Connect with us

    LATEST NEWS

    ಫ್ರಿಡ್ಜ್ ಅನ್ನು ತಪ್ಪಿಯೂ ಈ ಸ್ಥಳದಲ್ಲಿ ಇಡಬೇಡಿ; ಸ್ಫೋಟಗೊಳ್ಳಬಹುದು ಎಚ್ಚರ

    Published

    on

    ಮಂಗಳೂರು: ರೆಫ್ರಿಜರೇಟರ್ ಬಹಳ ಅಗತ್ಯವಿರುವ ಎಲೆಕ್ಟ್ರಾನಿಕ್ ವಸ್ತಾಗಿದ್ದು ಇಂದು ಹೆಚ್ಚಿನ ಮನೆಗಳಲ್ಲಿ ಉಪಯೋಗಿಸುತ್ತಾರೆ. ಆಹಾರವನ್ನು ತಾಜಾ ಮತ್ತು ಸುರಕ್ಷಿತವಾಗಿಡಲು ಇದನ್ನು ಬಳಸಲಾಗುತ್ತದೆ. ಹಣ್ಣುಗಳು, ತರಕಾರಿಗಳು, ಹಾಲು, ಮೊಸರು ಮುಂತಾದ ಅನೇಕ ರೀತಿಯ ಆಹಾರ ಪದಾರ್ಥಗಳನ್ನು ಹಾಳಾಗದಂತೆ ರಕ್ಷಿಸಲು ಇದರೊಳಗೆ ಇಡಲಾಗುತ್ತದೆ. ಹಾಗೆಯೆ ರೆಫ್ರಿಜರೇಟರ್ ಅನ್ನು ಸರಿಯಾದ ಸ್ಥಳದಲ್ಲಿ ಇಡುವುದು ಬಹಳ ಮುಖ್ಯ. ತಪ್ಪಾದ ಸ್ಥಳದಲ್ಲಿ ಇಟ್ಟರೆ ಅದು ಸ್ಫೋಟಗೊಳ್ಳುವ ಅಪಾಯವಿದೆ.

    ರೆಫ್ರಿಜರೇಟರ್ ಅನ್ನು ಎಲ್ಲಿ ಇಡಬಾರದು?

    ರೆಫ್ರಿಜರೇಟರ್ ಅನ್ನು ಮುಚ್ಚಿದ ಕೋಣೆಯಲ್ಲಿ ಇಡಬಾರದು. ಗಾಳಿ ಇಲ್ಲದ ಕೋಣೆಯಲ್ಲಿ ಇಡಬಾರದು. ಹಾಗೆಯೆ ಸಾಕಷ್ಟು ವಿದ್ಯುತ್ ವೈರಿಂಗ್ ಇರುವ ಕೋಣೆಯಲ್ಲಿ ರೆಫ್ರಿಜರೇಟರ್ ಅನ್ನು ಇಡುವುದು ಸೂಕ್ತವಲ್ಲ. ಅಲ್ಲದೆ, ರೆಫ್ರಿಜರೇಟರ್ ಅನ್ನು ಸಣ್ಣ ಮತ್ತು ಪ್ಯಾಕ್ ಮಾಡಿದ ಕೋಣೆಯಲ್ಲಿ ಇಡುವುದು ತುಂಬಾ ಅಪಾಯಕಾರಿ. ಇಂತಹ ಕೊಠಡಿಗಳಲ್ಲಿ ರೆಫ್ರಿಜರೇಟರ್ ಇಡುವುದು ಸರಿಯಲ್ಲ, ಇದಕ್ಕೆ ಹಲವು ಕಾರಣಗಳಿವೆ.

    ರೆಫ್ರಿಜರೇಟರ್ ಅನ್ನು ಮುಚ್ಚಿದ ಕೋಣೆಯಲ್ಲಿ ಏಕೆ ಇಡಬಾರದು?

    ಶಾಖ – ಫ್ರಿಜ್ ಅನ್ನು ತಂಪಾಗಿರಿಸಲು ನಿರಂತರ ವಿದ್ಯುತ್ ಅಗತ್ಯವಿರುತ್ತದೆ. ಈ ಪ್ರಕ್ರಿಯೆಯಲ್ಲಿ ರೆಫ್ರಿಜರೇಟರ್ ಹೆಚ್ಚಿನ ಶಾಖವನ್ನು ಉತ್ಪಾದಿಸುತ್ತದೆ. ಮುಚ್ಚಿದ ಕೋಣೆಯಲ್ಲಿ ಫ್ರಿಡ್ಜ್ ಇರಿಸಿದರೆ, ಕೋಣೆಯ ಉಷ್ಣತೆಯು ಹೆಚ್ಚಾಗಬಹುದು, ಇದು ವಿದ್ಯುತ್ ಬಳಕೆಯನ್ನು ಕೂಡ ಹೆಚ್ಚಿಸುತ್ತದೆ.

    ಕಂಪನ – ಫ್ರಿಡ್ಜ್ ಒಳಗೆ ಕಂಪ್ರೆಸರ್ ನಿರಂತರವಾಗಿ ಚಾಲನೆಯಲ್ಲಿರುತ್ತದೆ ಮತ್ತು ಇದು ಕಂಪನವನ್ನು ಉಂಟುಮಾಡುತ್ತದೆ. ಹೀಗಿರುವಾಗ ಇದನ್ನು ಮುಚ್ಚಿದ ಕೋಣೆಯಲ್ಲಿ ಇರಿಸಿದರೆ, ಈ ಕಂಪನವು ಸುತ್ತಮುತ್ತಲಿನ ವಸ್ತುಗಳ ಮೇಲೆ ಪರಿಣಾಮ ಬೀಳುತ್ತದೆ, ಸಾಕಷ್ಟು ಶಬ್ದವನ್ನು ಸಹ ಉಂಟುಮಾಡಬಹುದು.

    ತೇವಾಂಶ – ರೆಫ್ರಿಜರೇಟರ್ ಒಳಗೆ ತೇವಾಂಶವಿದೆ. ಇದನ್ನು ತುಂಬಿರುವ ಕೋಣೆಯಲ್ಲಿ ಇರಿಸಿದರೆ, ಈ ತೇವಾಂಶವು ಕೋಣೆಯಲ್ಲಿ ಹರಡಿ ಗೋಡೆಗಳ ಮೇಲೆ ಕಲೆ ಮೂಡುತ್ತದೆ.

    ಅಪಾಯ – ರೆಫ್ರಿಜರೇಟರ್‌ನಲ್ಲಿ ವಿದ್ಯುತ್ ತಂತಿಗಳಿದ್ದು, ಅವು ಹಾನಿಗೊಳಗಾದರೆ ಶಾರ್ಟ್ ಸರ್ಕ್ಯೂಟ್ ಅಪಾಯವಿದೆ. ರೆಫ್ರಿಜರೇಟರ್ ಅನ್ನು ಮುಚ್ಚಿದ ಕೋಣೆಯಲ್ಲಿ ಇರಿಸಿದರೆ, ಬೆಂಕಿಯ ಅಪಾಯವೂ ಹೆಚ್ಚಾಗಬಹುದು.

    ಗಾಳಿಯ ಹರಿವು – ಫ್ರಿಜ್ ಅನ್ನು ತಂಪಾಗಿರಿಸಲು ಗಾಳಿಯ ಹರಿವು ಅಗತ್ಯ. ಮುಚ್ಚಿದ ಕೋಣೆಯಲ್ಲಿ ಇರಿಸಿದರೆ, ಗಾಳಿಯ ಹರಿವಿಗೆ ಅಡಚಣೆಯಾಗಬಹುದು, ಇದರಿಂದಾಗಿ ರೆಫ್ರಿಜರೇಟರ್ ಹಾನಿಗೊಳಗಾಗಬಹುದು.

    ರೆಫ್ರಿಜರೇಟರ್ ಅನ್ನು ಎಲ್ಲಿ ಇಡಬೇಕು?

    ರೆಫ್ರಿಜರೇಟರ್ ಅನ್ನು ಯಾವಾಗಲೂ ಅಡುಗೆಮನೆಯಲ್ಲಿ ಅಥವಾ ಉತ್ತಮ ಗಾಳಿಯ ಹರಿವು ಇರುವ ಯಾವುದೇ ಕೋಣೆಯಲ್ಲಿ ಇರಿಸಬೇಕು. ಗೋಡೆಯಿಂದ ಸ್ವಲ್ಪ ದೂರದಲ್ಲಿ ಇರಿಸಿದರೆ ಉತ್ತಮ, ಇದರಿಂದ ಗಾಳಿಯು ಸುಲಭವಾಗಿ ಫ್ರಿಜ್ ಒಳಗೆ ಮತ್ತು ಹೊರಗೆ ಹೋಗಬಹುದು. ಇದು ಫ್ರಿಜ್‌ನ ಜೀವಿತಾವಧಿ ಮತ್ತು ಸಾಮರ್ಥ್ಯ ಎರಡನ್ನೂ ಹೆಚ್ಚಿಸುತ್ತದೆ.

    LATEST NEWS

    ಪ್ರಜಾಪ್ರಭುತ್ವದ ದೇಗುಲದಲ್ಲೇ ಅ*ತ್ಯಾ*ಚಾರ ಮಾಡಿದ್ರಾ ಮುನಿರತ್ನ..!?

    Published

    on

    ಬೆಂಗಳೂರು : ಜಾತಿ ನಿಂದನೆ ಹಾಗೂ ಕೊ*ಲೆ ಬೆದರಿಕೆ ಪ್ರಕರಣದಲ್ಲಿ ಸಿಲುಕಿಕೊಂಡು ಜೈಲು ಪಾಲಾಗಿದ್ದ ಶಾಸಕ ಮುನಿರತ್ನ ಸದ್ಯ ಅ*ತ್ಯಾಚಾರ ಪ್ರಕರಣದಲ್ಲಿ ಆ*ರೋಪಿಯಾಗಿ ಎಸ್‌ಐಟಿ ವಶದಲ್ಲಿದ್ದಾರೆ. ಇದೀಗ ಅ*ತ್ಯಾಚಾರ ಸಂತ್ರಸ್ತೆ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತನ್ನ ಮೇಲೆ ವಿಧಾನ ಸೌಧ ಹಾಗೂ ವಿಕಾಸ ಸೌಧದಲ್ಲೇ ಮನಿರತ್ನ ಅ*ತ್ಯಾಚಾರ ಮಾಡಿದ್ದಾಗಿ ಹೇಳಿದ್ದಾರೆ. ಸಂತ್ರಸ್ತೆಯ ಈ ಹೇಳಿಕೆಯಿಂದ ಶಾಸಕ ಮುನಿರತ್ನ ವಿರುದ್ಧ ಜನಾಕ್ರೋಶ ತೀವ್ರಗೊಂಡಿದೆ.

    ಪ್ರಜಾಪ್ರಭುತ್ವದ ದೇಗುಲ ಎಂದೇ ಕರೆಯುವ ವಿಧಾನ ಸೌಧದ ಮೂರನೇ ಮಹಡಿ ಹಾಗೂ ವಿಕಾಸ ಸೌಧದ ಮುನಿರತ್ನ ಕಚೇರಿಯಲ್ಲಿ ತನ್ನ ಮೇಲೆ ಅ*ತ್ಯಾಚಾರ ನಡೆಸಲಾಗಿದೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಜನರು ಶಾಸಕ ಮುನಿರತ್ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಕೆಲ ಕಾರ್ಯಕರ್ತರು ವಿಕಾಸ ಸೌಧದ ಬಳಿ ಅರ್ಚಕರನ್ನು ಕರೆತಂದು ಶುದ್ಧೀಕರಣ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ವೇಳೆ ಅನುಮತಿ ಪಡೆಯದೆ ವಿಕಾಸ ಸೌಧಕ್ಕೆ ತೆರಳಲು ಯತ್ನಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

     

    ಮುನಿರತ್ನ ವಿಚಾರವಾಗಿ ಹಲವು ಸ್ಫೋ*ಟಕ ವಿಚಾರಗಳು ಬಹಿರಂಗವಾಗುತ್ತಿದ್ದು, ತನ್ನ ನೀಚ ಕೃ*ತ್ಯಕ್ಕೆ ಅದೆಂತಾ ಕೀಳು ಮಟ್ಟಕ್ಕೆ ಇಳಿದಿದ್ದ ಅನ್ನೋದು ಗೊತ್ತಾಗಿದೆ. ಇದರ ನಡುವೆ ವಿಕಾಸ ಸೌಧ ಹಾಗೂ ವಿಧಾನ ಸೌಧದಲ್ಲೇ ಇಂತಹ ಹೇಯ ಕೃ*ತ್ಯ ನಡೆಸಿದ್ದು ಘೋರ ಅಪ*ರಾಧ ಅಲ್ಲದೆ ಬೇರೆನೂ ಅಲ್ಲ. ಇದೀಗ ಪೊಲೀಸರು ಸಂತ್ರಸ್ತೆಯ ಹೇಳಿಕೆಯ ವಿಚಾರವಾಗಿ ಮುನಿರತ್ನರನ್ನ ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.

    Continue Reading

    DAKSHINA KANNADA

    ಐಶ್ವರ್ಯಾ ರೈಗೆ ಆರೋಗ್ಯ ಸಮಸ್ಯೆ..! ಪೋಸ್ಟ್‌ ವೈರಲ್‌..!

    Published

    on

    ಮಂಗಳೂರು :  ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ ವಿಚಾರವಾಗಿ ಇತ್ತೀಚೆಗೆ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್‌ ಸಾಕಷ್ಟು ಸುದ್ದಿಯಾಗಿದ್ದರು. ಐಶ್ವರ್ಯಾ ರೈ ಹಾಗೂ ಅಭಿಶೇಖ್ ಬಚ್ಚನ್‌ ಡಿವೋರ್ಸ್‌ ವಿಚಾರವಾಗಿ ದಿನಕ್ಕೊಂದು ಸುದ್ದಿ ಹರಡುತ್ತಿತ್ತು. ಈ ನಡುವೆ ತನ್ನ ಸೌಂದರ್ಯದ ಕಡೆ ಗಮನ ಕೊಡುತ್ತಿದ್ದ ಐಶ್ವರ್ಯಾ ರೈ ಇದೀಗ ತೂಕ ಏರಿಸಿಕೊಂಡ ವಿಚಾರವಾಗಿ ಸುದ್ದಿಯಾಗಿದ್ದಾರೆ.

    ಐಷಾರಾಮಿ ಬ್ರಾಂಡ್ ಲೋರಿಯಲ್‌ನ ಜಾಗತಿಕ ರಾಯಭಾರಿಯಾಗಿರುವ ಐಶ್ವರ್ಯಾ ಇತ್ತೀಚೆಗೆ 2024 ರ ಫ್ಯಾಶನ್ ವೀಕ್‌ನಲ್ಲೂ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಧರಿಸಿದ್ದ ಕೆಂಪು ಬಣ್ಣದ ಉಡುಗೆ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಬಾಡಿ ಶೆಮಿಂಗ್ ರೀತಿಯಲ್ಲಿ ನಟಿ ಟ್ರೋಲ್ ಆಗುತ್ತಿದ್ದಾರೆ. ಪೋಸ್ಟ್ ಒಂದರಲ್ಲಿ “ನಾನು ಐಶ್ವರ್ಯ ಅವರನ್ನು ಸಾಕಷ್ಟು ವರ್ಷಗಳಿಂದ ನೋಡುತ್ತಿದ್ದೇನೆ. ಐಶ್ವರ್ಯಾ ಹಲವು ವರ್ಷಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಇದರಿಂದಾಗಿ ಡಯೆಟ್​ಗೆ ಮಾಡುತ್ತಿಲ್ಲ, ಜೊತೆಗೆ ತೂಕ ಇಳಿಸಿಕೊಳ್ಳುವ ಯಾವುದೇ ಔಷಧಿಗಳನ್ನು ಆಕೆ ತೆಗೆದುಕೊಳ್ಳುತ್ತಿಲ್ಲ. ಆದರೆ ನಾನು ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಬಹಿರಂಗಪಡಿಸುವುದಿಲ್ಲ” ಎಂದು ಬರೆಯಲಾಗಿದೆ. ಆದ್ರೆ ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಡಿಲೀಟ್ ಕೂಡಾ ಮಾಡಲಾಗಿದೆ.


    ಐಶ್ವರ್ಯಾ ರೈ ಕುರಿತಾದ ಇಂತಹ ವಿಚಾರಗಳು ಸುದ್ದಿಯಾಗುತ್ತಿರುವುದು ಇದೇನು ಹೊಸದಲ್ಲವಾದ್ರೂ, ಐಶ್ವರ್ಯ ತೂಕ ಹೆಚ್ಚಿಸಿಕೊಂಡಿದ್ದಾರೆ ಅನ್ನೋದು ಕೂಡಾ ಸುಳ್ಳಲ್ಲ. ಇತ್ತೀಚೆಗೆ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ಅವರು ದಪ್ಪವಾಗಿ ಕಾಣಿಸಿಕೊಂಡಿದ್ದು ಈ ಎಲ್ಲಾ ಚರ್ಚೆಗಳಿಗೆ ಕಾರಣವಾಗಿದೆ.

    Continue Reading

    DAKSHINA KANNADA

    ಮೊಬೈಲ್ ವಿಚಾರಕ್ಕೆ ಗಲಾಟೆ ಕೊ*ಲೆಯಲ್ಲಿ ಅಂತ್ಯ : ಆ*ರೋಪಿ ಅರೆಸ್ಟ್‌..!

    Published

    on

    ಮಂಗಳೂರು :  ತೋಟಾಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಸಮೀಪ ಸೆಪ್ಟಂಬರ್ 21 ರಂದು ನಡೆದಿದ್ದ ಕೊ*ಲೆ ಪ್ರಕರಣವನ್ನು ಭೇದಿಸುವಲ್ಲಿ ಪಣಂಬೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬೊಬ್ಬರ್ಯ ದೈವಸ್ಥಾನದ ಹಿಂಬದಿಯ ಸಮುದ್ರ ಕಿನಾರೆಯ ಬಳಿ ಭಾಗಲಕೋಟೆ ಮೂಲಕ 39 ವರ್ಷದ ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ ಎಂಬಾತನ ಕೊ*ಲೆ ನಡೆದಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ತೋಟಾ ಬೆಂಗ್ರೆಯ ನಿವಾಸಿಯಾಗಿರುವ ಧರ್ಮರಾಜ್ ಸುವರ್ಣ ಎಂಬಾತನನ್ನು ಬಂಧಿಸಿದ್ದಾರೆ.

    ಕೊ*ಲೆ ನಡೆಸಿ ಪರಾರಿಯಾಗಿ ಕೇರಳದ ಕೊಝಿಕೋಡ್‌ ಜಿಲ್ಲೆಯ ಚೊಂಪಾಳ ಎಂಬಲ್ಲಿ ಆ*ರೋಪಿ ಅಡಗಿಕೊಂಡಿದ್ದ. ಆ*ರೋಪಿಯ ಜಾಡು ಹಿಡಿದು ಹೋದ ಪೊಲೀಸರು ಸೆಪ್ಟಂಬರ್ 26 ನಸುಕಿನ ಜಾವ 3 ಘಂಟೆಗೆ ಆ*ರೋಪಿಯನ್ನು ಬಂಧಿಸಿದ್ದಾರೆ.  ಆ*ರೋಪಿ ಹಾಗೂ ಕೊ*ಲೆಯಾದ ಬಸವರಾಜ್ ವಡ್ಡರ್‌ ಕೆಲ ಸಮಯದಿಂದ ಸ್ನೇಹಿತರಾಗಿದ್ದರು. ಇತ್ತೀಚೆಗೆ ಧರ್ಮರಾಜ್ ಹೊಸ ಮೊಬೈಲ್ ಒಂದನ್ನು ಖರೀದಿ ಮಾಡಿದ್ದು, ಅದನ್ನು ಬಸವರಾಜ್‌ ವಡ್ಡರ್ ಉಪಯೋಗಕ್ಕೆ ಪಡೆದುಕೊಂಡಿದ್ದ. ಆದ್ರೆ ಮೊಬೈಲ್ ಹಿಂತಿರುಗಿಸದೆ ಸತಾಯಿಸಿದ್ದು, ಮೊಬೈಲ್ ಹಾಳು ಮಾಡಿದ್ದ ಎಂಬುವುದು ಧರ್ಮರಾಜ್ ಕೋಪಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು,  ಧರ್ಮರಾಜ್ ಕೋಪದಿಂದ ಮರದ ಸಲಾಕೆಯಿಂದ ಬಸವರಾಜ್ ವಡ್ಡರ್ ಮೇಲೆ ಹ*ಲ್ಲೆ ನಡೆಸಿದ್ದ. ಈ ವೇಳೆ ಗಂಭೀರ ಗಾಯಗೊಂಡಿದ್ದ ಬಸವರಾಜ್ ವಡ್ಡರ್ ರ*ಕ್ತಸ್ರಾವದಿಂದ ಮೃ*ತ ಪಟ್ಟಿದ್ದಾಗಿ ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಇದೀಗ ಧರ್ಮರಾಜ್‌ನನ್ನು  ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆಯನ್ನು ಮುಂದುವರೆಸಿದ್ದಾರೆ.

    Continue Reading

    LATEST NEWS

    Trending