Connect with us

    LATEST NEWS

    ಮಾಜಿ ಸಚಿವ ತೀವ್ರ ಅಸ್ವಸ್ಥ; ಆಸ್ಪತ್ರೆಗೆ ದಾಖಲು

    Published

    on

     

    ಉಡುಪಿ: ತೀವ್ರ ಅನಾರೋಗ್ಯದಿಂದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

     

     

     

     

    ಇದನ್ನೂ ಓದಿ : ಮುಮ್ತಾಜ್ ಆಲಿ ಆತ್ಮಹ*ತ್ಯೆ ಪ್ರಕರಣ : ಇಬ್ಬರು ಅರೆಸ್ಟ್

     

    ತೀವ್ರ ಜ್ವರದಿಂದ ಅಸ್ವಸ್ಥ‌ಗೊಂಡ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಚಿವ ಪ್ರಮೋದ್ ಮಧ್ವರಾಜ್ ಅವರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಚಿಕಿತ್ಸೆಯು ನಡೆಯುತ್ತಿದ್ದು, ಮುಂದಿನ ಮಾಹಿತಿಯನ್ನು ವೈದ್ಯರು ತಿಳಿಸಬೇಕಷ್ಟೇ.

    Click to comment

    Leave a Reply

    Your email address will not be published. Required fields are marked *

    LATEST NEWS

    ಉಗ್ರರಿಂದ ಅಪ*ಹರಣಕ್ಕೊಳಗಾಗಿದ್ದ ಯೋಧ ; ದೇಹದಲ್ಲಿ ಗುಂಡೇಟಿನೊಂದಿಗೆ ಶ*ವವಾಗಿ ಪತ್ತೆ

    Published

    on

    ಮಂಗಳೂರು/ಜಮ್ಮು-ಕಾಶ್ಮೀರ: ಅನಂತನಾಗ್​ ಪ್ರದೇಶದಲ್ಲಿ ಉಗ್ರರಿಂದ ಅಪ*ಹರಣಕ್ಕೊಳಗಾಗಿದ್ದ ಯೋಧ ಶ*ವವಾಗಿ ಪತ್ತೆಯಾಗಿದದ್ದು, ದೇಹದಲ್ಲಿ ಹಲವು ಗುಂಡಿನ ಗುರುತುಗಳಿವೆ ಎಂಬುವುದು ತಿಳಿದು ಬಂದಿದೆ.

    ಆದರೆ, ಅವರಲ್ಲಿ ಒಬ್ಬರು ಎರಡು ಗುಂಡಿನ ಗಾಯಗಳ ನಂತರವೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮತ್ತೋರ್ವ ಯೋಧ ಬುಧವಾರ, ಅಕ್ಟೋಬರ್ 9 ರಂದು ಅನಂತನಾಗ್‌ನ ಪತ್ರಿಬಲ್ ಅರಣ್ಯ ಪ್ರದೇಶದಲ್ಲಿ ಶ*ವವಾಗಿ ಪತ್ತೆಯಾಗಿದ್ದು, ಅವರ ದೇಹದ ಮೇಲೆ ಗುಂಡಿನ ಗಾಯಗಳಿದ್ದು, ಶೋ*ಧ ಕಾರ್ಯಾಚರಣೆಯ ವೇಳೆ ಪತ್ತೆಯಾಗಿದ್ದಾರೆ.

     

    ಇದನ್ನೂ ಓದಿ: ಭಾರತೀಯ ವಾಯುಪಡೆಯ ದಿನದ ಮಹತ್ವ ನಿಮಗೆ ಗೊತ್ತಾ…? ಇಲ್ಲಿದೆ ಸಂಪೂರ್ಣ ಮಾಹಿತಿ !!

     

    ಗಾಯಗೊಂಡ ಮತ್ತೊಬ್ಬ ಯೋಧನನ್ನು ಅಗತ್ಯ ಚಿಕಿತ್ಸೆಗಾಗಿ ವೈದ್ಯಕೀಯ ಸೌಲಭ್ಯಕ್ಕೆ ರವಾನಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.

    Continue Reading

    LATEST NEWS

    ಸ್ಕೂಟರ್ ಗೆ ಡಿ*ಕ್ಕಿ ಹೊಡೆದ ಬಿಎಂಟಿಸಿ ಬಸ್‌; ಕೆಳಗೆ ಬಿದ್ದ ಸವಾರೆ ತಲೆ ಮೇಲೆ ಹರಿದ ಕಾರು

    Published

    on

    ಮಂಗಳೂರು/ಬೆಂಗಳೂರು :  ಬಿಎಂಟಿಸಿಗೆ ಮಹಿಳೆಯೊಬ್ಬರು ಬ*ಲಿಯಾಗಿದ್ದಾರೆ. ಸ್ಕೂಟರ್‌ನಲ್ಲಿ ಬರುತ್ತಿದ್ದಾಗ ಬಿಎಂಟಿಸಿ ಬಸ್‌ ಡಿ*ಕ್ಕಿ ಹೊಡೆದ ಬೆಂಗಳೂರಿನ ಉಲ್ಲಾಳ ಉಪನಗರ ಕೆರೆ ಬಳಿ ನಡೆದಿದೆ. ಉಲ್ಲಾಳ ಮುಖ್ಯರಸ್ತೆ 100 ಫೀಟ್ ರಸ್ತೆಯಲ್ಲಿ ಅಪಘಾ*ತ ಸಂಭವಿಸಿದೆ. ಮೋನಿಕಾ ಮೃ*ತ ದುರ್ದೈವಿ.

    ಸೊನ್ನೆನಾಹಳ್ಳಿಯ ಮಾರುತಿ ನಗರದ ನಿವಾಸಿಯಾಗಿದ್ದ ಮೋನಿಕಾ, ರಿಂಗ್ ರೋಡ್‌ನಲ್ಲಿರುವ ಷೋ ರೂಂನಲ್ಲಿ ಹೆಚ್ಆರ್ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಜ್ಯೂಪಿಟರ್ ಸ್ಕೂಟರ್‌ನಲ್ಲಿ ಬರುತ್ತಿದ್ದರು. 100 ಫೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದ ಕಾರಣ ಒಂದು ಬದಿಯ ರಸ್ತೆ ಕ್ಲೋಸ್ ಆಗಿತ್ತು. ಕೇವಲ ಒಂದೇ ಬದಿಯ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.

    ಈ ವೇಳೆ ಸ್ಕೂಟರ್‌ನಲ್ಲಿ ಬರುತ್ತಿದ್ದ ಮೋನಿಕಾಗೆ ಬಿಎಂಟಿಸಿ ಬಸ್‌ ಡಿ*ಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದಿದ್ದ ಮೋನಿಕಾ ತಲೆ ಮೇಲೆ ಹಿಂಬದಿಯಿಂದ ಬರುತ್ತಿದ್ದ ಕಾರಿನ ಚಕ್ರ ಹತ್ತಿದೆ. ಪರಿಣಾಮ ಮೋನಿಕಾ ತಲೆ ಛಿದ್ರಗೊಂಡಿದ್ದು, ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ.

    ಇದನ್ನೂ ಓದಿ : ಹಿಟ್​ ಆ್ಯಂಡ್​ ರನ್​ : ಬೈಕ್ ಡಿ*ಕ್ಕಿ ಹೊಡೆದು ತಾಯಿ – ಮಗ ಸಾ*ವು

    ಮಂಡ್ಯ ಮೂಲದ ಮೋನಿಕಾಗೆ‌ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು. ಪತಿ ಜತೆಗೆ ಸೊನ್ನೆನಾಹಳ್ಳಿಯ ಮಾರುತಿ ನಗರದಲ್ಲಿ ವಾಸವಾಗಿದ್ದರು.  ಘಟನಾ ಸ್ಥಳಕ್ಕೆ ಜ್ಞಾನಭಾರತಿ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

     

     

    Continue Reading

    LATEST NEWS

    ಹಿಟ್​ ಆ್ಯಂಡ್​ ರನ್​ : ಬೈಕ್ ಡಿ*ಕ್ಕಿ ಹೊಡೆದು ತಾಯಿ – ಮಗ ಸಾ*ವು

    Published

    on

    ಮಂಗಳೂರು/ಕೋಲಾರ : ಅಪರಿಚಿತ ವಾಹನ ಬೈಕ್​ಗೆ ಡಿ*ಕ್ಕಿಯಾಗಿ ತಾಯಿ-ಮಗ ಮೃತಪಟ್ಟ ಘಟನೆ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆ ಕ್ರಾಸ್ ಬಳಿ ನಡೆದಿದೆ.

    ಕೇತಗಾನಹಳ್ಳಿ ನಿವಾಸಿಗಳಾದ ಪದ್ಮಮ್ಮ(48ವ), ಪುತ್ರ ರಘು(26ವ) ಮೃ*ತಪಟ್ಟವರು. ಶ್ರೀನಿವಾಸಪುರದಿಂದ ಸ್ವಗ್ರಾಮ ಕೇತಗಾನಹಳ್ಳಿಗೆ ತೆರಳುವಾಗ ದುರಂ*ತ ಸಂಭವಿಸಿದೆ.

    ಇದನ್ನೂ ಓದಿ :  ಅತ್ಯಾಚಾರ ಆರೋಪ : ಶಾಸಕನ ವಿರುದ್ಧ FIR ದಾಖಲು.!

    ಅಪಘಾ*ತಕ್ಕೆ ಕಾರಣವಾದ ಅಪರಿಚಿತ ವಾಹನದ ಪತ್ತೆಗಾಗಿ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗುತ್ತಿದೆ. ಶ್ರೀನಿವಾಸಪುರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

     

    Continue Reading

    LATEST NEWS

    Trending