Connect with us

    LATEST NEWS

    ಮುರ ರೈಲ್ವೇ ಟ್ರ್ಯಾಕ್‌ನಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆ : ಸಾವಿನ ಸುತ್ತ  ಅನುಮಾನದ ಹುತ್ತ..!

    Published

    on

    ಮುರ ರೈಲ್ವೇ ಟ್ರ್ಯಾಕ್‌ನಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆ : ಸಾವಿನ ಸುತ್ತ  ಅನುಮಾನದ ಹುತ್ತ..!

    Dead body found at Mura railway track.!

    ಪುತ್ತೂರು: ಮುರ ರೈಲ್ವೆ ಹಳಿಯಲ್ಲಿ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾದ ಘಟನೆ ಫೆ. ೧೨ರ ತಡ ರಾತ್ರಿ ಬೆಳಕಿಗೆ
    ಬಂದಿದೆ.

    ಘಟನೆಗೆ ಸಂಬಂಧಿಸಿ ವ್ಯಕ್ತಿಗೆ ರೈಲು ಡಿಕ್ಕಿಯಾದ ಯಾವುದೇ ಗುರುತು ಇಲ್ಲದಿರುವುದರಿಂದ ಕೊಲೆ ಮಾಡಲಾಗಿದೆ ಎಂದು ವ್ಯಕ್ತಿಯ ಸಾವಿನ ಸುತ್ತ ಶಂಕೆ ವ್ಯಕ್ತವಾಗಿದೆ.

    ಮೂಲತಃ ಮಡಿಕೇರಿ ನಿವಾಸಿ ಮುರದಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೊಂದಿರುವ ಸೋಮಣ್ಣ(೩೨ವ)ರವರು ಮೃತಪಟ್ಟವರು.
    ಅವರು ಹೊಟೇಲೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು

    ಫೆ. ೧೨ರ ಎಂದಿನಂತೆ ರಾತ್ರಿ ಗಂಟೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಸೋಮಣ್ಣ ಅವರ ಪತ್ನಿ ಪುತ್ತೂರು ಅರಣ್ಯ ಇಲಾಖೆಯಲ್ಲಿ ಗಾರ್ಡ್ಆ ಗಿರುವ ಭಾಗ್ಯ ಅವರು ಹುಡುಕಾಡಿಕೊಂಡು ಬಂದಿದ್ದ ವೇಳೆ ರೈಲ್ವೆ ಹಳಿಯಲ್ಲಿ ಗಂಡ ಸೋಮಣ್ಣ ಅವರ ಮೃತ ದೇಹ ಪತ್ತೆಯಾಗಿತ್ತು.

    ಘಟನೆ ಕುರಿತು ಪುತ್ತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದು ಕೊಂಡು ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

    ರಾತ್ರಿ ಸುಮಾರು ೧೨ ಗಂಟೆಗೆ ಯಾವುದೇ ರೈಲು ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ಮತ್ತು ಮೃತ ವ್ಯಕ್ತಿಯ ಮೇಲೆ ರೈಲು ಡಿಕ್ಕಿ ಹೊಡೆದ
    ಯಾವುದೇ ಗುರುತು ಇಲ್ಲದ ಹಿನ್ನೆಲೆಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿಯಾಗಿಲ್ಲ. ಹಾಗಾಗಿ ರೈಲ್ವೇ ಪೊಲೀಸರು ಇದೊಂದು ರೈಲು ಡಿಕ್ಕಿಯಾಗಿ
    ಮೃತಪಟ್ಟಿರುವುದಲ್ಲ ಎಂದು ತಿಳಿದು ಬಂದಿದೆ.

    DAKSHINA KANNADA

    ಟೆಸ್ಟ್‌ ಡ್ರೈವ್ ನೆಪದಲ್ಲಿ ಶೋ ರೂಮ್‌ ಬೈಕ್‌ ಸಮೇತ ಪರಾರಿ..! ಹುಡುಕಿ ಕೊಡಲು ಮನವಿ.

    Published

    on

    ಬಂಟ್ವಾಳ : ಯಾವುದೇ ವಾಹನ ಖರೀದಿ ಮಾಡಬೇಕಾದ್ರೂ ಒಂದು ಬಾರಿ ಟೆಸ್ಟ್‌ ಡ್ರೈವ್ ಮಾಡೋದು ಮಾಮೂಲಿ ವಿಚಾರ. ಹೀಗಾಗಿ ಗಿರಾಕಿ ಬಂದು ವಾಹನ ಇಷ್ಟಪಟ್ಟು ಟೆಸ್ಟ್‌ ಡ್ರೈವ್ ಕೇಳಿದ್ರೆ ಶೋ ರೂಮ್‌ ನವರು ಕೂಡಾ ಅದಕ್ಕೆ ಅವಕಾಶ ಕೊಡ್ತಾರೆ. ಆದ್ರೆ ಇಲ್ಲೊಬ್ಬ ಗಿರಾಕಿ ಶೋರೂಮ್‌ ಬೈಕ್‌ ನಲ್ಲಿ ಟೆಸ್ಟ್‌ ಡ್ರೈವ್ ಹೋಗಿದ್ದು ಮತ್ತೆ ಶೋ ರೂಮ್‌ಗೆ ವಾಪಾಸಾಗದೆ ಜೂಟ್ ಆಗಿದ್ದಾನೆ.

    ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಕೈಕಂಬದಲ್ಲಿರುವ ಶೋ ರೂಮ್‌ ಒಂದರಲ್ಲಿ ಈ ಘಟನೆ ನಡೆದಿದೆ. ಯಮಹಾದ ಯಶಸ್ವಿ ರೈಸ್‌ ಶೋರೂಮ್‌ನಲ್ಲಿ ಈ ಘಟನೆ ನಡೆದಿದ್ದು ಬೈಕ್ ಸಮೇತ ಗಿರಾಕಿ ನಾಪತ್ತೆಯಾಗಿದ್ದಾನೆ. ಬೈಕ್ ಖರೀದಿಗೆ ಬಂದಿದ್ದ ಯುವಕ ಟೆಸ್ಟ್‌ ಡ್ರೈವ್ ಕೇಳಿದ್ದು, ಶೋ ರೂಮಿನಲ್ಲಿದ್ದ ನೀಲಿ ಬಣ್ಣದ R15 V ತೆಗೆದುಕೊಂಡು ಹೋಗಿದ್ದ. ಆದರೆ ಹಲವು ಸಮಯ ಕಳೆದರೂ ಆತ ವಾಪಾಸು ಬಾರದೇ ಇದ್ದಾಗ ಸಿಬ್ಬಂದಿಗೆ ಅನುಮಾನ ಬಂದಿದೆ. ವಿಚಾರಿಸಿದಾಗ ಆತ ಬೈಕ್ ಸಮೇತ ಮಂಗಳೂರು ಕಡೆ ಪ್ರಯಾಣಿಸಿದ ಮಾಹಿತಿ ಲಭ್ಯವಾಗಿದೆ.

    ನೀಲಿ ಬಣ್ಣದ ಹೊಸ R15 V ಬೈಕ್ ಕಾಣ ಸಿಕ್ಕರೆ ತಕ್ಷಣ ಮಾಹಿತಿ ನೀಡಿದ ಅಂತ ಶೋ ರೂಮ್ ಮಾಲೀಕರು ಮನವಿ ಮಾಡಿದ್ದಾರೆ. ಮೊಬೈಲ್ ಸಂಖ್ಯೆ 9164160081/89706260754 ಇದಕ್ಕೆ ಮಾಹಿತಿ ನೀಡಿ ಅಂತ ಮನವಿ ಮಾಡಿಕೊಂಡಿದ್ದಾರೆ.

    Continue Reading

    DAKSHINA KANNADA

    ನಾರಾಯಣಗುರು ವೃತ್ತದ ಕಡೆಗಣನೆ; ಸಿಡಿದೆದ್ದ ಬಿರುವೆರ್ ಕುಡ್ಲದ ನಾಯಕ..!

    Published

    on

    ಮಂಗಳೂರು: ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯಿಂದ ಮುನ್ನಲೆಗೆ ಬಂದಿದ್ದ ನಾರಾಯಣಗುರು ವೃತ್ತ ಈಗ ಚರ್ಚೆಗೆ ಕಾರಣವಾಗಿದೆ. ಕೇವಲ ರಾಜಕೀಯವಾಗಿ ಮಾತ್ರ ನಾರಾಯಣಗುರುಗಳನ್ನು ಬಳಕೆ ಮಾಡಿಕೊಳ್ಳಲಾಯಿತಾ ಎಂಬ ಚರ್ಚೆಗಳು ನಡಿತಾ ಇದೆ.


    ಇದಕ್ಕೆ ಕಾರಣ ಸದ್ಯ ನಾರಾಯಣಗುರು ವೃತ್ತದಲ್ಲಿ ಬೆಳಕಿನ ವ್ಯವಸ್ಥೆಯೂ ಇಲ್ಲ ಅದರ ನಿರ್ವಹಣೆಯೂ ನಡಿತಾ ಇಲ್ಲ. ಇದರಿಂದ ರಾತ್ರಿ ಹೊತ್ತಿನಲ್ಲಿ ವಾಹನಗಳು ವೃತ್ತಕ್ಕೆ ಡಿಕ್ಕಿಯಾಗಿ ವೃತ್ತ ಕೂಡಾ ಹಾಳಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು. ಈ ವಿಚಾರವಾಗಿ ಬಿರುವೆರ ಕುಡ್ಲದ ನಾಯಕ ಹಾಗೂ ನಾರಾಯಣಗುರು ವೃತ್ತದ ರೂವಾರಿ ಉದಯ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


    ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುಗಳಿಗೆ ಮಾಲಾರ್ಪಣೆ ಮಾಡಿ ಇಲ್ಲಿಂದಲೇ ರೋಡ್ ಶೋ ಆರಂಭಿಸಿದ್ದರು. ಈ ವೇಳೆ ಎಲ್ಲರಿಗೂ ಆಹ್ವಾನ ನೀಡಲಾಗಿತ್ತಾದರೂ ವೃತ್ತ ನಿರ್ಮಾಣದ ರೂವಾರಿಯಾಗಿದ್ದ ಉದಯ ಪೂಜಾರಿಯವರನ್ನು ಹಾಗೂ ಕುದ್ರೋಳಿ ಕ್ಷೇತ್ರದವರನ್ನು ಕಡೆಗಣಿಸಲಾಗಿತ್ತು. ಸ್ವತಃ ಉದಯ ಪೂಜಾರಿ ಈ ವಿಚಾರವಾಗಿ ಮಾದ್ಯಮಗಳ ಮುಂದೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ ಬಿಲ್ಲವ ಯುವಕರು ಯೋಚಿಸಿ ಮತ ಹಾಕಿ ಎಂದು ಕರೆ ಕೂಡಾ ನೀಡಿದ್ದರು.

    ಉದಯ ಪೂಜಾರಿಯವರ ನೇತೃತ್ವದಲ್ಲಿ ಹಲವು ಹೋರಾಟಗಳ ಬಳಿಕ ನಾರಾಯಣಗುರು ವೃತ್ತ ನಿರ್ಮಾಣವಾಗಿತ್ತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಆಪ್ತನಾಗಿರುವ ಉದಯ ಪೂಜಾರಿಯನ್ನು ಕೇವಲ ರಾಜಕೀಯ ಕಾರಣಕ್ಕಾಗಿ ದೂರ ಇಡಲಾಗಿತ್ತು. ಅಷ್ಟು ಮಾತ್ರವಲ್ಲದೆ ನಾರಾಯಣಗುರು ವೃತ್ತ ನಿರ್ಮಾಣದಲ್ಲಿ ಉದಯ ಪೂಜಾರಿ ಪಾಲು ಏನು ಇಲ್ಲಾ ಎಂದು ಬಿಜೆಪಿ ಜಿಲ್ಲಾಧ್ಯಕ್ಷರು ಹೇಳಿಕೆ ಕೂಡಾ ನೀಡಿದ್ದರು. ಇದೆಲ್ಲವೂ ಅಂದು ರಾಜ್ಯ ಮಟ್ಟದ ಸುದ್ದಿಯಾಗಿತ್ತು. ಇಷ್ಟೆಲ್ಲಾ ಮಾಡಿದವರು ಇಂದು ನಾರಾಯಣಗುರು ವೃತ್ತವನ್ನು ಕಡೆಗಣಿಸಿದ್ದಾರೆ ಎಂಬ ಆರೋಪವನ್ನು ಉದಯ ಪೂಜಾರಿ ಮಾಡಿದ್ದಾರೆ.

    ನಾರಾಯಣಗುರುಗಳ ಬಗ್ಗೆ ಭಕ್ತಿ ಗೌರವ ಇರುವುದಾಗಿ ಬಿಂಬಿಸಿಕೊಂಡ ನಾಯಕರು ಈಗ ಗುರುಗಳನ್ನು ಮರೆತಿದ್ದಾರೆ ಎಂದು ಉದಯ ಪೂಜಾರಿ ಮತ್ತೆ ಅಸಮಾಧನ ಹೊರಹಾಕಿದ್ದಾರೆ. ಚುನಾವಣಾ ಸಮಯದಲ್ಲಿ ಗುರುಗಳನ್ನು ಹಾಡಿ ಹೊಗಳಿದವರು ಈಗ ಕನಿಷ್ಠ ಗುರುಗಳ ವೃತ್ತದ ಬಗ್ಗೆ ಕಾಳಜಿ ವಹಿಸಿಲ್ಲ ಎಂದು ಆರೋಪಿಸಿದ್ದಾರೆ. ಎಲ್ಲಾ ಬಿಟ್ಟು ನಾರಾಯಣಗುರು ವೃತ್ತದ ನಿರ್ವಹಣೆಯನ್ನೇ ಮರೆತು ಬಿಟ್ಟಿದ್ದು, ಕನಿಷ್ಠ ಲೈಟ್ ಕೂಡಾ ಇಲ್ಲಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Continue Reading

    FILM

    ಮೃಣಾಲ್ ಠಾಕೂರ್ ಬಾತ್ ಟಬ್‌ ಫೋಟೋಸ್ ವೈರಲ್..! ಅಸಲಿಯತ್ತೇನು ಗೊತ್ತಾ.?

    Published

    on

    ಮಂಗಳೂರು/ಮುಂಬೈ : ಡೀಪ್ ಫೇಕ್‌ ಭೂತ ಬೆನ್ನು ಬಿಡದೆ ಸಿನಿಮಾ ನಟಿಯರನ್ನು ಕಾಡುತ್ತಲೇ ಇದೆ. ಪದೇ ಪದೆ ನಟಿಯರ ಡೀಪ್ ಫೇಕ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಲೇ ಇರುತ್ತದೆ.

    ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ಗೆ ತೀವ್ರವಾಗಿ ಗುರಿಯಾದದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಇದೀಗ ಸೀತಾರಾಮಂ ಸಿನಿಮಾದ ನಟಿ ಮೃಣಾಲ್ ಠಾಕೂರ್ ಕೂಡ ಡೀಪ್ ಫೇಕ್‌ ಗೆ ಬ*ಲಿಯಾಗಿದ್ದಾರೆ. ಬಿಕಿನಿಯಲ್ಲಿ ಬಾತ್ ಟಬ್‌ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೊಗಳು ಹರಿದಾಡುತ್ತಿದೆ.

    ಸೀತಾರಾಮಂ ಸಿನಿಮಾದ ಮೂಲಕ ಸೌತ್‌ ಸಿನಿ ದುನಿಯಾಕ್ಕೆ ಕಾಲಿಟ್ಟ ನಟಿ ಸಾಲು ಸಾಲು ಸಿನಿಮಾಗಳ ಮೂಲಕ ತಮ್ಮ ಫ್ಯಾನ್ ಬೇಸ್ ಹೆಚ್ಚಿಸಿಕೊಂಡಿದ್ದಾರೆ. ಅದರಲ್ಲೂ ತಮ್ಮ ಸೀತಾರಾಮಂ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಎದುರು ಸೀತೆಯ ಪಾತ್ರದಲ್ಲಿ ಮೃಣಾಲ್ ಠಾಕೂರ್ ನಟಿಸಿದ್ದು ಇವರ ಅಭಿಮಾನಿಗಳಲ್ಲಿ ಈ ಚಿತ್ರವೂ ಫೆವರೇಟ್ ಚಿತ್ರವಾಗಿ ಉಳಿದಿದೆ. ಸದ್ಯ ಮೃಣಾಲ್ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

    ಇತ್ತೀಚೆಗೆ ಮೃಣಾಲ್ ಠಾಕೂರ್ ಬಾತ್ ಟಬ್‌ನಲ್ಲಿ ಕುಳಿತು ಫೋಟೋಸ್‌ ಪೋಸ್ ನೀಡಿರುವ ಫೋಟೋಗಳು ವೈರಲ್ ಆಗಿವೆ. ವೈರಲ್ ಫೋಟೋಗಳಲ್ಲಿ ಮೃಣಾಲ್ ತುಂಬಾ ಹಾಟ್ ಆಗಿದ್ದಾರೆ. ಬಾತ್ ರೂಂನ ಟಬ್ ನಲ್ಲಿ ಬಿಕಿನಿಯಲ್ಲಿ ಕುಳಿತು ರೊಮ್ಯಾಂಟಿಕ್ ಆಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ.

    ಫೋಟೋಗಳ ಹಿಂದಿನ ಅಸಲಿಯತ್ತು ಏನು.?

    ಮೃಣಾಲ್ ಠಾಕೂರ್ ಬಾತ್ ಟಬ್‌ ಫೋಟೋಗಳು ವೈರಲ್ ಆಗುತಿದ್ದು ಆ ಚಿತ್ರಗಳು ಮೃಣಾಲ್ ಠಾಕೂರ್ ಅವರದ್ದಲ್ಲ ಬದಲಾಗಿ ಅವುಗಳನ್ನು ಡೀಪ್‌ ಫೇಕ್‌ ತಂತ್ರಜ್ಞಾನದ ಮೂಲಕ ಸೃಷ್ಟಿ ಮಾಡಲಾಗಿದೆ. ಈ ವಿಷಯ ಬಹಳಷ್ಟು ಚರ್ಚೆ ಸೃಷ್ಟಿ ಮಾಡಿದ್ದು ಡೀಪ್ ಫೇಕ್ ವಿಚಾರ ತಿಳಿದು ಮೃಣಾಲ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಇಂತಹ ಚಿತ್ರಗಳನ್ನು ಹರಿಬಿಟ್ಟವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

    Continue Reading

    LATEST NEWS

    Trending