FILM
ಯಶ್ ಆಂಡ್ ಟೀಂ ಜೊತೆ ಬಾಲಿವುಡ್ ಬೆಡಗಿ ಪ್ರಯಾಣ ಮುಂಬೈಗೆ: ಯಾರು ಆ ನಟಿ?
ಮಂಗಳೂರು/ಬೆಂಗಳೂರು: ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಒಂದು. ದೊಡ್ಡದೊಂದು ಪ್ರತಿಭಾವಂತ ತಂಡ ಕಟ್ಟಿಕೊಂಡು ಯಶ್ ಕೆಲ ವಾರಗಳ ಹಿಂದೆ ಸಿನಿಮಾ ಚಿತ್ರೀಕರಣ ಪ್ರಾರಂಭ ಮಾಡಿದ್ದಾರೆ.
30 ದಿನ ಬೆಂಗಳೂರಿನ ಹೊರವಲಯದಲ್ಲಿ ಬೃಹತ್ ಸೆಟ್ ಹಾಕಿ ಚಿತ್ರೀಕರಣವನ್ನು ಮಾಡಿ ಮುಗಿಸಲಾಗಿದೆ . ನಯನತಾರಾ, ಬಾಲಿವುಡ್ ನಟ, ಹಾಲಿವುಡ್ ನಟರುಗಳು ಬೆಂಗಳೂರಿಗೆ ಬಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಯಶ್ ಜೊತೆಯಾಗಿ ಇಡೀ ತಂಡ ಮುಂಬೈಗೆ ಶಿಫ್ಟ್ ಆಗುತ್ತಿದೆ.ಮುಂಬೈನಲ್ಲಿ 45 ದಿನಗಳ ಕಾಲ ಸತತವಾಗಿ ಚಿತ್ರೀಕರಣ ನಡೆಸಲಿದೆ. ಕೆಲವು ವಿಎಫ್ಎಕ್ಸ್ ಭಾಗದ ಚಿತ್ರೀಕರಣ ಸೇರಿದಂತೆ ಆನ್ ಲೊಕೇಶನ್ ಚಿತ್ರೀಕರಣವೂ ಸಹ ಮುಂಬೈ ನಲ್ಲಿ ನಡೆಯಲಿದೆ. ಹೀಗಾಗಿ ಇಡೀ ಚಿತ್ರತಂಡ ಮುಂಬೈಗೆ ಶಿಫ್ಟ್ ಆಗುತ್ತಿದೆ.
ಮುಂಬೈನಲ್ಲಿ ಕೆಲವು ನಟ-ನಟಿಯರು ‘ಟಾಕ್ಸಿಕ್’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಅದರಲ್ಲೂ ವಿಶೇಷವಾಗಿ ಸಿನಿಮಾದ ನಾಯಕಿ ‘ಕಿಯಾರಾ ಅಡ್ವಾಣಿ’ ‘ಟಾಕ್ಸಿಕ್’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದು, ಕಿಯಾರಾ ಅವರು 45 ದಿನವೂ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಎಂದು ಸುದ್ಧಿಯಾಗಿದೆ.
FILM
ಎರಡನೇ ಮದುವೆಯಾಗುತ್ತಿರುವ ಬಿಗ್ಬಾಸ್ ಕಂಟೆಸ್ಟೆಂಟ್
ಚಂದನ್ ಶೆಟ್ಟಿ-ನಿವೇದಿತಾ ಗೌಡ ಡಿವೋರ್ಸ್ ಮೂಲಕ ತಮ್ಮ 4 ವರ್ಷದ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಂಜನಾ ಆನಂದ್ ಮತ್ತು ಚಂದನ್ ಶೆಟ್ಟಿಯ ಮದುವೆ ಕುರಿತು ಕೆಲ ಕಿರಾತಕರು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ.
ಹೌದು.. ಸಹಜ ಅಭಿನಯ ಮತ್ತು ಸರಳ ಸೌಂದರ್ಯದಿಂದಲೇ ಸ್ಯಾಂಡಲ್ವುಡ್ನ ಕ್ರಶ್ ಎನಿಸಿಕೊಂಡ ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿಯನ್ನೂ ಕೆಲವರು ತೇಲಿ ಬಿಟ್ಟಿದ್ದಾರೆ. ಹೀಗೆ ಹಬ್ಬಿಸಲಾದ ಈ ಸುಳ್ಳು ಸುದ್ದಿಯನ್ನೂ ಅನೇಕರು ನಿಜಾ ಎಂದುಕೊಂಡಿದ್ದಾರೆ.
ನಿವೇದಿತಾ ಗೌಡ ಅವರಿಂದ ದೂರವಾದ ಚಂದನ್ ಶೆಟ್ಟಿ ಮತ್ತು ಕನ್ನಡ ಚಿತ್ರರಂಗದಲ್ಲಿ ನೆಲೆಯೂರುತ್ತಿರುವ ಸಂಜನಾ ಆನಂದ್ಗೆ ಶುಭಾಶಯವನ್ನೂ ಕೋರುತ್ತಿದ್ದಾರೆ. ಇದೀಗ ಈ ಸುದ್ದಿಯ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸ್ಪಷ್ಟನೆಯನ್ನು ನೀಡಿರುವ ಸಂಜನಾ ಆನಂದ್, ಚಂದನ್ ಶೆಟ್ಟಿ ಜೊತೆ ನಾನು ಮದುವೆಯಾಗುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದಿದ್ದಾರೆ. ಈ ತರಹದ ಸುಳ್ಳು ಸುದ್ದಿಗಳನ್ನೆಲ್ಲ ಹಬ್ಬಿಸಬೇಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ದಾರೆ.
ಚಂದನ್ ಶೆಟ್ಟಿ ಸೂತ್ರಧಾರಿ ಎಂಬ ಚಿತ್ರದಲ್ಲಿ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಸಂಜನಾ ಆನಂದ್ ಕೂಡ ಇದ್ದಾರೆ. ಹಾಡೊಂದಕ್ಕೆ ಹೆಜ್ಜೆಯನ್ನೂ ಹಾಕಿದ್ದಾರೆ.
BIG BOSS
BBK11: ಬಿಗ್ ಬಾಸ್ ನರಕ ನಿವಾಸಿಗಳಿಗೆ ಬಂಪರ್ ಆಫರ್
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ ಶುರುವಾಗಿ ಒಂದು ವಾರ ಕಂಪ್ಲೀಟ್ ಆಗಿದೆ. ಒಂದೇ ವಾರದಲ್ಲಿ ನರಕಕ್ಕೆ ಸೇರಿದ ಸ್ಫರ್ಧಿಗಳು ಚಡಪಡಿಸುತ್ತಿದ್ದಾರೆ. ಸರಿಯಾದ ಊಟವಿಲ್ಲದೆ, ನಿದ್ದೆ ಇಲ್ಲದೇ, ಲವಲವಿಕೆಯಿಂದ ಓಡಾಡಲು ಆಗದೇ ಕಂಗಾಲಾಗಿದ್ದಾರೆ.
ಹೀಗಾಗಿ ಬಿಗ್ಬಾಸ್ ಮನೆಯ ಮಂದಿಗೆ ಟಾಸ್ಕ್ವೊಂದನ್ನು ಕೊಟ್ಟಿದ್ದಾರೆ. ಹೌದು, ಬಿಗ್ಬಾಸ್ ನರಕವಾಸಿಗಳಿಗೆ ಸ್ಪೆಷಲ್ ಬಾಲ್ ಟಾಸ್ಕ್ವೊಂದು ನೀಡಿದ್ದಾರೆ. ಒಂದು ವೇಳೆ ನರಕವಾಸಿಗಳು ಈ ಟಾಸ್ಕ್ ಗೆದ್ದರೆ ಇನ್ನೂ ಮುಂದೆ ಸ್ವರ್ಗ ನಿವಾಸಿಗಳು ದಿನಕ್ಕೆ ಮೂರು ಬಾರಿ ನರಕ ವಾಸಿಗಳಿಗೆ ಅಡುಗೆ ತಯಾರಿ ಮಾಡಿಕೊಡಬೇಕು. ಅತಿ ಕಡಿಮೆ ಸಮಯದಲ್ಲಿ ಚೆಂಡನ್ನು ಅಂತಿಮ ಸ್ಥಾನಕ್ಕೆ ವರ್ಗಾಯಿಸಿದ ತಂಡ ಈ ಟಾಸ್ಕ್ ಗೆಲ್ಲುತ್ತದೆ.
ಇನ್ನು ಈ ಟಾಸ್ಕ್ನಲ್ಲಿ ಸ್ವರ್ಗ ನಿವಾಸಿಗಳು 24 ನಿಮಿಷ ತೆಗೆದುಕೊಂಡಿದ್ದಾರೆ. ಅದೇ ರೀತಿ ನರಕ ವಾಸಿಗಳ ಬಗ್ಗೆ ಮಾಹಿತಿ ರಿವೀಲ್ ಆಗಿಲ್ಲ. ರಿಲೀಸ್ ಆದ ಹೊಸ ಪ್ರೋಮೋದಲ್ಲಿ ನರಕದ ಕಡೆಯಿಂದ ಗೋಲ್ಡ್ ಸುರೇಶ್, ಮೋಕ್ಷತಾ ಪೈ ಹಾಗೂ ಚೈತ್ರಾ ಟಾಸ್ಕ್ ಆಡಿದ್ದಾರೆ. ಸ್ವರ್ಗ ವಾಸಿಗಳಿಂದ ಉಗ್ರಂ ಮಂಜು, ಧರ್ಮ ಕೀರ್ತಿರಾಜ್ ಹಾಗೂ ರಂಜಿತ್ ಅವರು ಟಾಸ್ಕ್ ನಿಭಾಯಿಸಿದ್ದಾರೆ. ಸದ್ಯ ಇಂದಿನ ಎಪಿಸೋಡ್ನಲ್ಲಿ ಈ ಟಾಸ್ಕ್ ಅನ್ನು ಯಾವ ತಂಡ ಗೆಲ್ಲಲಿದೆ ಅಂತ ಕಾದು ನೋಡಬೇಕಿದೆ.
BIG BOSS
ಬಿಗ್ಬಾಸ್ ಮನೆಯಲ್ಲಿ ಹಂಸಾಗೆ ‘I Love U’ ಎಂದ ಜಗದೀಶ್
Bigg Boss Kannada Season 11: ಬಿಗ್ ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮ 2ನೇ ವಾರದತ್ತ ಮುನ್ನುಗುತ್ತಿದೆ. ಮನೆಯ ಕ್ಯಾಪ್ಟನ್ ಕೂಡ ಬದಲಾಗಿದ್ದಾರೆ. ನಟಿ ಹಂಸಾ ಮನೆಯ ನಾಯಕತ್ವ ವಹಿಸಿದ್ದು, ಇದೀಗ ಲಾಯರ್ ಜಗದೀಶ್ ಅವರ ಕಾಲೆಳೆಯಲು ಶುರು ಮಾಡಿದ್ದಾರೆ. ಅಷ್ಟೇ ಏಕೆ ‘ಐ ಲವ್ ಯೂ ಕ್ಯಾಪ್ಟನ್’ ಎಂದು ಹೇಳಿದ್ದಾರೆ.
ಲಾಯರ್ ಜಗದೀಶ್ ಕ್ಯಾಪ್ಟನ್ ಹಂಸಾ ಅವರಿಗೆ ಕೋಪಿಸಿಕೊಳ್ಳುವಂತೆ ಮಾಡಿದ್ದಾರೆ. ಈ ವೇಳೆ ತಮಾಷೆಯ ಜೊತೆಗೆ ಕಾಲೆಳೆಯುತ್ತಿದ್ದಾರೆ. ಸಿಕ್ಕ ಸಿಕ್ಕ ವಸ್ತುಗಳನ್ನು ತಂದು ಕೊಡುವಂತೆ ಆಗ್ರಹಿಸಿದ್ದಾರೆ. ಅಷ್ಟು ಮಾತ್ರವಲ್ಲ ನನಗೆ ಚಿಕನ್ ಮಂಚೂರಿ ಬೇಕು ಎಂದು ಜಗದೀಶ್ರವರು ಹಂಸಾ ಬಳಿ ಕೇಳಿದ್ದಾರೆ. ತಂದಿಲ್ಲ ಅಂದ್ರೆ ನಿನ್ನನ್ನೇ ಮಾಡ್ತೀನಿ ನೋಡ್ತಿರು ಎಂದಿದ್ದಾರೆ.
ಇದಲ್ಲದೆ ಹಂಸಾ ಅವರಿಗೆ ಉಪೇಂದ್ರ ನಟನೆಯ ಗೋಕರ್ಣ ಸಿನಿಮಾದ ‘ಮಾರಿ ಕಣ್ಣು ಹೋರಿ ಮ್ಯಾಲೆ’ ಹಾಡು ಹಾಡಿದ್ದಾರೆ. ನನ್ನ ಕಣ್ಣು ಅವಳ ಮೇಲೆ ಅವಳ ಕಣ್ಣು ನನ್ನ ಮೇಲೆ ಎಂದಿದ್ದಾರೆ. ಇದಲ್ಲದೆ, ಹಂಸಾ ಅವರನ್ನು ಹಂಸ್ ಎಂದು ಕರೆದಿದ್ದಾರೆ.
ಹಂಸಾಗೆ ನಾನು ನಿಮ್ಮ ಫ್ಯಾನ್ ಎಂದು ಜಗದೀಶ್ ಹೇಳಿದ್ದಾರೆ. ಮುಂಗಾರು ಮಳೆ ಸಿನಿಮಾದಂತೆ ಹಂಸಾರವರು ಜಗದೀಶ್ ಎದೆ ಮೇಲೆ ಕಾಲಿಟ್ಟು ನಡೆದಿದ್ದಾರೆ. ಒಟ್ಟಿನಲ್ಲಿ ಇಂದಿನ ಎಪಿಸೋಡ್ನಲ್ಲಿ ಜಗದೀಶ್ ಮತ್ತು ಹಂಸಾ ನಡುವಿನ ಮಾತು, ಜಗಳ, ತಮಾಷೆ ಪ್ರೇಕ್ಷಕರ ಕಣ್ಣು ಕಟ್ಟುವಂತೆ ಮಾಡಲಿದೆ.