NATIONAL
ಶ್ವಾನ ನೆಗೆದು ಗರ್ಭಪಾತ; ಮಾಲಿಕನಿಗೆ 10 ಲಕ್ಷ ದಂಡ
ಮಂಗಳೂರು/ಚೀನಾ: ಪ್ರಶಾಂತತೆಗಾಗಿ ಮನೆಯ ಹೊರಗಡೆ ವಾಕಿಂಗ್ ಮಾಡುತ್ತಿದ್ದ ಯಾನ್(41) ಎಂಬಾಕೆಯ ಮೇಲೆ ಗೋಲ್ಡನ್ ರಿಟ್ರೈವರ್ ಶ್ವಾನ ಒಮ್ಮೆಯೇ ನೆಗೆದಿದ್ದು ಘಟನೆಯಿಂದ ಆಕೆಯ ಗರ್ಭಪಾತವಾದ ಘಟನೆ ಚೀನಾದ ಶಾಂಘೈನಲ್ಲಿ ನಡೆದಿದೆ.
ರಸ್ತೆಯಲ್ಲಿ ಯಾನ್ ಎಂಬ ಮಹಿಳೆ ವಾಕಿಂಗ್ ಮಾಡುತ್ತಿದ್ದ ವೇಳೆ ಏಕಾಏಕಿ ಬಂದ ನಾಯಿಯೊಂದು ಆಕೆಯ ಮೇಲೆ ದಾಳಿ ಮಾಡಿದೆ. ಘಟನೆಯಿಂದಾಗಿ ಮಹಿಳೆಯ ಕಿಬ್ಬೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಆಸ್ಪತ್ರಗೆ ಧಾವಿಸಿದ್ದಾಳೆ. ವೈದ್ಯರು ಆಕೆಯನ್ನು ಪರಿಶೀಲನೆ ನಡೆಸಿ ಗರ್ಭಪಾತ ಆಗಿರುವ ವಿಚಾರವನ್ನು ತಿಳಿಸಿದ್ದಾರೆ. ಈ ವಿಚಾರ ಇಡೀ ಕುಟುಂಬವೇ ಆಘಾತಕ್ಕೊಳಗಾಗಿತ್ತು.
ಮದುವೆಯಾಗಿ ವರ್ಷಗಳು ಕಳೆದಿದ್ದರೂ ಮಕ್ಕಳಾಗಿರದ ಯಾನ್ಗೆ ಐವಿಎಫ್ ಮೂಲಕ ಗರ್ಭಧಾರಣೆಗೆ ಪ್ರಯತ್ನ ಮಾಡಲಾಗಿತ್ತು. ಇದರಿಂದಾಗಿ ಬಹಳ ವರ್ಷದ ಬಳಿಕ ಆಕೆ ಗರ್ಭಿಣಿಯಾಗಿದ್ದಳು. ಮಗುವಿಗೆ ಜನ್ಮ ನೀಡುವುದಾಗಿ ಬಹಳ ನಿರೀಕ್ಷೆಯನ್ನಿಟ್ಟುಕೊಂಡಿದ್ದಳು. ಆದರೆ ವಿಧಿಯಾಟ ಬೇರೆನೇ ಆಗಿದೆ. ಆಕೆಯ ಕನಸೆಲ್ಲಾ ನುಚ್ಚು ನೂರಾಗಿದೆ.
ಒಮ್ಮೆಲೇ ನಡೆದ ಶ್ವಾನದ ದಾಳಿಯಿಂದಾಗಿ, ಗಾಬರಿಗೊಂಡ ಯಾನ್ ಹಿಂದಕ್ಕೆ ಬಿದ್ದಳು. ಇದರಿಂದ ಆಕೆಯ ಸೊಂಟಕ್ಕೆ ಪೆಟ್ಟು ಬಿದ್ದಿದ್ದು ಗರ್ಭಪಾತಕ್ಕೆ ಮುಖ್ಯ ಕಾರಣವಾಗಿದೆ. “ನಾನು 4 ತಿಂಗಳ ಗರ್ಭಿಣಿ. ಶ್ವಾನ ನನ್ನ ಮೇಲೆ ನೆಗೆದು ಹಾರಿದ ನಂತರ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೂ ನನ್ನ ಮಗುವನ್ನು ಉಳಿಸಲಾಗಲಿಲ್ಲ” ಎಂದು ಯಾನ್ ಅಳುತ್ತಾ ವರದಿಯೊಪ್ಪಿಸಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಶ್ವಾನ ಮಾಲಿಕ ಲೀ ವಿರುದ್ಧ ಯಾನ್ ಕೋರ್ಟ್ ಮೆಟ್ಟಿಲೇರಿದ್ದು , ಚೀನಾ ಕಾಯ್ದೆ ಪ್ರಕಾರ, ಶ್ವಾನದಿಂದ ಉಂಟಾದ ಗರ್ಭಪಾತಕ್ಕೆ ಮಾಲಿಕನು 90,000 ಯುವಾನ್ (10,63,652 ರೂಪಾಯಿ) ಪರಿಹಾರ ನೀಡಬೇಕೆಂದು ಆದೇಶ ನೀಡಿದೆ.
LATEST NEWS
ತಡವಾಗಿ ಬಂದಿದ್ದಕ್ಕೆ ಬೈದ ಮಹಿಳೆ; ಆತ್ಮಹ*ತ್ಯೆ ಮಾಡಿಕೊಂಡ ಡೆಲಿವರಿ ಬಾಯ್
ಚೆನ್ನೈ: ಇತ್ತೀಚೆಗೆ ಆತ್ಮಹ*ತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಸಣ್ಣ ಪುಟ್ಟ ವಿಷಯಗಳಿಗೂ ಜೀವಾಂ*ತ್ಯಗೊಳಿಸುವವರ ಸಂಖ್ಯೆ ಹೆಚ್ಚು. ಮಹಿಳೆಯೊಬ್ಬರು ಬೈದರೆಂಬ ಕಾರಣಕ್ಕೆ ಮನನೊಂದು ಯುವಕನೋರ್ವ ಆತ್ಮಹ*ತ್ಯೆ ಮಾಡಿಕೊಂಡಿರುವ ಆಘಾ*ತಕಾರಿ ಘಟನೆ ನಡೆದಿದೆ. ತಮಿಳುನಾಡಿನ ಕೊಳತ್ತೂರಿನಲ್ಲಿ ಈ ದುರಂ*ತ ಸಂಭವಿಸಿದೆ.
ಈತ ತಡವಾಗಿ ಡೆಲಿವರಿ ಮಾಡಿದ್ದಕ್ಕೆ ಮಹಿಳೆಯೊಬ್ಬಳು ಬಾಯಿಗೆ ಬಂದಂತೆ ಬೈದಿದ್ದಕ್ಕೆ ಮನನೊಂದು ಆತ್ಮಹ*ತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ. ಜೆ.ಪವಿತ್ರನ್ ಮೃ*ತ ಯುವಕ. ಈತ ಬಿಕಾಂ ವಿದ್ಯಾರ್ಥಿಯಾಗಿದ್ದು, ಸಂಜೆಯ ಹೊತ್ತಿನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಡೆಲಿವರಿ ತಡವಾಯಿತೆಂದು ಬೈದ ಮಹಿಳೆ :
ದಿನಸಿ ಸಾಮಾನುಗಳನ್ನು ತಲುಪಿಸಲು ಹೋದಾಗ ಮಹಿಳೆಯೊಬ್ಬರು ತನ್ನನ್ನು ನಿಂದಿಸಿದ್ದರಿಂದ ಮನನೊಂದ ತಾನು ಈ ಕ್ರಮ ಕೈಗೊಂಡಿರುವುದಾಗಿ ಯುವಕ ಡೆ*ತ್ ನೋಟ್ನಲ್ಲಿ ಬರೆದಿದ್ದ ಎನ್ನಲಾಗಿದೆ. ಮನೆಯ ಅಡ್ರಸ್ ಸಿಗದೇ ಇದ್ದ ಕಾರಣ ದಿನಸಿ ತಲುಪಿಸುವಷ್ಟರಲ್ಲಿ ತಡವಾಯಿತು. ಇದರಿಂದ ಕೋಪಗೊಂಡ ಮಹಿಳೆ ಡೆಲಿವರಿ ಕಂಪನಿಗೆ ದೂರು ನೀಡಿ, ಈ ಯುವಕನನ್ನು ಮತ್ತೆ ಡೆಲಿವರಿಗಾಗಿ ಕಳುಹಿಸಬೇಡಿ ಎಂದಿದ್ದರು ಎನ್ನಲಾಗಿದೆ.
ಎರಡು ದಿನಗಳ ನಂತರ, ಶುಕ್ರವಾರ(ಸೆ.13) ಕೆಲಸ ಕಳೆದುಕೊಂಡ ಯುವಕ ಮಹಿಳೆಯ ಮನೆಗೆ ಕಲ್ಲು ಎಸೆದು ಕಿಟಕಿಯ ಗಾಜನ್ನು ಒಡೆದಿದ್ದಾನೆ. ಈ ಹಿನ್ನೆಲೆಯಲ್ಲಿ ಮಹಿಳೆ ಕೊರಟ್ಟೂರು ಪೊಲೀಸರಿಗೆ ದೂರು ನೀಡಿದ್ದು, ಸಿಎಸ್ಆರ್ ಜಾರಿ ಮಾಡಲಾಗಿತ್ತು.
ಇದನ್ನೂ ಓದಿ : ಟಿಆರ್ಪಿಯಲ್ಲಿ ಯಾವ ಧಾರಾವಾಹಿಗೆ ಯಾವ ಸ್ಥಾನ ಗೊತ್ತಾ!?
ಇದಲ್ಲದೇ, ಯುವಕನ ಪೋಷಕರಿಗೆ ಕರೆ ಮಾಡಿ ಎಚ್ಚರಿಕೆ ನೀಡಿ ಬಿಡಲಾಗಿತ್ತು ಎನ್ನಲಾಗಿದೆ. ಇದರಿಂದ ಮನನೊಂದ ಯುವಕ ಮಂಗಳವಾರ(ಸೆ.17) ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ.
LATEST NEWS
ಗಂಡನ ಮೈಮೇಲಿದೆ ಬ್ರಹ್ಮರಾಕ್ಷಸ; ಬೆತ್ತಲೆ ಪೂಜೆ ಮಾಡುವಂತೆ ಪತ್ನಿಗೆ ಕಿರುಕು*ಳ ನೀಡಿದ ಇಬ್ಬರು ಅರೆಸ್ಟ್
ಮಂಗಳೂರು/ಕೇರಳ : ಮಹಿಳೆಯರ ಮೇಲಿನ ದೌರ್ಜ*ನ್ಯ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಅತ್ಯಾಚಾ*ರ, ಲೈಂ*ಗಿಕ ದೌರ್ಜನ್ಯ ಪ್ರಕರಣಗಳೂ ಅಲ್ಲಲ್ಲಿ ಕೇಳಿ ಬರುತ್ತಿವೆ. ಇದೀಗ ಮತ್ತೊಂದು ಕೃ*ತ್ಯ ನಡೆದಿದೆ.
ಗಂಡನ ಮೇಲೆ ಬ್ರಹ್ಮರಾಕ್ಷಸ ಮೆಟ್ಟಿಕೊಂಡಿದೆ ಎಂದು ಹೇಳಿ ಹೆಂಡತಿಗೆ ಬಲವಂತವಾಗಿ ವಿಚಿತ್ರವಾದ ಪೂಜೆ ಮಾಡುವಂತೆ ಒತ್ತಾಯಿಸಲಾಗಿದೆ. ಕೇರಳದ ಕೋಝಿಕ್ಕೋಡ್ನಲ್ಲಿ ಈ ಘಟನೆ ನಡೆದಿದ್ದು ಇಬ್ಬರನ್ನು ಬಂಧಿಸಲಾಗಿದೆ. ಆಕೆಯ ಪತಿ ಶಮೀರ್ ಮತ್ತು ಆತನ ಸ್ನೇಹಿತ ಪ್ರಕಾಶನ್ ಬಂಧಿತರು.
ಬೆತ್ತಲೆ ಪೂಜೆ ಮಾಡಲು ಒತ್ತಾಯ :
ಮಹಿಳೆ ತನ್ನ ಮೂವರು ಹೆಣ್ಣು ಮಕ್ಕಳೊಂದಿಗೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಪತಿ ಶಮೀರ್ ಆಗಾಗ್ಗೆ ಮನೆಗೆ ಬಂದು ಪತ್ನಿಯ ಮೇಲೆ ದೈಹಿಕ ಹ*ಲ್ಲೆ ನಡೆಸುತ್ತಿದ್ದನಂತೆ.
ಇದೇ ವಿಚಾರವನ್ನು ಮುಂದಿಟ್ಟುಕೊಂಡು ಲಾಭ ಮಾಡಿಕೊಳ್ಳಲು ತಾನು ಮಂತ್ರವಾದಿ ಎಂದು ಪತಿಯ ಸ್ನೇಹಿತ ಪ್ರಕಾಶನ್ ಎಂಟ್ರಿ ಕೊಟ್ಟಿದ್ದಾನೆ. ಮಹಿಳೆಗೆ ಕಾಲ್, ಮೆಸೇಜ್ ಮಾಡಿ ಕೌಟುಂಬಿಕ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾನೆ. ಗಂಡನ ದೇಹದಲ್ಲಿ ದುಷ್ಟಶಕ್ತಿ ಇದೆ. ಹೀಗಾಗಿ ಸಮಸ್ಯೆಯುಂಟಾಗಿದೆ. ಅಲ್ಲದೇ, ಪೂಜೆಗಾಗಿ ಸಂತ್ರಸ್ತೆ ಬೆತ್ತಲಾಗಬೇಕು ಎಂದೂ ಹೇಳಿದ್ದಾನೆ. ಇದಕ್ಕೆ ಆಕೆ ಒಪ್ಪದಿದ್ದಾಗ ಪತಿಯ ಮೂಲಕ ಬಲವಂತಪಡಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ಇದನ್ನೂ ಓದಿ : ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಗೆ ಕೊ*ಲೆ ಬೆದರಿಕೆ ಹಾಕಿದ ಮಹಿಳೆ
ಸದ್ಯ ಪೊಲೀಸರು ಗಂಡ ಹಾಗೂ ಮಂತ್ರವಾದಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಕೋಝಿಕ್ಕೋಡ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
NATIONAL
ವಿಶ್ವದ ಶ್ರೀಮಂತ ಭಿಕ್ಷುಕ ಇವರೇ ನೋಡಿ ! ಭರತ್ ಜೈನ್ ಒಟ್ಟು ಆಸ್ತಿ ಎಷ್ಟು ಗೊತ್ತಾ ???
ಮಂಗಳೂರು/ಮುಂಬೈ: ಭಿಕ್ಷಾಟನೆಯು ಬಡತನದ ಸಂಕೇತ ಎಂದು ಪರಿಗಣಿಸಲಾಗಿತ್ತು. ಅದರೆ ಅದು ಈಗ ವ್ಯಾಪರವಾಗಿದೆ. ವಿಶ್ವದಲ್ಲೇ ಅತ್ಯಂತ ಶ್ರೀಮಂತ ಭಿಕ್ಷುಕ ಎಂದೆನಿಸಿಕೊಂಡಿರುವ ಭರತ್ ಜೈನ್ ಬಗ್ಗೆ ನಿಮಗೆಷ್ಟು ಗೊತ್ತು ?
ಭಿಕ್ಷುಕನಾದವನು ದಿನದ ಹೊತ್ತಿನ ಊಟಕ್ಕೂ ಕಷ್ಟ ಪಡುವವನು. ಬಂದ ನೂರೋ,ಇನ್ನೂರೋ ಅವನ ನಿತ್ಯದ ಖರ್ಚಿಗೂ ಸಾಕಾಗದು. ಭಿಕ್ಷುಕ ಎಂದರೆ ಅವನು ಅವಿದ್ಯಾವಂತ, ಆದುದರಿಂದ ಬಡತನ ಅವನನ್ನು ಆವರಿಸುತ್ತದೆ. ವಿದ್ಯೆಯೂ ಇಲ್ಲದೆ, ಯಾವ ಕೆಲಸವೂ ಇಲ್ಲದೆ, ಏನೂ ದಾರಿ ತೋಚದ ಸಂದರ್ಭದಲ್ಲಿ ಹತಾಶೆಗೊಳಗಾಗಿ ಭಿಕ್ಷಾಟನೆಗೆ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾನೆ.
ಆದರೆ, ಭಿಕ್ಷಾಟನೆಯೂ ಲಾಭದಾಯಕವಾಗಿರುತ್ತದೆ ಎಂದರೆ ಅದು ನಂಬಲಾಗದ ಸತ್ಯ. ಭರತ್ ಜೈನ್ ಎಂಬಾತ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕನೆನಿಸಿಕೊಂಡಿದ್ದಾನೆ. ಮುಂಬೈನಲ್ಲಿರುವ ಜೈನ್ಗೆ 54 ವರ್ಷ ವಯಸ್ಸಾಗಿದ್ದು, 40 ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದಾನೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲು ನಿಲ್ದಾಣ ಅಥವಾ ಆಜಾದ್ ಮೈದಾನದಂತಹ ಪ್ರಮುಖ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಾ, ದಿನಕ್ಕೆ 2 ಸಾವಿರದಿಂದ 2,500 ಸಾವಿರ ರೂ.ವರೆಗೂ ಗಳಿಸುತ್ತಾನೆ ಎಂದು ವರದಿಯಾಗಿದೆ. ಯಾವುದೇ ರೀತಿಯ ರಜೆಯನ್ನೂ ತೆಗೆದುಕೊಳ್ಳದೆ ದಿನಕ್ಕೆ 10 ರಿಂದ 12 ಗಂಟೆಗಳ ಕಾಲ ಕೆಲಸ ಮಾಡುತ್ತಾನೆ
ಮುಂಬೈನ ಪರೇಲ್ನಲ್ಲಿ 2 ಬಿಎಚ್ಕೆ ಫ್ಲ್ಯಾಟ್ ಹೊಂದಿದ್ದು, ಅದರ ಬೆಲೆ 1.2 ಕೋಟಿ ರೂ. ಭರತ್ಗೆ ಪತ್ನಿ, ಇಬ್ಬರು ಮಕ್ಕಳು, ತಂದೆ ಹಾಗೂ ಸಹೋದರನೊಂದಿಗೆ ವಾಸಿಸುತ್ತಿದ್ದಾನೆ. ಕಾನ್ವೆಂಟ್ ಶಾಲೆಯಲ್ಲೇ ಮಕ್ಕಳು ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಕುಟುಂಬ ಸದಸ್ಯರು 30 ಸಾವಿರ ಬಾಡಿಗೆ ಕೊಡುತ್ತಾ ಸ್ಟೇಷನರಿ ಅಂಗಡಿ ನಡೆಸುತ್ತಿದ್ದಾರೆ.
ಜೈನ್ಗೆ ಭಿಕ್ಷಾಟನೆ ಎಂಬುದು ಕುಲ ಕಸುಬಂತಾಗಿದ್ದು, ಯಾವುದೇ ಕಾರಣಕ್ಕೂ ಅದನ್ನು ಬಿಡಲು ಇಷ್ಟವಿಲ್ಲವೆಂಬುವುದಾಗಿ ಅವನೇ ಹೇಳುತ್ತಾನೆ.
ಜೈನ್ ಮಾತ್ರವಲ್ಲ ಭಾರತದಲ್ಲಿ 1.5 ಕೋಟಿ ರೂ. ಆಸ್ತಿ ಹೊಂದಿರುವ ಸಂಭಾಜಿ ಕಾಳೆ, 1 ಕೋಟಿ ರೂ. ಆಸ್ತಿ ಹೊಂದಿರುವ ಲಕ್ಷ್ಮೀದಾಸ್ ಭಿಕ್ಷಾಟನೆ ಮಾಡಿಯೇ ಗಳಿಕೆಮಾಡಿದವರು ಎಂಬ ವರದಿಯೂ ದಾಖಲಾಗಿದೆ.
- DAKSHINA KANNADA6 days ago
ಫುಟ್ ಬೋರ್ಡ್ನಲ್ಲಿ ನೇತಾಡಿ ಪ್ರಯಾಣಿಸಿದ ವಿದ್ಯಾರ್ಥಿಗಳು; ಬಸ್ ಸೀಝ್
- LATEST NEWS3 days ago
ಆಪಲ್ ಮೊಬೈಲ್ ವಿರುದ್ಧ ಗ್ರಾಹಕರ ಪ್ರತಿಭಟನೆ
- International news3 days ago
ಖಾಸಗಿ ಬಾಹ್ಯಾಕಾಶ ನಡಿಗೆ ಯಶಸ್ವಿ; ಸುರಕ್ಷಿತವಾಗಿ ಭೂಮಿಗೆ ಮರಳಿದ ಗಗನಯಾತ್ರಿಗಳು
- BELTHANGADY6 days ago
ಬೆಳ್ತಂಗಡಿ: ತಂದೆ ತೀರ್ಪುಗಾರ… ಮಗಳಿಗೆ ಪ್ರಥಮ ಸ್ಥಾನ