LATEST NEWS
ಗೃಹಲಕ್ಷ್ಮೀ ಹಣದಿಂದ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಕೊಂಡ ಬಡ ಮಹಿಳೆ
ಬೆಳಗಾವಿ: ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು 10 ತಿಂಗಳಿನಿಂದ ಬರುತ್ತಿದ್ದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಕೂಡಿಟ್ಟು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ರಾಮದುರ್ಗ ತಾಲೂಕಿನ ಮನಿಹಾಳ ಗ್ರಾಮದ ಮಹಿಳೆ ಸಕ್ಕುಬಾಯಿ ಕರದಿನ ಹಲವು ತಿಂಗಳುಗಳಿಂದ ಬಲಗಣ್ಣಿಗೆ ಸಮಸ್ಯೆಯನ್ನ ಎದುರಿಸುತ್ತಿದ್ದರು. ಆರ್ಥಿಕ ಸಮಸ್ಯೆ ಇದ್ದ ಕಾರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಕಣ್ಣಿಗೆ ಪೊರೆ ಬಂದ ಕಾರಣ ನೋವಿನಲ್ಲೇ ದಿನ ಕಳೆದಿದ್ದರು.
ಆದರೆ ತನಗೆ ಬರುತ್ತಿದ್ದ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ಹಣವನ್ನು 10 ತಿಂಗಳುಗಳ ಕಾಲ ತೆಗೆದಿರಿಸಿದ್ದಾರೆ. ಹೀಗಾಗಿ ಒಟ್ಟು 20 ಸಾವಿರ ರೂಪಾಯಿಗಳು ಅದರಲ್ಲಿ ಸಂಗ್ರಹವಾಗಿವೆ.
ರಾಮದುರ್ಗ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಯಶಸ್ವಿಯಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಚಿಕಿತ್ಸೆ ನಂತರ ಸಂಪೂರ್ಣವಾಗಿ ಕಣ್ಣಿನ ದೋಷ ನಿವಾರಣೆಯಾಗಿದೆ. ಆಸ್ಪತ್ರೆಯಲ್ಲಿ ಒಟ್ಟು 26 ಸಾವಿರ ರೂಪಾಯಿ ಖರ್ಚು ಬಂದಿದ್ದು ಇದರಲ್ಲಿ 20 ಸಾವಿರ ಹಣ ಗೃಹಲಕ್ಷ್ಮಿ ಯೋಜನೆಯದ್ದಾಗಿದೆ. ಇನ್ನು 6 ಸಾವಿರ ಹೇಗೋ ಸಂಗ್ರಹಿಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.
ಸದ್ಯ ಇದರಿಂದ ಸಂತಸಗೊಂಡಿರುವ ಮಹಿಳೆ ಸಕ್ಕುಬಾಯಿ ಸಿಎಂ, ಡಿಸಿಎಂ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.
FILM
ಟಿಆರ್ ಪಿನಲ್ಲಿ ಟಾಪ್ 10 ರೊಳಗಿನ ಸ್ಥಾನ ಗಿಟ್ಟಿಸಿಕೊಂಡ ಹೊಸ ಧಾರಾವಾಹಿ; ನಂಬರ್ 1 ಸ್ಥಾನ ಯಾವುದಕ್ಕೆ?
ಮಂಗಳೂರು : ಧಾರಾವಾಹಿಗಳನ್ನು ಇಷ್ಟ ಪಡುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಒಬ್ಬೊಬ್ಬರಿಗೆ ಒಂದೊಂದು ಧಾರಾವಾಹಿ ಪ್ರಿಯವಾದುದು. ನಿತ್ಯ ನೂರಾರು ಧಾರಾವಾಹಿಗಳು ಪ್ರಸಾರವಾಗುತ್ತವೆ. ಈ ಬಾರಿ ಟಿ ಆರ್ ಪಿ ಯಲ್ಲಿ ‘ಪುಟ್ಟಕ್ಕನ ಮಕ್ಕಳು’ ನಂಬರ್ 1 ಸ್ಥಾನದಲ್ಲಿದೆ. ಉಮಾಶ್ರೀ ಮುಖ್ಯಭೂಮಿಕೆಯಲ್ಲಿರುವ ಪುಟ್ಟಕ್ಕನ ಮಕ್ಕಳು ನಿತ್ಯ ಹೊಸ ಹೊಸ ತಿರುವಿನೊಂದಿಗೆ ಗಮನ ಸೆಳೆಯುತ್ತಿರುತ್ತದೆ.
ಇನ್ನು ಎರಡನೇ ಸ್ಥಾನದಲ್ಲಿ, ‘ಲಕ್ಷ್ಮೀ ನಿವಾಸ’ ಇದೆ. ತುಂಬು ಸಂಸಾರದ ಕಥೆ ಹೊಂದಿರುವ ಲಕ್ಷ್ಮೀ ನಿವಾಸವನ್ನು ಆರಂಭದಿಂದಲೇ ಜನ ಮೆಚ್ಚಿಕೊಂಡಿದ್ದಾರೆ.
ಮೂರನೇ ಸ್ಥಾನದಲ್ಲಿ ಹೊಸ ಧಾರಾವಾಹಿ ‘ಶ್ರಾವಣಿ ಸುಬ್ರಮಣ್ಯ’ವಿದೆ. ಇದು ಈ ಧಾರಾವಾಹಿಗೆ ಭರ್ಜರಿ ಟಿಆಆರ್ಪಿ ಸಿಕ್ಕಿದೆ.
ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ.
ಇನ್ನು ಐದನೇ ಸ್ಥಾನದಲ್ಲಿ ‘ಲಕ್ಷ್ಮಿ ಬಾರಮ್ಮ’ ಧಾರಾವಾಹಿ ಇದೆ. ಆರನೇ ಸ್ಥಾನದಲ್ಲಿ ‘ಅಮೃತಧಾರೆ ಧಾರಾವಾಹಿ’ ಇದೆ.
DAKSHINA KANNADA
ಮಂಗಳೂರು : ಸೂರಜ್ ಪದವಿಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆ
ಮಂಗಳೂರು : ಸೂರಜ್ ಪದವಿಪೂರ್ವ ಕಾಲೇಜಿನಲ್ಲಿ ಯೋಗ ದಿನಾಚರಣೆಯನ್ನು ನಡೆಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕ ರಾಜೇಶ್ ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಾದ ಕೃ ತಿಕ್ ಮತ್ತು ಪೃತ್ವಿಕ್ 6 ರಿಂದ 10ನೇ ತರಗತಿಯ ಮಕ್ಕಳಿಗೆ ಯೋಗವನ್ನು ಹೇಳಿಕೊಟ್ಟರು.
ಶಾಲೆಯ ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.
LATEST NEWS
ಕರ್ನಾಟಕದ ಈ ಜನಪ್ರಿಯ ಸೀರೆಗಳು ನಿಮ್ಮಲ್ಲಿದ್ಯಾ?
ಮಂಗಳೂರು: ಕರ್ನಾಟಕದಲ್ಲಿ ಹಲವಾರು ಬಗೆಯ ಉಡುಗೆಗಳು ನೋಡಲು ಸಿಗುತ್ತದೆ. ಉತ್ತರ ಕರ್ನಾಟಕದವರ ಒಂದು ಶೈಲಿಯಾದರೆ, ದಕ್ಷಿಣ ಕರ್ನಾಟಕದವರದ್ದು ಇನ್ನೊಂದು ರೀತಿ. ಅದರಲ್ಲೂ ನಾರಿಯರು ಸೀರೆಯನ್ನುಡುವಾಗಲೂ ಅಲ್ಲಿ ಹಲವು ಶೈಲಿಗಳು ಇವೆ. ಅದಕ್ಕಾಗಿಯೇ ಸೀರೆಗಳು ಕೂಡ ತುಂಬಾ ಭಿನ್ನವಾಗಿರುವಂತದ್ದು ಇವೆ. ವಿವಿಧ ಶೈಲಿ, ಬಗೆಯ ಸೀರೆಗಳನ್ನು ಹಿಂದಿನಿಂದಲೂ ನಮ್ಮ ರಾಜ್ಯದಲ್ಲಿ ತಯಾರಿಸಿಕೊಂಡು ಬರಲಾಗುತ್ತಿದೆ. ಐದು ಬಗೆಯ ಸಾಂಪ್ರದಾಯಿಕ ಸೀರೆಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.
ಮೈಸೂರು ಸಿಲ್ಕ್
ವಿಶ್ವದೆಲ್ಲೆಡೆಯಲ್ಲಿ ಜನಪ್ರಿಯವಾಗಿರುವಂತಹ ಮೈಸೂರು ಸಿಲ್ಕ್ ಗೆ ಹೆಚ್ಚು ವಿವರಣೆ ಬೇಕಾಗಿಲ್ಲ. ಮೈಸೂರು ಶ್ರೀಗಂಧ ಮತ್ತು ಸಿಲ್ಕ್ ಸೀರೆಗಳಿಗೆ ತುಮಬಾ ಜನಪ್ರಿಯ. ಕ್ರಿ.ಶ. ೧೭೮೫ರಲ್ಲಿ ಈ ಸೀರೆಗಳು ಅಸ್ತಿತ್ವಕ್ಕೆ ಬಂದವು ಮತ್ತು ಉನ್ನತ ಗುಣಮಟ್ಟದ ಸಿಲ್ಕ್ ನಯವಾದ ಮತ್ತು ಉನ್ನತ ವಿನ್ಯಾಸ ನೀಡುವುದು. ಇದು ತುಂಬಾ ದುಬಾರಿ ಸೀರೆಯಾಗಿದ್ದು, ಹೆಚ್ಚಾಗಿ ಶ್ರೀಮಂತರೇ ಇದನ್ನು ಧರಿಸುವರು.
ಇಳಕಲ್
ಉತ್ತರ ಕರ್ನಾಟಕದ ಇಳಕಲ್ ನಿಂದ ಈ ಸೀರೆಯು ಬಂದಿದ್ದು, ಈ ಭಾಗದ ಶೇ.50-60ರಷ್ಟು ಜನರು ಕೈಮಗ್ಗದ ಕೆಲಸವನ್ನೇ ಮಾಡುವರು. ಸುಮಾರು ೮ನೇ ಶತಮಾನದಿಂದಲೂ ಈ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ. ಇಳಕಲ್ ಸೀರೆಯು ಅದರ ಅಂಚು ಮತ್ತು ಸೆರಗಿನಿಂದಾಗಿ ತುಂಬಾ ಜನಪ್ರಿಯವಾಗಿದೆ. ಚಿಕ್ಕಿಯ ಅಂಚು ಹೊಂದಿರುವಂತಹ ಇದನ್ನು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಕೂಡ ಧರಿಸುವರು.
ಗುಳೇದಗುಡ್ಡ
ಉತ್ತರ ಕರ್ನಾಟಕದ ಬಾಗಲಕೋಟೆಯಿದ ಬಂದಿರುವ ಗುಳೇದಗುಡ್ಡ ಸೀರೆಯು ಸುಮಾರು ನೂರು ವರ್ಷಗಳಿಂದಲೂ ಜನಪ್ರಿಯವಾಗಿದೆ. ಈ ಸೀರೆಯನ್ನು ಗುಳೇದಗುಡ್ಡ ಖಾನ ಎಂದು ಕೂಡ ಕರೆಯಲಾಗುತ್ತದೆ. ಈಗ ಇದನ್ನು ಶರ್ಟ್, ಬ್ಯಾಗ್, ತಲೆದಿಂಬಿನ ಕವರ್ ಮತ್ತು ಡೆಕೋರೇಟಿವ್ ಉತ್ಪನ್ನಗಳಲ್ಲಿ ಬಳಕೆ ಮಾಡುವರು. ತೆಳು ಮತ್ತು ಸರಳವಾಗಿ ಬರುವ ಈ ಸೀರೆಗಳು ರಾಜ್ಯದೆಲ್ಲೆಡೆಯಲ್ಲಿ ತುಂಬಾ ಜನಪ್ರಿಯಾಗಿದೆ.
ಪಟ್ಟೆದ ಅಂಚು
ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದಾಗಿದೆ. ಇಂತಹ ಸೀರೆಗಳನ್ನು ಹತ್ತನೇ ಶತಮಾನದಿಂದಲೂ ಧರಿಸಿಕೊಂಡು ಬರಲಾಗುತ್ತಿದೆ. ಈಗಲೂ ಈ ಸಾಂಪ್ರದಾಯಿಕ ಸೀರೆಯು ಜನಪ್ರಿಯವಾಗಿದೆ. ಅದರ ಅಂಚು ಮತ್ತು ಚೆಕ್ಸ್ ನಿಂದಾಗಿಯೇ ಅದಕ್ಕೆ ಈ ಹೆಸರು ಬಂದಿದೆ. ಗದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ ಇದನ್ನು ವಿಶೇಷವಾಗಿ ತಯಾರಿಸಲಾಗಿದೆ. ಇದು ಉಡುವವರಿಗೆ ಒಳ್ಳೆಯ ಹಿತಕರ ಭಾವೆ ನೀಡುವುದು. ಇದರಲ್ಲಿ ಸಾಮಾನ್ಯವಾಗಿ ಹಳದಿ, ಕೆಂಪು, ಗುಲಾಬಿ, ಹಸಿರು ಬಣ್ಣಗಳು ಇವೆ.
ಕಸೂತಿ ಸೀರೆ
ಕೈಮಗ್ಗದಿಂದ ಮಾಡಲ್ಪಡುವಂತಹ ಈ ಸೀರೆಯು ರಾಜ್ಯದ ಮಹಿಳೆಯರಲ್ಲಿ ತುಂಬಾ ಜನಪ್ರಿಯ ಸೀರೆಯಾಗಿದೆ. ಈ ಸೀರೆಯಲ್ಲಿ ಮೊದಲಿಗೆ ಪೆನ್ಸಿಲ್ ನಿಂದ ವಿನ್ಯಾಸವನ್ನು ರಚಿಸಲಾಗುತ್ತದೆ. ಇದರ ಬಳಿಕ ಸೂಜಿ ಮತ್ತು ಬಣ್ಣ ಬಣ್ಣದ ದಾರಗಳಿಂದ ವಿನ್ಯಾಸಿಸಲಾಗುತ್ತದೆ. ಹತ್ತಿ, ಸಿಲ್ಕ್ ಸೀರೆಗಳಲ್ಲಿ ಇದನ್ನು ತಯಾರಿಸಲಾಗುತ್ತದೆ. ಇದು ಕೇವಲ ಕರ್ನಾಟಕ ಮಾತ್ರವಲ್ಲದೆ, ಬೇರೆ ಕಡೆಗಳಲ್ಲೂ ತುಂಬಾ ಜನಪ್ರಿಯವಾಗಿದೆ.
- LATEST NEWS5 days ago
ಮುಂದಿನ ಐದು ದಿನ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಎಚ್ಚರಿಕೆ
- LATEST NEWS2 days ago
ಪ್ರೀತಂ ಗೌಡ ಸೇರಿ ನಾಲ್ವರ ಮೇಲೆ ಎಫ್ಐಆರ್..! ಪ್ರಜ್ವಲ್ ಗೆ ಮತ್ತೊಂದು ಸಂಕಷ್ಟ
- DAKSHINA KANNADA4 days ago
ಕರಾವಳಿಯಲ್ಲಿ ಬಿರುಸು ಪಡೆದುಕೊಂಡ ಮಳೆ; ಕಲ್ಲಡ್ಕದಲ್ಲಿ ಕೃತಕ ನೆರೆ ಸೃಷ್ಟಿ
- LATEST NEWS6 days ago
ನಟ ದರ್ಶನ್ ಅಭಿಮಾನಿಯ ವಿರುದ್ಧ ಬಿತ್ತು ಕೇಸ್