FILM
ರಾಷ್ಟ್ರಪ್ರಶಸ್ತಿ ವಿಜೇತ, ಖ್ಯಾತ ಸಂಗೀತ ನಿರ್ದೇಶಕನ ದಾಂಪತ್ಯ ಜೀವನದಲ್ಲಿ ಬಿರುಕು!
ಚೆನ್ನೈ : ಸೆಲೆಬ್ರಿಟಿಗಳ ಜೀವನದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಇತ್ತೀಚೆಗೆ ನಟಿ ಭಾಮಾ ತಾನು ಸಿಂಗಲ್ ಪೇರೆಂಟ್ ಎನ್ನುವ ಮೂಲಕ ಪತಿಯೊಂದಿಗೆ ತಾನು ಬೇರ್ಪಟ್ಟಿರುವ ವಿಚಾರ ಹೊರಹಾಕಿದ್ದರು. ಇದೀಗ ಖ್ಯಾತ ತಮಿಳು ಸಂಗೀತ ಸಂಯೋಜಕ ಜಿ.ವಿ. ಪ್ರಕಾಶ್ ಕುಮಾರ್ ಹಾಗೂ ಪತ್ನಿ ಗಾಯಕಿ ಸೈಂಧವಿ ವಿಚ್ಛೇದನದ ಬಗ್ಗೆ ಘೋಷಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗ :
ಜಿವಿ ಪ್ರಕಾಶ್ ಕುಮಾರ್ ಹಾಗೂ ಅವರ ಪತ್ನಿ ಸೈಂಧವಿ ಅವರು ದೂರವಾಗುತ್ತಿದ್ದಾರೆ. ಈ ಮೂಲಕ 11 ವರ್ಷಗಳ ದಾಂಪತ್ಯ ಜೀವನ ಅಂತ್ಯವಾಗಿದೆ. ವಿಚ್ಛೇದನ ಪಡೆಯುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಬಹಿರಂಗಪಡಿಸಿದ್ದಾರೆ.
‘ಸಾಕಷ್ಟು ಆಲೋಚಿಸಿ ನಾನು ಹಾಗೂ ಸೈಂಧವಿ ಬೇರೆ ಆಗುತ್ತಿದ್ದೇವೆ. 11 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡುತ್ತಿದ್ದೇವೆ. ನಮ್ಮ ಮಾನಸಿಕ ಆರೋಗ್ಯಕ್ಕಾಗಿ ಈ ನಿರ್ಧಾರ’ ಎಂದು ಪ್ರಕಾಶ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಈ ವೈಯಕ್ತಿಕ ಪರಿವರ್ತನೆಯ ಸಮಯದಲ್ಲಿ ನಮ್ಮ ಖಾಸಗಿತನಕ್ಕೆ ಬೆಲೆ ನೀಡಬೇಕು ಎಂದು ಮಾಧ್ಯಮಗಳು, ಸ್ನೇಹಿತರು ಮತ್ತು ಅಭಿಮಾನಿಗಳನ್ನು ನಾವು ದಯೆಯಿಂದ ಕೇಳುತ್ತೇವೆ. ನಾವು ಬೇರೆ ಬೇರೆ ಆಗಿ ಬೆಳೆಯುತ್ತಿದ್ದೇವೆ. ಇದು ಅತ್ಯುತ್ತಮ ನಿರ್ಧಾರ ಎಂದು ನಾವು ಭಾವಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಿಮ್ಮ ತಿಳುವಳಿಕೆ ಮತ್ತು ಬೆಂಬಲವು ಮುಖ್ಯ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : “ಮಮ್ಮುಟ್ಟಿ” ಸಿನೆಮಾದಲ್ಲಿ “ರಾಜ್ ಬಿ ಶೆಟ್ಟಿ” ಖದರ್ ! ‘ಟರ್ಬೊ’ ಟ್ರೈಲರ್ಗೆ ಫಿದಾ ಆದ ಸಿನಿಪ್ರಿಯರು
ರಾಷ್ಟ್ರಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ:
ಪ್ರಕಾಶ್ ಕುಮಾರ್ ಅವರು ಆಸ್ಕರ್ ವಿಜೇತ ಮ್ಯೂಸಿಕ್ ಡೈರೆಕ್ಟರ್ ಎಆರ್ ರೆಹಮಾನ್ ಅವರ ಸೋದರಳಿಯ. 2013ರಲ್ಲಿ ಪ್ರಕಾಶ್ ಅವರು ಬಾಲ್ಯದ ಗೆಳೆತಿ ಸೈಂಧವಿ ಅವರನ್ನು ಮದುವೆ ಆದರು. 2020ರಲ್ಲಿ ದಂಪತಿ ಹೆಣ್ಣು ಮಗುವನ್ನು ಸ್ವಾಗತಿಸಿದ್ದರು.
‘ಸೊರರೈ ಪೋಟ್ರು’, ‘ತಲೈವಿ’, ‘ಸೆಲ್ಫೀ’, ‘ಕ್ಯಾಪ್ಟನ್ ಮಿಲ್ಲರ್’, ‘ತೇರಿ’ ಸೇರಿ ಹಲವು ಸಿನಿಮಾಗಳಿಗೆ ಪ್ರಕಾಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದಾರೆ.
FILM
ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನ
ಬೆಂಗಳೂರು : ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ನಿಧನರಾಗಿದ್ದಾರೆ. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಅವರಿಗೆ 42 ವರ್ಷ ವಯಸ್ಸಾಗಿತ್ತು.
ದೀಪಕ್ ಅರಸ್ ಅವರಿಗೆ ಕಿಡ್ನಿ ವೈಫಲ್ಯ ಆಗಿತ್ತು. ಅದಕ್ಕೆ ಅವರು ಡಯಾಲಿಸಿಸ್ ಮಾಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ
ಬೆಂಗಳೂರಿನ ಆರ್ ಆರ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ದೀಪಕ್ ಸಾವನ್ನಪಿದ್ದಾರೆ.
‘ಮನಸಾಲಜಿ’, ‘ಶುಗರ್ ಫ್ಯಾಕ್ಟರಿ’ ಸಿನಿಮಾಗಳಿಗೆ ದೀಪಕ್ ನಿರ್ದೇಶನ ಮಾಡಿದ್ದರು. ದೀಪಕ್ ಅರಸ್ ಅವರಿಗೆ ಮದುವೆ ಆಗಿ ಇಬ್ಬರು ಮಕ್ಕಳು ಇದ್ದಾರೆ.
FILM
ಲಾಯರ್ ನಟನಾಗಿದ್ದು ಹೇಗೆ ? ‘ಅಣ್ಣಯ್ಯ’ ಹೀರೋ ವಿಕಾಸ್ ಬಗ್ಗೆ ಗೊತ್ತಾ!?
ಝೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಆರಂಭಗೊಂಡ ಅಣ್ಣಯ್ಯ ಧಾರಾವಾಹಿ ಈಗಾಗಲೇ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಾಲ್ವರು ತಂಗಿಯಂದಿರ ಮುದ್ದಿನ ಅಣ್ಣನ ಕಥೆ ಧಾರಾವಾಹಿಯ ಜೀವಾಳ. ಅಣ್ಣ ಶಿವು ಪಾತ್ರದಲ್ಲಿ ಮಿಂಚಿರೋದು ಯಾರು ಗೊತ್ತಾ!? ಅವರೇ ವಿಕಾಸ್ ಉತ್ತಯ್ಯ. ಅಣ್ಣಯ್ಯನಾಗಿ ತಮ್ಮ ಮನೋಜ್ಞ ಅಭಿನಯದ ಮೂಲಕ ಅವರು ಜನರಿಗೆ ಇಷ್ಟವಾಗಿದ್ದಾರೆ.
ಯಾರು ಈ ವಿಕಾಸ್?
ವಿಕಾಸ್ ಮೂಲತಃ ಕೊಡಗಿನವರು. ಆದರೆ, ನೆಲೆಯಾಗಿರೋದು ಬೆಂಗಳೂರಿನಲ್ಲಿ. ಚಿಕ್ಕ ವಯಸ್ಸಿನಿಂದಲೇ ನಟನಾಗಬೇಕೆಂಬ ಹಂಬಲ ಹೊತ್ತಿದ್ದ ಶಿವು, ವೃತ್ತಿಯಲ್ಲಿ ಅಡ್ವೊಕೇಟ್. ಆದರೆ, ಬಣ್ಣದ ಬದುಕು ಕೈ ಬೀಸಿತ್ತು. ಆನೆ , ಧ್ವಂದ್ವ ದ್ವಯಂ, ಮೇರಿ ಸಿನಿಮಾದಲ್ಲಿ ನಟಿಸಿದ್ದ ವಿಕಾಸ್ ಗೆ ಹೇಳಿಕೊಳ್ಳುವ ಯಶಸ್ಸು ಸಿಕ್ಕಿರಲಿಲ್ಲ. ಬಳಿಕ ಅವರು ಕಿರುತೆರೆಯತ್ತ ಮುಖ ಮಾಡಿದರು.
ವಿಕಾಸ್ – ನಿಶಾ ಜೋಡಿ :
ಅಣ್ಣಯ್ಯ ಧಾರಾವಾಹಿಯ ಮೂಲಕ ಜನಪ್ರಿಯರಾಗಿರೋ ವಿಕಾಸ್, ಈ ಧಾರಾವಾಹಿಯಲ್ಲಿ ಬಡ ಅಣ್ಣನಾಗಿ, ಹೃದಯವಂತ ಯುವಕನಾಗಿ ಮಿಂಚಿದ್ದಾರೆ. ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿ. ಪಾರು ಪಾತ್ರದಲ್ಲಿ ನಿಶಾ ಮಿಂಚಿದ್ದು, ಪ್ರಮೋದ್ ಶೆಟ್ಟಿ ನಿರ್ಮಾಣದ ಈ ಧಾರಾವಾಹಿಗೆ ಉತ್ತಮ್ ಮಧು ನಿರ್ದೇಶನವಿದೆ.
ಇದನ್ನೂ ಓದಿ : ಲಾಯರ್ ಜಗದೀಶ್ಗೆ ಸೀರೆ ಕೊಡ್ತೀನಿ ಉಟ್ಕೋ ಎಂದ ಮಾನಸ.. ಬೈಗುಳಗಳ ಸುರಿಮಳೆ
ಸದ್ಯ ಪಾರು ಶಿವುಗೂ ಮದುವೆಯಾಗಿದೆ. ಸಿದ್ದಾರ್ಥ್ ಎಂಬಾತನನ್ನು ಪ್ರೀತಿಸುತ್ತಿದ್ದ ಪಾರು ಮೋಸ ಹೋಗುತ್ತಾಳೆ. ಮರಳಿ ಬಂದ ಪಾರುವನ್ನು ಶಿವು ಮದುವೆಯಾಗುವಂತಾಗುತ್ತೆ. ಒಲ್ಲದ ಮನಸ್ಸಿನಿಂದ ಪಾರು, ಶಿವು ಕಟ್ಟೋ ತಾಳಿಗೆ ತಲೆ ಬಾಗಿದ್ದು, ಆತನ ಮನೆಗೆ ಬಂದಿದ್ದಾಳೆ. ಶಿವು ಬಗ್ಗೆ ಕೊಂಚವೂ ಪ್ರೀತಿ ಇರದ ಆಕೆ ಆತನನ್ನು ಪತಿ ಎಂದು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಹಾಗಾದ್ರೆ ಮುಂದಿನ ಕಥೆ ಏನು? ಮುಗ್ದ ಶಿವುವನ್ನು ಒಪ್ಪುತ್ತಾಳಾ? ಸಿದ್ದಾರ್ಥ್ ಬರ್ತಾನಾ? ಇತ್ಯಾದಿ ಕುತೂಹಲವಿದೆ.
BIG BOSS
ಲಾಯರ್ ಜಗದೀಶ್ಗೆ ಸೀರೆ ಕೊಡ್ತೀನಿ ಉಟ್ಕೋ ಎಂದ ಮಾನಸ.. ಬೈಗುಳಗಳ ಸುರಿಮಳೆ
ಬಿಗ್ ಬಾಸ್ ಸೀಸನ್ 11ರ ಮನೆ ರಣರಂಗವಾಗಿದ್ದು ಕೆಲ ಸ್ಪರ್ಧಿಗಳೆಲ್ಲ ಲಾಯರ್ ಜದೀಶ್ ಮೇಲೆ ಮುಗಿಬೀಳುತ್ತಿದ್ದಾರೆ. ಗಲಾಟೆ ಅತಿರೇಕದ ಎಲ್ಲೆ ಮೀರಿದ್ದು ಯಾವ್ಯಾವ ಪದಗಳನ್ನು ಬಳಕೆ ಮಾಡುತ್ತಾರೆ ಎನ್ನುವುದೇ ಊಹೆ ಮಾಡೋಕೆ ಆಗುತ್ತಿಲ್ಲ. ಅವರು ಆಡಿದ ಕೆಲ ಮಾತುಗಳು ಸಂಘರ್ಷ ಜೊತೆಗೆ ಮಹಿಳೆಯರು, ಪುರುಷರು ಎನ್ನದೇ ಬಳಕೆ ಮಾಡಲಾಗುತ್ತಿದೆ. ವಿಡಿಯೋವೊಂದರಲ್ಲಿ ಜಗದೀಶ್ ಅವರಿಗೆ ಸೀರೆ ಕೊಡುತ್ತೀನಿ ಹುಟ್ಕೋ ಎಂದು ಹೇಳಲಾಗಿದೆ.
ಬಿಗ್ ಹೌಸ್ನಲ್ಲಿ ಹೆಣ್ಮುಕ್ಕಳು ಬಗ್ಗೆ ಮಾತನಾಡಿದ್ದಕ್ಕೆ ಗಲಾಟೆ ಆರಂಭ ಆಗಿರುವುದು ವಿಡಿಯೋದಿಂದ ಗೊತ್ತಾಗುತ್ತದೆ. ಇದಕ್ಕೆ ವಾಹಿನಿ ‘ಮನೆ ಮಂದಿ ಮನಸನ್ನು ಕೆಡಿಸ್ತಾ ಜಗದೀಶ್ ಮಾತು?’ ಎಂದು ಟ್ಯಾಗ್ಲೈನ್ ಬರೆಯಲಾಗಿದೆ. ವಿಡಿಯೋದಲ್ಲಿ ಗೋಲ್ಡ್ ಸುರೇಶ್ ಮಹಿಳೆಯರ ಬಗ್ಗೆ ಮಾತನಾಡಬೇಡ ಎಂದಿದ್ದಾರೆ. ಇದಕ್ಕೆ ಫುಲ್ ಗರಂ ಆಗಿರುವ ಜಗದೀಶ್ ನಾನು ಮಾತನಾಡುತ್ತೇನೆ, ಏನೋ ಇವಾಗ? ಅಂತ ಪ್ರಶ್ನಿಸಿದ್ದಾರೆ. ಈ ವೇಳೆ ಜಗದೀಶ್ ಮೇಲೆ ಚೈತ್ರಾ, ಮಾನಸ ಸೇರಿ ಕೆಲವು ಮುಗಿಬಿದ್ದಿದ್ದಾರೆ.
ತಾಕತ್ ಇದ್ದರೇ ಏನ್ ಮಾಡ್ಕೊಂತಿಯಾ ಮಾಡ್ಕೊ ಹೋಗು ಎಂದು ಚೈತ್ರಾಗೆ ಜಗದೀಶ್ ಗದರಿದ್ದಾನೆ. ಕೈಕೈ ಮಿಲಾಯಿಸುವ ಮಟ್ಟಿಗೆ ಎಲ್ಲರು ಗುಂಪಾಗಿ ಜಗಳ ಮಾಡಿದ್ದಾರೆ. ಆಗ ನಿನ್ನಂತವರನ್ನು ಎಷ್ಟು ಜನ ನೋಡಿಲ್ಲ.. ಎಂದು ಜಗದೀಶ್ ಮಾನಸ ನೋಡಿಕೊಂಡು ಹೇಳುತ್ತಾರೆ. ಇದಕ್ಕೆ ಸೀರೆ ಕೊಡ್ತೀನಿ ಉಟ್ಕೋ ಮತ್ತೆ ಎಂದು ಜಗದೀಶ್ಗೆ ಹೇಳಿದ್ದಾರೆ. ಇದೇ ವೇಳೆ ಹಂಸಾ ಅವರು ಹೆಂಗಸು ಆಗೋಕೆ ಯೋಗ್ಯತೆ ಇಲ್ಲ ಅವನಿಗೆ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ಜಗದೀಶ್ ಗಟ್ಟಿಧ್ವನಿಯಲ್ಲಿ ಮಾನಸಗೆ ಗದರಿದರು. ಇದರಿಂದ ತೀವ್ರ ಕೋಪದಲ್ಲೇ ಬಿಗ್ಬಾಸ್ ಕ್ಯಾಮೆರಾ ಮುಂದೆ ಬಂದ ಹಂಸಾ ಅವರು ಇದಕ್ಕೆ ಏನಾದರೂ ಸಲ್ಯೂಷನ್ ಬೇಕೆಬೇಕು ಎಂದು ಕೇಳಿದ್ದಾರೆ.
- FILM6 days ago
ಮಾಲ್ಡೀವ್ಸ್ ದ್ವೀಪದಲ್ಲಿ ಹನಿಮೂನ್..! ಜಾಲಿ ಮೂಡ್ನಲ್ಲಿ ತರುಣ್ ಸುಧೀರ್ ದಂಪತಿ
- LATEST NEWS5 days ago
‘ಸೆಕ್ಸ್’ ಗೆ ಅಡ್ಡಿಯಾದ ಇಬ್ಬರು ಮಕ್ಕಳನ್ನೇ ಹತ್ಯೆ ಮಾಡಿದ ಪಾಪಿ ತಾಯಿ.!
- FILM7 days ago
ಮಗುವಿನ ಮುಖ ರಿವೀಲ್ ಮಾಡಿದ ಕವಿತಾ-ಚಂದನ್ ದಂಪತಿ
- BIG BOSS5 days ago
ಯಾರೂ ಊಹಿಸದ ವ್ಯಕ್ತಿಗೆ ಈ ವಾರ ಕಿಚ್ಚನ ಚಪ್ಪಾಳೆ, ಬಿಗ್ಬಾಸ್ ಮನೆಯಲ್ಲಿ ಇದೇ ಮೊದಲು