haveri
ಬ್ಯಾಡಗಿ ಮೆಣಸಿನ ದರ ಕುಸಿತ…! ಏರಿದ ರೈತರ ಆಕ್ರೋಶ..! APMC ಧ*ಗ ಧ*ಗ…!
ಹಾವೇರಿ : ಬ್ಯಾಡಗಿ ಮೆಣಸಿನಕಾಯಿಗೆ (byadagi chilly ) ಮಾರುಕಟ್ಟೆಯಲ್ಲಿ ದರ ಕಡಿಮೆಯಾದ ಹಿನ್ನೆಲೆಯಲ್ಲಿ ಆ*ಕ್ರೋಶಿತ ರೈತರ ಪ್ರ*ತಿಭಟನೆ ತೀವೃ ಸ್ವರೂಪಕ್ಕೆ ತಿರುಗಿದೆ. ಪ್ರತಿಭಟನೆ ನಿಯಂತ್ರಿಸಲು ಬಂದ ಪೊಲೀಸರನ್ನೇ ಓಡಿಸಿದ ರೈತರು ವಾಹನಗಳಿಗೆ ಬೆಂ*ಕಿ ಹಚ್ಚಿದ್ದಾರೆ. ಬ್ಯಾಡಗಿ ಎಪಿಎಂಸಿ ಮುಂದೆ ಪ್ರ*ತಿಭಟನೆ ನಡೆಸಿದ ರೈತರು ಕಚೇರಿ ದ್ವಂಸ ಮಾಡಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಬೆಂ*ಕಿ ನಂದಿಸಲು ಬಂದ ಅಗ್ನಿಶಾಮಕ ದಳದ ಸಿಬ್ಬಂದಿಯನ್ನೇ ಸ್ಥಳದಿಂದ ಓಡಿಸಿದ ರೈತರು ಚಿತ್ರೀಕರಣ ಮಾಡುತ್ತಿದ್ದ ಮಾದ್ಯಮದವರ ಮೇಲೂ ಹ*ಲ್ಲೆ ನಡೆಸಿದ್ದಾರೆ.
ಘಟನೆಯ ವಿವರ :
ಬ್ಯಾಡಗಿ ಮೆಣಸಿಗೆ ಮಾರುಕಟ್ಟೆಯಲ್ಲಿ ದರ ಕುಸಿತವಾಗಿದ್ದ ಕಾರಣ ಬ್ಯಾಡಗಿ ಎಪಿಎಂಸಿ ( APMC ) ಮುಂದೆ ರೈತರು ಪ್ರ*ತಿಭಟನೆ ನಡೆಸಿದ್ದರು. ಸಾವಿರಾರು ರೈತರು ಎಪಿಎಂಸಿ ಮುಂದೆ ಜಮಾಯಿಸಿ ದರ ಕುಸಿತಕ್ಕೆ ಎಪಿಎಂಸಿ ಕಾರಣ ಎಂದು ಆ*ಕ್ರೋಶ ವ್ಯಕ್ತಪಡಿಸಿದ್ದರು. ಆದ್ರೆ ಅಧಿಕಾರಿಗಳು ರೈತರ ಜೊತೆ ಮಾತನಾಡಲು ಬಾರದ ಕಾರಣ ರೈತರ ಆ*ಕ್ರೋಶ ಹೆಚ್ಚಾಗಿತ್ತು. ಈ ವೇಳೆ ರೈತರ ಗುಂಪಿನಿಂದ ಎಪಿಎಂಸಿ ಕಚೇರಿಗೆ ಕಲ್ಲು ತೂ*ರಾಟ ನಡೆದಿದೆ. ಕಲ್ಲು ತೂ*ರಾಟದಿಂದ ಎಪಿಎಂಸಿ ಕಚೇರಿಯ ಗಾಜುಗಳು ಪುಡಿಯಾಗಿದ್ದು ಬಿ*ಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ ಕಚೇರಿಗೆ ನುಗ್ಗಿದ ರೈತರು ಕಚೇರಿಯ ಪೀಠೋಪಕರಣಗಳನ್ನು ಪು*ಡಿಗೈದಿದ್ದಾರೆ. ಕಚೇರಿಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಪು*ಡಿಗೈದು ಆ*ಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಕಚೇರಿ ಹೊರಗೆ ನಿಂತಿದ್ದ ಎಪಿಎಂಸಿ ಅಧ್ಯಕ್ಷರ ಕಾರಿಗೆ ಯಾರೋ ಬೆಂ*ಕಿ ಹಚ್ಚಿದ್ದಾರೆ.
ಇಷ್ಟೆಲ್ಲಾ ಆಗುತ್ತಿದ್ರೂ ಪೊ*ಲೀಸರಿಂದ ರೈತರನ್ನು ನಿಯಂತ್ರಿಸೋದು ಸಾದ್ಯವಾಗಿಲ್ಲ. ಬದಲಾಗಿ ರೈತರೆಲ್ಲರು ಸೇರಿ ಪೊ*ಲೀಸರನ್ನು ಅಲ್ಲಿಂದ ಓಡಿಸಿದ್ದಾರೆ. ಇನ್ನು ಎಪಿಎಂಸಿಯಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೂ ಬೆಂ*ಕಿ ಹಚ್ಚಿದ್ದು ಕೆಲವು ವಾಹನಗಳು ಬೆಂ*ಕಿಗೆ ಆ*ಹುತಿಯಾಗಿದೆ. ಈ ವೇಳೆ ಬೆಂ*ಕಿ ನಂದಿಸಲು ಬಂದ ಅಗ್ನಿಶಾಮಕ ದಳದ ಸಿಬ್ಬಂದಿಯನ್ನೂ ( Fire service ) ರೈತರು ಅಲ್ಲಿಂದ ಓಡಿಸಿದ್ದಾರೆ. ಒಟ್ಟಾರೆ ಬ್ಯಾಡಗಿ ಎಪಿಎಂಸಿ ಕಚೇರಿ ಮುಂದೆ ಉ*ದ್ವಿ*ಘ್ನ ವಾತಾವರಣ ಉಂಟಾಗಿದ್ದು, ರೈತರ ಆ*ಕ್ರೋಶ ನಿಯಂತ್ರಣಕ್ಕೆ ಬಂದಿಲ್ಲ.
ಬ್ಯಾಡಗಿ ಮಾರುಕಟ್ಟೆಗೆ ಐಜಿಪಿ ತ್ಯಾಗರಾಜ ಬೇಟಿ.
ಪೊ*ಲೀಸರನ್ನು ಓಡಿಸಿದ್ದ ರೈತರು ಸ್ಥಳದಲ್ಲಿದ್ದ ಸಿಸಿ ಕ್ಯಾಮೆರಾಗಳನ್ನೂ ಒಡೆದು ಹಾಕಿದ್ದಾರೆ. ಗ*ಲಾಟೆಯ ವಿಡಿಯೋ ಪೊಲೀಸರಿಗೆ ಸಿಗಬಾರದು ಎಂಬ ಕಾರಣಕ್ಕೆ ಸಿಸಿ ಕ್ಯಾಮೆರಾಗಳನ್ನು ಒಡೆದು ಹಾಕಿದ್ದಾರೆ. ಈ ವೇಳೆ ಖಾಸಗಿ ಮಾದ್ಯಮದ ಕ್ಯಾಮೆರಾಮೆನ್ ಮೇಲೂ ಚಿತ್ರೀಕರಣ ಮಾಡದಂತೆ ರೈತರು ಹ*ಲ್ಲೆ ನಡೆಸಿದ್ದಾರೆ.
ಈ ವೇಳೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಜೊತೆ ಎಪಿಎಂಸಿಗೆ ಆಗಮಿಸಿದ ಐಜಿಪಿ ತ್ಯಾಗರಾಜ ರೈತರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಮನವೊಲಿಕೆಗೆ ಬಗ್ಗದ ರೈತರು ಎಪಿಎಂಸಿ ಪ್ರಾಂಗಣದಿಂದ ಹೊರಬಂದು ರಸ್ತೆಯಲ್ಲಿ ಪ್ರ*ತಿಭಟನೆ ನಡೆಸಿದ್ದಾರೆ.
haveri
ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ಸಾವು ..! ಹೊಸ ವಾಹನಕ್ಕೆ ಪೂಜೆ ಮಾಡಿಸಲು ಹೋದ ಕುಟುಂಬ ದುರಂತ ಅಂತ್ಯ
ಹಾವೇರಿ: ಹೊಸದಾಗಿ ಖರೀದಿ ಮಾಡಿದ್ದ ವಾಹನಕ್ಕೆ ಪೂಜೆ ಮಾಡಿಸಲೆಂದು ಹೊರಟಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿ 13 ಜನ ಮೃತಪಟ್ಟ ಘಟನೆ ಜೂ.27ರಂದು ಬೆಳಗಿನ ಜಾವ ಹಾವೇರಿಯಲ್ಲಿ ನಡೆದಿದೆ.
ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿಯ ಬೆಂಗಳೂರು –ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ ಹೊಡೆದು ಭೀಕರ ಅಫಘಾತ ಸಂಭವಿಸಿದೆ. ಶಿವಮೊಗ್ಗ ಮೂಲದ 15 ಜನರು ಟಿಟಿ ವಾಹನದಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ತೆರಳಿದ್ದರು. ದೇವಿ ದರ್ಶನ ಪಡೆದು ಮರಳಿ ಊರಿಗೆ ಬರುತ್ತಿದ್ದ ವೇಳೆ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ನಡೆದಿದೆ.
ಘಟನೆಯಿಂದಾಗಿ ಮಹಿಳೆಯರು, ಮಕ್ಕಳು ಸೇರಿದಂತೆ 13 ಮಂದಿ ಅಸುನೀಗಿದ್ದಾರೆ. ಪರಶುರಾಮ್ (45), ಭಾಗ್ಯ (40), ನಾಗೇಶ (50), ವಿಶಾಲಾಕ್ಷಿ (40), ಅರ್ಪಿತಾ (18), ಸುಭದ್ರಾ ಬಾಯಿ (65), ಪುಣ್ಯ (50), ಮಂಜುಳಾಬಾಯಿ, ಚಾಲಕ ಆದರ್ಶ್ (23), ಮಾನಸ (24), ರೂಪಾ (40), ಮಂಜುಳಾ (50) ಮೃತರು ಮೃತಪಟ್ಟವರು. ಶಿವಮೂಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಎಮ್ಮೆಹಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ ಎನ್ನಲಾಗಿದೆ.
Read More..; ಕಚೇರಿಗೆ ತೆರಳಲು ಸಿದ್ಧವಾಗುತ್ತಿದ್ದಾಗ ಹೃದಯಾ*ಘಾತ; 24 ವರ್ಷದ ಯುವತಿ ದುರ್ಮ*ರಣ
ಅಪಘಾತದಲ್ಲಿ ಮೃತಪಟ್ಟ ನಾಗೇಶ್ ಕೃಷಿಕರಾಗಿದ್ದು, ಪತ್ನಿ ವಿಶಾಲಾಕ್ಷಿ ಆಶಾಕಾರ್ಯಕರ್ತೆಯಾಗಿದ್ದರು. ಇವರ ಪುತ್ರ ಆದರ್ಶ್ ಹೊಸದಾಗಿ ಟಿಟಿಯನ್ನು ಖರೀದಿಸಿದ್ದರು. ವಾಹನದ ಪೂಜೆಗಾಗಿ ಕುಟುಂಬದವರು ಕಲಬುರಗಿಯ ಯಲ್ಲಮ್ಮನ ದೇವಸ್ಥಾನಕ್ಕೆ ತೆರಳಿದ್ದರು. ಸೋಮವಾರ ಮದ್ಯಾಹ್ನ 12 ಗಂಟೆ ವೇಳೆಗೆ ಕಲಬುರಗಿ ಜಿಲ್ಲೆಯ ಚಿಂಚೋಳಿಯ ಮಾಯಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿ ವಾಹನ ಪೂಜೆ ಮಾಡಿಸಿ, ಬಳಿಕ ಮಹಾರಾಷ್ಟ್ರ ತುಳಜಾಭವಾನಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ. ನಂತರ ಬೆಳಗಾವಿ ಜಿಲ್ಲೆ ಸವದತ್ತಿಗೆ ಆಗಮಿಸಿ, ಇಲ್ಲಿಯ ರೇಣುಕಾ ಯಲ್ಲಮ್ಮನ ದರ್ಶನ ಪಡೆದು ಮರಳಿ ಊರಿಗೆ ಹೋಗುವಾಗ ಅಪಘಾತ ಸಂಭವಿಸಿದೆ.
ಮೃತ ದೇಹಗಳನ್ನು ಹಾವೇರಿ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- LATEST NEWS5 days ago
ಗೀಸರ್ನಿಂದ ವಿಷಾನಿಲ ಸೋರಿಕೆ; ಇಹಲೋಕ ತ್ಯಜಿಸಿದ ತಾಯಿ, ಮಗ
- LATEST NEWS5 days ago
ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ಲಕ್ಷಾಂತರ ರೂ. ಬೆಲೆ ಬಾಳುವ ವಜ್ರದ ನೆಕ್ಲೇಸ್
- LATEST NEWS7 days ago
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ರಿಕೆಟಿಗ
- DAKSHINA KANNADA2 days ago
ವಿಟ್ಲದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅನೈತಿಕ ಚಟುವಟಿಕೆ; ಸಾರ್ವಜನಿಕರನ್ನು ನೋಡಿ ಕಾಲ್ಕಿತ್ತ ಜೋಡಿ