BIG BOSS
ಬಿಗ್ ಬಾಸ್ ಮನೆಯಲ್ಲಿ ಮಗಳ ಧ್ವನಿ ಕೇಳಿ ಬಿಕ್ಕಿಬಿಕ್ಕಿ ಅತ್ತ ಧನರಾಜ್
ಗಿಚ್ಚಿ ಗಿಲಿಗಿಲಿ ಸೀಸನ್ 2ರ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಧನರಾಜ್ ಆಚಾರ್ ಸದ್ಯ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೊದಲ ವಾರದಲ್ಲಿ ಕಾಮಿಡಿ ಮಾಡಿಕೊಂಡು ಖುಷ್ ಖುಷ್ ಆಗಿದ್ದ ಧನರಾಜ್ ತುಂಬಾ ವೀಕ್ ಆಗುತ್ತಿದ್ದಾರೆ ಮೂಲೆ ಸೇರುತ್ತಿದ್ದಾರೆ ಎಂದು ಇನ್ನಿತರ ಸ್ಪರ್ಧಿಗಳು ಟಾರ್ಗೆಟ್ ಮಾಡುತ್ತಿದ್ದರು. ಇದೇ ಕಾರಣ ಕೊಟ್ಟು ಎರಡು ವಾರವೂ ಧನರಾಜ್ರನ್ನು ನಾಮಿನೇಟ್ ಮಾಡಿದ್ದಾರೆ. ಯಾವ ರೀತಿ ಇರಬೇಕು, ಯಾವ ರೀತಿ ಮುಂದುವರೆಯಬೇಕು ಅನ್ನೋ ಗೊಂದಲದಲ್ಲಿ ಇರುವ ಧನರಾಜ್ಗೆ ಬಿಗ್ ಬಾಸ್ ಮೋಟಿವೇಷನ್ ನೀಡುತ್ತಾರೆ.
ಫೋನ್ ಕರೆ ಬರುತ್ತಿದ್ದಂತೆ ಹಲೋ ಹೇಳಿ ಬಿಗ್ ಬಾಸ್ ಎಂದು ಧನರಾಜ್ ಮಾತನಾಡುತ್ತಾರೆ. ನಿಮಗೆ ಏನೋ ಕೇಳಿಸಬೇಕು ಎಂದು ಇದ್ದಕ್ಕಿದ್ದಂತೆ ಮಗು ಅಳುತ್ತಿರುವ ವಿಡಿಯೋವನ್ನು ಬಿಗ್ ಬಾಸ್ ಹಾಕುತ್ತಾರೆ. ಮಗು ಅಳುತ್ತಿರುವ ಧ್ವನಿ ಕೇಳಿಸುತ್ತಿದ್ದಂತೆ ಬಿಕ್ಕಿಬಿಕ್ಕಿ ಕಣ್ಣೀರಿಟ್ಟ ಧನರಾಜ್ ‘ಸಾರಿ ಪುಟ್ಟ ಸರಿಯಾಗಿ ಆಟವಾಡಲು ಆಗುತ್ತಿಲ್ಲ’ ಎಂದು ಹೇಳುತ್ತಾರೆ. ಕರೆ ಇಟ್ಟ ನಂತರ ಕ್ಯಾಮೆರಾ ನೋಡುತ್ತಾ ‘ನನ್ನ ಮಗಳು ನೆನಪಾದಾಗಲೆಲ್ಲಾ ಇನ್ನೂ ಚೆನ್ನಾಗಿ ಆಟವಾಡಬೇಕು ಅನಿಸುತ್ತದೆ. ಇದನ್ನು ಮೋಟಿವೇಷನ್ ಆಗಿ ಸ್ವೀಕರಿಸುತ್ತೀನಿ. ಇಲ್ಲಿ ನನ್ನ ಕಡೆ ಬೆರಳು ತೋರಿಸಿ ಪ್ರಶ್ನೆ ಮಾಡುವವರಿಗೆ ಉತ್ತರ ಕೊಡುತ್ತೀನಿ’ ಎಂದು ಧನರಾಜ್ ಹೇಳುತ್ತಾರೆ.
BIG BOSS
ಲಾಯರ್ ಜಗದೀಶ್ ಹೊರಗೆ, ಪತ್ನಿ ಒಳಗೆ: ಕಲರ್ಸ್ ಶೋನಲ್ಲಿ ಜಗದೀಶ್ ಪತ್ನಿ
ಬಿಗ್ಬಾಸ್ ಕನ್ನಡ ಸೀಸನ್ 11 ಪ್ರಾರಂಭ ಆದಾಗಿನಿಂದಲೂ ವಕೀಲ ಜಗದೀಶ್ ಮನೆಯಲ್ಲಿ ಅಬ್ಬರ ಎಬ್ಬಿಸಿದ್ದಾರೆ. ಬೇಕೆಂದೇ ನಿಯಮಗಳನ್ನು ಮುರಿಯುವುದು, ಕೆಟ್ಟ ಭಾಷೆ ಬಳಸುವುದು, ಮಿತಿ ಮೀರಿ ಫ್ಲರ್ಟ್ ಮಾಡುವುದು, ಸಿಕ್ಕ-ಸಿಕ್ಕವರ ಮೇಲೆ, ಸಿಕ್ಕ-ಸಿಕ್ಕವರ ಬಳಿ ಛಾಡಿ ಹೇಳುವುದು, ಎಲ್ಲರ ಮೇಲೂ ಜಗಳ ಆಡುವುದು, ಬಿಗ್ಬಾಸ್ ಧಮ್ಕಿ ಹಾಕುವುದು ಇದೇ ಮಾಡುತ್ತಾ ಬಂದಿದ್ದಾರೆ. ಜಗದೀಶ್ ಅವರ ಈ ವರ್ತನೆಯಿಂದ ಬೇಸತ್ತು ಇಡೀ ಮನೆ ಮಂದಿ ಅವರ ವಿರುದ್ಧ ಒಂದಾಗಿದ್ದರು. ಜಗದೀಶ್ ಹಾಗೂ ಮನೆಯ ಸದಸ್ಯರೊಬ್ಬರ ನಡುವೆ ಜಟಾಪಟಿ ನಡೆದಿರುವ ಕಾರಣ ಇದೀಗ ಜಗದೀಶ್ ಅನ್ನು ಕಲರ್ಸ್ ವಾಹಿನಿಯ ಬಿಗ್ಬಾಸ್ ಮನೆಯಿಂದ ಹೊರಗೆ ಹಾಕಲಾಗಿದೆ. ಆದರೆ ಅವರ ಪತ್ನಿ ಅದೇ ಕಲರ್ಸ್ ವಾಹಿನಿಯ ಶೋ ಒಂದರಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ.
ಸವಿರುಚಿ ಕಾರ್ಯಕ್ರಮ ಕಲರ್ಸ್ ವಾಹಿನಿಯ ಜನಪ್ರಿಯ ಅಡುಗೆ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಲಾಯರ್ ಜಗದೀಶ್ ಅವರ ಪತ್ನಿ ಅತಿಥಿಯಾಗಿ ಆಗಮಿಸಿದ್ದಾರೆ. ಜಗದೀಶ್ ಪತ್ನಿ ಸೌಮ್ಯಾ ಜಗದೀಶ್ ಅವರು ಸವಿರುಚಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ರುಚಿ-ರುಚಿಯಾದ ಅಡುಗೆ ಮಾಡಿದ್ದಾರೆ. ಈ ಕಾರ್ಯಕ್ರಮದ ಪ್ರೋಮೋ ಅನ್ನು ಕಲರ್ಸ್ ವಾಹಿನಿ ಹಂಚಿಕೊಂಡಿದೆ. ವಿಶೇಷವೆಂದರೆ ಈ ಶೋ ಪ್ರಸಾರವಾಗುವ ವೇಳೆಗಾಗಲೆ ಜಗದೀಶ್, ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದಾಗಿದೆ.
ಶೋನಲ್ಲಿ ಸೌಮ್ಯಾ ಅವರು, ಸೋಯಾ ಚಂಕ್ಸ್ ಮಸಾಲಾ ಕರಿ ಅಡುಗೆ ಮಾಡಿ ತೋರಿಸಿದರು. ಕಾರ್ಯಕ್ರಮದಲ್ಲಿ ಜಗದೀಶ್ ಬಗ್ಗೆಯೂ ಮಾತನಾಡಿದ ಸೌಮ್ಯಾ ಅವರು, ಬಿಗ್ಬಾಸ್ ನಲ್ಲಿ ಹೇಗೆ ಅವರು ಇದ್ದಾರೆಯೋ ಹಾಗೆಯೇ ಮನೆಯಲ್ಲಿಯೂ ಜಗದೀಶ್ ಇರುತ್ತಾರೆ ಎಂದು ಹೇಳಿದ್ದರು. ‘ಜಗದೀಶ್ ಅವರ ವ್ಯಕ್ತಿತ್ವ, ವರ್ತನೆಯನ್ನು ಯಾರೂ ಊಹಿಸಲು ಸಾಧ್ಯ ಆಗುವುದಿಲ್ಲ. ಒಮ್ಮೆ ಇದ್ದಕ್ಕಿದ್ದಂತೆ ಜಗಳ ಆಡಿ ಬಿಡುತ್ತಾರೆ ಆ ನಂತರ ಅವರೇ ಬಂದು ಕ್ಷಮೆ ಕೇಳುತ್ತಾರೆ. ಅವರಿಗೆ, ಅವರು ಮಾಡಿದ ತಪ್ಪು ಬೇಗನೆ ಅರ್ಥ ಆಗುತ್ತದೆ’ ಎಂದು ಪತ್ನಿ ಸೌಮ್ಯಾ ಅಡುಗೆ ಶೋನಲ್ಲಿ ಹೇಳಿದ್ದಾರೆ.
ಈಗ ಜಗದೀಶ್ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಎಲಿಮಿನೇಟ್ ಅನ್ನುವುದಕ್ಕಿಂತಲೂ ಹೊರಗಟ್ಟಲ್ಪಟ್ಟಿದ್ದಾರೆ. ಮನೆಯ ಒಳಗಿದ್ದಾಗ ಬಿಗ್ಬಾಸ್ ಅನ್ನು ಹಾಗೆ ಮಾಡ್ತೀನಿ, ಹೀಗೆ ಮಾಡ್ತೀನಿ ಎಂದೆಲ್ಲ ಸವಾಲು ಹಾಕಿದ್ದರು. ಈಗ ಜಗದೀಶ್ ಹೊರಗೆ ಬಂದ ಮೇಲೆ ಏನು ಮಾಡುತ್ತಾರೆ ಕಾದು ನೋಡಬೇಕಿದೆ.
BIG BOSS
ಬಿಗ್ ಬಾಸ್ನಲ್ಲಿ ಹೊಡೆದಾಡಿಕೊಂಡ ಸ್ಪರ್ಧಿಗಳು! ಜಗದೀಶ್ ಮತ್ತು ರಂಜಿತ್ ಔಟ್
ಬಿಗ್ ಬಾಸ್ ಸೀಸನ್ 11 ಕಾರ್ಯಕ್ರಮದಿಂದ ಲಾಯರ್ ಜಗದೀಶ್ ಮತ್ತು ರಂಜಿತ್ ಹೊರಬಂದಿದ್ದಾರೆ. ಕಿಚ್ಚ ನಿರೂಪಣೆಯ ರಿಯಾಲಿಟಿ ಶೋದಲ್ಲಿ ಹೊಡೆದಾಡಿಕೊಂಡ ಹಿನ್ನೆಲೆ ಇಬ್ಬರನ್ನು ಬಿಗ್ಬಾಸ್ ಮನೆಯಿಂದ ಹೊರ ಕಳುಹಿಸಿದ್ದಾರೆ ಎನ್ನಲಾಗುತ್ತಿದೆ.
ಬಿಗ್ ಬಾಸ್ ಕನ್ನಡ ಪ್ರಾರಂಭವಾಗಿ 3 ವಾರ ಕಳೆದಿದೆ. ಆದರೆ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪ್ರಾರಂಭದಿಂದಲೂ ಮಾತಿನ ಚಕಮಕಿ ನಡೆಯುತ್ತಾ ಬಂದಿದೆ. ಅದರಲ್ಲೂ ಲಾಯರ್ ಜಗದೀಶ್ ಮತ್ತು ಮನೆಯ ಇತರೆ ಸ್ಪರ್ಧಿಗಳ ನಡುವೆ ಕೊಂಚ ವೈಮನಸ್ಸು ಬೆಳೆದಿತ್ತು. ಆದರೀಗ ಮಾತಿನ ಚಕಮಕಿ ಕೈ-ಕೈ ಮಿಲಾಯಿಸುವಷ್ಟರಮಟ್ಟಿಗೆ ಹೋಗಿದೆ.
ಬಿಗ್ ಬಾಸ್ ಮನೆಯಲ್ಲಿ ಏನಾಯ್ತ?
ನಿನ್ನೆ ಎಪಿಸೋಡ್ನಲ್ಲೂ ಕೂಡ ಸ್ಪರ್ಧಿಗಳ ನಡುವೆ ದೊಡ್ಡ ಜಗಳವಾಗಿತ್ತು. ಜಗದೀಶ್ ಮತ್ತು ಉಗ್ರಂ ಮಂಜು ನಡುವೆ ಜಗಳ ಏರ್ಪಟ್ಟಿತ್ತು. ಆ ಬಳಿಕ ರಂಜಿತ್ ಮತ್ತು ಜಗದೀಶ್ ನಡುವೆ ನೇರಾನೇರ ಮಾತುಕತೆ ನಡೆದು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
BIG BOSS
ಸುದೀಪ್ ಬಿಗ್ ಬಾಸ್ ತೊರೆಯಲು ಇದೆ ಹಲವು ಕಾರಣ; ರೂಪೇಶ್ ರಾಜಣ್ಣ
ಕನ್ನಡ ಪರ ಹೋರಾಟಗಾರ, ಮಾಜಿ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ರಾಜಣ್ಣ ಅವರು ‘ಬಿಗ್ ಬಾಸ್’ ಆಯೋಜಕರ ವಿರುದ್ಧ ಹರಿಹಾಯ್ದಿದ್ದರು. ಸುದೀಪ್ ಅವರಿಗೆ ಅವಮಾನ ಆಗಿದೆ ಎಂದು ಅವರು ಹೇಳಿದ್ದರು. ಆದರೆ, ಅದಕ್ಕೆ ನಿಜವಾದ ಕಾರಣಗಳು ಏನು ಎಂಬುದು ರಿವೀಲ್ ಆಗಿರಲಿಲ್ಲ. ಈಗ ಈ ವಿಚಾರವನ್ನು ರೂಪೇಶ್ ರಾಜಣ್ಣ ಅವರು ವಿವರಿಸಿದ್ದಾರೆ. ಸುದೀಪ್ ಬಿಗ್ ಬಾಸ್ ತೊರೆಯಲು ಕಾರಣ ಏನು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಈ ಮೊದಲು ‘ಬಿಗ್ ಬಾಸ್’ನಲ್ಲಿ ಯಾರಾದರೂ ಇಂಗ್ಲಿಷ್ ಮಾತನಾಡಿದರೆ ಅದನ್ನು ಬಿಗ್ ಬಾಸ್ ಸಹಿಸುತ್ತಿರಲಿಲ್ಲ. ಆಗ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಹಾಕುತ್ತಿದ್ದರು. ಆದರೆ, ಈಗ ಈ ಪದ್ಧತಿ ಅಳಿದು ಹೋಗಿದೆ. ಇದಕ್ಕೆ ಬಿಗ್ ಬಾಸ್ ಆಯೋಜಕರೇ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನು ಸುದೀಪ್ ಖಂಡಿಸಿದ್ದಾರೆ. ‘ಹೆಚ್ಚು ಇಂಗ್ಲಿಷ್ ಬಳಕೆ ಮಾಡಿದಾಗ ಅದನ್ನು ಪ್ರಶ್ನೆ ಮಾಡಿ’ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಒಪ್ಪಿಲ್ಲ.
ಈ ಮೊದಲು ಸ್ವರ್ಗ ಹಾಗೂ ನರಕದ ಕಾನ್ಸೆಪ್ಟ್ ಇತ್ತು. ಸ್ವರ್ಗದ ಮಂದಿ ಹಾಯಾಗಿ ಕುಳಿತಿದ್ದರೆ ನರಕದವರು ನಿಂತೇ ಇದ್ದರು. ಹೀಗಾಗಿ, ಅವರಿಗೆ ಕೂರೂಕೆ ಅವಕಾಶ ಕೊಡಿ ಎಂದು ಸುದೀಪ್ ಕೋರಿದ್ದರು. ಆದರೆ, ಇದಕ್ಕೆ ಆಯೋಜಕರು ಸೊಪ್ಪು ಹಾಕಿಲ್ಲ ಎನ್ನಲಾಗಿದೆ. ಇದು ಸುದೀಪ್ ಕೋಪಕ್ಕೆ ಕಾರಣ ಆಗಿದೆ. ಅಲ್ಲದೆ, ನರಕವಾಸಿಗಳಿಗೆ ಟಾಯ್ಲೆಟ್ ಬಳಕೆಗೆ ಯಾವುದೇ ಷರತ್ತುಗಳನ್ನು ಹಾಕದಂತೆಯೂ ಕೋರಿದ್ದರು.
‘ಎ23 ರಮ್ಮಿ’ ಆ್ಯಪ್ ಕೂಡ ‘ಬಿಗ್ ಬಾಸ್’ನ ಸ್ಪಾನ್ಸರ್ಗಳಲ್ಲಿ ಒಂದಾಗಿದೆ. ಈ ಹೆಸರನ್ನು ತೆಗೆದುಕೊಳ್ಳೋಕೆ ಇರಿಸುಮುರುಸಾಗುತ್ತಿದೆ ಎಂದು ಸುದೀಪ್ ಹೇಳಿದ್ದರು. ಇದನ್ನು ಸ್ವಲ್ಪ ಅವಾಯ್ಡ್ ಮಾಡಿ ಎಂದು ಸುದೀಪ್ ಕೋರಿದ್ದರು. ಆದರೆ, ಆಯೋಜಕರು ಒಪ್ಪಿಲ್ಲ. ಈಗ ಸುದೀಪ್ ಅವರು ಬಿಗ್ ಬಾಸ್ ತೊರೆಯಲು ನಿರ್ಧರಿಸಿರುವುದರಿಂದ ಬದಲಾವಣೆಗಳನ್ನು ಮಾಡಲು ಆಯೋಜಕರು ಒಪ್ಪಿದ್ದಾರೆ ಎನ್ನಲಾಗಿದೆ.
- FILM4 days ago
ಮಾಲ್ಡೀವ್ಸ್ ದ್ವೀಪದಲ್ಲಿ ಹನಿಮೂನ್..! ಜಾಲಿ ಮೂಡ್ನಲ್ಲಿ ತರುಣ್ ಸುಧೀರ್ ದಂಪತಿ
- FILM5 days ago
ಮಗುವಿನ ಮುಖ ರಿವೀಲ್ ಮಾಡಿದ ಕವಿತಾ-ಚಂದನ್ ದಂಪತಿ
- DAKSHINA KANNADA5 days ago
ಮುಂದಿನ ಐದು ದಿನ ಉತ್ತರ ಒಳನಾಡು, ಕರಾವಳಿಯಲ್ಲಿ ಭಾರೀ ಮಳೆ ಸಾಧ್ಯತೆ
- BIG BOSS3 days ago
ಯಾರೂ ಊಹಿಸದ ವ್ಯಕ್ತಿಗೆ ಈ ವಾರ ಕಿಚ್ಚನ ಚಪ್ಪಾಳೆ, ಬಿಗ್ಬಾಸ್ ಮನೆಯಲ್ಲಿ ಇದೇ ಮೊದಲು