kerala
ಕೇರಳ ಲಾಟರಿಯಲ್ಲಿ ಬೀದಿ ವ್ಯಾಪಾರಿ ಮಹಿಳೆಗೆ 1 ಕೋಟಿ ರೂ ಬಂಪರ್..!! ಖದೀಮ ಟಿಕೆಟ್ ಮಾರಾಟಗಾರ ಅಂದರ್..! ನಡೆದಿದ್ದೇನು?
ತಿರುವನಂತಪುರಂ/ ಮಂಗಳೂರು: ತಿರುವನಂತಪುರಂ ಮ್ಯೂಸಿಯಂ ಜಂಕ್ಷನ್ನಲ್ಲಿರುವ 72 ವರ್ಷದ ಬೀದಿಬದಿ ವ್ಯಾಪಾರಿ ಸುಕುಮಾರಿಯಮ್ಮ ಅವರಿಗೆ ಈ ಬಾರಿಯ ಕೇರಳ ರಾಜ್ಯದ ಲಾಟರಿಯಲ್ಲಿ ಪ್ರಥಮ ಬಹುಮಾನ 1 ಕೋಟಿ ರೂಪಾಯಿ ಒಲಿದಿದೆ. ಇದೇ ವೇಳೆ ಈ ಲಾಟರಿ ಟಿಕೆಟನ್ನು ತನ್ನದಾಗಿಸಿ ಲಾಟರಿ ಹಣವನ್ನು ಪಡೆಯಲು ಸುಳ್ಳಿನ ಕಥೆ ಹೆಣೆದು ಮಹಿಳೆಗೆ ವಂಚಿಸಲು ಯತ್ನಿಸಿದ ಲಾಟರಿ ಟಿಕೆಟ್ ಮಾರಾಟಗಾರ ಕಣ್ಣನ್ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪೊಲೀಸರ ಸಹಕಾರದಿಂದ ಸುಕುಮಾರಿಯಮ್ಮ ಅವರು ಲಾಟರಿ ಹಣವನ್ನು ಪಡೆಯುವ ಆಶಾವಾದ ಹೊಂದಿದ್ದಾರೆ.
ಮ್ಯೂಸಿಯಂ ಮತ್ತು ಮೃಗಾಲಯ ಇಲಾಖೆಯಲ್ಲಿ ಸ್ವೀಪರ್ ಆಗಿ ನಿವೃತ್ತರಾದ ಸುಕುಮಾರಿಯಮ್ಮ ಕೆಲವು ವರ್ಷಗಳಿಂದ ಮ್ಯೂಸಿಯಂ ಜಂಕ್ಷನ್ ಬಳಿ ಬೀದಿ ವ್ಯಾಪಾರ ನಡೆಸುತ್ತಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಾಗಿರುವ ಆಕೆ ಸ್ವಂತ ನಿವೇಶನವನ್ನು ಹೊಂದಿ ಮನೆ ಕಟ್ಟಿಸ ಬೇಕೆಂಬ ಕನಸು ಕಾಣುತ್ತಿದ್ದರು. ಇದಕ್ಕೆ ಬೇಕಾದ ಹಣವನ್ನು ಹೊಂದಿಸಲು ಪ್ರಾರ್ಥಿಸಿ ಹಲವು ಸಮಯದಿಂದ ಲಾಟರಿ ಟಿಕೆಟ್ ಖರೀದಿಸುತ್ತಿದ್ದರು. ಮೇ 14 ರಂದು 1,200 ರೂಪಾಯಿ ಕೊಟ್ಟು ಒಂದೇ ಸರಣಿಯ 12 ಟಿಕೆಟ್ಗಳನ್ನು ಖರೀದಿಸಿದ್ದರು.
ಮಹಿಳೆಗೆ ಚಳ್ಳೆಹಣ್ಣು ತನ್ನಿಸಿ.. ಸಿಹಿ ಹಂಚಿದ ಭೂಪ..!!
ಮೇ 15 ರಂದು ನಡೆದ ಡ್ರಾದಲ್ಲಿ ಅದೃಷ್ಟ ಒಲಿದಿದ್ದು, ಪ್ರಥಮ ಬಹುಮಾನ 1 ಕೋಟಿ ರೂ. ಮತ್ತು ಸಮಾಧಾನಕರ ಬಹುಮಾನ 8000 ರೂ. ಆಕೆಯ ಟಿಕೆಟ್ ಗಳಿಗೆ ಲಭಿಸಿತ್ತು. ಆದರೆ ಆಕೆಗೆ ಟಿಕೆಟ್ ಮಾರಾಟ ಮಾಡಿದ್ದ ಕಣ್ಣನ್, ಆಕೆಯಿಂದ ಪ್ರಥಮ ಬಹುಮಾನದ ಟಿಕೆಟನ್ನು ಕದಿಯಲು ಸುಳ್ಳಿನ ಕಥೆವನ್ನು ಹೆಣೆದಿದ್ದ. ಆರಂಭದಲ್ಲಿ, ಆಕೆಯ 12 ಟಿಕೆಟ್ಗಳಿಗೆ ತಲಾ 500 ರೂ. ಬಂದಿದೆ ಎಂದು ಹೇಳಿದ್ದು, ಆತನ ಮಾತನ್ನು ನಂಬಿದ ಆಕೆ 500 ರೂ. ಗಳನ್ನು ಆತನಿಗೆ ನೀಡುವುದಾಗಿ ಹೇಳಿ ಉಳಿದ 5500 ರೂ. ಗಳನ್ನು ಪಡೆಯಲು ಆತನ ಸಹಾಯ ಕೋರಿದಳು. ಹಾಗೆ ಕಣ್ಣನ್ ಎಲ್ಲಾ 12 ಟಿಕೆಟ್ ಪಡೆದು ತೆರಳಿದ್ದಾನೆ. ಆಗ ಇನ್ನೋರ್ವ ಬೀದಿ ಬದಿ ವ್ಯಾಪಾರಿ ಟಿಕೆಟ್ ನಂಬರ್ಗಳನ್ನು ಪರಿಶೀಲಿಸಿ ಸುಕುಮಾರಿಯಮ್ಮ ಅವರು ತೋರಿಸಿದ ನಂಬರ್ಗಳಿಗೆ ಯಾವುದೇ ಬಹುಮಾನ ಬಂದಿಲ್ಲ ಎಂದರು. ಬಳಿಕ ಕಣ್ಣನ್ ಹಿಂದಿರುಗಿ ಬಂದು ಸಣ್ಣ ತಪ್ಪಾಗಿದೆ, 12 ಟಿಕೆಟ್ಗಳಿಗೆ ತಲಾ 100 ರೂ.ಮಾತ್ರ ಬಂದಿದೆ ಎಂದು ಇನ್ನೊಂದು ಸುಳ್ಳು ಕಥೆ ಸೃಷ್ಟಿಸಿದ್ದಾನೆ. ಈ ಮಾತನ್ನೂ ಸುಕುಮಾರಿಯಮ್ಮ ನಂಬಿದರು. ಬಳಿಕ ಕಣ್ಣನ್ ಪಾಳಯಂ ಎಂಬಲ್ಲಿಗೆ ತೆರಳಿ ತನಗೆ 1 ಕೋಟಿ ರೂ. ಲಾಟರಿ ಹೊಡೆದಿದೆ ಎಂದು ಹೇಳಿ ಸಿಹಿ ಹಂಚಲು ಆರಂಭಿಸಿದ್ದಾನೆ.
Read More.. ; ಮಂಗಳೂರು ವಿಮಾನ ದುರಂತ ಕಹಿ ನೆನಪಿಗೆ ಇಂದು 14 ವರ್ಷ..! ಕೂಳೂರಿನಲ್ಲಿ ಶ್ರದ್ದಾಂಜಲಿ
ಪಾಳಯಂನ ಲಾಟರಿ ಮಾರಾಟಗಾರ ರಾಧಾಕೃಷ್ಣನ್ ಅವರು ಮ್ಯೂಸಿಯಂನಲ್ಲಿ ಮತ್ತೊಬ್ಬ ಲಾಟರಿ ಮಾರಾಟಗಾರ್ತಿ ಮತ್ತು ಸುಕುಮಾರಿಯಮ್ಮ ಅವರ ಸ್ನೇಹಿತೆ ಪ್ರಭಾ ಅವರೊಂದಿಗೆ ಈ ವಿಷಯ ಹಂಚಿಕೊಂಡಿದ್ದಾರೆ. ಕುತೂಹಲದಿಂದ ಪ್ರಭಾ ಅವರು ವಿಜೇತ ನಂಬರ್ ಕೇಳಿದರು. ಪ್ರಭಾಗೆ ಸರಣಿ ಗೊತ್ತಿತ್ತು. ಸುಕುಮಾರಿಯಮ್ಮ ತೆಗೆದುಕೊಂಡ ನಂಬರಿಗೆ ಪ್ರಥಮ ಬಹುಮಾನ ಬಂದಿರುವುದು ಆಕೆಗೆ ಖಚಿತವಾಯಿತು. ಮರುದಿನ ಬೆಳಗ್ಗೆ ಅವರು ಸುಕುಮಾರಿಯಮ್ಮ ಅವರ ನಂಬರಿಗೇ ಲಾಟರಿ ಹೊಡೆದಿರುವುದನ್ನು ದೃಢೀಕರಿಸಿದರು. ತಾನು ಮೋಸ ಹೋದೆ ಎನ್ನುವುದು ಸುಕುಮಾರಿಯಮ್ಮ ಅವರಿಗೆ ಖಚಿತವಾಯಿತು. ಅಷ್ಟೊತ್ತಿಗಾಗಲೇ ಕಣ್ಣನ್ ಅಜ್ಞಾತವಾಸಕ್ಕೆ ಹೋಗಿದ್ದ. ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಬಳಿಕ ಸುಕುಮಾರಿಯಮ್ಮ ದೂರಿನೊಂದಿಗೆ ಲಾಟರಿ ನಿರ್ದೇಶನಾಲಯವನ್ನು ಸಂಪರ್ಕಿಸಿದರು. ಪೊಲೀಸ್ ದೂರು ದಾಖಲಿಸಿ ಎಫ್ ಐಆರ್ ಹಾಕಿಕೊಂಡು ಬರುವಂತೆ ಆಕೆಗೆ ತಿಳಿಸಲಾಯಿತು. ಆಕೆ ನೀಡಿದ ದೂರಿನ ಆಧಾರದಲ್ಲಿ ಮ್ಯೂಸಿಯಂ ಠಾಣೆ ಪೊಲೀಸರು ಕಣ್ಣನ್ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆತನ ವಿರುದ್ಧ ನಂಬಿಕೆ ದ್ರೋಹ ಮತ್ತು ವಂಚನೆಯ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಕಣ್ಣನ್ ಅಷ್ಟರಲ್ಲೇ ಲಾಟರಿ ಟಿಕೆಟನ್ನು ನಗದೀಕರಣಕ್ಕಾಗಿ ಪೆರೂರ್ಕಡದ ಬ್ಯಾಂಕ್ ಗೆ ನೀಡಿದ್ದರು. ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Read More..; “ಕಸ ಎಸೆದವರ ತಿಥಿ ಮಾಡಲಾಗುವುದು”..! ವೈರಲ್ ಆಯ್ತು ತುಳು ಬ್ಯಾನರ್..!
ಸ್ವಂತ ವಿವೇಶನಕ್ಕಾಗಿ ಲಾಟರಿ ಖರೀದಿ ಮಾಡುತ್ತಿದ್ದರಂತೆ ಈ ಬಡ ಮಹಿಳೆ..!
ಸುಕುಮಾರಿಯಮ್ಮ ಅವರಿಗೆ ಲಾಟರಿ ಮೂಲಕ ಈ ಹಿಂದೆ 30,000 ರೂ. ಮತ್ತು 60,000 ರೂ.ಗಳ ಬಹುಮಾನ ಬಂದಿತ್ತು. ಅವರಿಗೆ ಓರ್ವ ಪುತ್ರ ಮತ್ತು ಪುತ್ರಿ ಇದ್ದಾಳೆ. ‘ನನ್ನ ಪುತ್ರ ಕೇವಲ 5 ವರ್ಷದವನಿದ್ದಾಗ ನನ್ನ ಗಂಡ ತೀರಿಕೊಂಡರು. ನಾನು ನನ್ನ ಮಕ್ಕಳನ್ನು ಹಸುವಿನ ಸೆಗಣಿ ಸಾಗಿಸುವುದರಿಂದ ಹಿಡಿದು ಕಟ್ಟಡ ನಿರ್ಮಾಣ ಸೈಟ್ ಗಳಲ್ಲಿ ಸಿಮೆಂಟ್ ಹೊರುವವರೆಗೆ ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತಾ ಬೆಳೆಸಿದೆ. ಬಳಿಕ ನನಗೆ ಸ್ವೀಪರ್ ಕೆಲಸ ಸಿಕ್ಕಿತು. ಇಷ್ಟು ವರ್ಷ ಬಾಡಿಗೆಯಲ್ಲೇ ಬದುಕುತ್ತಿದ್ದೆ. ನನ್ನ ಸ್ವಂತ ನಿವೇಶನದೊಂದಿಗೆ ಸಣ್ಣ ನಿವೇಶನವನ್ನು ಹೊಂದುವುದು ನನ್ನ ಕನಸು. ಅದಕ್ಕೆ ಲಾಟರಿ ಟಿಕೆಟ್ ಕೊಳ್ಳುತ್ತಲೇ ಇದ್ದೆ. ಶೀಘ್ರದಲ್ಲೇ ನನ್ನ ಬಹುಮಾನ ಸಿಗುತ್ತದೆ ಎಂದು ಭಾವಿಸುತ್ತೇನೆ,” ಎಂದು ಸುಕುಮಾರಿಯಮ್ಮ ಹೇಳುತ್ತಾರೆ. ಈ ವಿದ್ಯಮಾನದ ಬಗ್ಗೆ ಮಲಯಾಳ ಮನೋರಮ ವರದಿ ಮಾಡಿದೆ.
kerala
ಹಗ್ಗ ಬಿಚ್ಚಿಸಿಕೊಂಡ ಕೋಣದಿಂದ ರೌದ್ರಾವತಾರ..! ಕಬ್ಬಿಣ ಗೇಟ್, ಕಾರು, ಬೈಕ್ ಪುಡಿಗೈದ ಕೋಣ.!
ಕಾಸರಗೋಡು: ಮನೆಯೊಂದರ ಬಳಿ ಕೋಣವೊಂದು ನಡೆಸಿದ ದಾಂದಲೆಯಿಂದ ಮನೆಯ ಮುಂದೆ ನಿಲ್ಲಿಸಿದ್ದ ಕಾರು, ಬೈಕ್, ಸೇರಿ ಹಲವಾರು ವಸ್ತುಗಳು ಜಖಂಗೊಂಡಿದೆ. ಕಾಸರಗೋಡು ಜಿಲ್ಲೆಯ ಅಣಂಗೂರು ಎಂಬಲ್ಲಿ ಈ ಘಟನೆ ನಡೆದಿದ್ದು, ಕೋಣದ ದಾಂದಲೆಗೆ ಜನರು ಹೈರಾಣಾಗಿದ್ದಾರೆ. ಯಾವ ಕಾರಣದಿಂದ ಕಾರಣದಿಂದ ಕೋಣ ಈ ರೀತಿ ವರ್ತಿಸಿದೆ ಅನ್ನೋದು ಗೊತ್ತಾಗಿಲ್ಲವಾದ್ರೂ ಕಟ್ಟಿ ಹಾಕಿದ್ದ ಕೋಣ ಏಕಾ ಏಕಿ ರಾಂಗ್ ಆಗಿ ವರ್ತಿಸಿದೆ.
Read More..; ದರ್ಶನ್ ಭೇಟಿ ಮಾಡಲು ಸ್ಟೇಷನ್ಗೆ ಬಂದ ಪತ್ನಿ..!
ಹಗ್ಗ ಕಡಿದುಕೊಂಡು ಗೇಟ್ ಕಡೆಗೆ ಓಡಿ ಕಬ್ಬಿಣದ ಗೇಟನ್ನೇ ಪುಡಿಗೈದಿದೆ. ಬಳಿಕ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದು ಕಾರಿನ ಮುಂಬಾಗವನ್ನು ಸಂಪೂರ್ಣ ಜಖಂ ಗೊಳಿಸಿದೆ. ಕೋಣವನ್ನು ಹಿಡಿಯಲು ಸ್ಥಳೀಯರು ಪ್ರಯತ್ನ ಪಟ್ಟರಾದ್ರೂ ಇನ್ನಷ್ಟು ಕೋಪಗೊಂಡ ಕೋಣ ಅಡ್ಡಾದಿಡ್ಡಿಯಾಗಿ ಓಡಿ ಅಕ್ಕಪಕ್ಕದ ಮನೆಗಳಿಗೂ ಹಾನಿ ಮಾಡಿದೆ. ಪಕ್ಕದ ಮನೆಯಲ್ಲಿದ್ದ ಸ್ಕೂಟರ್ ಉರುಳಿಸಿ ಜಖಂಗೊಳಿಸಿದೆ. ಕೋಣವನ್ನು ನಿಯಂತ್ರಿಸಲು ಪ್ರಯತ್ನಿಸಿದಷ್ಟೂ ಅದು ಮತ್ತಷ್ಟು ಹೆಚ್ಚು ದಾಂದಲೆ ನಡೆಸಿದೆ. ಆದ್ರೆ ಕೋಣ ಈ ಕೋಪಕ್ಕೆ ಕಾರಣ ಏನು ಅನ್ನೋದು ಗೊತ್ತಾಗಿಲ್ಲ. ಓಡಿ ಓಡಿ ಸುಸ್ತಾದ ಕೋಣ ಕೊನೆಗೂ ಜನರು ಹಾಕಿದ ಹಗ್ಗಕ್ಕೆ ಸಿಕ್ಕಿದೆ.
DAKSHINA KANNADA
ವೈರಲ್ ಆಯ್ತು ಮೆಟರ್ನಿಟಿ ಶೂಟ್..! ಮೆಚ್ಚುಗೆ ಪಡೆದ ಫೋಟೋಗ್ರಾಫರ್..!
ಮಂಗಳೂರು : ಕೇರಳದ ಫೇಮಸ್ ಫೋಟೋಗ್ರಾಫರ್ ಅಥಿರಾ ಜಾಯ್ ಅವರು ಮಾಡಿರೋ ಫೋಟೋ ಶೂಟ್ ಒಂದು ಈಗ ಸಾಕಷ್ಟು ವೈರಲ್ ಆಗಿದ್ದು, ಜನರ ಮೆಚ್ಚುಗೆ ಪಡೆದುಕೊಂಡಿದೆ. ಈಗಾಗಲೇ ಹಲವಾರು ಮೆಟರ್ನಿಟಿ ಶೂಟ್ ಮಾಡಿರೋ ಅಥಿರಾ ಜಾಯ್ ಅವರ ಈ ಫೋಟೋಗ್ರಾಫಿಗೆ ಎಲ್ಲಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ಈ ಫೋಟೋಗ್ರಾಫಿಯ ಹಿಂದೆ ಇರುವ ಕಥೆಯ ಬಗ್ಗೆಯೂ ಅಥಿರಾ ಹೇಳಿಕೊಂಡಿದ್ದಾರೆ.
ಶರಣ್ಯ ಈಕೆ ವಯನಾಡಿನ ಬುಡಕಟ್ಟು ಸಮುದಾಯವಾದ ‘ಪನಿಯಾ’ ಸಮುದಾಯದ ಬಡ ಹೆಣ್ಣು ಮಗಳು. ಬುಡಕಟ್ಟು ಸಮುದಾಯದ ಆ ಹೆಣ್ಣು ಮಗಳ ಆಸೆಯನ್ನು ಅರಿಯವ ಸಲುವಾಗಿ ಅಥಿರಾ ಜಾಯ್ ಆಕೆಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಆಕೆಗೆ ಏನು ಬೇಕು ಎಂದು ಕೇಳಿದಾಗ ಆಕೆಯ ಬೇಡಿಕೆ ಕೇಳಿ ಕಣ್ಣೀರು ಬಂತು ಅಂತ ಫೋಟೋಗ್ರಾಫರ್ ಅಥಿರಾ ಜಾಯ್ ಹೇಳಿದ್ದಾರೆ.
ಬುಡಕಟ್ಟು ಸಮುದಾಯದ ಶರಣ್ಯ ಪತಿ ಅನೀಶ್ ಕೂಲಿ ಕಾರ್ಮಿಕನಾಗಿದ್ದು, ದಂಪತಿಗೆ ಈಗಾಗಲೇ ಒಂದು ವರ್ಷದ ಮಗುವಿದೆ. ಎರಡನೇ ಪ್ರಸವದ ವೇಳೆಯಲ್ಲಿ ಅಥಿರಾ ಜಾಯ್ ಆಕೆಯ ಫೋಟೋ ಶೂಟ್ ಮಾಡಲು ಹೋಗಿದ್ದಾರೆ. ಈ ವೇಳೆ ಆಕೆಯಲ್ಲಿ ನಿನಗೇನು ಬೇಕು ಎಂದು ಕೇಳಿದಾಗ ಶರಣ್ಯ ಅನ್ನ ತಿನ್ನಬೇಕು, ಚಿಕನ್ ಸಾಂಬಾರ್ ಜೊತೆಗೆ ಚಿಕನ್ ಇರಬೇಕು ಎಂದು ಕೇಳಿದ್ದಾಳೆ. ಶ್ರೀಮಂತರ ಮನೆಯ ಮಕ್ಕಳು ಫಾಸ್ಟ್ ಫುಡ್, ಕೆಎಫ್ಸಿ ಹಾಗೂ ಪೌಷ್ಠಿಕ ಆಹಾರ ಬೇಕು ಅನ್ನುವಾಗ ಶರಣ್ಯ ಹಸಿವು ನೀಗಿಸಲು ಅನ್ನ ಬೇಕು ಅಂದಿರುವುದು ಕಣ್ಣೀರು ತರಿಸಿದೆ ಎಂದು ಹೇಳಿದ್ದಾರೆ.
ತಾನು ಮಾಡಿರುವ ಫೋಟೋ ಶೂಟ್ ಶರಣ್ಯ ಬದುಕಿನ ಅತೀ ಸುಂದರ ಕ್ಷಣವಾಗಿದ್ದು, ಅದನ್ನು ನನ್ನ ಕ್ಯಾಮೆರಾಗಳು ಸೆರೆ ಹಿಡಿದಿದೆ. ಈ ಫೋಟೋ ಶೂಟ್ಗಾಗಿ ಸಂಬಂಧಪಟ್ಟ ಅಧಿಕಾರಿಗಳ ಒಪ್ಪಿಗೆಯನ್ನು ಪಡೆದು ಸುಂದರ ಕ್ಷಣವನ್ನು ಸೆರೆ ಹಿಡಿಯಲಾಗಿದೆ ಎಂದು ಅಥಿರಾ ಜಾನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಸಾಕಷ್ಟು ವೈರಲ್ ಆಗಿದ್ದು, ಅಥಿರಾ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
DAKSHINA KANNADA
ಚಲಿಸುತ್ತಿದ್ದಾಗ ಒಡೆದ ಬಸ್ಸಿನ ಗಾಜು; ಇಬ್ಬರು ಮಕ್ಕಳು, ಚಾಲಕನಿಗೆ ಗಾ*ಯ
ವಿಟ್ಲ : ಚಲಿಸುತ್ತಿದ್ದ ಕೇರಳ ರಾಜ್ಯದ ಬಸ್ಸಿನ ಗಾಜು ಒಡೆದ ಪರಿಣಾಮ ಇಬ್ಬರು ಮಕ್ಕಳು ಮತ್ತು ಚಾಲಕ ಗಾಯಗೊಂಡ ಘಟನೆ ಉರಿಮಜಲು ಎಂಬಲ್ಲಿ ಸಂಭವಿಸಿದೆ. ಪುತ್ತೂರು ಕಡೆಯಿಂದ ವಿಟ್ಲ ಮೂಲಕ ಕಾಸರಗೋಡಿಗೆ ಹೊರಟಿದ್ದ ಕೇರಳ ರಾಜ್ಯದ ಮಲಬಾರ್ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಅದರ ಮುಂಭಾಗ ಗಾಜು ಹೊಡೆದಿದೆ.
ಇದನ್ನೂ ಓದಿ : ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೇಟಾ..! ಕಾರು ಜಖಂ
ಇದರಿಂದ ಮುಂಭಾಗದಲ್ಲಿದ್ದ ಬಾಲಕ ಗಂಭೀರ ಗಾಯಗೊಂಡಿದ್ದು, ಚಾಲಕ ಮತ್ತು ಮತ್ತೊಂದು ಮಗು ಸಣ್ಣಪುಟ್ಟವಿಗೆ ಗಾಯಗಳಾಗಿವೆ. ಗಂಭೀರ ಗಾಯಗೊಂಡ ಬಾಲಕನನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡಿರುವ ಬಾಲಕ ಕೇರಳದ ಚೆರ್ಕಳ ನೆಲ್ಲಿಕಟ್ಟೆ ನಿವಾಸಿ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಿಸಿಲಿನ ತಾಪಕ್ಕೆ ಈ ಘಟನೆ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
- LATEST NEWS5 days ago
ಪ್ರೀತಂ ಗೌಡ ಸೇರಿ ನಾಲ್ವರ ಮೇಲೆ ಎಫ್ಐಆರ್..! ಪ್ರಜ್ವಲ್ ಗೆ ಮತ್ತೊಂದು ಸಂಕಷ್ಟ
- DAKSHINA KANNADA6 days ago
ಕರಾವಳಿಯಲ್ಲಿ ಬಿರುಸು ಪಡೆದುಕೊಂಡ ಮಳೆ; ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ
- DAKSHINA KANNADA6 days ago
ಯಕ್ಷಗಾನದ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಕೋಡಪದವು ಅವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ
- LATEST NEWS7 days ago
ನನ್ನದೂ ತಪ್ಪಿದೆ, ಯುವ ಹೇಳಿದ್ದಕ್ಕೆ ನಾನು ಮುಂದುವರೆದೆ…ಸಪ್ತಮಿ ಗೌಡ ಆಡಿಯೋ ವೈರಲ್!?
ಗಂಗಾಧರ
23/05/2024 at 3:42 PM
ಸೂಪರ್ ಬ್ರದರ್
ನನಗು ಮೂಸ ಆಗಿದೆ ಸರ್ ಏನು ಮಾಡಬೇಕು
ನಾನು ಕನಾ೯ಟಕ ದವನು ಅಂತ ಮೂಸ ಮಾಡುತ್ತಾರೆ ಸರ್
ಇದೇ ತಿಂಗಳ 12-05-2024 ರ೦ದು ನೇಡೇದದ್ದು
ಅದರಲ್ಲಿ 5ಲಕ್ಷ ಬಂಪರ್ ಬಂದಿದ್ದ ಅಂತಾ ಹೇಳಿ 5ಸಾವಿರ ಕೇಳಿದರು KL23833 ನಂಬರ್ ನಾನು ಆಯ್ಕೆ ಮಾಡಿದ್ದು 3ಘಂಟೇಗೇ ಪೋನ ಮಾಡಿ ನಿಮಗೆ, 5ಲಕ್ಷ ಬಂದಿದೆ ಸರ್ ಅಂತ ಹೇಳಿದರು ನಾನು ತುಂಬಾ ಮೂಸ ಮಾಡಿದ್ದಾರೆ ಸರ್🙏