Connect with us

    DAKSHINA KANNADA

    ವೆನ್‌ಲಾಕ್ ಆಸ್ಪತ್ರೆಯಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸುವ ಬಗ್ಗೆ ಶಾಸಕರ ಚರ್ಚೆ..!

    Published

    on

    ಮಂಗಳೂರು: ಕೋವಿಡ್ 19 ಸೋಂಕು ಎಲ್ಲೆಡೆ ತೀವ್ರವಾಗಿ ಹಬ್ಬುತ್ತಿರುವುದರಿಂದ ಮಂಗಳೂರು ಹೊರವಲಯದ ಉತ್ತರ ಶಾಸಕ ಡಾ।ಭರತ್ ಶೆಟ್ಟಿ ವೈ ಮತ್ತು ದಕ್ಷಿಣ ಶಾಸಕ ವೇದವ್ಯಾಸ ಕಾಮತ್  ಮಂಗಳೂರಿನ ಸರ್ಕಾರಿ ಕೋವಿಡ್ ಆಸ್ಪತ್ರೆ ಯಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸುವ ಬಗ್ಗೆ  ವೆನ್ಲಾಕ್ ಆಸ್ಪತ್ರೆಯಲ್ಲಿ ಚರ್ಚೆ  ನಡೆಸಿದರು. ಈ ವೇಳೆ ಆಸ್ಪತ್ರೆಯ ಶುಶ್ರೂಷೆ  ವಿಭಾಗಕ್ಕೆ ಭೇಟಿ ನೀಡಿದರು. ಕೌನ್ಸಿಲರ್ ಜತೆ ಮಾತುಕತೆ ನಡೆಸಿದರು. ರೋಗಿಗಳ ಸಂಬಂಧಿಗಳು ಗೊಂದಲಕ್ಕೆ ಒಳಗಾಗದಂತೆ ಸೂಕ್ತ ಮಾಹಿತಿ ನೀಡುವಂತೆ ಸೂಚಿಸಿದರು ಪರಿಣಿತ ಮಾಹಿತಿ ಸಂವಹನಕಾರರನ್ನು ನೇಮಿಸಲು ಸಲಹೆ ನೀಡಿದರು. ಮಂಗಳೂರಿನ ವೆನ್ ಲಾಕ್ ನಲ್ಲಿ ಯಾವುದೇ ಮಾಹಿತಿ ಸಿಗದೆ ರೋಗಿಗಳು,ಅವರ ಕುಟುಂಬಸ್ಥರು  ಆತಂಕಕ್ಕೆ ಒಳಗಾಗಿದ್ದಾರೆ. ಇದರ ನಡುವೆ ಇಲ್ಲಿನ ಸಿಬ್ಬಂದಿಗಳ  ಅತಿರೇಕದ ವರ್ತನೆಯಿಂದ ಜನ ವೆನ್ ಲಾಕ್ ಬಗ್ಗೆ   ಭೀತಿ ಇಟ್ಟುಕೊಂಡಿದ್ದು  ಜನರ ಮನಸ್ಸಿನಲ್ಲಿ ಹೇಸಿಗೆ ಹುಟ್ಟುವ ಪರಿಸ್ಥಿತಿ ಬರುತ್ತಿದೆ.ಇದನ್ನು ಹೋಗಲಾಡಿಸಲು ಜನಸಂಪರ್ಕ ( ಹೆಲ್ಪ್ ಡೆಸ್ಕ್) ಕೂಡಲೇ ರಚಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಸೂಚಿಸಿದ್ದಾರೆ.

    ಜನರಿಗೆ ಮೊದಲೇ ವೆನ್ ಲಾಕ್ ಬಗ್ಗೆ ತಪ್ಪು ಕಲ್ಪನೆಯಿದೆ.ಇಲ್ಲಿನ ಸಿಬಂದಿಗಳ ಅತಿರೇಕದ ,ಉಡಾಫೆಯ ವರ್ತನೆ ಮತ್ತಷ್ಟು ತಪ್ಪು ಕಲ್ಪನೆಗೆ ಕಾರಣವಾಗುತ್ತದೆ.

    ಡಾಕ್ಟರ್ ಮತ್ತು ನರ್ಸ್ ಗಳು ,ಇಲ್ಲಿನ ವಾರ್ಡನ್ ಗಳು ಸರಿಯಾಗಿ ರೋಗಿಗಳ ಸಂಬಂದಿಗಳೊಂದಿಗೆ ತಾಳ್ಮೆ ಯಿಂದ ವರ್ತಿಸಿ ದಾಗ ಒಂದಿಷ್ಟು ಭರವಸೆ ಮೂಡಿಸುವ ಕೆಲಸವಾಗುತ್ತದೆ.

    ವೆನ್ ಲಾಕ್ ನಲ್ಲಿ ಇಡೀ ದಿನ ಅಲೆದಾಡಿಸುವುದನ್ನು ಕೈ ಬಿಡಿ ಸರಿಯಾದ ಮಾಹಿತಿ ನೀಡಿ ಅವರಿಗೆ ಬೇಕಾದ ಸೌಲಭ್ಯ,ಬೇಕಾದ ಕೆಲಸ ಆಗುವ ಹಾಗೆ ಮಾಡಿ.ಇದಕ್ಕಿಂತ ಹೆಚ್ಚಾಗಿ ಅವರು  ಏನೂ ಕೇಳುವುದಿಲ್ಲ.

    1. ರೋಗಿಗಳು ಬಂದಾಗ ಮಾಹಿತಿ ಪಡೆದು ಅವರಿಗೆ ಬೇಕಾದ ಸ್ಥಳಕ್ಕೆ ತಲುಪಿಸುವ ಯೋಜನೆ ರೂಪಿಸಿ.

    2.ಕಡ್ಡಾಯವಾಗಿ ಹೆಲ್ಪ್ ಲೈನ್ ಡೆಸ್ಕ್ ಸ್ಥಾಪಿಸಿ ,ಕೌನ್ಸಿಲಿಂಗ್ ಮಾಡಿ

    3.ರೋಗಿ ಸಂಬಂಧಿಗಳು ತೀರಾ ಕೆಟ್ಟದಾಗಿ ವರ್ತಿಸಿದರೂ ಸರಕಾರದ ಭಾಗವಾಗಿರುವ ವೈದ್ಯರು ಒತ್ತಡದಲ್ಲಿದ್ದರೂ  ತಾಳ್ಮೆಕಳೆದುಕೊಳ್ಳುವುದು  ಸರಿಯಲ್ಲ.

    ಕನಿಷ್ಟ ರೋಗಿಯ ಆರೋಗ್ಯದ ಬಗ್ಗೆ ಮಾಹಿತಿ ಕೊಡುತ್ತಾ ಇದ್ದಾಗ ಅವರಿಗೂ ನೆಮ್ಮದಿ ಸಿಗುತ್ತದೆ.

    4.ಅನಾವಶ್ಯಕ ವಾಗಿ ರೋಗಿಗಳಿಗೆ  ಹೆದರಿಸುವ ,ರೋಗಿಗಳ ಬಗ್ಗೆ ಅನಾವಶ್ಯಕ ಮಾಹಿತಿ ನೀಡಬೇಡಿ.

    5.ವೈದ್ಯರನ್ನು ರೋಗಿಗಳು ಪೂರ್ಣವಾಗಿ ನಂಬಿರುವುದರಿಂದ ಸ್ವಲ್ಪ ದಕ್ಕೆಯಾದರೂ ರೋಗಿಗಳ ಕಡೆಯವರು ಆಕ್ರೋಶಕ್ಕೆ ಒಳಗಾಗುವುದು ಸಾಮಾನ್ಯ.ಇದನ್ನು ಗಮನದಲ್ಲಿಟ್ಟು ,ತಾಳ್ಮೆ ಕಳೆದುಕೊಳ್ಳದಿರಿ ಎಂದು ಮನವಿ ಮಾಡಿದ್ದಲ್ಲದೆ  ಇದನ್ನೆಲ್ಲ ನಿರ್ವಹಿಸಲು ಹೆಲ್ಪ್ ಡೆಸ್ಕ್ ಸ್ಥಾಪನೆ ಅತ್ಯಾವಶ್ಯಕ ಎಂದು ಹೇಳಿದರು.

    ಚರ್ಚಾಕೂಟದಲ್ಲಿ ಡಿಎಚ್ ಒ ಡಾ. ಕಿಶೋರ್ ಕುಮಾರ್,  ಡಿಎಂಒ ಡಾ.ಸದಾಶಿವ ಉಪಸ್ಥಿತರಿದ್ದರು.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಜು. 1 ರಿಂದ ಗ್ರಾಮ ಪಂಚಾಯಿತಿಯಲ್ಲೇ ಜನನ, ಮರಣ ಪ್ರಮಾಣ ಪತ್ರ ಲಭ್ಯ

    Published

    on

    ಬೆಂಗಳೂರು: ಜುಲೈ 1 ರಿಂದ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿಯೇ ಜನನ, ಮರಣ ಪ್ರಮಾಣ ಪತ್ರ ಲಭ್ಯವಿರಲಿದೆ. ರಾಜ್ಯದಲ್ಲಿ ಜುಲೈ 1ರಿಂದ ಜಾರಿಗೆ ಬರುವಂತೆ ಜನನ ಅಥವಾ ಮರಣ ಸಂಭವಿಸಿದ 30 ದಿನಗಳ ಒಳಗೆ ನೋಂದಣಿ ಮಾಡಿ ಪ್ರಮಾಣ ಪತ್ರ ವಿತರಿಸುವ ಅಧಿಕಾರವನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ನೀಡಲಾಗಿದೆ.

    ಜನನ, ಮರಣಗಳ ಮುಖ್ಯ ನೋಂದಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದು, ಜನನ, ಮರಣ ಘಟನೆಗಳು ಸಂಭವಿಸಿದ 30 ದಿನಗಳವರೆಗಿನ ಪ್ರಕರಣಗಳಲ್ಲಿ ನೋಂದಾಯಿಸಲು ಪಂಚಾಯಿತಿ ಕಾರ್ಯದರ್ಶಿ ಹಾಗೂ 30 ದಿನಗಳಿಂದ ಒಂದು ವರ್ಷದ ವರೆಗಿನ ಪ್ರಕರಣಗಳಲ್ಲಿ ಗ್ರಾಪಂ ಆಡಳಿತ ಅಧಿಕಾರಿಗಳನ್ನು ಜನನ, ಮರಣ ನೋಂದಣಾಧಿಕಾರಿಗಳನ್ನಾಗಿ ಆದೇಶ ಹೊರಡಿಸಲಾಗಿದೆ.

    ಜನನ, ಮರಣ ನಡೆದ 21 ದಿನಗಳ ಒಳಗೆ ನೋಂದಣಿ ಮಾಡಿ ಉಚಿತವಾಗಿ ಒಂದು ಪ್ರಮಾಣ ಪತ್ರ ವಿತರಿಸಬೇಕು. 21 ರಿಂದ 30 ದಿನಗಳ ನಡುವೆ ನೋಂದಾಯಿಸಿದಲ್ಲಿ ಎರಡು ರೂಪಾಯಿ ಶುಲ್ಕ, 30 ದಿನಗಳಿಂದ ಒಂದು ವರ್ಷದ ವರೆಗಿನ ಪ್ರಕರಣಗಳಲ್ಲಿ 5 ರೂ. ಶುಲ್ಕ ಪಡೆದು ನೋಂದಣಿ ಮಾಡಿಸಬಹುದು. ಒಂದು ವರ್ಷದ ಬಳಿಕ ನೋಂದಣಿ ಮಾಡಿದರೆ ಪ್ರಥಮ ದರ್ಜೆ ದಂಡಾಧಿಕಾರಿ ಆದೇಶದ ಮೇರೆಗೆ 10 ರೂಪಾಯಿ ವಿಳಂಬ ಶುಲ್ಕ ಪಡೆದು ನೋಂದಣಿ ಮಾಡಿಸಬಹುದು.

    ವಿವರಗಳಿಗಾಗಿ ಇ-ಜನ್ಮ ಸಹಾಯವಾಣಿ ಸಂಖ್ಯೆ 1800 425 6578ಗೆ ಸಂಪರ್ಕಿಸಬಹುದಾಗಿದೆ.

    Continue Reading

    DAKSHINA KANNADA

    ಡಿಸಿಎಂ ಡಿಕೆ ಶಿವಕುಮಾರ್ ಕುಕ್ಕೆ ಕ್ಷೇತ್ರಕ್ಕೆ ಭೇಟಿ

    Published

    on

    ಮಂಗಳೂರು : ಕುಟುಂಬ ಸಮೇತರಾಗಿ ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಮುಂಜಾನೆ ಆಗಮಿಸಿದ್ದ ಡಿ.ಕೆ.ಶಿವಕುಮಾರ್ ನೇರವಾಗಿ ಕುಕ್ಕೆಗೆ ಆಗಮಿಸಿ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    ಪತ್ನಿ ಹಾಗೂ ಮಗಳ ಜೊತೆ ಆಗಮಿಸಿದ್ದ ಡಿಕೆಶಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದ್ದು, ಮಹಾ ಪೂಜೆಯಲ್ಲೂ ಭಾಗಿಯಾಗಿದ್ದಾರೆ. ಕುಕ್ಕೆ ಕ್ಷೇತ್ರಕ್ಕೆ ಆಗಮಿಸಿದ್ದ ಡಿಸಿಎಂಗೆ ಕುಕ್ಕೆ ದೇವಸ್ಥಾನದ ಆಡಳಿತ ಮಂಡಳಿಯಿಂದ ಭವ್ಯ ಸ್ವಾಗತ ನೀಡಲಾಗಿತ್ತು.

    ಇದನ್ನೂ ಓದಿ : ಅಂಗಾರಕ ಸಂಕಷ್ಟಿ ದಿನ ಗಣೇಶನಿಗೆ ಈ ರೀತಿ ಪೂಜೆ ಮಾಡಿದ್ರೆ ಸಂಕಷ್ಟಗಳೆಲ್ಲಾ ನಿವಾರಣೆ ಆಗುತ್ತದೆ..!

    ವಾದ್ಯಘೋಷ ಹಾಗೂ ಕುಂಭ ಕಳಶದೊಂದಿಗೆ ಡಿಸಿಎಂ ಅವರನ್ನು ಸ್ವಾಗತಿಸಿ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಗಿತ್ತು. ಡಿಕೆಶಿ ಕುಟುಂಬ ಹಲವಾರು ವರ್ಷಗಳಿಂದ ಕುಕ್ಕೆ ಕ್ಷೇತ್ರದಲ್ಲಿ ಸೇವೆಯನ್ನು ನೀಡುತ್ತಿದ್ದಾರೆ.

    Continue Reading

    DAKSHINA KANNADA

    ಅಂಗಾರಕ ಸಂಕಷ್ಟಿ ದಿನ ಗಣೇಶನಿಗೆ ಈ ರೀತಿ ಪೂಜೆ ಮಾಡಿದ್ರೆ ಸಂಕಷ್ಟಗಳೆಲ್ಲಾ ನಿವಾರಣೆ ಆಗುತ್ತದೆ..!

    Published

    on

    ಮಂಗಳೂರು: ಮಂಗಳವಾರ ಬರುವ ಸಂಕಷ್ಟಿಯನ್ನು ಅಂಗಾರಕ ಸಂಕಷ್ಟಿ ಎಂದು ಕರೆಯಲಾಗುತ್ತದೆ. ಈ ದಿನ ಉಪವಾಸ ಮಾಡಿ ವ್ರತ ಆಚರಣೆ ಮಾಡಿದರೆ ಜೀವನದಲ್ಲಿರುವ ಸಮಸ್ಯೆಗಳೆಲ್ಲಾ ಮಾಯವಾಗುತ್ತೆ ಎನ್ನಲಾಗುತ್ತದೆ. ಈ ದಿನ ಗಣೇಶನ ಪೂಜೆ ಮಾಡುವುದು ಹೇಗೆ ಎಂಬುದು ಇಲ್ಲಿದೆ.

    ಈ ದಿನ ಚಂದ್ರ ಹಾಗೂ ಗಣೇಶನ ಆರಾಧನೆ ಮಾಡುವುದು ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ. ಸಂಕಷ್ಟ ಚತುರ್ಥಿ ವ್ರತ ಚಂದ್ರ ದರ್ಶನ ಆಗದಿದ್ದರೆ ಅಪೂರ್ಣ ಎನ್ನಲಾಗುತ್ತದೆ. ಈ ಬಾರಿ ಚಂದ್ರ ರಾತ್ರಿ 10.12 ನಿಮಿಷಕ್ಕೆ ಉದಯಿಸಲಿದ್ದು, ಚಂದ್ರನ ದರ್ಶನ ಮಾಡಿ ಉಪವಾಸ ಪೂರ್ಣಗೊಳಿಸಬೇಕು. ಮಂಗಳವಾರ ಅಂದರೆ ಅಂಗಾರಕ ಸಂಕಷ್ಟಿಯ ದಿನ ಗಣೇಶನ ವ್ರತಾಚಾರಣೆ ಹಾಗೂ ಉಪವಾಸ ಮಾಡುವುದು ಇಡೀ ವರ್ಷದಲ್ಲಿ ಬರುವ ಸಂಕಷ್ಟ ಚತುರ್ಥಿ ಆಚರಣೆ ಮಾಡುವುದಕ್ಕೆ ಸಮ ಎನ್ನಲಾಗುತ್ತದೆ.

    ಅಂಗಾರಕ ಎಂದರೆ ಮಂಗಳಕರ ಎಂದು ಅರ್ಥ. ಈ ಸಂಕಷ್ಟಿ ಆಚರಣೆ ಮಾಡುವುದರಿಂದ ಜೀವನದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ ಹಾಗೂ ಇರುವ ಸಮಸ್ಯೆಗಳು ಸಹ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗೆಯೇ ನಾವು ಮಾಡಿಕೊಂಡ ಸಂಕಲ್ಪಗಳು ಸಹ ಈಡೇರುತ್ತದೆ ಎನ್ನಲಾಗುತ್ತದೆ.

    ಪೂಜೆ ಮಾಡುವುದು ಹೇಗೆ?

    ಅಂಗಾರಕ ಸಂಕಷ್ಟಿಯ ದಿನ ಕೆಂಪು ಬಟ್ಟೆ ಮೇಲೆ ಗಣೇಶನ ವಿಗ್ರಹ ಅಥವಾ ಫೋಟೋವನ್ನು ಪ್ರತಿಷ್ಠಾಪನೆ ಮಾಡಬೇಕು. ನಂತರ ದೇವರಿಗೆ ಹೂವುಗಳನ್ನು ಅರ್ಪಣೆ ಮಾಡಿ. ಮಲ್ಲಿಗೆ ಹೂವಿನ ಅರ್ಪಣೆ ಮಾಡುವುದು ಶ್ರೇಷ್ಠ ಎನ್ನಲಾಗುತ್ತದೆ.

    ನಂತರ ಗರಿಕೆಯನ್ನು ಅರ್ಪಣೆ ಮಾಡಬೇಕು. ನೈವೇದ್ಯಕ್ಕೆ ಲಡ್ಡು ಅಥವಾ ಮೋದಕ ಇದ್ದರೆ ಬಹಳ ಉತ್ತಮ. ಈ ಎರಡು ವಸ್ತುಗಳು ಗಣೇಶನಿಗೆ ಇಷ್ಟ. ಹಾಗೆಯೇ ದೇವರಿಗೆ ತುಪ್ಪದ ದೀಪ ಹಚ್ಚಿ, ಗಣೇಶ ಸ್ತುತಿ ಪಠಿಸಿ ಆರತಿ ಮಾಡಿ. ಅಲ್ಲದೇ ಈ ದಿನ ಪೂರ್ತಿ ಉಪವಾಸ ಇದ್ದು, ರಾತ್ರಿ ಚಂದ್ರ ದರ್ಶನ ಮಾಡಿ ಆಹಾರ ಸೇವಿಸಿ.

    Continue Reading

    LATEST NEWS

    Trending