LATEST NEWS
ಕರಿಮಣಿ ಮಾಲೀಕನ ವರದಕ್ಷಿಣೆ ಕಿರುಕುಳ…ಬದುಕಿಗೆ ಗುಡ್ ಬೈ ಹೇಳಿದ ಪತ್ನಿ! ಡೆತ್ ನೋಟ್ ನಲ್ಲಿತ್ತು ಆಕೆಯ ನೋವು
ಇತ್ತೀಚೆಗೆ ಕರಿಮಣಿ ಮಾಲೀಕ ನೀನಲ್ಲ ಅನ್ನೋ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸೌಂಡ್ ಮಾಡಿತ್ತು. ಅದೊಂದು ತಮಾಷೆ, ರೀಲ್ಸ್ ಗೀಳಿನವರಿಗೆ ಹುಚ್ಚು ಹಿಡಿಸುವ ಪದವಷ್ಟೇ ಆಗಿತ್ತಾದ್ರೂ ಆ ಹಾಡಿನ ಕಾರಣದಿಂದ ಬಾಗಲಕೋಟೆಯಲ್ಲೊಬ್ಬ ಪತಿ, ಪತ್ನಿ ಮಾಡಿದ ಕರಿಮಣಿ ಹಾಡಿನ ರೀಲ್ಸ್ನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಆದ್ರೆ ಮಂಡ್ಯದಲ್ಲೊಬ್ಬ ಕಿರಾತಕ ಕರಿಮಣಿಯ ಬೆಲೆಯೇ ತಿಳಿಯದೆ ಪತ್ನಿಗೆ ಹಿಂಸೆ ನೀಡಿ ಆಕೆಯ ಸಾವಿಗೆ ಕಾರಣನಾಗಿದ್ದಾನೆ.
ಏನಿದು ಪ್ರಕರಣ ?
ಈಗಿನ್ನೂ 26 ವರ್ಷವಾಗಿರೋ ಆಕೆಯ ಹೆಸರು ಪ್ರೇಮ ಕುಮಾರಿ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಲಿಂಗಾಪುರ ಗ್ರಾಮದವರು. 2022 ರಲ್ಲಿ ಪ್ರೇಮಕುಮಾರಿ ಅವರಿಗೆ ಮೈಸೂರಿನ ರಾಘವೇಂದರ ಎಂಬವರ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಸಲಾಗಿತ್ತು. ಸಾಮಾನ್ಯ ಕುಟುಂಬದವರಾಗಿದ್ದ ತಂದೆ ತಾಯಿ ಮಗಳು ಚೆನ್ನಾಗಿರಲಿ ಅಂತ ಸ್ವಲ್ಪ ಶ್ರೀಮಂತ ಹುಡುಗನನ್ನೇ ಹುಡುಕಿದ್ರು. ಹೀಗಿರುವಾಗ 150 ಗ್ರಾಮ ಚಿನ್ನ, ಹಾಗೂ ವರನಿಗೆ 5 ಲಕ್ಷ ವರದಕ್ಷಿಣೆ ಕೂಡಾ ನೀಡಿದ್ರು. ನಮ್ಮ ಮಗಳು ಶ್ರೀಮಂತರ ಮನೆಯಲ್ಲಿ ಚೆನ್ನಾಗಿ ಬಾಳುತ್ತಾಳೆ ಅಂತ ಪ್ರೇಮಕುಮಾರಿಯ ತಂದೆತಾಯಿ ಕನಸು ಕಂಡಿದ್ದರು.
ಆದ್ರೆ, ಆ ಕನಸು ಮೂರೆ ತಿಂಗಳಲ್ಲಿ ನುಚ್ಚು ನೂರಾಗಿ ಹೋಗಿದ್ದು, ಶ್ರೀಮಂತ ಅಳಿಯನ ಅಸಲಿ ಮುಖ ಹೊರ ಬಿದ್ದಿದೆ.
ಹಣ ಹಣ ಅಂತ ಪತ್ನಿ ಪ್ರೇಮಕುಮಾರಿಯನ್ನು ಪೀಡಿಸಲು ಆರಂಭಿಸಿದ್ದಾನೆ. ಕಷ್ಟದಲ್ಲಿ ಮದುವೆ ಮಾಡಿ ಕೊಟ್ಟಿದ್ದ ಪ್ರೇಮಕುಮಾರಿ ಮನೆಯವರಲ್ಲಿ 64 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದಾನೆ. ಹಣ ಇಲ್ಲಾಂದ್ರೆ ಮನೆಯಲ್ಲಿ ಜಾಗ ಇಲ್ಲಾ ಅಂತ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದಾನೆ.
ಕಮರಿದ ‘ವಕೀಲೆ’ ಕನಸು :
ಮದುವೆ ಆಗುವ ಮೊದಲು ವಕೀಲೆ ಆಗಬೇಕು ಅಂತಿದ್ದ ಪ್ರೇಮ ಕುಮಾರಿ ಮನೆಯವರ ಒತ್ತಾಯಕ್ಕೆ ಮದುವೆ ಆಗಿದ್ದಾಳೆ. ಆದ್ರೆ ಮದುವೆ ಆಗಿ ಮೂರೇ ತಿಂಗಳಲ್ಲಿ ಪತಿ ಮನೆಯವರು ವರದಕ್ಷಿಣೆ ನೆಪದಲ್ಲಿ ಮನೆಯಿಂದ ಹೊರ ಹಾಕಿದ್ದಾರೆ. ಹೀಗಾಗಿ ತವರು ಮನೆ ಸೇರಿದ್ದ ಪ್ರೇಮ ಕುಮಾರಿ ಮನೆಯಲ್ಲಿದ್ದೇ ವಕೀಲೇ ಆಗಬೇಕು ಕನಸಿಗೆ ಜೀವ ತುಂಬಿದ್ದಾರೆ. ಲಾ ವಿದ್ಯಾಭ್ಯಾಸ ಮುಂದುವರೆಸಿಕೊಂಡು ಎಲ್ಲಾ ನೋವು ನುಂಗಿಕೊಂಡು ತನ್ನ ಪಾಡಿಗೆ ತಾನಿದ್ದಳು. ಆದ್ರೆ ಕರಿಮಣಿ ಮಾಲೀಕ ಅನ್ನೋ ದಬ್ಬಾಳಿಕೆ ಮುಂದುವರೆಸಿದ್ದ ರಾಘವೇಂದ್ರ ಆಕೆಯ ತವರು ಮನೆಗೂ ಬಂದು ಕಿರುಕುಳ ನೀಡಲು ಆರಂಭಿಸಿದ್ದಾನೆ. ವರದಕ್ಷಿಣೆ ತೆಗೆದುಕೊಂಡು ಮನೆಗೆ ಬಾ ಇಲ್ಲಾ ಅಂದ್ರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಪ್ರೇಮಕುಮಾರಿಯ ಕೊನೆಯ ಪತ್ರ…
ಒಂದು ಕಡೆ ತಂದೆ ತಾಯಿಯ ನೋವು ನೋಡಲಾಗದೆ, ಮತ್ತೊಂದು ಕಡೆಯಲ್ಲಿ ಪತಿ ಅಂತ ಕರೆಸಿಕೊಂಡಿರುವ ಕಿರಾತಕನ ಉಪಟಳ ತಡೆಯಲಾಗದೆ ಕೊನೆಯ ತೀರ್ಮಾನ ತೆಗೆದುಕೊಂಡಿದ್ದಾರೆ. ವಕೀಲೆಯಾಗಿ ಜನರಿಗೆ ನ್ಯಾಯ ಒದಗಿಸಬೇಕು ಅಂತ ಕನಸು ಕಂಡವಳು ತನಗೆ ನ್ಯಾಯ ಒದಗಿಸಿ ಅಂತ ಕೊನೆಯ ಪತ್ರ ಬರೆದಿದ್ದಾರೆ.
ಲಾಯರ್ ಆಗುವ ನನ್ನ ಕನಸು ನಚ್ಚು ನೂರಾಗಿದೆ. ಇವರ ಕಾಟವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ನಿತ್ಯವು ಭಯದಲ್ಲೇ ಜೀವನವನ್ನು ದೂಡುವಂತಾಗಿದೆ. ಒಳ್ಳೆಯವರಂತೆ ನಟಿಸಿ, ಮೋಸ ಮಾಡಿದ್ದಾರೆ. ಅವರಿಗೆ ಸರಿಯಾದ ಶಿಕ್ಷೆ ಆಗಬೇಕು. ಹಣ ತರುವಂತೆ ಪತಿ ಕುಟುಂಬಸ್ಥರು ಒತ್ತಡ ಹೇರಿ ಪ್ರೇಮಕುಮಾರಿಯನ್ನು ತವರು ಮನೆಗೆ ಕಳಿಸಿದ್ದರು.
ಇತ್ತ ತವರು ಮನೆಯಲ್ಲೆ ಇದ್ದುಕೊಂಡೇ ಪ್ರೇಮ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಳು. ಇತ್ತೀಚಿಗೆ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲದಿದ್ದರಿಂದ ಕೊಲೆ ಮಾಡಿಸುವ ಬೆದರಿಕೆಯನ್ನೂ ಹಾಕಿದ್ದರು. ಶ್ರೀಮಂತ ಮನೆ ಸೊಸೆಯಾದ ನನಗೆ ಸಾಯುವ ಧೈರ್ಯವು ಇಲ್ಲ, ಬದುಕುವ ಆಸೆಯೂ ಇಲ್ಲ. ಗಂಡ ಬಿಟ್ಟವಳು, ಮಾರ್ಯಾದೆ ತೆಗೆಯುತ್ತಿದ್ದಾಳೆ ಎಂದು ಭಾವಿಸದೇ ನನ್ನ ಸಾವಿಗೆ ನ್ಯಾಯ ಕೊಡಿಸಿ.
ಹೀಗೇ ಐದು ಪುಟಗಳ ತನ್ನ ಕೊನೆಯ ಪತ್ರ ಬರೆದು ನ್ಯಾಯ ಕೋರಿದ ಪ್ರೇಮಕುಮಾರಿ ಕುಣಿಕೆಗೆ ಕೊರಳೊಡ್ಡಿ ಜೀವಾಂತ್ಯ ಗೊಳಿಸಿದ್ದಾರೆ. ಸದ್ಯ ಪತಿ ರಾಘವೇಂದ್ರ ಹಾಗೂ ಅವರ ಮನೆಯವರ ವಿರುದ್ಧ ಕಿಕ್ಕೆರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯ ಕೊಡಿಸಲು ವಕೀಲೆ ಆಗಬೇಕು ಅಂತ ಕನಸು ಕಂಡಿದ್ದ ಪ್ರೇಮಕುಮಾರಿಗೆ ಕರಿಮಣಿ ಮಾಲೀಕನೇ ಅನ್ಯಾಯ ಮಾಡಿದ್ದು, ಆಕೆಗೆ ಸದ್ಯ ಪೊಲೀಸರೇ ನ್ಯಾಯ ಕೊಡಿಸಬೇಕಾಗಿದೆ.
DAKSHINA KANNADA
ಹರಕೆ ತೀರಿಸಿದ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ; ಅಭಯವಿತ್ತ ದೈವ!
ಮಂಗಳೂರು : ತುಳುನಾಡು ದೈವಾರಾಧನೆಯ ನೆಲೆಬೀಡು. ಇಲ್ಲಿ ದೈವಗಳ ಮೇಲೆ ಅತೀವ ನಂಬಿಕೆಯಿದೆ. ನಂಬಿದವರ ಕೈಬಿಡದು ದೈವ ಎಂಬ ನಂಬಿಕೆ ತುಳವರದು. ಸೆಲೆಬ್ರಿಟಿಗಳೂ ದೈವಗಳನ್ನು ನಂಬುತ್ತಾರೆ. ಊರಿಗೆ ಬಂದು ದೈವಗಳಿಗೆ ಕೈ ಮುಗಿಯುತ್ತಾರೆ. ನಟಿ ಶ್ರೀನಿಧಿ ಶೆಟ್ಟಿ ಸಿನಿರಂಗದಲ್ಲಿ ಯಶಸ್ಸು ಬಾಚಿಕೊಳ್ಳುತ್ತಿದ್ದರೂ ಕೂಡ ದೈವಾರಾಧನೆ ಮರೆತಿಲ್ಲ. ಅವರು ತಾವು ಹೊತ್ತ ಹರಕೆಯನ್ನು ಪೂರೈಸಿದ್ದಾರೆ.
ಅಭಯವಿತ್ತ ದೈವ :
ಕೆಜಿಎಫ್ ಖ್ಯಾತಿಯ ಶ್ರೀನಿಧಿ ಶೆಟ್ಟಿ ಅವರ ಹರಕೆಯ ನೇಮೋತ್ಸವ ಕಿನ್ನಿಗೋಳಿಯ ಅವರ ಕುಟುಂಬದ ಮನೆ ತಾಳಿಪಾಡಿಗುತ್ತುವಿನಲ್ಲಿ ನಡೆಯಿತು. ಈ ಹಿಂದೆ ತಾನು ಹರಕೆ ಹೊತ್ತಂತೆ ಸೋಮವಾರ ಕಿನ್ನಿಗೋಳಿ ಸಮೀಪ ತಾಳಿಪಾಡಿಗುತ್ತುವಿನಲ್ಲಿ ಜಾರಾಂದಾಯ ಮತ್ತು ಪರಿವಾರ ದೈವಗಳಿಗೆ ನೇಮೋತ್ಸವ ನಡೆದಿದ್ದು, ಶ್ರೀ ನಿಧಿ ಶೆಟ್ಟಿಯವರ ಕುಟುಂಬ ವರ್ಗದವರು ಸಂಬಂಧಿಕರು ಪಾಲ್ಗೊಂಡರು.
ಇದನ್ನೂ ಓದಿ : ಮತ್ತೆ ಡೀಪ್ ಫೇಕ್ ಗೆ ಬಲಿಯಾದ ಆಲಿಯಾ ಭಟ್; ನಟಿಯ ವೀಡಿಯೋ ನೋಡಿ ಫ್ಯಾನ್ಸ್ ಶಾಕ್!
‘ಮುಂದೆ ಇನ್ನಷ್ಟು ಎತ್ತರಕ್ಕೆ ಏರುತ್ತೀರಿ’ ಎಂದು ದೈವಗಳು ಇದೇ ಸಂದರ್ಭ ಶ್ರೀನಿಧಿ ಶೆಟ್ಟಿಗೆ ಅಭಯ ನೀಡಿವೆ. ಸದ್ಯ ಶ್ರೀನಿಧಿ ಶೆಟ್ಟಿ ಸಿನಿಮಾಗಳಲ್ಲು ಬಿಝಿ ಆಗಿದ್ದಾರೆ. ಸಕತ್ ಚ್ಯೂಸಿ ಕೂಡ ಆಗಿದ್ದಾರೆ. ಕೆಜಿಎಫ್ 2 ಚಿತ್ರದಲ್ಲೂ ಬಿಝಿ ಆಗಿದ್ದಾರೆ. ಅತ್ತ ತೆಲುಗು ಸಿನಿರಂಗಕ್ಕೂ ಪದಾರ್ಪಣೆ ಮಾಡಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ಅವರ 47 ನೇ ಚಿತ್ರದಲ್ಲಿ ನಟಿಸುತ್ತಿದ್ದಾರೆ.
DAKSHINA KANNADA
ಖಾಸಗಿ ಕಾಲೇಜಿನ ಮಹಿಳಾ ಟಾಯ್ಲೆಟ್ ನಲ್ಲಿ ಮೊಬೈಲ್ ಪತ್ತೆ; ಆರೋಪಿ ಬಂಧನ
ಮಂಗಳೂರು : ಖಾಸಗಿ ಕಾಲೇಜಿನ 1ನೇ ಮಹಡಿಯಲ್ಲಿರುವ ಲೇಡಿಸ್ ಟಾಯ್ಲೆಟ್ ನಲ್ಲಿ ಮೊಬೈಲ್ ಪೋನ್ ಇಟ್ಟು ವಿಡಿಯೋ ರೆಕಾರ್ಡ್ ಮಾಡಲು ಪ್ರಯತ್ನಿಸಿದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 17 ವರ್ಷದ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.
ನಗರದ ವೈದ್ಯಕೀಯ ಕಾಲೇಜೊಂದರ ವಿದ್ಯಾರ್ಥಿನಿಯರ ಶೌಚಾಲಯದಲ್ಲಿ ಮೊಬೈಲ್ ಪತ್ತೆಯಾಗಿದ್ದು, ಸಿಸಿ ಕ್ಯಾಮರಾ ಆಧರಿಸಿ ಪರಿಶೀಲನೆ ನಡೆಸಿದಾಗ ಬಾಲಕನೊಬ್ಬ ಮೊಬೈಲ್ ಇಟ್ಟಿರುವುದು ಕಂಡು ಬಂದಿದೆ. ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ಬಾಲನ್ಯಾಯ ಮಂಡಳಿ ಮುಂದೆ ಹಾಜರುಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೇ 6 ರಂದು ಮಧ್ಯಾಹ್ನ 3.30 ಗಂಟೆಗೆ ಖಾಸಗಿ ಕಾಲೇಜಿನ 1 ನೇ ಮಹಡಿಯಲ್ಲಿರುವ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ರಿಂಗ್ ಆಗಿದೆ. ಈ ವೇಳೆ ಭದ್ರತಾ ಸಿಬಂದಿ ಹೋಗಿ ಪರಿಶೀಲನೆ ನಡೆಸಿದಾಗ ಟಾಯ್ಲೆಟ್ ನಲ್ಲಿ ಯಾರೂ ಇರಲ್ಲಿಲ್ಲ. ಅಲ್ಲದೆ ಮೊಬೈಲ್ ನ್ನು ಎಕ್ಸಾಸ್ಟ್ ಫ್ಯಾನ್ ಬಳಿ ಇಡಲಾಗಿದ್ದು ಕಂಡು ಬಂದಿದೆ.
ಇದನ್ನೂ ಓದಿ : ಪತಿ ಇನ್ನಿಲ್ಲ ಅನ್ನೋ ಸುದ್ದಿ ಗೊತ್ತಾಗಿ ಮತದಾನದ ಕೊನೆ ಆಸೆ ತೀರಿಸಿದ ಪತ್ನಿ..!
ಟಾಯ್ಲೆಟ್ ಗೆ ಬರುವ ಮಹಿಳೆಯರ ದೃಶ್ಯ ಸೆರೆ ಮಾಡಲು ಇರಿಸಿದ ಸ್ಥಿತಿಯಲ್ಲಿ ಮೊಬೈಲ್ ಕಂಡು ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ಮೊಬೈಲನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಬಾಲಕ ರೋಗಿಯ ಸೋಗಿನಲ್ಲಿ ವೈದ್ಯಕೀಯ ಕಾಲೇಜಿನ ಒಳಗೆ ಬಂದು ಶೌಚಾಲಯದಲ್ಲಿ ಮೊಬೈಲ್ ಇಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
DAKSHINA KANNADA
ಪತಿ ಇನ್ನಿಲ್ಲ ಅನ್ನೋ ಸುದ್ದಿ ಗೊತ್ತಾಗಿ ಮತದಾನದ ಕೊನೆ ಆಸೆ ತೀರಿಸಿದ ಪತ್ನಿ..!
ಮಂಗಳೂರು : ಅವರ ಪತಿ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ. ಅದೇ ದಿನ ರಾಜ್ಯದಲ್ಲಿ ಎರಡನೇ ಹಂತದ ಮತದಾನ ಕೂಡಾ ನಡೆದಿದೆ. ಆಕೆಗೆ ಪತಿ ಇನ್ನಿಲ್ಲ ಅನ್ನೋ ವಿಚಾರವನ್ನು ಯಾರೋ ತಿಳಿಸಿದ್ದಾರೆ. ಆದ್ರೆ ಆಕೆ ಪತಿಯ ಕೊನೆ ಆಸೆ ಈಡೇರಿಸಿದ ಬಳಿಕ ಪತಿಯ ಅಂತಿಮ ದರ್ಶನ ಪಡೆದಿದ್ದಾರೆ.
ಇದು ಮತದಾನ ಮಾಡದೇ ಇರುವವರಿಗೆ ಇವರೊಂದು ಪಾಠವಾಗಿದೆ. ಮಂಗಳವಾರ ರಾಜ್ಯದಲ್ಲಿ ನಡೆದ ಎರಡನೇ ಹಂತದ ಮತದಾನದಲ್ಲಿ ನಡೆದ ಘಟನೆ ಇದು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪ ಪಂಚಾಯತ್ ವ್ಯಾಪ್ತಿಯಲ್ಲಿ ಇದು ನಡೆದಿದೆ. ಇಲ್ಲಿನ ಆಡುಗೋಡಿನ ಕಲಾವತಿ ವೆಂಕಟೇಶ್ ಇವರ ಪತಿ ವೆಂಕಟೇಶ್ ಚುನಾವಣೆಯ ದಿನ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇನ್ನೇನು ಓಟು ಹಾಕಲು ಹೋಗಬೇಕು ಅನ್ನೋ ಅಷ್ಟರಲ್ಲಿ ಪತಿ ಇಹಲೋಕ ತ್ಯಜಿಸಿದ ಮಾಹಿತಿ ಪತ್ನಿ ಕಲಾವತಿಗೆ ಬಂದಿದೆ. ಆದ್ರೆ ಕಲಾವತಿ ಅವರು ಈ ವೇಳೆ ತಮ್ಮ ಅಮೂಲ್ಯ ಮತ ಚಲಾಯಿಸಿ, ಬಳಿಕ ಪತಿಯ ದೇಹವನ್ನು ನೋಡಲು ತೆರಳಿದ್ದಾರೆ.
ಪತಿ ಒಂದು ಪಕ್ಷದ ಅಭಿಮಾನಿಯಾಗಿದ್ದು ,ಆ ಪಕ್ಷದ ನಾಯಕನನ್ನು ಯಾವಾಗಲು ಜಪಿಸ್ತಾ ಇದ್ರು ಹಾಗಾಗಿ ಪತಿಯ ಕೊನೆಯ ಆಸೆಯಾಗಿ ಅವರ ಪ್ರೀಯಪಟ್ಟವರಿಗೆ ಮತ ಚಲಾಯಿಸಿದೆ ಅಂತ ಕಲಾವತಿ ಹೇಳಿಕೊಂಡಿದ್ದಾರೆ.
- DAKSHINA KANNADA5 days ago
ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್ಗಳ ಹಗಲು ದರೋಡೆ..! ಏನಿದು ಘಟನೆ?
- dehali6 days ago
ನಾಯಿಗಳಿಗೂ ಬಂತು ಆಧಾರ್ ಕಾರ್ಡ್.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?
- BELTHANGADY6 days ago
ವೇಷ ಕಳಚುವ ಮುನ್ನ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು
- DAKSHINA KANNADA7 days ago
ಭರತನಾಟ್ಯದಂತೆ ಯಕ್ಷಗಾನಕ್ಕೂ ಪರೀಕ್ಷೆ..! ಪಟ್ಲ ಸತೀಶ್ ಶೆಟ್ಟಿ