Connect with us

    FILM

    ‘ಮಂಜುಮ್ಮೆಲ್ ಬಾಯ್ಸ್‌’ ಸಿನೆಮಾಗೆ ಕೊನೆಗೂ ಬಿಗ್ ರಿಲೀಫ್..!!

    Published

    on

    Manjummel Boys: ಬ್ಲಾಕ್ ಬಾಸ್ಟರ್ ಹಿಟ್ ನೀಡಿದ್ದ ಮಳಯಾಲಂ ಸೂಪರ್ ಹಿಟ್ ಮೂವಿ ಮಂಜುಮ್ಮೆಲ್ ಬಾಯ್ಸ್’ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಂಡಿತ್ತು. ಸಿನಿ ಪ್ರೇಕ್ಷಕರನ್ನು ರಂಜಿಸಿದ್ದ ಈ ಸಿನೆಮಾ ನೈಜ ಘಟನೆಯನ್ನು ಆಧರಿಸಿ ನಿರ್ಮಾಣಗೊಂಡಿದ್ದು, ಅಪಾರ ಜನಮನ್ನಣೆ ಗಳಿಸುವುದರ ಜೊತೆಗೆ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ನಿರ್ಮಾಣ ಮಾಡಿತ್ತು. ಚಿದಂಬರಂ ಎಸ್ ಪೊದುವಾಳ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನೆಮಾ ಹೊಸ ದಾಖಲೆಯನ್ನೇ ನಿರ್ಮಾಣ ಮಾಡಿದೆ. ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಇತರ ರಾಜ್ಯಗಳಲ್ಲೂ ಮಂಜುಮ್ಮೆಲ್ ಬಾಯ್ಸ್‌ ಭರ್ಜರಿ ಸದ್ದು ಮಾಡಿದೆ. ಇವೆಲ್ಲದರ ಮಧ್ಯೆ ಈ ಹಿಂದೆ ಮಂಜುಮ್ಮೆಲ್ ಬಾಯ್ಸ್‌ ಸಿನೆಮಾಗೆ ಕಂಟಕವೊಂದು ಕಾಡಿತ್ತು. ಈ ಸಿನೆಮಾದಲ್ಲಿ ಬರುವ ‘ಕಣ್ಮಣಿ ಅನ್ಬೋದು ಕಾದಲನ್’ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಬಹಳ ಲೀಡ್‌ ಅನ್ನು ಕೂಡಾ ಪಡೆದಿತ್ತು.

    ವರ್ಷಗಳ ಹಿಂದೆ ಮಾಲಿವುಡ್‌ನಲ್ಲಿ ತನ್ನದೇ ಹೊಸ ದಾಖಲೆ ಬರೆದು ‘ಇಂಡಸ್ಟ್ರಿ ಹಿಟ್’ ಎಂಬ ಪಟ್ಟ ಪಡೆದುಕೊಂಡಿದ್ದ ಕಮಲ್ ಹಾಸನ್‌ ನಟನೆಯ ‘ಗುಣ’ ಚಿತ್ರದ ಹಾಡೊಂದನ್ನು ಕದ್ದು ಬಳಸಿಕೊಂಡಿದೆ ಎಂದು ಆರೋಪಿಸಿ ಸಂಗೀತ ಮಾಂತ್ರಿಕ ದಿಗ್ಗಜ ಇಳಯರಾಜ ರವರು ಕಾನೂನು ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಸಿ ನೋಟೀಸ್ ಕೂಡಾ ಕಳುಹಿಸಿದ್ದರು. ಮಂಜುಮ್ಮೆಲ್ ಬಾಯ್ಸ್ ಸಿನೆಮಾದಲ್ಲಿ ಬರುವ ‘ಕಣ್ಮಣಿ ಅನ್ಬೋದು ಕಾದಲ್’ ಹಾಡನ್ನು ಸಿನೆಮಾ ನಿರ್ದೇಶಕರು ‘ಗುಣ’ ಚಿತ್ರದಿಂದ ಕದ್ದು ಬಳಸಿಕೊಂಡಿದ್ದಾರೆ. ಕಾನೂನಿನ ಪ್ರಕಾರ ಇದು ತಪ್ಪಾಗಿದ್ದು ಮಂಜುಮ್ಮೆಲ್ ಬಾಯ್ಸ್‌ ಸಿನೆಮಾ ನಿರ್ಮಾಪಕರಿಗೆ 2 ಕೋಟಿ ರೂ. ಹಣವನ್ನು ಪರಿಹಾರ ರೂಪದಲ್ಲಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಈ ವಿಚಾರ ಇಡೀ ಚಿತ್ರರಂಗದಲ್ಲೇ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಇದೀಗ ಸಿನೆಮಾ ತಂಡಕ್ಕೆ ದೊಡ್ಡ ರಿಲೀಫ್ ಸಿಕ್ಕಿದೆ. ಸಿನೆಮಾ ತಂಡ ಇಳಯರಾಜರವರ ಜೊತೆ ನೇರ ಮಾತುಕತೆ ನಡೆಸಿದ್ದು, ಆ ಬಳಿಕ ಕಂಡಿಷನ್ ಮೂಲಕ ಕಾನೂನು ಸಮರಕ್ಕೆ ಕೊನೆ ನೀಡಿದ್ದಾರೆ.

    ಆ ಕರಾಳ ಘಟನೆಗೆ 24 ವರ್ಷ; ರಾಜ್ ಕುಮಾರ್ ಅಪಹರಣ ಯಾಕಾಯ್ತು?

    ಮೊದಲಿಗೆ 2 ಕೋಟಿ ರೂ ನೀಡಬೇಕೆಂದು ಒತ್ತಾಯಿಸಿದ್ದ ಇಳಯರಾಜರವರು ಇದೀಗ 60 ಲಕ್ಷ ರೂ. ನೀಡುವಂತೆ ಒಪ್ಪಂದದ ಮೂಲಕ ಕಾನೂನು ಸಮರಕ್ಕೆ ಇತ್ಯರ್ಥ ನೀಡಿದ್ದಾರೆ. ಆರಂಭದಲ್ಲಿ ಪ್ರತಿಭಾವಂತ ಸಿನೆಮಾ ತಂಡಕ್ಕೆ ಪ್ರೋತ್ಸಾಹಿಸುವ ಬದಲು ಕಾನೂನು ಹೋರಾಟಕ್ಕೆ ಇಳಿದಿದ್ದ ಇಳಯರಾಜರವನ್ನು ಟ್ರೋಲ್‌ ಪೇಜ್‌ನವರು ಹಿಗ್ಗಾಮುಗ್ಗಾ ಟ್ರೋಲ್‌ ಮಾಡಿದ್ದರು. ಇದೀಗ ಈ ಒಪ್ಪಂದದ ವಿಚಾರ ತಿಳಿದ ಬಳಿಕ ಸಿನಿ ಪ್ರೇಕ್ಷಕರಉ ಕೊಂಚ ರಿಲೀಫ್ ಆಗಿದ್ದಾರೆ.

    Click to comment

    Leave a Reply

    Your email address will not be published. Required fields are marked *

    FILM

    ಮಗಳು ಜನಿಸಿದ ಬೆನ್ನಲ್ಲೆ ಐಶಾರಾಮಿ ಮನೆ ಖರೀದಿಸಿದ ದೀಪಿಕಾ ಪಡುಕೋಣೆ

    Published

    on

    ಮುಂಬೈ: ಬಾಲಿವುಡ್ ಬೆಡಗಿ, ಕರ್ನಾಟಕ ಮೂಲದ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೆ ಮುದ್ದಾದ ಹೆಣ್ಣು ಮಗುವಿನ ತಾಯಿ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೆ ದೀಪಿಕಾ ಹಾಗೂ ರಣ್ವೀರ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಮಗು ಜನಿಸಿದ ಬೆನ್ನಲ್ಲೆ ಐಶಾರಾಮಿ ಮನೆಯೊಂದನ್ನು ಮುಂಬೈನಲ್ಲಿ ದೀಪಿಕಾ ಪಡುಕೋಣೆ ಖರೀದಿ ಮಾಡಿದ್ದಾರೆ. ಮುಂಬೈನ ದುಬಾರಿ ಏರಿಯಾಗಳಲ್ಲಿ ಒಂದಾದ ಬಾಂದ್ರಾನಲ್ಲಿ ದೀಪಿಕಾ ಪಡುಕೋಣೆ ಮನೆ ಖರೀದಿ ಮಾಡಿದ್ದು, ಇದಕ್ಕಾಗಿ ದೊಡ್ಡ ಮೊತ್ತವನ್ನೇ ವ್ಯಯಿಸಿದ್ದಾರೆ.

    ಪಶ್ಚಿಮ ಬಾಂದ್ರಾದ ಜನಪ್ರಿಯ ಬ್ಯಾಂಡ್​ಸ್ಟ್ಯಾಂಡ್ ಬಳಿಯ ಸಾಗರ್ ರೇಷಮ್ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ ಅಪಾರ್ಟ್​ಮೆಂಟ್​ನಲ್ಲಿ ದೀಪಿಕಾ ಹೊಸ ಫ್ಲ್ಯಾಟ್ ಖರೀದಿ ಮಾಡಿದ್ದಾರೆ. ಈ ಫ್ಲ್ಯಾಟ್ ಅನ್ನು ಮಗಳಿಗಾಗಿ ಎಂದೇ ದೀಪಿಕಾ ಪಡುಕೋಣೆ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. 1846 ಚದರ ಅಡಿಯ ಈ ಫ್ಲ್ಯಾಟ್​ ಜೊತೆಗೆ ನಿಗದಿತ ಕಾರು ಪಾರ್ಕಿಂಗ್ ಸಹ ಖರೀದಿ ಮಾಡಲಾಗಿದೆ. ಈ ಐಶಾರಾಮಿ ಮನೆಗೆ ದೀಪಿಕಾ ಪಡುಕೋಣೆ 17.78 ಕೋಟಿ ರೂಪಾಯಿ ಹಣ ನೀಡಿದ್ದಾರೆ.

    ಅಂದಹಾಗೆ ಈ ಮನೆ ದೀಪಿಕಾ ಹಾಗೂ ಅವರ ತಂದೆ ಪ್ರಕಾಶ್ ಪಡುಕೋಣೆ ಮಾಲೀಕತ್ವದ ಕೆಎ ಎಂಟರ್ಪ್ರೈಸಸ್ ಹೆಸರಿನಲ್ಲಿ ನೊಂದಾವಣಿ ಮಾಡಿಸಲಾಗಿದೆ. ಈ ಹಿಂದೆ ಇದೇ ಕಂಪೆನಿ ಮೂಲಕ ದೀಪಿಕಾ ಪಡುಕೋಣೆ ಮತ್ತು ಪ್ರಕಾಶ್ ಪಡುಕೋಣೆ ಹಲವು ರಿಯಲ್ ಎಸ್ಟೇಟ್ ಪ್ರಾಪರ್ಟಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಬೆಂಗಳೂರು, ಮುಂಬೈ ಹಾಗೂ ಹೈದರಾಬಾದ್​ನಲ್ಲಿಯೂ ಸಹ ಹೂಡಿಕೆಗಳನ್ನು ಮಾಡಲಾಗಿದೆ. ಈಗ ದೀಪಿಕಾ ಮನೆ ಖರೀದಿಸಿರುವ ಅದೇ ಸೊಸೈಟಿಯಲ್ಲಿ ಅವರ ಅತ್ತೆ ಅಂದರೆ ರಣ್ವೀರ್​ ಸಿಂಗ್​ರ ತಾಯಿ ಕಳೆದ ತಿಂಗಳಷ್ಟೆ 19 ಕೋಟಿ ಬೆಲೆಯ ಮನೆ ಖರೀದಿ ಮಾಡಿದ್ದರು.

    ಇತ್ತೀಚೆಗೆ ಬಾಲಿವುಡ್​ನ ಮಂದಿ ರಿಯಲ್ ಎಸ್ಟೇಟ್ ಹೂಡಿಕೆಯನ್ನು ಹೆಚ್ಚು ಮಾಡಿದ್ದಾರೆ. ಅಮಿತಾಬ್ ಬಚ್ಚನ್, ಅಜಯ್ ದೇವಗನ್ ಇನ್ನೂ ಕೆಲವರು ಮುಂಬೈನ ಪ್ರಮುಖ ಏರಿಯಾಗಳಲ್ಲಿ ಮನೆ ಮತ್ತು ಆಫೀಸ್​ ಸ್ಪೇಸ್​ಗಳ ಮೇಲೆ ಸತತ ಹೂಡಿಕೆ ಮಾಡುತ್ತಿದ್ದಾರೆ. ಬಾಡಿಗೆಗೆ ಸಹ ನೀಡುತ್ತಿದ್ದಾರೆ. ಬಾಲಿವುಡ್ ಮಂದಿ ಮಾತ್ರವೇ ಅಲ್ಲದೆ ದಕ್ಷಿಣದ ನಟರು ಸಹ ಮುಂಬೈನಲ್ಲಿ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಈ ಮೊದಲು ರಾಮ್ ಚರಣ್ ಆ ನಂತರ ಸೂರ್ಯ ಅವರುಗಳು ಮುಂಬೈನಲ್ಲಿ ಫ್ಲ್ಯಾಟ್ ಖರೀದಿ ಮಾಡಿದ್ದರು. ಇತ್ತೀಚೆಗೆ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್, ತಮ್ಮ ನಿರ್ಮಾಣ ಸಂಸ್ಥೆಯ ಹೆಸರಲ್ಲಿ ಫ್ಲ್ಯಾಟ್ ಖರೀದಿ ಮಾಡಿದ್ದಾರೆ.

    Continue Reading

    FILM

    ಬಿಗ್ ಬಾಸ್ ಕನ್ನಡ ಸೀಸನ್ -11 ರ ಸ್ಪರ್ಧಿಗಳ ಹೆಸರು ರಿವೀಲ್..?

    Published

    on

    ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ -11 ಇದೇ ಸೆ.29ರಿಂದ ಬಿಗ್ ಬಾಸ್ ಗ್ರಾಂಡ್ ಆರಂಭಗೊಳ್ಳಲಿದೆ. ಸಾಕಷ್ಟು ಕುತೂಹಲ ಹುಟ್ಟಿಸಿದ್ದ ನಿರೂಪಕ ಯಾರೆನ್ನುವ ಪ್ರಶ್ನೆಗೆ ಪ್ರೋಮೊ ಬಿಟ್ಟು ಆಯೋಜಕರು ಸಸ್ಪೆನ್ಸ್ ರಿವೀಲ್ ಮಾಡಿದ್ದಾರೆ. ನಟ ಕಿಚ್ಚ ಸುದೀಪ್ ಅವರೇ ಈ ಬಾರಿಯೂ ನಿರೂಪಣೆ ಮಾಡಲಿದ್ದಾರೆ. ಕಾರ್ಯಕ್ರಮದ ಪ್ರೋಮೊ ರಿಲೀಸ್ ಆದ ಬೆನ್ನಲ್ಲೇ ಸಂಭಾವ್ಯ ಸ್ಪರ್ಧಿಗಳ ಪಟ್ಟಿ, ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಹರಿದಾಡುತ್ತಿದೆ.

    ಪ್ರತಿ ಬಾರಿಯಂತೆ ಈ ಬಾರಿಯೂ ಒಂದಷ್ಟು ಸ್ಪರ್ಧಿಗಳ ಹೆಸರು ಕೇಳಿ ಬರುತ್ತಿದೆ. ನಾನಾ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳೂ ಈ ಪಟ್ಟಿಯಲ್ಲಿದ್ದಾರೆ.

    ನಟಿ ಪ್ರೇಮಾ:

    ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ನಮ್ಮೂರ ಮಂದಾರ ಹೂವೆ, “ಚಂದ್ರಮುಖಿ ಪ್ರಾಣಸಖಿ’, ‘ಉಪೇಂದ್ರ’ ಅಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿ, ತೆಲುಗು, ಮಲಯಾಳಂನಲ್ಲೂ ಮಿಂಚಿದ್ದ ನಟಿ ಪ್ರೇಮಾ ಇತ್ತೀಚಿನ ವರ್ಷದಲ್ಲಿ ನಟನೆ ಬಿಟ್ಟು ಕಿರುತೆರೆ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.

    ಹುಲಿ ಕಾರ್ತಿಕ್:

    “ಗಿಚ್ಚಿ ಗಿಲಿಗಿಲಿ-3′ ಮೂಲಕ ಪ್ರೇಕ್ಷಕರ ಮನಗೆದ್ದು, ಕಾರ್ಯಕ್ರಮ ವಿಜೇತರಾಗಿರುವ ಹುಲಿ ಕಾರ್ತಿಕ್ ಅವರು ಈ ಬಾರಿ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎನ್ನಲಾಗುತ್ತಿದೆ.

    ಗೌರವ್ ಶೆಟ್ಟಿ:

    ಅಮೃತಾಂಜನ್ ಸೇರಿದಂತೆ ಹತ್ತಾರು ಶಾರ್ಟ್ ಮೂವೀಸ್ ಹಾಗೂ ಕಾಮಿಡಿ ವಿಡಿಯೋಗಳಲ್ಲಿ ಕಾಣಿಸಿಕೊಂಡು, ಯೂಟ್ಯೂಬ್‌ನಲ್ಲಿ ಮಿಂಚಿರುವ ಗೌರವ್ ಶೆಟ್ಟಿ ಅವರಿಗೆ ಬಿಗ್ ಬಾಸ್ ಮನೆಗೆ ಆಹ್ವಾನ ನೀಡಲಾಗಿದೆ ಎನ್ನಲಾಗುತ್ತಿದೆ.

    ಮಾನಸ ಸಂತು:

    ಬಿಗ್ ಬಾಸ್ ಸೀಸನ್ 10ನಲ್ಲಿ ಸ್ಪರ್ಧಿಯಾಗಿದ್ದ ಕಾಮಿಡಿಯನ್ ತುಕಾಲಿ ಸಂತು ಅವರ ಪತ್ನಿ ಮಾನಸ ಈಗಾಗಲೇ ಪ್ರೇಕ್ಷಕರಿಗೆ ಪರಿಚಯವಿರುವ ಹೆಸರು ತನ್ನ ಹಾಸ್ಯ ಪುಜ್ಞೆಯಿಂದ ಗಮನ ಸೆಳೆದಿರುವ ಮಾನಸ, ಕಿರುತೆರೆ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ.

    ಹರೀಶ್ ನಾಗರಾಜ್:

    ಕಳೆದ ಅನೇಕ ವರ್ಷದಿಂದ ನ್ಯೂಸ್ ಆ್ಯಂಕರ್ ಆಗಿ ಗುರುತಿಸಿಕೊಂಡಿರುವ ಹರೀಶ್ ನಾಗರಾಜ್ ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಆಗುತ್ತಾರೆ ಎಂದು ಹೇಳಲಾಗುತ್ತಿದೆ.

    ಐಶ್ವರ್ಯಾ ರಂಗರಾಜನ್:

    ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಗಾಯಕಿ ಐಶ್ವರ್ಯಾ ರಂಗರಾಜನ್ ಬಿಗ್ ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗುತ್ತಾರೆ ಎನ್ನಲಾಗುತ್ತಿದೆ.

    ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ :

    ಕನ್ನಡ ಚಿತ್ರರಂಗದಲ್ಲಿ ನಟಿಯರಾಗಿ ಗುರುತಿಸಿಕೊಂಡಿರುವ ಕರಾವಳಿಯ ಅವಳಿ ಸಹೋದರಿಯರು ಅದ್ವಿತಿ ಶೆಟ್ಟಿ ಹಾಗೂ ಅಶ್ವಿತಿ ಶೆಟ್ಟಿ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಅಮೂಲ್ಯ ಭಾರದ್ವಾಜ್:

    ಕಿರುತೆರೆ ನಟಿಯಾಗಿ ಗುರುತಿಸಿಕೊಂಡು, ‘ದಾಸ ಪುರಂದರ’ ಹಾಗೂ ‘ಬೃಂದಾವನ’ ಧಾರಾವಾಹಿಗಳಲ್ಲಿ ನಟಿಸಿ ಮನೆ-ಮನದ ಪ್ರೀತಿ ಪ್ರೋತ್ಸಾಹಗಳಿಸಿರುವ ನಟಿ ಅಮೂಲ್ಯ ಭಾರದ್ವಾಜ್ ಈ ಬಾರಿ ದೊಡ್ಮನೇ ಆಟಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಡಲಿದ್ದಾರ ಎನ್ನಲಾಗುತ್ತಿದೆ.

    ಭವ್ಯಾ ಗೌಡ:

    ಟಿಕ್‌ಟಾಕ್‌ನಲ್ಲಿ ಖ್ಯಾತಿಗಳಿಸಿ, ಕಿರುತೆರೆಯ ‘ಗೀತಾ’ ಧಾರಾವಾಹಿಯಲ್ಲಿ ಅಭಿನಯಿಸಿ ಗಮನ ಸೆಳೆದಿರುವ ನಟಿ ಭವ್ಯಾ ಗೌಡ ಅವರ ಹೆಸರು ಕೂಡ ಬಿಗ್ ಬಾಸ್ ಸ್ಪರ್ಧಿಯ ಲಿಸ್ಟ್‌ನಲ್ಲಿ ಬರುತ್ತಿದೆ.

    ದೀಪಕ್ ಗೌಡ:

    “ನಮ್ಮನೆ ಯುವರಾಣಿ’ ಸೀರಿಯಲ್‌ನಲ್ಲಿ ‘ಅನಿಕೇತ್’ ಆಗಿ ಖ್ಯಾತಿ ಪಡೆದ ದೀಪಕ್ ಗೌಡ ಬಿಗ್‌ಬಾಸ್ ಮನೆಗೆ ಎಂಟ್ರಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಅಕ್ಷಯ್ ನಾಯಕ್:

    ‘ಒಲವಿನ ನಿಲ್ದಾಣ’ ಸೀರಿಯಲ್‌ನಲ್ಲಿ ಸಿದ್ಧಾಂತ್ ಪಾತ್ರದ ಮೂಲಕ ಗಮನ ಸೆಳೆದು, ‘ಕಸ್ತೂರಿ ನಿವಾಸ’ದಲ್ಲೂ ಮಿಂಚಿರುವ ಅಕ್ಷಯ್ ನಾಯಕ್ ಬಿಗ್ ಬಾಸ್ ಮನೆಗೆ ಬರ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

    ಲೇಖಿ ಗೋಸ್ವಾಮಿ:

    ಲೇಖಿ ರೈಡರ್’ ಎಂಬ ಯೂಟ್ಯೂಬ್ ಚಾನಲ್‌ನಿಂದ ಖ್ಯಾತಿಗಳಿಸಿರುವ ಲೇಖಿ ಗೋಸ್ವಾಮಿ ಈ ಬಾರಿ ‘ಬಿಗ್ ಬಾಸ್’ ಸ್ಪರ್ಧಿಯಾಗಿ ಎಂಟ್ರಿ ಆಗಲಿದ್ದಾರೆ ಎನ್ನಲಾಗುತ್ತಿದೆ.

    ಇತರೆ ಹೆಸರುಗಳು:

    ಇವರುಗಳಲ್ಲದೇ ರೀಲ್ಸ್ ರೇಷ್ಮಾ ಚಂದ್ರಪ್ರಭ, ರಾಘವೇಂದ್ರ, ಜಾಹ್ನವಿ, ಶರ್ಮಿತಾ ಗೌಡ, ನಟ ತ್ರಿವಿಕ್ರಮ್, ನಟಿ ಸುಕೃತಾ ನಾಗ್, ನಟಿ ಗೌತಮಿ ಜಾಧವ್, ಶರತ್ ಕುಮಾರ್ ಹೆಸರುಗಳೂ ಇವೆ.

    Continue Reading

    FILM

    ದರ್ಶನ್ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ; ಸೆ.30ರವರೆಗೆ ಜೈಲೇ ಗತಿ

    Published

    on

    ಬೆಂಗಳೂರು: ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿರುವ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಅವರ ಸಹಚರರನ್ನು ಬಂಧಿಸಲಾಗಿದೆ. ಈಗಾಗಲೇ ಅವರು ಜೈಲು ಸೇರಿ ಮೂರು ತಿಂಗಳು ಆಗಿದೆ. ಇಂದಿಗೆ (ಸೆಪ್ಟೆಂಬರ್ 17) ದರ್ಶನ್ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳುವುದರಲ್ಲಿ ಇತ್ತು. ಹೀಗಾಗಿ, ದರ್ಶನ್ ಹಾಗೂ ಗ್ಯಾಂಗ್​ನ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಎದುರು ಹಾಜರುಪಡಿಸಲಾಗಿದೆ. ಅವರ ನ್ಯಾಯಾಂಗ ಬಂಧನ ಅವಧಿ  ಸೆಪ್ಟೆಂಬರ್​ 30ರವರೆಗೆ ವಿಸ್ತರಣೆ ಆಗಿದೆ.

    ಕುರ್ಚಿ ಬಗ್ಗೆ ಮತ್ತೊಮ್ಮೆ ಜಡ್ಜ್​ ಎದುರು ದರ್ಶನ್ ಪರ ವಕೀಲರು ಮನವಿ ಮಾಡಿದ್ದಾರೆ. ‘ಪ್ಲಾಸ್ಟಿಕ್ ಚೇರ್ ವ್ಯವಸ್ಥೆ ಮಾಡೋಕು ಜೈಲಾಧಿಕಾರಿಗಳು ಆಗಲ್ಲ ಎಂದು ಹೇಳುತ್ತಿದ್ದಾರೆ. ಬೇರೆ ಕೈದಿಗಳಿಗೆ ಆ ವ್ಯವಸ್ಥೆ ಇದೆ.  ಆದರೆ, ದರ್ಶನ್​ಗೆ ಚೇರ್ ವ್ಯವಸ್ಥೆ ಮಾಡುತ್ತಿಲ್ಲ. ದರ್ಶನ್ ಅವರನ್ನು ಯಾರು ಏನು ಅಂದುಕೊಂಡಿದ್ದಾರೋ ಗೊತ್ತಿಲ್ಲ’ ಎಂದು ದರ್ಶನ್ ಪರ ವಕೀಲರು ಹೇಳಿದರು. ‘ಕೈದಿಗಳಿಗೆ ಏನು ವ್ಯವಸ್ಥೆ ನೀಡಬೇಕು ಎಂದು ಜೈಲಿನ ನಿಯಮ ಪಟ್ಟಿಯಲ್ಲಿ ಇದೆ. ಅದು ಕೊಡಬೇಕು ಎಂದು ಆದೇಶ ಮಾಡುತ್ತೇನೆ’ ಎಂದು ಜಡ್ಜ್ ಹೇಳಿದರು.

    ಇಂದು ದರ್ಶನ್ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳುವುದರಲ್ಲಿ ಇತ್ತು. ಹೀಗಾಗಿ, ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಎದುರು ಅವರನ್ನು ಹಾಜರುಪಡಿಸಲಾಯಿತು. ಬಳ್ಳಾರಿ ಸೆಂಟ್ರಲ್​ ಜೈಲಿನಿಂದ ದರ್ಶನ್​, ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ ಪವಿತ್ರಾಗೌಡ ಹಾಜರಾಗಿದ್ದರು. ಉಳಿದಂತೆ ತುಮಕೂರು, ಮೈಸೂರು, ಧಾರವಾಡ, ಕಲಬುರಗಿ, ವಿಜಯಪುರ, ಹಿಂಡಲಗಾ ಜೈಲಿನಿಂದ ಆರೋಪಿಗಳು ಹಾಜರಾಗಿದ್ದರು. ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ ಜಡ್ಜ್​ ಆದೇಶ ಹೊರಡಿಸಿದ್ದಾರೆ.

    ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 3991 ಪುಟಗಳ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಹೇಳಿಕೆ, ಸಾಕ್ಷಿಗಳ ಬಗ್ಗೆ ಉಲ್ಲೇಖ ಆಗಿದೆ. ವಿಚಾರಣೆ ವೇಳೆ ದರ್ಶನ್ ಅವರು ತಾವು ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಎಲ್ಲಿಯೂ ಕೊಲೆಯನ್ನು ಇವರೇ ಮಾಡಿದ್ದಾರೆ ಎಂಬ ವಿಚಾರ ಉಲ್ಲೇಖ ಆಗಿಲ್ಲ. ಶೀಘ್ರವೇ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡೋ ಸಾಧ್ಯತೆ ಇದೆ.

    Continue Reading

    LATEST NEWS

    Trending