Connect with us

    FILM

    ಕಾಮನಬಿಲ್ಲು ಖ್ಯಾತಿಯ ನಿರ್ದೇಶಕ ಚಿ.ದತ್ತರಾಜ್ ಇನ್ನಿಲ್ಲ

    Published

    on

    ಮಂಗಳೂರು/ಬೆಂಗಳೂರು : ಕಾಮನಬಿಲ್ಲು ಖ್ಯಾತಿಯ ನಿರ್ದೇಶಕ ಚಿ.ದತ್ತರಾಜ್ ಇಂದು(ಅ.14) ಇಹಲೋಕ ತ್ಯಜಿಸಿದ್ದಾರೆ.  ಅವರಿಗೆ 87 ವರ್ಷ ವಯಸ್ಸಾಗಿತ್ತು.

    ರಾಜ್ ಕುಮಾರ್  ಹಾಗೂ ಅನಂತ್ ನಾಗ್ ಜೊತೆಯಾಗಿ ನಟಿಸಿದ ‘ಕಾಮನಬಿಲ್ಲು’  ಚಿತ್ರವನ್ನು ದತ್ತರಾಜ್ ನಿರ್ದೇಶಿಸಿದ್ದರು. ಈ ಚಿತ್ರ ಉತ್ತಮ ಹೆಸರು ತಂದುಕೊಟ್ಟಿತ್ತು. ಹಲವು ಸೂಪರ್ ಹಿಟ್ ಚಿತ್ರಗಳನ್ನು ದತ್ತರಾಜ್ ನೀಡಿದ್ದಾರೆ.

    ಇದನ್ನೂ ಓದಿ : ಹಳೆ ದ್ವೇಷಕ್ಕೆ ಹರಿಯಿತು ನೆತ್ತರು; ಜೊತೆಯಲ್ಲೇ ಕುಡಿದು ಕುಚಿಕು ಗೆಳೆಯನನ್ನು ಕೊಂ*ದ ಯುವಕ!

    ರಾಜ್ ಕುಮಾರ್ ಅಭಿನಯದ ಕೆರಳಿದ ಸಿಂಹ, ಅದೇ ಕಣ್ಣು. ಶೃತಿ ಸೇರಿದಾಗ, ಶಿವರಾಜ್ ಕುಮಅರ್ ಅಭಿನಯದ ಮೃತ್ಯುಂಜಯ, ಅನಂದ ಜ್ಯೋತಿ, ಮಂಜುಳ ನಟನೆಯ ‘ರುದ್ರಿ’ ಮೊದಲಾದ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು.

    ಅಂದಹಾಗೆ, ಚಿ.ದತ್ತರಾಜ್ ಖ್ಯಾತ ಸಾಹಿತಿ ಚಿ. ಉದಯಶಂಕರ್ ಅವರ ಸಹೋದರ.

    BIG BOSS

    ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಬಿಕ್ಕಿಬಿಕ್ಕಿ ಅತ್ತ ಧನರಾಜ್

    Published

    on

    ಗಿಚ್ಚಿ ಗಿಲಿಗಿಲಿ ಸೀಸನ್ 2ರ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಧನರಾಜ್ ಆಚಾರ್ ಸದ್ಯ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೊದಲ ವಾರದಲ್ಲಿ ಕಾಮಿಡಿ ಮಾಡಿಕೊಂಡು ಖುಷ್ ಖುಷ್ ಆಗಿದ್ದ ಧನರಾಜ್ ತುಂಬಾ ವೀಕ್ ಆಗುತ್ತಿದ್ದಾರೆ ಮೂಲೆ ಸೇರುತ್ತಿದ್ದಾರೆ ಎಂದು ಇನ್ನಿತರ ಸ್ಪರ್ಧಿಗಳು ಟಾರ್ಗೆಟ್‌ ಮಾಡುತ್ತಿದ್ದರು. ಇದೇ ಕಾರಣ ಕೊಟ್ಟು ಎರಡು ವಾರವೂ ಧನರಾಜ್‌ರನ್ನು ನಾಮಿನೇಟ್ ಮಾಡಿದ್ದಾರೆ. ಯಾವ ರೀತಿ ಇರಬೇಕು, ಯಾವ ರೀತಿ ಮುಂದುವರೆಯಬೇಕು ಅನ್ನೋ ಗೊಂದಲದಲ್ಲಿ ಇರುವ ಧನರಾಜ್‌ಗೆ ಬಿಗ್ ಬಾಸ್ ಮೋಟಿವೇಷನ್ ನೀಡುತ್ತಾರೆ.

    ಫೋನ್ ಕರೆ ಬರುತ್ತಿದ್ದಂತೆ ಹಲೋ ಹೇಳಿ ಬಿಗ್ ಬಾಸ್ ಎಂದು ಧನರಾಜ್ ಮಾತನಾಡುತ್ತಾರೆ. ನಿಮಗೆ ಏನೋ ಕೇಳಿಸಬೇಕು ಎಂದು ಇದ್ದಕ್ಕಿದ್ದಂತೆ ಮಗು ಅಳುತ್ತಿರುವ ವಿಡಿಯೋವನ್ನು ಬಿಗ್ ಬಾಸ್ ಹಾಕುತ್ತಾರೆ. ಮಗು ಅಳುತ್ತಿರುವ ಧ್ವನಿ ಕೇಳಿಸುತ್ತಿದ್ದಂತೆ ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಧನರಾಜ್ ‘ಸಾರಿ ಪುಟ್ಟ ಸರಿಯಾಗಿ ಆಟವಾಡಲು ಆಗುತ್ತಿಲ್ಲ’ ಎಂದು ಹೇಳುತ್ತಾರೆ. ಕರೆ ಇಟ್ಟ ನಂತರ ಕ್ಯಾಮೆರಾ ನೋಡುತ್ತಾ ‘ನನ್ನ ಮಗಳು ನೆನಪಾದಾಗಲೆಲ್ಲಾ ಇನ್ನೂ ಚೆನ್ನಾಗಿ ಆಟವಾಡಬೇಕು ಅನಿಸುತ್ತದೆ. ಇದನ್ನು ಮೋಟಿವೇಷನ್ ಆಗಿ ಸ್ವೀಕರಿಸುತ್ತೀನಿ. ಇಲ್ಲಿ ನನ್ನ ಕಡೆ ಬೆರಳು ತೋರಿಸಿ ಪ್ರಶ್ನೆ ಮಾಡುವವರಿಗೆ ಉತ್ತರ ಕೊಡುತ್ತೀನಿ’ ಎಂದು ಧನರಾಜ್ ಹೇಳುತ್ತಾರೆ.

    Continue Reading

    BIG BOSS

    ಲಾಯರ್ ಜಗದೀಶ್ ಹೊರಗೆ, ಪತ್ನಿ ಒಳಗೆ: ಕಲರ್ಸ್ ಶೋನಲ್ಲಿ ಜಗದೀಶ್ ಪತ್ನಿ

    Published

    on

    ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭ ಆದಾಗಿನಿಂದಲೂ ವಕೀಲ ಜಗದೀಶ್ ಮನೆಯಲ್ಲಿ ಅಬ್ಬರ ಎಬ್ಬಿಸಿದ್ದಾರೆ. ಬೇಕೆಂದೇ ನಿಯಮಗಳನ್ನು ಮುರಿಯುವುದು, ಕೆಟ್ಟ ಭಾಷೆ ಬಳಸುವುದು, ಮಿತಿ ಮೀರಿ ಫ್ಲರ್ಟ್ ಮಾಡುವುದು, ಸಿಕ್ಕ-ಸಿಕ್ಕವರ ಮೇಲೆ, ಸಿಕ್ಕ-ಸಿಕ್ಕವರ ಬಳಿ ಛಾಡಿ ಹೇಳುವುದು, ಎಲ್ಲರ ಮೇಲೂ ಜಗಳ ಆಡುವುದು, ಬಿಗ್​ಬಾಸ್​ ಧಮ್ಕಿ ಹಾಕುವುದು ಇದೇ ಮಾಡುತ್ತಾ ಬಂದಿದ್ದಾರೆ. ಜಗದೀಶ್ ಅವರ ಈ ವರ್ತನೆಯಿಂದ ಬೇಸತ್ತು ಇಡೀ ಮನೆ ಮಂದಿ ಅವರ ವಿರುದ್ಧ ಒಂದಾಗಿದ್ದರು. ಜಗದೀಶ್ ಹಾಗೂ ಮನೆಯ ಸದಸ್ಯರೊಬ್ಬರ ನಡುವೆ ಜಟಾಪಟಿ ನಡೆದಿರುವ ಕಾರಣ ಇದೀಗ ಜಗದೀಶ್ ಅನ್ನು ಕಲರ್ಸ್ ವಾಹಿನಿಯ ಬಿಗ್​ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ. ಆದರೆ ಅವರ ಪತ್ನಿ ಅದೇ ಕಲರ್ಸ್ ವಾಹಿನಿಯ ಶೋ ಒಂದರಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.

    ಸವಿರುಚಿ ಕಾರ್ಯಕ್ರಮ ಕಲರ್ಸ್ ವಾಹಿನಿಯ ಜನಪ್ರಿಯ ಅಡುಗೆ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಲಾಯರ್ ಜಗದೀಶ್ ಅವರ ಪತ್ನಿ ಅತಿಥಿಯಾಗಿ ಆಗಮಿಸಿದ್ದಾರೆ. ಜಗದೀಶ್ ಪತ್ನಿ ಸೌಮ್ಯಾ ಜಗದೀಶ್ ಅವರು ಸವಿರುಚಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ರುಚಿ-ರುಚಿಯಾದ ಅಡುಗೆ ಮಾಡಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಅನ್ನು ಕಲರ್ಸ್ ವಾಹಿನಿ ಹಂಚಿಕೊಂಡಿದೆ. ವಿಶೇಷವೆಂದರೆ ಈ ಶೋ ಪ್ರಸಾರವಾಗುವ ವೇಳೆಗಾಗಲೆ ಜಗದೀಶ್, ಬಿಗ್​ಬಾಸ್ ಮನೆಯಿಂದ ಹೊರಗೆ ಬಂದಿದ್ದಾಗಿದೆ.

    ಶೋನಲ್ಲಿ ಸೌಮ್ಯಾ ಅವರು, ಸೋಯಾ ಚಂಕ್ಸ್ ಮಸಾಲಾ ಕರಿ ಅಡುಗೆ ಮಾಡಿ ತೋರಿಸಿದರು. ಕಾರ್ಯಕ್ರಮದಲ್ಲಿ ಜಗದೀಶ್ ಬಗ್ಗೆಯೂ ಮಾತನಾಡಿದ ಸೌಮ್ಯಾ ಅವರು, ಬಿಗ್​ಬಾಸ್​ ನಲ್ಲಿ ಹೇಗೆ ಅವರು ಇದ್ದಾರೆಯೋ ಹಾಗೆಯೇ ಮನೆಯಲ್ಲಿಯೂ ಜಗದೀಶ್ ಇರುತ್ತಾರೆ ಎಂದು ಹೇಳಿದ್ದರು. ‘ಜಗದೀಶ್ ಅವರ ವ್ಯಕ್ತಿತ್ವ, ವರ್ತನೆಯನ್ನು ಯಾರೂ ಊಹಿಸಲು ಸಾಧ್ಯ ಆಗುವುದಿಲ್ಲ. ಒಮ್ಮೆ ಇದ್ದಕ್ಕಿದ್ದಂತೆ ಜಗಳ ಆಡಿ ಬಿಡುತ್ತಾರೆ ಆ ನಂತರ ಅವರೇ ಬಂದು ಕ್ಷಮೆ ಕೇಳುತ್ತಾರೆ. ಅವರಿಗೆ, ಅವರು ಮಾಡಿದ ತಪ್ಪು ಬೇಗನೆ ಅರ್ಥ ಆಗುತ್ತದೆ’ ಎಂದು ಪತ್ನಿ ಸೌಮ್ಯಾ ಅಡುಗೆ ಶೋನಲ್ಲಿ ಹೇಳಿದ್ದಾರೆ.

    ಈಗ ಜಗದೀಶ್ ಬಿಗ್​ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಎಲಿಮಿನೇಟ್ ಅನ್ನುವುದಕ್ಕಿಂತಲೂ ಹೊರಗಟ್ಟಲ್ಪಟ್ಟಿದ್ದಾರೆ. ಮನೆಯ ಒಳಗಿದ್ದಾಗ ಬಿಗ್​ಬಾಸ್ ಅನ್ನು ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಎಂದೆಲ್ಲ ಸವಾಲು ಹಾಕಿದ್ದರು. ಈಗ ಜಗದೀಶ್ ಹೊರಗೆ ಬಂದ ಮೇಲೆ ಏನು ಮಾಡುತ್ತಾರೆ ಕಾದು ನೋಡಬೇಕಿದೆ.

    Continue Reading

    BIG BOSS

    ಬಿಗ್​​ ಬಾಸ್​ನಲ್ಲಿ ಹೊಡೆದಾಡಿಕೊಂಡ ಸ್ಪರ್ಧಿಗಳು! ಜಗದೀಶ್​ ಮತ್ತು ರಂಜಿತ್​ ಔಟ್​

    Published

    on

    ಬಿಗ್​ ಬಾಸ್​​ ಸೀಸನ್​ 11 ಕಾರ್ಯಕ್ರಮದಿಂದ ಲಾಯರ್​ ಜಗದೀಶ್​ ಮತ್ತು ರಂಜಿತ್​ ​ಹೊರಬಂದಿದ್ದಾರೆ. ಕಿಚ್ಚ ನಿರೂಪಣೆಯ ರಿಯಾಲಿಟಿ ಶೋದಲ್ಲಿ ಹೊಡೆದಾಡಿಕೊಂಡ ಹಿನ್ನೆಲೆ ಇಬ್ಬರನ್ನು ಬಿಗ್​ಬಾಸ್​ ಮನೆಯಿಂದ ಹೊರ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.

    ಬಿಗ್​ ಬಾಸ್​ ಕನ್ನಡ ಪ್ರಾರಂಭವಾಗಿ 3 ವಾರ ಕಳೆದಿದೆ. ಆದರೆ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪ್ರಾರಂಭದಿಂದಲೂ ಮಾತಿನ ಚಕಮಕಿ ನಡೆಯುತ್ತಾ ಬಂದಿದೆ. ಅದರಲ್ಲೂ ಲಾಯರ್​ ಜಗದೀಶ್​ ಮತ್ತು ಮನೆಯ ಇತರೆ ಸ್ಪರ್ಧಿಗಳ ನಡುವೆ ಕೊಂಚ ವೈಮನಸ್ಸು ಬೆಳೆದಿತ್ತು. ಆದರೀಗ ಮಾತಿನ ಚಕಮಕಿ ಕೈ-ಕೈ ಮಿಲಾಯಿಸುವಷ್ಟರಮಟ್ಟಿಗೆ ಹೋಗಿದೆ.

    ಬಿಗ್​ ಬಾಸ್​ ಮನೆಯಲ್ಲಿ ಏನಾಯ್ತ?

    ನಿನ್ನೆ ಎಪಿಸೋಡ್​​ನಲ್ಲೂ ಕೂಡ ಸ್ಪರ್ಧಿಗಳ ನಡುವೆ ದೊಡ್ಡ ಜಗಳವಾಗಿತ್ತು. ಜಗದೀಶ್ ಮತ್ತು ಉಗ್ರಂ ಮಂಜು ನಡುವೆ ಜಗಳ ಏರ್ಪಟ್ಟಿತ್ತು. ಆ ಬಳಿಕ ರಂಜಿತ್ ಮತ್ತು ಜಗದೀಶ್ ನಡುವೆ ನೇರಾನೇರ ಮಾತುಕತೆ ನಡೆದು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    Continue Reading

    LATEST NEWS

    Trending