Connect with us

kerala

ಎಟಿಎಂ ಮೆಷಿನ್‌ಗೆ ಹಣ ತುಂಬಲು ಬಂದ ವಾಹನಕ್ಕೆ ಕನ್ನ..!! ಲಕ್ಷಾಂತರ ರೂ. ದೋಚಿದ ಖದೀಮರು

Published

on

ಕಾಸರಗೋಡು: ಎಟಿಎಂ ಮಿಷಿನ್ ಗೆ ಹಣ ತುಂಬಿಸಲೆಂದು ಬಂದಿದ್ದ ವಾಹನದಿಂದಲೇ ಹಾಡಹಗಲೇ 50 ಲಕ್ಷ ಹಣವನ್ನು ಖತರ್ನಾಕ್ ಖದೀಮರು ದರೋಡೆಗೈದ ಘಟನೆ ಬುಧವಾರದಂದು (ಮಾ.27) ಉಪ್ಪಳ ಪೇಟೆಯಲ್ಲಿ ನಡೆದಿದೆ.

ವಾಹನದ ಗಾಜು ಪುಡಿ ಮಾಡಿ ಕೃತ್ಯ ಎಸಗಿದ ಕಳ್ಳರು..!!

ATM amount theft

ದರೋಡೆಕೋರರು ವಾಹನದ ಗಾಜನ್ನು ಪುಡಿಗೈದು ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ. ವಾಹನದಲ್ಲಿದ್ದ ನೌಕರರು ವಾಹನವನ್ನು ನಿಲ್ಲಿಸಿ ಎಟಿಎಂ ಮೆಷಿನ್‌ ತೆರೆದು ವಾಹನದಲ್ಲಿದ್ದ ಹಣದ ಬಾಕ್ಸ್ ತೆಗೆದುಕೊಂಡು ಹೋಗಲು ಮರಳಿ ಬಂದ ವೇಳೆ ವಾಹನದ ಗಾಜು ಪುಡಿಯಾಗಿತ್ತು. ಪರಿಶೀಲಿಸಿದಾಗ 50 ಲಕ್ಷ ರೂ. ಇದ್ದ ಬಾಕ್ಸ್ ನಾಪತ್ತೆಯಾಗಿದೆ. ಖಾಸಗಿ ಏಜೆನ್ಸಿಯ ವಾಹನದಲ್ಲಿ ಹಣವನ್ನು ತಂದು ಎಟಿಎಂ ತುಂಬಿಸಲಾಗುತ್ತಿತ್ತು. ವಾಹನದ ಗಾಜನ್ನು ಒಡೆದು ಕೃತ್ಯ ನಡೆಸಲಾಗಿದೆ.

ಮಂಜೇಶ್ವರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು, ವಾಹನದ ಚಾಲಕ ಮತ್ತು ನೌಕರನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಸಮೀಪದ ಸಿಸಿ ಕ್ಯಾಮರಾ ಮೂಲಕ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

kerala

ಇದು ಅವಳಿ ಮಕ್ಕಳ ಗ್ರಾಮ.. ಇಲ್ಲಿದ್ದಾರೆ 450ಕ್ಕೂ ಹೆಚ್ಚು ಅವಳಿ-ಜವಳಿ ಮಕ್ಕಳು

Published

on

ದೇಶದ ನಾನಾ ಭಾಗಗಳು ಒಂದಲ್ಲಾ ಒಂದು ರೀತಿಯ ವಿಶೇಷತೆಯನ್ನು ಹೊಂದಿರುತ್ತದೆ. ಅದೇ ರೀತಿ ಭಾರತದಲ್ಲೂ ಒಂದು ಗ್ರಾಮವಿದೆ. ಸಾಮಾನ್ಯವಾಗಿ ಒಂದು ಊರಿನಲ್ಲಿ ಎರಡೂ ಅಥವಾ ನಾಲ್ಕು ಅವಳಿ ಮಕ್ಕಳು ಇರುತ್ತಾರೆ. ಆದರೆ ಈ ಗ್ರಾಮದಲ್ಲಿ 450ಕ್ಕೂ ಹೆಚ್ಚು ಮಂದಿ ಅವಳಿಗಳಿದ್ದಾರೆ.

ಕೇರಳದ ಮಲಪ್ಪುರಂ ಜಿಲ್ಲೆಯ ಒಂದು ಹಳ್ಳಿಯಾದ ಕೊಡಿನ್ಹಿ ಇಂತಹ ಒಂದು ಅದ್ಭುತಕ್ಕೆ ಹೆಸರುವಾಸಿಯಾಗಿದೆ. ಈ ಗ್ರಾಮಕ್ಕೆ ಟ್ವಿನ್ ಟೌನ್ ಗ್ರಾಮ ಎಂದು ಕರೆಯುತ್ತಾರೆ. ಕೊಚ್ಚಿಯಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಈ ಗ್ರಾಮದಲ್ಲಿ ಸುಮಾರು 2 ಸಾವಿರ ಕುಟುಂಬಗಳು ವಾಸವಾಗಿದೆ.

ಅವಳಿ ಜನನದ ಕುರಿತಾಗಿ ಲಂಡನ್, ಜರ್ಮನಿ, ಹೈದರಾಬಾದ್ ಮತ್ತು ಕೇರಳ ವಿಶ್ವವಿದ್ಯಾನಿಲಯಗಳು ಲಾಲಾರಸ ಮತ್ತು ಕೂದಲಿನ ಮಾದರಿಯನ್ನು ಸಂಗ್ರಹಿಸಿ ಕೊಡಿನಿ ಗ್ರಾಮದ ಕುರಿತು ಸಂಶೋಧನೆ ನಡೆಸಿದ್ದಾರೆ. ಆದರೆ ಸಂಶೋಧನೆಯಿಂದ ನಿಖರವಾದ ಉತ್ತರ ದೊರೆತಿಲ್ಲ.

ಮೂಲವಾಗಿ ಕೊಡಿನಿ ಗ್ರಾಮದಲ್ಲಿ ಹರಿಯುವ ಸ್ಥಳೀಯ ನೀರು ಮತ್ತು ವಾತಾವರಣದಿಂದಾಗಿ ಅವಳಿ ಮಕ್ಕಳ ಜನನಕ್ಕೆ ಕಾರಣವಾಗಿದೆ ಎಂದು ವಿಜ್ಞಾನಿಗಳ ಅನಿಸಿಕೆ. ಎಲ್ಲಾ ತಾಯಂದಿರು ಅವಳಿ ಮಕ್ಕಳಿಗೆ ಜನನ ನೀಡಿದ್ದರೂ ಕೂಡ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ.

ಇದನ್ನೂ ಓದಿ : ದುಬೈನಲ್ಲಿ ಕೈಬೀಸಿ ಕರೆಯುತ್ತಿದೆ ಕಡಲ ಮೇಲೆ ತೇಲಾಡುವ ‘ಕ್ವೀನ್ ಎಲಿಜಬೆತ್ 2’ ಅರಮನೆ; ಹೇಗಿದೆ ವೈಭವ?

ಇಲ್ಲಿನ ತರಗತಿಯಲ್ಲಿ ಕನಿಷ್ಠ ಎರಡು ಅಥವಾ ಮೂರು ಅವಳಿ ಜೋಡಿಗಳು ಇರುತ್ತಾರಂತೆ. ಇಬ್ಬರೂ ಒಂದೇ ತರಹ ಇರುವ ಕಾರಣ ಯಾರು ಯಾರೆಂದು ತಿಳಿಯುವುದು ಕಷ್ಟ.

Continue Reading

DAKSHINA KANNADA

ಬೇಸಿಗೆಯ ಬಿಸಿ ತಡೆಯಲಾರದೆ 14 ಲಕ್ಷ ವೆಚ್ಚದಲ್ಲಿ ಕೂಲ್ ಹೋಮ್ ನಿರ್ಮಾಣ ಮಾಡಿದ ಯುವ ಇಂಜಿನಿಯರ್

Published

on

ಎಲ್ಲೆಲ್ಲೂ ಬಿಸಿ ಬಿಸಿ. ಬಿರು ಬೇಸಿಗೆಯಲ್ಲಿ ಇರಲಾರದೆ ಜನರು ತಂಪಿನ ತಾಣಗಳನ್ನು ಹುಡುಕಿಕೊಂಡು ಹೋಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಂಪಿನ ವಾತಾವರಣ ಇರುವಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ ನಾವು ಎಲ್ಲಿ ಹೋದರೂ ಕೊನೆಗೆ ನಮ್ಮ ಮನೆಯನ್ನು ಸೇರಲೇಬೇಕು. ಆದರೆ ಮನೆ ಕೂಡ ಬಿಸಿಯಾದರೆ ವಾಸ ಮಾಡಲು ಕಷ್ಟವೇ ಸರಿ. ಈ ಮನೆಯನ್ನು ತಂಪಿನ ತಾಣ ಮಾಡಿದರೆ ಹೇಗಿರುತ್ತದೆ. ಹೌದು, ಇದೇ ಕೆಲಸವನ್ನು ಕಣ್ಣೂರಿನ ಯುವ ಇಂಜಿನಿಯರ್ ಸನೀಶ್ ಮಾಡಿದ್ದಾರೆ.

950 ಸ್ಕ್ವೇರ್ ಫೀಟ್ ಸ್ಥಳದಲ್ಲಿ 14 ಲಕ್ಷ ವೆಚ್ಚದಲ್ಲಿ 2-BHK ಯ ಸುಂದರವಾದ ಪರಿಸರ ಸ್ನೇಹಿ ಮನೆಯನ್ನು ನಿರ್ಮಿಸಿದ್ದಾರೆ. ಇದು ಕೇರಳ ಶೈಲಿಯ ಸಾಂಪ್ರದಾಯಿಕ ರೀತಿಯ ಮನೆಯಾಗಿದ್ದು, ಬೇಸಿಗೆಯಲ್ಲಿ ಯಾವೂದೇ ಎಸಿಯ ಜಂಜಾಟವಿಲ್ಲವೇ ಈ ಮನೆಯಲ್ಲಿ ಇರಬಹುದು.

ಸ್ಥಳೀಯ ವಸ್ತುಗಳನ್ನು ಬಳಸಿ ಮನೆ ನಿರ್ಮಾಣ:

ಮನೆ ನಿರ್ಮಾಣಕ್ಕಾಗಿ ಸ್ಥಳೀಯವಾಗಿ ದೊರೆಯುವ ಉತ್ಪನ್ನಗಳನ್ನು ಬಳಸಿಕೊಂಡಿದ್ದಾರೆ. ಲ್ಯಾಟರೈಟ್ ಕಲ್ಲುಗಳು, ಟೆರಾಕೋಟಾ ಟೈಲ್ಸ್ ಮತ್ತು ವಿಶೇಷವಾಗಿ ಆಯ್ಕೆ ಮಾಡಿದ ಮರ ಮತ್ತು ಸುತ್ತಮುತ್ತಲಿನ ಹಿತ್ತಲಿನಲ್ಲಿರುವ ಕೆಲವೊಂದು ನೈಸರ್ಗಿಕವಾಗಿ ದೊರೆಯುವ ವಸ್ತುಗಳನ್ನು ಬಳಸಿಕೊಂಡು ಮನೆ ನಿರ್ಮಿಸಲಾಗಿದೆ.

ಕಣ್ಣೂರಿನ ಪ್ರದೇಶದಲ್ಲಿ ಸುಲಭವಾಗಿ ಲಭ್ಯವಿರುವ ಈ ವಸ್ತುಗಳು ಮನೆಯ ಸೌಂದರ್ಯದ ಆಕರ್ಷಣೆಗೆ ಕೊಡುಗೆ ನೀಡುವುದಲ್ಲದೆ, ಅದರ ಉಷ್ಣ ದಕ್ಷತೆಯನ್ನು ಹೆಚ್ಚಿಸುತ್ತವೆ. ಉರಿಬಿಸಿಲಿನ ಸಮಯದಲ್ಲೂ ಮನೆಯನ್ನು ತಣ್ಣಗೆ ಇರಿಸುತ್ತದೆ. ಒಟ್ಟಾರೆಯಾಗಿ, ಒಂದು ಮನೆಗಾಗಿ ಲಕ್ಷ ಲಕ್ಷ ಹಣ ಸುರಿಯುವ ಈಗಿನ ಕಾಲದಲ್ಲಿ 14 ಲಕ್ಷ ವೆಚ್ಚದಲ್ಲಿ ಈ ಕೂಲ್ ಕೂಲ್ ಆಗಿರುವ ತನ್ನ ಕನಸಿನ ಮನೆಯನ್ನು ನಿರ್ಮಿಸಿದ್ದು ಎಲ್ಲೆಡೆ ಮಾದರಿಯಾಗಿದೆ.

Continue Reading

kerala

ಮಗುವಿನ ಹ*ತ್ಯೆ ನಡೆಸಿ ತಾಯಿಯೂ ಆತ್ಮಹ*ತ್ಯೆ..!

Published

on

ಕಾಸರಗೋಡು: ನಾಲ್ಕು ತಿಂಗಳ ಹೆಣ್ಣು ಮಗುವನ್ನು ಕೊಂ*ದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಸರಗೋಡಿನ ಮುಳ್ಳೇರಿಯ ಸಮೀಪ ನಡೆದಿದೆ. ಇಡುಕ್ಕಿ ತೊಡುಪುಳ ನಿವಾಸಿ ಶರತ್ ಅವರ ಪತ್ನಿ ಬಿಂದು (28) ಆತ್ಮಹತ್ಯೆ ಮಾಡಿಕೊಂಡವರು. ಮಗು ಶ್ರೀನಂದಾಳನ್ನು ಕೊಂದು ಬಳಿಕ ತಾಯಿ ಸಾವಿಗೆ ಶರಣಾಗಿದ್ದಾಳೆ.

ಪತಿ ಶರತ್ ಇಸ್ರೇಲಿನಲ್ಲಿ ಉದ್ಯೋಗಿಯಾಗಿದ್ದಾರೆ. ಪತಿಯ ಮನೆಯಲ್ಲೇ ಇದ್ದ ಬಿಂದು, ಇಬ್ಬರು ಮಕ್ಕಳಾದ ಪುತ್ರಿ ಶ್ರೀನಂದಾ ಮತ್ತು ಪುತ್ರ ಶ್ರೀಹರಿಯೊಂದಿಗೆ ಕಳೆದ ಭಾನುವಾರ ಮುಳ್ಳೇರಿಯ ಬಳಿಯಲ್ಲಿರುವ ತಾಯಿ ಮನೆ ಕೋಪಾಳಕೊಚ್ಚಿ ಬಂದಿದ್ದರು. ಎ.5ರಂದು ಮಧ್ಯಾಹ್ನ ಬಿಂದು ಮನೆ ಪಕ್ಕದ ಮರದಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿ ಯಲ್ಲಿ ಪತ್ತೆಯಾಗಿದ್ದು, ಅವರ ಕೈಯ ನರ ಕತ್ತರಿಸಲ್ಪಟ್ಟು ರಕ್ತ ಸೋರುತ್ತಿತ್ತು. ಇದೇ ವೇಳೆ ಮಗು ಶ್ರೀನಂದ ಮನೆಯ ಮಲಗುವ ಕೊಠಡಿಯಲ್ಲಿ ಗಂಭೀರಾವಸ್ಥೆಯಲ್ಲಿ ಕಂಡು ಬಂದಿದ್ದು, ಅದನ್ನು ಕಂಡ ಮನೆಯವರು ಮಗುವನ್ನು ಚೆಂಗಳ ಸಹಕಾರಿ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ..; ಎದೆ ಹಾಲು ಕುಡಿದು ಉಸಿರು ನಿಲ್ಲಿಸಿದ ಮಗು…! ಮಗುವಿನ ಜೊತೆ ಇಹಲೋಕ ತ್ಯಜಿಸಿದ ತಾಯಿ..!

ವಿಷಯ ತಿಳಿದ ಕಾಸರಗೋಡು ತಹಶೀಲ್ದಾ‌ರ್ ಪಿ.ಎಂ.ಅಬೂಬಕ್ಕರ್ ಸಿದ್ದಿಕ್, ಕಾಸರಗೋಡು ಡಿವೈಎಸ್‌ಪಿ ಜಯನ್ ಡೊಮಿನಿಕ್ ಹಾಗೂ ಆದೂರು ಪೊಲೀಸ್ ಇನ್‌ಸ್ಪೆಕ್ಟರ್ ಸಂಜಯ್ ಕುಮಾರ್ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದು ಅವರ ನೇತೃತ್ವದಲ್ಲಿ ಮಹಜರು ನಡೆಸಿದ ಬಳಿಕ ಮೃತದೇಹಗಳನ್ನು ಉನ್ನತ ಮಟ್ಟದ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಘಟನೆಗೆ ಕಾರಣ ಗೊತ್ತಾಗಿಲ್ಲ.

Continue Reading

LATEST NEWS

Trending