Connect with us

    DAKSHINA KANNADA

    ತುಳುನಾಡಿನಲ್ಲೇ ತುಳು ಭಾಷಾ ಶಿಕ್ಷಕರ ಗೋಳು: 2 ವರ್ಷದಿಂದ ಇಲ್ಲ ಗೌರವ ಸಂಬಳ..!

    Published

    on

    ಮಂಗಳೂರು: ತುಳು ಭಾಷೆ ನಮ್ಮ ಹೆಮ್ಮೆ, ತುಳು ಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

    ಇದಕ್ಕಾಗಿ ಸಾರ್ವಜನಿಕ ಧರಣಿ, ಪ್ರತಿಭಟನೆ, ಟ್ವಿಟ್ಟರ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹ್ಯಾಶ್‌ ಟ್ಯಾಗ್‌ ಆಂದೋಲನ ನಡೆಸುತ್ತಿರುವವರು. ಈ ಕರುಣಾಜನಕ ಕಥೆ ಕೇಳಲೇಬೇಕು.

    ತುಳು ಅಕಾಡೆಮಿಯು ಸರಿಸುಮಾರು ಒಂದೂವರೆ ವರ್ಷದಿಂದೀಚೆಗೆ ತುಳು ಕಲಿಸುವ ಶಿಕ್ಷಕರಿಗೆ ಸಂಬಳ ನೀಡುತ್ತಿಲ್ಲ.

    ಇದರ ಮಧ್ಯೆ ಸಂಬಳ ಸಿಗದಿದ್ದರೂ ಟೀಚರ್‌ಗಳು ತುಳುವಿನ ಮೇಲಿನ ಅಭಿಮಾನ ಮತ್ತು ಪ್ರೀತಿಯಿಂದ ತಮ್ಮ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆಯುತ್ತಿದ್ದಾರೆ.

    ತುಳುವರ ಒತ್ತಾಸೆಯ ಮೇರೆಗೆ 2017ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳಿಗೆ ತೃತೀಯ ಭಾಷೆಯಾಗಿ ತುಳುವನ್ನು ಪಠ್ಯಪುಸ್ತಕದಲ್ಲಿ ಸೇರಿಸಲಾಯಿತು.

    ಇದರಂತೆ ಉಡುಪಿ ಜಿಲ್ಲೆಯಲ್ಲಿ 5 ಶಾಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 37 ಶಾಲೆಗಳು ಸೇರಿ ಒಟ್ಟಿಗೆ 42 ಶಾಲೆಗಳಲ್ಲಿ 43 ಶಿಕ್ಷಕರು ತುಳು ಭಾಷೆಯನ್ನು ಪಠ್ಯವಾಗಿ ಕಲಿಸುವ ಕಾಯಕ ಮಾಡುತ್ತಿದ್ದಾರೆ.

    ಈ ಶಿಕ್ಷಕರಿಗೆ 3000 ಸಾವಿರ ರೂಪಾಯಿ ಗೌರವಧನವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ನೀಡಲಾಗುತಿತ್ತು.

    ಅದರಂತೆ ಪ್ರತಿಯೊಂದು ತರಗತಿಗೆ ವಾರದಲ್ಲಿ ಸರಿಸುಮಾರು 4 ಗಂಟೆಗಳಷ್ಟು ತರಗತಿಗಳನ್ನು ತೆಗೆದುಕೊಳ್ಳಬೇಕು ಎಂಬುವುದು ನಿಯಮ.

    ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಶಾಲೆಗಳು ಹೊರತುಪಡಿಸಿ 8 ರಿಂದ 10ನೇ ತರಗತಿವರೆಗೆ ತುಳು ಐಚ್ಛಿಕ ಭಾಷೆಯನ್ನು ಕಲಿಸಲಾಗುತ್ತಿದೆ.

    ಕೊರೋನಾ ಆರಂಭಕ್ಕೂ ಮುನ್ನ ಈ ಶಿಕ್ಷಕರಿಗೆ ಪ್ರತಿತಿಂಗಳು ಕ್ಲಪ್ತಸಮಯಕ್ಕೆ ಗೌರವಧನ ಬರುತ್ತಿತ್ತು.

    ನಂತರ ಕೊರೋನಾ ಅಲೆಯಿಂದಾಗಿ ಶಾಲೆಗಳು ಮುಚ್ಚಿ ಹೋದ ಪರಿಣಾಮ ತರಗತಿಗಳನ್ನು ಸ್ಥಗಿತಗೊಳಿಸಲಾಗಿತ್ತು.

    ಆದರೆ ಇದೀಗ ಕೊರೋನಾ ಪ್ರಭಾವ ಕಡಿಮೆಯಾದ ಕಾರಣ ಮತ್ತೆ ತರಗತಿ ಪ್ರಾರಂಭವಾಗಿವೆ.

    ಇದಾಗಿ ತಿಂಗಳು ಐದಾಗುತ್ತಾ ಬಂದರೂ ಇದುವರೆಗೂ ತುಳು ಶಿಕ್ಷಕರಿಗೆ ಗೌರವಧನ ಮಾತ್ರ ಮರೀಚೀಕೆಯಾಗಿ ಉಳಿದಿದೆ.

    ಇದನ್ನೇ ನಂಬಿಕೊಂಡಿರುವ ಹತ್ತಾರು ಶಿಕ್ಷಕರ ಬದುಕು ಮೂರಾಬಟ್ಟೆಯಾಗಿದೆ. 2019ರ ಶೈಕ್ಷಣಿಕ ವರ್ಷದಲ್ಲಿ 1020 ಮಕ್ಕಳು ತುಳು ಐಚ್ಛಿಕ ಭಾಷೆಯನ್ನಾಗಿ ಆರಿಸಿದ್ದಾರೆ. ಪ್ರಸ್ತುತ ಎಷ್ಟು ಮಕ್ಕಳು ತುಳು ಭಾಷೆಯನ್ನು ಆರಿಸಿಕೊಂಡಿದ್ದಾರೆಂಬ ಸರಿಯಾದ ಮಾಹಿತಿ ಸಿಕ್ಕಿಲ್ಲ. ಈವರೆಗೆ ನಡೆದ ಪರೀಕ್ಷೆಗಳಲ್ಲಿ ಶೇಕಡಾ 100ರಷ್ಟು ಫಲಿತಾಂಶ ಪಡೆದು ಪಾಸು ಸಹ ಆಗಿದ್ದಾರೆ.

    ಈ ಫಲಿತಾಂಶಕ್ಕೆ ತುಳು ಶಿಕ್ಷಕರ ಬದ್ಧತೆ ಮುಖ್ಯ ಕಾರಣವಾಗಿದೆ. ಈ ಮುಂಚೆ ಕೊರೋನಾ ಸಮಯದಲ್ಲಿ ಒಂದು ಬಾರಿ ಅಕಾಡೆಮಿ ವತಿಯಿಂದ ಮೂರು ಸಾವಿರ ಹಾಗೂ ತುಳು ಕೂಟದಿಂದ

    ಮೂರು ಸಾವಿರ ಸೇರಿಸಿ ಆರು ಸಾವಿರ ಗೌರವಧನ ನೀಡಿದ್ದು ಬಿಟ್ಟರೆ ಮತ್ತೇನು ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹೆಸರು ಹೇಳಲಿಚ್ಛಿಸದ ತುಳು ಶಿಕ್ಷಕಿ.

    ಜಿಲ್ಲೆಯ ಒಂದು ಶಾಲೆಯಲ್ಲಂತೂ ವಿದ್ಯಾರ್ಥಿಗಳು ಪಾಠದಿಂದ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ತುಳು ಕಲಿಸುವ ಶಿಕ್ಷಕಿಗೆ ಅಲ್ಲಿನ ಮುಖ್ಯ ಶಿಕ್ಷಕರೇ ಹಲವು ತಿಂಗಳ ಕಾಲ ತಮ್ಮ ಕೈಯಿಂದ ಸಂಬಳ ನೀಡಿದ್ದಾರೆ ಎಂಬವುದು ಪರಿಸ್ಥಿತಿಗೆ ಹಿಡಿದ ಕೈಗನ್ನಡಿ.

    ಕೊರೋನಾ ಅಲೆ ಆರಂಭವಾದ ನಂತರ ತುಳು ಕಲಿಯುವ ಮಕ್ಕಳು ಕಲಿಕೆಯಿಂದ ವಂಚಿತಾಗಬಾರೆಂಬ ಉದ್ದೇಶದಿಂದ ಆನ್‌ಲೈನ್‌ ಪಾಠಗಳು ಪ್ರಾರಂಭಿಸಲಾಗಿತ್ತು.

    ಈ ವೇಳೆ ತಮ್ಮ ಮನೆಯಿಲ್ಲ ದೈನಂದಿನ ಖರ್ಚಿಗೆ ತತ್ವಾರ ಇದ್ದರೂ, ವಿದ್ಯಾರ್ಥಿಗಳಿಗೆ ತುಳು ಭಾಷೆಯನ್ನು ಧಾರೆ ಎರೆದಿದ್ದಾರೆ ಈ ಶಿಕ್ಷಕರು.

    ತುಳು ಅಕಾಡಮಿ ಅವರನ್ನು ಸಂಬಳ ನೀಡದೇ ನಡು ನೀರಿನಲ್ಲಿ ಕೈ ಬಿಟ್ಟರೂ ಶಿಕ್ಷಕರು ಮಾತ್ರ ತುಳು ವಿದ್ಯಾರ್ಥಿಗಳ ಕೈ ಬಿಟ್ಟಿಲ್ಲ.

    ಇದೀಗ ಕೊರೋನಾ ಬಂದಾಗಿನಿಂದ ಇದು ಮೂರನೇ ಶೈಕ್ಷಣಿಕ ವರ್ಷ, ಇನ್ನು 3 ತಿಂಗಳಲ್ಲಿ ಮತ್ತೆ ವಾರ್ಷಿಕ ಪರೀಕ್ಷೆ ಆರಂಭವಾಗಲಿದೆ. ಅದರಲ್ಲೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಭವಿಷ್ಯ ಈ ತುಳುವ ಶಿಕ್ಷಕರ ಕೈಯಲ್ಲಿದೆ.

    ಸಂಬಳ ಕೊಡುವ ಯೋಗ್ಯತೆ ಇಲ್ಲದಿದ್ದರೆ ಯಾಕೆ ಅಕಾಡೆಮಿ ನಡೆಸುತ್ತೀರಿ?
    ತುಳು ಅಕಾಡೆಮಿಗೆ ಸರ್ಕಾರದಿಂದ ಲಕ್ಷಾಂತರ ರೂಪಾಯಿ ಅನುದಾನ ಬರುತ್ತದೆ. ಜೊತೆಗೆ ಸ್ಥಳೀಯರ ದೊಡ್ಡ ಸಂಸ್ಥೆಗಳು ತುಳು ಭಾಷಾ ಮೆಲಿನ ಅಭಿಮಾನದಿಂದ ಹಣಕಾಸು ನೆರವು ಅಕಾಡೆಮಿಗೆ ನೀಡುತ್ತಿದೆ.

    ತುಳು ಹಬ್ಬ, ಹರಿದಿನದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಅಕಾಡೆಮಿಗೆ ತುಳುವನ್ನು ಮುಂದಿನ ಪೀಳಿಗೆಗೆ ಧಾರೆಯೆರೆಯುವ ಶಿಕ್ಷಕರಿಗೆ ಸಂಬಳ ನೀಡುವ ಯೋಗ್ಯತೆ ಇಲ್ಲವೇ? ಎಂದು ತುಳು ಭಾಷಾ ಪ್ರೇಮಿಯೊಬ್ಬರು ಖಾರವಾಗಿ ಪ್ರಶ್ನಿಸಿದ್ದಾರೆ.

    ಹೈಸ್ಕೂಲು ಟೀಚರಗಳದ್ದು ಡೋಲಾಯಾಮಾನ ಬದುಕು
    ದಕ್ಷಿಣ-ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರೌಢಶಾಲೆಗಳು ಖಾಸಗಿ ಶಾಲೆಗಳಾಗಿವೆ. ಇದರಲ್ಲಿ ಸೇವೆ ಸಲ್ಲಿಸುವ ಶಿಕ್ಷಕರು ಮಧ್ಯಮ ಹಾಗೂ ಬಡ ವರ್ಗದವರು.

    ಇವರಿಗೆ ಸಿಗುವ ಗೌರವಧನ ಮೂರು ಸಾವಿರ ರೂಪಾಯಿ ದೊಡ್ಡ ಮೊತ್ತವೇ ಸರಿ.

    ಕೆಲವು ಶಾಲೆಗಳಲ್ಲಿ ಕೇವಲ ತುಳು ಭಾಷೆ ಬೋಧಿಸಲೆಂದೇ ದೂರದೂರಿನಿಂದ ಶಿಕ್ಷಕರು ಬರುತ್ತಾರೆ. ಖರ್ಚಿಗೆ ದುಡ್ಡಿಲ್ಲದಿದ್ದರೂ ಇಂದು ಅಥವಾ ನಾಳೆ ನಮಗೆ ಬರಬೇಕಾದ ಗೌರವ ಧನ ಬರಬಹುದೆಂಬ ನಿರೀಕ್ಷೆಯಿಂದ ಅಲ್ಲಿ-ಇಲ್ಲಿ ಸಾಲ ಮಾಡಿ ಹಣ ಒಟ್ಟುಗೂಡಿಸಿ ಪ್ರಯಾಣಿಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿದ್ದಾರೆ.

    ಆದರೆ ಒಂದೂವರೇ ವರ್ಷ ಕಳೆದರೂ ಒಂದು ನಯಾಪೈಸೆಯನ್ನು ತುಳು ಶಿಕ್ಷಕರಿಗೆ ನೀಡದಿರುವುದು ಬೇಸರ ತರಿಸಿದೆ.

    DAKSHINA KANNADA

    ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ

    Published

    on

    ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.


    ಉತ್ತರದ ಬ್ರೇಕ್ ವಾಟರ್ 831 ಮೀಟ‌ರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.

    ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
    ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್‌ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್‌ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್‌ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.

    Continue Reading

    DAKSHINA KANNADA

    ವಿದೇಶಿ ಹಡಗಿನಲ್ಲಿ ಬೆಂಕಿ ಅವಘಡ; ಕರ್ನಾಟಕ ಕರಾವಳಿಯಲ್ಲಿ ಲಂಗರು ಹಾಕಿದ ಕಾರ್ಗೋ ಹಡಗು

    Published

    on

    ಮಂಗಳೂರು: ಗುಜರಾತ್‌ನಿಂದ ಕೊಲಂಬೋಕ್ಕೆ ವಿವಿಧ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ವಿದೇಶಿ ಮೂಲದ ಸರಕು ಸಾಗಾಟ ಹಡಗಿನಲ್ಲಿ ಅಗ್ನಿ ಆಕಸ್ಮಿಕ ನಡೆದ ಘಟನೆ ಬೆಳಕಿಗೆ ಬಂದಿದೆ.

     

     

    ಜುಲೈ 19 ರಂದು ಕರ್ನಾಟಕ ಕರಾವಳಿಯ ಸಮುದ್ರದಲ್ಲಿ ಈ ದುರ್ಘಟನೆ ನಡೆದಿದ್ದು, ಕೋಸ್ಟ್‌ ಗಾರ್ಡ್‌ ತಂಡ ಹೆಲಿಕಾಪ್ಟರ್‌ ಹಾಗೂ ರಕ್ಷಣಾ ಹಡಗಿನ ಮೂಲಕ ಸತತ ನಲುವತ್ತು ಘಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು ಒಬ್ಬ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

    ಹಡಗಿನ ಬೆಂಕಿ ನಂದಿಸಿ ಸಿಬ್ಬಂದಿಗಳ ರಕ್ಷಣೆ ಮಾಡಿದ ಬಳಿಕ ಹಡಗನ್ನು ಕರ್ನಾಟಕ ಕರಾವಳಿ ಭಾಗಕ್ಕೆ ತೆಗೆದುಕೊಂಡು ಬರಲಾಗಿದೆ. ಸದ್ಯ ಸುರತ್ಕಲ್ ಕಡಲ ಕಿನಾರೆಯಿಂದ ಸುಮಾರು 33 ನಾಟಿಕಲ್ ಮೈಲ್‌ ದೂರದಲ್ಲಿ ಹಡಗು ಲಂಗರು ಹಾಕಲಾಗಿದೆ. ಗುಜಾರಾತ್‌ನ ಮುಂದ್ರಾ ಬಂದರಿನಿಂದ ಹೊರಟಿದ್ದ ಈ ಹಡಗು ಪನಾಮ ದೇಶಕ್ಕೆ ಸೇರಿದ್ದಾಗಿ ಮಾಹಿತಿ ಲಭ್ಯವಾಗಿದೆ.

    ಬೆಂಕಿ ಅವಘಡದಿಂದ ಸಂಪೂರ್ಣ ಹಾನಿಯಾಗಿರುವ ಹಡಗು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು, ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಹಡಗಿನ ಮೇಲೆ ನಿಗಾ ಇರಿಸಿದ್ದಾರೆ. ಹಡಗು ಮುಳುಗಡೆಯಾಗುವ ಸಾದ್ಯತೆಯ ಜೊತೆಗೆ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವ ಕೂಡಾ ಇದೆ. ಹೀಗಾಗಿ ಹಡಗು ಮುಳುಗಡೆಯಾದಲ್ಲಿ ಸಮುದ್ರಕ್ಕೆ ತೈಲ ಸೋರಿಕೆಯ ಆತಂಕ ಕೂಡಾ ಎದುರಾಗಿದೆ. ಹೀಗಾಗಿ ಹಡಗಿನ ಮೇಲೆ ನಿಗಾ ವಹಿಸಿರುವ ಕೋಸ್ಟ್‌ ಗಾರ್ಡ್‌ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.

    Continue Reading

    DAKSHINA KANNADA

    ದಕ್ಷಿಣ ಕನ್ನಡ ಜಿಲ್ಲೆಯ ಮಹಾಪ್ರವಾಹಕ್ಕೆ 50 ವರ್ಷ; ಮರುಕಳಿಸದಿರಲಿ ‘ಆ ಶುಕ್ರವಾರ’ ಎನ್ನುತ್ತಿದ್ದಾರೆ ಕರಾವಳಿಗರು!

    Published

    on

    ಮಂಗಳೂರು: 1974 ಜುಲೈ 26ರ ಶುಕ್ರವಾರ ರಾತ್ರಿ ಇಡೀ ಸುರಿದ ಭಾರೀ ಮಳೆ ಮುಂಜಾನೆಯ ವೇಳೆಗೆ ನೆರೆ ರೌದ್ರಾವತಾರ ತಾಳಿತ್ತು.

    ಹಿಂದೆ ಎಂದೂ ಕಾಣದ ರೀತಿ ನೇತ್ರಾವತಿ ನದಿ ಉಕ್ಕಿ ಹರಿದಿತ್ತು. ನಸುಕಿನ ಜಾವ ನೇತ್ರಾವತಿ ನದಿ ಮನೆಯೊಳಗೆಯೇ ಪ್ರವೇಶಿಸಿತ್ತು.

    ಬಂಟ್ವಾಳ ಪೇಟೆ, ಪಕ್ಕದೂರುಗಳಿಗೆ ಸಂಪರ್ಕಿಸುವ ರಸ್ತೆಗಳೆಲ್ಲವೂ ಕ್ಷಣಮಾತ್ರದಲ್ಲೆ ಜಲಮಯ. ಎಲ್ಲಿಗೆ ಹೋಗೋದು? ಏನು ಮಾಡೋದು ಅನ್ನೋದನ್ನು ಯೋಚಿಸುವಷ್ಟರಲ್ಲೇ ಊರಿಗೆ ಊರೇ ಮುಳುಗಿತ್ತು. ಬಂಟ್ವಾಳ ಮತ್ತು ಉಪ್ಪಿನಂಗಡಿ ಪೇಟೆಯಲ್ಲಿ ವಾಹನಗಳ ಬದಲು ದೋಣಿಗಳು ಸಂಚರಿಸಿದ್ದವು. ಆ ಕಾಲದಲ್ಲಿಯೇ ಐವತ್ತು ಲಕ್ಷ ರೂಪಾಯಿ ನಷ್ಟ ಉಂಟಾಗಿತ್ತು.

    ಆ ಸಮಯದಲ್ಲಿ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆ ನೀರಿನಿಂದ ಆವರಿಸಿದ್ದವು, ಆವತ್ತಿನ ಕಾಲದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ನೂರಾರು ಮನೆ ಅಂಗಡಿ ನೆರೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದವು. ಈಗಲೂ ಕೂಡಾ ಆ ಭೀಕರ ನೆರೆಯು ನಮ್ಮ ಹಿರಿಯರ ಬಾಯಲ್ಲಿ (ಎಲ್ಪತ್ತ ನಾಲೆತ್ತ ಬೊಲ್ಲ) ಎಂದು ಪ್ರಖ್ಯಾತಿ ಹೊಂದಿದೆ.

    ಕಾಕತಾಳೀಯ ಎಂಬಂತೇ ಪ್ರವಾಹದ ಆ ದಿನ, ವಾರ ಎಲ್ಲವೂ ಸೇಮ್ ಆಗಿದ್ದು, ಮತ್ತೆ ಅದೇ ರೀತಿಯ ಪ್ರವಾಹ ಪರಿಸ್ಥಿತಿಯೂ ನೇತ್ರಾವತಿ ತಟದಲ್ಲಿದೆ. ಈಗಾಗಲೇ ನೇತ್ರಾವತಿ ಅಪಾಯ ಮಟ್ಟ ಮೀರಿದ್ದು, ಈ ಆತಂಕಕ್ಕೆ ಕಾರಣವೂ ಆಗಿದೆ.

    Continue Reading

    LATEST NEWS

    Trending