DAKSHINA KANNADA
ಮಂಗಳೂರು; ಉಸಿರಾಟದ ಸಮಸ್ಯೆಯಿಂದ 8 ತಿಂಗಳ ಗರ್ಭಿಣಿ ಸಾ*ವು
ಮಂಗಳೂರು; ನಗರ ಹೊರ ವಲಯದ ಅರ್ಕುಳ ಗಣೇಶ್ ತೊಟ ನಿವಾಸಿ ಎಂಟು ತಿಂಗಳ ಗರ್ಭಿಣಿಯೊಬ್ಬರು ಉಸಿರಾಟದ ಸಮಸ್ಯೆಯಿಂದ ಮೃ*ತಪಟ್ಟಿದ್ದಾರೆ.
ಶರಣ್ಯ (29) ಮೃ*ತ ದುರ್ದೈವಿ.
ರವಿವಾರ ತಡರಾತ್ರಿ ಸುಮಾರು 1.15 ರ ಸುಮಾರಿಗೆ ಉಸಿರಾಡಲು ಸಮಸ್ಯೆಯಾಗಿ ದಮ್ಮು ಕಟ್ಟುವುದಕ್ಕೆ ಆರಂಭವಾಗಿದೆ.ವೈದ್ಯರು ನಿಡಿದ್ದ ಸಲಹೆಯಂತೆ ವಾಕಿಂಗ್ ಮಾಡಿದರೂ ಕಡಿಮೆಯಾಗದೆ, ಉಸಿರಾಟದ ಸಮಸ್ಯೆ ಹೆಚ್ಚಾಗಿದೆ.
ಮನೆಯವರು ಆಸ್ಪತ್ರೆಗೆ ಕಳೆದುಕೊಂಡು ಹೋಗಿದ್ದು, ದಾರಿ ಮಧ್ಯವೇ ವಾಂತಿಯಅಗಿದೆ. ಪಡೀಲ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಮೃ*ತಪಟ್ಟಿರುವುದಾಗಿ ತಿಳಿಸಿದ್ದಾರೆ.
ಶರಣ್ಯ ರವಿವಾರವಷ್ಟೇ 29ನೇ ವರ್ಷದ ಹುಟ್ಟುಹಬ್ಬವನ್ನು ಮನೆಯಲ್ಲೇ ಸಣ್ಣ ಕಾರ್ಯಕ್ರಮ ಮಾಡುವ ಮುಖಾಂತರ ಆಚರಿಸಿದ್ದರು. ಎರಡು ದಿನದ ಹಿಂದೆ ವೈದ್ಯರಲ್ಲಿ ತೆರಳಿ ತಪಾಸಣೆ ಮಾಡಿ ಬಂದಿದ್ದರು.
ಶರಣ್ಯ ನಿಗೆ ಮದುವೇಯಾಗಿ ಸುಮಾರು 8 ವರ್ಷವಾಗಿತ್ತು. ಮೊದಲಿ ಗಲ್ಫ್ ದೇಶದಲ್ಲಿ ವಾಸವಿದ್ದು ಗರ್ಭಿಣಿಯಾಗಿ ಎರಡು ತಿಂಗಳ ಬಳಿಕ ಊರಿಗೆ ಬಂದಿದ್ದರು.
ಮೃತರ ಮರ*ಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನೈಜ್ಯ ಕಾರಣ ಮರಣೋತ್ತರ ಪರೀಕ್ಷೆ ಬಳಿಕ ತಿಳಿದು ಬರಬೇಕಷ್ಟೇ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
DAKSHINA KANNADA
ಮಂಗಳೂರಿನ ಮಾರ್ನೆಮಿಕಟ್ಟೆ : ಸಹಸ್ರಾರ್ಚನೆ ಸಹಿತ ದುರ್ಗಾನಮಸ್ಕಾರ ಪೂಜೆ
ಮಂಗಳೂರು : ದೈವ ದೇವರ ನಾಡು ಕರಾವಳಿಯಲ್ಲಿ ಈಗ ನವರಾತ್ರಿ ಸಂಭ್ರಮ. ನವರಾತ್ರಿ ವೇಳೆ ಶಕ್ತಿದೇವತೆಯಾದ ದುರ್ಗಾದೇವಿ ಆರಾಧನೆ ಎಲ್ಲೆಡೆ ನಡೆಯುತ್ತದೆ. ಅದರಲ್ಲೂ ಮಂಗಳವಾರದಂದು ನಡೆಯುವ ದುರ್ಗಾನಮಸ್ಕಾರ ಪೂಜೆ ವಿಶೇಷತೆಯಿಂದ ಕೂಡಿದೆ. ಸಾರ್ವಜನಿಕ ವಿಶೇಷ ಸಹಸ್ರಾರ್ಚನೆ ಸಮೇತ ದುರ್ಗಾನಮಸ್ಕಾರ ಪೂಜೆ ಮಾರ್ನೆಮಿಕಟ್ಟೆಯ ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ಕ್ಷೇತ್ರದಲ್ಲಿ ಜ್ಯೋತಿಷ್ಯ ವಿದ್ವಾನ್ ದೈವಜ್ಞ ಕರಣ್ ಜ್ಯೋತಿಷಿಯವರ ನೇತೃತ್ವದಲ್ಲಿ ಜರುಗಿತು.
ಮಂಗಳವಾರದಂದು ದುರ್ಗಾ ದೇವಿಯನ್ನು ಪೂಜಿಸುವುದರಿಂದ ದುರ್ಗಾ ಮಂತ್ರವನ್ನು ಪಠಿಸುವುದರಿಂದ ಇಚ್ಛೆಗಳು , ಬಯಕೆಗಳು ಬಹುಬೇಗ ಈಡೇರುತ್ತವೆ. ಶಕ್ತಿದೇವತೆ ದುರ್ಗಾದೇವಿಯನ್ನು ಪೂಜಿಸುವ ವಿಧಿ- ವಿಧಾನಗಳೂ ಅತ್ಯಂತ ಮಹತ್ವದ್ದಾಗಿದೆ. ದುರ್ಗೆಯನ್ನು ಆರಾಧಿಸುವುದರಿಂದ ತಾಯಿ ಪ್ರಸನ್ನಳಾಗುವ ಜೊತೆಗೆ ಭಕ್ತರ ಆಧ್ಯಾತ್ಮಿಕ ಮತ್ತು ಭೌತಿಕ ಬಯಕೆಗಳು ಕೂಡಾ ಈಡೇರುತ್ತವೆ. ಎಲ್ಲರೂ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಇಂತಹ ಪವಿತ್ರವಾದ ದುರ್ಗಾನಮಸ್ಕಾರ ಪೂಜೆ ಮಂಗಳವಾರದಂದು ನಡೆಯಿತು. ಸಂಪೂರ್ಣ ವಿವರಣೆ ಸಹಿತವಾಗಿ ವಿಶೇಷ ಸಹಸ್ರಾರ್ಚನೆ ಸಮೇತ ದುರ್ಗಾನಮಸ್ಕಾರ ಪೂಜೆ ಮಾರ್ನೆಮಿಕಟ್ಟೆಯ ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ಕ್ಷೇತ್ರದಲ್ಲಿ ಜರುಗಿತು.
ಜ್ಯೋತಿಷ್ಯ ವಿದ್ವಾನ್ ದೈವಜ್ಞ ಶ್ರೀ ಕರಣ್ ಜ್ಯೋತಿಷಿಯವರ ಮನೆ ದೇವರಾದ ಶ್ರೀ ದೇವಿ ಪ್ರತ್ಯಂಗಿರಾ ವಿಪರೀತ ಮಹಾಭದ್ರಕಾಳ್ಯೈ ಅಮ್ಮನವರ ಅನುಗ್ರಹದೊಂದಿಗೆ ಅವರ ನಿವಾಸದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ವೈಭವದೊಂದಿಗೆ ಭಜನಾ ಸೇವೆಗಳೊಂದಿಗೆ ದುರ್ಗಾನಮಸ್ಕಾರ ಪೂಜೆ ಕರಣ್ಜ್ಯೋತಿಷಿ ಅವರ ನೇತೃತ್ವದಲ್ಲಿ ಜರುಗಿತು. ಸಂಪೂರ್ಣ ವಿವರಣೆ ಸಹಿತ ಈ ಪೂಜೆಯನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.
ಮಹಾಮಂಗಳಾರತಿ ಬಳಿಕ ನೆರೆದ ಎಲ್ಲಾ ಭಕ್ತರಿಗೂ ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಜನಾ ಸೇವೆ ನಡೆಯಿತು.
ಇದನ್ನೂ ಓದಿ : ತನ್ನ ಮನೆಯಲ್ಲಿ ತಾನೇ ಕದ್ದು ಠಾಣೆಗೆ ದೂರು ನೀಡಿದ್ದ ಯುವತಿ
ಪೂಜೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ವಿಶ್ವಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್, ಭುಜಂಗ ಕುಲಾಲ್, ಪುನೀತ್ ಅತ್ತಾವರ್, ನವೀನ್ ಮೂಡುಶೆಡ್ಡೆ, ಕಾರ್ಪೋರೇಟರ್ಗಳಾದ ವೀಣಾ ಮಂಗಳ, ಶೈಲೇಶ್, ಡಾ. ಪ್ರಜ್ವಲ್ ಮಾಣೆ, ಪುತ್ತೂರು ಬಿಜೆಪಿ ಮುಖಂಡ ದಯಾನಂದ ಶೆಟ್ಟಿ ಉಜಿರೆಮಾರು ಮೊದಲಾದವರು ಪಾಲ್ಗೊಂಡಿದ್ದರು. ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.
DAKSHINA KANNADA
ಸಾ*ಯುವ ಮೊದಲು ಸಾಲ ತೀರಿಸಿದ ಮುಮ್ತಾಜ್ ಅಲಿ!
ಮಂಗಳೂರು : ಮುಮ್ತಾಜ್ ಅಲಿ ಅವರ ಆತ್ಮಹ*ತ್ಯೆ ಒಂದೇ ದಿನದ ನಿರ್ಧಾರ ಆಗಿರಲಿಲ್ಲ ಅನ್ನೋದು ಇದೀಗ ಬೆಳಕಿಗೆ ಬಂದಿದೆ. ಹನಿ ಟ್ರ್ಯಾಪ್ ಮಾಡಿ ದುಡ್ಡು ಕೀಳಲು ನಿಂತವರ ಕಿರುಕು*ಳ ತಾಳಲಾರದೆ ಕುಗ್ಗಿ ಹೋಗಿ ಇಂತಹ ಒಂದು ತೀರ್ಮಾನಕ್ಕೆ ಬಂದಿದ್ದಾರೆ.
ಆತ್ಮಹ*ತ್ಯೆ ಮಾಡಿಕೊಳ್ಳುವ ಮೊದಲು ಸಾಲಗಾರರಿಗೆ ಬಾಕಿ ಇಟ್ಟಿದ್ದ ಒಂದೂವರೆ ಕೋಟಿ ಸಾಲವನ್ನು ಮುಮ್ತಾಜ್ ಅಲಿ ಮರು ಪಾವತಿ ಮಾಡಿದ್ದಾರೆ.
ಇದನ್ನೂ ಓದಿ : ಮುಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಕರಣ : ಇಬ್ಬರು ಅರೆಸ್ಟ್
ಅಷ್ಟೇ ಅಲ್ಲದೆ, ಶಾಲೆ ಹಾಗೂ ತನ್ನ ಫಿಶ್ ಮಿಲ್ ನೋಡಿಕೊಳ್ಳುವಂತೆ ತಮ್ಮ ಸಹೋದರರ ಹೆಸರಿನಲ್ಲಿ ಪತ್ರ ಬರೆದಿಟ್ಟಿದ್ದಾರೆ. ಈ ವಿಚಾರ ಇದೀಗ ಬೆಳಕಿಗೆ ಬಂದಿದ್ದು ಸಾಯುವ ನಿರ್ಧಾರ ಮೊದಲೇ ಮಾಡಿದ್ದರು ಅನ್ನೋದು ಸ್ಪಷ್ಟವಾಗಿದೆ. ಸಾಲಗಾರರಿಗೆ ಮೋಸ ಮಾಡದೇ ಹಣ ಹಿಂತಿರುಗಿಸಿದ ಮುಮ್ತಾಜ್ ಬಳಿಕ ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಸಾವಿನಲ್ಲೂ ತನ್ನ ಬದ್ಧತೆ ಮರೆಯದ ಮುಮ್ತಾಜ್ ಅಲಿ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
BELTHANGADY
ಉಕ್ಕಿ ಹರಿದ ನದಿಗಳು; ರಾತ್ರೋ ರಾತ್ರಿ ಭಯಾನಕ ವಾತವರಣ ಸೃಷ್ಠಿ
ಬೆಳ್ತಂಗಡಿ: ಅಚಾನಕ್ಕಾಗಿ ಬಂದ ಮಳೆಯಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಜನರು ಆತಂಕಕ್ಕೊಳಗಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ನಿನ್ನೆ (ಅ.8) ರಾತ್ರಿ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಚಾರ್ಮಾಡಿ, ದಿಡುಪೆ, ನೆರಿಯ ಭಾಗದ ನದಿಗಳಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿ ರಸ್ತೆಗೆ ನೀರು ನುಗ್ಗಿದೆ.
ನೆರಿಯಾದಲ್ಲಿ ಸೇತುವೆ ಮುಳುಗಡೆಯಾಗಿದಲ್ಲದೆ ಅಲ್ಲಲ್ಲಿ ರಸ್ತೆಗೆ ತೋಟಗಳಿಗೆ ನೀರು ನುಗ್ಗಿದೆ. ಇದರಿಂದ ನದಿ ತೀರದ ಜನರಲ್ಲಿ ಆತಂಕ ಉಂಟಾಗಿದೆ. ಸ್ಥಳೀಯರು ಹೇಳುವಂತೆ 2019 ರ ನೆರೆಯ ನಂತರ ಮಂಗಳವಾರ ರಾತ್ರಿ ನದಿಗಳಲ್ಲಿ ಅತೀ ಹೆಚ್ಚು ನೀರು ಬಂದಿದೆ. ರಾತ್ರಿ 7 ಗಂಟೆಯಿಂದ 9 ಗಂಟೆಯವರೆಗೆ ನೀರಿನ ಮಟ್ಟ ಏರಿಕೆ ಕಂಡಿದ್ದು ಮತ್ತೆ ಇಳಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
- BIG BOSS5 days ago
ಕನ್ನಡ ಬಿಗ್ಬಾಸ್ನಿಂದ ಲಾಯರ್ ಜಗದೀಶ್ ಎಲಿಮಿನೇಷನ್..!
- LATEST NEWS6 days ago
ಗರ್ಲ್ಫ್ರೆಂಡ್ ಜೊತೆ ಜಾಲಿ ರೈಡಿಂಗ್; ಹೆಂಡತಿ ಎದುರು ಬಂದ್ರೆ …!?
- LATEST NEWS3 days ago
ಶಿಕ್ಷಕಿಯ ಅ*ಶ್ಲೀಲ ವಿಡಿಯೋ ಹಂಚಿಕೆ; ನಾಲ್ವರು ವಿದ್ಯಾರ್ಥಿಗಳ ಬಂಧನ
- BIG BOSS5 days ago
BBK11: ಬಿಗ್ಬಾಸ್ ಮನೆಯಲ್ಲಿರೋ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆ; ಶೋ ವಿರುದ್ಧ ದೂರು ದಾಖಲು