MANGALORE
ಬಿಜೆಪಿ ಕಾಲಿಗೆರಗಿದ ಪುತ್ತಿಲ ಪರಿವಾರ..ನೆನಪಾದ ‘ಸ್ವಾಭಿಮಾನಿ’ ಶಕು ಅಕ್ಕ…!
ರಾಜಕೀಯ ಲೆಕ್ಕಾಚಾರ ಏನೇ ಇದ್ರೂ, ಅಬ್ಬಿರಿದು ಬೊಬ್ಬಿರಿದ ಪುತ್ತಿಲ ಪರಿವಾರ ಬಿಜೆಪಿ ಮುಂದೆ ಮಂಡಿಯೂರಿದೆ. ಮೂರು ದಿನದ ಗಡುವು ನೀಡಿ ಮೂರು ವಾರಗಳ ಬಳಿಕ ಬಿಜೆಪಿಗೆ ಸ್ಪರ್ಧೆಯ ಎಚ್ಚರಿಕೆ ನೀಡಿದ ಪುತ್ತಿಲ ಪರಿವಾರ ಸದ್ಯಕ್ಕೆ ಮಕಾಡೆ ಮಲಗಿ ಬಿಜೆಪಿಗೆ ಶರಣು ಎಂದಿದೆ. ಇದೆ ವೇಳೆ ಬಹುತೇಕ ಪರಿವಾರದ ಕಾರ್ಯಕರ್ತರಿಗೆ ಶಕು ಅಕ್ಕನ ‘ಸ್ವಾಭಿಮಾನ’ ನೆನಪಾಗಿದೆ.
ಟಿಕೇಟ್ ಸಿಗದ ಅಸಮಾಧಾನ ಸಂಘವೇ ಡೋಂಟ್ ಕೇರ್…
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಲು ಅವಕಾಶ ಸಿಕ್ಕಿಲ್ಲ ಅಂತ ರಾಂಗ್ ಆಗಿದ್ದ ಪುತ್ತಿಲ, ಈಗ ಅದೇ ಪಕ್ಷದ ಎದುರು ಬೆಂಡಾಗಿದ್ದಾರೆ. ಪುತ್ತೂರಿನಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷೇತರನಾಗಿ ಸ್ಪರ್ಧೆ ಮಾಡಿ, ಸಂಘ ಪರಿವಾರಕ್ಕೆ ಪರ್ಯಾಯ ಪರಿವಾರ ಮಾಡಿದ ಪುತ್ತಿಲ ಇತ್ತೀಚೆಗೆ ಮತ್ತೆ ಪಕ್ಷ ಸೇರಲು ಮಾಡಿದ ಸರ್ಕಸ್ ಅಷ್ಟಿಷ್ಟಲ್ಲ. ಪುತ್ತೂರಿನಲ್ಲಿ ನಾವೇ ವಿರೋಧ ಪಕ್ಷ ಹಾಗಾಗಿ ನಮ್ಮ ಶರತ್ತು ಈಡೇರಿಸಿ ಅಂತ ಪುತ್ತಿಲ ಪರಿವಾರ ರಾಷ್ಟ್ರೀಯ ಪಕ್ಷವನ್ನೇ ಬ್ಲ್ಯಾಕ್ ಮೇಲ್ ಮಾಡಿತ್ತು. ಮಂಡಲ ಹಾಗೂ ಗ್ರಾಮಾಂತರ ಒಂದು ಮಾಡಿ ಅರುಣ್ ಪುತ್ತಿಲಗೆ ಅಧ್ಯಕ್ಷ ಸ್ಥಾನ ನೀಡಿ ಅನ್ನೋ ಬೇಡಿಕೆ ಕೂಡಾ ಇಟ್ಟಿತ್ತು. ಸಭೆ ನಡೆಸಿದ ಪರಿವಾರ ಮೂರು ದಿನದೊಳಗೆ ಉತ್ತರ ನೀಡಿ ಇಲ್ಲಾ ನಮ್ಮ ನಡೆ ನೋಡಿ ಅಂತಾನೂ ಎಚ್ಚರಿಸಿತ್ತು. ಆದ್ರೆ ಬಿಜೆಪಿ ಹಾಗೂ ಸಂಘ ಪರಿವಾರ ಯಾವುದಕ್ಕೂ ಸೊಪ್ಪು ಹಾಕಲೇ ಇಲ್ಲ. ಆದ್ರೆ ಇದೀಗ ಯಾವ ಶರತ್ತೂ ಇಲ್ಲದೆ ಪುತ್ತಿಲ ಪರಿವಾರ ಬಿಜೆಪಿಗೆ ಮಂಡಿಯೂರಿ ಜೈ ಅಂದಿದೆ.
ಪಕ್ಷೇತರನಾಗಿ ಸ್ಪರ್ಧಿಸೋ ಎಚ್ಚರಿಕೆ..ಬಾಲ ಮುದುರಿ ವಾಪಾಸ್..
ಎರಡು ವಾರಗಳ ಹಿಂದೆ ಪುತ್ತಿಲ, ಪಕ್ಷೇತರರಾಗಿ ಸ್ಪರ್ಧೆ ಮಾಡೋದಾಗಿ ಪರಿವಾರದ ಮುಖಂಡರು ಹೇಳಿಕೆ ನೀಡಿದ್ದರು. ಆದ್ರೆ ಯಾವಾಗ ಪಕ್ಷದ ಅಭ್ಯರ್ಥಿ ಬದಲಾಗಿ, ನಳೀನ್ ಬದಲು ಬ್ರಿಜೇಶ್ ಚೌಟ ಬಂದ್ರೋ ಪುತ್ತಿಲ ಪರಿವಾರ ಬಾಲ ಅಡಿಗೆ ಹಾಕಿಕೊಂಡಿದೆ. ನಾನಾ ಸರ್ಕಸ್ ಮಾಡಿ ಬಿಜೆಪಿ ಸೇರಲು ಪರಿವಾರದ ಎಲ್ಲರೂ ತುದಿಗಾಲಲ್ಲಿ ನಿಂತಿದ್ದಾರೆ. ಆದ್ರೆ ಪುತ್ತೂರಿನ ಬಿಜೆಪಿಯ ನೈಜ್ಯ ಕಾರ್ಯಕರ್ತರು, ನಾಯಕರು ಹಾಗೂ ಮಂಡಲದ ಪ್ರಮುಖರಿಗೆ ಪುತ್ತಿಲ ಸೇರ್ಪಡೆ ಸುತಾರಂ ಇಷ್ಟವಿಲ್ಲ. ಆದ್ರೆ ಬಿಜೆಪಿ ಬೇಡ ಬೇಡಾ ಅಂದ್ರೂ , ಪುತ್ತಿಲ ಪರಿವಾರ ಬೇಕೇ ಬೇಕು ಅಂತ ಬಿಜೆಪಿಯ ಕಾಲಿಗೆ ಬಿದ್ದು ಪಕ್ಷಕ್ಕೆ ಸೇರ್ಪಡೆಯಾಗಿದೆ. ಇದು ಬಿಜೆಪಿಯಲ್ಲೂ, ಪುತ್ತಿಲ ಪರಿವಾರದಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ.
ಪುತ್ತೂರು ಬಿಜೆಪಿಯಲ್ಲಿ ತಣಿಯದ ರೋಷಾಗ್ನಿ..
ಈ ಹಿಂದೆ ಪುತ್ತೂರಿನಲ್ಲಿ ಬಂಡಾಯ ಎದ್ದ ಶಕುಂತಳಾ ಶೆಟ್ಟಿ ಅವರನ್ನು ಸೋಲಿಸಿದ ಬಿಜೆಪಿಗರಿಗೆ, ಅರುಣ್ ಪುತ್ತಿಲ ಸೋಲಿನ ರುಚಿ ತೋರಿಸಿದ್ದರು. ಸ್ವಾಭಿಮಾನದಿಂದ ಪಕ್ಷ ತೊರೆದು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಶಕು ಅಕ್ಕ ಮತ್ತೆಂದೂ ಬಿಜೆಪಿ ಕಡೆ ತಿರುಗಿ ನೋಡಿಲ್ಲ. ಒಂದು ವೇಳೆ ತಿರುಗಿ ನೋಡಿದ್ರೂ ಪುತ್ತೂರಿನ ಪಕ್ಕಾ ಹಿಂದುತ್ವವಾದಿ ಬಿಜೆಪಿಗರು ಸ್ವೀಕರಿಸೋದು ಇಲ್ಲ. ಅದು ಗೊತ್ತಿದ್ದೇ ಶಕು ಅಕ್ಕ ಬಿಜೆಪಿ ಸಹವಾಸ ಬಿಟ್ಟು ಕಾಂಗ್ರೆಸ್ ಸೇರಿ ಅಲ್ಲೇ ಶಾಸಕಿ ಕೂಡಾ ಆದ್ರು. ಆದ್ರೆ ಪುತ್ತಿಲ ವಿಚಾರಕ್ಕೆ ಬಂದ್ರೆ ಕಥೆ ಬೇರೆನೆ ಇರೋ ಕಾರಣ, ಪುತ್ತೂರು ಬಿಜೆಪಿ ಕಛೇರಿಗೆ ಪುತ್ತಿಲ ಪ್ರವೇಶ ಮಾಡಬಾರದು ಅಂತ ಪುತ್ತೂರು ಮಂಡಲದ ಬಿಜೆಪಿ ನಾಯಕರು ಹೇಳಿದ್ದಾರೆ. ಹಾಗೊಂದು ವೇಳೆ ಪುತ್ತಿಲ ಕಛೇರಿ ಪ್ರವೇಶ ಮಾಡಿದ್ರೆ ಕಛೇರಿಗೆ ಬೆಂಕಿ ಹಾಕೋ ಎಚ್ಚರಿಕೆಯನ್ನು ನೀಡಿದ್ದಾರೆ.
ಪಕ್ಷ ಸೇರಿ ಪರಿವಾರಕ್ಕೆ ದಕ್ಕಿದ್ದೆನು ?
ಇಷ್ಟೆಲ್ಲಾ ವಿರೋಧ ಇದ್ರೂ ‘ಎಲ್ಲೂ ಸಲ್ಲದವನಾಗಬಾರದು ಅಂತ ಮಾನ ಮರ್ಯಾದೆ ಬಿಟ್ಟು ಪುತ್ತಿಲ ಬಿಜೆಪಿ ಸೇರಿದ್ದಾರೆ’ ಅಂತ ಬಿಜೆಪಿಗರೇ ಮಾತನಾಡುತ್ತಿದ್ದಾರೆ. ಕನಿಷ್ಟ ಪಕ್ಷ …ಪಕ್ಷ ಸೇರ್ಪಡೆಗೂ ಪುತ್ತೂರಿನಲ್ಲಿ ಅವಕಾಶ ಸಿಗದೆ, ಮಂಗಳೂರಿಗೆ ಬಂದು ಪಕ್ಷ ಸೇರ್ಪಡೆಯಾಗಿದ್ದಾರೆ ಅಂತ ಬಿಜೆಪಿಗರೇ ಲೇವಡಿ ಮಾಡುತ್ತಿದ್ದಾರೆ. ಒಟ್ಟಾರೆ ಸ್ವಾಭಿಮಾನಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದ ಪುತ್ತಿಲ… ಬಲವಿದ್ದರೂ ಬಲವಿಲ್ಲದ ಬಿಲ್ಲಿನಂತೆ ಬಿಜೆಪಿ ಎದುರು ನಡುಬಾಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಇದೆಲ್ಲದರ ನಡುವೆ ಶಕು ಅಕ್ಕನ ‘ಸ್ವಾಭಿಮಾನ’ ನೆನೆಪಿಸಿ ಕೆಲವರು ಪುತ್ತಿಲ ನಡೆಯ ಬಗ್ಗೆ ಟೀಕಿಸಿದ್ದಾರೆ.
DAKSHINA KANNADA
ಕುಳಾಯಿ ಜೆಟ್ಟಿಯ ಬ್ರೇಕ್ ವಾಟರ್ ಮರು ವಿನ್ಯಾಸಕ್ಕೆ ಶಾಸಕ ಡಾ.ಭರತ್ ಶೆಟ್ಟಿ ವೈ ಮನವಿ
ಕುಳಾಯಿ : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕುಳಾಯಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮೀನುಗಾರಿಕಾ ಬಂದರಿನ ವಿನ್ಯಾಸವನ್ನು ಪರಿಷ್ಕರಿಸಿ ಸರ್ವ ಋತು ಬಂದರು ಹಾಗೂ ಸುರಕ್ಷತೆಯ ಮೀನುಗಾರಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರಿಗೆ ಮನವಿ ಸಲ್ಲಿಸಿದರು.
ಉತ್ತರದ ಬ್ರೇಕ್ ವಾಟರ್ 831 ಮೀಟರ್ ಮತ್ತು ದಕ್ಷಿಣದ ಬ್ರೇಕ್ ವಾಟರ್ 262 ಮೀಟರ್ ಮಾಡಲಾಗುತ್ತಿದೆ. ಇದು ಸುರಕ್ಷತೆಯ ಮೀನುಗಾರಿಕೆಗೆ ಪೂರಕವಾಗಿಲ್ಲ. ಸಮುದ್ರದ ನೀರಿನ ರಭಸವನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗದೆ ನಾಡದೋಣಿ ಮೀನುಗಾರರಿಗೆ ತಮ್ಮ ದೋಣಿಯನ್ನು ದಡಕ್ಕೆ ತರಲು ಪೂರಕ ವಾತಾವರಣವಿಲ್ಲ.
ಇದನ್ನೂ ಓದಿ : WATCH : ಸೀಟಿಗಾಗಿ ಕಿಟಕಿಯಿಂದ ಬಸ್ ಹತ್ತಿದ ವಿದ್ಯಾರ್ಥಿ! ಆಮೇಲೇನಾಯ್ತು ಗೊತ್ತಾ!?
ಪ್ರಸ್ತುತ ಇರುವ ಉತ್ತರದ ಬ್ರೇಕ್ ವಾಟೆರ್ನ ಉದ್ದವನ್ನು 831 ರಿಂದ ಸರಾರಸರಿ 250 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 1081 ಮೀಟರ್ಗೆ ನಿಗದಿಪಡಿಸಿ, ದಕ್ಷಿಣದ ಬ್ರೇಕ್ ವಾಟರ್ ಉದ್ದ 262 ಮೀಟರ್ನಿಂದ 719 ಮೀಟರ್ ಹೆಚ್ಚಿಸಿ ಒಟ್ಟು ಉದ್ದ 981(ಅಳಿವೆ ಬಾಗಿಲಿನ ಅಗಲ ಅಂತರ 100 ಮೀಟರ್ ಮಾತ್ರ ಇರುವಂತೆ) ವಿನ್ಯಾಸವನ್ನು ಮರು ವಿನ್ಯಾಸಗೊಳಿಸಿ ಕಾಮಗಾರಿ ನಡೆಸಬೇಕು ಎಂದು ಮನವಿ ಮಾಡಿದ್ದಾರೆ. ಈ ವೇಳೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.
DAKSHINA KANNADA
ವಿದೇಶಿ ಹಡಗಿನಲ್ಲಿ ಬೆಂಕಿ ಅವಘಡ; ಕರ್ನಾಟಕ ಕರಾವಳಿಯಲ್ಲಿ ಲಂಗರು ಹಾಕಿದ ಕಾರ್ಗೋ ಹಡಗು
ಮಂಗಳೂರು: ಗುಜರಾತ್ನಿಂದ ಕೊಲಂಬೋಕ್ಕೆ ವಿವಿಧ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ವಿದೇಶಿ ಮೂಲದ ಸರಕು ಸಾಗಾಟ ಹಡಗಿನಲ್ಲಿ ಅಗ್ನಿ ಆಕಸ್ಮಿಕ ನಡೆದ ಘಟನೆ ಬೆಳಕಿಗೆ ಬಂದಿದೆ.
ಜುಲೈ 19 ರಂದು ಕರ್ನಾಟಕ ಕರಾವಳಿಯ ಸಮುದ್ರದಲ್ಲಿ ಈ ದುರ್ಘಟನೆ ನಡೆದಿದ್ದು, ಕೋಸ್ಟ್ ಗಾರ್ಡ್ ತಂಡ ಹೆಲಿಕಾಪ್ಟರ್ ಹಾಗೂ ರಕ್ಷಣಾ ಹಡಗಿನ ಮೂಲಕ ಸತತ ನಲುವತ್ತು ಘಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಹಡಗಿನಲ್ಲಿ ಒಟ್ಟು 21 ಸಿಬ್ಬಂದಿ ಇದ್ದು ಒಬ್ಬ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಹಡಗಿನ ಬೆಂಕಿ ನಂದಿಸಿ ಸಿಬ್ಬಂದಿಗಳ ರಕ್ಷಣೆ ಮಾಡಿದ ಬಳಿಕ ಹಡಗನ್ನು ಕರ್ನಾಟಕ ಕರಾವಳಿ ಭಾಗಕ್ಕೆ ತೆಗೆದುಕೊಂಡು ಬರಲಾಗಿದೆ. ಸದ್ಯ ಸುರತ್ಕಲ್ ಕಡಲ ಕಿನಾರೆಯಿಂದ ಸುಮಾರು 33 ನಾಟಿಕಲ್ ಮೈಲ್ ದೂರದಲ್ಲಿ ಹಡಗು ಲಂಗರು ಹಾಕಲಾಗಿದೆ. ಗುಜಾರಾತ್ನ ಮುಂದ್ರಾ ಬಂದರಿನಿಂದ ಹೊರಟಿದ್ದ ಈ ಹಡಗು ಪನಾಮ ದೇಶಕ್ಕೆ ಸೇರಿದ್ದಾಗಿ ಮಾಹಿತಿ ಲಭ್ಯವಾಗಿದೆ.
ಬೆಂಕಿ ಅವಘಡದಿಂದ ಸಂಪೂರ್ಣ ಹಾನಿಯಾಗಿರುವ ಹಡಗು ಅಪಾಯಕಾರಿ ಪರಿಸ್ಥಿತಿಯಲ್ಲಿದ್ದು, ಕೋಸ್ಟ್ ಗಾರ್ಡ್ ಸಿಬ್ಬಂದಿ ಹಡಗಿನ ಮೇಲೆ ನಿಗಾ ಇರಿಸಿದ್ದಾರೆ. ಹಡಗು ಮುಳುಗಡೆಯಾಗುವ ಸಾದ್ಯತೆಯ ಜೊತೆಗೆ ಹಡಗಿನಲ್ಲಿ ಮತ್ತೆ ಬೆಂಕಿ ಕಾಣಿಸಿಕೊಳ್ಳುವ ಸಂಭವ ಕೂಡಾ ಇದೆ. ಹೀಗಾಗಿ ಹಡಗು ಮುಳುಗಡೆಯಾದಲ್ಲಿ ಸಮುದ್ರಕ್ಕೆ ತೈಲ ಸೋರಿಕೆಯ ಆತಂಕ ಕೂಡಾ ಎದುರಾಗಿದೆ. ಹೀಗಾಗಿ ಹಡಗಿನ ಮೇಲೆ ನಿಗಾ ವಹಿಸಿರುವ ಕೋಸ್ಟ್ ಗಾರ್ಡ್ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.
DAKSHINA KANNADA
ದಕ್ಷಿಣ ಕನ್ನಡ ಜಿಲ್ಲೆಯ ಮಹಾಪ್ರವಾಹಕ್ಕೆ 50 ವರ್ಷ; ಮರುಕಳಿಸದಿರಲಿ ‘ಆ ಶುಕ್ರವಾರ’ ಎನ್ನುತ್ತಿದ್ದಾರೆ ಕರಾವಳಿಗರು!
ಮಂಗಳೂರು: 1974 ಜುಲೈ 26ರ ಶುಕ್ರವಾರ ರಾತ್ರಿ ಇಡೀ ಸುರಿದ ಭಾರೀ ಮಳೆ ಮುಂಜಾನೆಯ ವೇಳೆಗೆ ನೆರೆ ರೌದ್ರಾವತಾರ ತಾಳಿತ್ತು.
ಹಿಂದೆ ಎಂದೂ ಕಾಣದ ರೀತಿ ನೇತ್ರಾವತಿ ನದಿ ಉಕ್ಕಿ ಹರಿದಿತ್ತು. ನಸುಕಿನ ಜಾವ ನೇತ್ರಾವತಿ ನದಿ ಮನೆಯೊಳಗೆಯೇ ಪ್ರವೇಶಿಸಿತ್ತು.
ಬಂಟ್ವಾಳ ಪೇಟೆ, ಪಕ್ಕದೂರುಗಳಿಗೆ ಸಂಪರ್ಕಿಸುವ ರಸ್ತೆಗಳೆಲ್ಲವೂ ಕ್ಷಣಮಾತ್ರದಲ್ಲೆ ಜಲಮಯ. ಎಲ್ಲಿಗೆ ಹೋಗೋದು? ಏನು ಮಾಡೋದು ಅನ್ನೋದನ್ನು ಯೋಚಿಸುವಷ್ಟರಲ್ಲೇ ಊರಿಗೆ ಊರೇ ಮುಳುಗಿತ್ತು. ಬಂಟ್ವಾಳ ಮತ್ತು ಉಪ್ಪಿನಂಗಡಿ ಪೇಟೆಯಲ್ಲಿ ವಾಹನಗಳ ಬದಲು ದೋಣಿಗಳು ಸಂಚರಿಸಿದ್ದವು. ಆ ಕಾಲದಲ್ಲಿಯೇ ಐವತ್ತು ಲಕ್ಷ ರೂಪಾಯಿ ನಷ್ಟ ಉಂಟಾಗಿತ್ತು.
ಆ ಸಮಯದಲ್ಲಿ ಜಿಲ್ಲೆಯ ಬಹುತೇಕ ಪ್ರದೇಶಗಳು ನೆರೆ ನೀರಿನಿಂದ ಆವರಿಸಿದ್ದವು, ಆವತ್ತಿನ ಕಾಲದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ನೂರಾರು ಮನೆ ಅಂಗಡಿ ನೆರೆ ನೀರಿಗೆ ಕೊಚ್ಚಿಕೊಂಡು ಹೋಗಿದ್ದವು. ಈಗಲೂ ಕೂಡಾ ಆ ಭೀಕರ ನೆರೆಯು ನಮ್ಮ ಹಿರಿಯರ ಬಾಯಲ್ಲಿ (ಎಲ್ಪತ್ತ ನಾಲೆತ್ತ ಬೊಲ್ಲ) ಎಂದು ಪ್ರಖ್ಯಾತಿ ಹೊಂದಿದೆ.
ಕಾಕತಾಳೀಯ ಎಂಬಂತೇ ಪ್ರವಾಹದ ಆ ದಿನ, ವಾರ ಎಲ್ಲವೂ ಸೇಮ್ ಆಗಿದ್ದು, ಮತ್ತೆ ಅದೇ ರೀತಿಯ ಪ್ರವಾಹ ಪರಿಸ್ಥಿತಿಯೂ ನೇತ್ರಾವತಿ ತಟದಲ್ಲಿದೆ. ಈಗಾಗಲೇ ನೇತ್ರಾವತಿ ಅಪಾಯ ಮಟ್ಟ ಮೀರಿದ್ದು, ಈ ಆತಂಕಕ್ಕೆ ಕಾರಣವೂ ಆಗಿದೆ.
- LATEST NEWS4 days ago
ಗೀಸರ್ನಿಂದ ವಿಷಾನಿಲ ಸೋರಿಕೆ; ಇಹಲೋಕ ತ್ಯಜಿಸಿದ ತಾಯಿ, ಮಗ
- LATEST NEWS5 days ago
ಕಸದ ತೊಟ್ಟಿಯಲ್ಲಿ ಪತ್ತೆಯಾಯ್ತು ಲಕ್ಷಾಂತರ ರೂ. ಬೆಲೆ ಬಾಳುವ ವಜ್ರದ ನೆಕ್ಲೇಸ್
- LATEST NEWS7 days ago
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಕ್ರಿಕೆಟಿಗ
- DAKSHINA KANNADA2 days ago
ವಿಟ್ಲದ ಕಳೆಂಜಿಮಲೆ ರಕ್ಷಿತಾರಣ್ಯದಲ್ಲಿ ಅನೈತಿಕ ಚಟುವಟಿಕೆ; ಸಾರ್ವಜನಿಕರನ್ನು ನೋಡಿ ಕಾಲ್ಕಿತ್ತ ಜೋಡಿ
ಕನಸು
17/03/2024 at 9:38 AM
ಇದೆಲ್ಲಾ ಮೋದಿ, ಮೋದಿ ಮತ್ತು ಮೋದಿಗಾಗಿ ಎಂಬುದು ಲೇಖನ ಬರೆದವರಿಗೆ ನೆನಪಿರಲಿ. ಹಿಂದೂ ರಾಷ್ಟ್ರ ಕ್ಕಾಗಿ ಎಲ್ಲರೂ ತ್ಯಾಗ ಮಾಡಬೇಕು.