Connect with us

LATEST NEWS

ಸುರತ್ಕಲ್‌ ಟೋಲ್‌ಗೇಟ್‌ನಲ್ಲಿ ಕಾರು ಚಾಲಕಿಯ ಮಾನ ಹಾನಿ: ಓರ್ವನ ಬಂಧನ

Published

on

ಮಂಗಳೂರು: ಕಾರು ಚಾಲಕಿಯೊಬ್ಬರಿಗೆ ಮಾನಸಿಕ ಕಿರುಕುಳ ನೀಡಿದ ಆರೋಪದಲ್ಲಿ ಸುರತ್ಕಲ್ ಟೋಲ್‌ಗೇಟ್‌ ಸಿಬ್ಬಂದಿಯೋರ್ವನನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಬಂಧಿತ ಆರೋಪಿಯನ್ನು ಯೋಗೀಶ್ ಎಂದು ಗುರುತಿಸಲಾಗಿದೆ.


ನ.27ರಂದು ರಾತ್ರಿ 9 ಗಂಟೆಗೆ ಸುಮಾರಿಗೆ ಸೀಮಾ ರಂಜಿತ್ ಶೆಟ್ಟಿ ಎಂಬವರು ತನ್ನ ಪತಿಯ ಜೊತೆ ಕಾರಿನಲ್ಲಿ ಸುರತ್ಕಲ್ ಟೋಲ್ ಗೇಟ್ ಬಳಿ ತಲುಪಿ,

ಎಡಬದಿ ರಸ್ತೆಯಲ್ಲಿ ತೆರಳಲು ಕಾರನ್ನು ಎಡಕ್ಕೆ ತಿರುಗಿಸಿದಾಗ ಟೋಲ್ ಸಿಬ್ಬಂದಿ ಯೋಗೀಶ್ ಎಂಬಾತ ಕಾರಿಗೆ ಅಡ್ಡ ನಿಂತು ಈ ರಸ್ತೆಯಲ್ಲಿ ಹೋಗಬಾರದು.

ಬಲಬದಿಯ ಗೇಟ್‌ಮೂಲಕ ತೆರಳುವಂತೆ ಒತ್ತಾಯಿಸಿದ. ಅಲ್ಲದೆ ಕಾರಿನ ಮುಂದೆ ಕೋನ್‌ಗಳನ್ನು ಅಡ್ಡವಾಗಿ ನಿಲ್ಲಿಸಿದ ಈ ರೀತಿ ಯಾಕೆ ಮಾಡುತ್ತೀರಿ?’

ಎಂದು ಸೀಮಾ ರಂಜಿತ್ ಶೆಟ್ಟಿ ಟೋಲ್ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಹೊಡೆಯುವ ರೀತಿಯಲ್ಲಿ ಬಂದು ಮೈಗೆ ಕೈ ಹಾಕಲು ಯತ್ನಿಸಿ ಮಾನ ಹಾನಿ ಮಾಡಿದ ಅಲ್ಲದೆ ತಡೆಯಲು ಮುಂದಾದ ಸೀಮಾ ಅವರ ಪತಿಗೂ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದೆ.

ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಯೋಗೀಶ್‌ನನ್ನು ಬಂಧಿಸಿದ್ದಾರೆ.

DAKSHINA KANNADA

ಉಪ್ಪಿನಂಗಡಿ : ಹೃದಯಾ*ಘಾತದಿಂದ ಮಲಗಿದ್ದಲ್ಲೇ ಇಹಲೋಕ ತ್ಯಜಿಸಿದ ಯುವಕ

Published

on

ಉಪ್ಪಿನಂಗಡಿ : ಕೋವಿಶೀಲ್ಡ್‌ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆಯಂತ ಅಡ್ಡ ಪರಿಣಾಮದ ಬಗ್ಗೆ ಒಪ್ಪಿಕೊಂಡಿದ್ದ ಸೀರಂ ಸಂಸ್ಥೆಯಿಂದ ಭಾರತದ ಜನರಲ್ಲಿ ಆತಂಕ ಹೆಚ್ಚಾಗಿದೆ. ಕೋವಿಡ್ ಲಸಿಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ ಆರೋಗ್ಯವಾಗಿದ್ದ ಯುವಕನೊಬ್ಬ ಹೃದಯಾ*ಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದಾರೆ.


ಗಾರೆ ಕೆಲಸ ಮಾಡಿಕೊಂಡು ಆರೋಗ್ಯವಾಗಿದ್ದ 27 ವರ್ಷದ ಜನಾರ್ದನ ಎಂಬ ಯುವಕ ಅಸು ನೀಗಿದ್ದಾನೆ. ಉಪ್ಪಿನಂಗಡಿ ಸಮೀಪದ ನಿನ್ನಿಕಲ್ಲು ನಿವಾಸಿಯಾಗಿದ್ದ ಜನಾರ್ದನ ಮೇಸ್ತ್ರಿಯಾಗಿ ಗಾರೆ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಕೆಲಸಕ್ಕೆ ರಜೆ ಹಾಕಿ ಬಂದಿದ್ದ ಅವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು.ಈ ವೇಳೆ ನಿದ್ರೆಗೆ ಜಾರಿದ ಜನಾರ್ದನ್ ಮತ್ತೆ ಮೇಲೆದ್ದಿಲ್ಲ.

ಇದನ್ನೂ ಓದಿ : ಸಿಡಿಲ ಬಡಿತಕ್ಕೆ ನವವಿವಾಹಿತ ದುರ್ಮರ*ಣ..!10 ದಿನಗಳ ಹಿಂದೆಯಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ವಿಧಿಯಾಟಕ್ಕೆ ಬ*ಲಿ!!

ಮಗ ಮಲಗಿದ್ದಾನೆ ಅಂತ ತಾಯಿ ತೋಟದ ಕೆಲಸಕ್ಕೆ ಹೋಗಿದ್ದು ಸಂಜೆ ಬಂದು ಮಗನನ್ನು ಎಬ್ಬಿಸಿದಾಗಲೇ ವಿಚಾರ ಗೊತ್ತಾಗಿದೆ. ಕರೆದರೂ ಮಗ ಎದ್ದಿಲ್ಲ ಎಂದು ತಾಯಿ ಮಗನನ್ನು ಅಲುಗಾಡಿಸಿ ಎಚ್ಚರಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ, ಆ ವೇಳೆ ಯಾವುದೇ ರೆಸ್ಪಾನ್ಸ್‌ ಇಲ್ಲದ ಕಾರಣ ತಾಯಿಗೆ ಅನುಮಾನ ಬಂದು ಉಸಿರು ಪರಿಶೀಲಿಸಿದಾಗ ಮಗ ಮೃ*ತಪಟ್ಟಿರುವುದು ಆರಿವಾಗಿದೆ.

 

Continue Reading

LATEST NEWS

ಮಹಿಳೆಯರ ಸುರಕ್ಷತೆಗೆ ಬಂತು ‘ವುಮೆನ್ ಸೇಫ್ಟೀ’ ಅಪ್ಲಿಕೇಷನ್‌..!

Published

on

ಮಂಗಳೂರು: ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರಬೇಕಾದರೆ ಕೂಡಾ ಆಭರಣ, ಪರ್ಸ್ ಕದ್ದುಕೊಂಡು ಹೋಗುವ ಜನರನ್ನು ನಾವು ನೋಡಿರುತ್ತೇವೆ. ಬಸ್ಸು ಮತ್ತು ಎಲ್ಲೆಂದರಲ್ಲಿ ಮಹಿಳೆಯರಿಗೆ ಉಪದ್ರ ಕೊಡುವ ಕಿರಾತಕರನ್ನು ನಾವು ನೋಡಿರುತ್ತೇವೆ. ಹೀಗೆ ಮಹಿಳೆಯರಿಗೆ ಎಲ್ಲಿ ಹೋದರೂ ಅಪಾಯ ಮುಗಿಯುವಂತದ್ದಲ್ಲ. ಇನ್ನು ಅಪರಿಚಿತ ಜಾಗದಲ್ಲಿ ಕೇಳಬೇಕು ಅಂತಾನೆ ಇಲ್ಲ. ಆದರೆ ಇನ್ಮುಂದೆ ಮಹಿಳೆಯರು ಸುರಕ್ಷತೆಯ ವಿಚಾರದಲ್ಲಿ ಭಯಪಡಬೇಕಾಗಿಲ್ಲ. ಏಕಾಂಗಿಯಾಗಿ ಎಲ್ಲಿ ಬೇಕಾದರೂ ಹೋಗಬಹುದು.

ಪ್ರಯಾಣದ ವೇಳೆ ಸಹ ಪ್ರಯಾಣಿಕರು ಕಿರುಕುಳ ಕೊಡುತ್ತಿದ್ದಾರೆ ಅನ್ನೋದು ಮನವರಿಕೆಯಾದರೆ ಕೂಡಲೇ ಈ ಒಂದು ಪ್ಯಾನಿಕ್ ಬಟನ್ ಒತ್ತಿದರೆ ಸಾಕು ನೀವು ಕಳುಹಿಸಬೇಕಾದ ವ್ಯಕ್ತಿಗಳಿಗೆ ಅಲರ್ಟ್ ಮೇಸೆಜ್ ಹೋಗುತ್ತದೆ. ಇಂತಹ ಒಂದು ನೂತನ ಅಪ್ಲಿಕೇಶನ್​ವೊಂದನ್ನು ಕಾಲೇಜು ವಿದ್ಯಾರ್ಥಿನಿಯೊಬ್ಬರು ಅಭಿವೃದ್ಧಿ ಪಡಿಸಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಆಯೇಷಾ ಸರ್ವತ್ ವುಮೆನ್ ಸೇಫ್ಟಿ ಎನ್ನುವ ಸಾಫ್ಟ್​​ವೇರ್‌ಅಪ್ಲಿಕೇಶನ್ ಅನ್ನು ತಯಾರಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪುರುಷರಿಗೆ ಸರಿಸಮನಾಗಿ ಮಹಿಳೆಯರು ಬೆಳೆದು ನಿಂತಿದ್ದಾರೆ. ಮನೆ ಕಾಯಕದ ಜೊತೆಗೆ ಮನೆಯಿಂದ ಆಚೆಗೂ ಸಹ ದುಡಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಂಪೆನಿ ಕೆಲಸ ಮುಗಿಸಿಕೊಂಡು ತಡರಾತ್ರಿ ಮನೆಗೆ ಬರಬೇಕಾದರೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರದಂತೆ ಕೃತ್ಯಗಳು ನಡೆದಿರುವ ನಿದರ್ಶನಗಳು ಇವೆ. ಅಲ್ಲದೆ ಒಂಟಿಯಾಗಿ ಕ್ಯಾಬ್​ನಲ್ಲಿ ಸಂಚರಿಸುವಾಗ ಆ ಒಂದು ಭಯ ಇದ್ದೇ ಇರುತ್ತದೆ.

ಪ್ಯಾನಿಕ್​ ಬಟನ್ ಒತ್ತಿದರೆ ಸೈರನ್ ಮೊಳಗಲಿದೆ:

ಹೀಗಾಗಿ ರೆಡ್ ಝೋನ್ ಪ್ರದೇಶಗಳಲ್ಲಿ ಅಥವಾ ಅಪರಿಚಿತ ಸ್ಥಳಗಳಲ್ಲಿ ಓಡಾಡುವಾಗ ಈ ಅಪ್ಲಿಕೇಶನ್​ ಮಹಿಳೆಯರ ನೆರವಿಗೆ ಬರಲಿದೆ. ಅಪಾಯದಲ್ಲಿ ಸಿಲುಕಿರುವುದು ಗೊತ್ತಾದರೆ ಕೂಡಲೇ ಪ್ಯಾನಿಕ್​ ಬಟನ್ ಒತ್ತಿದರೆ ಸೈರನ್ ಮೊಳಗಲಿದೆ. ಜೊತೆಗೆ ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿರುವ ಯಾರಿಗಾದರೂ ಕಳುಹಿಸಿದರೆ ಕೂಡಲೇ “ಐಯಮ್ ಇನ್ ಟ್ರಬಲ್” ಎಂದು ಲೊಕೇಶನ್‌ ಸಹಿತ ಸಂದೇಶ ರವಾನೆಯಾಗಲಿದೆ.

ಈ ಆ್ಯಪ್ ಗೆ ಇಂಟರ್ನೆಟ್, ವೈಫೈ, ಜಿಪಿಎಸ್ ಅಗತ್ಯವಿಲ್ಲ:

ಸಾರ್ವಜನಿಕ‌‌ ಪ್ರದೇಶಗಳಲ್ಲಿ ಅಪಾಯ ಎದುರಾಗುವ ಸಂದರ್ಭ ಬಂದರೆ ಕೂಡಲೇ ಮೊಬೈಲ್​ನಲ್ಲಿ ಅಳವಡಿಸಿಕೊಂಡಿರುವ ವುಮೆನ್ ಸೇಫ್ಟಿ ಅಪ್ಲಿಕೇಶನ್​ನಲ್ಲಿ ಪ್ಯಾನಿಕ್​ ಬಟನ್ ಒತ್ತಿದರೆ ಅಲಾರಂ ರೀತಿ ಸೈರನ್ ಮೊಳಗಲಿದೆ.‌ ಈ ಮೂಲಕ ಸುತ್ತಮುತ್ತಲಿನಲ್ಲಿರುವವರ ಗಮನ ಸೆಳೆದು ನೆರವು ಪಡೆಯಬಹುದು.‌ ಎರಡನೇಯದಾಗಿ ನಿರ್ಜನ ಪ್ರದೇಶಗಳಲ್ಲಿ ಅಥವಾ ಒಂಟಿಯಾಗಿ ಪ್ರಯಾಣ ಮಾಡುವಾಗ ನಿಮ್ಮ ಮೊಬೈಲ್​ನಲ್ಲಿರುವ ಸಂಪರ್ಕಿತರ ನಂಬರ್​ಗಳಿಗೆ ಸಂದೇಶ ಕಳುಹಿಸಬಹುದಾಗಿದೆ.‌

ಇದಕ್ಕೆ‌ ಯಾವುದೇ ಇಂಟರ್​ನೆಟ್, ವೈಫೈ ಹಾಗೂ ಜಿಪಿಎಸ್‌ ಸಹಾಯದ ಅಗತ್ಯವಿಲ್ಲ. ಆ್ಯಂಡ್ರಾಯ್ಡ್ ಮೊಬೈಲ್ ಇರುವವರು ಮಾತ್ರ ಅಪ್ಲಿಕೇಶನ್ ನಿಂದ ನೆರವು ಪಡೆಯಬಹುದು. ಏಕಕಾಲದಲ್ಲಿ 150 ಮಂದಿಗೆ ಅಲರ್ಟ್ ಮೆಸ್ಸೇಜ್ ಕಳುಹಿಸಬಹುದಾಗಿದೆ. ಈ ಆ್ಯಪ್ ನ ಪ್ರಯೋಜನ ಸಾಮಾನ್ಯ ಮಹಿಳೆಯರಿಗೂ ತಲುಪಲಿ ಎಂಬುವುದೇ ಆಶಯ.

Continue Reading

LATEST NEWS

ಜ್ವರಕ್ಕೆ ಮಾತ್ರ ಅಲ್ಲ ಬಟ್ಟೆಯ ಕಲೆಯನ್ನು ತೆಗೆಯುತ್ತದೆ ಡೋಲೋ 650 ಮಾತ್ರೆ..!

Published

on

ಮಂಗಳೂರು: ಮನೆಯಲ್ಲಿನ ಮಹಿಳೆಯರಿಗೆ ಒಂದೇ ಒಂದು ಟೆನ್ಶನ್ ಅಂದರೆ ಬಟ್ಟೆ ಒಗೆಯುವಾಗ ಕಲೆ ಹೋಗದೇ ಇರುವುದು. ಏನೇ ಹಾಕಿದರೂ ಕೆಲವೊಂದು ಕಲೆಗಳು ಹಾಗೇ ಉಳಿದು ಬಿಡುತ್ತದೆ. ಡಿಜರ್ಜೆಂಟ್ ಪೌಡರ್ ಅಥವಾ ಡಿಟರ್ಜೆಂಟ್ ಲಿಕ್ವಿಡ್ ಹಾಕಿದ್ರೋ ಬಟ್ಟೆಯ ಕಲೆ ಮಾತ್ರ ಹೋಗುವುದಿಲ್ಲ.

ಕೆಲವೊಂದು ವೈರಲ್ ವಿಡಿಯೋಗಳನ್ನು ನೀವು ನೋಡಿರಬಹುದು. ಪೇಸ್ಟ್ ಹಾಕಿ ಉಚ್ಚಿದ್ರೆ ಕಲೆ ಹೋಗುತ್ತೆ. ಇಲ್ಲ ಅಡುಗೆ ಸೋಡ ಹಾಕಿ ಉಚ್ಚಿದ್ರೆ ಕಲೆ ಹೋಗುತ್ತದೆ ಇಂತಹ ಅದೆಷ್ಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಹಾರಿದಾಡುತ್ತಿರುತ್ತದೆ. ಈ ಬಟ್ಟೆಯ ಕಲೆ ಹೋಗುವಂತರಲ್ಲಿ ಮನೆಯ ಮಹಿಳೆಯರಿಗೆ ಸಾಕಾಗಿರುತ್ತದೆ. ಆದರೆ ಇನ್ನು ಮುಂದೆ ಈ ಟೆಕ್ಶನ್ ಬೇಡ ಮನೆಯಲ್ಲಿ ಡೋಲೋ 650 ಮಾತ್ರ ಇದ್ರೆ ಸಾಕು. ಕ್ಷಣ ಮಾತ್ರದಲ್ಲಿ ಎಂಥ ಕಲೆ ಕೂಡ ಕ್ಷಣಮಾತ್ರದಲ್ಲಿ ಮಾಯವಾಗುತ್ತೆ.

ಡೋಲೋ 650 ಮಾತ್ರೆ

ಜ್ವರ, ತೆಲೆನೋವು, ಮೈ ಕೈ ನೋವಿಗೆ ಬಳಸುವ ಈ ಡೋಲೋ 650 ಮಾತ್ರೆಯನ್ನು ಸುಲಭವಾಗಿ ಬಳಸಿಕೊಂಡು ಬಟ್ಟೆಯಲ್ಲಿನ ಕಲೆಯನ್ನು ಮಾಯ ಮಾಡಬಹುದು. ಇಂತಹ ವಿಡಿಯೋ ಒಂದು ಈಗ ಸೋಷಿಯಲ್ ಮಿಡೀಯಾದಲ್ಲಿ ಹರಿದಾಡುತ್ತಿದೆ. ನಂದು ನಾಯರ್ ಅವರು ಈ ವಿಡಿಯೋವನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಡೋಲೋ 650 ಮಾತ್ರೆಯನ್ನು ಬಳಸಿಕೊಂಡು ಬಿಳಿ ಬಟ್ಟೆಯಲ್ಲಿದ್ದ ಕಲೆಯನ್ನು ತೆಗೆದುಹಾಕಿದ್ದಾರೆ.

ಇವರು ಒಂದು ಕಪ್‌ ಕುದಿಯುತ್ತಿರುವ ನೀರಿಗೆ ಎರಡು ಡೋಲೋ 650 ಮಾತ್ರೆಗಳನ್ನು ಪುಡಿ ಪುಡಿ ಮಾಡಿ ಹಾಕಿದ್ದಾರೆ. ಅದೇ ನೀರಿಗೆ ಒಂದು ಸ್ಪೂನ್‌ ಅಡಿಗೆ ಸೋಡಾ, ಜೊತೆಗೆ ಡಿರ್ಟಂಜೆಟ್‌ ಪೌಡರ್ ಹಾಕಿ ಮಿಕ್ಸ್ ಮಾಡಬೇಕು. ಇದಾದ ಬಳಿಕ ಈ ನೀರಿಗೆ ಕಲೆಯಾಗಿರೋ ಬಟ್ಟೆಯನ್ನು ಹಾಕಿದ್ದಾರೆ.

3 ನಿಮಿಷಗಳ ಬಳಿಕ ಆ ಬಟ್ಟೆಯನ್ನು ಹೊರ ತೆಗೆದರೆ ಆ ಬಟ್ಟೆಯಲ್ಲಿ ಯಾವೂದೇ ಕಲೆಗಳು ಇಲ್ಲದಿರುವುದನ್ನು ಈ ವೈರಲ್ ವಿಡಿಯೋದಲ್ಲಿ ನೋಡಬಹುದು.

Continue Reading

LATEST NEWS

Trending