Connect with us

    LATEST NEWS

    ಏಕಕಾಲದಲ್ಲಿ ಮೂರು ತೇರಿನ ಪ್ರದಕ್ಷಿಣೆ ಸಪ್ತೋತ್ಸವದಲ್ಲಿ ಕಂಗೊಳಿಸಿದ ಕೃಷ್ಣನ ವೈಭವದ ಉತ್ಸವ..!

    Published

    on

    ಏಕಕಾಲದಲ್ಲಿ ಮೂರು ತೇರಿನ ಪ್ರದಕ್ಷಿಣೆ ಸಪ್ತೋತ್ಸವದಲ್ಲಿ ಕಂಗೊಳಿಸಿದ ಕೃಷ್ಣನ ವೈಭವದ ಉತ್ಸವ..!

    ಉಡುಪಿ:  ಕೃಷ್ಣ ಮಠದ ರಥಬೀದಿಯಲ್ಲಿ  ಏಕಕಾಲದಲ್ಲಿ ಮೂರು ತೇರುಗಳು ಪ್ರದಕ್ಷಿಣೆ ಬರುವ ಈ ವಿಹಂಗಮ ನೋಟ ಕಾಣಲು ಸಾವಿರಾರು ಜನರು ಕೃಷ್ಣಮಠಕ್ಕೆ ಬರುತ್ತಾರೆ.

    ಎಂಟು ಶತಮಾನಗಳ ಹಿಂದೆ ಮಕರ ಸಂಕ್ರಾಂತಿಯ ದಿನವೇ ಆಚಾರ್ಯ ಮದ್ವರು ಕಡೆಗೋಲು ಕೃಷ್ಣನನ್ನು ಮಠದಲ್ಲಿ ಪ್ರತಿಷ್ಟಾಪಿಸಿದರು. ಹಾಗಾಗಿ ಸಂಕ್ರಾಂತಿಯಂದು ಮೂರು ತೇರಿನ ಉತ್ಸವ ನಡೆಯುತ್ತೆ.

    ಬ್ರಹ್ಮರಥದಲ್ಲಿ ಕೃಷ್ಣಮುಖ್ಯಪ್ರಾಣ ದೇವರನ್ನು ಇಟ್ಟು ಮೆರವಣಿಗೆ ಮಾಡಿದರೆ; ಮಹಾಪೂಜಾ ರಥ ಮತ್ತು ಗರುಡ ರಥಗಳಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವರ ಪ್ರದಕ್ಷಿಣೆ ನಡೆಯುತ್ತೆಕೃಷ್ಣಮಠದ ಈ ವಾರ್ಷಿಕ ಜಾತ್ರೆಯನ್ನು ಸಪ್ತೋತ್ಸವ ಎನ್ನುತ್ತಾರೆ. ಮಕರಸಂಕ್ರಾಂತಿ ಮತ್ತು  ಚೂರ್ಣೋತ್ಸವದಿಂದ ಈ ಮಹೋತ್ಸವ ಸಂಪನ್ನಗೊಳ್ಳುತ್ತದೆ.

    ಮಧ್ವಸರೋವರದಲ್ಲಿ ನಡೆಯುವ ತೆಪ್ಪೋತ್ಸವ ಈ ಆಚರಣೆಯ ಪ್ರಧಾನ ಆಕರ್ಷಣೆ. ಆಚಾರ್ಯ ಮದ್ವರ ಮಂದಿರದ ಸುತ್ತಲೂ ಪ್ರದಕ್ಷಿಣಾಕಾರವಾಗಿ ತೆಪ್ಪದಲ್ಲಿ ದೇವರನ್ನು ಕುಳ್ಳಿರಿಸಿ ಪೂಜಿಸಲಾಗುತ್ತೆ.ಮೂರು ತೇರಿನ ಉತ್ಸವ ಕಾಣಲು ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಜನರು ಬರುತ್ತಾರೆ. ಕೊಂಬು, ಕಹಳೆ ಚಂಡೆಯ ನಾದದ ನಡುವೆ ಅಷ್ಟ ಮಠಾಧೀಶರು ಉತ್ಸವದಲ್ಲಿ ಭಾಗವಹಿಸಿದ್ದರು.

    ವೈಭವದಿಂದ ನಡೆದ ಸುಡುಮದ್ದು ಪ್ರದರ್ಶನ ನೆರೆದಿದ್ದ ಜನರನ್ನು ಸಂಭ್ರಮದಿಂದ ಕುಣಿಯುವಂತೆ ಮಾಡಿತು. ಕೋವಿಡ್ ನಿಂದ ಬಳಲಿದ್ದ ಜನರಿಗೆ, ಈ ಮಹೋತ್ಸವ ನವೋಲ್ಲಾಸ ನೀಡಿತು. ರಥಬೀದಿಯಲ್ಲಂತೂ ಎಲ್ಲಿ ನೋಡಿದರೂ ಜನವೋ ಜನ!

    ಉಡುಪಿ ಕೃಷ್ಣನಿಗೆ ನಿತ್ಯವೂ ರಥೋತ್ಸವ ನಡೆಯುತ್ತೆ. ಆದರೆ ಮಕರ ಸಂಕ್ರಾಂತಿಯ ಸಪ್ತೋತ್ಸವದ  ಸಾಂಪ್ರದಾಯಿಕ ಆಚರಣೆಗಳ ಮೂಲಕ ವಿಶ್ವಪ್ರಸಿದ್ದಿ ಪಡೆದಿದೆಅಂದಹಾಗೆ ಈ ಬಾರಿ ಉಡುಪಿ ಕೃಷ್ಣ ಮಠದಲ್ಲಿ ನಡೆಯುವ ಸಪ್ತೋತ್ಸವ ಕೊರೊನಾ ಹಿನ್ನಲೆ ಸರ್ಕಾರ ಕೊವೀಡ್ ಗೈಡ್ ಲೈನ್ಸ್ ಪ್ರಕಾರ ನಡೆಸಲಾಯಿತು.ಹಲವಾರು ಮಂದಿ ಭಕ್ತರು ಕೃಷ್ಣ ಸಪ್ತೋತ್ಸವದಲ್ಲಿ ಪಾಲ್ಗೊಂಡು ಪುನೀತರಾದರು..

    ಮಕರ ಸಂಕ್ರಾಂತಿಯಂದು ಉಡುಪಿಯ ಕೃಷ್ಣ ದೇವರನ್ನು ಮಧ್ವಾಚಾರ್ಯರು ಪ್ರತಿಷ್ಟಾಪಿಸಿದರೆಂದು ಪ್ರತೀತಿ. ಈ ನಿಟ್ಟಿನಲ್ಲಿ ಅಷ್ಟಮಠಗಳ ರಥಬೀದಿಯಲ್ಲಿ ಕಡೆಗೋಲು ಕೃಷ್ಣನ ಉತ್ಸವ ನಿನ್ನೆ ಅತ್ಯಂತ ವೈಭವದಿಂದ ನಡೆಯಿತು.ಮಕರ ಸಂಕ್ರಾಂತಿಯಂದು ನಡೆಯುವ ಈ ಮೂರು ತೇರಿನ ಉತ್ಸವಕ್ಕೆ ವಿಶೇಷ ಮಹತ್ವವಿದೆ. ಸಪ್ತೋತ್ಸವದ ಸಂಭ್ರಮದಲ್ಲಿ ಅಷ್ಟಮಠಗಳ ರಥಬೀದಿ ಕಂಗೊಳಿಸುತ್ತಿದೆ. ಮಕರ ಸಂಕ್ರಾಂತಿಯ ಸಂಭ್ರಮ ಉಡುಪಿ ಕೃಷ್ಣ ಮಠದಲ್ಲಿ ವಿಜ್ರಂಭಿಸುತ್ತಿತ್ತು.

    LATEST NEWS

    ಲೈಂಗಿಕ ಕಿರುಕುಳ ಆರೋಪ; ಕೋರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ FIR.

    Published

    on

    ಬೆಂಗಳೂರು : ಚಿತ್ರರಂಗದಲ್ಲಿ ಲೈಂಗಿಕ ಪ್ರಕರಣಗಳು ಹೆಚ್ಚುತ್ತಿವೆ. ಈಗಾಗಲೇ ಕೆಲವು ನಟಿಯರು ತಮಗಾದ ಕೆಟ್ಟ ಅನುಭವಗಳ ಬಗ್ಗೆ ಹಂಚಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಸುದ್ದಿ ಹರಿದಾಡುತ್ತಿರುತ್ತದೆ. ಲೈಂಗಿಕ ದೌರ್ಜನ್ಯ ಆರೋಪಗಳು ಸೆಲೆಬ್ರಿಟಿಗಳ ಮೇಲೆ ಕೇಳಿ ಬರುತ್ತಿದ್ದು, ಇದೀಗ ಮತ್ತೊಂದು ಕೇಸ್ ದಾಖಲಾಗಿದೆ.

    ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಈ ಬಗ್ಗೆ 21 ವರ್ಷದ ಯುವತಿ ಆರೋಪಿಸಿದ್ದಾರೆ. ಹಲವು ಬಾರಿ ಲೈಂಗಿಕ ದೌರ್ಜನ್ಯವೆಸಗಿರುವುದಾಗ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಸೈಬರಾಬಾದ್ ರಾಯದುರ್ಗಂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

    ಜಾನಿಯೊಂದಿಗೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿರುವುದಾಗಿ ಹೇಳಿಕೊಂಡಿರುವ ಯುವತಿ, ಕಳೆದ ಕೆಲವು ತಿಂಗಳುಗಳಿಂದ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಚೆನ್ನೈ, ಮುಂಬೈ ಮತ್ತು ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ಒಟ್ಟಿಗೆ ಚಿತ್ರೀಕರಣದ ಸಮಯದಲ್ಲಿ ತನ್ನ ಮೇಲೆ ಅನೇಕ ಬಾರಿ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

    ಹೈದರಾಬಾದ್‌ನ ನರಸಿಂಗಿಯಲ್ಲಿರುವ ತನ್ನ ಸ್ವಂತ ಮನೆಯಲ್ಲಿ ಜಾನಿ ಹಲವು ಬಾರಿ ತನ್ನನ್ನು ನಿಂದಿಸಿರುವುದಾಗಿ ಆಕೆ ದೂರಿದ್ದಾರೆ.

    ಜಾನಿ ಮಾಸ್ಟರ್ ರಾಮ್ ಚರಣ್, ಜೂನಿಯರ್ ಎನ್ ಟಿಆರ್, ಚಿರಂಜೀವಿ, ದಳಪತಿ ವಿಜಯ್, ಧನುಷ್, ಪವನ್ ಕಲ್ಯಾಣ್, ಪುನೀತ್ ರಾಜ್ ಕುಮಾರ್, ಸುದೀಪ್ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ.

    Continue Reading

    LATEST NEWS

    ಶಿವಸೇನಾ ಶಾಸಕನ ಘೋಷಣೆ ; ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದರೆ 11 ಲಕ್ಷ

    Published

    on

    ಮಂಗಳೂರು/ದೆಹಲಿ: ಮೀಸಲು ವ್ಯವಸ್ಥೆಯನ್ನು ರದ್ದುಪಡಿಸುವ ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆಗಳ ಬಗ್ಗೆ ಶಿವಸೇನಾ ಶಾಸಕ ಸಂಜಯ್ ಗಾಯಕ್ವಾಡ್ “ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ನಾಲಿಗೆಯನ್ನು ಕತ್ತರಿಸಿದ”ವರಿಗೆ 11 ಲಕ್ಷ ನೀಡುತ್ತೇನೆ” ಎಂಬುವುದಾಗಿ ಕಿಡಿ ಕಾರಿದ್ದಾರೆ. ಕಾಂಗ್ರೆಸ್‌ನ ನಿಜವಾದ ಮುಖವನ್ನು ಬಯಲು ಮಾಡಲು ಮುಖ್ಯ ಕಾರಣವೆಂದರೆ ರಾಹುಲ್ ಗಾಂಧಿ ಅವರು ವಿದೇಶದಲ್ಲಿದ್ದಾಗ ಭಾರತದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಮುಗಿಸಲು ಬಯಸುವುದಾಗಿ ಹೇಳಿದ್ದು. ಅಮೆರಿಕ ಭೇಟಿಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಮೀಸಲಾತಿಯನ್ನು ಕೊನೆಗೊಳಿಸುವ ಕುರಿತು ಮಾತನಾಡಿದ್ದರು. ಇದು ಮೀಸಲಾತಿಯನ್ನು ಅಂತರ್ಗತವಾಗಿ ವಿರೋಧಿಸುವ ಮನಸ್ಥಿತಿಯನ್ನು ತೋರಿಸುತ್ತದೆ.


    ರಾಹುಲ್ ಗಾಂಧಿ ವಿರುದ್ದ ಗಾಯಕ್ವಾಡ್‌ ವಾಗ್ದಾಳಿ:
    ರಾಹುಲ್ ಗಾಂಧಿಯವರ ಹೇಳಿಕೆಗಳು “ಜನರಿಗೆ ಮಾಡುವ ದೊಡ್ಡ ವಿಶ್ವಾಸಘಾತುಕತನ” ಎಂದು ಕರೆದ ಶಿವಸೇನಾ ಶಾಸಕ, “ಮರಾಠರು, ಧಂಗಾರ್‌ಗಳು ಮತ್ತು ಒಬಿಸಿಗಳಂತಹ ಸಮುದಾಯಗಳು ಮೀಸಲಾತಿಗಾಗಿ ಹೋರಾಡುತ್ತಿವೆ ಆದರೆ ಅದಕ್ಕೂ ಮೊದಲು, ಗಾಂಧಿ ಅದರ ಪ್ರಯೋಜನಗಳನ್ನು ಕೊನೆಗೊಳಿಸಬೇಕು” ಎಂದು ಹೇಳಿದ್ದಾರೆ. “ರಾಹುಲ್ ಗಾಂಧಿಯವರು ಸಂವಿಧಾನದ ಪುಸ್ತಕವನ್ನು ತೋರಿಸುತ್ತಿದ್ದರು ಮತ್ತು ಬಿಜೆಪಿ ಅದನ್ನು ಬದಲಾಯಿಸುತ್ತದೆ ಎಂದು ನಕಲಿ ನಿರೂಪಣೆಯನ್ನು ಹರಡುತ್ತಿದ್ದರು. ಆದರೆ ದೇಶವನ್ನು 400 ವರ್ಷ ಹಿಂದಕ್ಕೆ ಕೊಂಡೊಯ್ಯುವ ಯೋಜನೆ ಕಾಂಗ್ರೆಸ್‌ನದ್ದು. ಒಂದೆಡೆ, ಮಹಾರಾಷ್ಟ್ರದಲ್ಲಿ ಮೀಸಲಾತಿಯ ಬೇಡಿಕೆಗಳು ಹೆಚ್ಚುತ್ತಿವೆ. ಅಲ್ಲಿ ರಾಹುಲ್ ಗಾಂಧಿ ದೇಶದಲ್ಲಿ ಮೀಸಲಾತಿಯನ್ನು ಕೊನೆಗೊಳಿಸುವ ಹೇಳಿಕೆಯನ್ನು ನೀಡಿದರು”ಎಂದಿದ್ದಾರೆ ಗಾಯಕ್ವಾಡ್.
    ಗಾಯಕ್ವಾಡ್‌ ವಿರುದ್ದ ಕಾಂಗ್ರೆಸ್ ಆರೊಪ:
    ರಾಹುಲ್ ಗಾಂಧಿ ವಿರೋಧವಾಗಿ ಆರೋಪ ಹೇರಿದ್ದ ಗಾಯಕ್ವಾಡ್ ವಿರುದ್ದ ಕಾಂಗ್ರೆಸ್ ಧ್ವನಿ ಎತ್ತುತ್ತಿದೆ. ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ವಿಜಯ್ ವಡೆತ್ತಿವಾರ್ ಅವರು ಶಿವಸೇನಾ ಶಾಸಕರ ಹೇಳಿಕೆಯನ್ನು “ಅಸಂಬದ್ಧ” ಎಂದಿದ್ದು ಅವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರು. “ಇಂತಹ ಟೀಕೆಗಳನ್ನು ಮಾಡುವುದು ಕಾನೂನಿಗೆ ವಿರುದ್ಧವಾಗಿದೆ. ಇಲ್ಲದಿದ್ದರೆ, ಮಹಾರಾಷ್ಟ್ರದ ಸಾರ್ವಜನಿಕರು ಮುಂದಿನ ದಿನಗಳಲ್ಲಿ ನಿಮ್ಮ ಸ್ಥಾನವನ್ನು ತೋರಿಸುತ್ತಾರೆ” ಎಂದಿದ್ದಾರೆ ವಡೆತ್ತಿವಾರ್.
    ಮಹರಾಷ್ಟ್ರದಿಂದಲೂ ಪ್ರತಿರೋಧ:
    ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ಅತುಲ್ ಲೋಂಧೆ ಮಾತನಾಡಿ ಸಂಜಯ್ ಗಾಯಕ್ವಾಡ್ ಸಮಾಜ ಮತ್ತು ರಾಜಕೀಯದಲ್ಲಿ ಬದುಕಲು ಅರ್ಹರಲ್ಲ. ಮಹಾರಾಷ್ಟ್ರದ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಅವರು ಗಾಯಕ್ವಾಡ್ ವಿರುದ್ಧ ಅಪರಾಧಿ ನರಹತ್ಯೆಯ ಆರೋಪವನ್ನು ಹೊರಿಸುತ್ತಾರೆಯೇ ಎಂದು ನಾವು ನೋಡಬೇಕಾಗಿದೆ ಎಂದಿದ್ದಾರೆ.
    ಕಾಂಗ್ರೆಸ್ ಎಂಎಲ್ಸಿ ಭಾಯಿ ಜಗತಾಪ್ ಅವರು “ಇವರು ರಾಜ್ಯದ ರಾಜಕೀಯವನ್ನು ಹಾಳು ಮಾಡಿದ್ದಾರೆ” ಎಂದು ಹೇಳಿ ಗಾಯಕ್ವಾಡ್ ಹೇಳಿಕೆಯನ್ನು ಖಂಡಿಸಿದ್ದಾರೆ.
    ಬಿಜೆಪಿ ಶಾಸಕರ ಹೇಳಿಕೆ:
    ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವಂಕುಲೆ ಮಾತನಾಡಿ “ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಮೀಸಲಾತಿಯನ್ನು ವಿರೋಧಿಸಿದರು, ಇದು ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ನಾವು ಮರೆಯುವಂತಿಲ್ಲ. ಮೀಸಲಾತಿ ನೀಡುವುದು ಎಂದರೆ ಮೂರ್ಖರನ್ನು ಬೆಂಬಲಿಸುವುದು ಎಂದು ರಾಜೀವ್ ಗಾಂಧಿ ಹೇಳಿದ್ದರು. ಈಗ ರಾಹುಲ್ ಗಾಂಧಿ ಅವರು ಮೀಸಲಾತಿಯನ್ನು ಕೊನೆಗೊಳಿಸುವುದಾಗಿ ಹೇಳಿದ್ದಾರೆ. ನಾವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳನ್ನು ಸಂವೇದನಾಶೀಲಗೊಳಿಸುತ್ತೇವೆ. ನೆಹರು, ರಾಜೀವ್ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಹೇಳಿಕೆ ಬಗ್ಗೆ ಅವರಿಗೆ ತಿಳಿಸುತ್ತೇವೆ. ಮರಾಠ ಕೋಟಾ ಕಾರ್ಯಕರ್ತ ಮನೋಜ್ ಜಾರಂಜ್ ಕೂಡ ಇದರ ಬಗ್ಗೆ ಯೋಚಿಸಬೇಕು” ಎಂದು ಹೇಳಿದ್ದಾರೆ.

    Continue Reading

    LATEST NEWS

    ಬೆಡ್ ಶೀಟ್ ಮಾರುವ ನೆಪದಲ್ಲಿ ವೃದ್ಧೆಯ ಮನೆಗೆ ನುಗ್ಗಿದ ಅಪರಿಚಿತ

    Published

    on

    ಉಡುಪಿ: ಅಂಬಲಪಾಡಿ ಸಮೀಪದ ಶ್ಯಾಮ್ ಸದನದಲ್ಲಿ ಬೆಡ್ ಶೀಟ್ ಮಾರುವ ನೆಪದಲ್ಲಿ ಅಪರಿಚಿತ ವ್ಯಕ್ತಿ ವೃದ್ಧೆಯೊಬ್ಬರ ಮನೆಗೆ ನುಗ್ಗಿರುವ ಘಟನೆ ನಡೆದಿದ್ದು, ಈ ಕುರಿತಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ದುಬೈನಲ್ಲಿ ಪ್ರವೀಣ್ ಎಂಬವರು ಕೆಲಸ ಮಾಡಿಕೊಂಡಿದ್ದು, ಅವರ ತಾಯಿ ವಿನೋದಿನಿ (82ವರ್ಷ) ಉಡುಪಿಯ ಅಂಬಲಪಾಡಿಯ ಶ್ಯಾಮ್ ಸದನದಲ್ಲಿ ಒಬ್ಬರೇ ವಾಸವಾಗಿದ್ದರು ಎನ್ನಲಾಗಿದೆ.

    ಸೆ. 14 ಶನಿವಾರದಂದು ಸಂಜೆ ಯಾರೋ ಅಪರಿಚಿತ ವ್ಯಕ್ತಿ ಬೆಡ್ ಶೀಟ್ ಮಾರುವ ನೆಪದಲ್ಲಿ ವಿನೋದಿನಿ ಅವರ ರೂಂ ಪ್ರವೇಶಿಸಿ ಬೆಡ್ ಶೀಟ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದ. ಇದನ್ನು ಗಮನಿಸಿದ ಮನೆಯ ಕೇರ್ ಟೇಕರ್ ತುಳಜಾ ಅವರು ಪ್ಲಂಬಿಂಗ್ ಕೆಲಸಕ್ಕೆ ಬಂದಿದ್ದ ಪ್ರಶಾಂತ್ ಅವರನ್ನು ಕರೆದುಕೊಂಡು ಬರುವಷ್ಟರಲ್ಲಿ ಅಪರಿಚಿತ ವ್ಯಕ್ತಿ ಮನೆಯಿಂದ ಹೊರಬಂದು ಕಾರಿನಲ್ಲಿ ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

    ಪ್ರವೀಣ್ ಸ್ನೇಹಿತ ಕಿರಣ್ ಕುಮಾರ್ ಅವರು ಘಟನೆಯ ಬಗ್ಗೆ ಉಡುಪಿ ನಗರ ಠಾಣೆಗೆ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿರುವುದಾಗಿ ವರದಿ ತಿಳಿಸಿದೆ.

    Continue Reading

    LATEST NEWS

    Trending