Connect with us

    DAKSHINA KANNADA

    ಪುತ್ತೂರು: ಮುಸ್ಲಿಂ ಸಹೋದರರ ಗೋ ಪ್ರೇಮ-ಯಾರಿಗೂ ಬೇಡವಾದ ಗಂಡು ಕರುಗಳಿಗೂ ಹಟ್ಟಿಯಲ್ಲೇ ಆಶ್ರಯ

    Published

    on

    ಪುತ್ತೂರು: ಗೋಹತ್ಯೆ ರಾಜ್ಯ-ದೇಶದಲ್ಲಿ ಚರ್ಚೆಯಾಗುತ್ತಿರುವ ಬಹುದೊಡ್ಡ ವಿಚಾರ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಗೋಹತ್ಯೆ ನಿಷೇಧ ಬಗ್ಗೆ ಕಾನೂನು ಜಾರಿ ಮಾಡಿವೆ.

    ಆದರೂ ಅಕ್ರಮ ಗೋಸಾಗಾಟ, ಗೋಹತ್ಯೆ ನಡೆಯುತ್ತಿದೆ. ಈ ಮಧ್ಯೆ ಮುಸ್ಲಿಂ ಸಹೋದರರು ಜಾನುವಾರುಗಳನ್ನು ತಮ್ಮ ಕುಟುಂಬಸ್ಥರಂತೆ ಸಾಕಿ, ಸಲಹುತ್ತಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಆರ್ಲಪದವಿನ ನೆಲ್ಲಿತ್ತಿಮಾರು ಎಂಬಲ್ಲಿನ ಉಮ್ಮರ್ ಜನಪ್ರಿಯ, ಎನ್.ಎಸ್. ಇಸುಬು ಮತ್ತು ರಝಾಕ್ ಎಂಬ ಮೂವರು ಹೈನುಗಾರಿಕೆ ಮಾಡುವ ಸಹೋದರರು.

    ಇವರು ತಮ್ಮ ಅಜ್ಜನ ಕಾಲದಿಂದಲೂ ಜಾನುವಾರುಗಳನ್ನು ಸಾಕುವುದನ್ನೇ ತಮ್ಮ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಊರಿನವರಿಗೆ ಬೇಡವಾದ ಗಂಡು ಕರುಗಳಿಗೂ ಇವರೇ ಆಶ್ರಯದಾತರು.

    ಈ ಸಹೋದರರು ಸದ್ಯ 14 ಜಾನುವಾರುಗಳನ್ನು ಸಾಕುತ್ತಿದ್ದಾರೆ.

    ಇದರಲ್ಲಿ ಬಹುತೇಕ ಎತ್ತುಗಳೇ ಆಗಿವೆ. ಗಿರ್, ಕೊರಿಯನ್ ಮಿಕ್ಸ್, ಸಾಹೀವಾಲಾ, ಎಚ್.ಎಫ್., ದೇಶೀಯ ತಳಿಗಳ ಹತ್ತು ಹಲವು ಜಾನುವಾರುಗಳನ್ನು ಇವರು ಸಾಕುತ್ತಿದ್ದಾರೆ.

    ಈ ಸಹೋದರರ ತಂದೆ ದಿ. ಮೊದು ಕುಂಞಿ ಹಿಂದೆ ಕಂಬಳಗಳಲ್ಲಿ ಕೋಣಗಳನ್ನು ಓಡಿಸುತ್ತಿದ್ದರು. ಅವರಿಗೆ ಜಾನುವಾರುಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವರು ಕೂಡಾ ಅನೇಕ ಜಾನುವಾರುಗಳನ್ನು ಸಾಕಿ ಸಲಹುತ್ತಿದ್ದರು. ತಂದೆಯ ಹವ್ಯಾಸವನ್ನೇ ಈ ಸಹೋದರರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

    ಎಲ್ಲಾ ಗೋವುಗಳಿಗೂ ಮುದ್ದಾದ ಹೆಸರುಗಳನ್ನಿಟ್ಟು, ಪ್ರತಿಯೊಂದಕ್ಕೂ ಅವುಗಳಿಗೆ ಬೇಕಾದ ವಿವಿಧ ಬಗೆಯ ಹಿಂಡಿ, ಹುಲ್ಲು, ಒಣಹುಲ್ಲು ಮುಂತಾದ ಆಹಾರಗಳನ್ನು ಪೂರೈಸುವುದರಲ್ಲೇ ಖುಷಿ ಕಾಣುತ್ತಿದ್ದಾರೆ.

    ಬಿಸಿಲಿನ ಝಳ ಹೆಚ್ಚಾದರೆ ಗೋವುಗಳಿಗೂ ತಣ್ಣೀರಿನ ಸ್ನಾನ ಮಾಡಿಸುತ್ತಾರೆ. ಪ್ರತಿನಿತ್ಯ ಪ್ರತಿಯೊಂದು ಗೋವಿನ ಆರೋಗ್ಯವನ್ನೂ ಪರೀಕ್ಷಿಸಿ, ರೋಗಗಳು ಬಾಧಿಸದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ.

    ಅವುಗಳನ್ನೂ ತಮ್ಮ ಕುಟುಂಬದ ಸದಸ್ಯರಂತೆ ಅಕ್ಕರೆಯಿಂದ ಸಾಕುತ್ತಿರುವುದು ಜಾನುವಾರುಗಳ ಮೇಲೆ ಅವರಿಗಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ. ಇಲ್ಲಿರುವ ಬೃಹತ್ ಗಾತ್ರದ ಗಿರ್ ಹೋರಿ, ಮುರುಗಾ, ಜಾನುವಾರು ಪ್ರದರ್ಶನಗಳಲ್ಲಿಯೂ ಜನಮನ ಸೆಳೆಯುತ್ತವೆ.

    ಎರಡು ಜತೆ ಓಟದ ಕೋಣಗಳಿವೆ
    ಉಮ್ಮರ್ ಜನಪ್ರಿಯ ಅವರು ವಿವಿಧ ತಳಿಯ ಜಾನುವಾರುಗಳೊಂದಿಗೆ ಕಂಬಳದ ಕೋಣಗಳನ್ನೂ ಸಾಕುತ್ತಿದ್ದಾರೆ.

    ಪ್ರಸ್ತುತ ಅವರಲ್ಲಿ ಎರಡು ಜತೆ ಓಟದ ಕೋಣಗಳಿದ್ದು, ಯಾವುದೇ ಭಾಗದಲ್ಲಿ ಕಂಬಳ ನಡೆದರೂ ‘ಕಾಟಿ-ಕೊಕ್ಕೆ’ ಹೆಸರಿನ ಕೋಣಗಳ ಜೋಡಿ ಅಲ್ಲಿ ಭಾಗವಹಿಸುತ್ತದೆ.

    ಕಂಬಳದ ಕೋಣಗಳನ್ನು ಸಾಕಲು ಹೆಚ್ಚು ಖರ್ಚಾಗುತ್ತದೆ. ಆದರೂ ಕಂಬಳದ ಕೋಣಗಳನ್ನು ಸಾಕುವುದರ ಜೊತೆ ಜೊತೆಗೆ ಜಾನುವಾರುಗಳ ಸಾಕಣೆಯನ್ನೂ ಮುಂದುವರಿಸಿದ್ದಾರೆ.

    ಗಿರ್ ತಳಿಯ ಹೋರಿಯೊಂದನ್ನು ಪೇಟೆಗೆ ಬಿಟ್ಟಿದ್ದಾರೆ
    ಉಮ್ಮರ್ ಜನಪ್ರಿಯ ಅವರ ಗೋ ಪ್ರೇಮ ಊರಿನ ಮಂದಿಗೆ ಅಚ್ಚುಮೆಚ್ಚು. ಅದಕ್ಕೆ ಉದಾಹರಣೆಯೆಂಬಂತೆ ಆರ್ಲಪದವಿನಲ್ಲಿರುವ ಹೊಟೇಲ್, ಅಂಗಡಿ ಮುಂಗಟ್ಟುಗಳ ಮಾಲಕರು ಒಂದು ಗೋವನ್ನು ಪೇಟೆಯಲ್ಲಿ ಬಿಡುವಂತೆ ಉಮ್ಮರ್ ಅವರನ್ನು ಒತ್ತಾಯಿಸಿದ್ದರು.

    ಅಂತೆಯೇ, ಗಿರ್ ತಳಿಯ ಹೋರಿಯೊಂದನ್ನು ಪೇಟೆಯಲ್ಲಿ ಬೀಡು ಬಿಟ್ಟಿದ್ದಾರೆ. ಈ ಹೋರಿ ಊರಿನವರು ನೀಡುವ ಆಹಾರಗಳನ್ನು ತಿಂದುಕೊಂಡು ಹಾಯಾಗಿದೆ. ಈ ಹೋರಿ ಪ್ರತೀ ಎರಡು ದಿನಗಳಿಗೊಮ್ಮೆ ಉಮ್ಮರ್ ಅವರ ಮನೆಗೆ ತಪ್ಪದೆ ಬಂದು ಹೊಟ್ಟೆ ತುಂಬಾ ತಿಂದು ಮರಳುತ್ತದೆ.

    ಗೋಹತ್ಯೆಗೆ ಒಯ್ಯುವ ಜಾನುವಾರುಗಳನ್ನು ರಕ್ಷಿಸಿದರಷ್ಟೇ ಸಾಲದು. ಅವುಗಳನ್ನು ಈ ರೀತಿ ಅಕ್ಕರೆಯಿಂದ ಪೋಷಿಸುವುದೂ ಕೂಡ ಅತ್ಯಗತ್ಯ ಎಂಬುದನ್ನು ಉಮ್ಮರ್ ಸಹೋದರರು ತೋರಿಸಿಕೊಟ್ಟಿದ್ದಾರೆ.

    ಇವರ ದನವನ್ನೂ ಕದ್ದೊಯ್ದ ಖದೀಮರು
    ಉಮ್ಮರ್ ಅವರ ಮನೆಯಲ್ಲಿ ಸಾಕುತ್ತಿದ್ದ ದನವೊಂದನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದ ಸಂದರ್ಭ ಅವರ ತಾಯಿ ಬೀಪಾತುಮ್ಮ ಚಿಂತೆಗೀಡಾಗಿದ್ದರು. ಅದು ಅವರ ತಾಯಿಯ ಪ್ರೀತಿಯ ಗೋವು ಆಗಿತ್ತು.

    ಸುಮಾರು ಒಂದು ವಾರ ಊಟವನ್ನೂ ಮಾಡದೆ ಕಳೆದುಹೋದ ಗೋವಿನ ಕುರಿತು ವಿಚಾರಿಸುತ್ತಾ, ದುಃಖ ತೋಡಿಕೊಳ್ಳುತ್ತಿದ್ದರು ಎಂದು ಗೋವಿನ ಮೇಲಿನ ತಾಯಿಯ ಪ್ರೀತಿಯನ್ನು ಉಮ್ಮರ್ ಸ್ಮರಿಸುತ್ತಾರೆ.

    Click to comment

    Leave a Reply

    Your email address will not be published. Required fields are marked *

    BANTWAL

    ಬಸ್ಸಿನಿಂದ ಪರಿಸರ ಮಾಲಿನ್ಯ; ಸಾರ್ವಜನಿಕರ ಆಕ್ರೋಶ

    Published

    on

    ಬಂಟ್ವಾಳ: ಮಂಗಳೂರು ವಿಭಾಗಕ್ಕೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ಸೊಂದು ಮಂಗಳೂರು – ಧರ್ಮಸ್ಥಳ ಸಂಚರಿಸುವ ವೇಳೆಯಲ್ಲಿ  ಜೀವಕ್ಕೆ ಹಾಗೂ ಪರಿಸರಕ್ಕೆ ಹಾನಿಕಾರಕವಾದ ಕಪ್ಪು ಹೊಗೆಯನ್ನು ಹೊರ ಹಾಕುತ್ತಿದ್ದು  ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


    ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ಸರಿಯಾದ ನಿರ್ವಹಣೆ ಇಲ್ಲದ ಬಸ್ಸುಗಳನ್ನು ರಸ್ತೆಯಲ್ಲಿ ಓಡಿಸುತ್ತಿದ್ದು, ಇದರಿಂದ ಜನರಿಗೆ ಆಗುತ್ತಿರುವ ತೊಂದರೆಗಳನ್ನು ಶೀಘ್ರವೇ ನಿವಾರಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

    ಕಪ್ಪು ಹೋಗೆ ಹೊರ ಸೂಸುವ ಬಸ್ಸಿನ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ.

    Continue Reading

    DAKSHINA KANNADA

    ಬಸ್ಸುಗಳು ಮುಖಾಮುಖಿ; ದಂಪತಿಗೆ ಗಾಯ

    Published

    on

    ನೆಲ್ಯಾಡಿ: ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಬಸ್ಸ್ ಹಾಗೂ ಧರ್ಮಸ್ಥಳದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ಸ್ ಅಡ್ಡಹೊಳೆ ಪೆಟ್ರೋಲ್ ಬಂಕ್ ಬಳಿ ಮುಖಾಮುಖಿ ಡಿಕ್ಕಿಹೊಡೆದು ವಾಹನಗಳು ಜಖಂಗೊಂಡಿದೆ.


    ಹಾಸನ ಮೂಲದ ದಂಪತಿಗಳಾದ ನಾಗೇಂದ್ರ ಪ್ರಸಾದ್ (60) ಮತ್ತು ಭಾರತಿ (54) ಎಂಬುವವರಿಗೆ ಗಾಯಗಳಾಗಿದ್ದು, ಶಿರಾಡಿಯ ಆಂಬ್ಯುಲೆನ್ಸ್ ಮೂಲಕ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
    ಇತ್ತೀಚೆಗೆ ಅತೀ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಚಾಲಕನ ಅತಿವೇಗ ಹಾಗೂ ಅಜಾಗರುಕತೆ ಮುಖ್ಯ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ನೆಲ್ಯಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Continue Reading

    DAKSHINA KANNADA

    ಕಾರಿನಡಿಗೆ ಬಿದ್ದು ಬಾಲಕ ಸಾ*ವು

    Published

    on

    ಕೊಕ್ಕಡ: ಮನೆಯ ಅಂಗಳದಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕ ಕಾರಿನಡಿಗೆ ಬಿದ್ದು, ಮೃ*ತಪಟ್ಟ ದಾ*ರುಣ ಘಟನೆ ನೆಲ್ಯಾಡಿಯ ಕೊಕ್ಕಡದಲ್ಲಿ ನಿನ್ನೆ (ಅ.1) ನಡೆದಿದೆ.


    ನವಾಫ್ (10) ಮೃ*ತಪಟ್ಟ ಬಾಲಕ. ಮನೆಗೆ ಬಂದಿದ್ದ ಅತಿಥಿಗಳು ಹೊರಡುವ ಸಂದರ್ಭದಲ್ಲಿ ಕಾರನ್ನು ಹಿಂದಕ್ಕೆ ತೆಗೆಯುವಾಗ , ಹಿಂಬದಿಯೇ ನಿಂತಿದ್ದ ನವಾಫ್ ಕಾರಿ*ನಡಿಗೆ ಬಿದ್ದದ್ದಾನೆ. ಅವನ ಮೇಲೆಯೇ ಕಾರು ಹರಿದ ಪರಿಣಾಮವಾಗಿ ತಲೆ ಹಾಗೂ ಕಾಲಿಗೆ ಗಂ*ಭೀರ ಗಾಯಗಳಾಗಿ ಸಾವ*ನ್ನಪ್ಪಿದ್ದಾನೆ.
    ನವಾಫ್ ಕಾರಿನ ಹಿಂದೆ ನಿಂತಿರುವುದು ಯಾರಿಗೂ ತಿಳಿಯದ ಕಾರಣ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃ*ತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending