Connect with us

    BIG BOSS

    ಧನರಾಜ್ ಸಲಹೆಗೆ ಶಾಕ್ ಆದ ಬಿಗ್‌ಬಾಸ್

    Published

    on

    ಬಿಗ್‌ಬಾಸ್‌ ಕನ್ನಡ ಸೀಸನ್ 11 ಅದ್ಧೂರಿಯಾಗಿ ಆರಂಭಗೊಂಡಿದೆ. ವಿವಿಧ ಸ್ಪರ್ಧಿಗಳಲ್ಲಿ ಕೆಲವರು ಸ್ವರ್ಗಲೋಕ ವಾಸಿಗಳಾದರೆ, ಉಳಿದವರು ನರಕದಲ್ಲಿ ಇದ್ದಾರೆ. ತಮ್ಮ ಕಾಮಿಡಿ ವಿಡಿಯೋಗಳಿಂದ ಕರ್ನಾಟಕದ ಮನೆ ಮಾತಾಗಿರುವ ಧನರಾಜ್ ಆಚಾರ್ ಮೂರನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇವರನ್ನು ಕೂಡ ಸ್ವರ್ಗಕ್ಕೆ ಕಳುಹಿಸಲಾಗಿದೆ. ಹೀಗೆ ಹಲವರು ಸ್ಪರ್ಧಿಗಳು ಸ್ವರ್ಗ ಮತ್ತು ನರಕಗಳಲ್ಲಿ ನೆಲೆ ಕಂಡುಕೊಂಡು ಆಟವನ್ನು ರಂಗೇರಿಸಿದ್ದಾರೆ.

    ಆದರೆ ಇಲ್ಲೊಬ್ಬ ಮಹಾನುಭಾವ ಬಿಗ್‌ಬಾಸ್‌ಗೆ ಮೈಕ್ ಸರಿ ಮಾಡ್ಕೊಳ್ಳಿ ಅನ್ನೋ ಸೂಚನೆ ನೀಡೋ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ. ಆತ ಮತ್ಯಾರೂ ಅಲ್ಲ. ಧನರಾಜ್. ಈತನನ್ನು ಬಿಗ್‌ಬಾಸ್ ಸೀಕ್ರೆಟ್ ರೂಮ್‌ನೊಳಗೆ ಕರೆದು ಏನೋ ಸೂಚನೆ ಕೊಟ್ಟಿದ್ದಾರೆ. ಅದಕ್ಕೆ ಕೊಂಚ ಸಂಕೋಚದಿಂದಲೇ ಇವರು, ‘ನಂಗೆ ಸರಿಯಾಗಿ ಕೇಳಿಸ್ತಿಲ್ಲ ಬಿಗ್‌ಬಾಸ್’ ಅಂದುಬಿಟ್ಟಿದ್ದಾರೆ. ‘ಬಿಗ್‌ಬಾಸ್‌ಗೇ ಮೈಕ್ ಸರಿಯಾಗಿ ಹಾಕ್ಕೊಳ್ಳಿ ಅಂದ ಮೊದಲ ಕಂಟೆಸ್ಟೆಂಟ್ ನೀವು’ ಅನ್ನೋ ಮಾತನ್ನು ಬಿಗ್‌ಬಾಸ್ ಧನರಾಜ್‌ಗೆ ಹೇಳಿಬಿಟ್ಟಿದ್ದಾರೆ. ಇದು ಸಖತ್ ಸೆನ್ಸೇಶನ್ ಕ್ರಿಯೇಟ್ ಮಾಡಿದೆ.

    ಅಷ್ಟಕ್ಕೇ ಸುಮ್ಮನಾಗದ ಬಿಗ್‌ಬಾಸ್, ತನ್ನ ವಾಯ್ಸೇ ಕೇಳಿಸ್ತಿಲ್ಲ ಅಂತ ದೊಡ್ಡ ಮನುಷ್ಯನಿಗೆ ಜಿಂಕೆಯಂತೆ ಬಿಹೇವ್ ಮಾಡೋ ಟಾಸ್ಕ್ ನೀಡಿದೆ. ಅದಕ್ಕೆ ಸರಿಯಾಗಿ ಧನರಾಜ್‌ಗೆ ಶುರುವಿನಲ್ಲೇ ಸುದೀಪ್, ‘ನೀವು ಜಿಂಕೆ ಥರ ಇರ್ತೀರಿ’ ಅನ್ನೋ ಮಾತು ಹೇಳಿದ್ರು. ಅದನ್ನು ಬಿಗ್‌ಬಾಸ್ ನೆನಪು ಮಾಡಿ ಇನ್ಮೇಲೆ ಜಿಂಕೆ ಥರನೇ ಇರ್ಬೇಕು ಅಂದುಬಿಟ್ಟಿದ್ದಾರೆ. ಧನರಾಜ್ ಮೊದಲ ದಿನವೇ ಡಲ್ ಆಗಿದ್ದು ಇದಕ್ಕೆ ಕಾರಣ. ಸೋ ಇನ್ಮೇಲಿಂದ ಧನರಾಜ್ ಬಿಗ್‌ಬಾಸ್ ಮನೆಯ ಗಂಡು ಜಿಂಕೆ. ಜಿಂಕೆಯಂತೆ ನೆಗೆಯುತ್ತಾ ಹೋದ ಇವರು ಅದೇ ಆಟಿಟ್ಯೂಡ್ ಮುಂದುವರಿಸಿದ್ದಾರೆ. ಕರಾವಳಿ ಮೂಲದ ಈ ಯೂಟ್ಯೂಬರ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲೋವರ್ಸ್ ಇದ್ದಾರೆ.

    BIG BOSS

    ಬಿಗ್‌ಬಾಸ್‌ ಮನೆಯಲ್ಲಿ ಮೊದಲ ದಿನವೇ ಗಲಾಟೆಗೆ ನಾಂದಿ ಹಾಡಿದ ಚೈತ್ರಾ ಕುಂದಾಪುರ

    Published

    on

    ಬೆಂಗಳೂರು: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡ ಸೀಸನ್ 11 ನಲ್ಲಿ ಈ ಬಾರಿ ಸ್ಪರ್ಗ ಮತ್ತು ನರಕ ಎಂಬ ಎರಡು ಮನೆಗಳಿದೆ. ಮೊದಲ ದಿನ ಬಿಗ್ ಬಾಸ್‌ ನಲ್ಲಿ ನಿಯಮಗಳನ್ನು ಫಾಲೋ ಮಾಡೋ ವಿಚಾರದಲ್ಲೇ ಹಲವು ವಾಗ್ವಾದಗಳು ನಡೆದವು. ಬಿಗ್‌ಬಾಸ್ ನಿಯಮವನ್ನು ಅರ್ಥ ಮಾಡಿಕೊಳ್ಳವಲ್ಲೇ ಮನೆ ಮಂದಿ ಸೋತರು. ಸ್ವರ್ಗ ಮತ್ತು ನರಕದಲ್ಲಿ ಯಾರು ಯಾವ ನಿಯಮ ಫಾಲೋ ಮಾಡಬೇಕೆನ್ನುವುದರ ಬದಲಾಗಿ ಹಲವಾರು ಗೊಂದಲಗಳೇ ಹೆಚ್ಚಾಯ್ತು.

    ಸ್ವರ್ಗದ ಇಡೀ ಮನೆಯನ್ನು ಕ್ಲೀನ್ ಮಾಡಲು ಚೈತ್ರಾ ಕುಂದಾಪುರ ಮತ್ತು ಸುರೇಶ್ ಅವರನ್ನು ಆಯ್ಕೆ ಮಾಡಲಾಗಿತ್ತು. ನರಕ ನಿವಾಸಿಗಳು ಇಷ್ಟನ್ನೂ ನಾವು ಸರಿಯಾಗಿ ಮಾಡಿಲ್ಲವೆಂದರೆ ಸ್ವರ್ಗ ನಿವಾಸಿಗಳೇ ಹೊಣೆ ಆಗುತ್ತಾರೆ. ಕೆಲಸ ಕರೆಕ್ಟ್ ಮಾಡದೆ ಟೈಂ ವೇಸ್ಟ್ ಮಾಡಬೇಕು ಎಂದು ಮಾತನಾಡಿಕೊಂಡರು. ಇತ್ತ ಸ್ವರ್ಗದಲ್ಲಿ ನರಕ ವಾಸಿಗಳು ಮಿಸ್ಟೇಕ್ ಮಾಡಲು ಪ್ರಯತ್ನ ಪಡಬಹುದು ಎಂದು ಮಾತನಾಡಿಕೊಂಡರು.

    ಈ ಮಧ್ಯೆ ಲಾಯರ್ ಜಗದೀಶ್ ಬಂದು ಸ್ವರ್ಗದ ವಾತಾವರಣ ಹಾಳಾಗಿದೆ. ಮೆಲ್ಲಗೆ ಮಾತನಾಡಬೇಕು ಎಂಬ ಆದೇಶ ಬಂದಿದೆ ಎಂದು ಹೇಳಿದ್ದಾರೆ ಎಂದು ಪಿನ್ ಇಟ್ಟರು. ಇದಕ್ಕೆ ಚೈತ್ರಾ ಕುಂದಾಪುರ ಒಂದೋ ಪ್ರತಿಯಲ್ಲಿ ಬರಬೇಕು ಇಲ್ಲವೇ ಬಿಗ್ಬಾಸ್‌ ಅನೌನ್ಸ್ ಮಾಡಬೇಕು ಅಂದರು. ಇದು ಅಡುಗೆ ಮನೆಯಲ್ಲಿ ಯಮುನಾ ಮತ್ತು ಚೈತ್ರಾ ಮಧ್ಯೆ ದೊಡ್ಡ ಗಲಾಟೆಗೆ ಕಾರಣವಾಯ್ತು. ಎಷ್ಟು ಮಾತನಾಡಬೇಕು ಅಷ್ಟೇ ಮಾತನಾಡಿದರೆ ಒಳ್ಳೆಯದು ಎಂದು ಇಬ್ಬರ ನಡುವೆ ಗಲಾಟೆ ಆಯ್ತು. ನೀವು ತುಂಬಾ ಮಾತನಾಡುತ್ತೀರಿ ಎಂದು ಚೈತ್ರಾ ಎಂದು ಯಮುನಾ ಆರೋಪಿಸಿದರು. ನಾನು ಮಾತನಾಡಬಾರದು ಎಂದು ನೀವು ಹೇಳುವ ಹಾಗಿಲ್ಲ ಎಂದು ಚೈತ್ರ ಎದುರುತ್ತರ ನೀಡಿದರು. ಅಡುಗೆ ಮನೆಯಲ್ಲಿ ಕಾವು ಹೆಚ್ಚಾಯ್ತು. ಇತ್ತ ನರಕವಾಸಿಗಳ ಬಳಿ ಬಂದು ಜಗದೀಶ್ ನಗುತ್ತಿದ್ದರು.

    ಮುಂದುವರೆದು ಮಂಜು ಕೈನಿಂದ ಚೈತ್ರಾ ಪೇರಳೆಯನ್ನು ಕಿತ್ತುಕೊಂಡು ತಿಂದು ನರಕಕ್ಕೆ ಬಿಸಾಡಿದ್ದು ಅಲ್ಲಿದ್ದವರೆಲ್ಲ ಆ ಹಣ್ಣನ್ನು ತಿಂದರು. ಇದು ಮತ್ತೆ ನಿಯಮ ಉಲ್ಲಂಘಿಸಿದ್ದೀರಿ ಎಂದು ಮನೆಯರ ವಾಗ್ವಾದಕ್ಕೆ ಕಾರಣವಾಯ್ತು. ಇದೇ ವಿಚಾರವಾಗಿ ಮತ್ತೆ ಯಮುನಾ ಮತ್ತು ಚೈತ್ರಾ ನಡುವೆ ಗಲಾಟೆ ನಡೆದು ಚೈತ್ರಾ ರೂಲ್ಸ್ ಬ್ರೇಕ್‌ ಮಾಡಿದ್ರೆ ಬಿಗ್‌ಬಾಸ್‌ ನನಗೆ ಶಿಕ್ಷೆ ನೀಡ್ತಾರೆ ನೀವು ಯಾರು ಎಂದು ವಾಗ್ವದ ನಡೆದು ಕೊನೆಗೆ ಯಮುನಾ ಕ್ಯಾಮರಾ ಮುಂದೆ ಬಂದು ಬಿಗ್‌ಬಾಸ್‌ ಶಿಕ್ಷೆ ನೀಡಿ ಎಂದು ಕೇಳಿಕೊಂಡರು.

    Continue Reading

    BIG BOSS

    ಚೈತ್ರಾ ಕುಂದಾಪುರಗೆ ಮೊದಲ ದಿನವೇ ಹೊಸ ಬಿರುದು ಕೊಟ್ಟ ಲಾಯರ್ ಜಗದೀಶ್

    Published

    on

    ಬೆಂಗಳೂರು: ಹಿಂದೂ ಕಾರ್ಯಕರ್ತೆ ಆಗಿ ಚೈತ್ರಾ ಕುಂದಾಪುರ ಗುರುತಿಸಿಕೊಂಡಿದ್ದರು. ಅವರ ವಿರುದ್ಧ ವಂಚನೆ ಆರೋಪ ಇದೆ. ಈಗ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಟಿಕೆಟ್ ಸಿಕ್ಕಿದೆ. ಅವರಿಗೆ ಮೊದಲ ದಿನವೇ ಹೊಸ ಬಿರುದು ಕೂಡ ಸಿಕ್ಕಿದೆ ಅನ್ನೋದು ವಿಶೇಷ.

    ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೊದಲ ಪ್ರೋಮೋ ರಿಲೀಸ್ ಆಗಿದೆ. ಇದರಲ್ಲಿ ಹಲವು ವಿಚಾರಗಳನ್ನು ರಿವೀಲ್ ಮಾಡಲಾಗಿದೆ. ಗೌತಮಿ ಜಾಧವ್ ಅವರು ಟೋಪನ್ ಹಾಕಿಕೊಂಡ ವಿಚಾರಕ್ಕೆ ಸಂಬಂಧಿಸಿ ಅವರನ್ನು ಮನೆಯ ಕೆಲವರು ಟೀಕೆ ಮಾಡಿದ್ದರು. ಇದಕ್ಕೆ ಅವರು ಕಣ್ಣೀರು ಹಾಕಿದ್ದಾರೆ. ಚೈತ್ರಾ ಕುಂದಾಪುರ್​ಗೆ ‘ಲೇಡಿ ಡಾನ್’ ಎಂಬ ಬಿರುದನ್ನು ಜಗದೀಶ್ ಅವರು ಕೊಟ್ಟಿದ್ದಾರೆ.

    Continue Reading

    BIG BOSS

    ಭ್ರಷ್ಟರ ವಿರುದ್ಧ ಗುಡುಗಿದ‌ ಸ್ಪರ್ಧಿ ಲಾಯರ್‌ ಜಗದೀಶ್‌ಗೆ ಕಿಚ್ಚ ವಾರ್ನಿಂಗ್..!

    Published

    on

    ಮಂಗಳೂರು: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಗದ್ದಲ ಮಾಡಿದ್ದ ಲಾಯರ್ ಜಗದೀಶ್ ಬಿಗ್ ಬಾಸ್ ಸೀಸನ್ 11 ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಯಾವ ರೀತಿ ತಮ್ಮ ಮಾತಿನಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಕಮಾಲ್ ಮಾಡಿದ್ರೋ, ಅದೇ ರೀತಿ ಬಿಗ್ ಬಾಸ್ ವೇದಿಕೆಯಲ್ಲೂ ಜಗದೀಶ್ ತಮ್ಮ ಮಾತಿನ ಮಿಂಚು ಹರಿಸಿದ್ದಾರೆ. ಒಂದಲ್ಲ ಒಂದು ದಿನ ನಾನು ಸಿಎಂ ಆಗ್ತಿನಿ ಎಂದು ಹೇಳಿಕೊಂಡಿದ್ದಾರೆ.

    ನಾನು ಬಿಗ್ ಬಾಸ್‌ ಶೋಗೆ ಬರಲು ಸುದೀಪ್ ಅವರೇ ಕಾರಣ. ನನ್ನ ಪತ್ನಿ ಸುದೀಪ್ ಅವರ ಅಭಿಮಾನಿ ಎಂದು ಮಾತು ಆರಂಭಿಸಿದ ಜಗದೀಶ್ ಭ್ರಷ್ಟಾಚಾರದ ವಿರುದ್ಧ ಗುಡುಗಿದ್ದಾರೆ. ಜನಗಳ ಮುಖದಲ್ಲಿ ನಗು ಇಲ್ಲ ಎಂಬುದು ನನ್ನ ಭಾವನೆ. ಭ್ರಷ್ಟಾಚಾರ ಅನ್ನೋದು ಸಮಾಜದಲ್ಲಿ ತುಂಬಿ ತುಳುಕುತ್ತಿದೆ. ಭ್ರಷ್ಟಾಚಾರದ ವಿಷದಲ್ಲಿ ನಮ್ಮ ಸಮಾಜ ಮುಳುಗಿ ಹೋಗಿದೆ ಎಂದಿದ್ದಾರೆ.

    ನಾಮಕಾವಸ್ತೆಗೆ ಎಂಎಲ್‌ಎಗಳಿದ್ದಾರೆ, ಎಂಪಿಗಳಿದ್ದಾರೆ. ಆದರೆ ಜನರ ಕಷ್ಟಗಳನ್ನು ಕೇಳುವವರು ಯಾರು ಇಲ್ಲ. ಹೀಗಾಗಿ ನಮ್ಮ ಮಕ್ಕಳಿಗೋಸ್ಕರ ನಾವು ರಾಜಕಾರಣಿಗಳಾಗೋಣ, ಎಂಪಿ ಆಗೋಣ, ಎಂಎಲ್‌ಎ ಆಗೋಣ. ಪೊಲೀಸ್ ನವರು ಸಿಎಂ ಮಾತು ಕೇಳ್ತಾರೋ ಇಲ್ವೋ ನನ್ನ ಮಾತು ಕೇಳ್ತಾರೆ ಅಂತ ಜಗದೀಶ್ ಹೇಳಿದ್ದಾರೆ.

    ಇನ್ನು ಭ್ರಷ್ಟರಿಗೆ ವಾರ್ನಿಂಗ್ ಕೊಟ್ಟಿರುವ ಲಾಯರ್ ಜಗದೀಶ್, ಸದ್ಯ ಒಳಗೆ ಹೋಗ್ತಿದೀನಿ, ಆದ್ರೆ ನಾನು ಹೊರಗೆ ಬಂದ್ಮೇಲೆ ರುಬ್ಬೋದು ಗ್ಯಾರಂಟಿ. ನಾನು ಯಾರಿಗೂ ಬಗ್ಗೋದೇ ಇಲ್ಲ ಅಂದ್ರು. ಈ ವೇಳೆ ಕಿಚ್ಚ, ಅದೆಲ್ಲಾ ಇಲ್ಲಿ ನಡೆಯೋದಿಲ್ಲ ಎಂದು ವಾರ್ನ್‌ ಮಾಡಿದ್ದಾರೆ. ಕೊನೆಗೆ ಬಿಗ್ ಬಾಸ್ ಮನೆಯ ರೂಲ್ಸ್‌ ಫಾಲೋ ಮಾಡುತ್ತೇನೆ ಎಂದು ಜಗದೀಶ್ ಹೇಳಿ ನರಕದತ್ತ ಹೆಜ್ಜೆ ಹಾಕಿದ್ದಾರೆ.

    Continue Reading

    LATEST NEWS

    Trending