DAKSHINA KANNADA
ಇದು ಕೋವಿಡ್ಗಿಂತ ಭೀಕರ ಸೋಂಕು…ಜಗತ್ತಿಗೆ ಹರಡುವ ಆತಂಕದಲ್ಲಿ ತಜ್ಞರು..!
ಮಂಗಳೂರು ( ಅಮೆರಿಕಾ ) :“ಇದು ಕೋವಿಡ್ಗಿಂತ ನೂರು ಪಟ್ಟು ಕೆಟ್ಟದಾಗಿದೆ ಮತ್ತು ಸೋಂಕಿತರಲ್ಲಿ ಅರ್ಧದಷ್ಟು ಜನ ಸಾವಿಗೀಡಾಗುವ ಸಂಭವ ಇದೆ.” ಹೀಗಂತ ಮಾರಣಾಂತಿಕ ಸೋಂಕೊಂದರ ಬಗ್ಗೆ ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಯುಕೆ ಮೂಲದ ‘ಟ್ಯಾಬ್ಲಾಯ್ಡ್ ಡೈಲಿ ಮೇಲ್’ ವರದಿ ಮಾಡಿದ್ದು, ಈ ವಿಚಾರವನ್ನು ಇತ್ತೀಚೆಗೆ ಸಂಶೋಧಕರು ನಡೆಸಿದ H5N1ಕುರಿತಾದ ಚರ್ಚೆಯಲ್ಲಿ ಎತ್ತಲಾಗಿದೆ. ಸಂಶೋಧಕರು ಭೀಕರವಾದ ಪರಿಣಾಮ ಬೀರಬಲ್ಲ ಅಂತಹ ಒಂದು ಸೋಂಕಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
ಡೈಲಿ ಮೇಲ್ ವರದಿ ಪ್ರಕಾರ ಈ ವೈರಸ್ ಜಾಗತಿಕ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ನಿರ್ಣಾಯಕ ಮಿತಿಯನ್ನು ಸಮೀಪಿಸುತ್ತಿದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿರುವ ವಿಚಾರವನ್ನು ಪ್ರಸ್ತಾಪಿಸಿದೆ.
ಚರ್ಚೆಯಲ್ಲಿ ಭಾಗವಹಿಸಿದ್ದ ಸಂಶೋಧಕರ ಸಭೆಯಲ್ಲಿ ಮಾತನಾಡಿದ ಪಿಟ್ಸ್ಬರ್ಗ್ನ ಪ್ರಮುಖ ಪಕ್ಷಿ ಜ್ವರ ಸಂಶೋಧಕರಾದ ಡಾ.ಸುರೇಶ್ ಕೂಚಿಪುಡಿ “H5N1ಸಾಂಕ್ರಾಮಿಕ ರೋಗವನ್ನು ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಪಾಯಕಾರಿಯಾಗಿರುವ ಈ ಸಾಂಕ್ರಮಿಕ ವೈರಸ್ ರೋಗಕ್ಕೆ ಜಗತ್ತು ಅಪಾಯಕಾರಿಯಾಗಿ ಹತ್ತಿರವಾಗುತ್ತಿದೆ” ಎಂದು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮತ್ತಷ್ಟು ವಿಚಾರಗಳನ್ನು ತಿಳಿಸಿದ ಡಾ.ಸುರೇಶ್ ಕೂಚಿಪುಡಿ “ ನಾವು ಹೊಸ ವೈರಸ್ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಈಗಾಗಲೇ ಜಾಗತಿಕವಾಗಿ ಹರಡಿರುವ ವೈರಸ್ ಬಗ್ಗೆ ಮಾತನಾಡುತ್ತಿದ್ದೇವೆ. ಈಗಾಗಲೆ ಈ ವೈರಸ್ ಸಸ್ತನಿಗಳಿಗೆ ಸೋಂಕನ್ನು ಹರಡಿದ್ದು, ಇದು ಇನ್ನಷ್ಟು ಹರಡುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ ಈ ಅಣಬೆ ರೇಟ್ ಕೇಳಿದ್ರೆ ನಿಮ್ಮ ತಲೆ ತಿರುಗುತ್ತೆ…! ಹಾಗಂತ ಇದು ಮೋದಿ ತಿನ್ನೋ ಅಣಬೆಯಲ್ಲ..!
ಡಾ.ಸುರೇಶ್ ಕೂಚಿಪುಡಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕೆನಡಾ ಮೂಲದ Bio Niagara ಔಷಧಿ ಕಂಪೆನಿಯ ಸಂಸ್ಥಾಪಕ ಜಾನ್ ಪುಲ್ಟನ್ ಅವರು H5N1 ಸಾಂಕ್ರಾಮಿಕ ರೋಗ ತೀವೃತೆಯನ್ನು ಪಡೆದುಕೊಂಡಿದ್ದು, ಇದು ಕೋವಿಡ್ ಗಿಂತಲೂ ಹೆಚ್ಚು ಮಾರಕವಾಗಬಹುದು ಎಂದು ಎಚ್ಚರಿಸಿದ್ದಾರೆ.
ಸೋಂಕಿನ ಪರಿಣಾಮ ಏನು..?
“ಇದು ಕೋವಿಡ್ಗಿಂತ 100 ಪಟ್ಟು ಕೆಟ್ಟದಾಗಿ ಪರಿಣಾಮ ಬೀರಬಹುದು, ಅಥವಾ ಅದು ರೂಪಾಂತರಗೊಂಡು ಸಾವಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು. ಅದೇ ರೀತಿ ಮನುಷ್ಯನಿಗೆ ಈ ಸೋಂಕು ತಗುಲಿದರೆ ಪರಿಣಾಮ ಕಡಿಮೆ ಆದರೂ ಆಗಬಹುದು “ ಎಂದು ಪುಲ್ಚಾನ್ ಹೇಳಿದ್ದಾರೆ.
ಈ H5N1ಜ್ವರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಮಾಹಿತಿ ನೀಡಿದ್ದು, ಈ ಸೋಂಕಿನಿಂದ 2003 ರಿಂದ ಸಾವುಗಳು ಸಂಭವಿಸಿದೆ. ಪ್ರತಿ 100 ಜನ ಸೋಂಕಿತರಲ್ಲಿ 52 ಜನ ಸಾವಿಗೀಡಾಗಿದ್ದಾರೆ. 2003 ರಿಂದ ಇಲ್ಲಿವರಗೆ 882 ಪ್ರಕರಣಗಳು ದಾಖಲಾಗಿದ್ದು, 462 ಸಾವುಗಳು ಈ ಸೋಂಕಿನಿಂದ ಆಗಿದೆ. ಅದೇ ಕೋವಿಡ್ ಪ್ರಕರಣದಲ್ಲಿ ಸಾವಿನ ಪ್ರಮಾಣ ವ್ಯತಿರಿಕ್ತವಾಗಿದ್ದು, ಸಾವಿನ ಪ್ರಮಾಣವು ಶೇಕಡಾ 0.1 ಕ್ಕಿಂತ ಕಡಿಮೆಯಿದೆ. ಆದಾಗ್ಯೂ, ಸಾಂಕ್ರಾಮಿಕ ರೋಗದ ಪ್ರಾರಂಭದಲ್ಲಿ, ಇದು ಸುಮಾರು 20 ಪ್ರತಿಶತದಷ್ಟಿತ್ತು.
ಇದನ್ನೂ ಓದಿ ತೀವ್ರಗೊಳ್ಳುತ್ತಿರುವ ತಾಪಮಾನ; ಹೆಚ್ಚುತ್ತಿದೆ ಫುಡ್ ಪಾಯಿಸನಿಂಗ್ ಪ್ರಕರಣ
ಹಕ್ಕಿಯಿಂದ ಹಸುವಿಗೆ … ಹಸುವಿಂದ ಮನುಷ್ಯನಿಗೆ ಹರಡಿದ ಸೋಂಕು
ಮಿಚಿಗನ್ ನಲ್ಲಿ ಹಕ್ಕಿ ಜ್ವರ ಮನುಷ್ಯನಿಗೆ ತಗುಲಿದ ಮೊದಲ ಪ್ರಕರಣ ವರದಿಯಾಗಿದೆ. ಮಿಚಿಗನ್ ಕೋಳಿ ಫಾರ್ಮ್ ಮತ್ತು ಯುಎಸ್ನ ಟೆಕ್ಸಾಸ್ನಲ್ಲಿ ಮೊಟ್ಟೆ ಉತ್ಪಾದಕ ಘಟಕದಲ್ಲಿ ಈ ಪ್ರಕರಣ ದಾಖಲಾಗಿದೆ. ಹಕ್ಕಿ ಜ್ವರ ಹಸುವಿಗೆ ತಗುಲಿದ್ದು ಹಸುವಿನ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬನಿಗೆ ಈ ಸೋಂಕು ಹರಡಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಟೆಕ್ಸಾಸ್ನ ಡೈರಿ ಫಾರ್ಮ್ ಕೆಲಸಗಾರರಲ್ಲಿ H5N1 ಸೋಂಕನ್ನು ದೃಢಪಟ್ಟಿದೆ. ಅಮೆರಿಕಾದ ಶ್ವೇತಭವನವು ಈ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸೋಂಕಿನ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.
ಈ ಹಿಂದೆ 2022 ರಲ್ಲಿ ಕೊಲೊರಾಡೋದಲ್ಲಿ ಹಕ್ಕಿ ಜ್ವರ ಕೋಳಿಯಿಂದ ನೇರವಾಗಿ ಮನುಷ್ಯನಿಗೆ ಹರಡಿದ ಪ್ರಕರಣವ ವರದಿಯಾಗಿತ್ತು. ಈ ಸಂದರ್ಭದಲ್ಲಿ ಎಲ್ಲಾ ಕೋಳಿಗಳನ್ನು ಕೊಲ್ಲುವ ಮೂಲಕ ಸೋಂಕು ನಿಯಂತ್ರಣ ಮಾಡಲಾಗಿತ್ತು.
ಅಮೆರಿಕಾದ ಐದು ರಾಜ್ಯಗಳಾದ ಇದಾಹೋ, ಕಾನ್ಸಸ್ , ಮಿಚಿಗನ್, ನ್ಯೂ ಮೆಕ್ಸಿಕೊ ಮತ್ತು ಟೆಕ್ಸಾಸ್ ನ ಡೈರಿಗಳಲ್ಲಿ ಈ ಸೋಂಕು ವ್ಯಾಪಕವಾಗ ಹರಡಿದೆ ಎನ್ನಲಾಗಿದೆ. ಈ ಸೋಂಕಿನಿಂದ ಮನುಷ್ಯರಿಗೆ ಏನೂ ಹಾನಿ ಆಗಲಾರದು ಎಂದು ಯುಎಸ್ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಆದ್ರೆ ಅಮೆರಿಕಾದಲ್ಲಿ ತಾಜಾ ಮೊಟ್ಟೆಗಳ ಅತಿದೊಡ್ಡ ಉತ್ಪಾದಕರಿಗೆ ಈ ಸೋಂಕಿನಿಂದ ಆತಂಕ ಶುರುವಾಗಿದೆ.
H5N1 ಎಂದರೇನು?
ಲೈವ್ ಸೈನ್ಸ್ನ ವರದಿಯ ಪ್ರಕಾರ, H5N1 ಹಕ್ಕಿ ಜ್ವರದ ಒಂದು ಉಪವಿಭಾಗವಾಗಿದ್ದು, ಸಂಬಂಧಿತ ಪಕ್ಷಿ ಜ್ವರ ವೈರಸ್ಗಳ ಗುಂಪಾಗಿದೆ. ಇದು ಹೆಚ್ಚು ರೋಗಕಾರಕವೆಂದು ಪರಿಗಣಿಸಲಾಗಿದೆ ಏಕೆಂದರೆ ಇದು ಕೋಳಿಗಳಲ್ಲಿ ತೀವ್ರವಾದ ಮತ್ತು ಆಗಾಗ್ಗೆ ಮಾರಣಾಂತಿಕ ಅನಾರೋಗ್ಯವನ್ನು ಉಂಟುಮಾಡುತ್ತದೆ. ಇದು ಮುಖ್ಯವಾಗಿ ಪಕ್ಷಿಗಳ ಮೇಲೆ ಪರಿಣಾಮ ಬೀರುತ್ತದೆಯಾದರೂ, H5N1 ಕಾಡು ಪಕ್ಷಿಗಳು ಮತ್ತು ಸಾಂದರ್ಭಿಕವಾಗಿ ಮನುಷ್ಯರನ್ನು ಒಳಗೊಂಡಂತೆ ಸಸ್ತನಿಗಳಿಗೆ ಸಹ ಸೋಂಕು ತರುತ್ತದೆ. ಪಕ್ಷಿಯಲ್ಲದ ಜಾತಿಗಳಲ್ಲಿ, ರೋಗವು ಮಾರಕವಾಗಬಹುದು, ಆದರೆ ಕೆಲವು ಸಂದರ್ಭಗಳಲ್ಲಿ ಸೌಮ್ಯವಾಗಿರಬಹುದು ಅಥವಾ ಯಾವುದೇ ರೋಗಲಕ್ಷಣಗಳನ್ನು ತೋರಿಸದೇ ಇರಬಹುದು. H5N1 ವೈರಸ್ನ ಮೊದಲ ಪತ್ತೆ 1996 ರಲ್ಲಿ ಚೀನಾದಲ್ಲಿನ ಪಕ್ಷಿಗಳಲ್ಲಿ ವರದಿಯಾಗಿದೆ. ಒಂದು ವರ್ಷದ ನಂತರ, ಹಾಂಗ್ ಕಾಂಗ್ನಲ್ಲಿ ಕಾಣಿಸಿಕೊಂಡ ಈ ಸೋಂಕು ಪಕ್ಷಿಯಿಂದ ನೇರವಾಗಿ ಮನುಷ್ಯರಿಗೆ ಹರಡಿತ್ತು. ಈ ಸಂದರ್ಭದಲ್ಲಿ 18 ಪ್ರಕರಣಗಳಲ್ಲಿ 6 ಜನರ ಸಾವು ಸಂಭವಿಸಿತ್ತು
DAKSHINA KANNADA
ಬೆಂ*ಕಿಗೆ ಆಹುತಿಯಾದ ಹಡಗಿನಿಂದ ಅಪಾಯವಿಲ್ಲ, ಆತಂಕ ಬೇಡ : ಜಿಲ್ಲಾಧಿಕಾರಿ ಮುಲೈ ಮುಗಿಲನ್ ಸ್ಪಷ್ಟನೆ
ಮಂಗಳೂರು : ಮಂಗಳೂರು ಕರಾವಳಿಯ ಸಮುದ್ರದಲ್ಲಿ ಬೆಂ*ಕಿಗೆ ಆಹುತಿಯಾದ ವಿದೇಶಿ ಹಡಗಿನಿಂದ ಮಂಗಳೂರು ಕರಾವಳಿಗೆ ಯಾವುದೇ ಆತಂಕ ಇಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ.
ಜುಲೈ 19 ರಂದು ಗುಜರಾತ್ನಿಂದ ಕೊಲೊಂಬೋಕ್ಕೆ ತೆರಳುತ್ತಿದ್ದ ಸರಕು ಸಾಗಟದ ಹಡುಗು ಬೆಂ*ಕಿಗೆ ಆಹುತಿಯಾಗಿತ್ತು. ತಕ್ಷಣ ಕೋಸ್ಟ್ಗಾರ್ಡ್ ತಂಡ ನಿರಂತರ ನಲುವತ್ತು ಗಂಟೆ ಪ್ರಯತ್ನ ನಡೆಸಿ ಬೆಂಕಿ ನಂದಿಸುವ ಕೆಲಸವಾಗಿತ್ತು. ಬಳಿಕ ಹಡಗನ್ನು ಮಂಗಳೂರು ಕರಾವಳಿಯ 30 ನಾಟಿಕಲ್ ದೂರದಲ್ಲಿ ನಿಲ್ಲಿಸಲಾಗಿತ್ತು. ಇದರಿಂದ ತೈಲ ಸೋರಿಕೆ ಆಗುವ ಆತಂಕವನ್ನು ಹಲವರು ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : 5 ವರ್ಷದಲ್ಲಿ 20 ಕೋಟಿ ಲೂಟಿ..! ಮಹಾ ವಂಚಕಿ ಅರೆಸ್ಟ್..!
ಹಡಗು ಮುಳುಗಡೆಯಾಗುವ ಭೀತಿ ಇದ್ದು ಹಾಗಾದಲ್ಲಿ ಹಡಗಿನಲ್ಲಿರುವ ತೈಲ ಸೋರಿಕೆ ಆಗಬಹುದು ಎಂದು ಸುದ್ದಿಯಾಗಿತ್ತು. ಆದ್ರೆ, ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು, ಅಂತಹ ಯಾವುದೇ ಅಪಾಯ ಇಲ್ಲ ಎಂದು ಹೇಳಿದ್ದಾರೆ. ಅಂತಹ ಅವ*ಘಡ ನಡೆದಲ್ಲಿ ಅದನ್ನು ಎದುರಿಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಹಾಗೂ ಕೋಸ್ಟ್ಗಾರ್ಡ್ ಮತ್ತು ಕರಾವಳಿ ಕಾವಲು ಪಡೆ ಸನ್ನದ್ಧವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
DAKSHINA KANNADA
ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ
ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.
ಉತ್ತರದ ಬ್ರೇಕ್ ವಾಟರ್ 831 ಮೀಟರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.
ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.
DAKSHINA KANNADA
ವಿದೇಶಿ ಹಡಗಿನಲ್ಲಿ ಬೆಂಕಿ ಅವಘಡ; ಕರ್ನಾಟಕ ಕರಾವಳಿಯಲ್ಲಿ ಲಂಗರು ಹಾಕಿದ ಕಾರ್ಗೋ ಹಡಗು
ಮಂಗಳೂರು: ಗುಜರಾತ್ನಿಂದ ಕೊಲಂಬೋಕ್ಕೆ ವಿವಿಧ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ವಿದೇಶಿ ಮೂಲದ ಸರಕು ಸಾಗಾಟ ಹಡಗಿನಲ್ಲಿ ಅಗ್ನಿ ಆಕಸ್ಮಿಕ ನಡೆದ ಘಟನೆ ಬೆಳಕಿಗೆ ಬಂದಿದೆ.
ಜುಲೈ 19 ರಂದು ಕರ್ನಾಟಕ ಕರಾವಳಿಯ ಸಮುದ್ರದಲ್ಲಿ ಈ ದುರ್ಘಟನೆ ನಡೆದಿದ್ದು, ಕೋಸ್ಟ್ ಗಾರ್ಡ್ ತಂಡ ಹೆಲಿಕಾಪ್ಟರ್ ಹಾಗೂ ರಕ್ಷಣಾ ಹಡಗಿನ ಮೂಲಕ ಸತತ ನಲುವತ್ತು ಘಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು ಒಬ್ಬ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಹಡಗಿನ ಬೆಂಕಿ ನಂದಿಸಿ ಸಿಬ್ಬಂದಿಗಳ ರಕ್ಷಣೆ ಮಾಡಿದ ಬಳಿಕ ಹಡಗನ್ನು ಕರ್ನಾಟಕ ಕರಾವಳಿ ಭಾಗಕ್ಕೆ ತೆಗೆದುಕೊಂಡು ಬರಲಾಗಿದೆ. ಸದ್ಯ ಸುರತ್ಕಲ್ ಕಡಲ ಕಿನಾರೆಯಿಂದ ಸುಮಾರು 33 ನಾಟಿಕಲ್ ಮೈಲ್ ದೂರದಲ್ಲಿ ಹಡಗು ಲಂಗರು ಹಾಕಲಾಗಿದೆ. ಗುಜಾರಾತ್ನ ಮುಂದ್ರಾ ಬಂದರಿನಿಂದ ಹೊರಟಿದ್ದ ಈ ಹಡಗು ಪನಾಮ ದೇಶಕ್ಕೆ ಸೇರಿದ್ದಾಗಿ ಮಾಹಿತಿ ಲಭ್ಯವಾಗಿದೆ.
ಬೆಂಕಿ ಅವಘಡದಿಂದ ಸಂಪೂರ್ಣ ಹಾನಿಯಾಗಿರುವ ಹಡಗು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು, ಕೋಸ್ಟ್ ಗಾರ್ಡ್ ಸಿಬ್ಬಂದಿ ಹಡಗಿನ ಮೇಲೆ ನಿಗಾ ಇರಿಸಿದ್ದಾರೆ. ಹಡಗು ಮುಳುಗಡೆಯಾಗುವ ಸಾದ್ಯತೆಯ ಜೊತೆಗೆ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವ ಕೂಡಾ ಇದೆ. ಹೀಗಾಗಿ ಹಡಗು ಮುಳುಗಡೆಯಾದಲ್ಲಿ ಸಮುದ್ರಕ್ಕೆ ತೈಲ ಸೋರಿಕೆಯ ಆತಂಕ ಕೂಡಾ ಎದುರಾಗಿದೆ. ಹೀಗಾಗಿ ಹಡಗಿನ ಮೇಲೆ ನಿಗಾ ವಹಿಸಿರುವ ಕೋಸ್ಟ್ ಗಾರ್ಡ್ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.
- LATEST NEWS5 days ago
ಗೀಸರ್ನಿಂದ ವಿಷಾನಿಲ ಸೋರಿಕೆ; ಇಹಲೋಕ ತ್ಯಜಿಸಿದ ತಾಯಿ, ಮಗ
- LATEST NEWS5 days ago
ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ಲಕ್ಷಾಂತರ ರೂ. ಬೆಲೆ ಬಾಳುವ ವಜ್ರದ ನೆಕ್ಲೇಸ್
- LATEST NEWS7 days ago
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ರಿಕೆಟಿಗ
- DAKSHINA KANNADA2 days ago
ವಿಟ್ಲದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅನೈತಿಕ ಚಟುವಟಿಕೆ; ಸಾರ್ವಜನಿಕರನ್ನು ನೋಡಿ ಕಾಲ್ಕಿತ್ತ ಜೋಡಿ