Connect with us

    LATEST NEWS

    ಇದು ಕಳ್ಳನೊಬ್ಬ ಜಡ್ಜ್‌ ಆದ ರೋಚಕ ಕಥೆ..! ಜಡ್ಜ್‌ ಆಗಿ ಆತ ಮಾಡಿದ್ದೇನು ಗೊತ್ತಾ..?

    Published

    on

    ನವದೆಹಲಿ : ಆತ ಖತರ್ನಾಕ್ ಕಳ್ಳ. ಭಾರತದ ಚಾರ್ಲ್ಸ್ ಎಂದೇ ಕುಖ್ಯಾತನಾಗಿದ್ದ. ಅವನ ಮಾಸ್ಟರ್ ಮೈಂಡ್ ಗೆ ಇಡೀ ದೇಶವೇ ಬೆರಗಾಗಿತ್ತು. ಆತನೇ ಧನಿ ರಾಮ್ ಮಿತ್ತಲ್. ನ್ಯಾಯಾಧೀಶರಂತೆ ನಟಿಸಿ, ಜೈಲಿನಲ್ಲಿದ್ದ 2 ಸಾವಿರಕ್ಕೂ ಅಧಿಕ ವಿಚಾರಣಾಧೀನ ಕೈದಿಗಳನ್ನು ಬಿಡುಗಡೆ ಮಾಡಿದ್ದ ಧನಿ ರಾಮ್ ಇಹಲೋಕ ತ್ಯಜಿಸಿದ್ದಾನೆ. ಆತನಿಗೆ 85 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಏಪ್ರಿಲ್ 18ರಂದು ಆತ ನಿಧ*ನನಾಗಿದ್ದಾನೆ.

    150 ಕ್ಕೂ ಹೆಚ್ಚು ಪ್ರಕರಣ:

    ಮಿತ್ತಲ್ ವೈಯಕ್ತಿಕ ಖುಷಿಗಾಗಿ 1968 ರಿಂದ ಕಳ್ಳತನ ಮಾಡಲು ಪ್ರಾರಂಭಿಸಿದ್ದ. ಬೇರೆ ಬೇರೆ ಫ್ಯಾನ್ಸಿ ನಂಬರ್ ನ ಕಾರುಗಳನ್ನು ಕದಿಯುತ್ತಿದ್ದ. ಹರಿಯಾಣ, ಚಂಡೀಗಢ, ಪಂಜಾಬ್, ರಾಜಸ್ಥಾನಗಳಲ್ಲಿ 150ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದ. ಅಲ್ಲದೇ, ಆತ, 90ಕ್ಕೂ ಹೆಚ್ಚು ಬಾರಿ ಕಂಬಿ ಎಣಿಸಿದ್ದ. 1000ಕ್ಕೂ ಅಧಿಕ ವಂಚನೆ ಕೇಸ್ ಇವನ ಮೇಲಿತ್ತು. ತನ್ನ ವೈಯಕ್ತಿಕ ಬಳಕೆಗಾಗಿ ಹರಿಯಾಣದ ಝಜ್ಜರ್‌ ನ್ಯಾಯಾಲಯದ ಪಾರ್ಕಿಂಗ್ ಏರಿಯಾದಲ್ಲಿ ಕಾರೊಂದನ್ನು ಕಳವುಗೈದು ಸುದ್ದಿಯಾಗಿದ್ದ. ಕೊನೆಯದಾಗಿ 2017 ರಲ್ಲಿ ತನ್ನ 77 ನೇ ವಯಸ್ಸಿನಲ್ಲಿ ಕಾರು ಕಳ್ಳತನ ಮಾಡಿದ್ದಕ್ಕೆ 95ನೇ ಸಲ ಅರೆಸ್ಟ್ ಮಾಡಿದ್ದು ದಾಖಲೆಯಾಗಿತ್ತು.

    ವೆಲ್ ಎಜ್ಯುಕೇಟೆಡ್ ಕಳ್ಳ :

    ಅಂದಹಾಗೆ ಈತ ಕಾಂಜಿಪೀಂಜಿ ಕಳ್ಳ ಅಂದುಕೊಳ್ಳಬೇಡಿ. ಈತ ವೆಲ್ ಎಜ್ಯುಕೇಟೆಡ್ ಕಳ್ಳ. ಬಿಎಸ್ಸಿ ಪದವೀಧರ. ತನ್ನ ಓದಿಗೆ ಕೆಲಸ ಸಿಕ್ಕಿಲ್ಲವೆಂದು ಸ್ಟೇಷನ್ ಮಾಸ್ಟರ್ ಆಗಿ ಕೆಲಸಕ್ಕೆ ಸೇರಿದ್ದ. ತಾನಾಯ್ತು ತನ್ನ ಕೆಲಸವಾಯ್ತು ಅಂತ ಇದ್ದಿದ್ರೆ ಆಗ್ತಿತ್ತು. ಆದ್ರೆ, ಆತ ಕಳ್ಳತನಕ್ಕೆ ಕೈ ಹಾಕಿ ಕೆಲಸ ಕಳೆದುಕೊಂಡ. ಕೋರ್ಟ್ ಆವರಣದಲ್ಲಿ ಕಾರು ಕದ್ದು ಕೆಲಸ ಕಳೆದುಕೊಂಡ. ಬಳಿಕ, ಕಳ್ಳತನವೇ ಕಸುಬಾಯಿತು.

    ಅಂದಹಾಗೆ, ಈತ ಕಾನೂನು ಪದವಿಯೂ ಮುಗಿಸಿದ್ದ. ಓದಿ ಜನರಿಗೆ ನ್ಯಾಯ ಕೊಡಿಸಬೇಕೆಂದು ಕಾನೂನು ಪದವಿ ಮಾಡುತ್ತಾರೆ. ಆದರೆ ಈತ ಜೈಲ್‌ಗೆ ಹೋಗುತ್ತಿದ್ದಾಗ ವಕೀಲರಿಗೆ ಫೀಸ್‌ ಕೊಡಬೇಕಾಗಿತ್ತು, ಅದೇ ನಾನೇ ಕಾನೂನು ಓದಿದರೆ ನಮ್ಮ ಕೇಸ್‌ ನಾನೇ ವಾದಿಸಬಹುದಲ್ವಾ ಎಂಬ ಉದ್ದೇಶದಿಂದ ಕಾನೂನು ಪದವಿ ಪೂರ್ಣಗೊಳಿಸುತ್ತಾನೆ. ಅಲ್ಲದೆ, ಕೋರ್ಟ್‌ನಲ್ಲಿ ತನ್ನ ಮೇಲಿದ್ದ ಕೇಸ್‌ಗಳನ್ನು ತಾನೇ ವಾದಿಸಿ ಗೆಲ್ಲುತ್ತಿದ್ದ.

    ಜಡ್ಜ್ ಕೂಡ ಆದ ಖದೀಮ:

    ಮಿತ್ತಲ್ ಜಡ್ಜ್ ಸೀಟ್ ನಲ್ಲೂ ಕೂತು ನ್ಯಾಯತೀರ್ಮಾನವನ್ನೂ ಮಾಡಿದ್ದ. ಆತ ಕಾನೂನು ಪದವಿಯನ್ನೂ ಮಾಡಿದ್ದ. ಹ್ಯಾಂಡ್ ರೈಟಿಂಗ್ ಅನಾಲಿಸಿಸ್ ಕೂಡ ಮಾಡಿದ್ದ. ಹೀಗಾಗಿ ಜಡ್ಜ್‌ ಪಕ್ಕದಲ್ಲೇ ಕುಳಿತುಕೊಳ್ಳವ ಕ್ಲರ್ಕ್ ಕೂಡ ಆಗಿ ಬಳಿಕ ಅಲ್ಲಿ ಖತರ್ನಾಕ್ ಕೆಲಸ ಮಾಡಿ ಜಡ್ಜ್ ಆಗಿದ್ದ. ಹರಿಯಾಣದ ಜಿಲ್ಲಾ ನ್ಯಾಯಾದೀಶರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಈತ ನಕಲಿ ಲೆಟರ್ ತಯಾರಿಸಿ ಜಡ್ಜನ್ನೇ 2 ತಿಂಗಳು ಮನೆಗೆ ಕಳುಹಿಸಿದ್ದ. ಬಳಿಕ ಮತ್ತೊಂದು ಲೆಟರ್ ತಯಾರಿಸಿ ಆ ನ್ಯಾಯಾಲಯಕ್ಕೆ ತನ್ನನ್ನೇ ಜಡ್ಜ್‌ ಆಗಿ ನೇಮಕ ಮಾಡಿಕೊಂಡಿದ್ದ.  ತಾನೇ ಬರೆದಿರುವ ಲೆಟರ್ ಇದಾಗಿದ್ರೂ, ಯಾರಿಗೂ ಅನುಮಾನ ಬಾರದಂತೆ ನಕಲಿ ಸೀಲ್‌ಗಳನ್ನು ಉಪಯೋಗಿಸಿ ಬರೆದಿದ್ದ. ಹೀಗೇ ಹೊಸ ಜಡ್ಜ್‌ ಆಗಿ ಕೋರ್ಟ್‌ಗೆ ಎಂಟ್ರಿ ಕೊಟ್ಟ ಈತ ಕೇವಲ 40 ದಿನದಲ್ಲಿ 2 ಸಾವಿರ ಖೈದಿಗಳನ್ನು ರಿಲೀಸ್ ಮಾಡಿದ್ದ. ಯಾವಾಗ ಈತನ ಮೇಲೆ ಅಧಿಕಾರಿಗಳಿಗೆ ಅನುಮಾನ ಬರಲು ಆರಂಭವಾಗಿತ್ತೋ ಆವಾಗ ಅಲ್ಲಿಂದ ಎಸ್ಕೇಪ್ ಆಗಿದ್ದ.

    ಇದನ್ನೂ ಓದಿ : WATCH VIDEO : ಮದುವೆಯಲ್ಲಿ ಪುರೋಹಿತರಿಗೆ ಯುವಕರ ಕೀಟಲೆ; ಛೇ! ಹೀಗೂ ಮಾಡ್ಬೋದಾ? ಎಂದ ನೆಟ್ಟಿಗರು

    ಈತ ಬುದ್ದಿವಂತ ಅಪರಾಧಿ! 

    ಕಳ್ಳತನ ಪ್ರಕರಣ ಸಾಮಾನ್ಯ. ಚಾಣಾಕ್ಷತನದಿಂದ ಕಳವುಗೈಯುವಲ್ಲಿ ಖದೀಮರು ನಿಸ್ಸೀಮರಾಗಿರುತ್ತಾರೆ. ಆದ್ರೆ, ಧನಿ ರಾಮ್ ಮಿತ್ತಲ್ ಮಾತ್ರ ಎಲ್ಲರಿಗಿಂತ ಒಂದು ಕೈ ಮೇಲು. ಭಾರತದ ಅತೀ ಹೆಚ್ಚು ಕಲಿತಿರುವ ಬುದ್ಧಿವಂತ ಅಪರಾಧಿ ಎಂಬ ಕುಖ್ಯಾತಿ ಈತನಿಗಿತ್ತು. ವಯಸ್ಸಾಗುತ್ತಿದ್ದಂತೆ ಕಳ್ಳತನ ಕೆಲಸ ಕಡಿಮೆ ಮಾಡುತ್ತಿದ್ದ. ಇಂತಹ ಭಯಂಕರ ಕಳ್ಳ ಇದೀಗ ಇಹಲೋಕ ತ್ಯಜಿಸಿದ್ದಾನೆ. ಆತನ ಮಗ ಈ ಬಗ್ಗೆ ಖಚಿತ ಪಡಿಸಿದ್ದಾರೆ.

    LATEST NEWS

    ಕಂಬಳ ಕ್ಷೇತ್ರಕ್ಕೆ ಮತ್ತೊಂದು ಅಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ

    Published

    on

    ಮಣಿಪಾಲ: ಕೆಲವು ದಿನಗಳ ಹಿಂದಷ್ಟೇ ಕಂಬಳ ಕ್ಷೇತ್ರದ ಉದಯೋನ್ಮುಖ ತಾರೆ ‘ಲಕ್ಕಿ’ಯ ಅಗಲುವಿಕೆಯಿಂದ ಬೇಸರಗೊಂಡಿದ್ದ ಕಂಬಳಾಭಿಮಾನಿಗಳಿಗೆ ಮತ್ತೊಂದು ಅಘಾ*ತ ಎದುರಾಗಿದೆ. ಉಭಯ ಜಿಲ್ಲೆಯ ಕೂಟಗಳಲ್ಲಿ ಹೆಸರು ಮಾಡಿದ್ದ ‘ನಾಗು’ ಎಂಬ ಕೋಣ ಹೃದಯಾಘಾ*ತದಿಂದ ಕೊನೆ*ಯುಸಿರೆಳೆದಿದೆ.

    ‘ನಾಗು’ ಕೋಣವು ಜಪ್ಪು ಮಂಕು ತೋಟ ಅನಿಲ್ ಶೆಟ್ಟಿಯವರ ಯಜಮಾನಿಕೆಯಲ್ಲಿ ಹಲವು ಕಂಬಳಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.

    ಬೈಂದೂರಿನಿಂದ ಬಂಢಾರಮನೆ ಸೇರಿದ್ದ ನಾಗು, ಬಳಿಕ ಚಿತ್ಪಾಡಿ ಅಪ್ಪು ಶೆಟ್ಟಿ ಅವರ ಹಟ್ಟಿ ಸೇರಿದ್ದ. ಎರಡು ವರ್ಷಗಳ ಹಿಂದೆ ನಾಗು ಕೋಣವನ್ನು ಜಪ್ಪು ಮಂಕುತೋಟ ಅನಿಲ್ ಶೆಟ್ಟಿ ಅವರು ಖರೀದಿ ಮಾಡಿದ್ದರು.

    ಕೂಟಗಳಲ್ಲಿ ಸಕ್ರಿಯವಾಗಿದ್ದ ಎರಡು ಕೋಣಗಳನ್ನು ಎರಡು ವಾರಗಳ ಅಂತರದಲ್ಲಿ ಕಂಬಳ ಕ್ಷೇತ್ರ ಕಳೆದುಕೊಂಡಿದೆ.

    Continue Reading

    LATEST NEWS

    WATCH : UDUPI : ಮನೆಯಂಗಳದಲ್ಲಿ ಚಿರತೆ ಪ್ರತ್ಯಕ್ಷ; ರಾತ್ರಿ ಇಡೀ ಕಣ್ಮರೆಯಾಗಿದ್ದ ಸಾಕು ನಾಯಿ ಬದುಕುಳಿದಿದ್ದು ಹೇಗೆ?

    Published

    on

    ಉಡುಪಿ : ಮನೆಯೊಂದರ ಅಂಗಳದಲ್ಲಿ ಚಿರತೆಯೊಂದು ಕಾಣಿಸಿಕೊಂಡ ಘಟನೆ ಉಡುಪಿ ಪೆರಂಪಳ್ಳಿಯಲ್ಲಿ ಶುಕ್ರವಾರ(ಜು.27) ತಡರಾತ್ರಿ ನಡೆದಿದೆ. ಚಿರತೆ ಓಡಾಟದ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮನೆಯಂಗಳದಲ್ಲಿ ಮಲಗಿದ್ದ ನಾಯಿಯ ಬೇಟೆಗಾಗಿ ಚಿರತೆ ಬಂದಿದ್ದು, ನಾಯಿಯನ್ನು‌ ಅಟ್ಟಿಸಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.


    ನಾಯಿ ಬೊಗಳಿದರೂ ಮನೆಯವರು ಹೊರಬಂದಿಲ್ಲ. ಕೆಲವು ದಿನಗಳಿಂದ ಮಣಿಪಾಲ ಆಸುಪಾಸಿನಲ್ಲಿ ಚಿರತೆ ಓಡಾಟದ ಮಾಹಿತಿ ತಿಳಿದಿದ್ದ ಮನೆಯವರು ಸುಮ್ಮನಿದ್ದರು ಎನ್ನಲಾಗಿದೆ. ಸ್ವಲ್ಪ ಹೊತ್ತಿನಲ್ಲಿ ನಾಯಿಯ ಶಬ್ದ ಕೂಡ ಕೇಳಿರಲಿಲ್ಲ. ಬೆಳಿಗ್ಗೆ ಮನೆಯ ಸಿಸಿಟಿವಿ ದ್ರಶ್ಯಾವಳಿ ಗಮನಿಸಿದಾಗ ಚಿರತೆ ನಾಯಿಯ ಹಿಂದೆ ಹೋಗುತ್ತಿರುವ ದೃಶ್ಯ ಕಂಡು ಭಯಭೀತರಾಗಿದ್ದಾರೆ.

    ಇದನ್ನೂ ಓದಿ : ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾ*ವು
    ಆದರೆ ಅಚ್ಚರಿ ಎಂಬಂತೆ ರಾತ್ರಿ ಇಡೀ ಕಣ್ಮರೆಯಾಗಿದ್ದ ಸಾಕು ನಾಯಿ ಬೆಳಿಗ್ಗೆ ಪ್ರತ್ಯಕ್ಷವಾಗಿದೆ. ಚಿರತೆಯ ಬಾಯಿಯಿಂದ ತಪ್ಪಿಸಿಕೊಂಡು ಪ್ರಾ*ಣ ಉಳಿಸಿಕೊಂಡಿದೆ. ಈ ಘಟನೆ ಮಣಿಪಾಲ, ಪೆರಂಪಳ್ಳಿ ಭಾಗದಲ್ಲಿ ಆತಂಕ ಸೃಷ್ಟಿಸಿದೆ. ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು, ಚಿರತೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

    Continue Reading

    DAKSHINA KANNADA

    ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾ*ವು

    Published

    on

    ತೆಲಂಗಾಣ: ಮೊಬೈಲ್ ಚಾರ್ಜ್ ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕಿ ಸಾ*ವನ್ನಪ್ಪಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಚಿಂತಕಣಿಲ್ಲಿ ಶುಕ್ರವಾರ ನಡೆದಿದೆ.

    ಅಂಜಲಿ ಕಾರ್ತಿಕಾ (9) ಮೃ*ತ ಬಾಲಕಿ. ಮೊಬೈಲ್​​​ನಲ್ಲಿ ಆಟವಾಡುತ್ತಿರುವ ವೇಳೆ ಚಾರ್ಜ್ ಖಾಲಿಯಾಗಿದ್ದು, ಅಂಜಲಿ ಮೊಬೈಲ್ ಚಾರ್ಜ್ ಮಾಡಲು ಹೋಗಿದ್ದಾಳೆ. ಈ ವೇಳೆ ವಿದ್ಯುತ್ ಸ್ಪರ್ಶಿಸಿದ್ದು, ಬಾಲಕಿ ಕುಸಿದು ಬಿದ್ದಿದ್ದಾಳೆ.

    ಕುಸಿದು ಬಿದ್ದು ಒದ್ದಾಡುತ್ತಿರುವ ಬಾಲಕಿಯನ್ನು ಗಮನಿಸಿದ ಆಕೆಯ ಪೋಷಕರು ತಕ್ಷಣ ಗ್ರಾಮದ ಖಾಸಗಿ ವೈದ್ಯರ ಬಳಿ ಕರೆದೊಯ್ದಿದ್ದಾರೆ. ಆದರೆ ಬಾಲಕಿ ಅದಾಗಲೇ ಮೃ*ತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.

    ಬಾಲಕಿ ಆಟವಾಡುತ್ತಿದ್ದಂತೆ ಒದ್ದೆ ಕೈಯಲ್ಲಿ ಹೋಗಿ ವಿದ್ಯುತ್ ಸ್ಪರ್ಶಿಸಿರುವುದೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಕೆಲ ಹೊತ್ತಿನ ಹಿಂದೆ ಮನೆಯಲ್ಲಿ ಕುಣಿದು ಕುಪ್ಪಳಿಸುತ್ತಾ ಆಟವಾಡುತ್ತಿದ್ದ ಬಾಲಕಿ ಏಕಾಏಕಿ ಪ್ರಾ*ಣ ಕಳೆದುಕೊಂಡಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಮೃ*ತ ಬಾಲಕಿ ಅಂಜಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿ. ತಂದೆ ರಾಮಕೃಷ್ಣ ದೂರಿನ ಮೇರೆಗೆ ಎಸ್‌ಎಸ್‌ಐ ನಾಗುಲ್ಮೀರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    LATEST NEWS

    Trending