Connect with us

    LATEST NEWS

    ಮಸ್ಕತ್ ನಲ್ಲಿ ಮೇಳೈಸಿದ ದೇವೀ ಮಹಾತ್ಮೆ ಯಕ್ಷಗಾನ

    Published

    on

    ಮಸ್ಕತ್/ಮಂಗಳೂರು: 2016 ರಲ್ಲಿ ಸೇವಾ ಮನೋಭಾವದ ಸಮಾನಾಸಕ್ತದಿಂದ ಮೈದಳೆದ ಬಿರುವ ವಾಟ್ಸಾಪ್ ಗ್ರೂಪ್ ನ ಜವನೆರ್ ಸಂಘಟನೆ ಹಾಗೂ ಇವೆಂಟ್ ಸಂಸ್ಥೆ ಇನ್ಸ್ಪಿರೇಷನ್ ಡಿಸೈನ್ ನ ನೆರಳಲ್ಲಿ ಮಸ್ಕತ್ ನಲ್ಲಿ ಶ್ರೀ ಕಟೀಲು 6 ಮೇಳಗಳ ಆಯ್ದ ಕಲಾವಿದರಿಂದ ಮೇ. 31 ರಂದು ಪ್ರದರ್ಶನಗೊಂಡ ” ಶ್ರೀ ದೇವೀ ಮಹಾತ್ಮೆ” ಯಕ್ಷಗಾನವು ಅಪೂರ್ವ ಯಶಸ್ಸನ್ನು ಕಂಡಿತು.

    ಬಯಲಾಟದ ಸಂಪ್ರದಾಯಿಕ ರಂಗಸ್ಥಳ, ಸಂಘಟಕರೇ ಅಣಿಗೊಳಿಸಿದ ರಥ ಪೀಠ, ಉಯ್ಯಾಲೆ, ಪುಷ್ಪ ಅಲಂಕಾರ, ಬ್ಯಾಂಡ್ ಗರ್ನಲ್, ಹಗಲು ಬತ್ತಿ, ಸುಡುಮದ್ದು ಬಳಸದೆ ತಾಂತ್ರಿಕ ನೈಪುಣ್ಯತೆಯಿಂದ ಗೌಜಿಯ ಬಯಲಾಟ ಸಂಪನ್ನಗೊಂಡಿತು.

    ಮೂರು ದೀಪ ಬೆಳಗಿ ಉದ್ಘಾಟನೆ

    ಕಟೀಲು ಶ್ರೀ ದುರ್ಗಾ ಪರಮೇಶ್ವರಿಯ ಪುಷ್ಪ ಅಲಂಕಾರದ ಸುಂದರ ಚಿತ್ರವನ್ನು ಚೌಕಿ ಪೂಜೆಗೆ ಅಣಿಗೊಳಿಸಲಾಗಿತ್ತು. ಸಮಯಕ್ಕೆ ಸರಿಯಾಗಿ ” ಅಬ್ಬರ ತಾಳ ” ದೊಂದಿಗೆ ಸಭಾಂಗಣವನ್ನು ಮುಂಗಡ ಉಚಿತ ಪಾಸ್ ಪಡೆದು, ಪ್ರಸಾದ ಭೋಜನ ಸ್ವೀಕರಿಸಿ ಬರುವ ಯಕ್ಷಗಾನ ಆಸಕ್ತರಿಗೆ ಮುಕ್ತಗೊಳಿಸಲಾಯಿತು. ‘ಕೇಳಿ ಬಡಿಯುವ’ ಸಮಯದಲ್ಲಿ ಮುಕ್ಕಾಲು ಸಭಾಂಗಣ ತುಂಬಿತ್ತು.

    ಸಂಘಟಕ ಗುರುಪ್ರಸಾದ್ ರಾಮ ಅಮೀನ್ ನಾನಿಲ್ ಅವರು ಸ್ವಾಗತಿಸಿದರು. ಅಕ್ಷತಾ ರಿಷಿಕೇಶ್ ಪ್ರಸ್ತಾವನೆ ಗೈದರು. ಶಾಂತ ರಾಮ ಅಮೀನ್ ನಾನಿಲ್, ಲೀಲಾ ಶೇಖರ್ ಸಾಲಿಯಾನ್, ಸುಚೇತನಾ ಕೆ. ಅಂಚನ್ ಹಾಗೂ ಅತಿಥಿಗಳು ಮೂರು ದೀಪಗಳನ್ನು ಏಕಕಾಲದಲ್ಲಿ ಪ್ರಜ್ವಲಿಸಿದರು.

    ಬಿರುವ ಜವಾನೆರ್‌ನ ಎಂಟು ವರ್ಷ ಗಳ ಸೇವಾಯಾನ ಹಾಗೂ ಸಂಘಟಿಸಿದ ಕಲಾ ಕಾರ್ಯಕ್ರಮ ಗಳ ಮಾಹಿತಿಯನ್ನು ಒಳಗೊಂಡ ” ಮೆಮರೀಸ್ ” ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕಾಗಿ ಭಾರತದಿಂದ ಬಂದ ಮುಂಬೈಯ ಸೂರ್ಯ ಪ್ರಕಾಶ್ ಜಯಸುವರ್ಣ, ಮಿತ್ರ ಹೆರಾಜೆ, ಗಂಗಾಧರ್ ಪೂಜಾರಿ, ಅನಂದ ಸನಿಲ್, ನಮ್ಮ ಕುಡ್ಲ ಲೀಲಾಕ್ಷ ಬಿ ಕರ್ಕೇರ ಇವರನ್ನು ಓಮಾನ್ ಲಾಂಛನ ಪ್ರತಿಕೃತಿ ನೀಡಿ ಗೌರವಿಸಲಾಯಿತು.

    ಮಂಗಳೂರು ಕುದ್ರೋಳಿ ದೇವಸ್ಥಾನ ದ ಸಮೀಪ ನಿರ್ಮಾಣ ಆಗಲಿರುವ ಶ್ರೀನಾಥ್ ಹೆಬ್ಬಾರ್ ಅವರ ಲ್ಯಾಂಡ್ ಟ್ರೇಡರ್ಸ್ ನ 33 ಮಹಡಿಗಳ ” ಮಹಾಲಕ್ಷ್ಮಿ” ವಸತಿ ಸಮುಚ್ಚಯದ ಬಗ್ಗೆ ಮೋಹನ್ ದಾಸ್ ಸಾಲಿಯಾನ್ ಪಚ್ಚನಾಡಿ ಮಾಹಿತಿ ನೀಡಿದರು. ಅರ್ಥ ಶಾಸ್ತ್ರಜ್ಞ ಡಾ. ಅಂಚನ್ ಉದ್ಯಮಿ ಗಳಾದ ಸಿ. ಕೆ, ಉಮೇಶ್ ಬಂಟ್ವಾಳ್, ನರೇಶ್ ಪೈ ಶುಭ ಹಾರೈಕೆ ಮಾಡಿದರು. ಸುರೇಶ ಭಟ್, ವಾಲ್ಟರ್ ಎಮ್ ಪಿರೇರಾ, ಅಚಲ್ ಮಹಾಬಲ ಶೆಟ್ಟಿ, ದಿನೇಶ್ ಲೋಕನಾಥ್ ಪೂಜಾರಿ, ಶಿವಪ್ರಕಾಶ್ ಕುಂಪಲ ಉಪಸ್ಥಿತರಿದ್ದರು.

    ಇನ್ಸ್ಪಿರೇಷನ್ ಡಿಸೈನ್ ನ ಉತ್ತಮ್ ಕೋಟ್ಯಾನ್ ಧನ್ಯವಾದ ಸಮಾರ್ಪಿಸಿದರು. ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಣೆ ಮಾಡಿದರು.

    ಅಗರಿ ಶ್ರೀನಿವಾಸ ಭಾಗವತ ವಿರಚಿತ “ಶ್ರೀ ದೇವೀ ಮಹಾತ್ಮೆ” ಯಕ್ಷಗಾನ ಬಯಲಾಟವು ಬಲಿಪ ಪ್ರಸಾದ ಭಾಗವತ ಹಾಗೂ ದೇವೀ ಪ್ರಸಾದ ಆಳ್ವ ತಲಪಾಡಿ ಇವರು ಭಾಗವತಿಕೆಯಲ್ಲಿ ಜನರನ್ನು ಮನರಂಜಿಸಿದರು.

    ನಿತಿನ್ ಹುನ್ಸೆಕಟ್ಟೆ ಅವರು ಆಯ್ಕೆ ಮಾಡಿದ್ದ ಕಟೀಲು 6 ಮೇಳಗಳ 30 ಕಲಾವಿದರನ್ನು ಒಳಗೊಂಡ ತಂಡದ ಪ್ರಸ್ತುತಿ ಸರ್ವತ್ರ ಶ್ಲಾಘನೆಗೆ ಪಾತ್ರವಾಯಿತು. ಈ ವರ್ಷದ ತಿರುಗಾಟದಲ್ಲಿ ಶ್ರೀ ದೇವಿಯ ಪಾತ್ರ ನಿರ್ವಹಿಸಿದ್ದ ಮೂವರು, ನಾಲ್ವರು ರಕ್ತ ಬೀಜಾಸುರ ಮತ್ತು ಇಬ್ಬರು ಮಹಿಷಾಸುರ ಹಾಗೂ ಚಂಡ ಮುಂಡ ಪಾತ್ರ ನಿರ್ವಹಿಸುವ ನಾಲ್ವರು ಈ ಪ್ರಸಂಗದಲ್ಲಿ ವೇಷಧಾರಿಗಳಾಗಿ ಮಿಂಚಿದ್ದಾರೆ.

    ಉದ್ಯಮಿಗಳ ಮನದ ಮಾತು:

    ಒಮಾನ್ ನ ಪ್ರಸಿದ್ದ ಉದ್ಯಮಿಗಳಾದ ಶಶಿಧರ್ ಶೆಟ್ಟಿ ಮಲ್ಲಾರ್ ಹಾಗೂ ದಿವಾಕರ ಶೆಟ್ಟಿ ಇವರು ಸುಮಾರು 9 ಗಂಟೆಗಳ ಕಾಲ ಕಾರ್ಯಕ್ರಮ ವೀಕ್ಷಣೆ ಮಾಡಿದ್ದಾರೆ. ಈ ಬಗ್ಗೆ ಮನದಾಳದ ಮಾತು ಹಂಚಿಕೊಂಡಿರುವ ಇವರು ಬಿರುವ ಜವನೆರ್ ಸಂಘಟನೆ ಮಸ್ಕತ್ ನಲ್ಲಿ ನಡೆಸಿದ್ದ ಎಲ್ಲಾ ಕಾರ್ಯಕ್ರಮಗಳೂ ಯಶಸ್ಸು ಕಂಡಿದೆ. ಇಂದು ಪ್ರದರ್ಶನಗೊಂಡ ಶ್ರೀ ದೇವೀ ಮಹಾತ್ಮೆ ಯಕ್ಷಗಾನ ಬಯಲಾಟ ಮಸ್ಕತ್ ನ ಸಾಂಸ್ಕೃತಿಕ ಚರಿತ್ರೆಯಲ್ಲಿ ಅಪೂರ್ವ ದಾಖಲೆ ನಿರ್ಮಿಸಿದೆ ಎಂದು ಹೇಳಿದ್ದಾರೆ.

    ಒಮಾನ್ ಮಸ್ಕತ್ ನ ರೂಯಿಯ ಆಫಲಾಜ್ ಹೋಟೆಲ್‌ನ ಸಭಾಂಗಣದಲ್ಲಿ ಕಿಕ್ಕಿರಿದು ನೆರೆದ ಪ್ರೇಕ್ಷಕರು ಮೂಕ ವಿಸ್ಮಿತ ರಾಗಿ ಕರುನಾಡಿನ ಹೆಮ್ಮೆಯ ತೆಂಕುತಿಟ್ಟು ಯಕ್ಷಗಾನದ ಸವಿಯನ್ನು ಸವಿದಿದ್ದಾರೆ. ಸಭಾ ಕಲಾಪದಿಂದ ತೊಡಗಿ ಮಂಗಳ ಪದ್ಯ ಆದ ನಂತರ ನಡೆದ ಕಲಾವಿದರ ಗೌರವ, ಸನ್ಮಾನವನ್ನೂ ಅಸ್ಥೆಯಿಂದ ವೀಕ್ಷಿಸಿದ ವಿದೇಶದಲ್ಲಿ ನೆಲೆಸಿರುವ ಬಂಧುಗಳ ಕಲಾಸಕ್ತಿ ಕಲಾವಿದರನ್ನೂ ಭಾವುಕರನ್ನಾಗಿಸಿತು.

    DAKSHINA KANNADA

    ಬಂಟ್ವಾಳ :ನವದಂಪತಿ ಪ್ರಯಾಣಿಸುತ್ತಿದ್ದ ಕಾರು ಅಪಘಾ*ತ; ಪತ್ನಿ ಸಾ*ವು; ಪತಿ ಗಂಭೀ*ರ

    Published

    on

    ಬಂಟ್ವಾಳ : ನವದಂಪತಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ ಸಂಭವಿಸಿ ಪತ್ನಿ ಸಾ*ವನ್ನಪ್ಪಿದ್ದು, ಪತಿ ಗಂ*ಭೀರವಾಗಿ ಗಾ*ಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯ ಬಂಟ್ವಾಳದ ತಲಪಾಡಿ ಎಂಬಲ್ಲಿ ನಡೆದಿದೆ. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸ ಸಾ*ವನ್ನಪ್ಪಿದ ನವವಿವಾಹಿತೆ. ಘಟನೆಯಿಂದ ಅನಿಶ್ ಕೃಷ್ಣ ಗಂಭೀ*ರವಾಗಿ ಗಾ*ಯಗೊಂಡಿದ್ದಾರೆ.

    ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಸಿರೋಡಿನ ಕಡೆಯಿಂದ ‌ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ನವದಂಪತಿಯ ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಡಿವೈಡರ್ ಮೇಲಿನಿಂದ ಇನ್ನೊಂದು ಬದಿಗೆ ಹಾರಿದೆ. ಬಳಿಕ ಮಂಗಳೂರು ಕಡೆಯಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್‌ಟಿ.ಸಿ ಬಸ್ ಗೆ ಡಿ*ಕ್ಕಿ ಹೊಡೆದಿದೆ.

    ಡಿ*ಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಘಟನೆಯಿಂದ ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು.

    ಎರಡು ದಿನದ ಹಿಂದಷ್ಟೇ ಮದುವೆ : 

    ಸೆ.5 ರಂದು ದೇಂತಡ್ಕ ದೇವಸ್ಥಾನದಲ್ಲಿ ಮಾನಸ ಹಾಗೂ ಅನಿಶ್ ಕೃಷ್ಣ  ಮದುವೆ ನಡೆದಿತ್ತು. ಮದುವೆ ಕಾರ್ಯಕ್ರಮದ ವಿಚಾರವಾಗಿ ಇಂದು ಅಲ್ಲಿನ ಕೆಲವೊಂದು ಲೆಕ್ಕಾಚಾರ ಮಾಡಲು ದೇಂತಡ್ಕ ದೇವಸ್ಥಾನಕ್ಕೆ ಬಂದು ವಾಪಸ್ ಮಾವನ ಮನೆಗೆ ಹೋಗುವ ವೇಳೆ ಈ ‌ಘ‌ಟನೆ ನಡೆದಿದೆ ಎನ್ನಲಾಗಿದೆ. ಇಬ್ಬರು ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ಮೆಲ್ಕಾರ್ ‌ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು,  ಪ್ರಕರಣ ದಾಖಲಿಸಿಕೊಂಡಿದ್ದಾರೆ

    Continue Reading

    LATEST NEWS

    ಲಿಫ್ಟ್ ಕೊಡುವ ಮುನ್ನ ಎಚ್ಚರ: ಡ್ರಾಪ್ ಕೇಳಿ ಚಾಕು ಇರಿದ ದು*ಷ್ಕರ್ಮಿ

    Published

    on

    ಮಂಗಳೂರು/ಬೆಂಗಳೂರು : ಇತ್ತೀಚಿಗೆ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಕೊ*ಲೆ ಮಾಡೋದಕ್ಕಂತೂ ಕಾರಣವೇ ಬೇಡ. ಕ್ಷುಲ್ಲಕ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ಹ*ತ್ಯೆ ಮಾಡಲು ಹೇಸುವುದಿಲ್ಲ. ಅಂತಹುದೇ ಕೃ*ತ್ಯ ಬೆಂಗಳೂರಿನಲ್ಲಿ ನಡೆದಿದೆ. ಬೈಕ್ ನಲ್ಲಿ ಲಿಫ್ಟ್ ಕೊಟ್ಟಾತನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ.

    ಖಾಸಗಿ ಬ್ಯಾಂಕ್ ಉದ್ಯೋಗಿ ಪಿ.ಈಶ್ವರಗೌಡ(38) ಚೂ*ರಿ ಇರಿತಕ್ಕೊಳಗಾದವರು. ರೋಹಿತ್ ಗೌಡ (24) ಚೂ*ರಿ ಇರಿದಾತ. ಈಶ್ವರಗೌಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ರೋಹಿತ್ ಗೌಡನನ್ನು ಬಂಧಿಸಲಾಗಿದೆ.

    ಅವಮಾನಕ್ಕೆ ಪ್ರತೀಕಾರ :

    ಸಾಲ ವಸೂಲಾತಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ಈಶ್ವರಗೌಡ ಕ್ರಿಕೆಟ್ ಟೂರ್ನಮೆಂಟ್ ವೇಳೆ ರೋಹಿತ್ ಗೌಡನನ್ನು ಸಾರ್ವಜನಿಕವಾಗಿ ಅವಮಾನಿಸಿದ್ದ ಎನ್ನಲಾಗಿದೆ. ಇದಕ್ಕೆ ಪ್ರತೀಕಾರವಾಗಿ ಆರೋಪಿ ಆತನನ್ನು ಕೊ*ಲ್ಲಲು ಸಂಚು ರೂಪಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

    ಈಶ್ವರಗೌಡ ತನ್ನ ಸ್ನೇಹಿತನೊಂದಿಗೆ ಢಾಬಾವೊಂದಕ್ಕೆ ಊಟಕ್ಕೆ ಹೋಗಿದ್ದರು. ಅವರು ಢಾಬಾದಿಂದ ಹೊರಬಂದ ನಂತರ, ಗೇಟ್‌ನಲ್ಲಿದ್ದ ಆರೋಪಿ ಡ್ರಾಪ್ ನೀಡುವಂತೆ ವಿನಂತಿಸಿದ್ದ. ಈಶ್ವರ್ ಕೂಡ ಅದೇ ದಾರಿಯಲ್ಲಿ ಹೋಗುತ್ತಿದ್ದರಿಂದ ಅವನು ಡ್ರಾಪ್ ನೀಡಲು ಒಪ್ಪಿದರು. ಸ್ವಲ್ಪ ಹೊತ್ತು ಬೈಕ್ ಹಿಂದೆ ಕುಳಿತು ಸವಾರಿ ಮಾಡಿದ ರೋಹಿತ್, ಸ್ಮಶಾನದ ಬಳಿ ನಿರ್ಜನ ಪ್ರದೇಶದಲ್ಲಿ ತಾನು ತಂದಿದ್ದ ಚಾಕುವಿನಿಂದ ಈಶ್ವರ್ ಗೆ ಇ*ರಿದಿದ್ದಾನೆ.

    ಈ ವೇಳೆ ಬೈಕ್ ಚಲಾಯಿಸುತ್ತಿದ್ದ ಈಶ್ವರ್ ರ ನಿಯಂತ್ರಣ ತಪ್ಪಿದ್ದು,  ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಚಾಕು ಇ*ರಿತದಿಂದ ಈಶ್ವರ್ ಗೆ ಗಾ*ಯವಾಗಿದೆ. ಆದರೂ ರೋಹಿತ್‌ನಿಂದ ಹರಸಾಹಸ ಮಾಡಿ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಆದರೂ ಬಿಡದ ರೋಹಿತ್ ಬೆನ್ನತ್ತಿ ಇ*ರಿದಿದ್ದಾನೆ.

    ಇದನ್ನೂ ಓದಿ : ಗಣೇಶ ವಿಗ್ರಹ ತರಲು ತೆರಳುತ್ತಿದ್ದ ಟಾಟಾ ಏಸ್ ಪಲ್ಟಿ, ಇಬ್ಬರು ಸಾ*ವು

    ಈ ವೇಳೆ ಈಶ್ವರ್ ತಪ್ಪಿಸಿಕೊಂಡು ಮುಖ್ಯರಸ್ತೆಗೆ ಬಂದು ಸಹಾಯಕ್ಕಾಗಿ ತನ್ನ ಸಹೋದರನನ್ನು ಕರೆದಿದ್ದು, ಆತನ ಸಹೋದರ ಆತನನ್ನು ಆಟೋರಿಕ್ಷಾದಲ್ಲಿ ಆಸ್ಪತ್ರೆಗೆ ಸೇರಿಸಿದರು. ಅಷ್ಟು ಹೊತ್ತಿಗಾಗಲೇ ಆರೋಪಿ ರೋಹಿತ್ ಬೈಕ್ ನಲ್ಲಿ ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    ಉಡುಪಿ : ಲಲಿತಾ ಕಲ್ಕೂರ ವಿಧಿವಶ

    Published

    on

    ಉಡುಪಿ : ದಿವಂಗತ ಪ್ರೊ. ಮಂಜುನಾಥ ಕಲ್ಕೂರ ಅವರ ಪತ್ನಿ ಲಲಿತಾ ಕಲ್ಕೂರ (83) ವಿ*ಧಿವಶರಾಗಿದ್ದಾರೆ.  ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ(ಸೆ.7) ಉಡುಪಿಯ ಸ್ವಗೃಹದಲ್ಲಿ ನಿಧ*ನ ಹೊಂದಿದರು.

    ಮೃತರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸಹಿತ 3ಮಂದಿ ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

    Continue Reading

    LATEST NEWS

    Trending