತಂಡ ಸುರೇಶ್ ಮನೆಗೆ ದಾಳಿ ನಡೆಸಿ ಸಂಗ್ರಹಿಸಿಟ್ಟ ಮಾಂಸ ಹಾಗೂ ಹತ್ಯೆಗೆ ಬಳಸಲಾದ ಕೋವಿಯನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಆರೋಪಿಗಳು ಗುಂಡ್ಯ ಹೊಳೆಯನ್ನು ಈಜಿ ದಾಟುವ ಮೂಲಕ ಪರಾರಿಯಾಗಿದ್ದಾರೆ. ವಲಯಾಧಿಕಾರಿಯಿಂದ ತನಿಖೆ ಉಪ್ಪಿನಂಗಡಿ ವಲಯ ಅರಣ್ಯಾಧಿ ಕಾರಿ ರಾಘವೇಂದ್ರ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
DAKSHINA KANNADA
ಪಣಂಬೂರು: ಮೀನುಗಾರಿಕೆ ಜೆಟ್ಟಿ ಕಾಮಗಾರಿ ಪ್ರಗತಿಯಲ್ಲಿ
ಪಣಂಬೂರು: ಕುಳಾಯಿ ಮೀನುಗಾರಿಕೆ ಜೆಟ್ಟಿ ಕಾಮಗಾರಿ ಪ್ರಗತಿಯಲ್ಲಿದೆ. ದಕ್ಷಿಣ ಬ್ರೇಕ್ವಾಟರ್ ಮತ್ತು ಉತ್ತರ ಬ್ರೇಕ್ವಾಟರ್ ನಿರ್ಮಾಣ ನಡೆಯುತ್ತಿದ್ದು ದಕ್ಷಿಣ ಬ್ರೇಕ್ವಾಟರ್ನ ಉದ್ದ 262 ಮೀ. ಪೂರ್ಣಗೊಂಡಿದೆ. ಉತ್ತರದ 831 ಮೀ. ಉದ್ದದಲ್ಲಿ 560 ಮೀ. ವರೆಗೆ ಭಾಗಶಃ ಪೂರ್ಣಗೊಂಡಿದೆ.
ದಕ್ಷಿಣದ ಬ್ರೇಕ್ವಾಟರ್ನಲ್ಲಿ ಟೆಟ್ರಾಪಾಡ್ಗಳನ್ನು ಇಡುವುದು ಗಣನೀಯವಾಗಿ ಪೂರ್ಣಗೊಂಡಿದೆ ಮತ್ತು ಉತ್ತರದ ಬ್ರೇಕ್ವಾಟರ್ನಲ್ಲಿ ಟೆಟ್ರಾಪಾಡ್ಗಳನ್ನು ಹಾಕಿ ಸುರಕ್ಷಿತಗೊಳಿಸಲಾಗಿದೆ. ಉತ್ತರದ ಬ್ರೇಕ್ ವಾಟರ್ ನಾಡದೋಣಿ ಮೀನುಗಾರಿಕೆಗೆ ಅನುಕೂಲಕರವಾಗಿಲ್ಲ. ಈ ನಿಟ್ಟಿನಲ್ಲಿ ವಿಸ್ತರಿಸುವಂತೆ ಮೀನುಗಾರರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸೂಕ್ತವಾಗಿ ಚರ್ಚಿಸಲು ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರ ನಿರ್ದೇಶನದಂತೆ, ಎನ್ಎಂಪಿಎ ಅಧ್ಯಕ್ಷ ಡಾ| ಎ.ವಿ.ರಮಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸ್ಥಳೀಯ ಮೀನುಗಾರರ ಕುಂದು ಕೊರತೆಗಳಿಗೆ ಸಂಬಂಧಿಸಿ ಶಾಸಕರಾದ ಡಾ|ಭರತ್ ವೈ. ಶೆಟ್ಟಿ, ಯಶಪಾಲ್ ಸುವರ್ಣ, ಸ್ಥಳೀಯ ಮೀನುಗಾರ ಸಮುದಾಯ, ತಾಂತ್ರಿಕ ತಜ್ಞ ಏಜನ್ಸಿಯ ಪ್ರಮುಖರು, ಎನ್ಐಟಿಕೆ ಪರಿಣಿತರು ಉಪಸ್ಥಿತರಿದ್ದರು.
ತಮ್ಮ ಬೇಡಿಕೆಯನ್ನು ಈಡೇರಿಸು ವವರೆಗೆ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಮೀನುಗಾರ ಮುಖಂಡರ ಆಗ್ರಹಿಸಿದ್ದಾರೆ. ಉತ್ತರದ 560 ಮೀಟರ್ ಬ್ರೇಕ್ ವಾಟರ್ಗೆ ಸೂಕ್ತ ರಕ್ಷಣೆ ಇಲ್ಲದೆ ಹೋದರೆ ಸಮುದ್ರದ ಅಲೆಗೆ ಕೊಚ್ಚಿಹೋಗುವ ಆತಂಕವಿದೆ ಎಂದು ಎನ್ಐಟಿಕೆ ಪರಿಣಿತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ನಡೆದಿರುವ ಬ್ರೇಕ್ ವಾಟರ್ ಭಾಗವನ್ನು ಟೆಟ್ರಾಪಾಡ್ ಹಾಕಿ ಸುರಕ್ಷಿತಗೊಳಿಸುವ ಅಗತ್ಯವಿದೆ ಎಂಬುದು ಪರಿಣಿತರು ವರದಿ ಮಂಡಿಸಿದ್ದಾರೆ.
DAKSHINA KANNADA
ಎಂಆರ್ಪಿಎಲ್ 2ನೇ ತ್ತೈಮಾಸಿಕ ಅವಧಿ ಫಲಿತಾಂಶ; ನಷ್ಟ ಎಷ್ಟು ಗೊತ್ತಾ ?
ಮಂಗಳೂರು: ಎಂಆರ್ಪಿಎಲ್ 2024-25ನೇ ಸಾಲಿನ 2ನೇ ತ್ತೈಮಾಸಿಕ ಅವಧಿ ಫಲಿತಾಂಶವನ್ನು ಪ್ರಕಟಿಸಿದ್ದು, ಕಂಪೆನಿ 682 ಕೋಟಿ ರೂ. ನಿವ್ವಳ ನಷ್ಟ ಗಳಿಸಿದೆ. ಕಂಪೆನಿಯು 2023-24ನೇ ಸಾಲಿನ ಇದೇ ಅವಧಿಯಲ್ಲಿ 1,059 ಕೋಟಿ ರೂ. ಲಾಭ ಗಳಿಸಿತ್ತು.
ಕಂಪೆನಿಯ ಒಟ್ಟು ಆದಾಯವು ಹಿಂದಿನ ಸಾಲಿನಲ್ಲಿ 22,844 ಕೋಟಿ ರೂ. ಇದ್ದುದು 28,786 ಕೋಟಿ ರೂ.ಗೆ ಏರಿಕೆಯಾಗಿದೆ. ಅರ್ಧವಾರ್ಷಿಕ ಅವಧಿಯಲ್ಲಿ ನೋಡಿದಾಗ ಒಟ್ಟು ಆದಾಯವು ಹಿಂದಿನ ಅವಧಿಯ 47,669 ಕೋಟಿ ರೂ.ನಿಂದ 56,075 ಕೋಟಿ ರೂ.ಗೆ ಏರಿಕೆ ಕಂಡಿದೆ. ಒಟ್ಟು ಲಾಭವು 3,164 ಕೋಟಿ ರೂ. ಇದ್ದುದು ಈ ಅರ್ಧವಾರ್ಷಿಕ ಅವಧಿಗೆ 940 ಕೋಟಿ ರೂ. ನಷ್ಟ ಅನುಭವಿಸಿದೆ. ಹಿಂದಿನ ಅವಧಿಯಲ್ಲಿ 2,072 ಕೋಟಿ ರೂ. ನಿವ್ವಳ ಲಾಭವಿದ್ದರೆ, ಈ ಬಾರಿ 617 ಕೋಟಿ ರೂ. ನಷ್ಟ ಉಂಟಾಗಿದೆ.
ಕಳೆದ ತ್ತೈಮಾಸಿಕದಲ್ಲಿ ಕಂಪೆನಿಯು ಅತ್ಯಧಿಕ ಕಚ್ಚಾತೈಲ ಸಂಸ್ಕರಣೆ ಮಾಡಿದೆ. ಅಲ್ಲದೆ ರಿಫೈನರಿ ಸಾಮರ್ಥ್ಯ ಬಳಕೆ ಈ ತ್ತೈಮಾಸಿಕದಲ್ಲಿ ಶೇ 118.3 ಆಗಿತ್ತು ಎಂದು ಪ್ರಕಟನೆ ತಿಳಿಸಿದೆ.
DAKSHINA KANNADA
ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ; ಸ್ಥಳೀಯರಿಂದ ರಕ್ಷಣೆ
ಸುಬ್ರಹ್ಮಣ್ಯ: ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಸ್ಥಳಿಯರು ರಕ್ಷಿಸಿದ ಘಟನೆ ಶುಕ್ರವಾರ (ಅ.18) ಬೆಳಗ್ಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಬಳಿ ನಡೆದಿದೆ.
ಬೆಂಗಳೂರಿನಿಂದ ಒಂಟಿಯಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದ ವೃದ್ಧರೋರ್ವರು ಸ್ನಾನಘಟ್ಟದ ಬಳಿ ನೀರಿಗೆ ಇಳಿದು ಬಳಿಕ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಸ್ಥಳದಲ್ಲಿದ್ದವರು ದೇವಳದ ಸಿಬಂದಿ ಲೋಕಾನಾಥ್ ಅವರಿಗೆ ಮಾಹಿತಿ ನೀಡಿದ್ದರು. ತತ್ಕ್ಷಣ ಅಲ್ಲಿಗೆ ಆಗಮಿಸಿದ ಲೋಕನಾಥ್ ಅವರು ಅಲ್ಲಿ ಅಂಗಡಿ ನಡೆಸುತ್ತಿರುವ ಗೋಪಾಲ್ ಹಾಗೂ ಇನ್ನೋರ್ವರ ಸಹಕಾರದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವೃದ್ಧರನ್ನು ನೀರಿನಿಂದ ಹೊರಕ್ಕೆ ಕರೆತಂದು, ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ.
ವೃದ್ಧರು ಮನೆಯವರ ಸ್ಪಷ್ಟ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಲಾಯಿತು. ರಕ್ಷಣೆ ವೇಳೆ ವೃದ್ಧ ವ್ಯಕ್ತಿ ನನ್ನನ್ನು ಯಾಕೆ ರಕ್ಷಿಸಿದ್ದೀರಿ, ನಾನು ಸಾಯಬೇಕು ಎಂದು ಹೇಳುತ್ತಿದ್ದರು. ಮನಸ್ಸಿಗೆ ಏನೋ ಬೇಜಾರಾಗಿ ಮನೆಯನ್ನು ಬಿಟ್ಟು ಒಂಟಿಯಾಗಿ ಬಂದಿದ್ದರು ಎಂದು ತಿಳಿದುಬಂದಿದೆ.
- LATEST NEWS6 days ago
‘ಸೆಕ್ಸ್’ ಗೆ ಅಡ್ಡಿಯಾದ ಇಬ್ಬರು ಮಕ್ಕಳನ್ನೇ ಹತ್ಯೆ ಮಾಡಿದ ಪಾಪಿ ತಾಯಿ.!
- BIG BOSS6 days ago
ಯಾರೂ ಊಹಿಸದ ವ್ಯಕ್ತಿಗೆ ಈ ವಾರ ಕಿಚ್ಚನ ಚಪ್ಪಾಳೆ, ಬಿಗ್ಬಾಸ್ ಮನೆಯಲ್ಲಿ ಇದೇ ಮೊದಲು
- LATEST NEWS6 days ago
ಹಿರಿಯಡ್ಕ: ಉದ್ಯಮಿ ಪ್ರಸನ್ನ ಶೆಟ್ಟಿ ತೀರ್ಥಹಳ್ಳಿಯ ವಸತಿ ಗೃಹದಲ್ಲಿ ಆತ್ಮಹ*ತ್ಯೆ
- FILM4 days ago
ಖ್ಯಾತ ಹಾಸ್ಯ ನಟ ಇನ್ನಿಲ್ಲ: ಅತುಲ್ ಪರ್ಚುರೆ ವಿಧಿವಶ