LATEST NEWS
WATCH VIDEO : ಕಣ್ಣಿಗೆ ಬಿತ್ತು ಹಲಸಿನ ಮರ…ಗಜರಾಜ ಹಲಸಿನ ಹಣ್ಣನ್ನು ಹೇಗೆ ಕೊಯ್ದ ಗೊತ್ತಾ!?
ಮಂಗಳೂರು : ಆನೆಗಳು ಬುದ್ಧಿವಂತ ಪ್ರಾಣಿಗಳು ಅನ್ನೋದರಲ್ಲಿ ಎರಡು ಮಾತಿಲ್ಲ. ಆನೆಗಳ ಬುದ್ಧಿವಂತಿಕೆ ಪ್ರದರ್ಶನದ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ. ಈ ದೃಶ್ಯಗಳನ್ನು ನೋಡಿ ಅನೇಕ ಮಂದಿ ಖುಷಿ ಪಡೋದು ಸಹಜ. ಇದೀಗ ಅಂತಹುದೇ ವೀಡಿಯೋವೊಂದು ವೈರಲ್ ಆಗಿದೆ.
ಆನೆಗಳು ರಸ್ತೆಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ತಿಂಡಿ – ತಿನಿಸುಗಳನ್ನು ತಿನ್ನುವ ವೀಡಿಯೋಗಳನ್ನು ಕಾಣುತ್ತೇವೆ. ಕಬ್ಬು ತುಂಬಿದ ಲಾರಿಯ ಅಡ್ಡಗಟ್ಟಿ ದರ್ಬಾರ್ ಮಾಡೋದನ್ನೂ ನೋಡುತ್ತೇವೆ. ಆದ್ರೆ, ಈ ವೀಡಿಯೋದಲ್ಲಿರೋ ಆನೆ ಮಾತ್ರ ಪಾಪ! ಹಾಗಲ್ಲಪ್ಪ…ತನಿಗೇನು ಬೇಕೋ ಅದನ್ನು ತಾನೇ ಪಡೆದಿದೆ.
ಹೌದು, ಆನೆಗಳಿಗೆ ಬಾಳೆ ಹಣ್ಣು, ಹಲಸು…ಹೀಗೆ ಹಣ್ಣು ಹಂಪಲು ಅಂದ್ರೆ ಇಷ್ಟ. ಈ ವೈರಲ್ ವೀಡಿಯೋದಲ್ಲಿ ಆನೆ ಹಲಸಿಗಾಗಿ ಆಸೆ ಪಟ್ಟಿದೆ. ಹಾಗಂತ ಆ ಆನೆ ಜನರಿಂದ ಕಸಿದಿಲ್ಲ. ಬದಲಿಗೆ ತಾನೇ ಹಲಸನ್ನು ಕಿತ್ತಿದೆ. ಅಯ್ಯೋ ಅದ್ರಲ್ಲೇನು ವಿಶೇಷ ಅವು ಹಣ್ಣನ್ನು ಗಿಡ-ಮರಗಳಿಂದ ಕಿತ್ತು ತಿನ್ನುತ್ತೆ ಅಲ್ವೇ ಅಂತೀರಾ…ಆದ್ರೆ, ಇಲ್ಲಿ ಆನೆ ಏನೋ ಹಲಸನ್ನು ಕಿತ್ತಿರೋದು ನಿಜ…ಆದ್ರೆ, ನಾನೇ ಬೇರೆ, ನನ್ನ ಸ್ಟೈಲೇ ಬೇರೆ ಎಂದು ಗಜರಾಜ ಹಲಸು ಕಿತ್ತಿರೋದು ವಿಶೇಷ.
ಜನವಸತಿ ಇರೋ ಪ್ರದೇಶದಲ್ಲಿ ಆನೆ ಸಾಗುತ್ತಿರುತ್ತದೆ. ಹೀಗೆ ಸಾಗುತ್ತಿರೋ ಆನೆಗೆ ಹಲಸಿನ ಮರವೊಂದು ಕಾಣಿಸುತ್ತೆ. ಇನ್ನು ಬಿಡುತ್ಯೇ…ತಕ್ಷಣ ಕಾರ್ಯಕ್ಕಿಳಿದ ಆನೆ ಅಲ್ಲೇ ಇದ್ದ ಕಟ್ಟಡದ ಮುಂಗಾಲಿನಲ್ಲಿ ಬಲ ಕೊಟ್ಟು, ಎರಡು ಕಾಲಿನಲ್ಲಿ ನಿಂತು, ಸೊಂಡಿಲನ್ನು ಎತ್ತರಿಸಿ ಕಾಯನ್ನು ಕೆಳಕ್ಕೆ ಬೀಳಿಸುತ್ತೆ. ಈ ದೃಶ್ಯವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ : ‘ಸಾಂಕೇತ್’ ಟ್ರೈಲರ್ ರಿಲೀಸ್…ವ್ಹಾವ್!ಥ್ರಿಲ್ಲಿಂಗ್ ಅಂದ್ರು ವೀಕ್ಷಕರು
ಸದ್ಯ ಈ ವೀಡಿಯೋವನ್ನು ಇನ್ಸ್ಟಾ ಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ತರಹೇವಾರಿ ಕಮೆಂಟ್ಸ್ ಮಾಡುತ್ತಿದ್ದಾರೆ.
LATEST NEWS
ವಸತಿ ಶಾಲೆಯಲ್ಲಿ ವಿಷಪೂರಿತ ಆಹಾರ ಸೇವಿಸಿ ಐವರು ಸಾ*ವು, 38 ಮಕ್ಕಳು ಅಸ್ವ*ಸ್ಥ
ಮಧ್ಯಪ್ರದೇಶದಲ್ಲಿರುವ ಯುಗಪುರುಷ ಧಾಮ್ ಬೌದ್ಧಿಕ ವಿಕಾಸ ಕೇಂದ್ರದಲ್ಲಿ ವಿಷಪೂರಿತ ಆಹಾರ ಸೇವಿಸಿ ಐದು ಮಕ್ಕಳು ಸಾ*ವನ್ನಪ್ಪಿದ್ದು, 38 ಮಂದಿ ಅಸ್ವ*ಸ್ಥರಾಗಿದ್ದಾರೆ. 38 ಮಕ್ಕಳ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲಾ ಮಕ್ಕಳು ನಗರದ ಸರ್ಕಾರಿ ಚಾಚಾ ನೆಹರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಲ್ವರನ್ನು ತೀವ್ರ ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.
ಒಟ್ಟು 38 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಈ ನಾಲ್ವರು ಐಸಿಯು ವಾರ್ಡ್ನಲ್ಲಿ ದಾಖಲಾಗಿದ್ದು, ಮುಂದಿನ 48 ಗಂಟೆಗಳ ಕಾಲ ಶಾಲೆಯಲ್ಲಿ ಯಾವುದೇ ಮಕ್ಕಳಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದರೆ, ಆಶ್ರಮದ ಮೇಲೆ ನಿಗಾ ಇಡುತ್ತೇವೆ ಎಂದು ಜಿಲ್ಲಾಧಿಕಾರಿ ಆಶೀಶ್ ಸಿಂಗ್ ತಿಳಿಸಿದ್ದಾರೆ.
ಘಟನೆಯ ತನಿಖೆ ನಡೆಸಲಾಗುತ್ತಿದೆ. ಆಶ್ರಮದಲ್ಲಿ ಸುಮಾರು 200 ಮಕ್ಕಳು ವಾಸಿಸುತ್ತಿದ್ದಾರೆ. ಇದನ್ನು ಎನ್ಜಿಒ ನಿರ್ವಹಿಸುತ್ತದೆ. 5 ರಿಂದ 15 ವರ್ಷದೊಳಗಿನ ಮಕ್ಕಳು ಅಲ್ಲಿದ್ದಾರೆ.
DAKSHINA KANNADA
ಪತಿಯ ಹ*ತ್ಯೆ ಪ್ರಕರಣ; ಪತ್ನಿ ಸಹಿತ ಐವರಿಗೆ ಜೀವಾವಧಿ ಸಜೆ
ಮಂಗಳೂರು: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೋರ್ವಳು ತನ್ನ ಪತಿಯನ್ನೇ ಕೊಲೆ ಮಾಡಿಸಿದ ಪ್ರಕರಣದಲ್ಲಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಹಿಳೆ ಸಹಿತ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಾಸರಗೋಡು: ಪುರುಷ ಹಾಗೂ ಮಹಿಳೆಯ ಮೃ*ತದೇಹ ವಸತಿಗೃಹದಲ್ಲಿ ಪತ್ತೆ
8 ವರ್ಷಗಳ ಹಿಂದೆ ಅಂದರೆ 2016ರಲ್ಲಿ ಈ ಘಟನೆ ನಡೆದಿತ್ತು. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾವೂರು ನಿವಾಸಿ ಇಸ್ಮಾಯಿಲ್ (59) ಕೊಲೆಯಾದವರು. ಅವರ ಪತ್ನಿ ನೆಬಿಸಾ(40), ಆಕೆಯ ಪ್ರಿಯಕರ ಕುತ್ತಾರುಪದವಿನ ಜಮಾಲ್ ಅಹಮ್ಮದ್ (38), ಉಳ್ಳಾಲದ ಅಬ್ದುಲ್ ಮುನಾಫ್ ಯಾನೆ ಮುನ್ನ (41), ಉಳ್ಳಾಲದ ಅಬ್ದುಲ್ ರೆಹಮಾನ್ (36) ಮತ್ತು ಬೋಳಿಯಾರ್ನ ಶಬೀರ್ (31) ಶಿಕ್ಷೆಗೊಳಗಾದವರು. ಇಸ್ಮಾಯಿಲ್ ಅವರು ನೆಬಿಸಾಳನ್ನು ಎರಡನೇ ವಿವಾಹವಾಗಿದ್ದು ಅವರು ನಾಲ್ವರು ಮಕ್ಕಳನ್ನು ಹೊಂದಿದ್ದರು. ನೆಬಿಸಾ ಮತ್ತು ಜಮಾಲ್ನಿಗೆ ಅನೈತಿಕ ಸಂಬಂಧವಿತ್ತು. ಇದು ಇಸ್ಮಾಯಿಲ್ಗೆ ಗೊತ್ತಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇದೇ ಕಾರಣಕ್ಕೆ ಆಗಾಗ್ಗೆ ಪತಿ -ಪತ್ನಿಯರ ನಡುವೆ ಗಲಾಟೆ ನಡೆಯುತ್ತಿತ್ತು. ಇದೇ ಹಿನ್ನೆಲೆಯಲ್ಲಿ ನೆಬಿಸಾ ಸುಪಾರಿ ನೀಡಿ ಪತಿಯನ್ನು ಕೊಲೆ ಮಾಡಿಸಿದ್ದಳು ಎಂದು ಆರೋಪಿಸಲಾಗಿತ್ತು. ಕೊಣಾಜೆ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರಾದ ಕಾಂತಜಾರು ಎಸ್.ವಿ. ಅವರು ಆರೋಪಿಗಳ ಅಪರಾಧ ಸಾಬೀತಾಗಿರುವುದರಿಂದ ಆರೋಪಿಗಳಿಗೆ ಜೀವಾವಧಿ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಕೊಲೆಯಾದ ಇಸ್ಮಾಯಿಲ್ ಅವರ ಮಕ್ಕಳಿಗೆ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ಮಾಡಿದ್ದಾರೆ.
LATEST NEWS
ಉಡುಪಿ: ಬೈಕ್ನ ಹೆಡ್ಲ್ಯಾಂಪ್ ನಲ್ಲಿ ಹೆಬ್ಬಾವು ಪತ್ತೆ
ಉಡುಪಿಯ ರಾಹುಲ್ ಎಂಬವರ ಬೈಕ್ನ ಹೆಡ್ಲ್ಯಾಂಪ್ ನಲ್ಲಿ ಹೆಬ್ಬಾವು ಸೇರಿಕೊಂಡಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಜುಲೈ 2 ರಂದು ರಾಹುಲ್ ಕಿನ್ನಿಮುಲ್ಕಿ ಪೆಟ್ರೋಲ್ ಬಂಕ್ ಬಳಿ ಬೈಕ್ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದರು. ರಾತ್ರಿ ಸುಮಾರ್ 8:30ಕ್ಕೆ ಕೆಲಸ ಮುಗಿಸಿ ವಾಪಸ್ಸಾದರು. ಹೊರಡಲು ತಯಾರಿ ನಡೆಸುತ್ತಿದ್ದಾಗ ಬೈಕ್ನಲ್ಲಿ ಹಾವು ಕಾಣಿಸಿಕೊಂಡಿದೆ. ಅಪಾಯದ ಅರಿವಾಗಿ ಕೂಡಲೇ ಬೈಕ್ ನಿಲ್ಲಿಸಿ ಅರಣ್ಯಾಧಿಕಾರಿಗಳ ಸಹಾಯ ಕೋರಿದ್ದಾರೆ. ಕರೆ ಸ್ವೀಕರಿಸಿದ ಪ್ರಾಣೇಶ್ ಪರ್ಕಳ ಅವರು ಸ್ಥಳಕ್ಕೆ ಧಾವಿಸಿ, ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.
ಸಂಪೂರ್ಣ ಪರೀಕ್ಷೆಯ ನಂತರ ಹಾವು ಯಾವುದೇ ಅಪಾಯವನ್ನು ಹೊಂದಿಲ್ಲ ಎಂದು ದೃಢಪಡಿಸಲಾಯಿತು ಮತ್ತು ಸುರಕ್ಷಿತವಾಗಿ ಹಿಡಿದು ರಕ್ಷಿಸಲಾಯಿತು.
- DAKSHINA KANNADA5 days ago
ಕರಾವಳಿಯಲ್ಲಿ ಮಳೆಗೆ ಮತ್ತೊಂದು ಬ*ಲಿ; ವಿದ್ಯುತ್ ತಂತಿ ಸ್ಪರ್ಶಿಸಿ ಯುವತಿ ಸಾ*ವು
- DAKSHINA KANNADA4 days ago
ಶಿರಾಡಿಘಾಟ್ ನಲ್ಲಿ ಸರಣಿ ಅಪಘಾ*ತ; ರಾಜಹಂಸ, ಐರಾವತ ಬಸ್ ಮುಖಾಮುಖಿ ಡಿ*ಕ್ಕಿ
- DAKSHINA KANNADA6 days ago
ಭಾರೀ ಮಳೆಗೆ ಧರೆ ಕುಸಿದು ಮನೆಗೆ ಹಾನಿ, ಮಣ್ಣಿನಡಿ ಸಿಲುಕಿದ ಮಕ್ಕಳ ರಕ್ಷಣೆ
- DAKSHINA KANNADA4 days ago
ಜೀವ ಉಳಿಸಿದ ನಾಯಿಯ ನಿಯತ್ತು ಹಾಗೂ ಯುವಕನ ಸಮಯ ಪ್ರಜ್ಞೆ!
Pingback: WATCH VIDEO : ಅಂ*ತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪತ್ತೆ! - NAMMAKUDLA NEWS - ನಮ್ಮಕುಡ್ಲ ನ್ಯೂಸ್