LATEST NEWS
WATCH VIDEO : ಶಾಲೆಗೆ ನುಗ್ಗಿದ ‘ಚಡ್ಡಿ ಗ್ಯಾಂಗ್’; 7.85 ಲಕ್ಷ ಲೂಟಿ
ಹೈದರಾಬಾದ್ : ಇಲ್ಲಿನ ಶಾಲೆಯೊಂದರ ಮೇಲೆ ಬಿಗಿಯುಡುಪು ಧರಿಸಿ ಇಬ್ಬರು ಕಳ್ಳರು ದಾಳಿ ನಡೆಸಿದ್ದಾರೆ. ಮಧ್ಯರಾತ್ರಿ ಶಾಲೆಗೆ ನುಗ್ಗಿದ ಕಳ್ಳರು 7.85 ಲಕ್ಷ ರೂ ನಗದು ದೋಚಿ ಪರಾರಿಯಾಗಿದ್ದಾರೆ. ಘಟನೆಯ ನಂತರ, ಸಿಸಿಟಿವಿ ದೃಶ್ಯಾವಳಿ ಕೂಡ ಹೊರಬಿದ್ದಿದ್ದು, ಕಳ್ಳರು ಶಾಲೆಯ ಆವರಣಕ್ಕೆ ನುಗ್ಗಿ ಕಳ್ಳತನ ಮಾಡುತ್ತಿರುವುದನ್ನು ಕಾಣಬಹುದು. ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ಚಡ್ಡಿ ಗ್ಯಾಂಗ್ ಕೃತ್ಯ ಬೆಳಕಿಗೆ ಬಂದಿದೆ. ಇಲ್ಲಿ ಒಳ ಉಡುಪು ಧರಿಸಿದ್ದ ಇಬ್ಬರು ಕಳ್ಳರು ಶಾಲೆಗೆ ನುಗ್ಗಿರುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿವೆ.
ಶನಿವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ್ ನ ಮಿಯಾಪುರದಲ್ಲಿರುವ ವರ್ಲ್ಡ್ ಒನ್ ಶಾಲೆಯನ್ನು ಕಳ್ಳರು ಗುರಿಯಾಗಿಸಿಕೊಂಡಿದ್ದಾರೆ. ರಾತ್ರಿ ವೇಳೆ ಒಳ ಉಡುಪನ್ನು ಹಾಕಿಕೊಂಡು ಶಾಲಾ ಆವರಣಕ್ಕೆ ನುಗ್ಗಿದ ಇಬ್ಬರು ಕಳ್ಳರು ಲಕ್ಷಾಂತರ ಮೌಲ್ಯದ ನಗದು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಗುರುತು ಮರೆಮಾಚಲು ಮಾಸ್ಕ್ ಧರಿಸಿದ್ದ ಖದೀಮರು !
ಘಟನೆಯ ಸಿಸಿಟಿವಿ ದೃಶ್ಯಾವಳಿ ಕೂಡ ಹೊರಬಿದ್ದಿದ್ದು, ಇಬ್ಬರು ಕಳ್ಳರು ಶಾಲಾ ಆವರಣದೊಳಗೆ ತಿರುಗಾಡಿಕೊಂಡು ಕಳ್ಳತನ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಕಳ್ಳರು ಒಳ ಉಡುಪನ್ನು ಮಾತ್ರ ಧರಿಸಿದ್ದರು. ತಮ್ಮ ಗುರುತು ಮರೆಮಾಚಲು ಇಬ್ಬರು ಕಳ್ಳರು ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು. ಕಳ್ಳನೊಬ್ಬ ತಲೆಮರೆಸಿಕೊಂಡೇ ಮೆಟ್ಟಿಲು ಹತ್ತುತ್ತಿರುವ ದೃಶ್ಯವೂ ಸಿಸಿಟಿವಿಯಲ್ಲಿ ದಾಖಲಾಗಿದೆ.
ಮದುವೆಗೆ ಒಂದು ತಿಂಗಳಿರುವಾಗಲೇ ತನ್ನ ತಂದೆಯ ತಂಗಿಯೊಂದಿಗೆ ಪರಾರಿಯಾದ ಯುವಕ!
ಪಾಟ್ನಾದಲ್ಲೂ ನಡೆದಿತ್ತು ಘಟನೆ:
ಇಂತಹ ಕಳ್ಳತನದ ಘಟನೆಗಳು ದೇಶದ ವಿವಿಧ ಪ್ರದೇಶಗಳಲ್ಲಿ ಈ ಹಿಂದೆಯೂ ನಡೆದಿವೆ. ಸುಮಾರು ಒಂದು ವರ್ಷದ ಹಿಂದೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ‘ಚಡ್ಡಿ-ವೆಸ್ಟ್’ ಗ್ಯಾಂಗ್ ಎಲೆಕ್ಟ್ರಾನಿಕ್ ಅಂಗಡಿಯನ್ನು ಗುರಿಯಾಗಿಸಿಕೊಂಡಿತ್ತು. ಅಂಗಡಿಗೆ ನುಗ್ಗಿದ ಕಳ್ಳರು ಕೌಂಟರ್ ನಲ್ಲಿದ್ದ 2 ಲಕ್ಷ ರೂ. ದೋಚಿದ್ಇದರು. ಇಡೀ ಘಟನೆ ಅಂಗಡಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಇದಕ್ಕೂ ಮೊದಲು ಮುಂಬೈ ಮತ್ತು ಭೋಪಾಲ್ ನಲ್ಲಿ ಪ್ಯಾಂಟಿ ವೆಸ್ಟ್ ಗ್ಯಾಂಗ್ ನಿಂದ ಇಂತಹ ಕೃತ್ಯ ನಡೆದಿತ್ತು. ಮುಚ್ಚಿದ ಮನೆಗಳಲ್ಲಿ ಬಿಗಿಯುಡುಪು ಧರಿಸಿ ಕಳ್ಳತನ ಮಾಡುತ್ತಿದ್ದ ಇಂತಹ ಮೂವರು ಕಳ್ಳರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
FILM
ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣ; ಯಾವ ಸಿನಿಮಾ? ಇಲ್ಲಿದೆ ಡಿಟೇಲ್ಸ್
ಮಂಗಳೂರು / ಮುಂಬೈ : ರಶ್ಮಿಕಾ ಮಂದಣ್ಣ ಯಾರಿಗೆ ತಾನೇ ಗೊತ್ತಿಲ್ಲ. ಸ್ಯಾಂಡಲ್ ವುಡ್ ನ ‘ಕಿರಿಕ್ ಪಾರ್ಟಿ’ ಮೂಲಕ ಜನಮನ ಗೆದ್ದು, ಸದ್ಯ ಪರಭಾಷೆ ಅಂಗಳಲ್ಲಿ ಮಿಂಚುತ್ತಿರುವ ನಟಿ. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಬಾಲಿವುಡ್ ಸಿನಿಮಾ ‘ಅನಿಮಲ್’ ಇತ್ತೀಚೆಗೆ ತೆರೆಕಂಡು ಭಾರೀ ಯಶಸ್ಸನ್ನು ಬಾಚಿಕೊಂಡಿತ್ತು. ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಜೊತೆ ಅವರು ನಟಿಸಿದ್ದರು. ಇನ್ನು ರಶ್ಮಿಕಾ ಮಂದಣ್ಣ ಬಾಲಿವುಡ್ ಅಂಗಳದಲ್ಲಿ ಭದ್ರವಾಗಿ ನೆಲೆಯೂರಲಿದ್ದಾರೆ ಎಂದೇ ಭಾಸವಾಗಿತ್ತು. ಇದೀಗ ಮತ್ತೊಂದು ಸಿನಿಮಾದಲ್ಲಿ ಅವರು ನಟಿಸುತ್ತಿದ್ದಾರೆ.
ಭಾಯ್ ಜಾನ್ ಜೊತೆ ರಶ್ಮಿಕಾ :
‘ಅನಿಮಲ್’ ಸಿನಿಮಾ ಭಾರೀ ಯಶಸ್ಸನ್ನು ಬಾಚಿಕೊಂಡಿತ್ತು. ಇದೀಗ ರಶ್ಮಿಕಾ ಮಂದಣ್ಣ ನಟ ಸಲ್ಮಾನ್ ಖಾನ್ ಜೊತೆ ನಟಿಸಲಿದ್ದಾರೆ. ಎ.ಆರ್. ಮುರುಗದಾಸ್ ನಿರ್ದೇಶನದ ಮುಂದಿನ ಬಹುನಿರೀಕ್ಷಿತ ‘ಸಿಕಂದರ್’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಈ ಚಿತ್ರ ಮುಂದಿನ ಈದ್ ಹಬ್ಬಕ್ಕೆ ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ.
2022 ರಲ್ಲಿ ಅಮಿತಾಬ್ ಬಚ್ಚನ್ ನಟನೆಯ ‘ಗುಡ್ ಬೈ’ ಸಿನಿಮಾ ಮೂಲಕ ರಶ್ಮಿಕಾ ಬಾಲಿವುಡ್ ಅಂಗಳಕ್ಕೆ ಲಗ್ಗೆ ಇಟ್ಟಿದ್ದರು. ಬಳಿಕ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸಿದ್ದರು. ಆದಾದ ಬಳಿಕ ಅನಿಮಲ್ ಸಿನಿಮಾ ಭಾರೀ ಯಶಸ್ಸು ತಂದು ಕೊಟ್ಟಿತ್ತು. ಸದ್ಯ ಅವರು ಅಲ್ಲು ಅರ್ಜುನ್ ಜೊತೆ ನಟಿಸಿದ ‘ಪುಷ್ಪ : ದಿ ರೂಲ್’ ಸಿನಿಮಾದಲ್ಲಿ ಬಿಝಿಯಾಗಿದ್ದಾರೆ. ಅಲ್ಲದೇ ತಮಿಳೀನಲ್ಲಿ ಧನುಷ್ ಜೊತೆಗೆ ಕುಬೇರ ಸಿನಿಮಾ ದಲ್ಲಿ ನಟಿಸುತ್ತಿದ್ದಾರೆ. ವಿಕ್ಕಿ ಕೌಶಲ್ ಜೊತೆ ‘ಚಾವ’ ಸಿನಿಮಾದಲ್ಲಿ ಅವರು ಬಿಝಿಯಾಗಿದ್ದಾರೆ.
ರಶ್ಮಿಕಾ ಟ್ವೀಟ್ :
ಸಲ್ಮಾನ್ ಖಾನ್ ಜೊತೆಗೆ ಇದೇ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಎ.ಆರ್.ಮುರುಗದಾಸ್ ನಿರ್ದೇಶನದ ‘ಸಿಕಂದರ್’ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಪಾತ್ರವಾಗುತ್ತಿರುವ ಬಗ್ಗೆ ನಡಿಯಾಲ್ವಾಲ ಗ್ರಾಂಡ್ ಸನ್ ಖಾತೆಯ ಮೂಲಕ ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ : ಪ್ರಜ್ವಲ್ ಪ್ರಕರಣದ ನಡುವೆ ಖಾಸಗಿ ವೀಡಿಯೋ ವೈರಲ್; ಜ್ಯೋತಿ ರೈ ಹೇಳಿದ್ದೇನು?
ರಶ್ಮಿಕಾ ಮಂದಣ್ಣ ಕೂಡ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಮುಂದಿನ ಸಿನಿಮಾದ ಬಗ್ಗೆ ಕೇಳುತ್ತಿದ್ದವರಿಗೆ ಇಲ್ಲಿದೆ ಮಾಹಿತಿ. ಸರ್ಪ್ರೈಸ್…ಸಿಕಂದರ್ ಸಿನಿಮಾದ ಭಾಗವಾಗಿರುವುದು ನನಗೆ ಹೆಮ್ಮೆಯ ವಿಚಾರ ಎಂದು ಬರೆದುಕೊಂಡಿದ್ದಾರೆ.
LATEST NEWS
ಬಸ್ ಆಯ್ತು..ಟ್ರೈನ್ ಆಯ್ತು.! ವಿಮಾನದಲ್ಲೂ ಸೀಟ್ಗಾಗಿ ಪ್ರಯಾಣಿಕರ ಕಚ್ಚಾಟ.!! ಆಗಿದ್ದೇನು?
ಕ್ಯಾಲಿಫೋರ್ನಿಯ: ನಾವು ಬಸ್ ಟ್ರೈನ್ಗಳಲ್ಲಿ ಸೀಟ್ಗಾಗಿ ಪ್ರಯಾಣಿಕರು ಹೊಡೆದಾಡುವ ದೃಶ್ಯ ನೋಡಿದ್ದೇವೆ. ಆದರೆ ಇಲ್ಲೊಂದು ಆಕಾಶದಲ್ಲಿ ಹಾರುವ ವಿಮಾನದಲ್ಲಿಯೂ ಕೂಡಾ ಇದೇ ರೀತಿ ಸೀಟ್ಗಾಗಿ ಹೊಡೆದಾಡಿಕೊಂಡ ಘಟನೆ ನಡೆದಿದೆ. ತೈವಾನ್ನಿಂದ ಕ್ಯಾಲಿಫೋರ್ನಿಯಾ ಹೋಗುತ್ತಿದ್ದ ಇವಿಎ ವಿಮಾನದಲ್ಲಿ ಪ್ರಯಾಣಿಕರಿಬ್ಬರು ಸೀಟ್ಗಾಗಿ ಮಾರಮಾರಿ ಹೊಡೆದಾಟ ನಡೆಸಿದ್ದಾರೆ. ಈ ದೃಶ್ಯವನ್ನು ಪ್ರಯಾಣಿಕರೊಬ್ಬರು ವೀಡಿಯೋ ಮಾಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ತೈವಾನ್ನಿಂದ ಕ್ಯಾಲಿಫೋರ್ನಿಯಾಗೆ ಸುದೀರ್ಘ11.5ಗಂಟೆಗಳ ಇವಿಎ ವಿಮಾನ ಪ್ರಯಾಣ ನಡೆಸುತ್ತಿತ್ತು. ಇನ್ನು ವಿಮಾನದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ತನ್ನ ಪಕ್ಕದ ಸೀಟ್ನಲ್ಲಿ ಕೂತವರು ನಿರಂತರವಾಗಿ ಕೆಮ್ಮುತ್ತಿದ್ದರು. ಹೀಗಾಗಿ ಈತ ಸೀಟ್ ಚೇಂಜ್ ಮಾಡಲು ಮುಂದಾಗಿದ್ದು, ಖಾಲಿ ಇದ್ದ ಸೀಟ್ನಲ್ಲಿ ಕುಳಿತುಕೊಳ್ಳುತ್ತಾನೆ. ಅಷ್ಟರಲ್ಲಾಗಲೇ ಮೊದಲೇ ಆ ಸೀಟ್ನಲ್ಲಿ ಕುಳಿತಿದ್ದ ವ್ಯಕ್ತಿ ಬಂದು ಸೀಟ್ ಬಿಟ್ಟುಕೊಡುವಂತೆ ಕೇಳುತ್ತಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಜಗಳ ಹೊಡೆದಾಟಕ್ಕೆ ತಿರುಗುತ್ತದೆ.
WATCH VIDEO : ಮರಗಳನ್ನು ತಬ್ಬಿಕೊಂಡು ಗಿನ್ನೆಸ್ ರೆಕಾರ್ಡ್ ಮಾಡಿದ ಯುವಕ; ಈತ ತಬ್ಬಿಕೊಂಡ ಮರಗಳೆಷ್ಟು?
ಇನ್ನು ಇವರಿಬ್ಬರ ಜಗಳವನ್ನು ಬಿಡಿಸಲು ವಿಮಾನ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ. ಸಹ ಪ್ರಯಾಣಿಕರೂ ಕೂಡಾ ಜಗಳ ಬಿಡಿಸುವಲ್ಲಿ ಮುಂದಾಗಿದ್ದಾರೆ. ಇನ್ನೂ ಇವರಿಬ್ಬರ ಹೊಡೆದಾಟಕ್ಕೆ ಭಯಭೀತರಾದ ಪ್ರಯಾಣಿಕರು ಕಿರುಚಾಡುವುದನ್ನು ವೀಡಿಯೋದಲ್ಲಿ ಕೇಳಬಹುದು. ಇನ್ನು ಫ್ರಾನ್ಸಿಸ್ಕೊಗೆ ತಲುಪಿದ ಬಳಿಕ ಇವರಿಬ್ಬರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಇನ್ನು ಈ ಸಂದರ್ಭದಲ್ಲಿ ವಿಮಾನ ಸಿಬಂದಿಗಳ ತಾಳ್ಮೆ ಹಾಗೂ ಕಾರ್ಯ ವೈಖರಿಯ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಡೆದಾಟದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಅತೀ ಹೆಚ್ಚು ವ್ಯೂವ್ಸ್ಗಳನ್ನು ಪಡೆದಿದೆ. ಇನ್ನು ಈ ವಿಡಿಯೋಗೆ ಜನರು ಕಮೆಂಟ್ಗಳನ್ನು ಹಾಕುತ್ತಿದ್ದು ಪ್ರಶ್ನೆಗಳ ಸುರಿಮಳೆ ಹರಿಸುತ್ತಿದ್ದಾರೆ.
LATEST NEWS
WATCH VIDEO : ಮರಗಳನ್ನು ತಬ್ಬಿಕೊಂಡು ಗಿನ್ನೆಸ್ ರೆಕಾರ್ಡ್ ಮಾಡಿದ ಯುವಕ; ಈತ ತಬ್ಬಿಕೊಂಡ ಮರಗಳೆಷ್ಟು?
ಮಂಗಳೂರು : ಗಿನ್ನೆಸ್ ದಾಖಲೆ ಮಾಡುವುದು ಹಲವು ಮಂದಿಯ ಕನಸಾಗಿರುತ್ತದೆ. ಒಬ್ಬೊಬ್ಬರು ಒಂದೊಂದು ರೀತಿಯ ಗಿನ್ನೆಸ್ ದಾಖಲೆ ಮಾಡುವ ಕಾರ್ಯ ಮಾಡುತ್ತಾರೆ. ಇಲ್ಲೊಬ್ಬ ಮರಗಳನ್ನು ತಬ್ಬಿಕೊಂಡು ಗಿನ್ನೆಸ್ ರೆಕಾರ್ಡ್ ಮಾಡಿದ್ದಾನೆ. ಘಾನಾದ ವಿದ್ಯಾರ್ಥಿ 29 ವರ್ಷದ ಅಬುಬಕರ್ ತಾಹಿರು ಮರಗಳನ್ನು ತಬ್ಬಿ ಗಿನ್ನೆಸ್ ದಾಖಲೆ ಬರೆದಾತ.
ಎಷ್ಟು ಮರಗಳನ್ನು ತಬ್ಬಿಕೊಂಡ ಗೊತ್ತಾ!?
ಮರಗಳನ್ನು ತಬ್ಬಿಕೊಳ್ಳುವ ಮೂಲಕ ವಿಶಿಷ್ಟ ರೀತಿಯಲ್ಲಿ ರೆಕಾರ್ಡ್ ಮಾಡಿದ್ದಾನೆ. ಈತ 1 ಗಂಟೆಯಲ್ಲಿ 1,123 ಮರಗಳನ್ನು ತಬ್ಬಿಕೊಳ್ಳುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ. ಅಮೆರಿಕಾದ ಅಲಬಾಮಾದಲ್ಲಿರುವ ಟುಸ್ಕೆಗೀ ರಾಷ್ಟ್ರೀಯ ಅರಣ್ಯದಲ್ಲಿ ಒಂದು ಗಂಟೆಯಲ್ಲಿ 1,123 ಮರಗಳನ್ನು ಅಪ್ಪಿಕೊಂಡಿದ್ದಾನೆ.
ಕೃಷಿ ಸಮುದಾಯದಿಂದ ಬಂದಿರುವ ಅಬುಬಕರ್ ತಾಹಿರು ಪ್ರಕೃತಿ ಮತ್ತು ಸಂರಕ್ಷಣೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಯುವಕ. ಅರಣ್ಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. 2023 ರಲ್ಲಿ ಉಎಸ್ಎಯ ಅಲಬಾಮಾದ ಆಬರ್ನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುವ ಮೂಲಕ ತಮ್ಮ ಅಧ್ಯಯನವನ್ನು ಮುಂದುವರೆಸಿದ್ದಾರೆ. ಅಬುಬಕರ್ ತಾಹಿರಿಗೆ ಪ್ರಕೃತಿ ಮೇಲಿನ ಆಸಕ್ತಿಯಿಂದಾಗಿಯೇ ಗಿನ್ನೆಸ್ ವಿಶ್ವ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ : ಶವರ್ಮಾ ತಿಂದು ಪ್ರಾಣಬಿಟ್ಟ 19 ವರ್ಷದ ಯುವಕ
ವೀಡಿಯೋ ವೈರಲ್ :
ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಬುಬಕರ್ ತಾಹಿರು ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋಗೆ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಮೂರು ದಿನಗಳಲ್ಲಿ 9 ಲಕ್ಷದ 98 ಸಾವಿರ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ವೀಡಿಯೋ ಭಾರೀ ವೈರಲ್ ಆಗುತ್ತಿದೆ.
- DAKSHINA KANNADA6 days ago
ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್ಗಳ ಹಗಲು ದರೋಡೆ..! ಏನಿದು ಘಟನೆ?
- LATEST NEWS6 days ago
ಎರಡು ಬಾರಿ ಅಕ್ರಮವಾಗಿ ಗರ್ಭಿಣಿಯಾದ ಅಪ್ರಾಪ್ತೆ..! ಪೋಷಕರ ವಿರುದ್ಧ ದೂರು.!!ಮುಂದೇನಾಯ್ತು?
- LATEST NEWS6 days ago
ಅಜೆಕಾರು : ಮನೆ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾ*ವು
- DAKSHINA KANNADA5 days ago
ಮನೆಯಲ್ಲಿ ಒಂದಕ್ಕಿಂತ ಹೆಚ್ಚು ತುಳಸಿ ಗಿಡ ನೆಟ್ಟರೆ ಏನಾಗುತ್ತದೆ ನೋಡಿ..!