ಯಕ್ಷಗಾನ, ನಾಟಕ ಕಲಾವಿದರ ಬದುಕು ಕಸಿದ ಕೋವಿಡ್-೧೯
ಯಕ್ಷಗಾನ, ನಾಟಕ ಕಲಾವಿದರ ಬದುಕು ಕಸಿದ ಕೋವಿಡ್-೧೯
ಮಂಗಳೂರು : ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಆತಂಕ ತಂದೊಡ್ಡಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇದೀಗ ಕೊರೊನ ಸೋಂಕನ್ನು ತಡೆಗಟ್ಟಲು ಎಲ್ಲಾ ಕ್ರಮಗಳನ್ನು ಜಿಲ್ಲಾಡಳಿತ ಅನುಸರಿಸುತ್ತಿದೆ. ಸಿನೆಮಾ, ಮಾಲ್ಗಳನ್ನು ಬಂದ್ ಮಾಡಿರುವ ಜಿಲ್ಲಾಧಿಕಾರಿ ಇದೀಗ ೧೪೪/೩ ಆದೇಶವನ್ನು ಹೊರಡಿಸುವ ಮೂಲಕ ಯಕ್ಷಗಾನ, ಆಟ, ಕೋಲ, ನೇಮಗಳಿಗೂ ತಡೆಯೊಡ್ಡಿದ್ದಾರೆ. ಜನಸಂಖ್ಯೆ ಹೆಚ್ಚಿರುವ ಕಡೆಗಳಲ್ಲಿ ಸೋಂಕು ಹರಡುವ ಭೀತಿ ಇರುವ ಕಾರಣ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಆದರೆ ಜಿಲ್ಲಾಧಿಕಾರಿಗಳ ಈ ಬಂದ್ ನಿರ್ಧಾರದಿಂದ ದೊಡ್ಡ ಹೊಡೆತ ಬಿದ್ದಿರುವುದು ಕಲಾವಿದರ ಮೇಲೆ. ಮುಖ್ಯವಾಗಿ ಯಕ್ಷಗಾನ ಮತ್ತು ನಾಟಕ ಕಲಾವಿದರು ಕೆಲಸವಿಲ್ಲದೆ ಮನೆಯಲ್ಲೇ ಕೂರುವಂತಾಗಿದೆ. ಗಂಡುಮೆಟ್ಟಿನ ಕಲೆ ಕರಾವಳಿಯ ಯಕ್ಷಗಾನ ಪ್ರದರ್ಶನಕ್ಕೆ ತಡೆಯೊಡ್ಡಿರುವುದು ಯಕ್ಷಗಾನ ಪ್ರೇಮಿಗಳಿಗೆ ನಿರಾಸೆ ಮೂಡಿಸಿದ್ದರೆ, ಗೆಜ್ಜೆಕಟ್ಟಿ ಹೆಜ್ಜೆ ಹಾಕಿ ರಂಗಸ್ಥಳದಲ್ಲಿ ಕುಣಿದು ಸಂಪಾದನೆ ಮೂಲಕ ಜೀವನ ನಿರ್ವಹಣೆ ಮಾಡುತ್ತಿದ್ದ ಬಡ ಕಲಾವಿದರಿಗೂ ಇದರಿಂದ ಸಾಕಷ್ಟು ಸಮಸ್ಯೆ ಆಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಟೀಲು/ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ, ಪೆರ್ಡೂರು, ಸೌಕೂರು, ಸಾಲಿಗ್ರಾಮ, ಧರ್ಮಸ್ಥಳ, ಮಡಾಮಕ್ಕಿ, ಹಿರಿಯಡ್ಕ, ಶ್ರೀ ಕ್ಷೇತ್ರ ಗೋಳಿಗರಡಿ, ಹನುಮಗಿರಿ, ಹಾಲಾಡಿ, ಮಾರಣಕಟ್ಟೆ, ಸುಂಕದಕಟ್ಟೆ, ಶನೀಶ್ವರ ಮೇಳ, ಮೇಗರವಳ್ಳಿ, ನೀಲಾವರ, ಮಂಗಳಾದೇವಿ, ಸಸಿಹಿತ್ಲು, ಬೆಂಕಿನಾಥೇಶ್ವರ, ಬಪ್ಪನಾಡು, ತಲಕಳ ಮೇಳ…. ಹೀಗೆ ಹತ್ತುಹಲವು ಯಕ್ಷಗಾನ ಕಲಾಮೇಳಗಳಿದ್ದು, ಸಾವಿರಾರು ಸಂಖ್ಯೆಯ ಕಲಾವಿದರು ಇದರಲ್ಲಿ ತಮ್ಮನ್ನು ತೊಡಗಿಸಿದ್ದಾರೆ. ಆದರೆ ಇವರೆಲ್ಲರೂ ಕೆಲಸವಿಲ್ಲದೆ ಮನೆಯಲ್ಲೇ ಕುಳಿತುಕೊಳ್ಳುವಂತಾಗಿದೆ.
ಇನ್ನೊಂದೆಡೆ ಅಷ್ಟೇ ಸಂಖ್ಯೆಯ ನಾಟಕ ತಂಡಗಳೂ ಇದ್ದು, ಜಾತ್ರೆ, ನೇಮ, ಕೋಲೋತ್ಸವಗಳು ರದ್ದುಗೊಂಡ ಕಾರಣ ಎಲ್ಲಾ ಉತ್ಸವಗಳಲ್ಲಿ ಪ್ರದರ್ಶನಗೊಳ್ಳಬೇಕಾಗಿದ್ದ ನಾಟಕಗಳೂ ರದ್ದುಗೊಂಡಿವೆ. ಹೀಗಾಗಿ ನಾಟಕ ಕಲಾವಿದರು ಕೂಡಾ ಕೆಲಸವಿಲ್ಲದೆ ಮನೆಯಲ್ಲೇ ಕೂರುವಂತಾಗಿದೆ. ಇದರ ಜೊತೆಗೆ ಯಕ್ಷಗಾನ ರಂಗದ ಹಿಮ್ಮೇಳ ಕಲಾವಿದರು, ನಾಟಕ ರಂಗದ ನೇಪಥ್ಯ ಕಲಾವಿದರೂ ಕೂಡಾ ಕೆಲಸವಿಲ್ಲದೇ ಆರ್ಥಿಕವಾಗಿ ಹೊಡೆತ ಅನುಭವಿಸುವಂತಾಗಿದೆ.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ೬ ಮೇಳಗಳು ರದ್ದುಗೊಂಡ ಕಾರಣ ಇದೀಗ ಕ್ಷೇತ್ರದ ವಠಾರದಲ್ಲಿಯೇ ಒಂದು ಗಂಟೆಗಳ ಕಾಲ ಮೇಳದ ಯಜಮಾನರು ಆಟವನ್ನು ಪ್ರದರ್ಶನ ಮಾಡುತ್ತಿದ್ದಾರೆ. ಒಮ್ಮೆ ಮೇಳಗಳು ಕ್ಷೇತ್ರದಲ್ಲಿ ಗೆಜ್ಜೆಕಟ್ಟಿ ಹೊರಟರೆಂದರೆ ಮತ್ತೆ ಯಾವುದೇ ಕಾರಣಕ್ಕೂ ಆಟ ನಿಲ್ಲಿಸುವಂತಿಲ್ಲ. ಹೀಗಾಗಿ ಕ್ಷೇತ್ರದ ಪರಿಸರದಲ್ಲೇ ರಾತ್ರಿ ೭ರಿಂದ ೮ ಗಂಟೆಯವರೆಗೆ ಪ್ರದರ್ಶನ ನಡೆಸುತ್ತಿದ್ದೇವೆ ಎಂದು ಕ್ಷೇತ್ರದ ಪ್ರಧಾನ ಅರ್ಚಕ ಹರಿನಾರಾಯಣ ಆಸ್ರಣ್ಣ ಹೇಳಿದ್ದಾರೆ.
ಇನ್ನೊಂದು ದುರ್ವಿಧಿ ಅಂದ್ರೆ ಇಲ್ಲಿ ಆಟ ಪ್ರದರ್ಶನವಾದರೂ ಪ್ರೇಕ್ಷಕರು ಬಂದು ಕುಳಿತು ಆಟ ವೀಕ್ಷಣೆ ಮಾಡುವಂತಿಲ್ಲ ಎನ್ನುವುದು…! ಒಟ್ಟಿನಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಕಲಾವಿದರ ಬದುಕನ್ನೂ ಹೈರಾಣಾಗಿಸಿಬಿಟ್ಟಿದೆ. ಬದುಕೂ ಅತಂತ್ರವಾಗುತ್ತಿದೆ.
DAKSHINA KANNADA
ದತ್ತಿ ಇಲಾಖೆ ದೇವಸ್ಥಾನದಲ್ಲಿ ನಂದಿನಿ ತುಪ್ಪ ಬಳಕೆಗೆ ಸೂಚನೆ..!
ಮಂಗಳೂರು : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕರ್ನಾಟಕದ ದತ್ತಿ ಇಲಾಖೆ ಫುಲ್ ಅರ್ಲರ್ಟ್ ಆಗಿದೆ. ಕರ್ನಾಟಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನೇ ಬಳಕೆ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ.
ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ಅವರು ಈ ಬಗ್ಗೆ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ಕುರಿತು ಸುತ್ತೋಲೆ ಹೊರಡಿಸಿರುವ ದತ್ತಿ ಇಲಾಖೆ ದೇವಸ್ಥಾನದ ಸೇವೆಗಳಿಗೆ , ದೀಪಗಳಿಗೆ, ಪ್ರಸಾದ ತಯಾರಿಗೆ ಮತ್ತು ಅನ್ನಛತ್ರದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪ ಬಳಸುವಂತೆ ಸೂಚಿಸಿದೆ.
ತಿರುಪತಿ ದೇವಾಲಯದ ಲಡ್ಡು ತಯಾರಿಗೆ ಕರ್ನಾಟಕದ ನಂದಿನಿ ತುಪ್ಪವೇ ರವಾನೆ ಆಗುತ್ತಿದೆ. ಆದ್ರೆ ಜಗನ್ ರೆಡ್ಡಿಯ ಸರ್ಕಾರದ ನಾಲ್ಕು ವರ್ಷ ನಂದಿನಿ ತುಪ್ಪ ತಿರುಪತಿಗೆ ಪೂರೈಕೆ ಮಾಡಿರಲಿಲ್ಲ. ಹೀಗಾಗಿ ತಿರುಪತಿ ಲಡ್ಡುವಿಗೆ ಬಳಕೆ ಮಾಡಿದ ತುಪ್ಪಕ್ಕೂ ನಂದಿನಿ ತುಪ್ಪಕ್ಕೂ ಯಾವುದೇ ಸಂಭಂಧ ಇಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.
LATEST NEWS
ನಾಲ್ಕನೇ ಮಗುವೂ ಹೆಣ್ಣಾಯಿತೆಂದು ಹಸುಗೂಸನ್ನು ನೆಲಕ್ಕೆ ಬಡಿದು ಕೊಂ*ದ ತಂದೆ
ಮಂಗಳೂರು/ ಇಟ್ವಾ: ಹೆಣ್ಣು ಮಕ್ಕಳು ಹುಟ್ಟಿದರೆ ಮನೆಗೆ ಲಕ್ಷ್ಮಿ ಬಂದಳು ಎಂಬ ಸಂಭ್ರಮ ಹೆಚ್ಚಿನ ಮನೆಗಳಲ್ಲಿ ಇರುತ್ತದೆ. ಭೇಟಿ ಬಚಾವೋ, ಭೇಟಿ ಪಡಾವೋ ಎಂಬುದಾಗಿ ಸರ್ಕಾರ ಹೆಣ್ಣು ಮಕ್ಕಳ ಬಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ, ಹೆಣ್ಣು ಮಕ್ಕಳ ಬಗೆಗಿನ ತಾತ್ಸಾರ ಕಡಿಮೆ ಆಗಿಲ್ಲ ಎಂಬುದಕ್ಕೆ ಉತ್ತರಪ್ರದೇಶದಲ್ಲಿ ನಡೆದ ಈ ಘಟನೆ ಸಾಕ್ಷಿ.
ನಾಲ್ಕನೇ ಮಗುವೂ ಹೆಣ್ಣಾಯಿತು ಎಂಬ ಕಾರಣಕ್ಕೆ ತಂದೆಯೇ ಹಸುಗೂಸನ್ನು ನೆಲಕ್ಕೆ ಬಡಿದು ಕೊಂ*ದಿರುವ ಕ್ರೂ*ರ ಘಟನೆ ನಡೆದಿದೆ. ಇಟ್ವಾ ಎಂಬಲ್ಲಿ ಈ ಕ್ರೌ*ರ್ಯ ನಡೆದಿದೆ.
ನೆಲಕ್ಕೆ ಬಡಿದು ಕೊಂದ ಪಾಪಿ!
30 ವರ್ಷದ ಬಬ್ಲು ದಿವಾಕರ್ ಈ ಕೃ*ತ್ಯ ಎಸಗಿದ ತಂದೆ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮೂರು ಹೆಣ್ಣು ಮಕ್ಕಳ ಬಳಿಕ ದಿವಾಕರ್ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ. ಆದರೆ, ನಾಲ್ಕನೇ ಮಗುವೂ ಹೆಣ್ಣಾಯಿತು. ಇದರಿಂದ ಕೋಪಗೊಂಡ ಆತ ಭಾನುವಾರ(ಸೆ.15) ತಿಂಗಳ ಶಿಶುವನ್ನು ನೆಲಕ್ಕೆ ಎಸೆದಿದ್ದಾನೆ.
ಮೊದಲ ಹೆಂಡತಿಯಿಂದ ಈಗಾಗಲೇ ಎರಡು ಹೆಣ್ಣು ಮಕ್ಕಳ ತಂದೆಯಾಗಿರುವ ದಿವಾಕರ್ ಇದೇ ಕಾರಣದಿಂದ ಎರಡನೇ ಮದುವೆಯಾಗಿದ್ದ. ಎರಡನೇ ಹೆಂಡತಿಗೂ ಮೊದಲ ಮಗು ಹೆಣ್ಣಾಗಿತ್ತು. ಇದೀಗ ಎರಡನೇ ಮಗುವೂ ಹೆಣ್ಣಾಗಿದೆ. ಒಂದು ತಿಂಗಳ ಹಿಂದೆ ಮಗು ಜನಿಸಿದ್ದು, ಭಾನುವಾರ ಮಗು ತಾಯಿಯ ಮಡಿಲಲ್ಲಿ ಮಲಗಿತ್ತು. ಈ ವೇಳೆ ಡ ದಿವಾಕರ್ ತಾಯಿಯಿಂದ ಮಗುವನ್ನು ಕಸಿದು, ನೆಲಕ್ಕೆ ಬಡಿದಿದ್ದಾನೆ. ತಕ್ಷಣಕ್ಕೆ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮಗು ಅದಾಗಲೇ ಗಂಭೀ*ರ ಗಾ*ಯದಿಂದ ಮೃ*ತಪಟ್ಟಿತ್ತು.
ಇದನ್ನೂ ಓದಿ : ಹನಿಟ್ರ್ಯಾಪ್ : ಸುಂದರಿ ಮನೆಗೆ ಕರೆದಳೆಂದು ಹೋಗಿ 40 ಲಕ್ಷ ಕಳೆದುಕೊಂಡ ಉದ್ಯಮಿ
ಇದೀಗ ಹೆಂಡತಿ ನೀಡಿರುವ ದೂರಿನ ಆಧಾರದ ಮೇಲೆ. ಬಿಎನ್ಎಸ್ ಸೆಕ್ಷನ್ 105ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
LATEST NEWS
ಮಂಗಳೂರು: ಮೂರು ದಿನದ ಬಿಎನ್ಐ ಬಿಗ್ ಬ್ರ್ಯಾಂಡ್ ಎಕ್ಸ್ಪೋ-2024ಗೆ ಚಾಲನೆ
ಮಂಗಳೂರು: ಉದ್ಯಮಿಗಳ ಮತ್ತು ವೃತ್ತಿಪರರ ಸಂಘಟನೆ ಬಿಸ್ನೆಸ್ ನೆಟ್ವರ್ಕ್ ಇಂಟರ್ ನ್ಯಾಶನಲ್ – ಬಿಎನ್ಐ ಮಂಗಳೂರು ಮತ್ತು ಉಡುಪಿ ವತಿಯಿಂದ ಬಿಗ್ ಬ್ರಾಂಡ್ಸ್ ಎಕ್ಸ್ಪೊ – 2024 ಪ್ರದರ್ಶನ ಇಂದು ಮಂಗಳೂರಿನ ಡಾ. ಟಿ.ಎಂ.ಎ. ಪೈ ಇಂಟರ್ ನ್ಯಾಶನಲ್ ಕನ್ವೆನ್ಶನ್ ಸೆಂಟರ್ ನಲ್ಲಿ ಆರಂಭಗೊಂಡಿತು. ಮೂರು ದಿನಗಳ ಕಾಲ ನಡೆಯುವ ಎಕ್ಸ್ಪೋವನ್ನು ರಿಬ್ಬನ್ ಕತ್ತರಿಸುವ ಮೂಲಕ ಸ್ಪೀಕರ್ ಯು ಟಿ ಖಾದರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಖಾದರ್, ಇಂತಹ ಎಕ್ಸ್ಪೋಗಳು ನಮ್ಮ ರಾಜ್ಯ, ದೇಶಕ್ಕೆ ದೊಡ್ಡ ಮಟ್ಟದ ಕೊಡುಗೆಯನ್ನು ನೀಡಲು ಸಾಧ್ಯವಾಗುತ್ತದೆ. ಆರ್ಥಿಕವಾದ ಚಲನವಲನಗಳು ಎಲ್ಲಿ ಹೆಚ್ಚಾಗಿ ಆಗುತ್ತದೆಯೋ ಅಲ್ಲಿ ಉದ್ಯೋಗಾವಕಾಶ, ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಎಕ್ಸ್ಪೋ ಅತ್ಯಂತ ಯಶಸ್ವಿಯಾಗಲಿ ಎಂದು ಶುಭ ನುಡಿದರು.
ಬಿಎನ್ಐ ಎಕ್ಸ್ಪೋದಲ್ಲಿ ವಿಶೇಷ ಪುರವಣಿಯನ್ನು ಕೂಡಾ ಬಿಡುಗಡೆಗೊಳಿಸಲಾಯಿತು. ಶಾಸಕ ವೇದವ್ಯಾಸ ಕಾಮತ್ ಇದನ್ನು ಬಿಡುಗಡೆಗೊಳಿಸಿದರು. ಈ ಬಗ್ಗೆ ಮಾತನಾಡಿದ ಅವರು, 125ಕ್ಕೂ ಹೆಚ್ಚಿನ ಮಳಿಗೆಗಳು ಈ ಎಕ್ಸ್ಪೋ ಯಶಸ್ವಿಯಾಲೆಂದು ಹಾರೈಸಿದರು. ಇಂತಹ ಎಕ್ಸ್ಪೋಗಳ ಪ್ರದರ್ಶನಗಳಿಗೆ ಸರಕಾರ ಪ್ರೋತ್ಸಾಹ ನೀಡಬೇಕು. ಆರ್ಥಿಕತೆಯ ವಿಚಾರದಲ್ಲಿ ಮುಂಚೂಣಿ ನಗರವಾಗಿರುವ ಮಂಗಳೂರಿನಲ್ಲಿ ಇಂತಹ ಎಕ್ಸ್ಪೋ ಮಾಡಲು ಪ್ರತ್ಯೇಕ ವ್ಯವಸ್ಥೆ ಆಗಬೇಕು ಎಂದರು.
ಬಿಎನ್ಐ ಕಾರ್ಯ ನಿರ್ವಾಹಕ ನಿರ್ದೇಶಕ ಗಣೇಶ್ ಶರ್ಮಾ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಆಟೋಮೊಬೈಲ್. ಆಭರಣಗಳು, ವಿಮೆ, ಗಾರ್ಮೆಂಟ್ಸ್, ಐಟಿ ಉತ್ಪನ್ನಗಳು, ಸಾಫ್ಟ್ವೇರ್, ಕಚೇರಿ ಮತ್ತು ಗೃಹ ಪೀಠೋಪಕರಣಗಳು, ಆಹಾರ ಉತ್ಪನ್ನಗಳು ಸೇರಿದಂತೆ 120 ಕ್ಕೂ ಆಧಿಕ ಉದ್ಯಮಗಳ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಪ್ರದರ್ಶನ ಇರುತ್ತದೆ ಎಂದರು.
ಬಿಎನ್ಐ ಸದಸ್ಯರಾಗಿರುವ ಹಾಗೂ ಎಕ್ಸ್ಪೋದಲ್ಲಿ ಪಾಲ್ಗೊಂಡ ಉದ್ಯಮಿಗಳನ್ನು ಇದೇ ವೇಳೆ ಗೌರವಿಸಲಾಯಿತು. ವಿವಿಧ ಕಂಪೆನಿಗಳಿಂದ ನೀಡಲಾಗುತ್ತಿರುವ ಆಫರ್ಗಳನ್ನು ಪ್ರಕಟಿಸಲಾಯಿತು. ಮಂಗಳೂರು- ಉಡುಪಿ ಜಗತ್ತಿನ ಉದ್ಯಮಿಗಳ ಸಂಘಟನೆ ಬಿಸ್ನೆಸ್ ನೆಟ್ವರ್ಕ್ ಇಂಟರ್ ನ್ಯಾಶನಲ್ ನ ಭಾಗವಾಗಿದ್ದು, ನೂರಕ್ಕೂ ಅಧಿಕ ವಿವಿಧ ವ್ಯಾಪಾರ- ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 310 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಈ ವರ್ಷದ ಎಕ್ಸ್ಪೊ ಈ ಸರಣಿಯ 3 ನೇ ಆವೃತ್ತಿಯಾಗಿದೆ. ಕಾರ್ಯಕ್ರಮದಲ್ಲಿ ಎಕ್ಸ್ಪೋ ಅಧ್ಯಕ್ಷ ಮೋಹನ್ ರಾಜ್, ಬಿಎನ್ ಐ ಸದಸ್ಯ ಮಹೇಶ್ ಶೆಟ್ಟಿ, ನಿರ್ದೇಶಕ ಸುನಿಲ್ ದತ್ ಪೈ, ಪ್ರಜ್ವಲ್ ಶೆಟ್ಟಿ, ಡಾ. ಸಚಿನ್ ನಡ್ಕ , ಪ್ರೀತಿ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು. ಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು, ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆ ತನಕ ತೆರೆದಿರುತ್ತದೆ.