Connect with us

    DAKSHINA KANNADA

    ಬ್ರೇಕ್ ಫೇಲ್ ಆಗಿ ದ್ವಿಚಕ್ರ ವಾಹನಕ್ಕೆ ಲಾರಿ ಡಿ*ಕ್ಕಿ; ಓರ್ವ ಸಾ*ವು

    Published

    on

    ಮಂಗಳೂರು/ಆನೇಕಲ್ ದ್ವಿಚಕ್ರ ವಾಹನಕ್ಕೆ ಲಾರಿ ಡಿ*ಕ್ಕಿ ಹೊಡೆದು, ಸವಾರ ಸ್ಥಳದಲ್ಲಿಯೇ ಮೃ*ತಪಟ್ಟಿರುವ ಘಟನೆ ತಮಿಳುನಾಡು ಗಡಿ ಪ್ರದೇಶವಾದ ಹೊಸೂರು ಸಮೀಪದ ಸೂಳಗಿರಿ ಬಳಿ ನಡೆದಿದೆ. ಆನೇಕಲ್ ತಾಲೂಕಿನ ರಾಚಮಾನಹಳ್ಳಿಯ ನಿವಾಸಿ ಅರ್ಚಕ ಶ್ರೀನಿವಾಸ್ ಮೃ*ತ‌ ದುರ್ದೈವಿ.

    ದೇವಾಲಯದ ಅರ್ಚಕರಾಗಿದ್ದ ಶ್ರೀನಿವಾಸ್, ಪೂಜೆಯ ನಿಮಿತ್ತ ಬೈಕ್‌ ಮೂಲಕ ಆನೇಕಲ್‌ನಿಂದ ಹೋಗುತ್ತಿದ್ದರು. ಈ ವೇಳೆ ತಮಿಳುನಾಡಿನ ಲಾರಿಯೊಂದರ ಬ್ರೇಕ್ ಫೇಲ್ ಆಗಿ ಹೆದ್ದಾರಿಯಿಂದ ಡಿವೈಡರ್ ದಾಟಿಕೊಂಡು ಬಂದು ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಶ್ರೀನಿವಾಸ್ ಅವರ ವಾಹನಕ್ಕೆ ಡಿ*ಕ್ಕಿ ಹೊಡೆದಿದೆ. ಪರಿಣಾಮ ಶ್ರೀನಿವಾಸ್ ಸ್ಥಳದಲ್ಲಿಯೇ ಮೃ*ತಪಟ್ಟರೆ, ರಾಘವೇಂದ್ರ ಎಂಬುವವರಿಗೆ ಗಂಭೀರ ಗಾ*ಯವಾಗಿದೆ.

    ಇದನ್ನೂ ಓದಿ : ಖಾಸಗಿ ಬಾಹ್ಯಾಕಾಶ ನಡಿಗೆ ಯಶಸ್ವಿ; ಸುರಕ್ಷಿತವಾಗಿ ಭೂಮಿಗೆ ಮರಳಿದ ಗಗನಯಾತ್ರಿಗಳು

    ಅಪಘಾ*ತದ ರಭಸಕ್ಕೆ ಬೈಕ್‌ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಸೂಳಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮ*ರಣೋತ್ತರ ಪರೀಕ್ಷೆಗಾಗಿ ಮೃ*ತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಹೊಸ ಮುಖ ಪ್ರತಿಭೆ ; ಯಕ್ಷಗಾನ ಯುವ ಕಲಾವಿದ ‘ಅಕ್ಷಯ್ ಭಟ್ ಮೂಡುಬಿದ್ರೆ’

    Published

    on

    ಜೀವನದಲ್ಲಿ ಯಾವಾಗಲೂ ಉತ್ತಮ ವ್ಯಕ್ತಿಗಳನ್ನು ಮಾದರಿಯಾಗಿ ಇಟ್ಟುಕೊಳ್ಳುವುದು ಸಾಮಾನ್ಯ. ಅದೇನೋ ಇಂತಹವರೇ ಆಗಬೇಕೆಂದಿಲ್ಲ , ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಯಲ್ಲೂ ಅಸಾಮಾನ್ಯ ಶಕ್ತಿ ಇರುವುದನ್ನು ನಾವು ಕಾಣುತ್ತೇವೆ. ಅದ್ಯಾಕೋ ಗೊತ್ತಿಲ್ಲ ನನ್ನ ಜೀವನದಲ್ಲಿ ತುಂಬಾ ಪ್ರಭಾವ ಬೀರಿದ ವ್ಯಕ್ತಿ ಎಂದರೆ ಅದು ‘ಅಕ್ಷಯ್ ಭಟ್ ಮೂಡುಬಿದ್ರೆ’.

    ಹುಟ್ಟಿದ್ದು 24.4.1997 ರಂದು ಮೂಡಬಿದ್ರೆಯಲ್ಲಿ. ತಿನ್ನುವುದಕ್ಕೂ ಕಷ್ಟವಿದ್ದ ಸಮಯದಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡು ಪದವಿ ಶಿಕ್ಷಣ ಮುಗಿಸಿದರು. ಯಕ್ಷಗಾನದಲ್ಲಿ ಆಸಕ್ತಿ ಹೆಚ್ಚಾಗಿ ಯಕ್ಷಗಾನ ಕಲೆಯತ್ತ ಸಾಗಿದರು. ನಿರಂತರ ಪರಿಶ್ರಮದಿಂದ 4 ಜನರಿಗೆ ಪರಿಚಯವಾಗುವಷ್ಟು ಬೆಳೆದಿದ್ದಾರೆ. ಜೊತೆಗೆ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದ, ಪಿತ್ರಾರ್ಜಿತವಾದ ಯಾವುದೇ ಆಸ್ತಿಯು ದೊರಕದ ಕಾರಣ ತಾನೇ ಶಿರ್ತಾಡಿಯಲ್ಲಿ ಜಾಗ ತೆಗೆದು ಮನೆಯನ್ನು ಕಟ್ಟಿ ಸತತ 8 ತಿಂಗಳಿಂದ ತಂದೆ ತಾಯಿಯೊಂದಿಗೆ ಹೊಸ ಮನೆಯಲ್ಲಿ ವಾಸವಿದ್ದಾರೆ. ಇಂತಹ ಜೀವನ ದೊರಕುವುದಕ್ಕೆ ಮೂಲ ಕಾರಣ ಯಾವುದು ಎಂದು ಕೇಳಿದರೆ “ಕಟೀಲು ದುರ್ಗಾಪರಮೇಶ್ವರಿ ಅಮ್ಮನ ಅನುಗ್ರಹ ಹಾಗೂ ತಂದೆ ತಾಯಿಯ ಆಶೀರ್ವಾದ ಮತ್ತು ಪ್ರೋತ್ಸಾಹ” ಎಂದು ಹೇಳುತ್ತಾರೆ.

    ಎಳವೆಯ ಪ್ರಾಯದಿಂದಲೂ ಕಷ್ಟದ ಜೀವನವನ್ನು ಸಾಗಿಸಿ. ತನ್ನನ್ನು ಹಾಗೂ ತನ್ನ ತಂದೆ ತಾಯಿಯನ್ನು ಆಡಿಕೊಂಡವರ ಬಾಯಲ್ಲಿ ಹೊಗಳಿಸಿಕೊಳ್ಳಬೇಕೆಂಬ ಹಠದಿಂದ ಪದವಿ ಶಿಕ್ಷಣ ಮುಗಿಸಿ ತದನಂತರ ಹನುಮಗಿರಿ ಮೇಳದಲ್ಲಿ 3 ವರ್ಷ ತಿರುಗಾಟ ಮಾಡಿ,  ಪ್ರಸ್ತುತ ಕಟೀಲು ಮೇಳದಲ್ಲಿ 8ನೇ ವರ್ಷದ ತಿರುಗಾಟದಲ್ಲಿದ್ದಾರೆ. ಆವತ್ತು ಯಾರೆಲ್ಲ ತಮ್ಮ ಪರಿಸ್ಥಿತಿಯನ್ನು ಕಂಡು ನಕ್ಕು ಅಪಹಾಸ್ಯ ಮಾಡುತ್ತಿದ್ದರೋ, ಈಗ ಅವರೇ ಹೊಗಳುತ್ತಿದ್ದಾರೆ.  . ಸಾಧನೆಗೆ ಕೊನೆ ಇಲ್ಲ ಹಾಗಾಗಿ ಸಾದಿಸಿದ್ದು ಏನು ಇಲ್ಲ ಇನ್ನಷ್ಟು ಸಾಧನೆಯನ್ನು ಮಾಡಿ ಯಕ್ಷಗಾನ ಕ್ಷೇತ್ರದಲ್ಲಿ ಉತ್ತಮ ಕಲಾವಿದನಾಗಿ ಬೆಳೆಯಬೇಕು ಎಂಬುವುದು ಅವರ ಆಲೋಚನೆ.


    ಯಾವ ಪಾತ್ರಕ್ಕೂ ಅಕ್ಷಯ್ ‘ಸೈ’ ಎಂಬಂತೆ ಬಹು ಕ್ರಿಯಾಶೀಲ , ಪ್ರತಿಭಾನ್ವಿತ ಗುಣ ಹೊಂಂದಿದ್ದು, ಅವರ ಮುಖದ ಲವಲವಿಕೆ , ಸದಾ ಉತ್ಸಾಹಿ ಭಾವವೇ ಬಹು ಆಕರ್ಷಣೀಯವಾಗಿಹುದು. ಅತೀ ಸಣ್ಣ ಪ್ರಾಯದಲ್ಲೇ ಯಕ್ಷಗಾನ ರಂಗದಲ್ಲಿ ತಮ್ಮ ಛಾಯಪ್ರಭಾವ ಬೀರುತ್ತಿದ್ದಾರೆ. ಯಾರ ಹಂಗೂ ಇಲ್ಲದೆ ಸ್ವತಂತ್ರ್ಯವಾಗಿ ತಮ್ಮ ಕುಟುಂಬದೊಂದಿಗೆ ದಿನ ಕಳೆಯುತ್ತಾ, ದುರ್ಗಾಮಾತೆ ಸೇವೆಯೊಡನೆ, ವ್ಯವಹಾರವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಅಕ್ಷಯ್‌ನಂತ ಅನೇಕ ಕಲಾವಿದರು ನಮ್ಮ ನಿಮ್ಮ ನಡುವೆಯೇ ಇದ್ದಾರೆ ಆದರೆ ಅವರನ್ನು ಗುರುತಿಸುವಲ್ಲಿ ನಾವು ಸೋತಿದ್ದೇವಷ್ಟೇ.

    ಬರಹ : ಅಶ್ವಿತಾ ಭಟ್

    Continue Reading

    DAKSHINA KANNADA

    ಮೌನದ ಪಯಣ

    Published

    on

    ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಹೊರಟಾಗ ಕಷ್ಟ, ಅನುಮಾನ , ಸೋಲು ಉಂಟಾಗುವುದು ಸಹಜ. ಹಾಗೆಂದು ಅದಕ್ಕೆ ಹೆದರಿ ನಾವು ಇಟ್ಟ ಹೆಜ್ಜೆಯ ಹಿಂದಿಡಬಾರದು. ಎದುರಾಗುವ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗಿ ಗೆಲುವಿನ ಪತಾಕೆಯ ಎತ್ತಿ ಹಾರಿಸಬೇಕು.

    ಗೆಲುವು ದೊರೆತಾದ ಮೇಲೆ ನಾವು ಬಂದ ದಾರಿಯ ಮರೆಯಬಾರದು, ಜೊತೆಗೆ ಇದ್ದು ಸಹಕರಿಸಿದ ವ್ಯಕ್ತಿಯನ್ನು ಮರೆಯಬಾರದು. 99% ಪರಿಶ್ರಮದ ಮೇಲೆ 1% ಅದೃಷ್ಟ ಅವಲಂಬಿತವಾಗಿರುತ್ತದೆ. ಗೆದ್ದಾಗ ಅತಿಯಾಗಿ ಹಿಗ್ಗದೆ, ಸೋತಾಗ ಅತಿಯಾಗಿ ಕುಗ್ಗದೆ ಎರಡನ್ನೂ ಸಮ ಮನಸ್ಸಿನಿಂದ ಸ್ವೀಕರಿಸಬೇಕು. ಒಮ್ಮೆಲೇ ಗೆಲ್ಲುವು ಸಲ್ಲದು ಹಾಗೆಂದು ಪ್ರಯತ್ನ ಪಡದೆ ಸುಮ್ಮನೆ ಇರಬಾರದು. ಪ್ರತಿಯೊಂದರಿಂದಲೂ ಪಾಠ ಕಲಿತು ತಿದ್ದುತ್ತಾ ಸಾಗುತ್ತಿರಬೇಕು. ಜನರ ಮಾತಿಗೆ ಕಿವಿಗೊಡದೆ ನಮ್ಮ ಪಾಡಿಗೆ ನಮ್ಮ ಪಥದಿ ನಾವು ಸಾಗುತ್ತಿರಬೇಕು.

    ನೀನು ಏನೇ ಮಾಡಿದರೂ ಆಡಿಕೊಳ್ಳುವ ಸಮಾಜ ಇದು. ಜನರ ಬಾಯಿಗೆ ಸಿಗದೆ ಹೋಗುವುದು ಅಸಾಧ್ಯ ಹಾಗಾಗಿ ಆ ಕಡೆ ಲಕ್ಷ್ಯ ವಹಿಸದೆ ದೃಷ್ಟಿಯ ಕೇವಲ ಗುರಿ ಕಡೆ ಮಾತ್ರ ಇಡು. ಸಾಗುವ ದಾರಿಯಲ್ಲಿ ನೀ ಒಬ್ಬಂಟಿ ಎನಿಸಿದರೂ ಪರವಾಗಿಲ್ಲ ಮೌನದಿ ನಿನ್ನ ಪಯಣ ಬೆಳೆಸು.

     

    ಬರಹ : ಅಶ್ವಿತಾ ಭಟ್

    Continue Reading

    DAKSHINA KANNADA

    ಕೂಳೂರಿನ ಹಳೆ ಸೇತುವೆಯಲ್ಲಿ ಭೀಕರ ಅಪಘಾತ; ಓರ್ವ ಸಾ*ವು

    Published

    on

    ಮಂಗಳೂರು : ಕೂಳೂರಿನ ಹಳೆ ಸೇತುವೆಯಲ್ಲಿ ಲಾರಿ ಹಾಗೂ ಸ್ಕೂಟರ್ ನಡುವೆ ಅಪ*ಘಾತ ಸಂಭವಿಸಿ ಓರ್ವ ವ್ಯಕ್ತಿ ಮೃ*ತ ಪಟ್ಟಿದ್ದಾನೆ. ಸ್ಕೂಟರ್‌ನಲ್ಲಿದ್ದ ಮತ್ತೋರ್ವ ಗಂಭೀ*ರ ಗಾಯಗೊಂಡಿದ್ದು, ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಲಾರಿ ಸ್ಕೂಟರ್‌ಗೆ ಡಿ*ಕ್ಕಿ ಹೊಡೆದಿದೆ ಎನ್ನಲಾಗಿದೆ. ಮೊದಲೇ ಶಿಥಿಲವಾಸ್ಥೆಯಲ್ಲಿ ಇರುವ ಈ ಸೇತುವೆಯಲ್ಲಿ ವೇಗವಾಗಿ ಲಾರಿ ಚಲಾಯಿಸಿದ ಕಾರಣ ಈ ಅಪಘಾ*ತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

    ಇದನ್ನೂ ಓದಿ : ಬೆಳ್ಳುಳ್ಳಿಯನ್ನು ಹೀಗೆ ಸಂಗ್ರಹಿಸಿಟ್ಟರೆ ತಿಂಗಳಾದ್ರೂ ತಾಜಾವಾಗಿರುತ್ತೆ

    ಅಪಘಾ*ತದಿಂದ ಸ್ಕೂಟರ್ ಸವಾರ ಸ್ಥಳದಲ್ಲೇ ಮೃ*ತಪಟ್ಟ ಕಾರಣ ಕೆಲ ಕಾಲ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸರು ಮೃ*ತದೇಹವನ್ನು ಆಸ್ಪತ್ರೆಗೆ ರವಾನಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಸ್ಕೂಟರ್ ಸವಾರರು ಯಾರು ಅನ್ನೋ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.

    Continue Reading

    LATEST NEWS

    Trending