LATEST NEWS
‘ರುದ್ರಾಕ್ಷಿ’ಯನ್ನು ಧರಿಸುವುದು ಯಾಕೆ ಗೊತ್ತಾ..?
ಭಗವಾನ್ ಶಿವನ ಸ೦ಕೇತವಾಗಿರುವ ರುದ್ರಾಕ್ಷಿಯನ್ನು ಕೇವಲ ತಮ್ಮ ಬಳಿ ಇರಿಸಿಕೊಳ್ಳುವುದರಿ೦ದ ಅಥವಾ ಧರಿಸಿಕೊಳ್ಳುವುದರಿ೦ದ ಜನರ ಬಹುತೇಕ ಕಷ್ಟಗಳು ನಿವಾರಣೆಯಾಗುತ್ತದೆ ಹಾಗೂ ಅವರ ಕೋರಿಕೆಗಳು ಈಡೇರುತ್ತವೆ. ಹಿಂದೂ ಧರ್ಮದಲ್ಲಿ ರುದ್ರಾಕ್ಷಿ ಮಣಿಯನ್ನು ಅತ್ಯಂತ ಪವಿತ್ರವೆಂದು, ದೈವಿಕ ರೂಪವೆಂದು ನಂಬುತ್ತಾರೆ. ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಮಹತ್ವವಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ರುದ್ರಾಕ್ಷಿಯು ಶಿವನ ಕಣ್ಣೀರಿನಿಂದ ಹುಟ್ಟಿಕೊಂಡಿದೆ ಎನ್ನಲಾಗುತ್ತದೆ. ಆದ್ದರಿಂದಲೇ ರುದ್ರಾಕ್ಷಿಯನ್ನು ಭೋಲೆನಾಥನ ರೂಪವೆಂದು ಪರಿಗಣಿಸಲಾಗಿದೆ.
ಶಿವನ ಕಣ್ಣೀರೆ ರುದ್ರಾಕ್ಷಿಯ ಉಗಮಕ್ಕೆ ಕಾರಣ:
ಭಗವಾನ್ ಶಿವನು ಸಾವಿರಾರು ವರುಷದಿಂದ ತಪಸ್ಸಿನಲ್ಲಿ ನಿರತರಾಗಿರುತ್ತಾರೆ. ತಪಸ್ಸಿನ ಬಳಿಕ ಭಗವಾನ್ ಶಿವನು ಕಣ್ಣು ತೆರೆದಾಗ ಕಣ್ಣಂಚಿನಲ್ಲಿ ಒಂದು ಹನಿ ನೀರು ನೆಲದ ಮೇಲೆ ಬೀಳುತ್ತದೆ. ಇದು ರುದ್ರಾಕ್ಷಿ ಮರದ ಸೃಷ್ಟಿಗೆ ಕಾರಣವಾಗುತ್ತದೆ. ಹಾಗಾಗಿ ರುದ್ರಾಕ್ಷಿಯನ್ನು ಯಾರು ಧರಿಸುತ್ತಾರೋ ಅವರ ಜೀವನದಲ್ಲಿ ಸಂತೋಷವಿರುತ್ತದೆ ಎಂದು ಹೇಳಲಾಗುತ್ತದೆ.
ಇಂದು ಸಹೋದರ-ಸಹೋದರಿಯರ ಹಬ್ಬ.. ರಕ್ಷಾಬಂಧನ
ಮಹಿಳೆಯರು ರುದ್ರಾಕ್ಷಿಯನ್ನು ಧರಿಸಬಹುದೇ..?
ರುದ್ರಾಕ್ಷಿ ಮಣಿಯನ್ನು ಸಾಮಾನ್ಯವಾಗಿ ಮಹಿಳೆಯರು ಧರಿಸಬಾರದು ಎಂದು ಹೇಳುತ್ತಾರೆ. ಅದಕ್ಕೆ ಕಾರಣ ಮಹಿಳೆಯರು ಪ್ರತಿ ತಿಂಗಳು ಋತುಚಕ್ರಗಳಿಗೆ ಒಳಗಾಗುತ್ತಾರೆ. ಅಂತಹ ಸಮಯದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಾಕಷ್ಟು ಬದಲಾವಣೆಯನ್ನು ಹೊಂದುವರು. ಆಗ ಅವರ ದೈಹಿಕ ಸ್ಥಿತಿಯು ರುದ್ರಾಕ್ಷಿ ಮಣಿಯನ್ನು ಧರಿಸಲು ಸಿದ್ಧವಾಗಿರುವುದಿಲ್ಲ. ಅಪವಿತ್ರತೆ ಮಣಿಯನ್ನು ಬಾಧಿಸುವುದು. ಹಾಗಾಗಿ ಮಹಿಳೆಯರು ರುದ್ರಾಕ್ಷಿ ಮಣಿಯನ್ನು ಧರಿಸಿದರೆ ಶೌಚಾಲಯಕ್ಕೆ ಹೋಗುವಾಗ, ಋತು ಚಕ್ರ ಹೊಂದುವ ಪೂರ್ವ ಸಮಯದಿಂದ ಋತು ಚಕ್ರ ಸಂಪೂರ್ಣವಾಗಿ ನಿಲ್ಲುವ ತನಕ ರುದ್ರಾಕ್ಷಿ ಮಣಿಯನ್ನು ಧರಿಸಬಾರದು ಎಂದು ಹೇಳಲಾಗುವುದು.
ರುದ್ರಾಕ್ಷಿಯ ಮೇಲೆ ಇರುವ ಸಾಲುಗಳು ಅವು ಎಷ್ಟು ಮುಖಿ ರುದ್ರಾಕ್ಷಿಗಳು ಎಂದು ಹೇಳುತ್ತವೆ. 1 ರಿಂದ 21 ರವರೆಗೆ ವಿವಿಧ ಬಗೆಯ ರುದ್ರಾಕ್ಷಿಗಳಿವೆ. ರುದ್ರಾಕ್ಷಿಯನ್ನು ಧರಿಸುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ.
ರುದ್ರಾಕ್ಷಿಯನ್ನು ಹೆಚ್ಚಾಗಿ ನಿರಂತರ ಪ್ರಯಾಣ ಮಾಡುವವರು ಬಳಸುತ್ತಾರೆ. ಇದು ಸಮಸ್ಯೆಗಳನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ. ನಿಮ್ಮಲ್ಲಿ ಶಕ್ತಿಯನ್ನು ತುಬುತ್ತದೆ. ರುದ್ರಾಕ್ಷಿಯನ್ನು ಧರಿಸುವುದರಿಂದ ಜೀವನದಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರಮಾಡುತ್ತದೆ. ಅಲ್ಲದೇ ನಿದ್ರಾ ಹೀನತೆಯಿಂದ ಬಳಲುವವರಿಗೆ ನಿದ್ರೆಯನ್ನು ಸುಧಾರಿಸುವ ಶಕ್ತಿಯ್ನು ಇದು ಹೊಂದಿದೆ. ದೇಹದ ಉಷ್ಣತೆಯನ್ನು ಸುಧಾರಿಸುತ್ತದೆ ಮತ್ತು ದೈಹಿಕ ಆರೋಗ್ಯದಲ್ಲಿಯೂ ಉತ್ತಮ ಪಾತ್ರ ವಹಿಸುತ್ತದೆ. ಮನಸ್ಸಿನ ಏಕಾಗ್ರತೆಯನ್ನು ಸಮಾನತೆಯಲ್ಲಿಡುವಲ್ಲಿಯೂ ರುದ್ರಾಕ್ಷಿ ಸಹಕಾರಿಯಾಗುತ್ತದೆ.
LATEST NEWS
ಹನಿಟ್ರ್ಯಾಪ್ ಆರೋಪಿಗಳ ಸ್ಥಳ ಮಹಜರು..! ಸತ್ತಾರ್ ಮನೆ ಮುಂದೆ ಪ್ರತಿಭಟನೆ..!
ಮಂಗಳೂರು : ಹನಿಟ್ರ್ಯಾಪ್ ಪ್ರಕಣದಿಂದ ಮನನೊಂದು ಜೀವಾಂತ್ಯಗೊಳಿಸಿದ್ದ ಉದ್ಯಮಿ ಮುಮ್ತಾಜ್ ಅಲಿಯ ಆರೋಪಿಗಳ ಸ್ಥಳಮಹಜರು ನಡೆಸಲಾಗಿದೆ. ಕಾವೂರು ಮತ್ತು ಸುರತ್ಕಲ್ ಪೊಲೀಸರು ಬಿಗಿ ಭದ್ರತೆಯಲ್ಲಿ ಕೃಷ್ಣಾಪುರದ 7ನೇ ಬ್ಲಾಕ್ನಲ್ಲಿರುವ ಪ್ರಮುಖ ಆರೋಪಿ ಸತ್ತಾರ್ ಮನೆಯಲ್ಲಿ ಮಹಜರು ನಡೆಸಿದ್ದಾರೆ. ಈ ವೇಳೆ ನೂರಾರು ಸಂಖ್ಯೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದ ಮುಮ್ತಾಜ್ ಅಲಿ ಬೆಂಬಲಿಗರು ಸತ್ತಾರ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಮುಮ್ತಾಜ್ ಅಲಿ ಜೀವಾಂತ್ಯಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಅವರ ಸಹೋದರ ಆರು ಜನರ ವಿರುದ್ಧ ದೂರು ನೀಡಿದ್ದರು. ರಹೆಮತ್ ಎಂಬ ಮಹಿಳೆ ಹಾಗೂ ಆಕೆಯ ಪತಿ ಮತ್ತು ಸತ್ತಾರ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಗಳನ್ನಾಗಿ ಮಾಡಲಾಗಿತ್ತು. ರೆಹಮತ್ ಹಾಗೂ ಶಾಫೀ ಎಂಬ ಆರೋಪಿಗಳನ್ನು ಪೊಲೀಸರು ಬಂಟ್ವಾಳ ತಾಲೂಕಿನ ನಂದಾವರದ ಬಳಿ ಬಂಧಿಸಿದ್ದು, ಆರೋಪಿ ಸತ್ತಾರ್ ಮುಂಬೈಗೆ ಪಲಾಯನ ಮಾಡುತ್ತಿದ್ದ ವೇಳೆ ಬಂಧಿಸಲಾಗಿತ್ತು. ರಹೆಮತ್ ಹಾಗೂ ಶಾಫೀ ಕೃಷ್ಣಾಪುರದ 7ನೇ ಬ್ಲಾಕ್ನಲ್ಲಿರುವ ಸತ್ತಾರ್ ಮನೆಗೆ ಭೇಟಿ ನೀಡಿದ್ದಾಗಿ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸತ್ತಾರ್ ಸಹಿತವಾಗಿ ಇನ್ನಿಬ್ಬರು ಆರೋಪಿಗಳನ್ನು ಕೃಷ್ಣಾಪುರದ ಸತ್ತಾರ್ ನಿವಾಸಕ್ಕೆ ಕರೆತರಲಾಗಿತ್ತು.
ಪೊಲೀಸರು ಸ್ಥಳ ಮಹಜರಿಗೆ ಆಗಮಿಸಿದ ವಿಚಾರ ತಿಳಿಯುತ್ತಿದ್ದಂತೆ ಮುಮ್ತಾಜ್ ಅಲಿಯ ನೂರಾರು ಬೆಂಬಲಿಗರು ಸತ್ತಾರ್ ಮನೆಯ ಮುಂದೆ ಜಾಮಾಯಿಸಿದ್ದಾರೆ. ಈ ವೇಳೆ ಘೋಷಣೆಗಳನ್ನು ಕೂಗಿ ಸತ್ತಾರ್ ಹಾಗೂ ರಹೆಮತ್ಗೆ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುರತ್ಕಲ್ ಹಾಗೂ ಕಾವೂರು ಪೊಲೀಸರು ಹೆಚ್ಚಿನ ಭದ್ರತೆಯಲ್ಲಿ ಸ್ಥಳಮಹಜರಿಗೆ ಬಂದಿದ್ದು, ಸತ್ತಾರ್ ಮನೆಯ ಮುಂದೆ ಜಮಾಯಿಸಿದ್ದ ಜನರನ್ನು ನಿಯಂತ್ರಿಸಿದ್ದಾರೆ. ಈ ವೇಳೆ ಕೊಂಚ ಕಾಲ ಉದ್ವಿಘ್ನ ವಾತಾವರಣ ಸೃಷ್ಟಿಯಾಗಿತ್ತಾದರೂ, ಪೊಲೀಸರು ಆರೋಪಿಗಳ ಸ್ಥಳಮಹಜರು ನಡೆಸಿ ವಾಪಾಸಾಗಿದ್ದಾರೆ. ಸಮಾಜ ಸೇವಕನಾಗಿ, ಧಾರ್ಮಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದ ಮುಮ್ತಾಜ್ ಅಲಿ ರಹೆಮತ್ ಎಂಬ ಮಹಿಳೆಯ ಕಿರುಕುಳದಿಂದ ಜೀವಾಂತ್ಯಗೊಳಿಸಿದ್ದರು.
LATEST NEWS
ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ
ದೆಹಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವನ್ ಅವರ ಇಶಾ ಫೌಂಡೇಶನ್ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.
ಆಶ್ರಮವನ್ನು ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಸದ್ಗುರು ಜಗ್ಗಿ ವಾಸುದೇವನ್ ಅವರು ‘ಬ್ರೈನ್ ವಾಶ್’ ಮಾಡಲಾಗಿದ್ದಾರೆ ಎಂದು ವ್ಯಕ್ತಿಯೊಬ್ಬರು ಇಶಾ ಫೌಂಡೇಶನ್ ವಿರುದ್ಧ ಆರೋಪಿಸಿದ್ದರು. ಇದೀಗ ಈ ಪ್ಕರಣದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಗೀತಾ ಮತ್ತು ಲತಾ ಇಬ್ಬರೂ ವಯಸ್ಕರಾಗಿದ್ದು, ಅವರ ಸ್ವಂತ ಇಚ್ಛೆಯ ಆಶ್ರಮದಲ್ಲಿ ವಾಸಿಸುತ್ತಿರುವ ಕಾರಣ ಕಾನೂನುಬಾಹಿರ ಬಂಧನದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದೆ.
ಆದಾಗ್ಯೂ, ಆದೇಶವು ಈ ಪ್ರಕರಣಕ್ಕೆ ಮಾತ್ರ. ಆಶ್ರಮದಲ್ಲಿ ವೈದ್ಯರೊಬ್ಬರ ಮೇಲೆ ಇತ್ತೀಚೆಗೆ ಮಕ್ಕಳ ಮೇಲಿನ ದೌರ್ಜನ್ಯದ ಆರೋಪವಿದೆ ಎಂದು ನ್ಯಾಯಾಲಯ ಹೇಳಿದೆ. ಬ್ರೈನ್ ವಾಶ್ ವಿಷಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯ ತನಿಖೆಗೆ ಆದೇಶಿಸಿದ ಮದ್ರಾಸ್ ಹೈಕೋರ್ಟ್, ಆಶ್ರಮದ ಮೇಲೆ ದಾಳಿ ನಡೆಸಿದ ನಂತರ, ‘ಸಂಪೂರ್ಣವಾಗಿ ಅನುಚಿತ’ ರೀತಿಯಲ್ಲಿ ವರ್ತಿಸಿದೆ ಎದು ತಿಳಿಸಿದೆ.
ಆಶ್ರಮಕ್ಕೆ ಸೇರಿದಾಗ ಅವರಿಬ್ಬರಿಗೂ 27 ಮತ್ತು 24 ವರ್ಷ. ಹೆಣ್ಣುಮಕ್ಕಳಿಬ್ಬರೂ ಅಪ್ರಾಪ್ತ ವಯಸ್ಸಿನವರಾಗಿರಲಿಲ್ಲ. ಅವರು ಹೈಕೋರ್ಟಿಗೆ ಹಾಜರಾಗುವ ಮೂಲಕ ಹೇಬಿಯಸ್ ಕಾರ್ಪಸ್ ಅರ್ಜಿಯ ಉದ್ದೇಶವನ್ನು ಪೂರೈಸಲಾಗಿದೆ. ಮುಂದೆ ಯಾವುದೇ ನಿರ್ದೇಶನಗಳ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
BIG BOSS
BBK11: ಓಪನ್ ಆಗಿದೆ ಬಿಗ್ಬಾಸ್ ಮನೆಯ ಮುಖ್ಯದ್ವಾರ; ಕ್ಲೈಮ್ಯಾಕ್ಸ್ನಲ್ಲಿ ಇದೆಯಾ ರೋಚಕ ಟ್ವಿಸ್ಟ್..!
ಬಿಗ್ ಬಾಸ್… ಆರಂಭದಲ್ಲೇ ರಣಾಂಗಣವಾಗಿ ಬದಲಾಗಿರೋ ಬಿಗ್ ಮನೆ ಅತಿರೇಕದ ಕದನಕ್ಕೂ ಸಾಕ್ಷಿಯಾಗಿದೆ. ಇದುವರೆಗೂ ಚರ್ಚೆಯಾಗುತ್ತಿದ್ದ ರೀತಿಯೇ ರಂಜಿತ್ ಹಾಗೂ ಲಾಯರ್ ಜಗದೀಶ್ಗೆ ಕಿರುತೆರೆಯ ದೊಡ್ಮನೆಯಿಂದ ಗೇಟ್ ಪಾಸ್ ಸಿಕ್ಕಿದೆ. ಹೊರಹೋಗಲು ಡೋರ್ ಓಪನ್ ಆಗಿದೆ.
ಬಿಗ್ಬಾಸ್ ಅಂದ್ರೆ.. ಟಾಸ್ಕ್, ಎಲಿಮಿನೇಟ್, ಸೇವ್, ಜಗಳ ಎಲ್ಲ ಮಿಕ್ಸ್ ಮಸಾಲ ಇದ್ದೇ ಇರುತ್ತೆ. ಆದ್ರೆ, ಈ ಸಲದ ಬಿಗ್ಬಾಸ್ ಸೀಸನ್ ನೋಡಿದ್ರೆ ಜನಕ್ಕೆ ಇದೇನಪ್ಪ ಬರೀ ಜಗಳ ಅನಿಸುವಂತೆ ಆಗ್ಬಿಟ್ಟಿದೆ. ಆರಂಭದಿಂದ ಬಿಗ್ ಮನೆಯಲ್ಲಿ ಬರೀ ಜಗಳದ್ದೇ ಸದ್ದು. ಅದರ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಭಿಮಾನಿಗಳ ಪಾಲಿನ ಕಿಂಗ್ ಜಗದೀಶ್.
ಆದ್ರೀಗ ಇದೇ ಜಗದೀಶ್, ಜಗಳದ ಜಟಾಪಟಿಯಿಂದ ಬಿಗ್ ಬಾಸ್ ಮನೆಯಿಂದ ಹೊರಹೋಗೋ ಪರಿಸ್ಥಿತಿ ಬಂದಿದೆ. ಎಪಿಸೋಡ್ನಲ್ಲಿ ಬಿಗ್ಬಾಸ್ ಕಂಟೆಸ್ಟ್ಗಳಿಗೆ ಒಂದು ಟಾಸ್ಕ್ ಕೊಟ್ಟಿರುತ್ತೆ. ಟಾಸ್ಕ್ನಲ್ಲಿ ಗೆದ್ದೋರಿಗೆ ಇಬ್ಬರನ್ನ ಸೇವ್ ಮತ್ತು ನಾಮಿನೇಟ್ ಮಾಡೋ ಅವಕಾಶ ಇರುತ್ತೆ. ಆದರೆ ನಾಮಿನೇಟ್ ವೇಳೆ ಜಗಳ ಆಗಿದ್ದೆ ಜಗಳ ಆಗೋಕೆ ಕಾರಣ ಆಗಿದೆ.
ಈ ವಾರದ ನಾಮಿನೇಟ್ ಯಾರು?
ಆಟ ಆದ ಮೇಲೆ.. ನೇರವಾಗಿ ನಾಮಿನೇಟ್ ಆಗಿದ್ದ ಅನುಷಾ.. ಐಶ್ವರ್ಯ, ಮಾನಸ, ಜಗದೀಶ್, ಗೋಲ್ಡ್ ಸುರೇಶ್, ಮೋಕ್ಷಿತಾ, ಧನರಾಜ್ ಹಾಗೂ ಉಗ್ರಂ ಮಂಜು ಈ ವಾರದ ನಾಮಿನೇಟ್ ಅಂತಾ ಬಿಗ್ಬಾಸ್ ಅಂತಿಮ ಪಟ್ಟಿಯನ್ನ ಡಿಸ್ಪ್ಲೇ ಮಾಡಿದೆ ಅಷ್ಟೇ.. ಅಷ್ಟೋತ್ತು ಆಟ ಆಡಿದವ್ರು ಈಗ ಗುಂಪು ಗುಂಪಾಗಿ ಸಮಜಾಯಿಷಿ ಕೋಡೋಕೆ ಶುರು ಮಾಡಿದರು.
ಇಷ್ಟೇ ಆಗಿದ್ರೆ ಬಿಗ್ಬಾಸ್ ಮನೆ ರಣರಂಗ ಆಗುತ್ತಿರಲಿಲ್ಲ. ಆದ್ರೆ ಈ ಗ್ಯಾಪಲ್ಲಿ ಮಹಿಳಾ ಸ್ಪರ್ಧಿಯೊಬ್ಬರ ಬಗ್ಗೆ ಜಗದೀಶ್ ಹೇಳಿದ ಅದೊಂದು ಮಾತು ದೊಡ್ಡ ರಾದ್ದಾಂತ ಸೃಷ್ಟಿಸಿಬಿಟ್ಟಿತು. ಜಗದೀಶ್ ಆ ವರ್ಡ್ ಯೂಸ್ ಮಾಡ್ತಿದ್ದಂತೆ ಬಿಗ್ಬಾಸ್ ಮಹಿಳಾ ಮಣಿಗಳು ಲಾಯರ್ಗೆ ಪ್ರಶ್ನೆ ಮಾಡೋಕೆ ಶುರು ಮಾಡಿದರು.
ಜಗದೀಶ್ ತಪ್ಪಾಗಿ ಮಾತನಾಡಿದ್ರಾ..?
ಮಾಸನ ಹಾಗೂ ಜಗದೀಶ್ ಮಾತಿನ ಚಕಮಕಿ ವೇಳೇ ರಂಜಿತ್ ಬಂದು ಜಗದೀಶ್ರನ್ನ ತಳ್ಳಿದ್ದಾರೆ. ಅತ್ತ ಮಹಿಳೆಯರ ಬಗ್ಗೆ ಜಗದೀಶ್ ತಪ್ಪಾಗಿ ಮಾತಾಡಿದ್ದಾರೆ. ಹೀಗಾಗಿ ಈ ಇಬ್ಬರನ್ನ ಮನೆಯಿಂದ ಹೊರಬರಲು ಬಿಗ್ಬಾಸ್ ಸೂಚಿಸಿದ್ದು, ಮನೆಯ ಮುಖ್ಯದ್ವಾರ ಓಪನ್ ಆಗಿದೆ. ಡೋರ್ ಏನೋ ಓಪನ್ ಆಗಿದೆ. ಆದ್ರೆ, ಯಾರೂ ಹೊರಗೆ ಹೋಗಿರುವುದು ಎನ್ನುವುದು ತೋರಿಸಿಲ್ಲ. ಹೀಗಾಗಿ ಕ್ಲೈಮ್ಯಾಕ್ಸ್ ಇವತ್ತಿನ ಸಂಚಿಕೆಯಲ್ಲಿ ಕಾಣಸಿಗಲಿದೆ.
- FILM7 days ago
ಮಾಲ್ಡೀವ್ಸ್ ದ್ವೀಪದಲ್ಲಿ ಹನಿಮೂನ್..! ಜಾಲಿ ಮೂಡ್ನಲ್ಲಿ ತರುಣ್ ಸುಧೀರ್ ದಂಪತಿ
- LATEST NEWS6 days ago
‘ಸೆಕ್ಸ್’ ಗೆ ಅಡ್ಡಿಯಾದ ಇಬ್ಬರು ಮಕ್ಕಳನ್ನೇ ಹತ್ಯೆ ಮಾಡಿದ ಪಾಪಿ ತಾಯಿ.!
- BIG BOSS6 days ago
ಯಾರೂ ಊಹಿಸದ ವ್ಯಕ್ತಿಗೆ ಈ ವಾರ ಕಿಚ್ಚನ ಚಪ್ಪಾಳೆ, ಬಿಗ್ಬಾಸ್ ಮನೆಯಲ್ಲಿ ಇದೇ ಮೊದಲು
- LATEST NEWS6 days ago
ಹಿರಿಯಡ್ಕ: ಉದ್ಯಮಿ ಪ್ರಸನ್ನ ಶೆಟ್ಟಿ ತೀರ್ಥಹಳ್ಳಿಯ ವಸತಿ ಗೃಹದಲ್ಲಿ ಆತ್ಮಹ*ತ್ಯೆ