ಕೊರೋನಾ ಎಫೆಕ್ಟ್: ಕಟೀಲು ಯಕ್ಷಗಾನ ಮೇಳದ ತಿರುಗಾಟ ತಾತ್ಕಾಲಿಕ ಬಂದ್
ಕೊರೋನಾ ಎಫೆಕ್ಟ್: ಕಟೀಲು ಯಕ್ಷಗಾನ ಮೇಳದ ತಿರುಗಾಟ ತಾತ್ಕಾಲಿಕ ಬಂದ್
ಮಂಗಳೂರು: ಕೊರೊನಾ ವೈರಸ್ ನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ಕಟೀಲು ಯಕ್ಷಗಾನ ಮೇಳದ ತಿರುಗಾಟವನ್ನು ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಕಟೀಲಿನ ಯಕ್ಷಗಾನ ಮೇಳಗಳು ಕೇವಲ ಮನರಂಜನೆ ಮಾತ್ರವಲ್ಲದೆ ಆರಾಧನೆಯಾಗಿದ್ದು ಮೇಳಗಳು ತಿರುಗಾಟ ಆರಂಭದ ನಂತರ ಯಕ್ಷಗಾನ ನಿಲ್ಲಬಾರದೆಂಬ ನಂಬಿಕೆ ಇದೆ.
ಇದೂ ಕೂಡ ದೇವರ ಪೂಜೆ ಎಂಬುದು ಇಲ್ಲಿಯ ನಂಬಿಕೆ. ಯಕ್ಷಗಾನ ನಿಲುಗಡೆ ಆದರೂ ಎಲ್ಲಾ ಮೇಳಗಳ ದೇವರುಗಳಿಗೆ ಕಟೀಲಿನಲ್ಲಿ ಅರ್ಚಕರು ತ್ರಿಕಾಲಪೂಜೆ ಮಾಡುತ್ತಾರೆ. ದೇವಳದ ರಥಬೀದಿಯಲ್ಲಿ ರಂಗಸ್ಥಳದಲ್ಲಿ ಕಟ್ಟೇಶ (ಬಾಲಗೋಪಾಲ) ವೇಷದವರು ಕುಣಿದು ಆರತಿ ಮಾಡುತ್ತಾರೆ. ಅಲ್ಲಿ ವರೆಗಿನ ಸಂಪ್ರದಾಯ ದೇವರ ಪೂಜೆ ಎಂಬ ನಂಬಿಕೆ ಇರುವುದರಿಂದ ಮುಂದಿನ ಆದೇಶದವರೆಗೆ ಕಟೀಲಿನಲ್ಲಿ ನಡೆಯುತ್ತದೆ.
ಈ ಹಿನ್ನಲೆಯಲ್ಲಿ ದೇವರ ಪೂಜಾರೂಪವಾದ ಯಕ್ಷಗಾನವನ್ನು ಮಾತ್ರ ಕಟೀಲು ರಥಬೀದಿಯಲ್ಲಿ ನಿನ್ನೆಯಿಂದ ನಡೆಸಲಾಗುವುದು. ಸಂಜೆ ಏಳುಗಂಟೆಗೆ ಆರೂ ಮೇಳಗಳ ದೇವರ ಪೂಜೆಯನ್ನು ಬಿಡಾರದಲ್ಲಿಯೇ ನೆರವೇರಿಸಿ ಅಲ್ಲಿಂದ ರಂಗಸ್ಥಳಕ್ಕೆ ಕುಕ್ಕೇಶ( ಕೋಡಂಗಿ) ಬಂತು. ಸೀಮಿತ ಹಾಡುಗಳ ನಂತರ ಕಟ್ಟೇಶ(ಬಾಲಗೋಪಾಲ) ಬಂದು ಕುಣಿದಾಗ ಆರೂ ಮೇಳದ ದೇವರು ರಂಗಸ್ಥಳಕ್ಕೆ ಬಂದ್ರು ದೇವರ ಪೂಜೆ ಬಾಲಗೋಪಾಲ ವೇಷದವರು ನೆರವೇರಿಸಿದ ನಂತರ ಮೇಳದ ದೇವರ ಪೂಜಾವಿಧಿಗಳು ಶಾಸ್ತ್ರೋಕ್ತವಾಗಿ ಹಾಗೂ ಸಾಂಪ್ರದಾಯಿಕವಾಗಿ ಮುಕ್ತಾಯವಾಯ್ತು.
ಅಲ್ಲಿಗೆ ಯಕ್ಷಗಾನ ಮುಗಿಸಿ ದೇವರಿಗೆ ಬಿಡಾರದಲ್ಲಿ ಪುನಃ ಅರ್ಚಕರು ಪೂಜೆ ಮಾಡಿದ ನಂತರ ಇಡೀ ಪ್ರಕ್ರಿಯೆ ಮುಗಿದಿದೆ.. ಕಟೀಲು ಆರೂ ಮೇಳಗಳು ಹೊರಡುವ ಮತ್ತು ಮೇಳ ಒಳಗಾಗುವ ಸಂದರ್ಭ ರಥಬೀದಿಯ ಆರೂ ರಂಗಸ್ಥಳದಲ್ಲಿ ದೇವರು ಬರುವ ಸಂಪ್ರದಾಯವಿದ್ದು, ಅಷ್ಟಮಿಯ ಆಟದ ದಿನ ಆರೂ ಮೇಳದ ದೇವರು ಒಂದೇ ರಂಗಸ್ಥಳಕ್ಕೆ ಬರುವ ಸಂಪ್ರದಾಯವಿದ್ದು ಇದ್ದು ವರ್ಷಕ್ಕೆ ಒಂದೇ ಬಾರಿ ನಡೆಯುತ್ತದೆ. ಆದರೆ ಕೊರೊನ ಹಿನ್ನೆಲೆಯಲ್ಲಿ ತಿರುಗಾಟ ರದ್ದಾದ ಕಾರಣ, ಒಂದೇ ರಂಗಸ್ಥಳದಲ್ಲಿ ಆರೂ ಮೇಳಗಳ ದೇವರನ್ನು ಕಾಣ ಬಹುದಾಗಿದೆ.
ಕೊರೋನ ಹಿನ್ನೆಲೆಯಲ್ಲಿ ಕಟೀಲು ದೇವಳದಲ್ಲಿ ಎಲ್ಲ ಸೇವೆಗಳು ರದ್ದಾಗಿದ್ದು, ದೇವಳಕ್ಕೆ ಬೆರಳೆಣಿಕೆಯ ಭಕ್ತರು ಭೇಟಿ ನೀಡುತ್ತಿದ್ದು, ದೇವರ ದರ್ಶನ ಬಿಟ್ಟು ಎಲ್ಲಾ ವ್ಯವಸ್ಥೆಗಳು ನಿಲ್ಲಿಸಲಾಗಿದೆ. ದೇವಳಕ್ಕೆ ಬುಧವಾರ ದುಬೈನಿಂದ ಬಂದ ಕುಟುಂಬವೊಂದನ್ನು ಪೊಲೀಸರು ವಾಪಾಸು ಕರೆಸಿದ್ದಾರೆ, ದುಬೈಯಿಂದ ಭಾರತಕ್ಕೆ ಬಂದವರನ್ನು 14 ದಿನ ತೀವೃ ನಿಗಾದಲ್ಲಿ ಇರಿಸಬೇಕಾಗಿದ್ದು, ದುಬೈಯಿಂದ ಜಿಲ್ಲೆಗೆ ಆಗಮಿಸಿದ್ದ ಮಂಗಳವಾರ ವ್ಯಕ್ತಿಯೋರ್ವರನ್ನು ತಪಾಸಣೆ ನಡೆಸಲಾಗಿದ್ದು ಕೊರೊನಾ ತಪಾಸಣೆಯಲ್ಲಿ ನೆಗಟಿವ್ ಬಂದಿದ್ದು, ಆದರೆ ಹೊರಗಡೆ ತಿರುಗಾಟ ನಡೆಸದಂತೆ ವೈದ್ಯರು ಸೂಚಿಸಿದ್ದಾರೆ.
ಆದರೆ ಕುಟುಂಬದೊಂದಿಗೆ ಕಟೀಲಿಗೆ ಆಗಮಿಸಿದ ಅವರು ದೇವರ ದರ್ಶನ ಪಡೆದು ಪರಿಸರದಲ್ಲಿ ತಿರುಗಾಟ ನಡೆಸಿದ್ದಾರೆ. ಮಾಹಿತಿ ಪಡೆದ ಬಜಪೆ ಪೊಲೀಸರು ದೇವಳಕ್ಕೆ ಬಂದು ಅವರನ್ನು ವಾಪಾಸು ಕರೆದುಕೊಂಡು ಹೋದ ಘಟನೆ ನಡೆದಿದೆ. ಇನ್ನು ಕಿನ್ನಿಗೋಳಿಯ ದಾಮಸ್ಕಟ್ಟೆಯಲ್ಲಿ ವಿದೇಶದಿಂದ ಎರಡು ವಾರದ ಹಿಂದೆ ಬಂದ ವ್ಯಕ್ತಿಯೋರ್ವರಿಗೆ ಕೊರೊನದ ಎರಡು ಲಕ್ಷಣಗಳು ಗೋಚರಿಸಿದ್ದು, ತಪಸಣೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ.
DAKSHINA KANNADA
ದತ್ತಿ ಇಲಾಖೆ ದೇವಸ್ಥಾನದಲ್ಲಿ ನಂದಿನಿ ತುಪ್ಪ ಬಳಕೆಗೆ ಸೂಚನೆ..!
ಮಂಗಳೂರು : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕರ್ನಾಟಕದ ದತ್ತಿ ಇಲಾಖೆ ಫುಲ್ ಅರ್ಲರ್ಟ್ ಆಗಿದೆ. ಕರ್ನಾಟಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಕೆ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ.
ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ದತ್ತಿ ಇಲಾಖೆ ದೇವಸ್ಥಾನದ ಸೇವೆಗಳಿಗೆ , ದೀಪಗಳಿಗೆ, ಪ್ರಸಾದ ತಯಾರಿಗೆ ಮತ್ತು ಅನ್ನಛತ್ರದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ಸೂಚಿಸಿದೆ.
ತಿರುಪತಿ ದೇವಾಲಯದ ಲಡ್ಡು ತಯಾರಿಗೆ ಕರ್ನಾಟಕದ ನಂದಿನಿ ತುಪ್ಪವೇ ರವಾನೆ ಆಗುತ್ತಿದೆ. ಆದ್ರೆ ಜಗನ್ ರೆಡ್ಡಿಯ ಸರ್ಕಾರದ ನಾಲ್ಕು ವರ್ಷ ನಂದಿನಿ ತುಪ್ಪ ತಿರುಪತಿಗೆ ಪೂರೈಕೆ ಮಾಡಿರಲಿಲ್ಲ. ಹೀಗಾಗಿ ತಿರುಪತಿ ಲಡ್ಡುವಿಗೆ ಬಳಕೆ ಮಾಡಿದ ತುಪ್ಪಕ್ಕೂ ನಂದಿನಿ ತುಪ್ಪಕ್ಕೂ ಯಾವುದೇ ಸಂಭಂಧ ಇಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.
LATEST NEWS
ನಾಲ್ಕನೇ ಮಗುವೂ ಹೆಣ್ಣಾಯಿತೆಂದು ಹಸುಗೂಸನ್ನು ನೆಲಕ್ಕೆ ಬಡಿದು ಕೊಂ*ದ ತಂದೆ
ಮಂಗಳೂರು/ ಇಟ್ವಾ: ಹೆಣ್ಣು ಮಕ್ಕಳು ಹುಟ್ಟಿದರೆ ಮನೆಗೆ ಲಕ್ಷ್ಮಿ ಬಂದಳು ಎಂಬ ಸಂಭ್ರಮ ಹೆಚ್ಚಿನ ಮನೆಗಳಲ್ಲಿ ಇರುತ್ತದೆ. ಭೇಟಿ ಬಚಾವೋ, ಭೇಟಿ ಪಡಾವೋ ಎಂಬುದಾಗಿ ಸರ್ಕಾರ ಹೆಣ್ಣು ಮಕ್ಕಳ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ, ಹೆಣ್ಣು ಮಕ್ಕಳ ಬಗೆಗಿನ ತಾತ್ಸಾರ ಕಡಿಮೆ ಆಗಿಲ್ಲ ಎಂಬುದಕ್ಕೆ ಉತ್ತರಪ್ರದೇಶದಲ್ಲಿ ನಡೆದ ಈ ಘಟನೆ ಸಾಕ್ಷಿ.
ನಾಲ್ಕನೇ ಮಗುವೂ ಹೆಣ್ಣಾಯಿತು ಎಂಬ ಕಾರಣಕ್ಕೆ ತಂದೆಯೇ ಹಸುಗೂಸನ್ನು ನೆಲಕ್ಕೆ ಬಡಿದು ಕೊಂ*ದಿರುವ ಕ್ರೂ*ರ ಘಟನೆ ನಡೆದಿದೆ. ಇಟ್ವಾ ಎಂಬಲ್ಲಿ ಈ ಕ್ರೌ*ರ್ಯ ನಡೆದಿದೆ.
ನೆಲಕ್ಕೆ ಬಡಿದು ಕೊಂದ ಪಾಪಿ!
30 ವರ್ಷದ ಬಬ್ಲು ದಿವಾಕರ್ ಈ ಕೃ*ತ್ಯ ಎಸಗಿದ ತಂದೆ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ಹೆಣ್ಣು ಮಕ್ಕಳ ಬಳಿಕ ದಿವಾಕರ್ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ. ಆದರೆ, ನಾಲ್ಕನೇ ಮಗುವೂ ಹೆಣ್ಣಾಯಿತು. ಇದರಿಂದ ಕೋಪಗೊಂಡ ಆತ ಭಾನುವಾರ(ಸೆ.15) ತಿಂಗಳ ಶಿಶುವನ್ನು ನೆಲಕ್ಕೆ ಎಸೆದಿದ್ದಾನೆ.
ಮೊದಲ ಹೆಂಡತಿಯಿಂದ ಈಗಾಗಲೇ ಎರಡು ಹೆಣ್ಣು ಮಕ್ಕಳ ತಂದೆಯಾಗಿರುವ ದಿವಾಕರ್ ಇದೇ ಕಾರಣದಿಂದ ಎರಡನೇ ಮದುವೆಯಾಗಿದ್ದ. ಎರಡನೇ ಹೆಂಡತಿಗೂ ಮೊದಲ ಮಗು ಹೆಣ್ಣಾಗಿತ್ತು. ಇದೀಗ ಎರಡನೇ ಮಗುವೂ ಹೆಣ್ಣಾಗಿದೆ. ಒಂದು ತಿಂಗಳ ಹಿಂದೆ ಮಗು ಜನಿಸಿದ್ದು, ಭಾನುವಾರ ಮಗು ತಾಯಿಯ ಮಡಿಲಲ್ಲಿ ಮಲಗಿತ್ತು. ಈ ವೇಳೆ ಡ ದಿವಾಕರ್ ತಾಯಿಯಿಂದ ಮಗುವನ್ನು ಕಸಿದು, ನೆಲಕ್ಕೆ ಬಡಿದಿದ್ದಾನೆ. ತಕ್ಷಣಕ್ಕೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಗು ಅದಾಗಲೇ ಗಂಭೀ*ರ ಗಾ*ಯದಿಂದ ಮೃ*ತಪಟ್ಟಿತ್ತು.
ಇದನ್ನೂ ಓದಿ : ಹನಿಟ್ರ್ಯಾಪ್ : ಸುಂದರಿ ಮನೆಗೆ ಕರೆದಳೆಂದು ಹೋಗಿ 40 ಲಕ್ಷ ಕಳೆದುಕೊಂಡ ಉದ್ಯಮಿ
ಇದೀಗ ಹೆಂಡತಿ ನೀಡಿರುವ ದೂರಿನ ಆಧಾರದ ಮೇಲೆ. ಬಿಎನ್ಎಸ್ ಸೆಕ್ಷನ್ 105ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
LATEST NEWS
ಮಂಗಳೂರು: ಮೂರು ದಿನದ ಬಿಎನ್ಐ ಬಿಗ್ ಬ್ರ್ಯಾಂಡ್ ಎಕ್ಸ್ಪೋ-2024ಗೆ ಚಾಲನೆ
ಮಂಗಳೂರು: ಉದ್ಯಮಿಗಳ ಮತ್ತು ವೃತ್ತಿಪರರ ಸಂಘಟನೆ ಬಿಸ್ನೆಸ್ ನೆಟ್ವರ್ಕ್ ಇಂಟರ್ ನ್ಯಾಶನಲ್ – ಬಿಎನ್ಐ ಮಂಗಳೂರು ಮತ್ತು ಉಡುಪಿ ವತಿಯಿಂದ ಬಿಗ್ ಬ್ರಾಂಡ್ಸ್ ಎಕ್ಸ್ಪೊ – 2024 ಪ್ರದರ್ಶನ ಇಂದು ಮಂಗಳೂರಿನ ಡಾ. ಟಿ.ಎಂ.ಎ. ಪೈ ಇಂಟರ್ ನ್ಯಾಶನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಆರಂಭಗೊಂಡಿತು. ಮೂರು ದಿನಗಳ ಕಾಲ ನಡೆಯುವ ಎಕ್ಸ್ಪೋವನ್ನು ರಿಬ್ಬನ್ ಕತ್ತರಿಸುವ ಮೂಲಕ ಸ್ಪೀಕರ್ ಯು ಟಿ ಖಾದರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಖಾದರ್, ಇಂತಹ ಎಕ್ಸ್ಪೋಗಳು ನಮ್ಮ ರಾಜ್ಯ, ದೇಶಕ್ಕೆ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆ. ಆರ್ಥಿಕವಾದ ಚಲನವಲನಗಳು ಎಲ್ಲಿ ಹೆಚ್ಚಾಗಿ ಆಗುತ್ತದೆಯೋ ಅಲ್ಲಿ ಉದ್ಯೋಗಾವಕಾಶ, ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಎಕ್ಸ್ಪೋ ಅತ್ಯಂತ ಯಶಸ್ವಿಯಾಗಲಿ ಎಂದು ಶುಭ ನುಡಿದರು.
ಬಿಎನ್ಐ ಎಕ್ಸ್ಪೋದಲ್ಲಿ ವಿಶೇಷ ಪುರವಣಿಯನ್ನು ಕೂಡಾ ಬಿಡುಗಡೆಗೊಳಿಸಲಾಯಿತು. ಶಾಸಕ ವೇದವ್ಯಾಸ ಕಾಮತ್ ಇದನ್ನು ಬಿಡುಗಡೆಗೊಳಿಸಿದರು. ಈ ಬಗ್ಗೆ ಮಾತನಾಡಿದ ಅವರು, 125ಕ್ಕೂ ಹೆಚ್ಚಿನ ಮಳಿಗೆಗಳು ಈ ಎಕ್ಸ್ಪೋ ಯಶಸ್ವಿಯಾಲೆಂದು ಹಾರೈಸಿದರು. ಇಂತಹ ಎಕ್ಸ್ಪೋಗಳ ಪ್ರದರ್ಶನಗಳಿಗೆ ಸರಕಾರ ಪ್ರೋತ್ಸಾಹ ನೀಡಬೇಕು. ಆರ್ಥಿಕತೆಯ ವಿಚಾರದಲ್ಲಿ ಮುಂಚೂಣಿ ನಗರವಾಗಿರುವ ಮಂಗಳೂರಿನಲ್ಲಿ ಇಂತಹ ಎಕ್ಸ್ಪೋ ಮಾಡಲು ಪ್ರತ್ಯೇಕ ವ್ಯವಸ್ಥೆ ಆಗಬೇಕು ಎಂದರು.
ಬಿಎನ್ಐ ಕಾರ್ಯ ನಿರ್ವಾಹಕ ನಿರ್ದೇಶಕ ಗಣೇಶ್ ಶರ್ಮಾ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಆಟೋಮೊಬೈಲ್. ಆಭರಣಗಳು, ವಿಮೆ, ಗಾರ್ಮೆಂಟ್ಸ್, ಐಟಿ ಉತ್ಪನ್ನಗಳು, ಸಾಫ್ಟ್ವೇರ್, ಕಚೇರಿ ಮತ್ತು ಗೃಹ ಪೀಠೋಪಕರಣಗಳು, ಆಹಾರ ಉತ್ಪನ್ನಗಳು ಸೇರಿದಂತೆ 120 ಕ್ಕೂ ಆಧಿಕ ಉದ್ಯಮಗಳ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಪ್ರದರ್ಶನ ಇರುತ್ತದೆ ಎಂದರು.
ಬಿಎನ್ಐ ಸದಸ್ಯರಾಗಿರುವ ಹಾಗೂ ಎಕ್ಸ್ಪೋದಲ್ಲಿ ಪಾಲ್ಗೊಂಡ ಉದ್ಯಮಿಗಳನ್ನು ಇದೇ ವೇಳೆ ಗೌರವಿಸಲಾಯಿತು. ವಿವಿಧ ಕಂಪೆನಿಗಳಿಂದ ನೀಡಲಾಗುತ್ತಿರುವ ಆಫರ್ಗಳನ್ನು ಪ್ರಕಟಿಸಲಾಯಿತು. ಮಂಗಳೂರು- ಉಡುಪಿ ಜಗತ್ತಿನ ಉದ್ಯಮಿಗಳ ಸಂಘಟನೆ ಬಿಸ್ನೆಸ್ ನೆಟ್ವರ್ಕ್ ಇಂಟರ್ ನ್ಯಾಶನಲ್ ನ ಭಾಗವಾಗಿದ್ದು, ನೂರಕ್ಕೂ ಅಧಿಕ ವಿವಿಧ ವ್ಯಾಪಾರ- ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 310 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಈ ವರ್ಷದ ಎಕ್ಸ್ಪೊ ಈ ಸರಣಿಯ 3 ನೇ ಆವೃತ್ತಿಯಾಗಿದೆ. ಕಾರ್ಯಕ್ರಮದಲ್ಲಿ ಎಕ್ಸ್ಪೋ ಅಧ್ಯಕ್ಷ ಮೋಹನ್ ರಾಜ್, ಬಿಎನ್ ಐ ಸದಸ್ಯ ಮಹೇಶ್ ಶೆಟ್ಟಿ, ನಿರ್ದೇಶಕ ಸುನಿಲ್ ದತ್ ಪೈ, ಪ್ರಜ್ವಲ್ ಶೆಟ್ಟಿ, ಡಾ. ಸಚಿನ್ ನಡ್ಕ , ಪ್ರೀತಿ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು. ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು, ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆ ತನಕ ತೆರೆದಿರುತ್ತದೆ.