ಫೋಟೋ ತೆಗೆದು ಮರ್ಯಾದೆ ತೆಗೆಯುವುದಕ್ಕಿಂತ ಅವರು ಹಸಿವೆಯಲ್ಲೇ ಒದ್ದಾಡಲಿ ಬಿಡಿ.!
ಫೋಟೋ ತೆಗೆದು ಮರ್ಯಾದೆ ತೆಗೆಯುವುದಕ್ಕಿಂತ ಅವರು ಹಸಿವೆಯಲ್ಲೇ ಒದ್ದಾಡಲಿ ಬಿಡಿ.!
ಮಹಾಮಾರಿ ಕೊರೊನಾ ಬಂದ ಮೇಲಂತೂ ಜನಜೀವನ ಚೆಲ್ಲಾಪಿಲ್ಲಿಯಾಗಿದೆ. ಬಡವರಿಗೆ, ಕೂಲಿ ಕಾರ್ಮಿಕರಿಗೆ ಒಪ್ಪೊತ್ತಿನ ಊಟಕ್ಕೂ ಪರಿತಪಿಸುವ ಕಾಲ.
ಇಂತಹ ಸಮಯದಲ್ಲಿ ಕೆಲವರು ಸಹಾಯಹಸ್ತ ಚಾಚುವ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ತಮ್ಮ-ತಮ್ಮ ಪ್ರಚಾರದ ಗೀಳಿಗೆ ಬಡಪಾಯಿಗಳನ್ನು ಬಲಿಯಾಗಿಸುತ್ತಿದ್ದಾರೆ.
ಕೊಡೋದು ಜುಜಿಬಿ ಒಂದು ಕೆ.ಜಿ ಅಕ್ಕಿಯಾದರೂ ಹಂಚೋದು ಮಾತ್ರ ನೂರಾರು ವಾಟ್ಸಾಪ್ ಫೇಸ್ ಬುಕ್ ಗ್ರೂಪುಗಳಿಗೆ.
ಹಸಿವೆಯಿಂದ ಚುರುಗುಟ್ಟುತ್ತಿದ್ದ ಹೊಟ್ಟೆ ಹೊತ್ತುಕೊಂಡು ವಿಲವಿಲನೆ ಒದ್ದಾಡುತ್ತಿದ್ದ ಆ ಮನಸ್ಸು ಒಂದು ದಿನ ತಿಂದುಡು ಮಲಗಿ ಎದ್ದಾಗ ಬೆಳಗಾಗೊದ್ರೊಳಗೆ ಪಕ್ಕದ ಮನೆಯವರು ನಿಮಗೆ ಯಾರೋ ಅಕ್ಕಿ-ಬೇಳೆ-ಕಾಳು ನೀಡಿದ್ದಾರಲ್ವಾ.?.
ವಾಟ್ಸಾಪ್ ನಲ್ಲಿ ಪೋಟೋ ನೋಡಿದೆ ಅಂತ ಅಂದಾಗ, ಮೊದಲೇ ನೊಂದ ಆ ಮನಸ್ಸುಗಳಿಗೆ ಮತ್ತೆಷ್ಟು ಘಾಸಿಯಾಗಬೇಡ.
ಅವರ್ಯಾರೋ ಕೊಟ್ಟು ಹೋದ ಸಾಮಾಗ್ರಿ ಒಂದು ದಿನಕ್ಕೋ ಒಂದು ವಾರಕ್ಕೋ ಖಾಲಿಯಾಗಬಹುದು. ಆದ್ರೆ ಸುತ್ತಮುತ್ತಲಿನವರ ಗೇಲಿಮಾತು, ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಚಿತ್ರ ಅದೆಷ್ಟೋ ದಿನ ಚುಚ್ಚುತ್ತಿರುತ್ತೇ ಅಲ್ವಾ.?.
ಹೌದು.. ಕೊರೊನಾ ವೈರಸ್ ಎಂಬ ಮಹಾಮಾರಿ ದಿನ ಕಳೆಯುತ್ತಿದ್ದಂತೆ ಭೀಕರ ರೂಪ ಪಡೆಯುತ್ತಿದೆ.
ಬದುಕಿ ಉಳಿದರೆ ನಾಳೆ ಏನಾದರೂ ಮಾಡಬಹುದು. ಆದರೆ, ದೇಶದ ಆರ್ಥಿಕತೆಗಾಗಿ ಭಾರತೀಯರನ್ನು ಬಲಿ ಕೊಡಲಾರೆ ಎಂದು ಖುದ್ದು ಪ್ರಧಾನಿಯೇ ಕಠಿಣ ನಿರ್ಧಾರ ತೆಗೆದುಕೊಂಡು ಇಡೀ ದೇಶಕ್ಕೆ ಲಾಕ್ ಹಾಕಿ ಬಿಟ್ಟರು.
ಇದು ಕೆಲವರಿಗೆ ಮಜಾ ಮಾಡುವ ಸಮಯವಾದ್ರೆ, ಇನ್ನು ಕೆಲವರಿಗೆ ಈ ದಿನಗಳು ಒಪ್ಪೊತ್ತಿನ ಊಟಕ್ಕೂ ಪರದಾಡುವಂತೆ ಮಾಡಿತ್ತು. ಕೆಲಸವಿಲ್ಲ, ಹಣವಿಲ್ಲ ಜೊತೆಯಿದ್ದಿದ್ದು ಕೇವಲ ಕಣ್ಣೀರು ಮಾತ್ರ….
ಕಷ್ಟಪಟ್ಟು ಕೂಲಿನಾಲಿ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದ ಬಡಜೀವಗಳು ಸ್ವಾಭಿಮಾನಿಗಳೇ ಅಲ್ವಾ. ಭಿಕ್ಷಂದೇಹಿ ಅಂತ ಮನೆ ಮನೆ ಸುತ್ತಾಡಲು ಸಾಧ್ಯವಿಲ್ಲ ಅಲ್ಲವೇ.
ಯಾಕೆಂದರೆ ಅವರೆಲ್ಲಾ ಭಿಕ್ಷುಕರಲ್ಲ ಸ್ವಾಭಿಮಾನಿಗಳು. ಆದ್ರೆ ಈಗಿನ ಪರಿಸ್ಥಿತಿ ಒಪ್ಪೊತ್ತಿನ ಊಟಕ್ಕೆ ಸಂಕಟ ಪಡುವಂತೆ ಮಾಡಿದೆ.
ದೇವರು ನೀಡಿದ ಕೈಕಾಲುಗಳು ಬಲಿಷ್ಠವಾಗಿ ದುಡಿಯಲು ಸಮರ್ಥವಾಗಿದ್ರೂ ಭಾರತ ಲಾಕ್ ಡೌನ್ ಆಗಿ ಕೆಲಸವಿಲ್ಲ, ಇದೇ ಒಂದು ಕಾರಣ ಈ ಎಲ್ಲಾ ಅವಾಂತರಕ್ಕೆ ಕಾರಣ.
ಇವರೆಲ್ಲರ ಕಷ್ಟಗಳನ್ನು ಕಂಡು ಕೆಲವೊಂದಿಷ್ಟು ಮಂದಿ ನಿಸ್ವಾರ್ಥಿಗಳಾಗಿ ಯಾವ ಪ್ರಚಾರವನ್ನೂ ಬಯಸದೆ ದಾನ ಮಾಡಲು ಆರಂಭಿಸಿದ್ರೆ,
ಇದನ್ನು ಗಮನಿಸಿದ ಕೆಲವೊಂದಿಷ್ಟು ಶೋಕಿವಾಲಗಳು ತಾವೇನು ಕಮ್ಮಿಯಿಲ್ಲ ಎಂದು ತೋರಿಸಿಕೊಳ್ಳಲು ದಾನದ ಹೆಸರಿನಲ್ಲಿ ಪ್ರಚಾರ ಬಯಸಿದರು.
ನೀಡಿದ ಒಂದು ಕೆ.ಜಿ.ಅಕ್ಕಿಗೆ ಹತ್ತು ಫೊಟೋ ಕ್ಲಿಕ್ಕಿಸಿಕೊಂಡರು. ಆ ಅಕ್ಕಿಯನ್ನು ಪಡೆದು ತಿಂದುಂಡು ಮಲಗಿತು ಕುಟುಂಬ.
ಆ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿರುವಾಗ ಪಡೆದುಕೊಂಡ ಕುಟುಂಬ ಮತ್ತೆ ಹಸಿವಲ್ಲಿ ಒದ್ದಾಡುತ್ತಿತ್ತು.
ಇನ್ನು ಈ ಬಗ್ಗೆ ಟಿಕ್ ಟಾಕ್ ಕೂಡ ಬಂದಿದೆ. ಮನೆಯಲ್ಲಿ ತಿನ್ನಲೂ ಏನೂ ಉಳಿದಿಲ್ಲವಾದರೂ ಅವರ ಪ್ರಚಾರದ ಗೀಳಿಗೆ ಸಿಕ್ಕಿ ಬಲಿಯಾಗದಿರುವುದೇ ಉತ್ತಮ.
ಅಷ್ಟೇ ಅಲ್ಲದೇ ಕಿಟ್ ನೀಡುವಾಗ ಫೋಟೋ ತೆಗೆಯುವುದನ್ನು ಈಗಾಗಲೇ ರಾಜಸ್ಥಾನ ಬ್ಯಾನ್ ಮಾಡಿದೆ. ಅದು ನಮ್ಮ ರಾಜ್ಯದಲ್ಲೂ ಜಾರಿಯಾಗಬೇಕಿದೆ.
ಇತ್ತೀಚೆಗೆ ಪ್ರಾಯಕ್ಕೆ ಬಂದ ಹೆಣ್ಣುಮಗಳನ್ನು ನಿಲ್ಲಿಸಿ ತೆಗೆದ ಫೊಟೋ ಭಾರೀ ವೈರಲ್ ಆಗಿತ್ತು.
ಅದರ ಜೊತೆಗೆ ಆಕೆಯ ಮಾನ ಮರ್ಯಾದೆಯೂ ಹರಾಜಾಗಿತ್ತು. ಹಾಗಾಗಿ ಸಹಾಯ ಹಸ್ತ ಚಾಚುವ ನಿಮ್ಮೆಲ್ಲರಿಗೆ ಹೇಳುವುದೇನೆಂದರೆ, ‘ನೀವು ತೆಗೆದ ಆ ಒಂದು ಫೊಟೋ ಇಡೀ ಕುಟುಂಬದ ಸಾವಿಗೆ ಕಾರಣವಾಗಬಹುದು’.
‘ಮಾನ ಮರ್ಯಾದೆ ತೆಗೆದು ನೀವುಗಳೇ ಈ ರೀತಿ ಕೊಲೆ ಮಾಡುವುದಕ್ಕಿಂತ, ಅವರು ಹಸಿವೆಯಲ್ಲೇ ಒದ್ದಾಡಿ ಸ್ವಾಭಿಮಾನಿಗಳಾಗಿಯೇ ಸಾಯಲಿ ಬಿಡಿ…
DAKSHINA KANNADA
ಹಳ್ಳ ಹಿಡಿದ ಸ್ಮಾರ್ಟ್ ಸಿಟಿಯ ಕಾಮಗಾರಿ; ಕುಂಟುತ್ತಾ ಸಾಗಿದ ಮಹಾಕಾಳಿ ಪಡ್ಪು ಅಂಡರ್ ಪಾಸ್
ಮಂಗಳೂರು: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಂಡಿರುವ ಮಹಾಕಾಳಿ ಪಡ್ಪುವಿನ ರೈಲ್ವೇ ಅಂಡರ್ ಪಾಸ್ ಕಾಮಗಾರಿ ಸದ್ಯಕ್ಕಂತು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ಈ ಕಾಮಗಾರಿ ಕೈಗೆತ್ತಿಕೊಂಡು ವರ್ಷಗಳೇ ಕಳೆದರೂ ಕಾಮಗಾರಿ ಮುಗಿಸಬೇಕು ಅನ್ನೋ ಇಚ್ಚೆ ಸ್ಮಾರ್ಟ್ ಸಿಟಿ ಯೋಜನೆಯವರಿಗೂ ಇದ್ದಂತಿಲ್ಲ.
ಕೆಲ ತಿಂಗಳ ಹಿಂದೆ ಕಳಪೆ ಕಾಮಗಾರಿಯಿಂದಾಗಿ ಇಲ್ಲಿ ಕಾಮಗಾರಿ ಕುಸಿತ ಕೂಡಾ ಉಂಟಾಗಿತ್ತು. ಇದೀಗ ಕೆಲ ದಿನಗಳಿಂದ ಯಾವುದೇ ಕಾಮಗಾರಿ ನಡೆಸದೆ ಕಾರ್ಮಿಕರು ಕೂಡಾ ಕೆಲಸ ಇಲ್ಲದೆ ಸುಮ್ಮನೆ ಕುಳಿತಿರುವ ದೃಶ್ಯ ಇಲ್ಲಿ ಮಾಮೂಲಾಗಿದೆ. ಮಾರ್ಗನ್ ಗೇಟ್ ಮೂಲಕವಾಗಿ ಜೆಪ್ಪಿನ ಮೊಗೆರು ಹೈವೆ ಸಂಪರ್ಕಿಸುವ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದೆ. ಸದ್ಯ ಈ ಕಾಮಗಾರಿ ಆರಂಭವಾದ ಬಳಿಕ ಇಲ್ಲಿ ದ್ವಿಚಕ್ರ ವಾಹನಕ್ಕಷ್ಟೇ ಓಡಾಡಲು ವ್ಯವಸ್ಥೆ ಮಾಡಲಾಗಿದೆ.
ಉಪ್ಪಳದಲ್ಲಿ 3.5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶ; ಓರ್ವ ಬಂಧನ
ಹೀಗಾಗಿ ಈ ರಸ್ತೆಯ ಮೂಲಕ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕಾಮಗಾರಿ ಯಾವಾಗ ಮುಗಿಸ್ತೀರಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇಲ್ಲಿ ನಡಿಯುತ್ತಿರುವ ಕಾಮಗಾರಿಯ ವೇಗ ನೋಡಿದರೆ ಇದು 2024 ರಲ್ಲಿ ಪೂರ್ಣಗೊಳ್ಳುವ ಯಾವುದೇ ಲಕ್ಷಣ ಇಲ್ಲ ಅನ್ನೋದು ಸ್ಪಷ್ಟವಾಗುತ್ತಿದೆ. ಹೀಗಾಗಿ ತಕ್ಷಣ ಅಂಡರ್ ಪಾಸ್ ಕೆಲಸ ಮಗಿಸಿ ಅಂತ ಜನ ಒತ್ತಾಯಿಸಿದ್ದಾರೆ.
LATEST NEWS
11 ವರ್ಷದ ಬಾಲಕ ಹೃದಯಘಾ*ತಕ್ಕೆ ಬ*ಲಿ
ಹಾಸನ : ಹೃದಯಾಘಾ*ತ ಎಂಬುದು ಇತ್ತೀಚೆಗೆ ಸಾಮಾನ್ಯವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೂ ಹೃದಯಾ*ಘಾತಕ್ಕೆ ಒಳಗಾಗುತ್ತಿದ್ದಾರೆ. ರಾಜ್ಯದಲ್ಲಿ ಮತ್ತೊಂದು ಕಳವಳಕಾರಿ ಘಟನೆ ನಡೆದಿದ್ದು, 11 ವರ್ಷದ ಬಾಲಕ ಹೃದಯಾ*ಘಾತಕ್ಕೆ ಬ*ಲಿಯಾಗಿದ್ದಾನೆ. ಈ ಘಟನೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಚನ್ನಾಪುರ ಗ್ರಾಮದಲ್ಲಿ ನಡೆದಿದೆ. ಸಚಿನ್ ಮೃ*ತ ಬಾಲಕ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ ಸಚಿನ್, ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ಹೃದಯಾ*ಘಾತವಾಗಿದೆ.
ಇದನ್ನೂ ಓದಿ : ಮನೆಯಲ್ಲಿ ಹಲ್ಲಿ ಕಾಟವೇ? ಈ ಸಿಂಪಲ್ ಮನೆಮದ್ದು ಟ್ರೈ ಮಾಡಿ
ಟಿವಿ ನೋಡುತ್ತಲೇ ಕುಸಿ*ದು ಬಿದ್ದ ಮಗನನ್ನು ಮಾತನಾಡಿಸಲು ಮನೆಯವರು ಪ್ರಯತ್ನಿಸಿದ್ದು, ಏನು ಮಾತನಾಡದೆ ಇರೋದನ್ನು ಗಮನಿಸಿ ಪೋಷಕರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಲೂಕು ಸರ್ಕಾರಿ ಆಸ್ಪತ್ರೆಗೆ ಕರೆತರುವ ಮುನ್ನವೇ ಬಾಲಕ ಸಾ*ವನ್ನಪ್ಪಿದ್ದ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.
FILM
ಕನ್ನಡದ ಸೀರಿಯಲ್ನಲ್ಲಿ ಮಿಂಚುತ್ತಿರುವ ಉಡುಪಿಯ ಬೆಡಗಿ
ಬೆಂಗಳೂರು/ಮಂಗಳೂರು: ಸಿನೆಮಾದಲ್ಲಿ ನಟಿಸಬೇಕು ಅನ್ನೋದು ಎಲ್ಲರ ಕನಸು. ಆದರೆ ಇಲ್ಲೊಬ್ಬಾಕೆ ನಟಿಗೆ ಸೀರಿಯಲ್ನಲ್ಲಿ ನಟಿಸಬೇಕು ಎಂಬ ಆಸೆ. ಆದರೆ ಆಕೆಗೆ ಮಾತ್ರ ಮೊದಲು ಒಲಿದು ಬಂದಿದ್ದು ಸಿನೆಮಾದಲ್ಲಿ ನಟಿಸುವ ಅವಕಾಶ. ಇದೀಗ ಆ ನಟಿ ಸುರ್ವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅವನು ಮತ್ತು ಶ್ರಾವಣಿ’ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು, ಈ ಧಾರಾವಾಹಿಯಲ್ಲಿ ಶ್ರಾವಣಿಯಾಗಿ ಕಾಣಿಸಿಕೊಂಡಿರುವ ಇಶಿಕಾ ಶೆಟ್ಟಿಗಾರ್ ಮೂಲತಃ ಉಡುಪಿಯವರಾಗಿದ್ದಾರೆ.
ಶ್ರಾವಣಿ ಪಾತ್ರದ ಇಶಿಕಾ ಶೆಟ್ಟಿಗಾರ್ ಮೂಲತಃ ಉಡುಪಿಯವರಾಗಿದ್ದು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಈಕೆ 9 ನೇ ತರಗತಿಯಲ್ಲಿದ್ದಅಗಲೇ ಸಿನೆಮಾ ನಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಊರ್ವಿ, ಗರುಡ, ಮನದ ಮರೆಯಲಿ ಸೇರಿದಂತೆ ನಾಳ್ಕೈದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಬಳಿಕ ಕಾನೂನು ಪದವಿ ಮುಗಿಸಿರುವ ಇವರು ಸೀರಿಯಲ್ ನಲ್ಲಿ ಆಭಿನಯಿಸುವತ್ತ ಒಲವು ಮಾಡಿದ್ದಾರೆ. ಹೀಗಾಗಿ ಲುಕ್ ಟೆಸ್ಟ್ ಕೂಡಾ ಕೊಟ್ಟಿದ್ದಾರೆ.
ಜಾನಿ ಮಾಸ್ಟರ್ ಪತ್ನಿಗೂ ಬಂತು ಕಂಟಕ..! ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್..!!
ಇದೇ ವೇಳೆ ‘ಅವನು ಮತ್ತು ಶ್ರಾವಣಿ’ ಧಾರಾವಾಹಿಗೆ ರಿಪ್ಲೇಸ್ಮೆಂಟ್ ಪಾತ್ರಕ್ಕೆ ಕರೆ ಬರುತ್ತದೆ. ರಿಪ್ಲೇಸ್ಮೆಂಟ್ ಪಾತ್ರ ಆಗಿದ್ದರಿಂದ ಜನರಿಗೆ ಇಷ್ಟ ಆಗ್ಬೋದಾ ಅನ್ನುವ ಮೈಂಡ್ ಸೆಟ್ ನಲ್ಲಿ ಇವರು ಕೊನೆಗೂ ಪಾತ್ರಕ್ಕೆ ಸೈ ಎಂದು ಹೇಳಿದ್ದಾರೆ. ಇದೀಗ ಧಾರಾವಾಹಿ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಈ ಧಾರಾವಾಹಿಯಲ್ಲಿ ನಟನೆ ಆರಂಭಿಸಿದ ಮೇಲೆ ಆಫರ್ಗಳು ಬರುತ್ತಿದೆ ಎಂದು ಇಶಿಕಾ ಶೆಟ್ಟಿಗಾರ್ ಹೇಳಿದ್ದಾರೆ.