bengaluru
ಗಮನಿಸಿ: ಇನ್ಮುಂದೆ ಪಂಚಾಯತ್ನಲ್ಲೂ ಸಿಗಲಿದೆ ಮ್ಯಾರೇಜ್ ಸರ್ಟಿಫಿಕೇಟ್….
ಬೆಂಗಳೂರು: ಇನ್ನು ಮುಂದೆ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ನೀಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇನ್ನು ಮುಂದೆ ಗ್ರಾಮಸ್ಥರು ತಮ್ಮ ತಮ್ಮ ಗ್ರಾಮ ಪಂಚಾಯಿತಿಗಳಲ್ಲೇ ವಿವಾಹ ನೋಂದಣಿ ಮಾಡಿಕೊಳ್ಳಬಹುದು.
ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿವಾಹ ನೋಂದಣಿ ಸೇವೆ ಲಭ್ಯವಿದ್ದು, ಪಿ.ಡಿ.ಒ.ಗಳಿಗೆ ವಿವಾಹ ನೋಂದಣಿ ಪ್ರಮಾಣ ಪತ್ರ ನೀಡುವ ಅಧಿಕಾರ ನೀಡಲಾಗಿದೆ.
ಇದರ ಜೊತೆಗೆ ಜನನ ಹಾಗೂ ಮರಣ ನೋಂದಣಿ ಪ್ರಮಾಣ ಪತ್ರವೂ ಗ್ರಾಮ ಕಚೇರಿಯಲ್ಲೇ ಸಿಗಲಿದೆ. ಈ ನಿರ್ಧಾರದಿಂದ ಜನರ ಸಮಯ ಉಳಿತಾಯ ಹಾಗೂ ನೋಂದಣಿ ಪತ್ರಕ್ಕಾಗಿ ತಾಲೂಕು ಮತ್ತು ಜಿಲ್ಲಾ ಕೇಂದ್ರಕ್ಕೆ ಅಲೆದಾಡುವುದು ತಪ್ಪಲಿದೆ.
bengaluru
ಚುನಾವಣೆ ಗೆಲ್ಲೋಕೆ ನನ್ನ ಹೆ*ಣ ಬೀಳಿಸೋಕು ಬಿಜೆಪಿಯವ್ರು ಸಿದ್ಧರಿದ್ದಾರೆ; ಜೀವ ಬೆದರಿಕೆ ಪತ್ರ ಹಿಡಿದು ಕಿಡಿಕಾರಿದ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಸದ್ಯ ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಈ ನಡುವೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆ*ದರಿಕೆ ಪತ್ರ ಬಂದಿದೆ. ಸ್ವತ: ಈ ಬಗ್ಗೆ ಪ್ರಿಯಾಂಕ ಖರ್ಗೆ ಅವರೇ ಹೇಳಿದ್ದಾರೆ.
ಎನ್ ಕೌಂಟರ್ ಬೆ*ದರಿಕೆ:
ಭಾರತೀಯ ಜನತಾ ಪಾರ್ಟಿಯವರು ಗಲಭೆ ಸೃಷ್ಟಿ ಮಾಡಿ ಚುನಾವಣೆ ಮಾಡಬೇಕು ಅಂತಿದ್ದಾರೆ. ನನ್ನ ಹೆ*ಣ ಬೀಳಿಸಿಯಾದರೂ ಚುನಾವಣೆ ಗೆಲ್ಲುವ ಯೋಜನೆಯಲ್ಲಿದ್ದಾರೆ. ಅಲ್ಲದೆ, ತನಗೆ ಮತ್ತೊಂದು ಜೀವ ಬೆ*ದರಿಕೆ ಪತ್ರ ಬಂದಿದೆ. ಅದರಲ್ಲಿ ತನ್ನನ್ನು ಎನ್ಕೌಂಟರ್ ಮಾಡುವುದಾಗಿ ಬೆ*ದರಿಕೆ ಹಾಕಲಾಗಿದೆ. ಫಿನ್ಲ್ಯಾಂಡ್ನಿಂದ ಪತ್ರ ಬಂದಿದೆ ಎಂದು ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮಗೆ ಬಂದಿರುವ ಜೀವ ಬೆದರಿಕೆ ಪತ್ರ ಓದಿದರು.
“ಪಂಚಾಮೃತದಿಂದ ಪೂಜೆ ಮಾಡಿದರೂ ನಿನ್ನ ಜಾತಿ ಬೇರೆಯಾಗುವುದಿಲ್ಲ. ಎಂತ ವೇಷ ಭೂಷಣ ಹಾಕಿದರೂ ನಿನ್ನ ಜಾತಿ ಬದಲಾಗುವುದಿಲ್ಲ. ಮಂತ್ರಿಯಾಗು, ರಾಜನಾಗೂ, ನಿನ್ನ ಸೊಕ್ಕು ಹೊಲೆಯ-ಮಾದಿಗ ಓಣಿಯಲ್ಲಿ ನಡೆಯುತ್ತೆ” ಎಂದು ಪತ್ರದಲ್ಲಿ ಅಶ್ಲೀಲ ಪದ ಬಳಸಿದ್ದಾರೆ. ಖಾಕಿಯಾದರೂ, ಖಾದಿಯಾದರೂ, ಯಾರಿಂದಲಾದರೂ ನಿನ್ನನ್ನು ಎನ್ಕೌಂ*ಟರ್ ಮಾಡುವುದು ಸತ್ಯ ಎಂದು ಪತ್ರದಲ್ಲಿ ಬರೆಯಲಾಗಿದೆ ಎಂದರು.
ಬೆದರಿಕೆ ಸಂಬಂಧ ಮಾರ್ಚ್ 13 ರಂದು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದೇನೆ. ವಿಕಾಸೌಧದಲ್ಲಿರುವ ನನ್ನ ಕಚೇರಿಗೆ ಕಲಬುರಗಿಯಿಂದಲೇ ಪತ್ರ ಬಂದಿದೆ. ಹೆದರಿಸುವುದು ಅಥವಾ ಬೆದರಿಸಲು ಬಂದರೆ ಅದಕ್ಕೆಲ್ಲ ನಾವು ಹೆದರುವುದಿಲ್ಲ ಎಂದು ಅವರು ಕಿಡಿಕಾರಿದ್ದಾರೆ.
bengaluru
ನೀವೆಷ್ಟು ಸಂತೋಷವಾಗಿದ್ದೀರಾ…? ಯಾರೆಷ್ಟು ಸಂತೋಷವಾಗಿದ್ದಾರೆ…?
ಮಂಗಳೂರು (New Delhi ) : ಜಗತ್ತಿನಲ್ಲಿ ಅತೀ ಹೆಚ್ಚು ಸಂತೋಷದಿಂದ ಬದುಕುತ್ತಿರುವ ಜನರು ಯಾರು ಗೊತ್ತಾ…? ಭಾರತದ ಜನರು ಎಷ್ಟು ಸಂತೋಷವಾಗಿ ಬದುಕುತ್ತಿದ್ದಾರೆ..? ಜಗತ್ತಿನ ದೊಡ್ಡ ದೊಡ್ಡ ದೇಶಗಳ ಸಂತೋಷದ ಕಥೆ ಏನು..? ಈ ಎಲ್ಲಾ ವಿಚಾರಗಳನ್ನು ಜಾಗತಿಕ ಸಂತೋಷ ಸೂಚ್ಯಾಂಕ ( World Happiness Report ) ವರದಿ ಬಹಿರಂಗ ಮಾಡಿದೆ. ವರದಿಯ ಪ್ರಕಾರ ಜಗತ್ತಿನ ದೊಡ್ಡ ದೊಡ್ಡ ದೇಶಗಳಾದ , ಅಮೇರಿಕಾ ( America ) ಅಥವಾ ಬ್ರಿಟನ್ ( Britain ) ದೇಶಗಳ ಜನರೂ ಕೂಡಾ ಸಂತೋಷದಿಂದ ಬದುಕುತ್ತಿಲ್ಲ. ಮಾರ್ಚ್ 20 ವಿಶ್ವ ಸಂತೋಷದ ದಿನವನ್ನು ಆಚರಿಸಲಾಗಿದೆ. ಈ ಹಿನ್ನಲೆಯಲ್ಲಿ ಸಂತೋಷದ ಸಂಶೋಧಕ ( Researcher ) ಪ್ರೊಫೆಸರ್ ಜೆನ್ನಿಫರ್ ಡಿ ಪಾವೊಲಾ ಅವರು ಸಂತೋಷ ಸೂಚ್ಯಂಕದ ವರದಿ ( Happiness Index Report ) ನೀಡಿದ್ದಾರೆ. ಈ ಸೂಚ್ಯಾಂಕದಲ್ಲಿ ಮೊದಲ ಸ್ಥಾನದಲ್ಲಿ ಯಾವ ದೇಶ ಇದೆ..? ಕೊನೆಯ ಸ್ಥಾನದಲ್ಲಿ ಯಾವ ದೇಶ ಇದೆ…? ನಮ್ಮ ದೇಶ ಯಾವ ಸ್ಥಾನದಲ್ಲಿದೆ ಅನ್ನೋ ಕಂಪ್ಲೀಟ್ ರಿಪೋರ್ಟ್ ಇದೆ.
ಸಂತೋಷದ ಸೂಚ್ಯಾಂಕದ ಮಾನದಂಡವೇನು..?
ಸಂತೋಷ ಸೂಂಚ್ಯಾಕದ ವರದಿಯನ್ನು ಪ್ರಕೃತಿಯೊಂದಿಗಿನ ಜನರ ಒಡನಾಟ, ಆರೋಗ್ಯಕರ ಕೆಲಸ, ವ್ಯಕ್ತಿಗಳಲ್ಲಿರುವ ಜೀವನ ತೃಪ್ತಿಯ ಸ್ವಯಂ-ಮೌಲ್ಯಮಾಪನ, ಜೊತೆಗೆ GDP ತಲಾವಾರು, ಸಾಮಾಜಿಕ ಬೆಂಬಲ, ಆರೋಗ್ಯಕರ ಜೀವಿತಾವಧಿ, ಸ್ವಾತಂತ್ರ್ಯ, ಹಾಗೂ ಜನರ ಜೀವನ ಮಟ್ಟವನ್ನು ಆಧರಿಸಿ ತಯಾರಿಸಲಾಗುತ್ತದೆ. ಹಣಕಾಸಿನ ಲಾಭ ನಷ್ಟದ ಲೆಕ್ಕಾಚಾರವಲ್ಲದೆ ಕಲ್ಯಾಣ ಸಮಾಜದಲ್ಲಿ ಜನ ಹೇಗೆ ಬದುಕು ಸಾಗಿಸುತ್ತಿದ್ದಾರೆ ಅನ್ನೋದು ಕೂಡಾ ಇಲ್ಲಿ ಪ್ರಮುಖವಾಗಿದೆ. ಇನ್ನು ಸರ್ಕಾರಿ ಸಂಸ್ಥೆಗಳ ಮೇಲಿನ ನಂಬಿಕೆ, ಭ್ರಷ್ಟಾಚಾರ, ಆರೋಗ್ಯ, ಮತ್ತು ಶಿಕ್ಷಣಗಳ ಬಗ್ಗೆ ಅಧ್ಯಯನ ನಡೆಸಿ ಈ ವರದಿ ತಯಾರಿಸಲಾಗಿದೆ. ಯುವ ಪೀಳಿಗೆ, ವೃದ್ಧರು , ಮಹಿಳೆಯರು , ಪುರುಷರು ಹೀಗೇ ಎಲ್ಲರ ಯಾವ ರೀತಿಯಲ್ಲಿ ಸಂತೋಷ ಅನುಭವಿಸುತ್ತಿದ್ದಾರೆ ಅಥವ ಕಷ್ಟವನ್ನು ಅನುಭಿಸುತ್ತಿದ್ದಾರೆ ಎಂಬ ಅಧ್ಯಯನದ ಮೂಲಕ ವರದಿ ತಯಾರಿಸಲಾಗಿದೆ.
ಎಲ್ಲಾ ವಿಭಾಗದಲ್ಲೂ 100 % ಸಾಧನೆ… ಸಂತೋಷದ ಬದುಕು…
ಸಂತೋಷದ ದೇಶ ಅಂದ ತಕ್ಷಣ ಅಮೆರಿಕಾ, ಚೀನಾ, ಬ್ರಿಟನ್ ಹೀಗೆ ಪ್ರಭಲ ರಾಷ್ಟ್ರಗಳ ಹೆಸರು ಹೆಚ್ಚಿನ ಜನರಿಗೆ ನೆನಪಾಗಬಹುದು. ಆದ್ರೆ ಹಣ ಮತ್ತು ಅಧಿಕಾರ ಹೊಂದಿದ ದೇಶಗಳಿಗಿಂತ ಸಮೃದ್ಧಿ ಹೊಂದಿದ ದೇಶ ಹೆಚ್ಚು ಸಂತೋಷವಾಗಿರುತ್ತದೆ ಅನ್ನೋದಿಕ್ಕೆ ಈ ಸಂತೋಷದ ಸೂಚ್ಯಂಕ ವರದಿ ಸಾಕ್ಷಿಯಾಗಿದೆ.
ಫಿನ್ಲ್ಯಾಂಡ್ ಈ ಎಲ್ಲಾ ವಿಭಾಗದಲ್ಲೂ ಪರಿಪೂರ್ಣತೆಯನ್ನು ಪಡೆದುಕೊಂಡು ವಿಶ್ವದ ಅತ್ಯಂತ ಸಂತೋಷದಾಯ ದೇಶ ಎನಿಸಿಕೊಂಡಿದೆ. ಸತತ ಏಳು ವರ್ಷಗಳಿಂದ ಫಿನ್ಲ್ಯಾಂಡ್ ( Finland ) ದೇಶ ಸಂತೋಷದ ಸೂಚ್ಯಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡು ಬಂದಿದೆ. ಇಷ್ಟೇ ಅಲ್ಲದೆ ಇದು ಸಮೃದ್ಧಿಯ ವಿಷಯದಲ್ಲಿ ಎಲ್ಲಾ ದೊಡ್ಡ ದೇಶಗಳನ್ನು ಹಿಂದಿಕ್ಕಿದೆ. ವಿಶೇಷವಾಗಿ ಈ ವರ್ಷದ ಸಂತೋಷ ಸೂಚ್ಯಂಕ ವರದಿಯಲ್ಲಿ ಡೆನ್ಮಾರ್ಕ್ , ಐಸ್ಲ್ಯಾಂಡ, ಮತ್ತು ಸ್ವೀಡನ್ ದೇಶಗಳು ಟಾಪ್ 20 ಒಳಗೆ ಸ್ಥಾನ ಪಡೆದುಕೊಂಡಿದೆ. ಇನ್ನು ಕುವೈತ್, ಕೊಸ್ಟರಿಕಾ ದೇಶಗಳು ಕೂಡಾ 12 -13 ರ ಸ್ಥಾನವನ್ನು ಅಲಂಕರಿಸಿಕೊಂಡಿದೆ.
ಭಾರತದ ಜನರು ಎಷ್ಟು ಸಂತೋಷವಾಗಿದ್ದಾರೆ…?
ವಿಶ್ವ ಸಂತೋಷ ಸೂಚ್ಯಾಂಕದಲ್ಲಿ ಭಾರತ ದೇಶ 126 ನೇ ಸ್ಥಾನ ಪಡೆದುಕೊಂಡಿದ್ದು, ವಿಶ್ವದ ಬಹುತೇಕ ರಾಷ್ಟ್ರಗಳಿಂದ ಹಿಂದೆ ಉಳಿದಿದೆ. ಕಳೆದ ವರ್ಷ ಕೂಡಾ ಭಾರತ ದೇಶ ಇದೇ ಸ್ಥಾನದಲ್ಲಿದ್ದು ಈ ವರ್ಷವೂ ಅದೇ ಸ್ಥಾನವನ್ನು ಕಾಯ್ದುಕೊಂಡಿದೆ.
ಜಗತ್ತಿನ ಶಕ್ತಿಶಾಲಿ ರಾಷ್ಟಗಳ ಕಥೆ ಏನು ..?
ಜಗತ್ತಿನ ಅತ್ಯಂತ ಶಕ್ರಿಶಾಲಿ ರಾಷ್ಟ್ರ…ಜಗತ್ತಿನ ದೊಡ್ಡಣ್ಣ ಅಂತಾನೆ ಕರೆಯುವ ಅಮೆರಿಕಾದಲ್ಲೂ ಜನರು ಸಂತೋಷವಾಗಿಲ್ಲ. ಅಮೆರಿಕಾ , ಚೀನಾ, ಜರ್ಮನಿ ಮೊದಲಾದ ದೇಶಗಳು ವಿಶ್ವದ 20 ಸಂತೋಷದ ದೇಶಗಳ ಪಟ್ಟಿಯಿಂದಲೇ ಹೊರಬಿದ್ದಿದೆ. ಸಮೀಕ್ಷೆ ಪ್ರಕಾರ ಅಮೆರಿಕಾ 23 ನೇ ಸ್ಥಾನ, ಜರ್ಮನಿ 24 ನೇ ಸ್ಥಾನ ಪಡೆದುಕೊಂಡಿದೆ. ಆ ಮೂಲಕ ಹಣ, ಅಂತಸ್ತು ಇದ್ದು, ಐಶಾರಾಮಿ ಜೀವನ ಸಾಗಿಸುವವರು ಸಂತೋಷವಾಗಿರಲಾರರು ಅನ್ನೋದ ಈ ವರದಿ ಸಾಬೀತು ಮಾಡಿದೆ.
ಕೊನೆಯ ಸ್ಥಾನದಲ್ಲಿದೆ ಅಫ್ಘಾನಿಸ್ತಾನ…
2020 ರಲ್ಲಿ ತಾಲಿಬಾನಿಗಳ ನಿಯಂತ್ರಣಕ್ಕೆ ಬಂದ ಅಫ್ಘಾನಿಸ್ತಾನ ಮಾನವೀಯ ವಿನಾಶದಿಂದ ಬಳಲುತ್ತಿದೆ. ಅಫ್ಘಾನಿಸ್ತಾನವನ್ನೂ ಸಮೀಕ್ಷೆಯಲ್ಲಿ ಸೇರಿಸಿಕೊಂಡು ವರದಿಯನ್ನು ಬಿಡುಗಡೆ ಮಾಡಲಾಗಿದೆ. ಜಗತ್ತಿನ ಎಲ್ಲಾ ದೇಶಗಳಿಗಿಂತಲೂ ಕೊನೆಯ 143 ನೇ ಸ್ಥಾನವನ್ನು ಅಫ್ಘಾನಿಸ್ತಾನ ಪಡೆದುಕೊಂಡಿದೆ.
bangalore
ಸದ್ದು ಮಾಡ್ತಾ ಇದೆ ‘ಕಾಂತಾರ ಚಾಪ್ಟರ್ 1’…! ಚಿತ್ರೀಕರಣಕ್ಕೂ ಮೊದಲೇ ಫುಲ್ ಡಿಮ್ಯಾಂಡ್..!
ಮುಂಬೈ : ರಿಷಬ್ ಶೆಟ್ಟಿ ( Rishab Shetty ) ನಿರ್ದೇಶನ ಮಾಡಿ ಅಭಿನಯಿಸಿರುವ ‘ಕಾಂತಾರ ಚಾಪ್ಟರ್ 1’ ( Kanthara Chapter 1 ) ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ. ಆದ್ರೆ ಈ ಸಿನೆಮಾ ಚಿತ್ರೀಕರಣ ಆರಂಭಕ್ಕೂ ಮೊದಲೇ ಭಾರಿ ಸದ್ದು ಮಾಡಿದೆ. ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದ್ದು ಭಾರೀ ನಿರೀಕ್ಷೆ ಹೊಂದಿದೆ. ವಿಶೇಷ ಅಂದ್ರೆ ಈ ಚಿತ್ರದ ಒಟಿಟಿ ಹಕ್ಕು ಕೋಟ್ಯಾಂತರ ರೂಪಾಯಿಗಳಿಗೆ ಮಾರಾಟವಾಗಿದೆ.
2022 ರಲ್ಲಿ ಕನ್ನಡ ಫಿಲ್ಮ ಇಂಡಸ್ಟ್ರೀ ಮಾತ್ರವಲ್ಲದೆ ಇಡೀ ದೇಶದಲ್ಲಿ ‘ಕಾಂತಾರ’ (Kanthara ) ಸದ್ದು ಮಾಡಿತ್ತು. ಬಾಕ್ಸ್ ಆಫೀಸ್ ದಾಖಲೆಯನ್ನು ಚಿಂದಿ ಉಡಾಯಿಸಿ ‘ಕಾಂತಾರ’ ಯಶಸ್ಸು ಗಳಿಸಿತ್ತು. ಈ ಯಶಸ್ಸಿನ ಬಳಿಕ ಪಾರ್ಟ್ 2 ತೆರೆಗೆ ಬರಲಿದೆ ಅನ್ನೋ ಸುದ್ದಿ ಅಭಿಮಾನಿಗಳು ಹಾಗೂ ಸಿನಿರಂಗದಲ್ಲೂ ಹರಿದಾಡಿತ್ತು. ನಿರೀಕ್ಷೆ ಹುಸಿಯಾಗದಂತೆ ರಿಶಬ್ ಶೆಟ್ಟಿ ‘ಕಾಂತಾರ ಚಾಪ್ಟರ್ 1’ ಪೋಸ್ಟರ್ ಬಿಡುಗಡೆ ಮಾಡಿದ್ದರು. ಕರಾವಳಿಯ ಪೌರಾಣಿಕ ಹಿನ್ನಲೆಯನ್ನು ಇಟ್ಟುಕೊಂಡು ‘ಕಾಂತಾರ ಚಾಪ್ಟರ್ 1’ ತೆರೆಗೆ ಬರಲಿದೆ ಅನ್ನೋದು ಪೋಸ್ಟರ್ ( poster )ನೋಡಿದ ಹಲವು ಫ್ಯಾನ್ಸ್ ಚರ್ಚೆ ಮಾಡಿದ್ದರು. ‘ಕಾಂತಾರ’ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ಮೂಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ‘ಕಾಂತಾರ’ ಸಿನೆಮಾದ ಒಟಿಟಿ ಹಕ್ಕನ್ನು ಅಮೇಜಾನ್ ಪ್ರೈಮ್ ಪಡೆದುಕೊಂಡಿತ್ತು. ಇದೀಗ ‘ಕಾಂತಾರ ಚಾಪ್ಟರ್ 1’ ಶೂಟಿಂಗ್ ಆರಂಭಕ್ಕೂ ಮೊದಲೇ ಅಮೇಜಾನ್ ಪ್ರೈಮ್ ಕೋಟ್ಯಾಂತರ ರೂಪಾಯಿಗಳಿಗೆ ಒಟಿಟಿ ಹಕ್ಕು ಪಡೆದುಕೊಂಡಿದೆ.
There is no calamity greater than lavish desires. Such a calamity caused by a petty king ignites a rage in the heart of God's chosen tribal leader.#Kantara available post-theatrical release. #AreYouReady #PrimeVideoPresents pic.twitter.com/KgEVHu1T6W
— prime video IN (@PrimeVideoIN) March 19, 2024
ಮುಂಬೈಯಲ್ಲಿ ಮಂಗಳವಾರ (ಮಾರ್ಚ್ 19) ನಡೆದ ಅಮೇಜಾನ್ ಪ್ರೈಂನ ಕಾರ್ಯಕ್ರಮವೊಂದರಲ್ಲಿ ಈ ವಿಚಾರವನ್ನು ಬಹಿರಂಗವಾಗಿದೆ. ಐಷಾರಾಮಿ ಆಸೆಗಳಿಗಿಂತ ದೊಡ್ಡ ವಿಪತ್ತು ಇನ್ನೊಂದಿಲ್ಲ. ಒಬ್ಬ ಕ್ಷುಲ್ಲಕ ರಾಜನಿಂದ ಉಂಟಾಗುವ ಇಂತಹ ವಿಪತ್ತು, ದೇವರು ಆಯ್ಕೆ ಮಾಡಿದ ಬುಡಕಟ್ಟು ನಾಯಕನ ಹೃದಯದಲ್ಲಿ ಕ್ರೋಧವನ್ನು ಪ್ರಚೋದಿಸುತ್ತದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ನಂತರ ಇಲ್ಲಿ ಪ್ರಸಾರವಾಗಲಿದೆʼʼ ಎಂದು ಪ್ರೈಂ ತನ್ನ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದೆ.
‘ಕಾಂತಾರ ಚಾಪ್ಟರ್ 1’ ಸಿನಿಮಾ ತೆರೆಕಂಡು ಒಂದೂವರೆ ತಿಂಗಳ ಬಳಿಕ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಪ್ಯಾನ್ ಇಂಡಿಯಾ ಸಿನೆಮಾ ಅಲ್ಲದೇ ಇದ್ರೂ ‘ಕಾಂತಾರʼ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ‘ಕಾಂತಾರ ಚಾಪ್ಟರ್ 1’ ಕನ್ನಡ ಜೊತೆಗೆ ವಿವಿಧ ಭಾಷೆಯಲ್ಲಿ ತೆರೆಗೆ ಬರಲಿದ್ದು, ಅಂದಾಜು 125 ಕೋಟಿ ಬಜೆಟ್ನಲ್ಲಿ ಸಿನೆಮಾ ತಯಾರಾಗುತ್ತಿದೆ.
‘ಕಾಂತಾರ ಚಾಪ್ಟರ್ 1’ ರಿಷಬ್ ಶೆಟ್ಟಿ ಹೇಳಿದ್ದೇನು?
ಅಮೇಜಾನ್ ಪ್ರೈಂನ (amazon prime ) ಕಾರ್ಯಕ್ರಮದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇಂತಹ ಒಂದು ಸಿನೆಮಾ ನೀಡಬೇಕು ಅನ್ನೋದು ನನ್ನ ಕಾಲೇಜು ದಿನಗಳ ಕನಸಾಗಿತ್ತು. ‘ಕಾಂತಾರ’ ಸಿನೆಮಾಗೆ ಜನರು ಅಭೂತಪೂರ್ವ ಬೆಂಬಲ ನೀಡಿದ ಕಾರಣ ಈಗ ‘ಕಾಂತಾರ ಚಾಪ್ಟರ್ 1’ ಮಾಡಲು ಹೊರಟಿದ್ದೇವೆ. ನಮ್ಮ ಊರಿನಲ್ಲಿ ( ಕುಂದಾಪುರ ) ದೊಡ್ಡ ಸೆಟ್ಟ ಹಾಕುತ್ತಿದ್ದು, ಅಲ್ಲಿ ಶೀಘೃ ಚಿತ್ರೀಕರಣ ( shooting ) ಆರಂಭವಾಗಲಿದೆ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಯಾರೆಲ್ಲಾ ನಟಿಸಲಿದ್ದಾರೆ ಅನ್ನೋದು ಇನ್ನೂ ಬಹಿರಂಗವಾಗಿಲ್ಲ. ‘ಕಾಂತಾರ’ದಲ್ಲಿ ನಟಿ ಸಪ್ತಮಿ ಗೌಡ (Sapthami Gowda ) ನಟಿಸಿದ್ದು ಇದರಲ್ಲೂ ಇರ್ತಾರಾ ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.