Connect with us

    health

    ಬಾಯ್ಸ್.. ನಿಮಗೆ ಈ ಅಭ್ಯಾಸ ಇದೆಯಾ ?? ಹಾಗಾದ್ರೆ ಮಕ್ಕಳಾಗೋದು ಡೌಟ್ !!!

    Published

    on

    ಮಂಗಳೂರು: ಪುರುಷರ ಫಲವತ್ತತೆಯು ಪ್ರಸ್ತುತ ದಿನಗಳಲ್ಲಿ ಗಂಭೀರ ವಿಷಯವಾಗಿದ್ದು ನಿರ್ಲಕ್ಷ ಮಾಡದೆಯೇ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿದೆ. ಹೆಣ್ಣಿಗೆ ಗರ್ಭ ಧರಿಸುವುದಕ್ಕೆ ವೀರ್ಯದ ಸಂಖ್ಯೆ ಪ್ರತಿ ಮಿಲಿಲೀಟರ್ ನಲ್ಲಿ 15 ಮಿಲಿಯನ್ ಗಿಂತ ಹೆಚ್ಚಿರಬೇಕು. ಇದು ಇದಕ್ಕಿಂತ ಕಡಿಮೆಯಿದ್ದರೆ, ಅದನ್ನು ಕಡಿಮೆ ವೀರ್ಯಾಣುಗಳ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ.

    ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಬಂಜೆತನದ ಸಮಸ್ಯೆಯನ್ನು ಹೆಚ್ಚಾಗಿ ಎದುರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಈ ವೀರ್ಯಾಣುಗಳ ಸಂಖ್ಯೆಯಲ್ಲಿನ ಇಳಿಕೆ. ಜೊತೆಗೆ ಇತರ ಆರೋಗ್ಯ ಸಮಸ್ಯೆಗಳು. ಸಾಮಾನ್ಯವಾಗಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಲು ಹಲವು ಕಾರಣಗಳಿವೆ. ತಡವಾಗಿ ಮದುವೆಯಾಗುವುದು, ಒತ್ತಡ, ಅನಾರೋಗ್ಯಕರ ಜೀವನಶೈಲಿಯು ವೀರ್ಯಾಣುಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ.

    ಇಂತಹ ಸಮಯದಲ್ಲಿ ಲೈಂಗಿಕ ಸಮಸ್ಯೆಗಳು, ಕಡಿಮೆ ಶಕ್ತಿ, ವೃಷಣ ಸಮಸ್ಯೆಗಳು, ದೇಹ – ಮುಖ – ಕೂದಲಿನ ಬೆಳವಣಿಗೆಯಲ್ಲಿ ಬದಲಾವಣೆಗಳನ್ನು ಅನುಭವಿಸುತ್ತಿದ್ದರೆ, ಅದು ಕಡಿಮೆ ವೀರ್ಯಾಣುಗಳ ಸಂಖ್ಯೆಯ ಸಂಕೇತವಾಗಿರಬಹುದು. ಈ ಕಾರಣಗಳಿಂದ ಬಂಜೆತನದ ಸಮಸ್ಯೆಯ ಜೊತೆಗೆ ಇತರ ಸಮಸ್ಯೆಗಳು ಕೂಡ ಸಾಮಾನ್ಯವಾಗಿ ಸಂಭವಿಸುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದರಲ್ಲಿಯೂ ಪುರುಷರು ಪ್ರತಿದಿನ ಒಂದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಬಹಳ ಜಾಗರೂಕರಾಗಿರುವುದು ಒಳ್ಳೆಯದು.

    ನಿರ್ದಿಷ್ಟವಾಗಿ ಕೆಲವು ರೀತಿಯ ಅಭ್ಯಾಸಗಳು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕಾರಣವಾಗಬಹುದು. ಇದಲ್ಲದೆ, ಬಂಜೆತನದ ಸಮಸ್ಯೆಗೂ ಕಾರಣವಾಗಬಹುದು. ಅದರಲ್ಲಿಯೂ ಕಡಿಮೆ ವೀರ್ಯಾಣುಗಳ ಸಂಖ್ಯೆಯು ಹೆಣ್ಣಿಗೆ ಗರ್ಭಿಣಿಯಾಗಲು ತುಂಬಾ ಕಷ್ಟಕರವಾಗಿಸುತ್ತದೆ. ಹಾಗಾಗಿ ತಂದೆಯಾಗಲು ಬಯಸುವ ಮೊದಲು ಈ 5 ಅಭ್ಯಾಸಗಳಿಂದ ದೂರವಿರಬೇಕಾಗುತ್ತದೆ. ಹಾಗಾದರೆ ಅವು ಯಾವುವು? ಯಾಕಾಗಿ ಅವುಗಳಿಂದ ದೂರವಿರಬೇಕು? ಎಂಬೆಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ.

     

    ಮುಖ್ಯವಾಗಿ ದೂರವಿಡಬೇಕಾದ 5 ಅಭ್ಯಾಸಗಳು :

    ಧೂಮಪಾನ: ಸಿಗರೇಟು ಸೇದುವುದು ಕೆಲವು ಪುರುಷರಲ್ಲಿ ಸಾಮಾನ್ಯವಾಗಿದೆ. ಆದರೆ, ಧೂಮಪಾನವು ಕೇವಲ ಶ್ವಾಸಕೋಶಕ್ಕೆ ಸಂಬಂಧಿಸಿದ್ದಲ್ಲ. ಇದು ಲೈಂಗಿಕ ಆರೋಗ್ಯಕ್ಕೂ ಹಾನಿಕಾರಕ. ಧೂಮಪಾನ ಮಾಡುವ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆ ಇರುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ.

    ಮದ್ಯಪಾನ: ಕೆಲವು ಹುಡುಗರು ಚಿಕ್ಕ ವಯಸ್ಸಿನಿಂದಲೇ ಮದ್ಯಪಾನ ಮಾಡಲು ಪ್ರಾರಂಭಿಸುತ್ತಾರೆ. ಇದು ಒಳ್ಳೆಯದಲ್ಲ ಎಂದು ವೈದ್ಯಕೀಯ ತಜ್ಞರು ಎಚ್ಚರಿಸುತ್ತಾರೆ. ಅಲ್ಲದೆ ಅತಿಯಾಗಿ ಆಲ್ಕೋಹಾಲ್ ಸೇವನೆಯು ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ಸಾಕಷ್ಟು ವೀರ್ಯಾಣು ಉತ್ಪತ್ತಿಯಾಗುವುದಿಲ್ಲ ಎಂದು ಹೇಳಲಾಗುತ್ತದೆ.

    ಉದ್ವೇಗ (ಒತ್ತಡ): ಅಧಿಕ ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ನಂತಹ ಒತ್ತಡದ ಹಾರ್ಮೋನುಗಳ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಟೆಸ್ಟೋಸ್ಟೆರಾನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಇದು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ಯೋಗ, ಧ್ಯಾನ, ದೈಹಿಕ ವ್ಯಾಯಾಮ ಮುಂತಾದ ಒತ್ತಡ ನಿರ್ವಹಣಾ ವಿಧಾನಗಳನ್ನು ಅನುಸರಿಸುವುದು ಬಹಳ ಮುಖ್ಯ.

    ಅನಾರೋಗ್ಯಕರ ಆಹಾರಗಳು: ಆಹಾರ ಫಲವತ್ತತೆಯ ಮೇಲೂ ಪರಿಣಾಮ ಬೀರುತ್ತದೆ. ಫಾಸ್ಟ್ ಫುಡ್, ಸಕ್ಕರೆ ಮತ್ತು ಕೊಬ್ಬಿನ ಪದಾರ್ಥಗಳನ್ನು ಸೇವಿಸುವುದರಿಂದ ದೇಹದಲ್ಲಿ ಊತ ಮತ್ತು ತೂಕ ಹೆಚ್ಚಾಗಬಹುದು, ಇದು ವೀರ್ಯಾಣು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಜೀವಸತ್ವಗಳು ಮತ್ತು ಖನಿಜಗಳ ಕೊರತೆಗಳು, ವಿಶೇಷವಾಗಿ ಸತು, ಸೆಲೆನಿಯಂ, ಫೋಲಿಕ್ ಆಮ್ಲ, ವೀರ್ಯಾಣುಗಳ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಸೇವನೆ ಮಾಡುವ ಆಹಾರದ ಬಗ್ಗೆ ಗಮನವಹಿಸಬೇಕು.

    ವಿಪರೀತ ಶಾಖ: ಪುರುಷರಿಗೆ, ದೇಹದ ಕೆಳಭಾಗದಲ್ಲಿ ಅತಿಯಾದ ಶಾಖ ಅಥವಾ ಬಿಸಿಯ ಅನುಭವ ಆಗುವುದು ವೀರ್ಯಾಣುಗಳ ಸಂಖ್ಯೆಯ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ, ನೀವು ಬಿಸಿ ನೀರಿನ ಸ್ನಾನ, ಬಿಗಿಯಾದ ಒಳ ಉಡುಪುಗಳು, ಲ್ಯಾಪ್ಟಾಪ್ ಅನ್ನು ನಿಮ್ಮ ತೊಡೆಯ ಮೇಲೆ ದೀರ್ಘಕಾಲ ಇರಿಸಿಕೊಂಡು ಕೆಲಸ ಮಾಡುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಇಲ್ಲದಿದ್ದರೆ, ವೃಷಣಗಳ ತಾಪಮಾನದ ಹೆಚ್ಚಳದಿಂದಾಗಿ ವೀರ್ಯಾಣು ಹಾನಿಯಾಗುವ ಅಪಾಯವೂ ಇರುತ್ತದೆ.

    Click to comment

    Leave a Reply

    Your email address will not be published. Required fields are marked *

    health

    ಹಲವಾರು ಕಾಯಿಲೆಗಳಿಗೆ ಪಾರಿಜಾತ ಎಲೆ ರಾಮಬಾಣ..!

    Published

    on

    Health: ಪಾರಿಜಾತ ಹೂವು ಒಂದು ಸುಗಂಧ ದ್ರವ್ಯ ಎಂದು ನಮಗೆಲ್ಲ ತಿಳಿದಿದೆ. ಆದರೆ ಪಾರಿಜಾತ ಎಲೆಗಳನ್ನು ಔಷಧವಾಗಿ ಬಳಸಿಕೊಳ್ಳಬಹುದು.

    ಅದು ಹೇಗೆ ಅಂತಾ ಕೇಳ್ತೀರಾ.. ?ಮಲೇರಿಯಾ ಜ್ವರವನ್ನು ಪಾರಿಜಾತ ಎಲೆಗಳು ನಿವಾರಿಸುತ್ತದೆ. ಮಹಿಳೆಯರ ಮುಟ್ಟಿನ  ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗೂ ಹಲ್ಲಿನ ಸಮಸ್ಯೆಗಳನ್ನು ತಡೆಯುತ್ತದೆ. ಹೈಪರ್ ಆಸಿಡಿಟಿ,ವಾಕರಿಕೆ ಇತ್ಯಾದಿ ಜೀರ್ಣಕಾರಿ ಸಮಸ್ಯೆಗಳನ್ನುನಿವಾರಿಸುತ್ತದೆ. ಪೌರಾಣಿಕ ಕಥೆಗಳ ಪ್ರಕಾರ ಪಾರಿಜಾತವು ಶ್ರೀಕೃಷ್ಣ ದೇವರು ಭೂಮಿಗೆ ತಮದ ಸ್ವರ್ಗೀಯ ಮರವಾಗಿದೆ.

    ಪಾರಿಜಾತವನ್ನು ಸಾಮಾನ್ಯವಾಗಿ ರಾತ್ರಿ ಮಲ್ಲಿಗೆ ಎಂದು ಕರೆಯಲಾಗುತ್ತದೆ. ಪಾರಿಜಾತ ಪರಿಮಳಯುಕ್ತ ಹೂವುಗಳನ್ನು ಹೊಂದಿರುವ ಸಣ್ಣ ಪೊದೆ ರೀತಿಯ ಮರವಾಗಿದೆ. ಪಾರಿಜಾತ ಹೊವುಗಳು ಕಿತ್ತಳೆ ಬಣ್ಣದ ಕಾಂಡದ ಮೇಲೆ 7 ರಿಂದ 8 ದಳಗಳನ್ನು ಹೊಂದಿರುತ್ತದೆ. ಬಿಳಿ ಎಸಳಿನ ನಡುವೆ ಕೇಸರಿ ಬಣ್ಣದ ಚುಕ್ಕೆ ಇದ್ದು, ಈ ಸುಂದರವಾದ ಹೂವುಗಳನ್ನು ಅನೇಕ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ. ಪಾರಿಜಾತ ಹೂವು ಹಗಲಿನಲ್ಲಿ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ ಮತ್ತು ರಾತ್ರಿಯಲ್ಲಿ ಅರಳುತ್ತದೆ. ಪಾರಿಜಾತದ ಆರೋಗ್ಯ ಪ್ರಯೋಜನಗಳು ಹೀಗಿವೆ. ಪಾರಿಜಾತವು ಆಯುರ್ವೇದದಲ್ಲಿ ಅದ್ಭುತವಾದ ಸಸ್ಯವಾಗಿದ್ದು, ವಿಶೇಷವಾಗಿ ಅದರ ಅಗಾಧವಾದ ಅರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ.

    ಈ ಉತ್ಕರ್ಷಣ ನಿರೋಧಕ, ಔಷಧೀಯ ಸಸ್ಯವು ನೋವನ್ನು ನಿವಾರಿಸುವುದರಿಂದ ಜ್ವರವನ್ನು ಕಡಿಮೆ ಮಾಡುವವರೆಗೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಪಾರಿಜಾತವನ್ನು ಮಹಾನ್ ಆಂಟಿಪೈರೆಟಿಕ್ ಎಂದು ಕರೆಯಲಾಗುತ್ತದೆ. ಇದು ಮಲೇರಿಯಾ, ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಜ್ವರ ಸೇರಿದಂತೆ ವಿವಿದ ಜ್ವರಗಳನ್ನು ಗುಣಪಡಿಸುತ್ತದೆ. ಸಂಧಿವಾತ ಮತ್ತು ಸಿಯಾಟಿಕಾ ಅತ್ಯಂತ ನೋವಿನ ಸಮಸ್ಯೆಗಳಾಗಿವೆ. ಪಾರಿಜಾತದ ಎಲೆಗಳು ಮತ್ತು ಹೂವುಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ. ನಿರ್ದಿಷ್ಟ ಸಾರಭೂತ ತೈಲಗಳನ್ನು ಸಂಧಿವಾತ, ಮೊಣಕಾಲು ನೋವಿನ ಚಿಕಿತ್ಸೆಯನ್ನು ಬಳಸಲಾಗುತ್ತದೆ. ನೀವು ನಿರಂತರ ಕೆಮ್ಮು ಮತ್ತು ಗಂಟಲಿನ ಕಿರಿಕಿರಿಯಿಂದ ಬಳಲುತ್ತಿದ್ದೀರಾ? ಪಾರಿಜಾತದ ಎಲೆಗಳು ಮತ್ತು ಹೂವುಗಳಿಂದ ಮಾಡಿದ ಚಹಾವನ್ನು ಕೆಮ್ಮು ಶೀತ ಮತ್ತು ಬ್ರಾಂಕೈಟಿಸ್ ಅನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ಅಲರ್ಜಿ ವಿರೋಧಿ, ಆಂಟಿವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿದ್ದರೆ ಪಾರಿಜಾತದ ತೈಲವನ್ನು ಬಳಸಬಹುದು. ಚರ್ಮದ ವಿವಿಧ ಶಿಲೀಂಧ್ರಗಳ ಸೋಂಕಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ.

    ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಜ್ವರದಲ್ಲಿ ಪ್ಲೇಟ್ ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಪಾರಿಜಾತ ಸಹಾಯ ಮಾಡುತ್ತದೆ. ಇದು ಜ್ವರವನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯುತ್ತದೆ. ಪಾರಿಜಾತದ ಪ್ರಮುಖ ಆರೋಗ್ಯ ಪ್ರಯೋಜನವೆಂದರೆ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಪಾರಿಜಾತದ ಹೂವುಗಳು ಮತ್ತು ಎಲೆಗಳು ಅದರಲ್ಲಿ ಎಥೆನಾಲ್ ಇರುವ ಕಾರಣ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇಮ್ಯುನೊಸ್ಟಿಮ್ಯುಲೇಟರಿಯಾಗಿ ಕಾರ್ಯನಿರ್ವಹಿಸುತ್ತದೆ. ಪಾರಿಜಾತದ ಹೂವುಗಳು ಕೂದಲಿನ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ಕೂದಲನ್ನು ಬಲಪಡಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಬಳಸಲಾಗುತ್ತದೆ. ಕೋದಲು ಬಿಳಿಯಾಗುವುದನ್ನು ಮತ್ತು ಇತರ ನೆತ್ತಿ ಸಂಬಂಧಿತ ಸಮಸ್ಯೆಗಳನ್ನು ತಡೆಯಲು ಪಾರಿಜಾತವು ಸಹಾಯ ಮಾಡುತ್ತದೆ.

    Continue Reading

    LATEST NEWS

    Trending