Connect with us

    DAKSHINA KANNADA

    ಬಂಟ್ವಾಳ : ಬಿಹಾರ ಮೂಲದ ಕಾರ್ಮಿಕ ಆತ್ಮಹತ್ಯೆ

    Published

    on

    ಬಂಟ್ವಾಳ:  ವೈಯಕ್ತಿಕ ಕಾರಣದಿಂದ ‌ಮನನೊಂದು ಬಿಹಾರ ಮೂಲದ ವ್ಯಕ್ತಿಯೋರ್ವ ಬಂಟ್ವಾಳದ ಟಯರ್ ಅಂಗಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

    ಬಿಹಾರ ರಾಜ್ಯದ ಮೋತಿಹಾರಿ ನಿವಾಸಿ ಸಂದೀಪ್ ಕುಮಾರ್ ( 20 ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಆತ ಮೂರ ವರ್ಷಗಳಿಂದ ತನ್ನ ಮಾವ ಕೆಲಸ ಮಾಡುತ್ತಿದ್ದ ಟಯರ್ ರಿಸೋಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು.

     

    ಇದನ್ನೂ ಓದಿ:  ಪ್ರೀತಿಸಿದ ಯುವಕನ ಜೊತೆಗೆ ಮದುವೆಗೆ ನಿರಾಕರಣೆ.. ಕುಟುಂಬದ 13 ಜನರನ್ನು ವಿಷ ಹಾಕಿ ಕೊಂ*ದ ಯುವತಿ

    ಅಂಗಡಿಯ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆ ಕುರಿತು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಗುರುಪುರ ನದಿಗೆ ಹಾರಿದ್ದ ವ್ಯಕ್ತಿ; ಶವವಾಗಿ ಪತ್ತೆ

    Published

    on

    ಮಂಗಳೂರು:  ಬಡಗ ಎಡಪದವು ಚಟ್ಟೆ ಪಾದೆ ನಿವಾಸಿ ರಮೇಶ್ ಕುಲಾಲ್ (48) ಶನಿವಾರ (ಅ.5) ಗುರುಪುರದ ಫಲ್ಗುಣಿ ನದಿಗೆ ಹಾರಿದ್ದು, ನಿನ್ನೆ (ಅ.7) ಶವ ಪತ್ತೆಯಾಗಿದೆ.


    ಶನಿವಾರ ಸಂಜೆ ರಮೇಶ್ ಮನೆಯಿಂದ ನಾಪತ್ತೆಯಾಗಿದ್ದು, ಸಹೋದರ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ರವಿವಾರ ಅವರ ಮೊಬೈಲ್ ಹಾಗೂ ಪಾದರಕ್ಷೆ ಗುರುಪುರ ಸೇತುವೆ ಮೇಲೆ ಪತ್ತೆಯಾಗಿದ್ದ ಕಾರಣ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವುದಾಗಿ ಶಂಕಿಸಲಾಗಿತ್ತು.
    ಎಸ್‌ಡಿಆರ್‌ಡಫ್ ಮತ್ತು ಬಜಪೆ ಪೊಲೀಸರು ನದಿಯ ನೀರಿನಲ್ಲಿ ಶೋಧ ನಡೆಸುತ್ತಿದ್ದರು. ಮಂಗಳೂರಿನ ಇನ್‌ಲ್ಯಾಂಡ್ ಕಂಪನಿಯಲ್ಲಿ ಜೆಸಿಬಿ ಆಪರೇಟರ್ ಆಗಿದ್ದ ರಮೇಶ್ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
    ಬಡಮಿಜಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆ ಕಾಮಗಾರಿಗಾಗಿ ಭೂ ಸ್ವಾಧೀನ ಪ್ರಕ್ರಿಯೆಯ ಅನ್ವಯ ಲಭಿಸಿದ ಪರಿಹಾರ ಹನದ ವಿಷಯದಲ್ಲಿ ತಾಯಿ ಮತ್ತು ಸಹೋದರರೊಳಗೆ ಉಂಟಾದ ವಿಆದದಿಂದಾಗಿ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

    Continue Reading

    DAKSHINA KANNADA

    ಅಕ್ರಮ ಹಾಲುಮಡ್ಡಿ ಸಾಗಾಟ: ನಾಲ್ವರು ಆರೋಪಿಗಳ ಬಂಧನ

    Published

    on

    ಪುತ್ತೂರು : ರಕ್ಷಿತಾರಣ್ಯದಿಂದ ಹಾಲುಮಡ್ಡಿ ಸಂಗ್ರಹಿಸಿ ಸಾಗಿಸುತ್ತಿದ್ದ ಪ್ರಕರಣವನ್ನು ಪುತ್ತೂರು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 11 ಕೆ.ಜಿ. ಹಾಲುಮಡ್ಡಿ, ಮೇಣ ತೆಗೆಯಲು ಬಳಸಿದ ಸಲಕರಣೆ ಹಾಗೂ ಆಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ವಿಟ್ಲ ಸಮೀಪದ ಕೆದಿಲ ನಿವಾಸಿಗಳಾದ ಅಲಿ ಹೈದರ್‌, ಉಮ್ಮರ್‌ ಫಾರೂಕ್‌, ಮಹಮ್ಮದ್‌ ಹಸೈನಾರ್‌ ಮತ್ತು ಉಮ್ಮರ್‌ ಫಾರೂಕ್‌ ಬಂಧಿತ ಆರೋಪಿಗಳು.

    ಇದನ್ನೂ ಓದಿ : ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ಶ್ರೀಮುರಳಿ

    ವಿಟ್ಲ ಬಳಿಯ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಆರೋಪಿಗಳು ಹಾಲು ಮಡ್ಡಿ ಸಂಗ್ರಹಿಸಿ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ದಾಳಿ ಕಾರ್ಯಾಚರಣೆ ನಡೆಸಿದರು. ವಲಯ ಅರಣ್ಯಾಧಿಕಾರಿ ಕಿರಣ್‌ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯಾರಣ್ಯಾಧಿಕಾರಿ ವೀರಣ್ಣ, ಪ್ರಕಾಶ್‌ ಬಿ.ಟಿ., ಗಿರೀಶ್‌ ಎಚ್‌.ಪಿ., ಗಸ್ತು ಅರಣ್ಯಪಾಲಕ ಸತೀಶ್‌ ಡಿ’ಸೋಜಾ, ಚಾಲಕರಾದ ರಾಜೇಶ್‌, ತೇಜ ಪ್ರಕಾಶ್‌ ಮತ್ತು ಸಿಬಂದಿ ಭಾಗವಹಿಸಿದ್ದರು.

     

    Continue Reading

    DAKSHINA KANNADA

    ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದ ಶ್ರೀಮುರಳಿ

    Published

    on

    ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಚಿತ್ರ ನಟ ಶ್ರೀ ಮರಳಿ ಭೇಟಿ ನೀಡಿದರು. ಕ್ಷೇತ್ರದ ವತಿಯಿಂದ ಮುರಳಿ ಅವರನ್ನು ವೆಂಕಟರಮಣ ಆಸ್ರಣ್ಣ ದೇವರ ಶೇಷ ವಸ್ತ್ರ ಪ್ರಸಾದ ನೀಡಿ ಗೌರವಿಸಿದರು. ನಂತರ ಮಾತನಾಡಿದ ಶ್ರೀ ಮುರಳಿ ನವರಾತ್ರಿ ಶುಭ ಸಂದರ್ಭದಲ್ಲಿ ಕರಾವಳಿಯ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದೇನೆ, ಮುಂದಿನ ತಿಂಗಳು ನಾನು ಬಾಲ್ಯದಲ್ಲಿ ಕಟೀಲಿಗೆ ಭೇಟಿ ನೀಡಿದ್ದೇನೆ ಇದೀಗ ಮತ್ತೆ ಅವಕಾಶ ಸಿಕ್ಕಿದೆ, ಭಗೀರ ಚಿತ್ರ ಬಿಡುಗಡೆಯಾಗುತ್ತದೆ, ಕರಾವಳಿಯ ನಟರು ಕನ್ನಡ ಚಿತ್ರರಂಗ ದಲ್ಲಿ ಮಿನುಗುತ್ತಿದ್ದಾರೆ. ಈ ಬಗ್ಗೆ ಅತೀವ ಸಂತಸವಿದೆ, ತುಳು ಚಿತ್ರರಂಗ ಬೆಳೆಯುತ್ತಿದೆ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಕನ್ನಡ ಚಿತ್ರರಂಗದಂತೆ ತುಳು ಚಿತ್ರರಂಗವೂ ಮುಂದುವರಿಯಬೇಕು ಎಂದರು.

    ಕಟೀಲು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ದೇವಾಲಯ ಪಟ್ಟಣವಾಗಿದೆ. ಇದು ಮಂಗಳೂರಿನಿಂದ ಸುಮಾರು 26 ಕಿ.ಮೀ ದೂರದಲ್ಲಿದ್ದು ಹಿಂದೂ ಧರ್ಮದ ಪವಿತ್ರ ದೇವಾಲಯಗಳಲ್ಲೊಂದಾಗಿದೆ. ಇಲ್ಲಿಯ ಪ್ರಮುಖ ಆಕರ್ಷಣೆ ಶ್ರೀ ದುರ್ಗಾ ಪರಮೇಶ್ವರಿ ದೇವಾಲಯವಾಗಿದೆ. ಪವಿತ್ರವಾದ ನಂದಿನಿ ನದಿಯ ಮಧ್ಯದಲ್ಲಿ, ಐತಿಹಾಸಿಕ ದೃಶ್ಯಾವಳಿಗಳ ಒಳಗೊಂಡ ಹಚ್ಚ ಹಸಿರಿನ ವನಸಿರಿಯ ಮಧ್ಯೆ ಇರುವ ಪವಿತ್ರ ದೇವಾಲಯವಾಗಿದೆ.


    ಪವಿತ್ರ ಕ್ಷೇತ್ರ ಕಟೀಲು ಶ್ರೀ ದುರ್ಗಾಪರಮೇಶ್ವರಿ ಆಲಯದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿ ಉತ್ಸವದ ಭಾಗವಾಗಿ ‘ಲಲಿತ ಪಂಚಮಿ’, ‘ಮಹಾನವಮಿ’,’ವಿಜಯದಶಮಿ’ ಹಾಗೂ ‘ಮಧ್ವ ಜಯಂತಿ’ಯನ್ನು ಆಚರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ  ಅಭಿಲಾಷ್ ಶೆಟ್ಟಿ ಕಟೀಲು, ವಿಕೇಶ್ ಕೋಟ್ಯಾನ್ ಜಲ್ಲಿಗುಡ್ಡೆ, ಕಾರ್ತಿಕ್ ರಾವ್, ಮತ್ತಿತರರು ಭಾಗಿಯಾಗಿದ್ದರು.

    Continue Reading

    LATEST NEWS

    Trending