LATEST NEWS
Manglore: ಗುರುಪೂರ್ಣಿಮೆ – ಶ್ರೀದೇವಿ ಪ್ರತ್ಯಂಗಿರಾ ಕ್ಷೇತ್ರದ ಗುರುಗಳ ಪೂಜೆ
ವ್ಯಾಸ ಜಯಂತಿ ಅರ್ಥಾತ್ ಗುರು ಪೂರ್ಣಿಮೆಯ ಪುಣ್ಯಶುಭದಿನದಂದು ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ದೇವಸ್ಥಾನದ ಧರ್ಮಾಧಿಕಾರಿ ಜ್ಯೋತಿಷ್ಯ ವಿದ್ವಾನ್ ದೈವಜ್ಞ ಕರಣ್ ಜ್ಯೋತಿಷಿಯವರ ಶಿಷ್ಯಂದಿರು ಗುರುಪೂಜೆ ನೆರವೇರಿಸಿದರು.
ಮಂಗಳೂರು : ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ.
ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ.
ಬಹುತೇಕ ಜನರು ಗುರುವನ್ನು ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಾರೆ. ಇದೇ ಕಾರಣಕ್ಕೆ ಗುರುಪೂರ್ಣಿಮೆ ಪ್ರಾಮುಖ್ಯತೆ ಪಡೆಯುತ್ತದೆ.
ಗುರುಪುರ್ಣಿಮೆಯಂದು ಸನ್ಯಾಸಿಗಳು ತಮ್ಮ ಗುರುಗಳಿಗೆ ಪೂಜೆ ಸಲ್ಲಿಸುತ್ತಾರೆ.
ಈ ಚಾತುರ್ಮಾಸದಲ್ಲಿ ಸನ್ಯಾಸಿಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇದ್ದು, ಭಕ್ತಾದಿಗಳಿಗೆ ಪ್ರವಚನಗಳನ್ನು ನೀಡುತ್ತಾರೆ.
ಭಾರತ ಶಾಸ್ತ್ರೀಯ ಸಂಗೀತವು ಗುರು ಶಿಷ್ಯ ಪರಂಪರೆ ಪಾಲಿಸುವುದರಿಂದ, ವಿಶ್ವಾದ್ಯಂತ ಅವರ ವಿದ್ಯಾರ್ಥಿಗಳು ಈ ಗುರು ಪೂರ್ಣಿಮೆ ಆಚರಿಸುತ್ತಾರೆ.
ವ್ಯಾಸ ಜಯಂತಿ ಅರ್ಥಾತ್ ಗುರು ಪೂರ್ಣಿಮೆಯ ಪುಣ್ಯಶುಭದಿನದಂದು ಅನೇಕ ಬಿರುದುಸನ್ಮಾನಗಳನ್ನು ಮುಡಿ ಗೆರಿಸಿಕೊಂಡಂತಹ ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ದೇವಸ್ಥಾನದ ಧರ್ಮಾಧಿಕಾರಿ ಜ್ಯೋತಿಷ್ಯ ವಿದ್ವಾನ್ ದೈವಜ್ಞ ಕರಣ್ ಜ್ಯೋತಿಷಿಯವರ ಶಿಷ್ಯಂದಿರು ಗುರುಪೂಜೆ ನೆರವೇರಿಸಿದರು.
LATEST NEWS
ನಾವು ಬಳಸುವ ಮಸಾಲೆ ಪದಾರ್ಥಗಳು ಅಸಲಿಯೋ..ನಕಲಿಯೋ..ತಿಳಿಯೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್
ಮಂಗಳೂರು : ನಾವು ಅಡುಗೆಮನೆಯಲ್ಲಿ ಹಲವಾರು ರೀತಿಯ ಮಸಾಲೆಗಳನ್ನು ಬಳಸುತ್ತೇವೆ. ಆದರೆ ಅವುಗಳನ್ನು ಮಾರುಕಟ್ಟೆಯಿಂದ ತರುವಾಗ, ನಿಜವಾದ ಮತ್ತು ನಕಲಿ ಮಸಾಲೆಗಳನ್ನು ಗುರುತಿಸುವಲ್ಲಿ ನಾವು ಗೊಂದಲಕ್ಕೊಳಗಾಗುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬಹುದು ಅನ್ನೋ ಸಣ್ಣ ಟಿಪ್ಸ್ ಇಲ್ಲಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಕಲಿ ಸಾಂಬಾರ ಪದಾರ್ಥಗಳನ್ನು ತಯಾರಿಸುತ್ತಿದ್ದ ಕೆಲವರನ್ನು ಬಂಧಿಸಲಾಗಿದೆ. ಈ ಜನರು ಕೊಳೆತ ಅಕ್ಕಿ, ತೆಂಗಿನಕಾಯಿ ಮತ್ತು ಆ್ಯಸಿಡ್ನಿಂದ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಮಸಾಲೆ ತಯಾರಿಸುತ್ತಿದ್ದರು. ಇವರಿಂದ ಸುಮಾರು 15 ಟನ್ ನಕಲಿ ಸಾಂಬಾರ ಪದಾರ್ಥಗಳು ಮತ್ತು ತಯಾರಿಕಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಪ್ರತಿಷ್ಠಿತ ಕಂಪೆನಿಗಳು ಕೂಡಾ ಈ ರೀತಿಯಾದ ನಕಲಿ ಸಾಂಬಾರು ಪುಡಿ ಮಾರಾಟ ಮಾಡುತ್ತಿದ್ದ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿದೆ.
ನೋಡಲು ಹಾಗೂ ಪರಿಮಳದಲ್ಲಿ ಅಸಲಿಯಂತೆ ಕಾಣುವ ಈ ನಕಲಿ ಮಸಾಲೆ ಪುಡಿಗಳನ್ನು ಗುರುತಿಸುವುದೇ ಕಷ್ಟ. ಆದ್ರೆ, ಕೆಲವೊಂದು ನಿತ್ಯ ಬಳಸುವ ಪದಾರ್ಥಗಳನ್ನು ಈ ರೀತಿಯಾಗಿ ಗುರುತಿಸಬಹುದಾಗಿದೆ.
ನಿಜವಾದ ಮತ್ತು ನಕಲಿ ಮಸಾಲೆಗಳನ್ನು ಗುರುತಿಸುವುದು ಹೇಗೆ?
ಕೆಂಪು ಮೆಣಸಿನಕಾಯಿ
ಅಡುಗೆಯಲ್ಲಿ ಕೆಂಪು ಮೆಣಸಿನಕಾಯಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮೆಣಸಿನಪುಡಿ ಚೆನ್ನಾಗಿಲ್ಲಾ ಅಂದ್ರೆ ಅದು ಪದಾರ್ಥದ ರುಚಿಯನ್ನೇ ಕೆಡಿಸಿ ಬಿಡುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ಯಾಕೇಟ್ಗಳಲ್ಲಿ ಬರೋ ಮೆಣಸಿನ ಪುಡಿ ಕೂಡಾ ನಕಲಿಯಾಗಿದೆ. ಕೆಂಪು ಇಟ್ಟಿಗೆಯ ಪುಡಿಗೆ ಬಟ್ಟೆಗೆ ಬಳಸುವ ಕೆಂಪು ಬಣ್ಣದ ಮಿಶ್ರಣ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮೆಣಸಿನ ಪುಡಿಯನ್ನು ಪರೀಕ್ಷೆ ಮಾಡಲು ಸ್ವಲ್ಪ ನೀರಿನಲ್ಲಿ ಹಾಕಿ ನೋಡಬೇಕು. ಪುಡಿ ತೇಲುತ್ತಿದ್ದರೆ ಅದು ಅಸಲಿಯಾಗಿದ್ದು, ಪುಡಿ ನೀರಿನಲ್ಲಿ ಮುಳುಗಿದ್ರೆ ಅದು ನಕಲಿ ಅಥವಾ ಕಲಬೆರಕೆಯಾಗಿದೆ ಎಂದು ತಿಳಿಯಬಹುದು.
ಕೊತ್ತಂಬರಿ ಪುಡಿ
ಯಾವುದೇ ಅಡುಗೆಯಲ್ಲಿ ಖಾದ್ಯದ ರುಚಿಯನ್ನು ಹೆಚ್ಚಿಸಲು ಕೊತ್ತಂಬರಿ ಬೇಕೇಬೇಕು. ಆದ್ರೆ, ಈ ಕೊತ್ತಂಬರಿ ಪುಡಿಯನ್ನು ಕೂಡಾ ನಕಲಿ ಮಾಡಲಾಗುತ್ತಿದೆ. ಪ್ರಾಣಿಗಳ ಮಲ, ಹುಳು ಮತ್ತು ಕಳೆಗಳನ್ನು ನುಣ್ಣಗೆ ರುಬ್ಬಿ ಅದಕ್ಕೆ ಕೊತ್ತಂಬರಿ ಪ್ಲೇವರ್ ಹಾಕುವ ಮೂಲಕ ಕೊತ್ತಂಬರಿ ಪುಡಿ ತಯಾರಿಸಲಾಗುತ್ತಿದೆ. ಇನ್ನು ಹಿಟ್ಟಿನ ಹುಡಿಗೆ ಹಸಿರು ಬಣ್ಣ ಸೇರಿಸಿ ಕೊತ್ತಂಬರಿ ಪುಡಿ ಎಂದು ಮಾರಾಟ ಮಾಡಲಾಗುತ್ತಿದೆ. ಇಡಿ ಕೊತ್ತಂಬರಿಯನ್ನು ಕೈಲಿಟ್ಟು ಸ್ವಲ್ಪ ಜೋರಾಗಿ ತಿಕ್ಕಿದಾಗ ಅದರಿಂದ ಸುವಾಸನೆ ಹೊರಡುತ್ತದೆ. ಮಾರುಕಟ್ಟೆಯಿಂದ ತಂದಿರೋ ಪುಡಿಯನ್ನು ಈ ಸುವಾಸನೆ ಜೊತೆ ಹೋಲಿಸಿ ನೋಡಿ. ಆ ಸುವಾಸನೆ ಬಾರದೆ ಯಾವುದೋ ಸಸ್ಯಗಳ ಪರಿಮಳ ಬಂದ್ರೆ ಅದು ಕಲಬೆರಕೆಯಾಗಿದೆ ಎಂದು ಅಂದಾಜಿಸಬಹುದಾಗಿದೆ.
ದಾಲ್ಜಿನಿ
ತೊಗಟೆಯಾಗಿ ಮಾರುಕಟ್ಟೆಯಲ್ಲಿ ಸಿಗುವ ದಾಲ್ಚಿನಿ ಬಹುತೇಕ ನಕಲಿಯಾಗಿರುತ್ತದೆ. ಅಮರಕ ಎಂಬ ಮರದ ತೊಗಟೆಯನ್ನು ಕತ್ತರಿಸಿ ದಾಲ್ಚಿನಿ ಎಂದು ಮಾರಾಟ ಮಾಡಲಾಗುತ್ತಿದೆ. ಇದರ ಅಸಲಿಯತ್ತು ಗುರುತಿಸುವುದು ಬಹಳ ಸುಲಭವಾಗಿದೆ. ದಾಲ್ಚಿನಿಯ ತೊಗಟೆಯನ್ನು ಕೈಲಿ ತೆಗೆದುಕೊಂಡು ನಿಮ್ಮ ಕೈಗಳಿಗೆ ಜೋರಾಗಿ ಉಜ್ಜಿಕೊಳ್ಳಿ. ಕೈನಲ್ಲಿ ಕೆಂಪು ಅಥವಾ ಕಂದು ಬಣ್ಣ ಮೂಡಿದ್ರೆ ಅದು ಅಸಲಿಯಾಗಿದ್ದು, ಬಣ್ಣ ಬಾರದೇ ಇದ್ರೆ ಅದು ನಕಲಿ ಎಂದು ಅರ್ಥ.
ಕರಿ ಮೆಣಸು
ಕರಿಮೆಣಸು ಇಲ್ಲದೆ ಮಾಂಸಾಹಾರಿ ಪದಾರ್ಥವೇ ಇಲ್ಲ ಅನ್ನಬಹುದು. ಇನ್ನು ತರಕಾರಿ ಅಡುಗೆಯಲ್ಲೂ ಇದನ್ನು ಯಥೇಚ್ಛವಾಗಿ ಬಳಕೆ ಮಾಡಲಾಗುತ್ತದೆ. ಆದ್ರೆ, ಪಪ್ಪಾಯಿ ಕಾಳುಗಳನ್ನು ಕರಿಮೆಣಸಿನ ಜೊತೆ ಸೇರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರ ಅಸಲಿಯತ್ತು ಪರೀಕ್ಷೆ ಮಾಡಲು ನೀರಿನಲ್ಲಿ ಹಾಕಬೇಕು. ಅಸಲಿ ಕರಿಮೆಣಸುಗಳು ನೀರಿನಲ್ಲಿ ಮುಳುಗಿದರೆ ಪಪ್ಪಾಯಿ ಬೀಜಗಳು ನೀರಿನಲ್ಲಿ ತೇಲುತ್ತದೆ.
ಇದನ್ನೂ ಓದಿ : KARKALA : ಸಿಡಿದ ಸುಡುಮದ್ದು ತಯಾರಿಕಾ ಘಟಕ; ಮಹಿಳೆಯರಿಗೆ ಗಂಭೀರ ಗಾಯ
ಜೀರಿಗೆ
ಜೀರಿಗೆ ಯಾವುದೇ ಭಕ್ಷ್ಯಕ್ಕೆ ಪರಿಮಳವನ್ನು ಸೇರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಇದು ನಿಜವೋ ಅಲ್ಲವೋ ಎಂದು ಗುರುತಿಸುವುದು ತುಂಬಾ ಸುಲಭ. ಇದಕ್ಕಾಗಿ ನೀವು ಎರಡು ಬೆರಳುಗಳ ನಡುವೆ ಜೀರಿಗೆಯನ್ನು ಉಜ್ಜಬೇಕು. ಜೀರಿಗೆಯಲ್ಲಿ ಕಲಬೆರಕೆ ಇದ್ದರೆ ನಿಮ್ಮ ಬೆರಳುಗಳು ಕಪ್ಪಾಗುತ್ತವೆ. ಅದು ನಿಜವಾಗಿದ್ದರೆ, ಅದು ನಿಮ್ಮ ಬೆರಳುಗಳನ್ನು ಕಪ್ಪಾಗಿಸುವುದಿಲ್ಲ.
ಕಲಬೆರಕೆ ಆಹಾರ ಸೇವನೆಯಿಂದ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಆದಷ್ಟು ಕಲಬೆರೆಕೆ ವಸ್ತುಗಳ ಬಗ್ಗೆ ಜನರು ಜಾಗೃತರಾಗಬೇಕಾಗಿದೆ. ಪ್ರತಿಯೊಂದು ವಸ್ತುವನ್ನು ಪರೀಕ್ಷೆ ಮಾಡಿ ತೆಗೆದುಕೊಳ್ಳುವುದು ಕಷ್ಟ. ಆದ್ರೆ, ಅದನ್ನು ಬಳಸುವ ಮೊದಲು ಈ ಸಿಂಪಲ್ ಟೆಸ್ಟ್ ಮಾಡಿದ್ರೆ ಆರೋಗ್ಯ ಕಾಪಾಡಿಕೊಳ್ಳಬಹುದು.
DAKSHINA KANNADA
ಮೇ 9 ರಂದು SSLC ಫಲಿತಾಂಶ ಪ್ರಕಟ…!
ಮಂಗಳೂರು : 2023-24 ರ SSLC ಪರೀಕ್ಷೆಯ ಫಲಿತಾಂಶ ಮೇ 9 ರ ಬೆಳಗ್ಗೆ 10.30ಕ್ಕೆ ಪ್ರಕಟಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಮಾರ್ಚ್ 25 ರಿಂದ ಎಪ್ರಿಲ್ 6 ರ ವರೆಗೆ ಪರೀಕ್ಷೆ ನಡೆಸಲಾಗಿದ್ದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದೆ. ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಈ ಬಾರಿ ಫಲಿತಾಂಶ ಬಿಡುಗಡೆಗೆ ವಿಳಂಭವಾಗಿದೆ ಎಂದು ಹೇಳಿದೆ
2023- 24ರ SSLC ಪರೀಕ್ಷೆಯಲ್ಲಿ ಈ ಬಾರಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದರು. ಸಾಮಾನ್ಯ ವಿದ್ಯಾರ್ಥಿಗಳ ಜೊತೆಯಲ್ಲಿ 18,225 ಖಾಸಗಿ ವಿದ್ಯಾರ್ಥಿಗಳು ಮತ್ತು 41,375 ವಿದ್ಯಾರ್ಥಿಗಳು ರೀ ಎಕ್ಸಾಂ ಬರೆದಿದ್ದಾರೆ. ಇದರಲ್ಲಿ 4.41 ಲಕ್ಷ ಬಾಲಕರು ಮತ್ತು 4.28 ಲಕ್ಷ ಬಾಲಕಿಯರು ಇದ್ದಾರೆ.
ಫಲಿತಾಂಶವನ್ನು ನೋಡಲು ಈ ವೆಬ್ಸೈಟ್ ಬಳಸಿ..!
ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ ಮತ್ತು ಜನ್ಮ ದಿನಾಂಕ ನಮೂದಿಸುವ ಮೂಲಕ ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಬಹುದು. kseab.karnataka.gov.in ಹಾಗೂ karresults.nic.in ವೆಬ್ಸೈಟ್ನಲ್ಲೂ ಫಲಿತಾಂಶ ವೀಕ್ಷಿಸಬಹುದಾಗಿದೆ.
LATEST NEWS
ಕ್ಯಾನ್ಸರ್ ಬಗ್ಗೆ ಇರಲಿ ಎಚ್ಚರ..! WHO ಈ ಬಗ್ಗೆ ಹೇಳಿದ್ದೇನು ?
ಮಂಗಳೂರು : ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಅನ್ನೋದು ಸಾಮಾನ್ಯವಾಗಿದೆಯಾದ್ರೂ, ಕ್ಯಾನ್ಸರ್ ಪೀಡಿತರ ಕಷ್ಟ, ನೋವು ಸಹಿಸಲು ಅಸಾದ್ಯವಾಗಿದೆ. ಇನ್ನು ಭಾರತದ ವಿಚಾರಕ್ಕೆ ಬಂದ್ರೆ ವರ್ಷದಿಂದ ವರ್ಷಕ್ಕೆ ಕ್ಯಾನ್ಸರ್ ಪೀಡಿತರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇತ್ತೀಚಿಗೆ ಹೆಸರಾಂತ ಆಸ್ಪತ್ರೆಯೊಂದು ಈ ಬಗ್ಗೆ ಸಂಶೋಧನೆ ನಡೆಸಿದ್ದು, ಭಾರತೀಯರ ಒಟ್ಟಾರೆ ಆರೋಗ್ಯ ಕ್ಷೀಣಿಸುತ್ತಿದೆ ಅನ್ನೋ ಆತಂಕಕಾರಿ ವಿಚಾರವನ್ನು ಬಹಿರಂಗ ಪಡಿಸಿದೆ.
2020 ರಲ್ಲಿ ಭಾರತದಲ್ಲಿ 14 ಲಕ್ಷ ಜನರಿಗೆ ಕ್ಯಾನ್ಸರ್ ರೋಗ ಇದ್ದ ಬಗ್ಗೆ ಅಪೋಲೋ ಆಸ್ಪತ್ರೆಗಳ ವರದಿ ತಿಳಿಸಿತ್ತು. ಆದ್ರೆ, ಇದು 2025 ರ ವೇಳೆಗೆ ಅಂದರೆ ಐದು ವರ್ಷದಲ್ಲಿ ಸುಮಾರು 15.8 ಲಕ್ಷಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ.
ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ಕೆ. ಶ್ರೀನಾಥ್ ರೆಡ್ಡಿ ಅವರು ಜರ್ಮನ್ ಸುದ್ದಿ ಸಂಸ್ಥೆಯಾದ ಡಾಯ್ಜ್ ವೆಲ್ಲೆ ( ಡಿಡಬ್ಲ್ಯೂ) ಗೆ ನೀಡಿದ ಸಂದರ್ಶನದಲ್ಲಿ “ಕ್ಯಾನ್ಸರ್ ಪ್ರಕರಣಗಳು ಮತ್ತು ಸಾವುಗಳು ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ” ಎಂದಿದ್ದಾರೆ.
ಕ್ಯಾನ್ಸರ್ನ ಸಾಮಾನ್ಯ ವಿಧಗಳು ಯಾವುವು?
ಕ್ಯಾನ್ಸರ್ ಕಾಯಿಲೆ ಹೇಗೆ ಬರುತ್ತದೆ ಅನ್ನೋದು ಇನ್ನೂ ನಿಖರವಾಗಿ ಹೇಳಲು ಸಾಧ್ಯವಿಲ್ಲವಾಗಿದೆ. ಆದ್ರೆ ದೇಹದ ಕೆಲವು ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯುವುದು ಹಾಗೂ ಅದು ದೇಹದ ಇತರ ಭಾಗಗಳಿಗೆ ಹರಡುವುದು ಈ ರೋಗದ ಲಕ್ಷಣವಾಗಿದೆ. ಇದು ದೇಹದ ಯಾವ ಭಾಗದಲ್ಲಿ ಬೇಕಾದ್ರೂ ಕಾಣಿಸಿಕೊಂಡು ದೇಹಕ್ಕೆ ವ್ಯಾಪಿಸಿಕೊಳ್ಳಬಹುದು. ಪ್ರಮುಖವಾಗಿ ಸ್ತನ ಕ್ಯಾನ್ಸರ್, ಗರ್ಭಕಂಠ ಮತ್ತು ಅಂಡಾಶಯದ ಕ್ಯಾನ್ಸರ್ ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇನ್ನು ಶ್ವಾಸಕೋಶ, ಬಾಯಿ, ಪ್ರಸ್ಟ್ರೇಟ್ ಪುರುಷರಲ್ಲಿ ಸಾಮಾನ್ಯವಾಗಿ ಕಾಣಿಸುವ ಕ್ಯಾನ್ಸರ್ ಆಗಿದೆ.
ಗ್ಲೋಬಲ್ ಕ್ಯಾನ್ಸರ್ ಅಬ್ಸರ್ವೇಟರಿ 2022 ರಲ್ಲಿ ನಡೆಸಿದ ಸರ್ವೇ ಪ್ರಕಾರ ಭಾರತದಲ್ಲಿ ಮಹಿಳೆಯರಿಗಿಂತ ಪುರಷರಲ್ಲಿ ಕ್ಯಾನ್ಸರ್ ಹೆಚ್ಚಾಗಿ ಕಾಣಸಿದೆ. ಸುಮಾರು 7,22,138 ಪುರುಷರು ಕ್ಯಾನ್ಸರ್ಗೆ ತುತ್ತಾಗಿದ್ದರೆ, 6,19,178 ಮಹಿಳೆಯರಲ್ಲಿ ಕ್ಯಾನ್ಸರ್ ಪತ್ತೆಯಾಗಿದೆ. ಪತ್ತೆಯಾಗಿರೋ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇಕಡಾ 32 ಪ್ರಕರಣಗಳು ಸ್ತನ, ಬಾಯಿ ಮತ್ತು ಗರ್ಭಕಂಠದ ಕ್ಯಾನ್ಸರ್ ಅನ್ನೋದು ಗಮನಾರ್ಹ.
ಇದರಲ್ಲಿ 1,92,020 (26.6%) ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಮುಖ ಕ್ಯಾನ್ಸರ್ ಆಗಿದ್ರೆ, 1,27,526 ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳು (17.7%) ಗುರುತಿಸಲಾಗಿದೆ. ಇನ್ನು ಶೇಕಡಾ 6.6 ರಷ್ಟು ಮಹಿಳೆಯರು ಅಂಡಾಶಯ ಕ್ಯಾನ್ಸರ್ಗೆ ತುತ್ತಾಗಿದ್ದಾರೆ.
ಪುರುಷರಲ್ಲಿ ಬಾಯಿಯ ಕ್ಯಾನ್ಸರ್ 1,07,812 (15.6%) , ಶ್ವಾಸಕೋಶದ ಕ್ಯಾನ್ಸರ್ 58,970 (8.5%),ಅನ್ನನಾಳದ ಕ್ಯಾನ್ಸರ್ 45608- (6.6%).
ಇದನ್ನೂ ಓದಿ : ಖಾಸಗಿ ಕಾಲೇಜಿನ ಮಹಿಳಾ ಟಾಯ್ಲೆಟ್ ನಲ್ಲಿ ಮೊಬೈಲ್ ಪತ್ತೆ; ಆರೋಪಿ ಬಂಧನ
ಇನ್ನು ಕ್ಯಾನ್ಸರ್ ಸಾವಿನ ಪ್ರಕರಣದಲ್ಲಿ ಸ್ತನ ಕ್ಯಾನ್ಸರ್ಗೆ 98,337 – (13.7%) ಜನ ಸಾವಿಗೀಡಾಗಿದ್ದರೆ, ಬಾಯಿಯ ಕ್ಯಾನ್ಸರ್ ಗೆ 79,979 (5.6%) ಮತ್ತು ಗರ್ಭಕಂಠದ ಕ್ಯಾನ್ಸರ್ 79,906 ( 11.2%).ಜೀವ ಕಳೆದುಕೊಂಡಿದ್ದಾರೆ.
WHO ಪ್ರಕಾರ ಜಗತ್ತಿನ ಶೇಕಡಾ 30 ರಿಂದ 40 ಕ್ಯಾನ್ಸರ್ ಪ್ರಕರಣಗಳು ಜನರ ಜೀವನ ಶೈಲಿಯಿಂದ ಬರುತ್ತಿದೆಯಂತೆ. ತಂಬಾಕು ಸೇವನೆ, ಅಲ್ಕೋಹಾಲ್ ಸೇವನೆ, ಹಣ್ಣು ತರಕಾರಿಗಳಲ್ಲಿನ ಪೌಷ್ಠಿಕಾಂಶದ ಪ್ರಮಾಣ ಇಳಿಕೆಯಾಗಿರುವುದು ಇದಕ್ಕೆ ಕಾರಣ ಎಂದು ಹೇಳಿದೆ. ಹೀಗಾಗಿ ಜನರು ಹೆಚ್ಚಾಗಿ ತಜ್ಞ ವೈದ್ಯರ ಬಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವರ್ಲ್ಡ್ ಹೆಲ್ತ್ ಆರ್ಗನೈಸೇಶನ್ ಸಲಹೆ ನೀಡಿದೆ.
- DAKSHINA KANNADA5 days ago
ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್ಗಳ ಹಗಲು ದರೋಡೆ..! ಏನಿದು ಘಟನೆ?
- dehali6 days ago
ನಾಯಿಗಳಿಗೂ ಬಂತು ಆಧಾರ್ ಕಾರ್ಡ್.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?
- BELTHANGADY6 days ago
ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು
- DAKSHINA KANNADA7 days ago
ಭರತನಾಟ್ಯದಂತೆ ಯಕ್ಷಗಾನಕ್ಕೂ ಪರೀಕ್ಷೆ..! ಪಟ್ಲ ಸತೀಶ್ ಶೆಟ್ಟಿ