Connect with us

    LATEST NEWS

    20 ವರ್ಷಗಳಲ್ಲಿ 2000 ಸರಕಾರಿ ನೌಕರರ ಸೃಷ್ಟಿ; ಕೇರಳದ ಗ್ರಾಮೀಣ ಗ್ರಂಥಾಲಯದ ವಿಶಿಷ್ಟ ಸಾಧನೆ

    Published

    on

    ತ್ರಿಶೂರ್: ಗ್ರಂಥಾಲಯಗಳು ಜ್ಞಾನದ ಹೆಬ್ಬಾಗಿಲು ಎಂದೇ ಜನ ಜನಿತವಾಗಿವೆ. ಆದರೆ ಇವತ್ತಿನ ಮೊಬೈಲ್ ಫೋನ್‌ ಯುಗದಲ್ಲಿ ಪುಸ್ತಕದ ಓದು ಮತ್ತು ಪತ್ರಿಕೆಗಳ ಓದು ಬಹಳಷ್ಟು ಕಡಿಮೆಯಾಗಿದೆ. ಹಾಗಾಗಿ ಗ್ರಂಥಾಲಯಗಳಿಗೆ ಭೇಟಿ ನೀಡುವವರು ವಿರಳ. ಈ ಎಲ್ಲಾ ಋಣಾತ್ಮಕ ವಿದ್ಯಮಾನಗಳ ನಡುವೆಯೂ ಕೇರಳದ ತೃಶೂರು ಜಿಲ್ಲೆಯ ಅರನಾಟ್ಟುಕರ ಗ್ರಾಮೀಣ ಗ್ರಂಥಾಲಯವು ಒಂದು ಕ್ರಾಂತಿಯನ್ನೇ ಮಾಡಿದೆ. ಈ ಕುರಿತಂತೆ ಮಾತೃ ಭೂಮು ಪತ್ರಿಕೆ ವರದಿ ಮಾಡಿದೆ.

    ಈ ಗ್ರಂಥಾಲಯವು ವಿವಿಧ ಸರಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತರಬೇತಿ ನೀಡುವ ಮೂಲಕ ಗ್ರಾಮೀಣ ಯುವಕರಿಗೆ ಸುಭದ್ರ ಭವಿಷ್ಯವನ್ನು ಒದಗಿಸಿ ಅಕ್ಷರಶಃ ಹೊಸ ಪ್ರಪಂಚವನ್ನು ತೆರೆದಿದೆ. ಕಳೆದ 20 ವರ್ಷಗಳಲ್ಲಿ ಇಲ್ಲಿ ತರಬೇತಿ ಪಡೆದು ಎರಡು ಸಾವಿರಕ್ಕೂ ಹೆಚ್ಚು ಮಂದಿ ಸರಕಾರಿ ನೌಕರಿಯನ್ನು ಗಿಟ್ಟಿಸಿಕೊಂಡಿದ್ದಾರೆ.

    2003ರಲ್ಲಿ ಲಾಲೂರು ಎಸ್‌ಎನ್‌ಡಿಪಿ ಸಭಾಂಗಣದಲ್ಲಿ ಕೇವಲ 11 ಮಂದಿಯೊಂದಿಗೆ ಕಾರ್ಯಾರಂಭ ಮಾಡಿದ ಗ್ರಂಥಾಲಯವು ಲೋಕ ಸೇವಾ ಆಯೋಗ ನಡೆಸುವ ಪರೀಕ್ಷೆಗಳ ಕುರಿತಂತೆ ಉಚಿತ ತರಬೇತಿಯನ್ನು ನೀಡುತ್ತಿದೆ.

    ಗ್ರಂಥಾಲಯದ ಕಾರ್ಯದರ್ಶಿಯಾಗಿದ್ದ ಸತ್ಯನ್ ಲಾಲೂರ್ ಈ ತರಬೇತಿ ತರಗತಿಗೆ ಚಾಲನೆ ನೀಡಿದ್ದರು. ಸತ್ಯನ್ ಲಾಲೂರ್ 2019 ರಲ್ಲಿ ನಿಧನರಾಗಿದ್ದರೂ, ಅವರು ಆರಂಭಿಸಿದ್ದ ವ್ಯವಸ್ಥೆಯನ್ನು ಅವರ ಉತ್ತರಾಧಿಕಾರಿಗಳು ಮುಂದುವರಿಸಿದ್ದಾರೆ. ‘ತನಲ್’ ಹೆಸರಿನ ಚಾರಿಟಬಲ್ ಟ್ರಸ್ಟ್ ರಚಿಸುವ ಮೂಲಕ ಕೆಲಸಗಳನ್ನು ಮಾಡಲಾಗುತ್ತದೆ. ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾದಂತೆ ತರಗತಿಯನ್ನು ವಾಚನಾಲಯಕ್ಕೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಐದು ಬ್ಯಾಚ್‌ಗಳಲ್ಲಿ ಸುಮಾರು 150 ಜನರು ತರಬೇತಿ ಪಡೆಯುತ್ತಿದ್ದಾರೆ. ವಾಚನಾಲಯಕ್ಕೆ ಸೀಮಿತವಾಗಿದ್ದ ತರಗತಿ ಈಗ ಜಿಲ್ಲೆಯ ವಿವಿಧೆಡೆ 14 ಕಡೆಗೆ ವಿಸ್ತರಿಸಿದೆ.

    ಇಲ್ಲಿನ ವಿಶೇಷತೆ ಎಂದರೆ ಉದ್ಯೋಗ ಸಿಕ್ಕಿದ ಬಳಿಕ ‘ತನಲ್‌’ ಸದಸ್ಯರಾಗ ಬೇಕು. ಪ್ರತಿ ಸದಸ್ಯರು ಟ್ರಸ್ಟ್‌ಗೆ ತಿಂಗಳಿಗೆ 100 ರೂ. ಕೊಡುಗೆ ನೀಡುತ್ತಾರೆ. ಸದಸ್ಯರು ಪ್ರತಿ ತಿಂಗಳ ಎರಡನೇ ಶನಿವಾರ ಗ್ರಂಥಾಲಯದಲ್ಲಿ ಸಭೆ ನಡೆಸಿ ಕೆಲಸ ಪರಿಶೀಲಿಸುತ್ತಾರೆ. ಉಚಿತ ತರಗತಿಗಳಷ್ಟೇ ಅಲ್ಲ, ಅಭ್ಯರ್ಥಿಗಳಿಗೆ ಅಗತ್ಯ ಅಧ್ಯಯನ ಸಾಮಗ್ರಿಗಳನ್ನೂ ಒದಗಿಸಲಾಗುತ್ತದೆ. ಟ್ರಸ್ಟ್ ಸದಸ್ಯರೇ ತರಬೇತಿ ನೀಡುತ್ತಾರೆ.

    kerala

    ಕೇರಳದಲ್ಲಿ ಅಮೀಬಾ ಕಾಯಿಲೆಗೆ 3 ಮಕ್ಕಳ ಬಲಿ..!

    Published

    on

    ಮಂಗಳೂರು ( ಕೇರಳ ) : ಕೇರಳದಲ್ಲಿ ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) ಎಂದು ಕರೆಯಲಾಗುವ ಮೆದಳು ಸಂಬಂಧಿ ಕಾಯಿಲೆ ಮಕ್ಕಳು ಬಲಿಯಾಗುತ್ತಿದ್ದಾರೆ. ಇಂದು ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ವರ್ಷ ಪ್ರಾಯದ ಮೃದುಲ್ ಎಂಬ ಬಾಲಕನ ಸಾವಿನೊಂದಿಗೆ ಸಾವಿನ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

    ಪ್ರೈಮರಿ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ (PAM) 

    ಅಮೀಬಾ ನೇಗ್ಲೇರಿಯಾ ಫೌಲೆರಿ ಎಂದು ಕರೆಯಲಾಗುವ ಮೆದುಳು ತಿನ್ನುವ ಅಮೀಬಾದಿಂದ ಈ ಕಾಯಿಲೆ ಹರಡುತ್ತದೆ. ವಿಶೇಷ ಅಂದ್ರೆ ಈ ಕಾಯಿಲೆ ನಿಂತ ನೀರಿನ ಕೆರೆ, ಈಜುಕೊಳ ಮೊದಲಾದ ಕಡೆಯಲ್ಲಿ ಸ್ನಾನ ಮಾಡಿದವರಿಗೆ ಹರಡಿದ್ದು ಮೃತ ಮೂವರೂ ಈ ರೀತಿ ಸ್ನಾನ ಮಾಡಿದವರಾಗಿದ್ದಾರೆ. ಇಲ್ಲಿಂದಲೇ ಈ ಅಮಿಬಾ ಮಕ್ಕಳ ದೇಹ ಪ್ರವೇಶ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಜೂನ್ 16 ರಂದು ಕೋಯಿಕ್ಕೋಡ್‌ನ ಅಚಂಕುಲಂ ಫಾರೂಕ್ ಕಾಲೇಜು ಬಳಿಯ ಕೆರೆಯಲ್ಲಿ ಮೃದುಲ್ ಈಜಾಡಿದ್ದಾನೆ . ಬಳಿಕ ಮೃದುಲ್‌ಗೆ ರೋಗ ಲಕ್ಷಣ ಕಾಣಿಸಿದ ತಕ್ಷಣ ಪಾಲಿಕೆ ಅಧಿಕಾರಿಗಳು ಕೆರೆಯನ್ನು ಮುಚ್ಚಿದ್ದಾರೆ. ಕಣ್ಣೂರಿನ 13 ವರ್ಷದ ದಕ್ಷಿಣಾ ಎಂಬ ಬಾಲಕಿ ಜೂನ್ 12 ರಂದು ಇದೇ ಕಾಯಿಲೆಯಿಂದ ಮೃತ ಪಟ್ಟಿದ್ದಳು. ಜನವರಿಯಲ್ಲಿ ಶಾಲೆಯಿಂದ ಮುನ್ನಾರ್‌ಗೆ ಅಧ್ಯಯನ ಪ್ರವಾಸ ಹೋಗಿದ್ದಾಗ ಈಜುಕೊಳದಲ್ಲಿ ಸ್ನಾನ ಮಾಡಿದ ಬಳಿಕ ಈ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಇನ್ನು ಮಲ್ಲಪುರಂ ಜಿಲ್ಲೆಯ ಮುನ್ನಿಯೂರ್ ಕಲಿಯತ್ತಮುಕ್ ಮೂಲದ ಫದ್ವಾ ಎಂಬ 5 ವರ್ಷದ ಮಗು ಕೂಡಾ ಇದೇ ರೋಗ ಲಕ್ಷಣದಿಂದ ಮೃತ ಪಟ್ಟಿದ್ದು, ಮಗು ಮನೆಯ ಸಮೀಪದ ಕಾಡುಂಡಿಪುಳ ಎಂಬಲ್ಲಿ ಸ್ನಾನ ಮಾಡಿದ ಬಳಿಕ ಜ್ವರ ಕಾಣಿಸಿಕೊಂಡಿತ್ತು.

    ರೋಗದ ಗುಣ ಲಕ್ಷಣ

    ನಾಗ್ಲೇರಿಯಾ ಫೌಲೆರಿ ಅಮೀಬಾ ಮೂಗಿನ ಮೂಲಕ ವಾಸನೆಯನ್ನು ಗ್ರಹಿಸುವ ನರಗಳ ಮೂಲಕ ಮೆದುಳನ್ನು ಪ್ರವೇಶಿಸುತ್ತವೆ. ಮೆದುಳು ಮತ್ತು ಮೆನಿಂಜಸ್ ಎಂಬ ಭಾಗವನ್ನು ಆವರಿಸಿಕೊಳ್ಳುವ ಮೂಲಕ ಜೀವಕ್ಕೆ ಅಪಾಯ ತಂದೊಡ್ಡುತ್ತಿದೆ. ರೋಗಾಣುಗಳು ಮೆದುಳಿಗೆ ಪ್ರವೇಶಿಸಿದ 5-7 ದಿನಗಳಲ್ಲಿ ರೋಗಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಸಾಮಾನ್ಯ ರೋಗಲಕ್ಷಣಗಳೆಂದರೆ ಅಧಿಕ ಜ್ವರ, ತಲೆನೋವು, ವಾಂತಿ, ಅರೆನಿದ್ರಾವಸ್ಥೆ ಹಾಗೂ ನಿತ್ರಾಣ ಉಂಟಾಗುತ್ತದೆ. ಮೆದುಳನ್ನು ಅಮೀಬಾ ತಿನ್ನುವುದರಿಂದ ಮೆದುಳಿನ ಕೋಶಗಳು ನಾಶವಾಗಿ ಜೀವಹಾನಿ ಸಂಭವಿಸುತ್ತಿದೆ. 10,000 ಜನರಲ್ಲಿ ಒಬ್ಬರಿಗೆ ಬರುವ ಈ ಅಪರೂಪದ ಕಾಯಿಲೆಯಲ್ಲಿ ಬದುಕುಳಿಯುವ ಸಾಧ್ಯತೆ ಕೇವಲ 3% ಮಾತ್ರ.

    Continue Reading

    LATEST NEWS

    ಮದುವೆಗೂ ಮೊದಲು ಹುಡುಗರು ಹುಡುಗಿಯ ಬಳಿ ಈ ಪ್ರಶ್ನೆಗಳನ್ನು ಕೇಳಲೇಬೇಕಂತೆ!

    Published

    on

    ಮಂಗಳೂರು: ಮದುವೆ, ಸಂಸಾರ ಹಾಗೂ ಮಕ್ಕಳು ಎಲ್ಲವೂ ಸರಿಯಾದ ಸಮಯಕ್ಕೆ ಆದರೇನೇ ಚಂದ ಎನ್ನುವ ಮಾತಿದೆ. ಆದರೆ ಈಗಿನ ಕಾಲದಲ್ಲಿ ಮದುವೆಯನ್ನು ಮುಂದಕ್ಕೆ ಹಾಕುವವರೇ ಹೆಚ್ಚಾಗಿದ್ದಾರೆ. ಮದುವೆಗೆ ವಧು ಹುಡುಕುತ್ತಿರುವಾಗ, ಮನೆಯ ಹಿರಿಯರು ಹುಡುಗಿಯ ಮನೆಗೆ ಹೋಗುವ ಸಂಪ್ರದಾಯವಿದೆ. ಹುಡುಗಿ ನೋಡುವ ಶಾಸ್ತ್ರದ ಬಳಿಕ ಹುಡುಗ ಮತ್ತು ಹುಡುಗಿ ಪರಸ್ಪರ ಮಾತನಾಡಲು ಅವಕಾಶವಿರುತ್ತದೆ. ಈ ವೇಳೆ ಆಕೆಯ ಬಳಿ ಈ ಪ್ರಶ್ನೆಗಳನ್ನು ಕಡ್ಡಾಯವಾಗಿ ಕೇಳಲೇ ಬೇಕಂತೆ. ಹುಡುಗಿಯು ನೀಡುವ ಉತ್ತರವು ಈಕೆಯು ತನಗೆ ಸಂಗಾತಿಯಾಗಲು ಅರ್ಹಳೇ ಎನ್ನುವುದಕ್ಕೆ ಸ್ಪಷ್ಟತೆಯೂ ಸಿಗುತ್ತದೆಯಂತೆ.

    ಯಾವ ರೀತಿಯ ಜೀವನ ಸಂಗಾತಿಯ ಬೇಕೆಂದು ಪ್ರಶ್ನಿಸಿ

    ತಮ್ಮ ಜೀವನ ಸಂಗಾತಿಯ ಕುರಿತು ಎಲ್ಲರೂ ಕನಸುಗಳನ್ನು ಕಟ್ಟಿರುತ್ತಾರೆ. ಹೀಗಾಗಿ ಹುಡುಗರು ಹುಡುಗಿಯ ಬಳಿ ಯಾವ ರೀತಿಯ ವ್ಯಕ್ತಿಯನ್ನು ತನ್ನ ಜೀವನ ಸಂಗಾತಿಯನ್ನಾಗಿ ಪಡೆಯಲು ಬಯಸುತ್ತೀರಾ ಎನ್ನುವ ಪ್ರಶ್ನೆಯನ್ನು ಕೇಳುವುದು ಒಳ್ಳೆಯದು. ಆಕೆಯ ಉತ್ತರಕ್ಕೆ ತಕ್ಕಂತೆ ನೀವಿದ್ದರೆ ನೀವು ಅವರಿಗೆ ಸರಿಯಾದ ಸಂಗಾತಿಯಾದಂತೆಯೇ ಎನ್ನುವುದು ನಿಮಗೆ ತಿಳಿಯುತ್ತದೆ.

    ಇಷ್ಟ ಕಷ್ಟಗಳ ಬಗ್ಗೆ ತಿಳಿಯಿರಿ

    ಹುಡುಗ ಹುಡುಗಿಯ ಮಾತುಕತೆಯ ವೇಳೆಯಲ್ಲಿ ತನ್ನ ಇಷ್ಟ ಕಷ್ಟಗಳ ಬಗ್ಗೆ ಚರ್ಚಿಸುವುದು ಒಳ್ಳೆಯದು. ಹುಡುಗಿಯ ಇಷ್ಟವೇನು ಎನ್ನುವುದು ತಿಳಿಯುವುದು ಮುಖ್ಯ. ಇಬ್ಬರ ಇಷ್ಟ ಕಷ್ಟಗಳು ಒಂದೇಯಾಗಿದ್ದರೆ ಮದುವೆಯ ನಿರ್ಧಾರಕ್ಕೆ ಹೋಗಬಹುದು. ಒಂದು ವೇಳೆ ಇಬ್ಬರ ಇಷ್ಟಗಳು ತದ್ವಿರುದ್ದವಾಗಿದ್ದರೆ ಸಂಬಂಧವನ್ನು ಮುಂದುವರೆಸುವುದೇ ಬೇಡವೇ ಎನ್ನುವುದರ ಬಗ್ಗೆ ನಿಮಗೆ ಸ್ಪಷ್ಟ ಚಿತ್ರಣವು ಸಿಗುತ್ತದೆ.

    ಸೇವಿಸುವ ಆಹಾರದ ಬಗ್ಗೆ ಮಾತನಾಡಿ

    ಹುಡುಗನಾಗಿರಲಿ ಅಥವಾ ಹುಡುಗಿಯಾಗಿರಲಿ, ನಿಮ್ಮ ಭವಿಷ್ಯದ ಜೀವನ ಸಂಗಾತಿಯ ಬಳಿ ಸಸ್ಯಾಹಾರಿ ಅಥವಾ ಮಾಂಸಾಹಾರಿಯೇ? ಎನ್ನುವ ಪ್ರಶ್ನೆಗಳನ್ನು ಕೇಳಲೇಬೇಕು. ಇಬ್ಬರ ಆಹಾರ ಹಾಗೂ ಅಭಿರುಚಿಗಳು ಬೇರೆ ಬೇರೆಯಾಗಿದ್ದರೆ ಬದುಕು ಕಷ್ಟವೆನಿಸುತ್ತದೆ.

    ಭವಿಷ್ಯದ ಯೋಜನೆಯ ಬಗ್ಗೆ ಪ್ರಶ್ನಿಸಿ

    ಈಗಿನ ಕಾಲದಲ್ಲಿ ಬಹುತೇಕ ಹುಡುಗಿಯರು ಉದ್ಯೋಗದಲ್ಲಿರುತ್ತಾರೆ. ಹೀಗಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಕೆಲವೊಮ್ಮೆ ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಇರಬಹುದು. ಆದರೆ ಕೆಲ ವಿವಾಹದ ಬಳಿಕ ಉದ್ಯೋಗಕ್ಕೆ ಹೋಗಬೇಕು, ಹೀಗೆ ಜೀವನ ನಡೆಯಬೇಕು ಎಂದು ಕೊಂಡಿರುತ್ತಾರೆ. ಪರಸ್ಪರ ಪ್ರಶ್ನಿಸಿ ಉತ್ತರ ಕಂಡುಕೊಂಡರೆ ಇಬ್ಬರಿಗೂ ತಮ್ಮ ಭವಿಷ್ಯದ ಯೋಜನೆಯ ಬಗ್ಗೆ ಸ್ಪಷ್ಟನೆ ಸಿಗುತ್ತದೆ. ಇಬ್ಬರ ಜೀವನದ ಗುರಿಗಳು ವಿರುದ್ಧ ದಿಕ್ಕಿನಲ್ಲಿದ್ದರೆ ಜೊತೆಯಾಗಿ ಬದುಕಲು ಕಷ್ಟವಾಗಬಹುದು. ಈ ಪ್ರಶ್ನೆಯನ್ನು ಮದುವೆಗೂ ಮುಂಚಿತವಾಗಿ ಕೇಳುವುದು ಸೂಕ್ತ.

    Continue Reading

    FILM

    ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ

    Published

    on

    ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಆರೋಪದಡಿ ಬಂಧಿತರಾಗಿರುವ ನಟ ದರ್ಶನ್ ತೂಗುದೀಪ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 18 ರವರೆಗೆ ವಿಸ್ತರಿಸಿ 24ನೇ ಎಸಿಎಂಎಂ ಕೋರ್ಟ್ ಗುರುವಾರ(ಜು.4) ಆದೇಶ ಹೊರಡಿಸಿದೆ.


    ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಹಾಗೂ ಇತರ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದು(ಜು.4) ಅಂತ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಜಡ್ಜ್​ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು.

    ಇದನ್ನೂ ಓದಿ : WATCH : ಕೂದಲು ಕತ್ತರಿಸಿಕೊಂಡ ಹೀನಾ ಖಾನ್; ಗೆಲ್ಲಬೇಕು ಅಂದ್ರೆ ಕಠಿಣ ನಿರ್ಧಾರ ತೆಗೆದುಕೊಳ್ಳಲೇ ಬೇಕು ಎಂದ ನಟಿ

    ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸುವಂತೆ ಎಸ್​ಪಿಪಿ ರಿಮ್ಯಾಂಡ್ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನವನ್ನು ಜುಲೈ 18ರ ವರೆಗೆ ವಿಸ್ತರಿಸಿ ಕೋರ್ಟ್ ಆದೇಶಿಸಿದೆ.

    Continue Reading

    LATEST NEWS

    Trending